<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-5495085842856428066</id><updated>2012-01-25T21:58:12.658-08:00</updated><category term='ಮನಸಿಗೆ ಬಂದಿದ್ದು'/><category term='ಕಸಾರಂ'/><category term='ಹದಿಹರೆಯ'/><category term='ಹಾಡು ಹಳೆಯದು'/><category term='ಸ್ನಾಕ್ ಟೈಂ'/><category term='ಅಜ್ಜನ ಮನೆಗೆ ಹೋಗುವ ಬಸ್ಸು'/><category term='ನಗಬೇಡ'/><category term='ಗಿಣಿ ಗುಬ್ಬಿ ಅಚ್ಚು ಮುದ್ದು ಮತ್ತು ಅಮ್ಮ.'/><category term='ಮರುಳುಮಲ್ಲಿಗೆ'/><category term='ಬೊಗಸೆಯಲ್ಲಿ ಬೆಳದಿಂಗಳು'/><category term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category term='ಐ ಸರ್ಜರಿ'/><category term='ಎಲ್ಲರಿಗೂ ನಮಸ್ಕಾರ'/><category term='ಪ್ರಾದೇಶಿಕ ಕನ್ನಡ'/><title type='text'>ನೆನಪು ಕನಸುಗಳ ನಡುವೆ</title><subtitle type='html'>ನೆನಪನ್ನೆಲ್ಲಾ ಉಳಿಸಿಕೊಳ್ಳುತ್ತಾ,&lt;br&gt;
ಕನಸಲೂ ನೆನಪನೇ ಗಳಿಸುತ್ತಲಿಹ &lt;br&gt;
ಆಂತರ್ಯದ ನಡುವಣ ವಾಸ್ತವಸೇತುವೆಗೆ&lt;br&gt;
 ಹೆಸರಿಡಲಾಗದೇ ಹೆಸರು &lt;br&gt;
"ನೆನಪು ಕನಸುಗಳ ನಡುವೆ"</subtitle><link rel='http://schemas.google.com/g/2005#feed' type='application/atom+xml' href='http://www.shantalabhandi.com/feeds/posts/default'/><link rel='self' type='application/atom+xml' href='http://www.blogger.com/feeds/5495085842856428066/posts/default?max-results=100'/><link rel='alternate' type='text/html' href='http://www.shantalabhandi.com/'/><link rel='hub' href='http://pubsubhubbub.appspot.com/'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><generator version='7.00' uri='http://www.blogger.com'>Blogger</generator><openSearch:totalResults>83</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-5495085842856428066.post-3073873807026503643</id><published>2011-10-29T13:17:00.000-07:00</published><updated>2011-10-29T22:57:27.889-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ನಡುಮನೆ</title><content type='html'>ಅಲ್ಲಿ ಹಬ್ಬಕ್ಕೆ ಬಾರದ ಹಿರಿಮಗಳಿಗೆ&lt;br /&gt;ಹೆಬ್ಬಾಗಿಲಲ್ಲಿ ಕಾಯುತ್ತಿದ್ದಾನೆ ಅಪ್ಪ&lt;br /&gt;ನಡುವಯಸ್ಸು ಜಾರುತ್ತಿದೆ&lt;br /&gt;ಯೋಚಿಸುತ್ತಿದ್ದಾನೆ ಕರೆಯಲು ಮರೆತೆನೋ ಹೇಗೆ?&lt;br /&gt;&lt;br /&gt;ಇಲ್ಲಿ ಅಳಿಯನಿಗೆ ಅಲ್ಲಲ್ಲಿ ಬಿಳಿಕೂದಲು&lt;br /&gt;ಮಗಳು ಹೇಳಿದ್ದಾಳೆ&lt;br /&gt;ಬುದ್ಧಿ ಮಾಗುತ್ತಿದೆ ಕಣೋ... ಅಂತ&lt;br /&gt;ನಡುಮನೆಯಲ್ಲಿ ನಿಂತು&lt;br /&gt;ಮುಹೂರ್ತಮುಂಡಿಗೆಯ ಮೂಲೆಯಲ್ಲಿ&lt;br /&gt;ಸಣ್ಣಗೆ ಹಚ್ಚಿಟ್ಟ ದೀಪ ಓಲಾಡಿ ನಗುತ್ತಲಿದೆ&lt;br /&gt;&lt;br /&gt;ಬಿಳಿಕೂದಲ ಗಂಡನ ಜೊತೆ&lt;br /&gt;ಮಗಳಿಗೇನೋ ಸಂಭ್ರಮ&lt;br /&gt;ನಡುಮನೆಯಲ್ಲಿ ನಿಂತು ಹೇಳಿದ್ದಾಳೆ&lt;br /&gt;ನಾನಿವತ್ತು ಮಲಗುವುದು ತಡವೆಂದು,&lt;br /&gt;ಊದ್ದನೆಯ ಕಾದಂಬರಿ ಓದುತ್ತ&lt;br /&gt;ಕಾಯುತ್ತಿದ್ದಾನೆ ಅವನೂ ನಡುಮನೆಯಲ್ಲೇ&lt;br /&gt;&lt;br /&gt;ಬಂದವಳು ಕಳೆದುಹೋಗಿದ್ದಾಳೆ&lt;br /&gt;ಅವನ ಬಿಸಿಯಪ್ಪುಗೆಯಲ್ಲಿ&lt;br /&gt;ಅವನ ಬಿಳಿಕೂದಲ ಸಡಗರದಲ್ಲಿ&lt;br /&gt;ಅಡಗಿಕೊಂಡಿದ್ದಾವೆ ಇವಳ ಅಷ್ಟೂ ಬೆರಳು&lt;br /&gt;&lt;br /&gt;ಕಾಯುತ್ತಿದ್ದಾರೆ ಅಪ್ಪ ಕಾಣದ ಮಗಳಿಗೆ&lt;br /&gt;ಈ ಹಬ್ಬಕ್ಕೆ ಬಂದರೂ ಬಂದಾಳೆಂದು&lt;br /&gt;ಕಾಯದಿರಿ ಅಪ್ಪ ಮತ್ತೆ&lt;br /&gt;ಕಳೆದುಹೋದವಳನ್ನ&lt;br /&gt;ಇದ್ದಲ್ಲೇ ದೀಪ ಹಚ್ಚಿದ್ದೇನೆ&lt;br /&gt;ಹಬ್ಬ-ಹರಿದಿನಗಳಲಿ&lt;br /&gt;ಪುರುಸೊತ್ತಿಲ್ಲ ನಡುಮನೆಗೆ ಅಪ್ಪಾ...&lt;br /&gt;ನಾನೀಗ ನಡುಮನೆಯಲ್ಲಿದ್ದೇನೆ&lt;br /&gt;ಮತ್ತೆ ಮರಳಲಾರೆನಪ್ಪಾ...&lt;br /&gt;ಹುಡುಕಬೇಡಿ ನನ್ನ&lt;br /&gt;ನೀವಾಗಿ ನೀವೆ ಕೊಟ್ಟು ಕಳೆದುಕೊಂಡವಳನ್ನ&lt;br /&gt;&lt;br /&gt;&lt;br /&gt;(&lt;span style="font-size:78%;"&gt;ಅವಳು ಕಳೆದುಹೋಗಿದ್ದಾಳೆ. ಅಕ್ಟೋಬರ್ ಎರಡನೆಯ ತಾರೀಖಿಗೆ ಅವಳ ಬ್ಲಾಗ್’ಮರಿಗೆ ನಾಲ್ಕುವರ್ಷ ತುಂಬಿತು. ಆದರೂ ಹುಡುಕಬೇಡಿ ಅವಳನ್ನ. ನಡುಮನೆಯಲ್ಲಿ ನೆನಪು ಕನಸುಗಳ ನಡುವೆ ಕಳೆದುಹೋಗಿದ್ದಾಳೆ ಅವಳು. ಅವಳಾಗಿ ಅವಳೇ ಬಂದಾಳೆಂಬ ಭರವಸೆ ಇದ್ದರೆ ಇರಲಿ, ಕಾಯುವುದು  ಬೇಡ&lt;/span&gt;)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-3073873807026503643?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/3073873807026503643/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=3073873807026503643' title='11 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/3073873807026503643'/><link rel='self' type='application/atom+xml' href='http://www.blogger.com/feeds/5495085842856428066/posts/default/3073873807026503643'/><link rel='alternate' type='text/html' href='http://www.shantalabhandi.com/2011_10_01_archive.html#3073873807026503643' title='ನಡುಮನೆ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>11</thr:total></entry><entry><id>tag:blogger.com,1999:blog-5495085842856428066.post-2358721845521631857</id><published>2011-09-08T18:27:00.000-07:00</published><updated>2011-09-11T18:19:09.035-07:00</updated><title type='text'>ಇವತ್ತಿನ ಪ್ಲೇವರು</title><content type='html'>ಒಂದು ಅಕ್ಕಿ ಕಾಳೊಳಗೆ&lt;br /&gt;ಮುಷ್ಟಿ ತುಂಬ ಶಕ್ತಿ&lt;br /&gt;ಹಾರಿ ಹೋಯ್ತು ಹಕ್ಕಿ&lt;br /&gt;ಇನ್ನೊಂದೇ ತುತ್ತಾ&lt;br /&gt;ಲಾಸ್ಟು... ಮುಗ್ದೋಯ್ತು&lt;br /&gt;ಈಗ ಹಕ್ಕಿ ಹಾರೋಗಿದ್ದು ನಿಜ&lt;br /&gt;ನೀರು ಕುಡಿ&lt;br /&gt;ಊಹ್ಞೂ... ಚೆಲ್ತು ಚೆಲ್ತು&lt;br /&gt;ಚೆಲ್ಲೇ ಹೋಯ್ತು&lt;br /&gt;ಹಕ್ಕಿ ಹಾರೋಯ್ತಾ&lt;br /&gt;ಈಗ ಹೇಳು&lt;br /&gt;ಒಂದೇ ಒಂದಕ್ಕಿ ಕಾಳೊಳಗೆ&lt;br /&gt;ಎಷ್ಟು ಶಕ್ತಿ?...&lt;br /&gt;ಮುಷ್ಟಿ ಶಕ್ತಿ&lt;br /&gt;&lt;br /&gt;ಹೇಳಬೇಕು ಕಥೆ&lt;br /&gt;ಆದರೆ ಇಂಥದ್ದಲ್ಲ&lt;br /&gt;ಸುಳ್ಳೇ ಕಥೆ ಹೇಳಿದ್ರೆ&lt;br /&gt;ಒಪ್ಪುತ್ತಾನ ಅಂವ?&lt;br /&gt;ಮಾಡುತ್ತಾನೆ ಸರ್ಚು ಗೂಗಲ್ಲು&lt;br /&gt;ಮತ್ತೆ ಚರ್ಚೆ ಶುರು&lt;br /&gt;&lt;br /&gt;ಹೊಸಾ ಬೇಬಿಫುಡ್ಡು&lt;br /&gt;ಆನ್ ಲೈನೇ ಆರ್ಡರ್ರು&lt;br /&gt;ಯಾರೋ ತಟ್ಟಿದರು ಬಾಗಿಲು&lt;br /&gt;ಫೆಡ್ ಎಕ್ಸಿನವ ಇರಬೇಕು&lt;br /&gt;ಬೇಬಿ ಫುಡ್ಡು ಇವತ್ತು ಬರಬೇಕು&lt;br /&gt;&lt;br /&gt;ತಟ್ಟಿದ ಸದ್ದಿಗೆ ಬಾಗಿಲು &lt;br /&gt;ಹಕ್ಕಿ ಹಾರೇ ಹೋಯ್ತು&lt;br /&gt;ಕಟ್ಟಿಟ್ಟ ಕಥೆ ಅಲ್ಲೇ ಉಳೀತು&lt;br /&gt;ಮಮ್ಮಾ... ರೈಸು ವೇಸ್ಟು&lt;br /&gt;ಬರೇ ಕಾರ್ಬೋ&lt;br /&gt;ವೆನಿಲ್ಲ ಫ್ಲೇವರ್ರು ಬೋರು&lt;br /&gt;&lt;br /&gt;ಅಮ್ಮನೀಗ ಹೊಸಕಥೆಯನ್ನೇ ಹುಡುಕಬೇಕು&lt;br /&gt;ಗೂಗಲ್ಲಿನಲ್ಲಿಲ್ಲದ್ದು&lt;br /&gt;ಅಂವ ಒಪ್ಪುವಂಥದ್ದು&lt;br /&gt;ಪಾಪು ಕೇಳುವಂಥದ್ದು&lt;br /&gt;ಹೊಸಾ ಫ್ಲೇವರಿನ ಕಥೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-2358721845521631857?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/2358721845521631857/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=2358721845521631857' title='10 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/2358721845521631857'/><link rel='self' type='application/atom+xml' href='http://www.blogger.com/feeds/5495085842856428066/posts/default/2358721845521631857'/><link rel='alternate' type='text/html' href='http://www.shantalabhandi.com/2011_09_01_archive.html#2358721845521631857' title='ಇವತ್ತಿನ ಪ್ಲೇವರು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>10</thr:total></entry><entry><id>tag:blogger.com,1999:blog-5495085842856428066.post-1915637128691494457</id><published>2011-06-20T12:09:00.000-07:00</published><updated>2011-06-21T22:11:53.172-07:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ಬಿಸಿಲು</title><content type='html'>ಬೆಳಬೆಳಗ್ಗೆ ಕೂಗುತ್ತ ಬರುವ ಕಸದ ಗಾಡಿಯ ಸದ್ದು, ಕಿಟಕಿಯಲ್ಲಿ ಚೂರೇ ಚೂರು ಇಣುಕುವ ಎಳೆಬಿಸಿಲು, ಬೇಸಿಗೆ ರಜೆಗೆ ಬಿಸಿಲ ರಜೆಯೆಂದು ಇನ್ನೂ ಎದ್ದಿರದ ಮಗು, ಬಯೋಲೇಜ್ ಬಾಡಿ ಲೋಷನ್ನಿನ ಪರಿಮಳ, ಮುಖದಲ್ಲಿನ್ನೂ ಆರಿರದ ಜಾನ್ಸನ್ ಬೇಬಿ ಸೋಪಿನ ಪರಿಮಳ, ಇನ್ನೂ ಮುಗಿದಿರದ ಪಕ್ಕದ ಬಿಲ್ಡಿಂಗಿನ ಕೆಲಸ, ಧೂಳು, ಆ ಸದ್ದು ಎಲ್ಲದಕ್ಕೂ ಅಂಟಿಕೊಂಡು ಮುನ್ನುಗ್ಗುವ ನೆನಪು. &lt;br /&gt;&lt;br /&gt;ಯಾರದೋ ಮೇಲಿನ ಕೋಪಕ್ಕೆ ನಿನ್ನನ್ನೇ ಸುತ್ತಿಕೊಳ್ಳುತ್ತಿದ್ದ ನನ್ನ ಸಿಟ್ಟು, ಹಿತ್ತಲಿನ ಅಂಗಳದಿಂದೆಸೆದ ವಾಚು ಮೇಲಿನ ಹಿತ್ತಲಿನ ಬೇಲಿ ದಾಟಿ ಪೇರಲೆ ಗಿಡದಡಿಗೆಲ್ಲ ಒಣಕರಡದ ಹುಲ್ಲಿನ ನಡುವೆಲ್ಲೋ ಕಳೆದು ಹೋಗಿ ಒಪ್ಪತ್ತಿನ ತನಕ ಬಿಸಲಲ್ಲಿ ಅಲೆದಲೆದು ಹುಡುಕಿತಂದುಕೊಟ್ಟ ಅದೇ ವಾಚು ಹಳೇದಾಗಿ ನಡೆಯುತ್ತಲೇ ಇಲ್ಲವಾದರೂ ಆಗಾಗ ಕಟ್ಟಿಕೊಂಡರೆ ಮತ್ತೆ ನಿನ್ನ ಕೈಹಿಡಿದು ನಡೆದಾಗಿನ ಕಾನ್ಫಿಡೆನ್ಸು. &lt;br /&gt;&lt;br /&gt;ಮೊದಲ ಸಂಬಳದಲ್ಲಿ ಖಾಲಿಮನೆಯೊಳಗೆ ಸಮಯನೋಡುವುದಕ್ಕೆಂತ ನೀ ತಂದಿಟ್ಟ ಅಲಾರ್ಮ್ ಫೀಸು, ನನ್ನ ಸಿಟ್ಟಿಗೆ ಸಿಕ್ಕು  ಅರೆತಾಸಿನೊಳಗೆ ಚೂರಾದ್ದಕ್ಕೇ ಇರಬೇಕು ಆ ನಂತರ ಇಬ್ಬರೂ ಸಂಧಿಸುವ ಸಮಯ ಬರಲೇ ಇಲ್ಲ. ಎಲ್ಲಮರೆತ ಬೆಳಗು ನೀ ನನ್ನ ಬಿಟ್ಟು ಒಬ್ಬನೇ ಇಡ್ಲಿಸಾಂಬಾರ್ ತಿನ್ನದೇ ಹೋಗಿದ್ದರೆ ಬಹುಷಃ ನನ್ನ ಮನೆಯೊಳಗೆ ಗೋಡೆಗೋಡೆಗೂ ನೀ ತಂದು ತೂಗುಹಾಕಿದ ಗಡಿಯಾರವೊಂದು ಇರುತ್ತಿತ್ತು. ನಿನ್ನ ಮನೆಯ ಎಲ್ಲ ಕಿಟಕಿಯ ಪಕ್ಕ ನಾ ಬರೆದ ಚಿತ್ರವಿರುತ್ತಿತ್ತು. &lt;br /&gt;&lt;br /&gt;ಲಿವ್ ಇನ್ ಜೀನ್ಸು, ನೈಕೆ ಶೂ, ನೋಕಿಯಾ ಮೊಬೈಲುಗಳೆಲ್ಲ ಹಳೇ ಬ್ರ್ಯಾಂಡ್ಸ್ ಅಂತನ್ನಿಸಿದರೂ ಓಲ್ಡ್ ಈಸ್ ಗೋಲ್ಡ್ ಅಂತಾರಲ್ಲ ಹಾಗೆ. ಸಿಹಿಯೊಳಗಿನ ಏಲಕ್ಕಿ ಪರಮಳಕ್ಕೀಗ ಕಿತ್ತಾಡಿ ದೂರಾಗುವ ಪ್ರಮೇಯವೇ ಬರಲಿಲ್ಲ ನೋಡು ಅದಕ್ಕೇ ಇರಬೇಕು ಒಟ್ಟಾಗುವ ಗುಣವೂ ಇಬ್ಬರಿಗೂ ಒದಗಲಿಲ್ಲ. ಆದರೂ ಏಲಕ್ಕಿ ಪಾನಕ ಕುಡಿಯುವುದನ್ನೇ ಬಿಟ್ಟಿದ್ದೇನೆ. ಏಕೆಂದರೆ ನೆನಪುಗಳನ್ನು ಅರೆದರೆದು ಕುಡಿಯುವುದು ಆಗದ ಕೆಲಸ. &lt;br /&gt;&lt;br /&gt;ಬಕೀಟಿನಲ್ಲಿ ಅದ್ದಿಟ್ಟ ಬಿಸಿನೀರಿನ ಕಾಯಿಲ್ ಜಂಗುಹಿಡಿದು ಪುಡಿಯಾಗುತ್ತಿದ್ದರೂ ಬಿಸಾಡಲು ಮನಸಾಗುತ್ತಿಲ್ಲ. ಗುಲಾಬಿ ಬಣ್ಣದ ಟರ್ಕಿಷ್ ಟವೆಲ್ಲು ಹಳತಾಗಿ ಬೆಳ್ಳಗಾಗಿದೆಯೆಂದ ಮೇಲೆ ಇನ್ನೂ ಹಳತಾಗಲು ಸಾಧ್ಯವಿಲ್ಲ ಬಿಡು ಅಂತ ಸಮಾಧಾನದಿಂದಿದ್ದೇನೆ. ಬಿಳಿಯ ಕರ್ಚಿಫ್ ನಲ್ಲಿ ಒರೆಸಿ ಒಣಗಿದ ಕಲೆ ಇಂದಿಗೂ ಸಾಂತ್ವನ ಹೇಳುತ್ತಲೇ ಗಾಯ ಮರೆಸಲು ಒರೆಸಲು ನಾನಿದ್ದೇನೆ ಬಿಡು ಎಂದು. ನೀನು ಕಲಿಸಿದ ಅನ್ನ, ದಾಲ್, ಸಾಂಬಾರ್ ಇವತ್ತಿನ ನನ್ನ ಅದೆಷ್ಟೋ ದಿನಗಳ ಊಟವನ್ನು ರುಚಿಯಾಗಿಸುತ್ತಿದೆ.  &lt;br /&gt;&lt;br /&gt;ನೀನಿರದ ಗಳಿಗೆಯಲ್ಲಿ ಮರೆತುಹೋದ ಅಂಗಳದ ಕಪ್ಪುಗುಲಾಬಿ ಹೂವಿನ ಗಿಡ  ಎಷ್ಟೋ ದಿನಗಳ ಮೆಲೆ ನೆನಪಾಗಿ ಹೋಗಿನೋಡಿದರೆ ಅಂಗಳ ಖಾಲಿಯಿತ್ತು. ಬಾಗಿಲ ತೆರದು ಒಳಗಡಿಯಿಟ್ಟರೆ ಒಳಗೆ ಹೋಗಲಾರದೇ ಅರೆಕ್ಷಣ ಬಾಗಿಲಲ್ಲೇ ನಿಂತಿದ್ದನ್ನು ಪಕ್ಕದ ಬಿಲ್ಡಿಂಗಿನ ಹೆಂಗಸೊಬ್ಬಳು ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದಳು. ಬಾತ್ ರೂಮಿಗೆ ಹೋಗಿ ನೀನು ಉಪಯೋಗಿಸುತ್ತಿದ್ದ ಶಾಂಪೂ,ಅಡುಗೆ ಮನೆಗೆ ಹೋಗಿ ನಿನ್ನಿಷ್ಟದ ಆ ಸ್ಪೂನು ಎರಡನ್ನು ಬ್ಯಾಗಿನೊಳಗೆ ಹಾಕಿಕೊಂಡು ಹೊರಟರೆ ಬ್ಯಾಗು ಅಷ್ಟಕ್ಕೆ ಭಾರವೆನಿಸಿ ಮುಂದೆ ಹೆಜ್ಜೆ ಇಡಲಾರದೇ ಅಲ್ಲಿ ನಿಲ್ಲಲೂ ಆಗದೇ ನಡೆದುಬಂದಿದ್ದೇನೆ. &lt;br /&gt;&lt;br /&gt;ಬರುವಾಗ ಮರೆಯದೇ ಮನೆ ಬಾಗಿಲಿಗಿದ್ದ ನಿನ್ನಿಷ್ಟದ ಆ ತೋರಣವನ್ನು ತೆಗೆದು ಸ್ಕೂಟಿಯ ಸೀಟಿನಡಿಗಿಟ್ಟು ‘ಮನೆ ಮಾರಾಟಕ್ಕಿದೆ’ ಬೋರ್ಡನ್ನು ಬಾಗಿಲಿಗೆ ನೇತು ಹಾಕಿ ಬರುವಷ್ಟರಲ್ಲಿ ಬಿಸಿಲು ನೇರ ನೆತ್ತಿಗೇ ಬೀಳುತ್ತಿತ್ತು. ನೀನಿದ್ದಾಗ ಯಾವತ್ತೂ ಹೀಗೆ ನೆತ್ತಿಯ ಸುಡುವಂಥ ಬಿಸಿಲೇ ಬಿದ್ದಿರಲಿಲ್ಲ. ಎಲ್ಲವೂ ಈಗ ತಣ್ಣನೆಯ ನೆನಪು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-1915637128691494457?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/1915637128691494457/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=1915637128691494457' title='7 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/1915637128691494457'/><link rel='self' type='application/atom+xml' href='http://www.blogger.com/feeds/5495085842856428066/posts/default/1915637128691494457'/><link rel='alternate' type='text/html' href='http://www.shantalabhandi.com/2011_06_01_archive.html#1915637128691494457' title='ಬಿಸಿಲು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>7</thr:total></entry><entry><id>tag:blogger.com,1999:blog-5495085842856428066.post-663019274416674022</id><published>2011-05-24T22:37:00.000-07:00</published><updated>2011-05-24T22:58:02.545-07:00</updated><category scheme='http://www.blogger.com/atom/ns#' term='ಪ್ರಾದೇಶಿಕ ಕನ್ನಡ'/><category scheme='http://www.blogger.com/atom/ns#' term='ಕಸಾರಂ'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ</title><content type='html'>ಪ್ರಾದೇಶಿಕ ಕನ್ನಡವೆಂದರೆ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ಬಳಸಲಾಗುವ ಕನ್ನಡ. ಒಂದು ಪ್ರದೇಶದ ಜನರ ಆಡುಭಾಷೆಯಾಗಿ ಬಳಸಲಾಗುವಂಥಹ ಕನ್ನಡ. &lt;br /&gt; ಉದಾಹರಣೆಗೆ ನೀವು ಧಾರವಾಡ ಕಡೆ ಹೋದ್ರೆ ‘ನಮಸ್ಕಾರ್ರೀ ಮೇಡಾಮಾವ್ರ, ಹೆಂಗದಿರ್ರೀ, ಭಾಳ ಚೊಲೋ ಆತ್ ಬಿಡ್ರಿ, ನಮ್ ಮನೀ ಮಟ ಬಂದ್ರಲ್ಲ, ಭಾಗ್ಯಲಕ್ಷ್ಮಿ ಬಂದಂಗಾತ್ ಬಿಡ್ರೀ’ ಅಂತಾರೆ. ಹವ್ಯಕರ ಮನೆಗಳಿಗೆ ಹೋದ್ರೆ ‘ಓಹೋಹೋಹೋ... ಆರಾಮನೇ, ಅಂತೂ ಬಂದ್ಯಲಾ, ಬಾ ಬಾ ಬಾ" ಅಂತಾರೆ. ಹಾಗೇ ಮುಂದೆ ಬಂದು ಸಿರ್ಸಿ ಪೇಟೆಯೊಳಗಿಂದ ಸಿ.ಪಿ.ಬಾಜ಼ಾರಿಗ್ ಬಂದ್ರೆ ‘ಅರೇ... ಡಿಸ್ಕೌಂಟ್ ಬಂದದೆ, ಚೂಡಿದಾರ್ ತಗುಳುದಿಲ್ಲ ನೀನು? ಮತ್ತೆಂತಕ್ಕೆ ಬಂದಿದ್ದೆ ಇಲ್ಲಿಗೆ? ನಡಿ ನಮ್ಮೆನಾಗಾರು ಹೋಗುವ, ಅಯ್ಯೋ ನೀಲೇಕಣಿ ರಸ್ತೆಲಂತೂ ಮಂಗಳಾರ ದಿಸ ಓಡಾಡ್ಲಿಕ್ ಆಗೂದಿಲ್ಲೆ ಮಾರಾಯ್ತೀ..ಮೀನ್ ವಾಸ್ನೇ ಅಂದ್ರೇ, ನಾವು ಒಳದಾರೆಲ್ಲಿ ಹೋಗುವ ಹ್ಞಾ...’ಅಂತಾರೆ. ಹಾಗೇ ಒಂದಿಡೀ ರಾತ್ರಿಯ ಪ್ರಯಾಣ ಮಾಡಿ ಬೆಂಗಳೂರಿಗೆ ಬಂದಿದೀರಿ. ತರಕಾರಿಗೋ, ಬ್ಯಾಂಕಿಗೋ, ಶಾಪಿಂಗ್ ಅಂತಲೋ ಮನೆಯಿಂದಚೆ ಬಂದಿದೀರಿ. ನಿಮ್ ಫ್ರೆಂಂಡ್ ಒಬ್ರು ಸಿಕ್ತಾರೆ ‘ಊರುಗ್ ಹೋಗಿದ್ರಾ? ಯಾವಾಗ್ ಬಂದ್ರಿ? ಹೆಂಗಾಯ್ತು ಜರ್ನಿ? ಪೇರೆಂಟ್ಸೆಲ್ಲ ಚೆನಾಗಿದಾರಾ? ಓ... ಬಿಜಿ ಇದೀರ ಅನ್ಸತ್ತೆ, ಫ್ರೀ ಮಾಡ್ಕೊಂಡು ಬನ್ರೀ ಮನೆಕಡೇ’ ಅಂತ ಹೇಳ್ತಾರೆ. &lt;br /&gt;&lt;br /&gt;ಈ ತೆರನಾಗಿ ಆಡುವಾಗ ಬಳಸೋ ಕನ್ನಡವನ್ನ ನಾವು ಬರವಣಿಗೆಯಲ್ಲಿ ಬಳಸಿದರೆ ಆ ಆಡುಭಾಷೆಗೆ ಮತ್ತು ಅದನ್ನಾಡುವ ಜನರಿಗೆ ಉಪಯೋಗ ಆಗೋ ಹಾಗೇನೇ ಬರವಣಿಗೆಯ ಶೈಲಿಯಲ್ಲಿ ಸಹ ಸಾಕಷ್ಟು ವ್ಯತ್ಯಾಸ ಕಾಣುವುದರ ಜೊತೆಗೆ ಓದುಗರ ಮೇಲೂ ಸಾಕಷ್ಟು ಬೇರೆ ಬೇರೆ ನಮೂನೆಯ ಅಂದರೆ ಅವರವರ ಭಾವಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯ ಪರಿಣಾಮ ಬೀರಬಬಹುದು. ಕೆಲವರು ಅಂಥಹ ಭಾಷೆಯನ್ನು ಬಳಸಲಾದ ಕಲ್ಪನಾ ಸಾಹಿತ್ಯವೆನ್ನಬಹುದಾದ ಕತೆ/ಕಾದಂಬರಿ/ಕವನ/ಪ್ರಬಂಧಗಳನ್ನು ಅರ್ಥವಾದವರು ಹೆಚ್ಚು ಖುಷಿಯಿಂದ ಓದ್ಬಹುದು. ಕತೆಯೊಂದರಲ್ಲಿ ಬಳಸಲಾದ ಆಡುಭಾಷೆಯ ಪರಿಚಯವೇ ಇಲ್ಲದ ಪ್ರದೇಶದ ಜನರಿಗೆ ಓದಿದ್ದು ಅರ್ಥವೇ ಆಗದೆಯೇ ಗೊಂದಲ ಉಂಟಾಗಲೂಬಹುದು. ಅಥವಾ ಕಷ್ಟಪಟ್ಟು ಅರ್ಥೈಸಿಕೊಳ್ಳಲು ಯತ್ನಿಸಿದ ಓದುಗನೊಬ್ಬ ಕಂಡುಕೊಂಡ ಭಾವವು ಬಳಸಲಾದ ಭಾಷೆಯ ಭಾವಕ್ಕೆ ಹೊರತಾದ ಅರ್ಥವನ್ನು ತನ್ನೊಳಗೆ ಹುಟ್ಟುಹಾಕಿ ಕಥೆಯೊಂದರ ರಸವೇ ಬೇರೆಯಾಗುವ ಪರಿಸ್ಥಿತಿಯೂ ಮೂಡಬಹುದು.&lt;br /&gt;&lt;br /&gt;ಮಗನ ಕ್ಲಾಸೊಂದು ಮುಗಿಯುವುದರ ಒಳಗಿನ ಅವಧಿಯಲ್ಲಿ ಸ್ವಲ್ಪ ಓದೋಣ ಅಂತ ‘ಕುಸುಮ ಬಾಲೆ’ ತೆರೆದರೆ ಅಲಮೇಲುಮೇಡಮ್ ಕೊಟ್ಟ ಈ ಪುಸ್ತಕವನ್ನ ಓದಿ ನಾನು ಪ್ರಾದೇಶಿಕ ಭಾಷೆಯನ್ನು ಬರವಣಿಗೆಯಲ್ಲಿ ಬಳಸುವ ಬಗ್ಗೆ ಮಾತನಾಡಬಲ್ಲೆನ? ಈ ಪುಸ್ತಕದ ತಿರುಳು ನಂಗೆ ದಕ್ಕೀತ ಅಂತ ಯೋಚಿಸ್ತಾ ನಿಜವಾಗಿಯೂ ಭಯವಾಯ್ತು. ಒಂದು ಕಾವ್ಯದ ರೂಪದಲ್ಲಿದೆ ಕುಸುಮಬಾಲೆ ಕಾದಂಬರಿ. ಕಷ್ಟಪಟ್ಟು ಮತ್ತೆ ಮೊದಲ ಪುಟದಿಂದ ಓದೋಕೆ ಶುರು ಮಾಡ್ದೆ. ಓದ್ತಾ ಓದ್ತಾ ಹನ್ನೊಂದನೇ ಪುಟದಲ್ಲಿದ್ದೇನೆ ಅಂತ ಅರಿವಾಗಿದ್ದು ಮಂಚವೊಂದು ಸೋಮಪ್ಪನವರ ಜೀವಾತ್ಮದ ಜೊತೆ ಆತ್ಮಕಥೆಯನ್ನ ಹೇಳೋಕೆ ಶುರುಮಾಡಿದಾಗ. ಕಾಲುಭಾಗಕ್ಕಿಂತ ಹೆಚ್ಚಿನ ಕಾದಂಬರಿಯ ಕತೆಯನ್ನು ಮಂಚವೇ ಹೇಳತ್ತೆ. ಅಲ್ಲಿ ಬಳಕೆಯಾದ ಭಾಷೆಯ ಪರಿಚಯವೇ ಇಲ್ಲದೆಯೂ ಎಲ್ಲವೂ ಅರ್ಥವಾದಂತೆ ನಾನು ಕಥೆ ಕೇಳ್ತಾ ಇದ್ದೆ. ಮಂಚ ಕಥೆಯನ್ನ ಹೇಳ್ತಾ ಇತ್ತು. ಅರ್ಥವಾಗುತ್ತ ಹೋದಂತೆ ದಕ್ಕುತ್ತ ಹೋದಂತೆ ಇದು ಆಡು ಭಾಷೆಯ ಸಾರ್ಥಕತೆ. ಬರವಣಿಗೆಯಲ್ಲಿ ಆಡುಭಾಷೆಯಿದ್ದಾಗ ಓದುಗನೊಬ್ಬ ಕತೆಯನ್ನು ಓದುವುದಿಲ್ಲ, ಕೇಳುತ್ತಾನೆ. ಕೆಲವೊಮ್ಮೆ ಕಥೆಯೊಳಗಿನ ಪಾತ್ರವನ್ನು ತಾನು ಹೊಕ್ಕು ಓದುವ ಓದುಗನಿಗೆ ಅಲ್ಲಿನ ಆಡುಭಾಷೆಯ ಸಂಭಾಷಣೆ ಬರೆದಿಟ್ಟ ಸಂಭಾಷಣೆಯಾಗಿರದೇ ಓದುಗನ ಸ್ವಗತವಾಗುತ್ತದೆ. &lt;br /&gt;&lt;br /&gt;ದೇವನೂರು ಮಹಾದೇವರ ‘ಕುಸುಮ ಬಾಲೆ’ ಯನ್ನು ಓದುವಾಗ ಭಾಷೆ ತಕ್ಕಮಟ್ಟಿಗೆ ನಂಗೆ ಹತ್ತಿರವಾದಂತೆ ಅತ್ರಾಸದ ನೆನಪಾಯಿತು. ನಮ್ಮೂರಲ್ಲಿ ಗಣೇಶನ ಹಬ್ಬದ ಹೊತ್ತಲ್ಲಿ ಅತ್ರಾಸ ಅಂತ ಒಂದು ಸಿಹಿ ತಿಂಡಿ ಮಾಡ್ತಾರೆ. ಅಕ್ಕಿಹಿಟ್ಟು, ಬೆಲ್ಲ, ಎಳ್ಳು, ತೆಂಗಿನತುರಿ ಎಲ್ಲ ಏನೇನೋ ಸೇರ್ಸಿ ಕಾಯಿಸಿ ಉಂಡೆಕಟ್ಟಿ ಲಟ್ಟಿಸಿ ಆಮೇಲೆ ಎಣ್ಣೆಯಲ್ಲಿ ಕರೀತಾರೆ. ಅದು ನಾರು ನಾರಾಗಿರತ್ತೆ. ಜಗ್ದೂ ಜಗ್ದೂ ತಿನ್ಬೇಕು ಅದನ್ನ, ಎಲ್ಲಾರಿಗೂ ಈ ಸಿಹಿತಿಂಡಿ ಇಷ್ಟವಾಗೋಲ್ಲ, ಕಾರಣ ಇಷ್ಟೇ, ಒಂದು ಅದನ್ನ ಕಷ್ಟಪಟ್ಟು ಅಗ್ದೂ ಅಗ್ದೂ ಯಾಕಾದ್ರೂ ತಿನ್ಬೇಕು ಅನ್ಸತ್ತೆ ಒಂದೊಂದ್ಸಲ. ಇನ್ನೊಂದು ಅಂದ್ರೆ ತಿನ್ನೋಕೆ ಸ್ವಲ್ಪ ಬಿಡುವಿನ ಸಮಯನೂ ಬೇಕು. ಅಮ್ಮ ನಂಗೆ ಅತ್ರಾಸ ತಿನ್ನು ಅಂತ ಕೊಟ್ಟಾಗ ನಾನು ಮೊದ್ಲು ಮೊದ್ಲು ತಿಂತಿರಲಿಲ್ಲ. ಆಮೇಲೆ ಅಮ್ಮ ಅದನ್ನ ತಿನ್ನೋ ಬಗೆಯನ್ನ ಕಲಿಸಿದ್ರು ಒಂದಿನ. ಬಿಡುವು ಮಾಡ್ಕೊಂಡು ಆರಾಮಾಗಿ ಕೂತ್ಕೊಂಡು ಚೂರ್ ಚೂರೇ ನಿಧಾನಕ್ಕೆ ಅಗ್ದೂ ಅಗ್ದೂ ತಿಂದ್ರೆ ಬಾಯಲ್ಲಿ ಸಿಹಿಸಿಹಿ ರಸಬರತ್ತೆ. ಅದನ್ನ ನುಂಗ್ಬೇಕು ಅಂತ ಬಾಯಲ್ಲಿ ನೀರುಬರೋ ಹಾಗೆ ಅಮ್ಮ ವಿವರಿಸಿದ್ರು. ಆಗ ನಂಗೆ ಅತ್ರಾಸ ತಿನ್ಬೇಕು ಅಂತ ಅನ್ನಿಸ್ತು. ತಿಂದೆ. ನಿಜ, ಕಷ್ಟಪಟ್ರೆ ಸುಖ ಸಿಗತ್ತೆ ಅನ್ನೋ ಮಾತು ತಿಂಡಿಗಳಿಗೂ ಅನ್ವಯಿಸುತ್ತೆ ಅಂತ ಅನ್ನಿಸ್ತು. ಹಾಗೆಯೇ ಈ ಆಡುಭಾಷೆಯನ್ನ ಬಳಸಿಕೊಂಡ ಕತೆಗಳೂ ಸಹ, ನಿಧಾನಕ್ಕೆ ಅದರ ರಸವನ್ನ ಎಳಕೊಳ್ತಾ ಎಳಕೊಳ್ತಾ ಎಷ್ಟಾಗತ್ತೋ ಅಷ್ಟಷ್ಟೇ ಅರ್ಥ ಮಾಡಿಕೊಳ್ತಾ ಹೋದ ಹಾಗೆ ಅದರ ರಸವನ್ನು ನಾವು ಸವೀಬಹುದು ಅನ್ನೋದನ್ನ ಅಲಮೇಲುಮೇಡಮ್ ನನಗೆ ತೋರಿಸಿಕೊಟ್ರು. ಕಷ್ಟಪಟ್ಟು ತಿಂದ್ರೆ ರುಚಿಯಾಗಿರತ್ತೆ. ಹಾಗಂತ ಕಷ್ಟಪಟ್ಟು ತಿನ್ನಬಹುದಾದ ಎಲ್ಲ ತಿಂಡಿಗಳೂ ಅತ್ರಾಸದಷ್ಟೇ ರುಚಿಯಾಗಿರ್ತಾವೆ ಅಂತಲ್ಲ, ಅಲ್ಲದೇ ಅತ್ರಾಸ ಎಷ್ಟೇ ರುಚಿಯಾಗಿದ್ರೂ ಎಲ್ಲರಿಗೂ ಇಷ್ಟವಾಗ್ಲೇಬೇಕು ಅನ್ನೋ ಒತ್ತಾಯನೂ ಅಲ್ಲ. ತಿಂಡಿ ಅವರವರ ರುಚಿಗೆ. ಓದು ಅವರವರ ಅಭಿರುಚಿಗೆ.&lt;br /&gt;&lt;br /&gt;ಆಡುವವರೊಂದಿಗೆ ಮುಗಿದುಹೋಗಬಲ್ಲಂಥ ಭಾಷೆಯೊಂದನ್ನ ತನ್ನುದ್ದಕ್ಕೂ ಬಳಸಿಕೊಂಡ ಕುಸುಮ ಬಾಲೆಯಂಥ ಸುಂದರ ಕಾವ್ಯದಂಥವು ನಿಧಾನಕ್ಕೆ ನಮ್ಮನ್ನು ಆವರಿಸಿಕೊಳ್ತಾವೆ. "ಪಸುಪಕ್ಸಿಯಾದಿಯಾಗಿ ನರಮನುಸರನ್ನೆಲ್ಲ ನಿದ್ದಾವು ಆವರಿಸಲು ಆಗ ಸೋಮಪ್ಪರು ಮಲುಗಿದ್ದ ಮಂಚಾವು ವಯ್ಸಾದ ನಾಯ್ಕಸಾನಿ ಮಾಡುವೋಪಾದಿ ವಯ್ಯಾರದಲಿ ತಲ್ವ ಎತ್ತಿ ಒಂದ್ಸಲ ನೋಡಿತು. ಸುಸ್ತಾರಿಸ್ತಿರೋ ಜೀವಾತ್ಮನ ಕಂಡು ಊಕಳಕ ಒಬ್ಬರು ಆದರು ಅಂದುಕೊಂಡು ಸಂತೋಸವಾಗಿ ಹೇಳತೊಡಗಿತು." ಹೀಗೆ ಮಂಚ ಮಾತನಾಡುವ ರೀತಿ ನಮ್ಮನ್ನು ಆಕರ್ಷಿಸುತ್ತದೆ. &lt;br /&gt;&lt;br /&gt;ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಸೆಳೆವ ಬಗೆಯು ಧಾರವಾಡದ ಆಡುಮಾತಿನಲ್ಲೇ ಇದೆ. ‘ಅಲ್ಲೇ ಮಡಿಯಲ್ಲಿ ಕೊಬ್ಬರಿ ಹೆರಕೋತ ಕೂತ ಅಂಬಕ್ಕಗ ಅಷ್ಟೇ ಸಾಕಾತು. ಆಕಿ ಖಟ್ ಅಂತ ಈಳಿಗಿ ಮುಚ್ಚಿ, ರಪ್ಪಂತ ಕೊಬ್ಬರಿ ಬಟ್ಟಲಾ ಅಪ್ಪಳಿಸಿ " ಅನ್ನರೀ ಅನ್ನರೀ... ಯಲ್ಲಾರೂ ನನಗ ಅನ್ನರೀ.. ನಾ ಒಬ್ಬಾಕಿ ಸಿಕ್ಕೇನಲ್ಲ, ಏನು ಪಾಪ ಮಾಡಿದ್ದೆನೋ ಏನೋ, ಕೊಟ್ಟ ಮನೀಗೆ ಯರವಾದೆ... ಹುಟ್ಟಿದ ಮನೀ ಸೊಜ್ಜಳ ಆಗಲೀ ಅಂತ ಎಷ್ಟ ಬಡಕೊಂಡರ ಏನದ? ಬರೀ ಒಲೀ ಮುಂದ ಕೂತ ಬಿಟ್ರೆ ಆತೇನು? ಇತ್ತಲಾಗ ಮ್ಯಾಲಕೆಲಸ ಏನು ಕಡಿಮಿ ಇರತಾವೇನು? ನನ್ನ ನಸೀಬ ಖೊಟ್ಟಿ. ದೇವರು ಕರಕೊಂಡು ಹೋಗ್ವಲ್ಲ" ಎನ್ನುತ್ತ ಎಂದಿನ ರಾದ್ಧಾಂತಕ್ಕೆ ತೊಡಗಿದಳು. &lt;br /&gt;&lt;br /&gt;ನಾಗವೇಣಿ ಎಚ್ ಅವರ ‘ಗಾಂಧಿ ಬಂದ’ ಕಾದಂಬರಿ ಸಹ ಆಡುಮಾತಿನಿಂದಲೇ ಆಕರ್ಷಿಸುತ್ತದೆ. ಇಂಥ ಚಂದದ ಪುಸ್ತಕವನ್ನು ಈ ಹೊತ್ತಿಗೆ ಓದುವುದಕ್ಕಾಗಿ ಪ್ರಿಯಾರಿಟಿ ಮೇಲಿನಲ್ಲಿ ‘ಗಾಂಧಿ ಬಂದ’ ಪುಸ್ತಕ ಕಳಿಸಿದ ಎಚ್, ವೈ, ರಾಜಗೋಪಾಲ್ ಸರ್ ಅವರಿಗೆ ಧನ್ಯವಾದ. &lt;br /&gt;&lt;br /&gt;ಕನ್ನಡದಲ್ಲಿ ಆಡುಭಾಷೆಯನ್ನು ದುಡಿಸಿಕೊಂಡು ತಮ್ಮ ಸೊಗಡಿನ ಸೌಂದರ್ಯಕ್ಕಾಗಿಯೇ ಹೆಚ್ಚು ಹೆಚ್ಚು ಜನಪ್ರಿಯವಾದ ಕತೆ/ಕಾದಂಬರಿಗಳು ಸಾಕಷ್ಟಿವೆಯಾದರೂ ಕನ್ನಡ ಸಾಹಿತ್ಯ ಸಾಗರದಲ್ಲಿ ಅಲೆಗಳಾಗುವಷ್ಟರ ಮಟ್ಟಿನ ಸಂಖ್ಯೆಯಲ್ಲಿಲ್ಲ. ಕೆಲ ಕೃತಿಗಳು ಬಳಸಿಕೊಂಡ ಭಾಷೆಯ ಸಲುವಾಗಿಯೇ ನಮ್ಮನ್ನು ಹತ್ತಿರಕ್ಕೆ ಎಳಕೊಳ್ತಾವೆ. ಇತ್ತೀಚೆಗೆ ಬರೆಯಲು ಆರಂಭಿಸಿರುವ ಹಲವಾರು ಲೇಖಕರು ಅರಿತೋ ಅರಿಯದೆಯೋ ಶಿಷ್ಟ ಕನ್ನಡಕ್ಕಿಂತ ಸುಲುಭವಾಗಿ ಬರವಣಿಗೆಗೆ ಇಳಿಸಬಹುದಾದ ತಮ್ಮ ಆಡುಭಾಷೆಯನ್ನೇ ಬಳಸಿಕೊಂಡು ಬರೆಯುತ್ತಿರುವುದು ಖುಷಿಯ ಸಂಗತಿ. ಈ ರೀತಿಯಲ್ಲಾದರೂ ಪ್ರಾದೇಶಿಕ ಭಾಷೆಯೆನ್ನುವುದು ಲಿಖಿತ ರೂಪದಲ್ಲಿ ಉಳಿದುಕೊಳ್ಳುತ್ತ ಹೋಗುತ್ತದೆಯೆನ್ನುವುದು ಒಂದು ತೆರನಾದ ಉಪಯೋಗವಾದರೆ ತಮಗೆ ಗೊತ್ತಿರುವ ಕನ್ನಡ ಆಡುಭಾಷೆಯನ್ನು ಪ್ರಯೋಗಿಸಲಾದ ಕತೆಕಾದಂಬರಿಗಳೆಡೆ ಹೆಚ್ಚು ಜನರು ಆಕರ್ಷಿತರಾಗಿ ಕನ್ನಡವನ್ನು ಓದುವವರ ಸಂಖ್ಯೆಯೂ ಹೆಚ್ಚಾಗಬಹುದು. ಸುಲುಭವಾಗಿ ಬರೆಯಬಲ್ಲ ತನ್ನದೇ ಭಾಷೆಯೊಂದು ಬಳಕೆಗೆ ಬಂದಾಗ ಬರೆಯುವವರ ಸಂಖ್ಯೆಯೂ ಹೆಚ್ಚಬಹುದು. ಕನ್ನಡ ಭಾಷೆಯೊಳಗಿನ ಈ ವೈವಿಧ್ಯತೆ ಬರವಣಿಗೆಯ ರೂಪದಲ್ಲಿ ಓದುಗನಿಗೆ ಪರಿಚಯವಾಗಬಹುದು. &lt;br /&gt;&lt;br /&gt;ಹಾಗೆಯೇ ಬರಹಗಾರನಿಗೆ ತನಗೆ ಗೊತ್ತಿರುವ ಭಾಷೆಯನ್ನು ಬರವಣಿಗೆಗೆ ಇಳಿಸುವುದು ಸುಲುಭವೆನ್ನಿಸಬಹುದು. ಓದುವವನಿಗೆ ಅದೇ ಭಾಷೆ ಅಷ್ಟೇ ಸುಲುಭಕ್ಕೆ ಅರ್ಥವಾಗಿಬಿಡುತ್ತದೆಯೆಂದು ಹೇಳಲಾಗದು. &lt;br /&gt;&lt;br /&gt;ಬರಹಕ್ಕೂ ಮತ್ತು ಓಗುಗನಿಗೂ ನಡುವೆ ಒಂದು ಅಂತರವೇರ್ಪಟ್ಟಾಗ ಬರವಣಿಗೆ ಅಂಥ ಸಾರ್ಥಕ್ಯವನ್ನು ಪಡೆದುಕೊಳ್ಳದೆಯೇ ಉಳಿಯಬಹುದು. ಬರಹದ ಸಾರ್ಥಕತೆಗೆ ಬರಹದಲ್ಲಿ ಬಳಸಲಾದ ಭಾಷೆಯು ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಓದುಗನಿಗೆ ಆ ಭಾಷೆ ಎಷ್ಟರಮಟ್ಟಿಗೆ ನಿಲುಕಬಲ್ಲುದು ಎಂಬುದೂ ಕಾರಣವಾಗುತ್ತದೆ. ಕತೆಯೊಂದು ಬೀರಬಹುದಾದ ಪರಿಣಾಮಕ್ಕೆ ಓದುಗ ಯಾವರೀತಿಯಲ್ಲಿ ಸ್ಪಂಧಿಸುತ್ತಾನೆಯೋ ಅದೇ ತೆರನಾಗಿ ಭಾಷೆಯೂ ಓದುಗನೊಳಗೆ ಬೀರಬಹುದಾದ ಪರಿಣಾಮಕ್ಕೆ ಕಾರಣವಾಗಿರುತ್ತದೆ. &lt;br /&gt;&lt;br /&gt;ಬರವಣಿಗೆಯಲ್ಲಿ ಪ್ರಾದೇಶಿಕ ಭಾಷೆಯ ಬಳಕೆ ಓದುವಾಗ ಖುಷಿ ಕೊಡುತ್ತದೆಯೋ ಅಥವಾ ಸ್ಟ್ಯಾಂಡರ್ಡ್ ಕನ್ನಡವನ್ನು ಮಾತ್ರ ಬಳಸಲಾದ ಬರಹಗಳು ಹೆಚ್ಚು ಖುಷಿ ಕೊಡುತ್ತವೆಯೋ? ಎಂಬುದಾಗಿ ನನ್ನ ಸ್ನೇಹವೃಂದದಲ್ಲಿ ಪ್ರಶ್ನೆಯಿಟ್ಟಾಗ ರಾಘವೇಂದ್ರ ತೆಲಗಡಿ, ಶೋಭಾ ಕರಣಿಕ್, ರಾಜೇಂದ್ರ ಭಂಡಿ, ಮೀರಾ ರಾಜಗೋಪಾಲ್, ರಾಮಪ್ರಸಾದ್ ಕೆ.ವಿ., ರಮ್ಯಾ ಸದಾಶಿವ, ಸೌಮ್ಯಾ ಭಾಗವತ್, ಜ್ಯೋತಿ ಮಹದೇವ್, ಗುರುಮೂರ್ತಿ ಹೆಗಡೆ, ಪ್ರೀತಿ ಹೆಗಡೆ, ದಿವ್ಯಾ ಹೆಗಡೆ, ವಿಕಾಸ ಹೆಗಡೆ, ಪತ್ರಕರ್ತೆ ಮತ್ತು ಬರಹಗಾರ್ತಿ ಉಷಾಕಟ್ಟೆಮನೆ, ಆನಂದ ಕೆ, ಐ ಹೀಗೆ ಕೆಲವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಅವರಲ್ಲಿಯೇ ಕೆಲವರು ಆಡುಭಾಷೆಯ ಪ್ರಯೋಗ ಓದುವಾಗ ಅರ್ಥವಾಗದೇ ಇದ್ದ ಪಕ್ಷ ತಮಗೆ ಇಷ್ಟವಾಗುವುದಿಲ್ಲ ಅಂತಲೂ, ಇನ್ನು ಕೆಲವರು ಆಡುಭಾಷೆಯ ಪ್ರಯೋಗ ಖುಷಿ ಕೊಡುತ್ತದೆಯೆಂತಲೂ ಉತ್ತರ ನೀಡಿದರು. ಆ ಎಲ್ಲ ಅಭಿಪ್ರಾಯಗಳ ಸಾರಾಂಶವನ್ನು ನಿಮ್ಮ ಮುಂದಿಡಲು ಇಷ್ಟಪಡುತ್ತೇನೆ. &lt;br /&gt;&lt;br /&gt;"ಕಥೆಯ ಓಟಕ್ಕೆ ಹೊಂದಿಕೆಯಾಗುವ ಪ್ರಾದೇಶಿಕತೆ ಓದುಗನನ್ನು ಹೆಚ್ಚು ಸೆಳೆಯಬಹುದು. ಒಂದುಪ್ರದೇಶದ ಜನರಿಗೆ ತಮ್ಮದೇ ಆಡುಭಾಷೆಯನ್ನು ಲಿಖಿತ ಸಾಹಿತ್ಯದಲ್ಲಿ ಓದುವಾಗ ಆಗುವ ಖುಷಿ ಇನ್ನಿತರ ಪ್ರಾದೇಶಿಕರಿಗೆ ಆಗದೇ ಇರಬಹುದು. ಹಾಗಂತ ಆಡುಮಾತಿನ ಪ್ರಯೋಗ ಲಿಖಿತ ಸಾಹಿತ್ಯದಲ್ಲಿ ತಪ್ಪೆಂದಲ್ಲ, ಬಳಸಿದರೆ ಓದುಗರಿಗೆ ಬೇರೆ ಬೇರೆ ಆಡುಮಾತಿನ ಪರಿಚಯ ಆಗುವ ಪ್ರಯೋಜನವಂತೂ ಖಂಡಿತ. ಸಾಹಿತ್ಯದ ಉಪಯೋಗಗಳಲ್ಲಿ ಇದೂ ಒಂದು. ವಿಷಯಕ್ಕೆ ಪೂರಕವಾಗಿದ್ದರೆ ಯಾವ ಆಡುಮಾತಾದರೂ ಸರಿಯೇ (ಕಲ್ಪಿತ ಸಾಹಿತ್ಯದಲ್ಲಿ)- ಅದೇ ಯಾವುದಾದರೂ ವಿಷಯದ ಬಗ್ಗೆ ಆಳವಾದ ಅಧ್ಯಯನದ ಮೆಲಿದ್ದರೆ ಸ್ಟ್ಯಾಂಡರ್ಡ್ ಕನ್ನಡವೇ ಹಿಡಿಸುತ್ತೆ. ಬರವಣಿಗೆಯಲ್ಲಿ ಅಕಾಡಮಿಕ್ ಅಲ್ಲದ ಸರಳವಾದ ಭಾಷೆ ಹೆಚ್ಚು ಖುಷಿ ಕೊಡುತ್ತದೆ. ವಸ್ತುವಿನ ಗಂಭೀರತೆಗೆ ಅನುಗುಣವಾಗಿ ಬಾಗುವ, ಬಳುಕುವ ಶಕ್ತಿ ಪ್ರತಿ ಭಾಷೆಗಿರುತ್ತದೆ. ಬರಹಗಾರನಿಗೆ ತಾನು ಹೇಳಬೇಕಾದುದರ ಬಗ್ಗೆ ಸ್ಪಷ್ಟತೆ ಇದ್ದಾಗ ಅದು ತಾನಾಗೇ ಸಿದ್ದಿಸುತ್ತದೆ. ಆಡುಮಾತಿನಲ್ಲಿ ಉತ್ತರಕನ್ನಡದ ಗಂಡುಭಾಷೆ ಚಂಪಾ ಮತ್ತು ಕಂಬಾರರು ಆಡುವ ಕನ್ನಡ ತುಂಬಾ ಇಷ್ಟವಾಗುತ್ತದೆ. ಸತ್ವಯುತವಾದ ಈ ಭಾಷೆ ರಂಗಭೂಮಿಗೂ ಶಕ್ತಿಯನ್ನು ತುಂಬಿದೆ. ಕಥೆಗೆ ಪೂರಕವಾಗಿದ್ದರೆ ಆಡುಭಾಷೆಯ ಮಜ ಸ್ಟ್ಯಾಂಡರ್ಡ್ ಭಾಷೆಗೆ ಬರಲ್ಲ. ಇನ್ನೊಂದು ವಿಷ್ಯ, ಆಡುಭಾಷೆಯನ್ನ ಕೇವಲ ಆ ಪ್ರದೇಶದ ಜನ ಮಾತ್ರ ಅಲ್ಲ, ಬೇರೆಯವರು ಕೂಡ ಇಷ್ಟಪಡಬಹುದು. ನಾವು ಧಾರವಾಡದವರು ಅಲ್ಲದಿದ್ರೂ ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ದ ಆಢುಭಾಷೆ ಸಿಕ್ಕಾಪಟ್ಟೆ ಇಷ್ಟವಾಗುತ್ತದೆ. ಆಡುಭಾಷೆಯಿಂದ ಆ ಪ್ರದೇಶದ ಬಗ್ಗೆ ಎಷ್ಟೋ ಇಂಟರೆಸ್ಟಿಂಗ್ ಮಾಹಿತಿ ಸಿಗತ್ತೆ’ ಅಂತೆಲ್ಲ ಇಂಟರೆಸ್ಟಿಂಗಾಗಿ ಅಭಿಪ್ರಾಯಗಳನ್ನ ಹೇಳಿದ್ರು. &lt;br /&gt;&lt;br /&gt;ಇನ್ನು ಕೆಲವರು ಯಾವ್ದೂ ಬೇಡ ಅಂತ ‘ಬ್ಲೆಂಡ್ ಆಫ್ ಬೋತ್ ಫಾರ್ ಮಿ’ ಅಂತ ಇಂಗ್ಲೀಷಲ್ಲಿ ಹೇಳಿದ್ರು. ಹಾಗೆಯೇ ಇನ್ನೊಬ್ರು ಹೀಗೇ ಹೀಳಿದ್ರು "ನೌವ್ವಾ ಡೇಸ್ ಟ್ರೆಂಡ್ ಈಸ್ ನ್ಯೂಟ್ರಲ್ ಕನ್ನಡ" ಇವಿಷ್ಟು ಕೆಲವರ ಅಭಿಪ್ರಾಯ. &lt;br /&gt;&lt;br /&gt;ಮತ್ತೆ ಕಥೆಯ ವಿಷಯಕ್ಕೆ ಮರಳಿದರೆ ವಸುಧೇಂದ್ರ ಅವರ ಕತೆಗಳು ನಮ್ಮನ್ನು ಸೆಳೆವ ಕಾರಣವೂ ಅವರು ಬಳ್ಳಾರಿ ಕಡೆಯ ಭಾಷೆ. ’ಅಕ್ಕನ ಮನೆಯಲ್ಲಿ ಎಲ್ಲರ ಕಣ್ಣಲ್ಲಿ ನಾನು ಮಿಂಚಬಹುದೆಂಬ ಆಸೆಯಿಂದ ಬಸ್ಸೇರಿದೆ. ಅಮ್ಮ ಹೇಳಿದಂತೆ ಕಾಲಬುಡದಲ್ಲಿಯೇ ಡಬ್ಬವನ್ನಿಟ್ಟುಕೊಂಡೆ. ಆದರೆ ದಿವಂಗತ ಟಿ.ಕೆ. ರಾಮರಾಯರ ಒಂದು ಭರ್ಜರಿ ಪತ್ತೇದಾರಿ ಕಾದಂಬರಿ ಓದುತ್ತಾ ಕುಳಿತೆ. ರಾಯರು ಒಂದರ ಮೇಲೊಂದು ಹೆಣ ಉರುಳಿಸುತ್ತಿದ್ದರು. ನಾನು ಯಾರನ್ನು ಕೊಲೆಗಾರ ಎಂದು ಊಹಿಸಿದ್ದೆನೋ ಅವನದೇ ಕೊಲೆಮಾಡಿಸಿಬಿಟ್ಟರು. ಯಾರೋ ಸ್ವಲ್ಪ ಕಾಲು ಎತ್ತಿ ಆ ಕಡೆ ಇಡರಿ ಎಂದರು. ಇಟ್ಟೆ. ಅವರು ಲಕ್ಷಣವಾಗಿ ಯಾವುದೋ ನಿಲ್ದಾಣದಲ್ಲಿ ಡಬ್ಬವನ್ನು ಇಳಿಸಿಕೊಂಡು ಹೋದರು. ಕೊಲೆ-ಗಿಲೆ ಎಲ್ಲಾ ಮುಗಿದು ಅಕ್ಕನ ಮನೆ ಸೇರಿದಾಗ ಡಬ್ಬ ಕಾಣೆಯಾದ್ದು ನನಗೆ ಆಗ ಗೊತ್ತಾಯ್ತು. ಅಕ್ಕನ ಮನೆಯಲ್ಲಿ ಎಲ್ಲರೂ ನನ್ನನ್ನು ’ ಹುಡುಗಿ ತಮ್ಮ, ಮದುವಿ ಸ್ಟೀಲ್ ಪಾತ್ರೆನೆಲ್ಲ ಬಸ್ಸಿನ್ಯಾಗೆ ಕಳಕೊಂಡಾನೆ’ ಅಂತ ಪರಿಚಯಿಸಿದರು. ಅಮ್ಮನ ಗೋಳಂತೂ ಹೇಳುವುದಕ್ಕೇ ಸಾಧ್ಯವಿಲ್ಲ. ‘ಕಾಲಾಗೆ ಇಟ್ಟಿದ್ದ ಡಬ್ಬಿ ತಕ್ಕೊಂಡು ಹೋಗಿದ್ದೂ ಗೊತ್ತಾಗದಂಥ ಸುಡುಗಾಡು ಪುಸ್ತಕ ಅದ್ಯಾರು ಬರೆದಿದ್ದರಾತು ಹೇಳವ್ವಾ’ ಎಂದು ಅಪರಿಚಿತ ರಾಮರಾಯರಿಗೆ ಬೈದಳು. &lt;br /&gt;&lt;br /&gt;ವೈದೇಹಿಯವರ ಕತೆಗಳಲ್ಲಿಯೂ ನೀವೊಮ್ಮೆ ಹುಟ್ಟೂರು ಸುತ್ತಿ ಬಂದಷ್ಟು ಆ ಕಥೆಗಳು ಆಪ್ತವಾಗುವುದು ಆಡುಮಾತನ್ನು ಹಿಡಿದಿಟ್ಟ ಕುಶಲತೆಯಲ್ಲಿ. " ಹಾಂ, ಹಾಗೆ ಹೊರಟಳಲ್ಲ ಎರಡು ಜಡೆ ಬಿಟ್ಟುಕೊಂಡು ಅಮ್ಮಚ್ಚಿ, ಸತ್ಯನಾರಾಯಣ ಪೂಜೆಗೆ. ವೆಂಕಪ್ಪಯ್ಯ ದಾರಿಯಲ್ಲೇ ಸಿಕ್ಕಿದ. ‘ಏನಿಯ? ಇದೇನಿಯ ಏಸ. ಬೊಂಬಾಯಿ ಲೇಡಿಯ ಹಂಗೆ, ವಾರೆ ಬಕ್ತಲೆ! ಶಿ..ಶೀ.. ನಡೆ ಮನೆಗೆ. ಸರಿಯಾಯಿ ಬಾಚಿಂಡು ಹೋವು’ ಎಂದ. ಅದಕ್ಕೆ ಅಮ್ಮಚ್ಚಿ ’ ಹೋವುಯ, ನೀ ಮನೆಗೆ ಹೋವು. ಹೋಯಿದ್ದ ಗಡದ್ದು ಒಂದು ಲೋಟ ಚಾಯ ಕುಡಿ. ಅಮ್ಮನ ಹಕ್ಕೈ ಹೇಳ್, ಹೆಂಗೂ ಮಾಡಿ ಕೊಡತ್ಲ್... ನನ್ನ ಸುದ್ದಿಗೆ ಮಿನಿ ಬರಳೆ, ಬೋಳುಮಂಡೆ ಕಾಕ. ನಿಂಗೆ ವಾರೆ ಬಿಡು, ಯಾವ ಬಕ್ತಲೆಯೂ ತೆಗೆಯಗಾಗದ ಸಂಕಟಕ್ಕೆ ನಂಗೆ ಯಾಕೆ ಹೇಳ್ತೆ?’ ಎಂದವಳು ನನ್ನ ಕೈಹಿಡಿದು ‘ಬಾಯ ಬೀಸು ನೀನು. ಮೆಲ್ಲ ನಡದ್ರೆ ಹಿಂಗೇ. ನಾಯಿ ಸಂತಾನಗಳೆಲ್ಲ ಎದುರಾತೋ’ ಎಂದು ಎಳೆದುಕೊಂಡು ಮುಂದೆ ನಡೆದೇ ಬಿಟ್ಟಳು. ಇಷ್ಟೆಲ್ಲ ಮಾತನಾಡುವ ಅಮ್ಮಚ್ಚಿ ಕತೆಮುಗಿದರೂ ಮರೆಯಳು. ಹೀಗೆ ಸಂಭಾಷಣೆ ಒಂದು ಪರಿಸರವನ್ನೇ ವಿವರಿಸುವ ಶಕ್ತಿಯಾಗಿರುತ್ತದೆ ಕೆಲವೊಮ್ಮೆ. ಕತೆ ಮುಗಿದಾಗ ನೀವು ಅಮ್ಮಚ್ಚಿಯನ್ನು ನಿಮ್ಮೂರಲ್ಲೆ ನೋಡುರುತ್ತೀರಿ. ಪದೇ ಪದೇ ಅಮ್ಮಚ್ಚಿ ನೆನಪಾಗುತ್ತಾಳೆ ಸುಮಾರು ದಿನದತನಕ. &lt;br /&gt;&lt;br /&gt;ಇವಿಷ್ಟು ಬರವಣಿಗೆಯಲ್ಲಿ ಆಡುಭಾಷೆಯ ಬಳಕೆಯ ಬಗ್ಗೆ ನನ್ನ ಅನಿಸಿಕೆ. ಇನ್ನು ನಿಮ್ಮ ಅಭಿಪ್ರಾಯದಲ್ಲಿ ಪ್ರಶ್ನೆಗಳಿದ್ದರೆ ಸ್ವಾಗತ. ಇಲ್ಲಿಯತನಕ ಪ್ರೀತಿಯಿಂದ ನನ್ನ ಮಾತುಗಳಿಗೆ ಅವಕಾಶ ಕೊಟ್ಟು ಆಲಿಸಿದ ನಿಮ್ಮೆಲ್ಲರಿಗೂ ನನ್ನ ಅನಂತ ಧನ್ಯವಾದಗಳು. &lt;br /&gt;&lt;br /&gt; &lt;br /&gt;(&lt;strong&gt;ಕನ್ನಡಸಾಹಿತ್ಯರಂಗದ ‘ವಸಂತಸಾಹಿತ್ಯೋತ್ಸವ’ದಲ್ಲಿ ‘ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ’ದ ಕುರಿತಾದ ನನ್ನ ಭಾಷಣ. ಹೀಗೆ ಒಂದು ದಿನ ನಾನು ಭಾಷಣ ಮಾಡಬೇಕಾಗಿ ಬಂದೀತೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಭಾಷಣ ಮುಗಿದು ಸುಮಾರು ದಿನದ ಮೇಲೂ ನಾನಾವತ್ತು ಮಾತನಾಡಿದ್ದನ್ನು ಕೇಳಿದವರೆಲ್ಲರ ಕ್ಷಮೆ ಕೋರುತ್ತ  ಮತ್ತೆ ಧೈರ್ಯಮಾಡಿ ಇದನ್ನಿಲ್ಲಿ ಇಡುತ್ತಿದ್ದೇನೆ &lt;/strong&gt;:-)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-663019274416674022?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/663019274416674022/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=663019274416674022' title='11 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/663019274416674022'/><link rel='self' type='application/atom+xml' href='http://www.blogger.com/feeds/5495085842856428066/posts/default/663019274416674022'/><link rel='alternate' type='text/html' href='http://www.shantalabhandi.com/2011_05_01_archive.html#663019274416674022' title='ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>11</thr:total></entry><entry><id>tag:blogger.com,1999:blog-5495085842856428066.post-8340679549526554572</id><published>2011-05-02T22:48:00.000-07:00</published><updated>2011-05-02T22:49:54.352-07:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಕಾವ್ಯ ಎಂದರೆ ಏನು?</title><content type='html'>ಇಷ್ಟು ಮಾತ್ರ ಹೇಳಬೇಕಾಗಿದೆ ನೀವು ಅಷ್ಟೆಲ್ಲ ಹೇಳಿದ ಮೇಲೆ.ಯಾರೋ ಕೇಳಿದ ಪ್ರಶ್ನೆಗೆ ‘ಈ ಬಗ್ಗೆ ಇವಳಿಗೆ ಹೇಳಿದ್ದೇನೆ, ’ ಅಂತ ನನ್ನ ತೋರಿಸಿದಿರಿ. ಇಷ್ಟು ಮಾತ್ರ ಹೇಳುತ್ತೇನೆ. ನನಗೇನೂ ಗೊತ್ತಿಲ್ಲ, ನಾನೇನೂ ಹೇಳುವುದಿಲ್ಲ.&lt;br /&gt;ಬರೆಯುವಾಗ ಕೆ.ಎಸ್.ನ, ಕುವೆಂಪು, ಅಡಿಗರು ಬಂದರೆ ಅವರನ್ನು ಪಕ್ಕಕ್ಕೆ ಕೂರಿಸಿ, ನನ್ನ ಮನೆಗೆ ನಾನೇ ಒಡತಿ, ನಾನು ಮಾಡಬೇಕಾದ್ದನ್ನು ನಾನೇ ಮಾಡುತ್ತೇನೆ ಅಂತ ಅವರನ್ನೆಲ್ಲ ಪಕ್ಕಕ್ಕೆ ಕೂರಿಸಿ ನೀವು ಬರೆಯಿರಿ, ನೀವು ಬರೆಯಬೇಕಾದ್ದನ್ನು ಅವರಿಗೆ ಬರೆಯಲು ಬಿಡಬಾರದು ಅಂತ ಹೇಳಿದಿರಿ. ಆದರೆ ನಾನೇನು ಬರೆಯಬೇಕು ಅಂತ ನೀವು ಹೇಳಲೇ ಇಲ್ಲ, ಅಥವಾ ನಾನು ಬರೆದದ್ದೆಲ್ಲವನ್ನೂ ನಿಮ್ಮ ಮುಂದೆ ನಾನು ಹರವಿಡಲೇ ಇಲ್ಲ, ನನ್ನ ತಪ್ಪೂ ಇದೆ.&lt;br /&gt;&lt;br /&gt;ಸುಮ್ಮನೆ ಯಾಕೆ ದ್ವೇಷಿಸುವಂತೆ ಪ್ರೀತಿಸುತ್ತೀರಿ. ಮಾತು ಬೇಸರವಾಯಿತೆ? ಅಥವಾ ಸುಮ್ಮನಿದ್ದದ್ದೇ ಇಷ್ಟವಾಗಲಿಲ್ಲವ? ಸಮಸ್ಯೆಯೆಂದರೆ ನಿಮ್ಮ ಮಾತಿಗೆ ಬೇಕಾಗಿರದ ಏಕಾಂತವೊಂದು  ನನ್ನ ಜಗಳಕ್ಕೆ ಬೇಕಿದೆ. ಕಾಯುತ್ತಿದ್ದೇನೆ. ಎಲ್ಲವನ್ನೂ ಹೇಳಿದರೆ ಕವಿತೆಯಾಗುವುದಿಲ್ಲ ಅಂತ ಹೇಳುತ್ತೀರಿ. ಹೇಳಬೇಕೆನಿಸಿದ್ದೆಲ್ಲವನ್ನೂ ಹೇಳಿಬಿಡುವುದು ಮಾತೂ ಅಲ್ಲ. &lt;br /&gt;&lt;br /&gt;ಫ್ರೆಂಚ್ ಕವಿಯೊಬ್ಬ ಯಾವತ್ತೋ ಹೇಳಿದ ಮಾತು ಇವತ್ತಿಗೆ ನೀವು ಮತ್ತೊಬ್ಬನಿಗೆ ಕೊಡುವ ಸಮಜಾಯಿಷಿ. ಯಾರದ್ದೋ ಮಾತಿಗೆ ಮೊಂಡುವಾದ ಎನ್ನುತ್ತೀರಿ. ನಾನು ಸುಮ್ಮನಿದ್ದದ್ದೇ ತಪ್ಪು ಎನ್ನುತ್ತೀರಿ. ನಿಮ್ಮದೇ ಹೊಸ ಹೊಸಸಾಲುಗಳ ಬರೆದು ನನ್ನ ಹೆಸರನ್ನು ಕರೆದು ನನ್ನ ಮೌನವನ್ನೇಕೆ ಪ್ರಶ್ನಿಸುತ್ತೀರಿ? ನನ್ನ ಹೆಸರು ಇಷ್ಟವಾಯಿತೆ ನಿಮಗೂ? ಗೊತ್ತಿದೆ ನೀವು ನಿಮ್ಮ ಮನೆಯ ತೆಂಗಿನಮರ, ಹೂಗಿಡ, ಅಲ್ಲಿಗೆ ಬರುವ ಹಕ್ಕಿ, ಪ್ರಾಣಿ ಪಕ್ಷಿ ಎಲ್ಲದರ ಮೇಲೆ ಕವಿತೆ ಬರೆದಿದ್ದೀರಿ ಎಂದು. ಅಷ್ಟೂ ಪುಸ್ತಕ ತಂದಿದ್ದೇನೆ ನಾಳೆ ಓದೋಣ ಅಂತ. &lt;br /&gt;&lt;br /&gt;ಎದುರಿಗೆ ನಿಂತರೆ ನಿಂತಿದ್ದೇ ಸರಿಯಿಲ್ಲ. ದೂರ ಸರಿದರೆ ಕೈಬೀಸಿ ಕರೆಯುತ್ತೀರಿ. ಕೊನೆಯಲ್ಲೊಂದು ಮಾತು. ನೀವು ನನಗೆ ಇಷ್ಟವಾಗಿದ್ದೀರಿ. ಇವಿಷ್ಟನ್ನಿಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೇನೆ, ಇವಿಷ್ಟೇ ಸಾಕು, ಇನ್ಯಾವತ್ತೋ ಎಲ್ಲವನ್ನೂ ನೆನಪಿಸುವುದಕ್ಕೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-8340679549526554572?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/8340679549526554572/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=8340679549526554572' title='6 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/8340679549526554572'/><link rel='self' type='application/atom+xml' href='http://www.blogger.com/feeds/5495085842856428066/posts/default/8340679549526554572'/><link rel='alternate' type='text/html' href='http://www.shantalabhandi.com/2011_05_01_archive.html#8340679549526554572' title='ಕಾವ್ಯ ಎಂದರೆ ಏನು?'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>6</thr:total></entry><entry><id>tag:blogger.com,1999:blog-5495085842856428066.post-710639271065653538</id><published>2011-04-26T12:10:00.000-07:00</published><updated>2011-04-26T12:12:28.796-07:00</updated><category scheme='http://www.blogger.com/atom/ns#' term='ಬೊಗಸೆಯಲ್ಲಿ ಬೆಳದಿಂಗಳು'/><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ಪವನದೊಳು ತೇಲಿ ಲೀನವಾದೆಯ ಮಡಿಲೆ</title><content type='html'>ಬರವಿತ್ತು ಇಂದಿಗೆ ಧರೆಗಿಳಿಯದ ಧ್ವನಿಯೇ&lt;br /&gt;ಜಲದ ಬಣ್ಣದಲಿ ಮಾಯ ಮಾಟಗಾತಿ&lt;br /&gt;ರಮಿಸದೇ ಕರಗಿದ ಜಲದಲ್ಲಿ  ಬಣ್ಣ&lt;br /&gt;ಕಾಣದ ಆರತಿಯಲಿ, ಆರತಿಯೂ ಆಗದೆಲೆ&lt;br /&gt;ಭಾರ ಇಳಿದು  ಹಗುರಾದ ಉದರ&lt;br /&gt;&lt;br /&gt;ಮೌನ ಮುಡಿದ ಕಣ್ಣೆವೆಯು ಭಾರ&lt;br /&gt;ಕಣ್ಣೊಳಗೆ ಎಳೆ ತುಳಿದ ಹೆಜ್ಜೆಯ ಛಾಪ&lt;br /&gt;ನೀರೊಳಗೆ ಪುಟಿವ ಪಾದದ ಗುದ್ದು&lt;br /&gt;ಸದ್ದಿಲ್ಲದೆ ಬಿದ್ದ ಚೋಟುದ್ದ ಹೊಸ ಗೆಜ್ಜೆಯೇ&lt;br /&gt;ಇಡದ ಹೆಜ್ಜೆಯಲಿ  ನಿನ್ನ ಆಲಿಸುವವರು ಯಾರು?&lt;br /&gt;&lt;br /&gt;ಮರುಕಳಿಸುವ ಮೌನಿ ಯುಗಾದಿ&lt;br /&gt;ಸಿಹಿ ಉಣ್ಣದ ಹುಣ್ಣು ಗಾಯ ಒಳಗೆ&lt;br /&gt;ಹೂಚಬ್ಬೆ  ಅಂಚಿನಲಿ ಕೇದಿಗೆ ಹೂ&lt;br /&gt;ಮುಡಿಯಲಾಗದೆ ನರಳಿದೆಯಾ ನೀ ಕೇಶರಾಶಿ&lt;br /&gt;ಶ್ವಾಸವೇ ನಿನ್ನುಸಿರ ಕಿತ್ತವರು ಯಾರು?&lt;br /&gt;&lt;br /&gt;&lt;br /&gt;ಯುಪಿನ್ ಕಡ್ಡಿ ನೋವ ಹೆಣೆಯುತ್ತಲೇ ಇಹುದು&lt;br /&gt;ಖುಲಾವಿಯಾಗದ ನೂಲೊಡನೆ ಮೂಲೆಯೊಳಗೆ&lt;br /&gt;ಹೆಣ್ಣುಗೊಂಬೆಯ ನಗುವು ಮತ್ತೆ ಗಹಗಹಿಸಿ&lt;br /&gt;ಸಾವಿರದ ಬಣ್ಣದಲೂ ಗುಲಾಬಿ ಹೂವು&lt;br /&gt;&lt;br /&gt;ಕೇದಿಗೆಯೇ ಯುಗಾದಿ ಕಂಡೆಯ?&lt;br /&gt;ಯುಗಾದಿಯೇ ನೀ ಕೇದಿಗೆಯ ಕೊಂದೆಯ?&lt;br /&gt;ಮೌನ ಯುಗಾದಿ ಕರಗಿದ ಕೇದಿಗೆ&lt;br /&gt;ಉತ್ತರವ ಹುಡುಕೆ  ಮೂಕ ಪ್ರಶ್ನೆ&lt;br /&gt;&lt;br /&gt;&lt;br /&gt;ಕರುಳಲ್ಲಿ ಮೂಡಿ  ಅದೃಶ್ಯ ಚಿತ್ರ&lt;br /&gt;ಸಾಂತ್ವನ ಮೀರಿ ಏರಿ ನೋವು&lt;br /&gt;ಪುಳಕಿಸಿದ ನೆನಪು  ಕಹಿರಸದ ಕಬ್ಬು&lt;br /&gt;ಯುಗಾದಿಯ ಬರುವು ಗಾಯ ಕೆದಕುವ ಹಾಗೆ&lt;br /&gt;&lt;br /&gt;ಹಿಂದೆ ಹೋದಂದು   ಕೇದಿಗೆ ಹೂವಿಂದಲೆ&lt;br /&gt;ಯುಗಾದಿಯ ಸಿಹಿ, ಬಣ್ಣದ ಮಡುವಲ್ಲಿ&lt;br /&gt;ಹರಿದರಿದು   ಹತ್ತಿಯನು  ಕೆದಕಿದೆಯ ಕಣ್ಣೆ&lt;br /&gt;ಬಿಕ್ಕಿದೆಯಾ ಕಣ್ಣೀರೇ ಯಾರು ಅಲ್ಲಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-710639271065653538?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/710639271065653538/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=710639271065653538' title='5 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/710639271065653538'/><link rel='self' type='application/atom+xml' href='http://www.blogger.com/feeds/5495085842856428066/posts/default/710639271065653538'/><link rel='alternate' type='text/html' href='http://www.shantalabhandi.com/2011_04_01_archive.html#710639271065653538' title='ಪವನದೊಳು ತೇಲಿ ಲೀನವಾದೆಯ ಮಡಿಲೆ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>5</thr:total></entry><entry><id>tag:blogger.com,1999:blog-5495085842856428066.post-8684117127163032012</id><published>2011-04-24T22:31:00.000-07:00</published><updated>2011-04-24T23:15:00.469-07:00</updated><category scheme='http://www.blogger.com/atom/ns#' term='ಹದಿಹರೆಯ'/><category scheme='http://www.blogger.com/atom/ns#' term='ಬೊಗಸೆಯಲ್ಲಿ ಬೆಳದಿಂಗಳು'/><title type='text'>ತೆರೆಯುವುದಿಲ್ಲ ನೋವಿಗಿರುವ ತೆರೆಯ</title><content type='html'>ತೋರಿಕೆಯದಲ್ಲ ನನ್ನೊಳಗಣ ಪ್ರೀತಿ&lt;br /&gt;ಹೇಳಿಕೊಳುವುದಿಲ್ಲ ಯಾರಲೂ ಏನೂ&lt;br /&gt;ಮೌನ ಬೇಲಿಯ ಮಧ್ಯೆ ಬಂಧಿಯಾಗಿಸಿ&lt;br /&gt;ನಗೆ ಹೊದಿಕೆ ಹೊದೆಸಿ ಮಾತಿಲ್ಲದೇ&lt;br /&gt;ದಾಪುಗಾಲಿಕ್ಕಿ ನಡೆದೆಯಲ್ಲಾ ನಿಜ&lt;br /&gt;ತೆರೆಯುವುದಿಲ್ಲ ನೋವಿಗಿರುವ ತೆರೆಯನು&lt;br /&gt;&lt;br /&gt;ಈ ಮನವನೇ ಕೈಪಿಡಿಯಾಗಿಸಿ&lt;br /&gt;ಮುಳ್ಳ ಲೇಖನಿಯಲಿ ಗೀಚಿ ಗೀರಿ&lt;br /&gt;ಹಾಳೆಗಳ ನೀ ಕಿತ್ತೆಸೆದೆ ನಿಜ&lt;br /&gt;ಅಳೆಯುವುದಿಲ್ಲ ದುಃಖದಾಳವನು&lt;br /&gt;&lt;br /&gt;ಬಣ್ಣದ ಭಾವದಲಿ ಭರದಿ ಬಂದೆ&lt;br /&gt;ನಾ ಬರೆಯಲಿದ್ದಲ್ಲಿ ಅನ್ಯರ ಹಸ್ತಾಕ್ಷರ&lt;br /&gt;ಕಂಡೂ ಕಾಣದ ಪರಿ ಹಿಂದಿರುಗಿದ್ದು ನಿಜ&lt;br /&gt;ಬಿಚ್ಚುವುದಿಲ್ಲ ಬೇಸರವನು&lt;br /&gt;&lt;br /&gt;ನೀ ಇರಿದ ಮುಳ್ಳು ಎದೆಯ ಗರ್ಭದಲಿ&lt;br /&gt;ಮೊಳೆತಿದ್ದ ಕನಸುಗಳ ಇರಿದಿದ್ದು ನಿಜ&lt;br /&gt;ಸಹಸ್ರ ಗೀರಿದರೂ ಚೀರುವುದಿಲ್ಲ ನಾನು&lt;br /&gt;&lt;br /&gt;ಹುಡುಗಾ ಮನಕಿರುವ ನೀತಿ&lt;br /&gt;ನಯನಗಳಿಗಿಲ್ಲ&lt;br /&gt;ನೋವಾದಾಗೆಲ್ಲ&lt;br /&gt;ಸದೃಶ ಕಂಬನಿ ತುಷಾರದಂದದಲಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-8684117127163032012?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/8684117127163032012/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=8684117127163032012' title='8 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/8684117127163032012'/><link rel='self' type='application/atom+xml' href='http://www.blogger.com/feeds/5495085842856428066/posts/default/8684117127163032012'/><link rel='alternate' type='text/html' href='http://www.shantalabhandi.com/2011_04_01_archive.html#8684117127163032012' title='ತೆರೆಯುವುದಿಲ್ಲ ನೋವಿಗಿರುವ ತೆರೆಯ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>8</thr:total></entry><entry><id>tag:blogger.com,1999:blog-5495085842856428066.post-803502785445080013</id><published>2011-04-12T22:12:00.000-07:00</published><updated>2011-04-12T22:42:06.207-07:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಬೊಗಸೆಯಲ್ಲಿ...</title><content type='html'>ಪ್ರೀತಿಯ ಎಲ್ಲರಿಗೆ ನಮಸ್ಕಾರ. ಖುಷಿಯ ಸುದ್ದಿಯೊಂದನ್ನು ಬೊಗಸೆಯಲ್ಲಿ ಹಿಡಕೊಂಡು ನಿಮ್ಮೆಲ್ಲರ ಮುಂದೆ ಧುತ್ತೆಂದು ಬಂದು ಹಂಚೋದಕ್ಕೆ ನಿಂತಿದ್ದೇನೆ. ಈ ಖುಷಿ ಖಾಲಿಯಾದಾಗ ಮತ್ತೆ ಸದಾ ಹಾರೈಸುವ ನಿಮ್ಮೆಲ್ಲರ ಮುಂದೆ ನಿಂತು  ‘ಭವತಿ ಭಿಕ್ಷಾಂದೇಹಿ’ ಅನ್ನೋದಕ್ಕೆ ನಂಗೆ ಖುಷಿಯೇ.&lt;br /&gt;&lt;br /&gt;ವಿಚಾರ ಏನು ಅಂತ ಹೇಳಿಬಿಡ್ತೇನೆ. ನನ್ನ ಸಾಲುಗಳು(ಕವನಗಳು ಅಂತ ನೀವು ಆವತ್ತು ಕರೆದ ನಾ ಬರೆದ ಅದೇ ಆ ಸಾಲುಗಳು) ಪುಸ್ತಕ ರೂಪಕ್ಕೆ ಬಂದಿವೆಯಂತೆ. ಹೆಸರೇನು ಗೊತ್ತ?&lt;br /&gt;&lt;br /&gt;"ಬೊಗಸೆಯಲ್ಲಿ ಬೆಳದಿಂಗಳು"&lt;br /&gt;&lt;br /&gt;ಶಿರಸಿ ಕಾಲೇಜಿನಲ್ಲಿ ನನಗೆ ಕನ್ನಡ ಕಲಿಸಿಕೊಟ್ಟ ಪ್ರಿಯ ಪ್ರೊ.ವಿಜಯನಳಿನಿ ಮೇಡಮ್ಮು ಮುನ್ನುಡಿ ಬರೆದು ಹರಸಿದ್ದಾರಲ್ಲದೇ ಪುಸ್ತಕಕ್ಕೆ ಹೆಸರಿಟ್ಟವರೂ ಅವರೇ.&lt;br /&gt;ಅಪಾರ ಅವರು ಚೆಂದದ ಮುಖಪುಟ ರಚಿಸಿಕೊಟ್ಟಿದ್ದಾರೆ. ಮುಖಪುಟದಲ್ಲಿನ ಚಿತ್ರ ಶಾಂತಲಾ ಭಂಡಿ ಅಂದಾಗ ನಿಮಗೆ ಖಂಡಿತವಾಗಿ ನೆನಪಾಗುವ ಪುಟ್ಟಪಾಪುವಿನ ಪಾದಗಳು. ಈ ಚಿತ್ರ ಕೊಟ್ಟವರು ಮಂಜುನಾಥ್ ಭಟ್ (ಹಿತ್ತಲಮನೆ ಗಿರೀಶಣ್ಣ).&lt;br /&gt;ಬೆನ್ನುಡಿಯಲ್ಲಿ ನನ್ನ ಬೈದವರು ನನ್ನ ಪ್ರೀತಿಯ ಜೋಗಿ. ಇವರೆಲ್ಲರಿಗೂ ನನ್ನ ಅನಂತಾನಂತ ಧನ್ಯವಾದ.&lt;br /&gt;ಆರಂಭದಿಂದ ಪುಸ್ತಕ ಪ್ರಿಂಟಾಗುವತನಕದ ಜವಾಬ್ಧಾರಿ ಹೊತ್ತ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರಿಗೆ ವಂದನೆ. ಪ್ರಕಾಶಕರಿಗೆ ನಮಸ್ಕಾರ. ಪುಸ್ತಕ ಎಲ್ಲಿ ಸಿಗತ್ತೆ ಅನ್ನೋದು ನಂಗೂ ಸಹ ಗೊತ್ತಿಲ್ಲ. ಪುಸ್ತಕ ಸಿಗೋ ಜಾಗವನ್ನ ಹೇಳೋಕೆ ಮತ್ತೆ ನಿಮ್ಮ ಮುಂದೆ ಬರಲಿದ್ದೇನೆ. ಹರಸಿ ಹಾರೈಸ್ತೀರಲ್ಲ ನೀವೆಲ್ಲ ಅಷ್ಟು ಸಾಕು.&lt;br /&gt;&lt;br /&gt;ಪುಸ್ತಕ ಬಿಡುಗಡೆಯೆಲ್ಲಿ ಗೊತ್ತ? ನಿಮ್ಮ ನಿಮ್ಮ ಬೊಗಸೆಯಲ್ಲಿ. ನೀವೇ ನನ್ನೀ ಪುಸ್ತಕವನ್ನು ಬಿಡುಗಡೆಮಾಡುತ್ತೀರಿ. ಧನ್ಯವಾದ.&lt;br /&gt;&lt;br /&gt;ವಂದನೆಗಳೊಂದಿಗೆ,&lt;br /&gt;ಪ್ರೀತಿಯಿಂದ,&lt;br /&gt;-ಶಾಂತಲಾ ಭಂಡಿ&lt;br /&gt;&lt;br /&gt;&lt;a href="http://4.bp.blogspot.com/-1DecgMfWzZ0/TaU1vATohsI/AAAAAAAAA74/_5-nO5vgc2s/s1600/shantala_coverpage.jpg"&gt;&lt;img style="cursor:pointer; cursor:hand;width: 400px; height: 298px;" src="http://4.bp.blogspot.com/-1DecgMfWzZ0/TaU1vATohsI/AAAAAAAAA74/_5-nO5vgc2s/s400/shantala_coverpage.jpg" border="0" alt=""id="BLOGGER_PHOTO_ID_5594937193730180802" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-803502785445080013?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/803502785445080013/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=803502785445080013' title='28 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/803502785445080013'/><link rel='self' type='application/atom+xml' href='http://www.blogger.com/feeds/5495085842856428066/posts/default/803502785445080013'/><link rel='alternate' type='text/html' href='http://www.shantalabhandi.com/2011_04_01_archive.html#803502785445080013' title='ಬೊಗಸೆಯಲ್ಲಿ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-1DecgMfWzZ0/TaU1vATohsI/AAAAAAAAA74/_5-nO5vgc2s/s72-c/shantala_coverpage.jpg' height='72' width='72'/><thr:total>28</thr:total></entry><entry><id>tag:blogger.com,1999:blog-5495085842856428066.post-5276148402736690154</id><published>2011-04-06T11:21:00.000-07:00</published><updated>2011-04-06T11:26:55.992-07:00</updated><category scheme='http://www.blogger.com/atom/ns#' term='ಗಿಣಿ ಗುಬ್ಬಿ ಅಚ್ಚು ಮುದ್ದು ಮತ್ತು ಅಮ್ಮ.'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ನಾನೀಗ ಯಶೋಧೆ</title><content type='html'>ಜಾತ್ರೆಯ ಜನಪೂರ&lt;br /&gt;ಆಸ್ಪತ್ರೆಯ ಬಾಗಿಲಲ್ಲಿ&lt;br /&gt;ಒಬ್ಬೊಬ್ಬರಾಗಿ ಬಂದು&lt;br /&gt;ಬಿಳೀ ವಸ್ತ್ರದಲ್ಲಿ ಸುತ್ತಿಟ್ಟವನ&lt;br /&gt;ಕಂಡು ನಕ್ಕ ಹೊತ್ತು&lt;br /&gt;ನಿನ್ನೆಯಷ್ಟೇ ಅನ್ನಿಸುವಾಗಲೇ&lt;br /&gt;ಒಂಬತ್ತು ಯುಗಾದಿ ಕಳೆದಿದೆ&lt;br /&gt;&lt;br /&gt;ಥೇಟು ಅಪ್ಪನೇ&lt;br /&gt;ಅಲ್ಲಲ್ಲ ಅಜ್ಜ&lt;br /&gt;ಅಜ್ಜಿಯದೇ ಹೋಲಿಕೆ&lt;br /&gt;ಅಲ್ಲದಪ್ಪ ಅಪ್ಪಚ್ಚಿಯದು&lt;br /&gt;ಅಲ್ಲಿಯೇ ಹೊರಳಲಾಗದೇ ಮಲಗಿದ್ದ&lt;br /&gt;ನನ್ನ ಹೋಲಿಕೆ!&lt;br /&gt;ಇಲ್ಲದೆಯೂ ಇರಲಿಕ್ಕೆ ಸಾಕು&lt;br /&gt;ನವಮಾಸ ಭರ್ತಿ ಹೊತ್ತಿದ್ದಷ್ಟೇ&lt;br /&gt;ಭಾಗ್ಯ&lt;br /&gt;ಈ ಜನವೆಲ್ಲ ಸರಿದು ತೊಟ್ಟಿಲಲವನ &lt;br /&gt;ಮುಖವೊಮ್ಮೆ ಕಂಡಿದ್ದರೆ&lt;br /&gt;ಇದ್ದೀತು ನನ್ನ ಹೋಲಿಕೆ ಸ್ವಲ್ಪವಾದರೂ&lt;br /&gt;&lt;br /&gt;ಎಲ್ಲ ಅರ್ಥವಾದಂತೆ ಅತ್ತೆ ಹತ್ತಿರ ಬಂದು&lt;br /&gt;ಹಣೆಸವರಿ&lt;br /&gt;ನಿನ್ನದೇ ಹೋಲಿಕೆ&lt;br /&gt;ಗಲ್ಲ ತುಟಿಯೆಲ್ಲ ನಿನ್ನದೇ&lt;br /&gt;ಕಣ್ಣು ಹಣೆ ಅವರಪ್ಪನದು&lt;br /&gt;ಅಂದ ಮೇಲೆಯೇ&lt;br /&gt;ಸಮಾಧಾನದ ನಿದ್ರೆ&lt;br /&gt;&lt;br /&gt;ಎಚ್ಚರಾದಾಗ ನಾನು ನಾನಲ್ಲ&lt;br /&gt;ನಾನು ಯಶೋಧೆ&lt;br /&gt;ದೀಪ ಹಚ್ಚಿಟ್ಟು&lt;br /&gt;‘ಅನುದೀಪ...’ ಎಂದರೆ...&lt;br /&gt;&lt;br /&gt;ಅವನೆಲ್ಲಿ ಅವನೆಲ್ಲಿ&lt;br /&gt;ದೇವಕಿಯನರಸಿ ಹೋದನೇ&lt;br /&gt;ಇಲ್ಲಿದ್ದೇನೆ ಬಾರೋ&lt;br /&gt;ನಾನು ದೇವಕಿ&lt;br /&gt;ಸರಿಯಾಗಿ ನೋಡು ಕಂದಾ&lt;br /&gt;ಯಶೋಧೆಯೂ ನಾನೇ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-5276148402736690154?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/5276148402736690154/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=5276148402736690154' title='11 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/5276148402736690154'/><link rel='self' type='application/atom+xml' href='http://www.blogger.com/feeds/5495085842856428066/posts/default/5276148402736690154'/><link rel='alternate' type='text/html' href='http://www.shantalabhandi.com/2011_04_01_archive.html#5276148402736690154' title='ನಾನೀಗ ಯಶೋಧೆ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>11</thr:total></entry><entry><id>tag:blogger.com,1999:blog-5495085842856428066.post-2788972286834075201</id><published>2011-03-23T22:45:00.000-07:00</published><updated>2011-03-23T23:43:20.956-07:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಖುಷಿಯ ಕ್ಷಣ</title><content type='html'>ನಾನು ಬರುವತನಕ ಬ್ರಹ್ಮಕಮಲಕ್ಕೆ ಅರಳಿಕೊಂಡೇ ಇರೋಕೆ ಹೇಳು ಅಂತ ಹೇಳಿದ್ನಲ್ಲೇ, ನೀನು ನೋಡಿದ್ರೆ ಬ್ರಹ್ಮಕಮಲನ್ನ ಬಾಡಿಸಿಟ್ಟಿದೀಯ ಅಂದೆ. ಅದೂ... ಬಾಡಿದೆ, ಈ ಎಲೆ ತಿನ್ನಿ ನೀವು ಅಂತ ದೊಡ್ಡಪತ್ರೆ ಎಲೆ ಕೊಟ್ಟಳು.&lt;br /&gt;ಆವತ್ತು ಹಾಸ್ಟೆಲಿನ ಟೆರೆಸಿನಲ್ಲಿ ಜುಮುರು ಮಳೆ ಹೊಯ್ಯುತ್ತಿರೋದನ್ನೂ ಗಮನಿಸಿದೇ ಯೋಚಿಸ್ತಿದ್ದಾಗ ಮೆಸ್ಸಿನ ಆಂಟಿ ಮಗಳು ಮಾತಾಡಿದ್ದೂ ಸಹ ಹೀಗೆಯೇ ಅಲ್ವ ಅನ್ನಿಸಿತು. &lt;br /&gt;‘ಅಕ್ಕಾ... ಎಲೀ ಹೆಂಗ್ ಬೀಳ್ತಾವ್ ಹೇಳ್ರೀ ನೋಡೂಣು’ ಅಂದಿದ್ದಳು ಮೂರು ವರ್ಷದವಳು. ಪರೀಕ್ಷೆಯ ಎದುರಿಗೇ ಸಿಗಬಹುದಾದ ಬೃಹದ್ ದಿನಗಳ ಬಗ್ಗೆ ಯೋಚಿಸೋದು ಮರೆತಂತೆ ತಿರುಗಿ ‘ಎಲೆ ಹೇಗ್ ಬೀಳತ್ತೆ, ತೋರ್ಸು ನೀನು’ ಅಂದಿದ್ದೆ.&lt;br /&gt;‘ಹಿಂಗ್.... ಬೀಳ್ತಾವ್ ನೋಡ್ರೀ...’ ಅಂತ ಪುಟ್ಟ ಹಸ್ತಗಳೆರಡನ್ನೂ ಮುಂದೆ ಮಾಡಿ ಮೇಲಿಂದ ಕೆಳಾತನಕ ಪುಟ್ಟ ಹಸ್ತಗಳನ್ನ ತಿರುವಿ ಮುರುವಿ ತಿರುವೀ ಮುರುವೀ ಎಲೆಗಳು ಮರದಿಂದ ಉದುರೋ ಅಂದವನ್ನ ತೋರಿಸಿದ್ದಳು. ಅಂಥ ಮಳೆಯ ಹೊತ್ತಿಗೆ ನಾನೊಬ್ಬಳೇ ಹೀಗೆ ಟೆರೆಸಿನಲ್ಲಿ ನಿಂತಿರಲಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿ ಓಡಿಹೋಗಿದ್ದಳು.&lt;br /&gt;ಅಂಥದೇ ಗರಿಗರಿ ಖುಷಿ, ದೊಡ್ಡಪತ್ರೆಯ ಘಮ. ‘ನಂಗೆ ದೊಡ್ದಪತ್ರೆ ಇಷ್ಟ’ ಅಂದೆ. ನಂಗೂ ಅಂದಳು. ನಾನು ಅಗಿದಗಿದು ನುಂಗಿದೆ. ಅವಳೂ.&lt;br /&gt; &lt;br /&gt;ಗೊಂಬೆಯಾಟವ ಮುಂದುವರೆಸಿದಳು. ಮಗುವಿನ ಹೆಸರೇನು ಅಂತ ಕೇಳಿದೆ. ಅದಕ್ಕಿನ್ನೂ ಹೆಸರಿಟ್ಟಿಲ್ಲ ಅಂದಳು. ಸರಿ ಹಾಗಾದರೆ ನಾವಿಬ್ಬರೂ ಸೇರಿ ಇವತ್ತು ಮಗುವಿಗೆ ಹೆಸರಿಡೋಣ ಅಂದೆ. &lt;br /&gt;ಕೈಯಲ್ಲಿರುವ ಕೂಸು ಗಂಡೋ ಹೆಣ್ಣೋ ಕೇಳಿದೆ. ಗಂಡೆಂದಳು ಹೆಮ್ಮೆಯಿಂದ. ಸಣ್ಣಗೆ ಹೇಳು ಸ್ತ್ರೀವಾದಿಗಳು ನಮ್ಮಿಬ್ಬರನ್ನೂ ಹಿಡಿದು ನಿಲ್ಲಿಸಿಯಾರು ಅಂದೆ. ಹಾಗೆಂದರೇನೆಂಬಂತೆ ನನ್ನನ್ನೇ ನೋಡಿದಳು. ಮಗು ಹೆಣ್ಣಾದರೆ ಖುಷಿ. ಗಂಡಾದರೆ! ದುಃಖ ಅಂತ ಹೆಸರಿಟ್ಟರೂ ಸಾಕು ಬಿಡು ಅಂದೆ.&lt;br /&gt;&lt;br /&gt;ನನ್ನನ್ನೇ ನೋಡಿದಳು. ಏನೋ ಗೊತ್ತಾದಂತೆ ಮುಗುಳ್ನಕ್ಕು ದುಃಖ ಅಂದ್ರೆ ಬೇಜಾರು ಅಂತ. ಹಾಗೆ ಹೆಸರಿಡೋದು ಬೇಡ ಮಗೂಗೆ ಅಂದಳು ನಿಘಂಟನ್ನು ತಾನೂ ಓದಿದವಳಂತೆ. ಮತ್ತೆ ಖುಷಿಯಾದಳು. ನಾನೂ ಖುಷಿಯಾದೆ.&lt;br /&gt;ಇವತ್ತು ಮಗೂಗೆ ತಲೆಸ್ನಾನ ಬೇಡ, ನೆಗಡಿಯಾಗಿದೆ ಅಂದಳು. ಸರಿಯೆಂದೆ. ಸ್ನಾನ ಮಾಡಿಸಿದಳು ಮಗುವಿಗೆ. ನಾನು ಮಗುವಿನ ಮೈಯೊರೆಸಿ ಗೊಬ್ಬೆ ಕಟ್ಟಿದೆ. ಕುಳಿತಿದ್ದ ಕುರ್ಚಿ ತಾನಾಗಿಯೇ ತಿರುಗಿತು. ಗೋಡೆಯ ಮೇಲೆ ವೈಯನ್ಕೆ ನಮ್ಮಿಬ್ಬರನ್ನೂ ನೋಡಿ ನಕ್ಕಂತೆ ಭಾಸವಾಯಿತು. ಇಷ್ಟೂ ಹೊತ್ತು ನಾನು ಎಲ್ಲಿ ಕುಳಿತಿದ್ದೆ ಅಂತ ಯೋಚಿಸುವ ಮುನ್ನ ನಿಧಾನಕ್ಕೆ ಎದ್ದೆ.&lt;br /&gt;ಮಗು ಅಳ್ತಿದೆ ಅಂದಳು. ನಿಜ, ಮಗು ಅಳ್ತಿರಬೇಕು, ನನ್ನಾಲೋಚನೆಗಳು ಸದ್ದು ಮಾಡಿ ಮಲಗಿದ್ದ ಮಗುವನ್ನು ಏಳಿಸಿರಬೇಕು. ತಟ್ಟಿ ಮಲಗಿಸು ಅಂದೆ. ತಟ್ಟಿದಳು, ಮಗು ಮಲಗಿತು.  ಖುಷಿಯಾದೆವು. ಖುಷಿಯೊಂದೇ ಅಲ್ಲ, ಖುಷಿ ಖುಷಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-2788972286834075201?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/2788972286834075201/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=2788972286834075201' title='11 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/2788972286834075201'/><link rel='self' type='application/atom+xml' href='http://www.blogger.com/feeds/5495085842856428066/posts/default/2788972286834075201'/><link rel='alternate' type='text/html' href='http://www.shantalabhandi.com/2011_03_01_archive.html#2788972286834075201' title='ಖುಷಿಯ ಕ್ಷಣ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>11</thr:total></entry><entry><id>tag:blogger.com,1999:blog-5495085842856428066.post-5781896724287887057</id><published>2011-03-03T22:17:00.000-08:00</published><updated>2011-03-03T23:22:35.985-08:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category scheme='http://www.blogger.com/atom/ns#' term='ಗಿಣಿ ಗುಬ್ಬಿ ಅಚ್ಚು ಮುದ್ದು ಮತ್ತು ಅಮ್ಮ.'/><category scheme='http://www.blogger.com/atom/ns#' term='ನಗಬೇಡ'/><title type='text'>Flipkart ಮತ್ತು ಪುರ್ಯೋತ ಭಟ್ರು</title><content type='html'>ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದ್ದೆ. ಆರ್ಡರ್ ಮಾಡಿದವಳು ಅಮ್ಮಂಗೆ ಫೋನಾಯಿಸಿ ‘ಅಮ್ಮಾ... ಹಿಂಗೆ ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದೀನಿ, ಮೂರ್ನಾಲ್ಕು ದಿನದಲ್ಲಿ ಕೊರಿಯರಿನವರು ನಿಂಗೆ ಕಾಲ್ ಮಾಡ್ಬಹುದು ಪುಸ್ತಕ ಬಂದಿದೆ ಅಂತ’ ಎಂಬುದಾಗಿ ಅಮ್ಮನಿಗೆ ಹೇಳಿಟ್ಟಿದ್ದೆ. ಸರಿಯಾಗಿ ಮೂರು ದಿನದೊಳಗೆ ಪುಸ್ತಕಗಳು ಬಂದಿವೆ ಅಂತ ಕೊರಿಯರಿನವರು ಅಮ್ಮಂಗೆ ಕಾಲ್ ಮಾಡಿದ್ರಂತೆ.&lt;br /&gt;ಮತ್ತೆ ಅಮ್ಮಂಗೆ ಫೋನು ಮಾಡಿದಾಗ ಪುಸ್ತಕಗಳು ಮನೇಲಿದ್ವು. ಅಮ್ಮ ಸುಮಾರು ಬಿಜಿ ಇದ್ರು. ನಾನೇ ಆರ್ಡರ್ ಮಾಡಿದ ಪುಸ್ತಕಗಳಾಗಿದ್ರಿಂದ ಯಾವ್ಯಾವ ಪುಸ್ತಕಗಳು ಅಂತ ಗೊತ್ತಿದ್ರೂ ಎಲ್ಲಾನೂ ಬಂದಿದೆಯೋ ಇಲ್ಲವೋ  ಅನ್ನೋ ಆಸಕ್ತಿಯೋ ಕಾಳಜಿಯೋ ಗೊತ್ತಿಲ್ಲ. ಫೋನಿನಲ್ಲಿ ಅಮ್ಮನ್ನ ಕೇಳಿದೆ ‘ಯಾವ್ಯಾವ ಪುಸ್ತಕ ಬಂದಿದೆ ಅಮ್ಮ? ಅಂತ.&lt;br /&gt;&lt;br /&gt;ಕೇಳಿದ್ದೇ ತಡ ಅವಸರದಲ್ಲಿದ್ದ ಅಮ್ಮ ‘ಒಂದು ಸಿಡಿನೂ ಇದ್ದು ಮಗಾ, ಯಾರು ಹಾಡಿದ್ದಿದು?’ ಅಂದರು ಅಮ್ಮ. &lt;br /&gt;ಪುಸ್ತಕದ ಗುಂಗಿನಲ್ಲೇ ಇದ್ದ ನಾನು ‘ಎಂತ ಸಿಡಿ?’ ಅಂತ ಕೇಳಿದೆ. ಅಮ್ಮ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಅಂತಿದ್ಯಪ್ಪ ಅಂದ್ರು. ಅಮ್ಮ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕವನ್ನ ಓದಿದಾರೆ. ಆದ್ರೆ ಕೆಲಸದ ಗಡಿಬಿಡಿಯಲ್ಲಿ ಆ ಹೆಸರು ನೋಡಿದಮೇಲೂ ಆ ಸಿಡಿ ಹಾಡಿನದಲ್ಲ ಅನ್ನೋ ನೆನಪು ಅಮ್ಮನಿಗೆ ಬಂದಿರಲಿಕ್ಕಿಲ್ಲ ಪಾಪ, ಅಮ್ಮ ಮತ್ತೆ ಕೇಳಿದ್ರು ‘ಯಾರು ಹಾಡಿದ್ದಿದು ಮಗಾ?’ ಅಂತ.&lt;br /&gt;‘ಅಮ್ಮಾ... ಅದು ಹಾಡಿಂದಲ್ಲ,   ಪ್ರಬಂಧಗಳದ್ದು ಸಿಡಿ, ವಸುಧೇಂದ್ರ ಅವರದ್ದು, ಸರ್ಯಾಗಿ ಓದಿ ನೋಡು, ಗೊತ್ತಾಗ್ತು,’ ಅಂದೆ. &lt;br /&gt;‘ಅಯ್ಯೋ ಹೌದಲ ಮಗ! ಎಂತಾರೂ ಕೆಲಸ ಮಾಡ್ಕ್ಯೋತನಾರೂ ಕೇಳಲ್ಬರ್ತು, ಎಷ್ಟು ಚೊಲೋ ಇದ್ದಲೇ ಈ ಉಪಾಯ’ ಅಂತೆಲ್ಲ ಖುಷಿಪಟ್ಟರು.&lt;br /&gt;&lt;br /&gt;ಅದೇ ಹೊತ್ತಿಗೆ ತರಕಾರಿ ಮಾರೋ ಅಜ್ಜಿನೂ ಅಲ್ಲೇ ಇದ್ರು. ಅಮ್ಮ ಅಲ್ಲಿಯೇ ತರಕಾರಿ ಅಜ್ಜಿಯ ಹತ್ತಿರ ತರಕಾರಿ ಕೊಳ್ತಲೇ ನನ್ನ ಜೊತೆಯೂ ಮಾತನಾಡುತ್ತ ಇದ್ದ ಕಾರಣ ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿಕೊಂಡಿದ್ದರು. ನಮ್ಮ ಸಂಭಾಷಣೆ ತರಕಾರಿ ಅಜ್ಜಿಗೆ ಅರ್ಧಂಬರ್ಧ ಗೊತ್ತಾಗ್ತಾ ಇತ್ತು ಅನ್ಸತ್ತೆ,ತಮ್ಮದೇ ಆದ ಆಲೋಚನೆಗಳನ್ನ ಗೊಣಗೋಕೆ ಶುರುಮಾಡಿದ್ರು. ಈಗ ಅವರ ಮಾತು ಕೇಳೋ ಸರದಿ ನಂದೂ ಮತ್ತು ಅಮ್ಮನದೂ ಆಯ್ತು. &lt;br /&gt;&lt;br /&gt;‘ಈಗಿನ್ ಕಾಲದಲ್ಲಿ ಎಂತೆಂತ ಬತ್ತೈತ, ಎಂತೆಂತ ಹೋಗ್ತೈತ, ಆ ಶಿವನೇ ಬಲ್ಲ. ಹಾಡು, ಗೀಡು, ಕತೆ,ಪತೆದೆಲ್ಲ ಶಿಡಿ ಬಂದೈತಿ ಅಂದ್ರೆ ಏನ್ ಅನ್ಸಂಗಿಲ್ರಿ. ಪೂಜೆದೂ ಬತ್ತೈತಿ. ಮನ್ನೆ ನಮ್ ಶಣ್ ಹುಡುಗನ್ ಮನ್ಯಾಗೆ ಸತ್ತಗಣಪತಿ ಕತಿಯಾತು. ಅದಕ್ಕೇ ನಿಮ್ ಶಣ್ಣಮ್ಮ ಹೇಳ್ದಂಗೆ  ಶೀಡಿನೇ ಹಾಕಿದ್ರು ಪೂಜಿಗೆ. ಮಂತ್ರ ಹೇಳ್ತೈತಿ, ಪೂಜಿ ಹೆಂಗ್ ಮಾಡ್ಬಕೂ ಹೇಳೂ ಹೇಳ್ತೈತಿ. ಆದ್ರೂ ಪುರ್ಯೋತ್ ಭಟ್ರು ಬಂದು ಪೂಜಿ ಮಾಡ್ದಂಗಾಗ್ಲುಲ್ಲ ಬಿಡ್ರಿ’ ಅಂತ ಗೊಣಗಿದ್ರು. &lt;br /&gt;&lt;br /&gt;‘ಹಂಗಲ್ಲೇ... ಕಾರು ಗೀರು ಓಡುಸ್ತಾರಲೇ ಆವಾಗೆಲ್ಲ ಈ ಸಿಡಿ ಹಾಕ್ಯಂಡು ಕತೆ ಕೇಳಕ್ಕೆ ಚೊಲೋ ಆಗ್ತದಲೇ ಈಗಿನ ಮಕ್ಕಳಿಗೆ, ಓದಕ್ಕೆ ಹೊತ್ತು ಎಲ್ಲಿರ್ತದೆ ಆಫೀಸಿಗ್ ಹೋಗೋವ್ರಿಗೆಲ್ಲ, ಅದಕ್ಕೆ ಕತೆನ ಇದ್ರಲ್ಲಿ ಓದಿಟ್ಟಿದ್ದನ್ನ ಕೇಳ್ತಾರೆ’ ಅಂತೆಲ್ಲ ಅಮ್ಮ ತರಕಾರಿ ಅಜ್ಜಿನ್ನ ಸಮಜಾಯಿಷಿ ಮಾಡೋಕೆ ನೋಡಿದ್ರೂ ಅವ್ರು ತಮ್ಮ ಮಗನ ಮನೆಲ್ಲಿ ಪುರೋಹಿತರಿಲ್ಲದೆ ಬರೇ ಸಿಡಿಯಲ್ಲಿ ಪೂಜೆ ಮುಗಿಸಿದ್ದರ ಬಗ್ಗೆ ಅಲವತ್ತುಕೊಳ್ತಲೇ ಇದ್ರು .&lt;br /&gt;&lt;br /&gt;‘ ಶೀಡಿನೇ ಹಾಕಿದ್ರು ಪೂಜಿಗೆ. ಮಂತ್ರ ಹೇಳ್ತೈತಿ, ಪೂಜಿ ಹೆಂಗ್ ಮಾಡ್ಬೇಕೂ ಹೇಳೂ ಹೇಳ್ತೈತಿ. ಹಿಂಗೆಲ್ಲ ಆಗಿ ಪುರ್ಯೋತ ಭಟ್ರುನ್ನ ಮೂಶಿ ನೋಡವ್ರು ಇಲ್ದಂಗಾಗೈತಿ ಈಗ. ನೋಡಕ್ ಮಾತ್ರ ಏನೂ ಕಾಣ್ಸದಿಲ್ ಬಿಡ್ರಿ, ಹೊಸಾ ಅಲಿಮಿನಿ ಬಟ್ಲು ಹೊಳದಂಗ್ ಹೊಳಿತೈತಿ. ಪೂಜಿಗ್ ಭಟ್ರು ಬಂದಂಗ್ ಆಗ್ಲಿಲ್ಲ್ ಬಿಡ್ರಿ. ಮಿಸನ್ ಮಂತ್ರ ಹೇಳ್ತೈತಿ, ಪ್ರಸಾದ ಕೊಡ್ತೈತೇನ್ರೀ ಅಮಾ? ಬಗ್ಗಿ ಭಟ್ರ ಪಾದ ಮುಟ್ಟಿದ್ ಪುಣ್ಣೆ ಬತ್ತೈತ ಮಿಸನ್ನಾಗೆ?’ ಅಂತ ತರಕಾರಿ ತೂಗೋದು ಮರ್ತು ಹೇಳ್ತಾ ಇದ್ರು. &lt;br /&gt;&lt;br /&gt;ನಂಗೇನೂ ಮಾತಾಡೋಕೆ ಗೊತ್ತಾಗದೇ ‘ನಾನು ಆಮೇಲೆ ಫೋನು ಮಾಡ್ತೀನಿ’ ಅಂತ ಅಮ್ಮನಿಗೆ ಹೇಳಿ ಫೋನಿಟ್ಟೆ. ಈವತ್ತು ಮತ್ತೆ ಫೋನಾಯಿಸಿದಾಗ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಸಿಡಿಯ ಬಗ್ಗೆ, ಜೊತೆಗೆ ಬಂದ ಪುಸ್ತಕಗಳ ಬಗ್ಗೆ ಮತ್ತೆ ಪ್ರಸ್ತಾಪ ಬಂದಾಗ ನೆನಪಾದ ಮೇಲಿನ ಘಳಿಗೆಯನ್ನು ನಿಮ್ಮ ಮುಂದೆ ಗಳಿಗೆ ಮುರಿದಿಟ್ಟೆ.&lt;br /&gt;&lt;br /&gt;*****&lt;br /&gt;ಶಬ್ದಾರ್ಥ&lt;br /&gt;&lt;br /&gt;ಪುರ್ಯೋತ ಭಟ್ರು = ಪುರೋಹಿತರು&lt;br /&gt;ಶೀಡಿ = ಸಿಡಿ&lt;br /&gt;ಅಲುಮಿನಿ = ಅಲ್ಯುಮಿನಿಯಂ&lt;br /&gt;ಮಿಸನ್ = ಮಷಿನ್&lt;br /&gt;ಪುಣ್ಣೆ = ಪುಣ್ಯ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-5781896724287887057?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/5781896724287887057/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=5781896724287887057' title='12 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/5781896724287887057'/><link rel='self' type='application/atom+xml' href='http://www.blogger.com/feeds/5495085842856428066/posts/default/5781896724287887057'/><link rel='alternate' type='text/html' href='http://www.shantalabhandi.com/2011_03_01_archive.html#5781896724287887057' title='Flipkart ಮತ್ತು ಪುರ್ಯೋತ ಭಟ್ರು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>12</thr:total></entry><entry><id>tag:blogger.com,1999:blog-5495085842856428066.post-5965375786347783434</id><published>2011-02-18T10:12:00.000-08:00</published><updated>2011-02-18T10:30:43.230-08:00</updated><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>‘ಹೊಂದಿಸಿ ಬರೆಯಿರಿ’</title><content type='html'>ಹೊಂದಿಸಿ ಬರೆದರೀಗ ಮುಗಿಯುತ್ತದೆ ಪರೀಕ್ಷೆ&lt;br /&gt;ನೂರಕ್ಕೆ ನೂರು ಮಾರ್ಕ್ಸು&lt;br /&gt;ತೆಗೆಯದೇ ಹೋದ ಪಕ್ಷ&lt;br /&gt;ಅಪ್ಪನಿಗೆ ಬೇಜಾರು &lt;br /&gt;ಅಮ್ಮ ನೊಂದುಕೊಳ್ಳುತ್ತಾಳೆ&lt;br /&gt;ನಿದ್ರಿಸುವುದಿಲ್ಲ ರಾತ್ರಿಯಿಡೀ&lt;br /&gt;&lt;br /&gt;ಹತ್ತುನಿಮಿಷವಿದೆ ಬಾಕಿ&lt;br /&gt;ಬರೇ ಹತ್ತು ನಿಮಿಷ&lt;br /&gt;ಹೊಂದಿಸಿ ಬರೆಯಬೇಕು&lt;br /&gt;‘ಅ’ ಪಟ್ಟಿಯದನ್ನು ‘ಬಿ’ಪಟ್ಟಿಗೆ&lt;br /&gt;&lt;br /&gt;ಒಂದೇ ಪಟ್ಟಿಗೆ ಬರೆಯಲಾಗುತ್ತಿಲ್ಲ&lt;br /&gt;ತೆಗೆಯದಿದ್ದರೆ ನೂರಕ್ಕೆ ನೂರು&lt;br /&gt;ಹೊರಟುಹೋಗುತ್ತದೆ &lt;br /&gt;ನನ್ನ ಮೇಲಿನ ನಂಬುಗೆ ಆಗ ಮಾಸ್ತರರಿಗೂ&lt;br /&gt;&lt;br /&gt;ಅಪ್ಪನಿಗೆ ಬೇಜಾರು&lt;br /&gt;ಅಮ್ಮ ನೊಂದುಕೊಳ್ಳುತ್ತಾಳೆ&lt;br /&gt;‘ಹೊಂದಿಸಿ ಬರೆಯುವುದು ಗೊತ್ತಲ್ಲವ ಪುಟ್ಟಾ?’&lt;br /&gt; ಅಪ್ಪ ಗದರುತ್ತಾರೆ&lt;br /&gt;ಕಣ್ಣು ದೊಡ್ಡದು ಮಾಡಿ&lt;br /&gt;‘ಹೊಂದಿಕೊಳ್ಳುವುದೇ ಗೊತ್ತಿಲ್ಲದೇ&lt;br /&gt;ಹೊಂದಿಸುತ್ತಾಳೆ ಹೇಗೆ?’&lt;br /&gt;ಅಮ್ಮ ನೊಂದುಕೊಳ್ಳುತ್ತಾರೆ&lt;br /&gt;&lt;br /&gt;ಹತ್ತೇ ನಿಮಿಷ ಬಾಕಿಯಿದೆ&lt;br /&gt;‘ಅ’ ಪಟ್ಟಿಯದೀಗ ‘ಬಿ’ ಪಟ್ಟಿಗೆ&lt;br /&gt;ಹೊಂದಿಕೆಯಾಗುತ್ತಲೇ ಇಲ್ಲ&lt;br /&gt;ಆದರೂ ಹೊಂದಿಸಿ ಬರೆಯಲೇಬೇಕೀಗ&lt;br /&gt;ನೂರಕ್ಕೆ ನೂರು ಬೇಕೆಂದರೆ&lt;br /&gt;&lt;br /&gt;ಹೇಗಾದರೂ ಹೊಂದಿಸಬೇಕು&lt;br /&gt;ಸರಿ ತಪ್ಪನ್ನು ಪರಿಶೀಲಕರು ನೋಡಿಕೊಳ್ಳುತ್ತಾರೆ&lt;br /&gt;ಮಾರ್ಕ್ಸ್ ಕಾರ್ಡು ಅಮ್ಮ ಓದುತ್ತಾರೆ&lt;br /&gt;ನೂರಕ್ಕೆ ನೂರಿದ್ದರೆ ಅಪ್ಪ ಸಹಿ ಹಾಕುತ್ತಾರೆ&lt;br /&gt;ನಾನು ಹೊಂದಿಸಬೇಕು&lt;br /&gt;&lt;br /&gt;ಹತ್ತೇ ನಿಮಿಷ ಬಾಕಿಯಿದೆ&lt;br /&gt;ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು&lt;br /&gt;ಓದುತ್ತಿದ್ದಾರೆ ದೊಡ್ಡದಾಗಿ ‘ಅನೌನ್ಸುಮೆಂಟು’&lt;br /&gt;ಕೊನೆಯ ಮುಖ್ಯಪ್ರಷ್ನೆಯ ‘ಹೊಂದಿಸಿ ಬರೆಯಿರಿ’&lt;br /&gt;ನೀವು ಬರೆಯಬೇಕಿಲ್ಲ&lt;br /&gt;ತಪ್ಪು ಪ್ರಕಟವಾಗಿದೆ ಪ್ರಷ್ನೆ&lt;br /&gt;ಕೊಡುತ್ತಾರೆ ನಿಮಗೆ &lt;br /&gt;ಬರೆಯದಿದ್ದರೂ ಆ ಪ್ರಷ್ನೆಗೆ &lt;br /&gt;ಪೂರ್ತಿಗೆ ಪೂರ್ತಿ ಮಾರ್ಕ್ಸು!&lt;br /&gt;&lt;br /&gt;ನೂರಕ್ಕೆ ನೂರಾದರೆ ಮಾರ್ಕ್ಸು&lt;br /&gt;ಅಮ್ಮ ಗೆಲುವಾಗುತ್ತಾರೆ&lt;br /&gt;ಅಪ್ಪ ಗೆಲ್ಲುತ್ತಾರೆ&lt;br /&gt;ಮತ್ತೆ ನಾನು ಲೈಬ್ರರಿಗೆ ಹೋಗಿ &lt;br /&gt;ದಪ್ಪ ಪುಸ್ತಕಗಳನ್ನು ಓದುತ್ತಿದ್ದಂತೆಯೇ &lt;br /&gt;ದಿನ ಬೆಳಗಿನ ಕನಸು&lt;br /&gt;ದಿನವಿಡಿಯ ವಾಸ್ತವ&lt;br /&gt;&lt;br /&gt;ಆದರೂ ಕೆಲವೊಮ್ಮೆ ಕನಸು&lt;br /&gt;ಬೆಚ್ಚಿಬೀಳುತ್ತೇನೆ&lt;br /&gt;ನೂರಕ್ಕೆ ಒಂದೇ ಒಂದು ಮಾರ್ಕ್ಸು ಕಮ್ಮಿ&lt;br /&gt;ಬರೇ ತೊಂಬತ್ತೊಂಬತ್ತು&lt;br /&gt;ಅಪ್ಪನ ಕಣ್ಣು ಕೆಂಪು ಕೆಂಪು&lt;br /&gt;ಕಾರಣ ಅಮ್ಮನಿಗೂ ಗೊತ್ತು&lt;br /&gt;ನನ್ನ ಕಣ್ಣೂ ಕೆಂಪೂ&lt;br /&gt;ಅತ್ತೂ ಅತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-5965375786347783434?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/5965375786347783434/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=5965375786347783434' title='13 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/5965375786347783434'/><link rel='self' type='application/atom+xml' href='http://www.blogger.com/feeds/5495085842856428066/posts/default/5965375786347783434'/><link rel='alternate' type='text/html' href='http://www.shantalabhandi.com/2011_02_01_archive.html#5965375786347783434' title='‘ಹೊಂದಿಸಿ ಬರೆಯಿರಿ’'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>13</thr:total></entry><entry><id>tag:blogger.com,1999:blog-5495085842856428066.post-4344837808717327588</id><published>2011-02-10T12:58:00.000-08:00</published><updated>2011-02-12T13:47:20.506-08:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ಊರ ಬಾಗಿಲಿಂದ ಹಂಗೇ ಕೆರೆ ಏರಿ ಮೇಲೆ...</title><content type='html'>ನೋಡು ಹಿಂಗೇ ನಡೀತಾ ನಡೀತಾ ಸಾಗ್ತೀವಲ್ಲ ಹಂಗೇ ಜೀವನ. ಎಷ್ಟು ಬೇಗ ಇಲ್ಲಿತನಕ ತಲುಪಿದ್ವಿ. ಇನ್ನೊಂಚೂರು ನಡಿ ಸಾಕು,  ಮನೆ ಬಂದು ಬಿಡತ್ತೆ. &lt;br /&gt;ಯೋಚ್ನೆ ಮಾಡಿದ್ರೆ ನಗುಬರತ್ತೆ, ಒಂದೊಂದ್ಸಲ ಬೇಜಾರಾಗತ್ತೆ. ಹಳೇದನ್ನೇ ಯೋಚ್ನೆ ಮಾಡಿದ್ರೂ ಸಾಕು, ಎಷ್ಟೆಲ್ಲ ಅರ್ಥ ಸಿಗತ್ತೆ  ಆ ಹಳೇ ಮಾತಿಗೆ.&lt;br /&gt;ನಂಗಿನ್ನೂ ನೆನಪಿದೆ, ಯಾವುದೂ ಮರೆಯೋದೇ ಇಲ್ಲ. ಅಲ್ಲಿ ಪಣತದ ಮನೆ ಹತ್ರ ಬಾಗಿಲು ಇತ್ತಲ್ಲ, ಹಂಗೇ ಎರಡೇ ಎರಡು ಹೆಜ್ಜೆಗೆ  ಕೊಟ್ಟಿಗೆ ಮೆಟ್ಟಿಲು. ನಾನಾಗ ಏಳನೇ ಕ್ಲಾಸು ಅನ್ಸತ್ತೆ. ಎಷ್ಟು ಖುಷಿಯಾಗಿ ಆಡ್ಕೊಂಡು, ಬರ್ಕೊಂಡು, ತಿಂದ್ಕೊಂಡು, ಚಂದಮಾಮ, ಬಾಲಮಂಗಳ ಓದ್ಕೋಂಡು  ಹಾಯಾಗಿದ್ವಿ. ಶನಿವಾರ ಮಧ್ಯಾಹ್ನ ಇರ್ಬೇಕು, ಸ್ಕೂಲಿನ ಹೋಮವರ್ಕು ಗೀಮ್ ವರ್ಕೆಲ್ಲ ಮುಗಿಸ್ಕೊಂಡು ಅಲ್ಲೆಲ್ಲೋ ಬುಟ್ಟೀಲಿ  ಒಣಗೋಗಿದ್ದ ಜೇಡಿಮಣ್ಣು ನೆನ್ಪಾಗಿ ಅಜ್ಜಿ ಹತ್ರ ಹಠ ಮಾಡಿ ಅದನ್ನ ತೆಗಿಸಿಟ್ಕೊಂಡು ನೀರು ಹಾಕಿ ಮೆತ್ತಗೆ ಮಾಡಿ ಎರಡೂ  ಕೈಯಿಂದ ಕಲ್ದೂ ಕಲ್ದೂ ಹದ ಮಾಡೋಷ್ಟರಲ್ಲಿ ಹದಾ ಹೊತ್ತಿಗೆ ನೀ ಬಂದಿದ್ದೆ. ನಿಂಗೆ ನೆನಪಿರ್ಲಿಕ್ಕಿಲ್ಲ, ನಂಗೆ ನೆನಪಿದೆ. &lt;br /&gt;&lt;br /&gt;ಓದೋದ್ರಲ್ಲಿ ಸಿಕ್ಕಾಪಟ್ಟೆ ಹುಷಾರು ನೀನು. ನಾನು ಏಳನೇ ಕ್ಲಾಸು ಓದ್ತಿದ್ದೆ ಅನ್ಸತ್ತೆ, ನೀನಾವಾಗ ಎರಡನೇ ಕ್ಲಾಸು ಇದ್ದಿರ್ಬಹುದು. ಎಲ್ಲಿದ್ರೂ ಆಡೋಕೆ ಅಂತ ನೀನು ನನ್ನ ಹುಡ್ಕೊಂಡು ಬರ್ತಿದ್ದೆ. ನಾನು ನಿನ್ನ ಹುಡ್ಕೊಂಡು ಬರ್ತಿದ್ದೆ, ಆದ್ರೆ ನಿನ್ನನ್ನೇ ಹುಡ್ಕೊಂಡು ಬಂದೆ ಅನ್ನೋದನ್ನ ನಾನು ಹೇಳ್ತಿರಲಿಲ್ಲ, ನಿಂಗೇ ನಿಂಗಾಗಿ ಅದು ಅರ್ಥ ಆಗ್ತಿರಲಿಲ್ಲ. ಮಣ್ಣಿಂದ ಒಲೆ ಮಾಡಿದ್ವಿ. ಪಾತ್ರೆ ಮಾಡಿದ್ವಿ. ‘ಅಕ್ಕಾ... ಅಡುಗೆ ನೀನ್ ಮಾಡು, ನಾನು ಅಂಗಡಿಗೆ ಹೋಗಿ ಸಾಮಾನು ತರ್ತೀನಿ’ ಅಂದೆ. ಅಂಗಡಿಗೆ ಸಾಮಾನು ತರೋಕೆ ಅಂತ ಹೋದೋನು ವಾಪಸ್ಸು ಬರ್ದೇ ಹೋದ್ರೆ ಈ ಹೊತ್ತಿನ ಆಟ ಅರ್ಧಕ್ಕೇ ನಿಂತು ಹೋಗತ್ತಲ್ಲ ಅನ್ನೋ ಯೋಚ್ನೆ ಬಂದು ‘ಬೇಡ, ಈವತ್ತಿದರಲ್ಲಿ ಅಡುಗೆ ಮಾಡೋಕೆ ಆಗಲ್ಲ, ಇದಿನ್ನೂ ಹಸೀದು, ಒಲೆನೂ ಹಸಿದೇ, ಪಾತ್ರೆನೂ ಹಸೀದು. ಇದ್ರಲ್ಲಿ ಏನಾರ ತುಂಬಿದ್ರೆ ಹಂಗೇ ಅಂಟಿಕೊಂಡುಬಿಡತ್ತೆ’ ಅಂದೆ ನಾನು. ನಿಂಗೂ ಹೌದು ಅಂತ ಅನ್ನಿಸೋ ಹೊತ್ತಿಗೆ  ಅನ್ನ ಮಾಡೋಕೆ ಅಂತ ನಾನು ಮಾಡಿಟ್ಟ ಪಾತ್ರೇನ ನೀನು ಹಿಡಕೊಂಡು ನೈಸು ಮಾಡ್ತಾ ಇದ್ದೆ. ಹಂಗೇ ನೀನು ಯಾವ್ದೋ ಯೋಚ್ನೆಲ್ಲಿ ಒಂದು ಮಾತು ಹೇಳ್ದೆ ಸಣ್ಣಗೆ ಉಸಿರಂತೆ ಬಂದಂಥ ಧ್ವನೀಲಿ. ‘ನಮ್ಮಮ್ಮ ನಿನ್ನೆ ಏನು ಹೇಳಿದ್ರು ಗೊತ್ತಾ? ಅಮ್ಮಂಗೆ ಬೇಜಾರಂತೆ, ನನ್ನನ್ನೂ  ಬಾವಿಗೆ ನೂಕಿ, ಅವಳೂ ಬಾವಿಗೇ ಇಳಿದುಬಿಡ್ತಾಳಂತೆ, ನಂಗೆ ಹೆದ್ರಿಕೆ ಅಕ್ಕ, ನಂಗೆ ಬಾವಿಗೆ ಬೀಳೋಕೆ ಇಷ್ಟ ಇಲ್ಲ.’&lt;br /&gt;&lt;br /&gt;ಅಜ್ಜಿ ಅಷ್ಟ್ರಲ್ಲಿ ನನ್ನ ಊಟಕ್ಕೆ ಕರದ್ರು, ಊಟದ ಹೊತ್ತಲ್ಲಿ ಇಬ್ರೂ ಜೊತೇಲಿದ್ರೆ ನಿಮ್ಮನೆಯಾದ್ರೂ ಸರಿ, ನಮ್ಮನೆಯಾದ್ರೂ ಸರಿ ಒಟ್ಟಿಗೇ ಊಟಮಾಡ್ತಿದ್ವಿ ನೆನಪಿದೆಯ? ಆವತ್ತು ನಾನಿನ್ನ ಊಟಕ್ಕೆ ಕರೀಲಿಲ್ಲ. ‘ನಾನು ಊಟಮಾಡ್ಕೊಂಡು ಬರ್ತೀನಿ, ಸಂಜೆಗೆ ಆಡೋಣ, ಅಷ್ಟ್ರಲ್ಲಿ ಈ ಮಣ್ಣಿನ್ ಪಾತ್ರೆ ಎಲ್ಲ ಒಣಗಿರತ್ತೆ,’ ಅಂತ ಹೇಳಿ ಹೊರಟಿದ್ದೆ. ಆದ್ರೆ ನಾನು ಆವತ್ತು ಊಟ ಮಾಡ್ಲಿಲ್ಲ, ಒಂದೊಂದು ತುತ್ತು ಬಾಯಿಗೆ ಹಾಕೋಕೆ ಹೋದಾಗಲೂ ನೀನಾಡಿದ ಮಾತು ನೆನಪಿಗೆ ಬರ್ತಾ ಇತ್ತು. ನಂಗೂ ನಿಮ್ಮಮ್ಮ ಹೇಳಿದ್ದು ಇಷ್ಟವಾಗಿರ್ಲಿಲ್ಲ ಗೊತ್ತ? ನೀನು ಹೇಳಿದ್ದನ್ನ ನಾನು ಕೇಳಿಸಿಕೊಂಡಿರ್ಲಿಲ್ಲ ಅಂದುಕೋಬೇಡ, ಕೇಳಿಸಿಕೊಂಡಿದ್ದೆ, ಮಾತಾಡಿರ್ಲಿಲ್ಲ ಅಷ್ಟೇ. ಊಟಾನೂ ಮಾಡಿರ್ಲಿಲ್ಲ.&lt;br /&gt;&lt;br /&gt;ಆವತ್ತಿಡೀ ಹಿತ್ತಲಲ್ಲಿದ್ದ ಚಿಕ್ಕುಮರದಡಿಗೆ ಕೂತ್ಕೊಂಡು ಅತ್ತಿದ್ದೆ. ಚಿಕ್ಕು ಮರಕ್ಕೆ ಕೆಳಗಿಂದ ಮೊದಲನೇ ರೆಂಬೆ ನಂದು, ಎರಡನೆಯದು ಅವನದ್ದು, ಮೂರನೇಯದು ಅವಳದ್ದು, ನಾಲ್ಕನೆಯದು ಇವಳದ್ದು, ಐದನೇದು ಎತ್ತರದಲ್ಲಿರೋದು ನಿಂದು. ಯಾಕೇಂದ್ರೆ ನಿಂಗೆ ಮರ ಹತ್ತಿದ್ರೆ ಇಳಿಯೋಕೆ ಸಹ ಬರ್ತಿತ್ತು. ನಂಗೆ ಮರ ಹತ್ತೋಕೂ, ಇಳಿಯೋಕೂ ಬರ್ತಿರಲಿಲ್ಲ, ಅದಕ್ಕೇ ಕೆಳಾಗಿಂದ ಮೊದಲನೇ ರೆಂಬೆ ನಂದು ನಮ್ಮ ಟೀಮಿನ ಯಾರದ್ದೇ ಮನೆಯ ಯಾವುದೇ ಮರದಲ್ಲಿ. ಕೊನೇ ರೆಂಬೆ ನಿಂದು. ಎಲ್ರೂ ಒಟ್ಟು ಸೇರ್ದಾಗ ಅವರವರ ರೆಂಬೇಲಿ ಅವರವರು ಕೂತು ಸುಂದರ್ಶಿ ಮಾವಿನ್ ಕಾಯಿನೋ, ಪೇರಲೇ ಕಾಯಿನೋ ತಿಂತಾ ಮಾತಾಡ್ತಿದ್ವಿ. ಆವತ್ತಿಡೀ ಒಬ್ಬಳೇ ಚಿಕ್ಕು ಮರದಡಿಗೆ ಕೂತು ಅತ್ತಿದ್ದೆ. ನೀನು ಸಂಜೆ ನನ್ನ ಹುಡ್ಕೊಂಡು ಬಂದಾಗಲೂ ನಾನು ಅಲ್ಲೇ ಇದ್ದೆ. ನೀನು ಬಂದಿದ್ದು ನಂಗೆ ಗೊತ್ತಾಗಿತ್ತು. ಆದ್ರೆ ನಿನ್ನೆದುರು ಅತ್ತು, ನಿನ್ನನ್ನ ಇನ್ನಷ್ಟು ಹೆದ್ರಿಸಬಾರ್ದು ನೋಡು ಅದಕ್ಕೇ ನಾನು ಅಲ್ಲೇ ಇದ್ರೂ ಮಾತಾಡಿರ್ಲಿಲ್ಲ. ಆದ್ರೆ ನೀನಿಲ್ದೇ ನನ್ನ ಸಂಜೆಯ ಹೊತ್ತನ್ನ, ಆಟಗಳನ್ನ ಕಲ್ಪಿಸಿಕೊಳ್ಳೋಕೆ ನಂಗೆ ಸಾಧ್ಯ ಇರ್ಲಿಲ್ಲ. ನೀನು ಹೋದ್ಮೇಲೆ ಮತ್ತೆ ಬೇಜಾರಾಯ್ತು. ನೀನು ಏನಾದ್ರೂ ಹೇಳೋಕೆ ಅಂತ ಬಂದಿದ್ರೆ... ನಾಳೆ ನೀನು ಆಡೋಕೆ ಬರದೆಲೇ ಹೋದ್ರೆ...&lt;br /&gt; ಓಡಿ ಬಂದು ಎದುರಿಗಿನ ಅಂಗಳಕ್ಕೆ ಬರೋಷ್ಟರಲ್ಲಿ ನೀನು ನಡೆದಿದ್ದೆ.&lt;br /&gt;&lt;br /&gt;ನಾಳೆ ಆಡೋಕೆ ಬಂದ್ಯಲ್ಲ, ಆವಾಗ ಸಖತ್ ಖುಷಿಯಾಗಿತ್ತು. ಭಾನುವಾರನೂ ಆಗಿತ್ತು, ದಿನ ಪೂರ್ತಿ ಆಡಿದ್ವಿ, ಒಟ್ಟಿಗೇ ಊಟ ಮಾಡಿದ್ವಿ. ನಾನು ಯಾವಾಗಾಲೂ ನಿನ್ ಜೊತೆ ಇರ್ತೀನಿ, ನಿಂಗೆ ಭಯವಾದಾಗೆಲ್ಲ ನನ್ನ ನೆನಪು ಮಾಡ್ಕೋ, ನಿನ್ನ ಜೊತೇಲೇ ಇರ್ತೀನಿ ಅಂತ ನಾನು ನಿಂಗೆ ಹೇಳಿದ್ದೆ. ನೆನಪಿದೆಯ? ಒಂದಿಷ್ಟು ನೆನಪು ಮಾಡ್ಕೊಳ್ತಾ, ಒಂದಿಷ್ಟು ಮರೀತಾ ನಾನು ಕಾಲೆಜಿಗೆ ಸೇರ್ಕೊಂಡ್ರೂ ನೀನು ಇನ್ನೂ ಏಳನೇ ಕ್ಲಾಸೇ ಮುಗ್ಸಿರ್ಲಿಲ್ಲ. &lt;br /&gt;&lt;br /&gt;ಗೊಂಬೆ ಆಟ, ಮಣ್ಣಾಟ, ಎಲ್ಲಾ ಬಿಟ್ಟು ಕ್ರಿಕೆಟ್ಟು ಆಡ್ತಿದ್ವಿ. ನಾನು ಮತ್ತೂ ನನ್ನಷ್ಟಕ್ಕೇ ಆಗೋಗ್ತಿದ್ದ ವಯಸ್ಸು ಅದು. ಯಾರ ಜೊತೇಲೂ ಮಾತಾಡ್ದೇ ನಾನಾಯ್ತು, ಓದೋದಾಯ್ತು, ಬರೆಯೋದಾಯ್ತು ಅಂದ್ಕೊಂಡು ಮೆತ್ತಿಯಲ್ಲೇ ಕೂತಿರ್ತಿದ್ದೆ. ಸಂಜೆ ಐದುಗಂಟೆಗೆ ನೀನು ಬಂದು ಕ್ರಿಕೆಟ್ಟು ಆಡೋಕೆ ಕರದ್ರೆ ಆಗ ಮೆತ್ತಿಯಿಂದ ಇಳ್ದು ಕೆಳಗೆ ಬರ್ತಿದ್ದೆ ನಾನು. ಒಟ್ಟಿಗೇ ಕ್ರಿಕೆಟ್ಟು ಆಡ್ತಾ ಆಡ್ತಾ ಬಸ್ಸು ಬಂದ ಶಬ್ದ ಕೇಳ್ತು ಅಂದ್ರೆ ಆರು ಗಂಟೆ ಆಗೋಗಿರ್ತಿತ್ತು. ಆಟ ನಿಲ್ಸಿ, ಬಸ್ಸಿಂದ ಯಾರ್ಯಾರು ಇಳಿದ್ರು ಅಂತ ನೋಡ್ಕೊಂಡು ಹಂಗೇ ಕೆರೆಏರಿ ಮೇಲೆ ವಾಕಿಂಗಿಗೆ ಹೋಗೋದು ಏನು ಖುಷಿಯಾಗ್ತಿತ್ತು. ಕೆರೆಏರಿ ಮೇಲೆ ಹೋದಾಗ ಏನೇನು ಮಾತಾಡ್ತಿದ್ವಿ ಅಂತ ನೆನಪಾಗ್ತಿಲ್ಲ. ಸೂರ್ಯ ಇಳಿಯೋದು ನೋಡೋಕೆ ಚಂದ ಕಾಣ್ತಿತ್ತು. ಒಂದೊಂದ್ಸಲ ಸೂರ್ಯ ಆ ಕಡೇ ಕೆರೆಯೊಳಗೆ ಇಳೀತಿದ್ದ ಹಂಗೇ ಈ ಕಡೆ ತೋಟದ ಮೇಲಿಂದ ಚಂದ್ರ ಕಾಣ್ತಿದ್ದ, ಅದೊಂಥರ ಮಜ ಅನ್ನಿಸ್ತಿತ್ತು, ಆಶ್ಚರ್ಯನೂ ಆಗ್ತಿತ್ತು.&lt;br /&gt; &lt;br /&gt; ನಾನು ಕಾಲೇಜಿಗೆ ಹೋಗೋಕೆ ಶುರುಮಾಡಿದ ದಿನಗಳಲ್ಲಿ ನಂಗೆ ಓರಗೆಯ ಹುಡುಗಿಯರು ಯಾರೂ ಇರ್ಲಿಲ್ಲ ಜೊತೇಲಿ. ನೀನು ನನ್ನ ಒಳ್ಳೇ ಫ್ರೆಂಡ್ ಆಗಿದ್ದೆ.  ಹುಡುಗರ ಜೊತೆ ಆಡಿ ಬೆಳ್ದಿದ್ದಕ್ಕೇನೂ ಇವತ್ತೀಗೂ ನಂಗೆ ಹುಡುಗರು ಹುಡ್ಗೀರು ಅನ್ನೋ ತಾರತಮ್ಯವೇ ಬರ್ಲಿಲ್ಲ. ಸಾದಾ ಸೀದಾ ಮಾತಾಡೋ ಹುಡುಗರೇ ಕೆಲ ಹುಡಿಗೀರಿಗಿಂತ ಜಾಸ್ತಿ ಇಷ್ಟವಾಗ್ತಾರೆ. ನಿನ್ನ ಓರಗೆಯ ಹುಡುಗರಲ್ಲಿ ನೀನೇ ಕಾಣಿಸ್ತೀಯ. &lt;br /&gt;&lt;br /&gt;ಕೆರೆಯೇರಿಯ ಈಚೆಯ ದಿಬ್ಬದ ಕಲ್ಲಿನ ಮೇಲೆ ಅಪ್ಪಳಿಸಿ ಕೂತು ಸೂರ್ಯಾಸ್ತ ನೋಡಿ ಎದ್ದು ಬರೋವಾಗ ಬಟ್ಟೆಗೆ ಅಂಟಿಕೊಂಡಿರ್ತಿದ್ದ ಮಣ್ಣನ್ನ ಸಲೀಸಾಗಿ ಹೇಗೆ ಒರೆಸಿಕೊಳ್ಳೋದು ಅನ್ನೋದನ್ನ ಕಲಿಸಿಕೊಟ್ಟಿದೀಯ. ನೀನು ನಂಗೆ ಇಷ್ಟವಾಗ್ತಿದ್ದೆ. ನಮ್ಮಿಬ್ಬರ ನಡುವಿನ ದೂರದೆಳೆಯ ಆ ರಕ್ತ ಸಂಬಂಧಕ್ಕಿಂತ ನಂಗೆ ನಿನ್ನ ಒಡನಾಟ ಇಷ್ಟವಾಗೋದು. ಆಮೇಲಾಮೇಲೆ ಇಬ್ಬರೂ ಸುಮ್ಮ್ ಸುಮ್ನೆ ಖುಷಿಯಾಗಿರ್ತಿದ್ವಿ. ಹಂಚಿಕೊಳ್ಳೋಕೆ ಬೇಜಾರು ಅನ್ನೋ ಪದವೇ ಇರ್ಲಿಲ್ಲ. ಬೇಕಂತಲೆ ಹಿಂಗೆ ಮಾಡ್ತಿದ್ವ? ಅಂಥ ಭಾನುವಾರಗಳು ಮತ್ತೆ ಸಿಗತ್ವ? ಆವಾಗೆಲ್ಲ ಜೊತೆಯಲ್ಲಿ ಯಾರಾದ್ರೂ ಇರ್ಬೇಕು ಅಂತ ಅಂದುಕೊಳ್ತಿದ್ದರೆ ಅದು ನೀನು. ಎಲ್ಲಿಗೋ ಹೋಗ್ಬೇಕು ಅನ್ನಿಸಿದ್ರೆ ಅದು ಕೆರೆಯೇರಿ. &lt;br /&gt;ಈಗಲೂ ಹಂಗೇ.&lt;br /&gt;&lt;br /&gt;ಈ ಸಲ ರಾಣಿ ಮಹಲ್ ತನಕ ನಡ್ಕೊಂಡು ಹೋಗಿದ್ದೆ. ಇನ್ನೂತನಕ ರಾಣಿಮಹಲ್ಲೇ ನೋಡಿರ್ಲಿಲ್ಲ. ಆ ಸುತ್ತಲ್ಲಿ ನಡಕೊಂಡು ಹೋಗೋವಾಗ ನಂಗೆ ನೀನು ನೆನಪಾದೆ. ಯಾರೋ ಅಕ್ಕಾ ಅಂದ್ರೆ ನೀನೇ ಕೂಗಿದಂಗೆ ಕೇಳಿಸ್ತು. ಜೊತೇಲಿ ಸುಮ್ ಸುಮ್ನೆ ಖುಷಿಯಾಗೊಕೆ ನಗೋಕೆ ನೀನೂ ಇರ್ಬೇಕಾಗಿತ್ತು ಅನ್ನಿಸ್ತು. ರಾಣಿಮಹಲ್ ಎದ್ರಿಗೆ ಅಮಟೆ ಮರ ಇದೆ, ಕಾಯಿ ಕಾಯಿ ಗೊಂಚಲು ಗೊಂಚಲು ಗೊತ್ತ? ನೀನಿದ್ರೆ ಒಂದಿಷ್ಟು ಅಮಟೆಕಾಯಿ ಕೊಯ್ದುಕೊಡ್ತಿದ್ದೆ ಅನ್ನಿಸ್ತು. ದಾರೀಲಿ ಬರೋವಾಗ ಊದ್ದಕ್ಕೂ ಪೈನಾಪಲ್ ತೋಟ. ನೀನಿದ್ದಿದ್ರೆ ಒಂದಾದ್ರೂ ಹಣ್ಣು ಕೀಳ್ದೇ ಬರ್ತಿದ್ಯ? ಜೊತೇಲಿ ನೀನಿರಬೇಕಾಗಿತ್ತು ಅನ್ನಿಸಿತು. ಬೇಜಾರೇ ಇಲ್ದೇ ಸುಮ್ಮ್ ಸುಮ್ನೇ ಖುಷಿಯಾಗ್ಬಹುದಿತ್ತು. ಸುಮ್ ಸುಮ್ನೇ ನಗ್ಬಹುದಿತ್ತು ಅನ್ನಿಸ್ತು ಅಲ್ಲಿಂದಿಲ್ಲಿಗೂ.&lt;br /&gt;&lt;br /&gt;ದಾರಿಯುದ್ದಕ್ಕೂ... ದಾರಿಯುದ್ದಕ್ಕೂ ಎಲ್ರೂ ಜೊತೇಲೇ ಇರ್ಬೇಕು ಅಂದ್ರೆ ನಂದೂ ಒಂಥರಾ ಅತಿಯಾಸೆ ಬಿಡು. ಆದ್ರೂ ಒಂದ್ಸಲ ಜೊತೇಲಿ ಕೆರೆ ಏರಿಮೇಲೆ ವಾಕಿಂಗಿಗಾದ್ರೂ ಹೋಗ್ಬಹುದಿತ್ತು. ಆ ಕಡೇ ದಿಬ್ಬದ ಕಲ್ಲಿನ ಮೇಲೆ ಮಾತೇ ಆಡದೇ ಒಂದಿಷ್ಟು ಹೊತ್ತು ಕೂತಿರಬೇಕಿತ್ತು. ಐದು ಗಂಟೆ ಆದತಕ್ಷಣ ಕ್ರಿಕೆಟ್ ಆಡೋಕೆ ಕರೆಯೋಕೆ ಅಂತ ನೀನು ಬರ್ಬೇಕಾಗಿತ್ತು ಮತ್ತೆ ಒಂದೇ ಒಂದು ಬಾರಿಗೆ. ಒಂದೇ ಒಂದು ಬಾರಿಗೆ ಒಣಗಿದ ಜೇಡಿಮಣ್ಣಿಗೆ ಇಬ್ಬರೂ ಸೇರಿ ನೀರು ಚಿಮುಕಿಸಿ ಒದ್ದೆಯಾಗಿಸಿ, ಒಣಮಣ್ಣ ಮೆತ್ತಗಾಗಿಸಿ ಆವತ್ತು ಮಾಡಿದ್ದೆವಲ್ಲ   ಅಂತದೇ ಪಾತ್ರೆ ಮಾಡೋಕೆ ಸಾಧ್ಯವ ಅಂತ ಪ್ರಯತ್ನಿಸಬಹುದಿತ್ತು. ನನ್ನ ಕರೆಯೋಕೆ ಅಂತ ನೀನು ಬರಬೇಕಿತ್ತು. ಕರೆದ ತಕ್ಷಣ ಊರ ಬಾಗಿಲಿಂದ ಹಂಗೇ ಕೆರೆಯೇರಿ ಮೇಲೆ ಹೋಗಿಬರಬೇಕಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-4344837808717327588?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/4344837808717327588/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=4344837808717327588' title='9 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/4344837808717327588'/><link rel='self' type='application/atom+xml' href='http://www.blogger.com/feeds/5495085842856428066/posts/default/4344837808717327588'/><link rel='alternate' type='text/html' href='http://www.shantalabhandi.com/2011_02_01_archive.html#4344837808717327588' title='ಊರ ಬಾಗಿಲಿಂದ ಹಂಗೇ ಕೆರೆ ಏರಿ ಮೇಲೆ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>9</thr:total></entry><entry><id>tag:blogger.com,1999:blog-5495085842856428066.post-1773437652887943618</id><published>2011-01-26T21:18:00.000-08:00</published><updated>2011-01-26T21:20:11.884-08:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ನೆಟ್ಟ ನೆನಪಿಲ್ಲ...</title><content type='html'>ಮುಂಜಾವಿನಲಿ ಕಂಡೊಂದು ನಗುವು ಮಧ್ಯಾಹ್ನದ ಮೇಲಾಗುತ್ತಲೇ ನಗುವಿನದೇ ಗಾರ್ಡನ್ನು. ನಗುವೇ ಮೊಗ್ಗಾಗಿ, ಮೊಗ್ಗು ಮಗುವಾಗಿ, ಮಗುವೊಂದು ಮಕ್ಕಳಾಗಿ. ನಗೆಯ ಹೊನಲದು. ಸಂಜೆ ಸರಿವ ಮುನ್ನ ನಗುವ ಕಲರವ, ನಗುವಿನಿಂಪು. ಮೌನದಲ್ಲೇ ತಬ್ಬಿ ಅಷ್ಟು ಪ್ರೀತಿ ಹಂಚಿದವರಿಗೆ, ಹುಟ್ಟಿದ ತಪ್ಪಿಗೆ ಜನ್ಮದಿನಕ್ಕೆ ಹಾಡು. ಬದುಕ ಬಯಲಾಗಿಸಿಕೊಟ್ಟವರ ನೆನೆದು ನೆಲದ ಹಾಡು. ಮಕ್ಕಳು ಹರಡಿಟ್ಟ ಹಾಳೆಯ ಚೂರುಗಳನ್ನೆಲ್ಲ ಒಪ್ಪವಾಗಿಸಿ ಬರುವಾಗ ಉಳಿದದ್ದು ಯಾವುದೋ ನೆಲದಲ್ಲಿ ಯಾವುದೋ ಕುಲಬಾಂಧವರು ನಗುತ್ತ ಅಪ್ಪಿ ಭರವಸೆ ತುಂಬಿದ್ದೇ ಗುನುಗು. ಇಂಥ ಹೊತ್ತಲ್ಲೂ ಹಾಳು ನೆನಪು ಅಜ್ಜ ನೆಟ್ಟ ಆಲದ ಮರದ್ದು. ಎಲ್ಲ ಮರೆತುಬಿಡಬೇಕು. ಹೌದು, ನನಗೀಗ ನೆನಪಿಲ್ಲ. ಎಷ್ಟು ಬಾರಿ ನೆನಪಿಸಿಕೊಂಡರೂ ನೆನಪಾಗುತ್ತಿಲ್ಲ, ಬೇಕಂತಲೇ ಮರೆತದ್ದು, ಇಟ್ಟ ಜಾಗವೂ ನೆನಪಿಲ್ಲ. ನೆಟ್ಟ ಗಿಡದ್ದೂ ನೆನಪಿಲ್ಲ. ಮರಳಿ ಬಾರದೇ ಹೋದರೆ ಮಾರಿಕೊಳ್ಳಿ ಪರವಾಗಿಲ್ಲ ನಿಮ್ಮ ನಗು, ಮಗು, ಮೊಗ್ಗು, ಹೂ, ಗಿಡ, ಮರ, ಕಾಯಿ, ಹಿತ್ತಲಿನ ನೆನಪುಗಳನ್ನೂ. &lt;br /&gt;&lt;br /&gt;ಆದರೆ ಒಂದು ವಿಷ್ಯ, ಮರೆಯೋದು ಬೇಡ, ಮರಳಿ ಬಂದರೂ ಬಂದೇನೂ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-1773437652887943618?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/1773437652887943618/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=1773437652887943618' title='9 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/1773437652887943618'/><link rel='self' type='application/atom+xml' href='http://www.blogger.com/feeds/5495085842856428066/posts/default/1773437652887943618'/><link rel='alternate' type='text/html' href='http://www.shantalabhandi.com/2011_01_01_archive.html#1773437652887943618' title='ನೆಟ್ಟ ನೆನಪಿಲ್ಲ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>9</thr:total></entry><entry><id>tag:blogger.com,1999:blog-5495085842856428066.post-4696996756862691798</id><published>2011-01-10T21:05:00.000-08:00</published><updated>2011-01-10T21:33:43.771-08:00</updated><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ನಿಂತು ಹೋಗಿದೆ ಲೋಲಕದ ಗಡಿಯಾರ</title><content type='html'>ಉಪ್ಪರಿಗೆಯಿಲ್ಲ&lt;br /&gt;ಅಧಿಕ ಮಾಸವೂ ಇಲ್ಲ&lt;br /&gt;ಕಾಲ ಸುರಿಯುತ್ತಲೇ ಇದೆ ಸರಸರನೆ&lt;br /&gt;ಪಾಡ್ಯದ ಮೇಲೆ ಪಾಡ್ಯವಾದ&lt;br /&gt;ಉಪ್ಪರಿಗೆಯ ಸುದ್ದಿಯಿಲ್ಲ&lt;br /&gt;ಹದಿನೈದಕ್ಕೆ ಹದಿನೈದು ಸೇರಿ&lt;br /&gt;ಬರೀ ಮೂವತ್ತು&lt;br /&gt;ಇಂಗ್ಲೀಷು ಹುಡುಗ ಮೇಗೆ&lt;br /&gt;ಮಾತ್ರ ಮೂವತ್ತೊಂದು&lt;br /&gt;ಹಿಂದೂ ಹುಡುಗಿ ಚೈತ್ರಕ್ಕೆ&lt;br /&gt;ಮೂವತ್ತೆಂದರೆ ಮೂವತ್ತು&lt;br /&gt;ಒಂದುಪ್ಪರಿಗೆಯೂ ಇಲ್ಲ&lt;br /&gt;&lt;br /&gt;ಸರಿವ ಕಾಲದ ಪರಿವೆಯಿಲ್ಲದೆ &lt;br /&gt;ಕಾಲ ಸುರಿವಂತೆ ಭಾಸ&lt;br /&gt;ಕಾಲ ಸರಿಯುವುದಿಲ್ಲ ಸುರಿಯುತ್ತಿದೆ&lt;br /&gt; ರಿಸ್ಟ್ ವಾಚು ಸೆಲ್ ಫೋನು&lt;br /&gt;ಚೆಲ್ ಚೆಲ್ಲಾಗಿ&lt;br /&gt;ಫಿಂಗರ್ ಸ್ಕ್ಯಾನ್ ಒತ್ತಿ ಕೂತರೆ&lt;br /&gt;ಸೆಲ್ಲೊಳಗೆ ನುಣ್ಣನೆ ಅಕ್ಷರ&lt;br /&gt;ಮಿಕ್ಸಡ್ ಎಮೋಷನ್ಸ್!!!!!!&lt;br /&gt;&lt;br /&gt;ಎಲ್ಲದರ ನಡುವೆ&lt;br /&gt;ಸೂರ್ಯಗ್ರಹಣ ಮಾತ್ರ ಸುಳಿವಿಲ್ಲದೇ &lt;br /&gt;ಬಿಜಿ ಬಿಜಿಡೇ ಸಂಜೆಯಾಗಿ &lt;br /&gt;ಎಷ್ಟೋ ಸಾವಿರ ವರ್ಷಕ್ಕಾದ ಅದೇ ಚಂದ್ರಗ್ರಹಣ&lt;br /&gt;&lt;br /&gt;ಯಾರಿಗೂ ಪುರುಸೊತ್ತಿಲ್ಲ ಗಂಟೆ ನೋಡುವುದಕ್ಕೆ&lt;br /&gt;&lt;br /&gt;*****&lt;br /&gt;ಹೇಡಿಗೆಯಂಚಿಗೆ ಕೂತ ಅಜ್ಜ&lt;br /&gt;ಬಾಗಿಲ ಸಂದಿಯಿಂದಲೇ&lt;br /&gt;ಕಣ್ಣುತೂರಿ &lt;br /&gt;ಗಂಟೆ ನೋಡಿದರೆ&lt;br /&gt;ನಿಂತು ಹೋಗಿದೆ ಜಗುಲಿಯ&lt;br /&gt;ಲೋಲಕದ ಗಡಿಯಾರ&lt;br /&gt;ಕೀಲಿಕೈ ಹುಡುಕಿದರೆ...&lt;br /&gt;ಎಲ್ಲಿದೆ?&lt;br /&gt;ಅಜ್ಜಿಯ ಚಿತೆಯೊಂದಿಗೆ&lt;br /&gt;ಅಜ್ಜಿ ಸೊಂಟಕ್ಕೆ ಸಿಕ್ಕಿಸಿದ್ದ&lt;br /&gt;ಗಡಿಯಾರದ ಕೀಲಿಕೈಯೂ&lt;br /&gt;ಭಸ್ಮವಾಗಿದ್ದು&lt;br /&gt;ಅಜ್ಜನಿಗೆ ಇವತ್ತು ನೆನಪಾಗಿದೆ&lt;br /&gt;ಲೋಲಕದ ಗಡಿಯಾರ ನಿಂತು ಹೋಗಿದೆ&lt;br /&gt;ಸಮಯ ಸರಿಯುತ್ತಲೇ ಇಲ್ಲ&lt;br /&gt;&lt;br /&gt;&lt;br /&gt;***&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-4696996756862691798?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/4696996756862691798/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=4696996756862691798' title='6 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/4696996756862691798'/><link rel='self' type='application/atom+xml' href='http://www.blogger.com/feeds/5495085842856428066/posts/default/4696996756862691798'/><link rel='alternate' type='text/html' href='http://www.shantalabhandi.com/2011_01_01_archive.html#4696996756862691798' title='ನಿಂತು ಹೋಗಿದೆ ಲೋಲಕದ ಗಡಿಯಾರ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>6</thr:total></entry><entry><id>tag:blogger.com,1999:blog-5495085842856428066.post-3691718788111283261</id><published>2010-12-20T22:22:00.000-08:00</published><updated>2010-12-21T10:13:13.473-08:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ನನ್ನ ಅಂಗಳದಲ್ಲಿ ‘ಮೌನಿ’ಯ ಜೊತೆಗೆ ‘ಆಕಾಶ ಮತ್ತು ಬೆಕ್ಕು’</title><content type='html'>&lt;a href="http://4.bp.blogspot.com/_gIx6mG3I3fg/TRBaEwsWLeI/AAAAAAAAA4E/nN5mkT6mgyA/s1600/URA_shantalabhandi.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 260px; height: 400px;" src="http://4.bp.blogspot.com/_gIx6mG3I3fg/TRBaEwsWLeI/AAAAAAAAA4E/nN5mkT6mgyA/s400/URA_shantalabhandi.jpg" border="0" alt=""id="BLOGGER_PHOTO_ID_5553037378384702946" /&gt;&lt;/a&gt;&lt;br /&gt;&lt;br /&gt;ಭಾವಿಕೆರೆ ಕುಪ್ಪಣ್ಣಭಟ್ಟರ ಹಾಗೂ ಸೀಬಿನಕೆರೆ ಅಪ್ಪಣ್ಣಭಟ್ಟರ ನಡುವಿನ ಅಗಮ್ಯ ಹಗೆಯ ಹೊಗೆಯಾಟದ ಕತೆಯಾಗಿ ‘ಮೌನಿ’ ಸಾಗುತ್ತದೆ. ಕೇವಲ ಒಂದು ಬೇಲಿಯ ಆಚೀಚಿನ ಮೌನ ಮಾತುಗಳ ನಡುವಿನ ಹೋರಾಟವಾಗಿ ಈ ಕತೆ ಕೊನೆಯಲ್ಲಿ ಮಾತಿನ ಸಂಧಾನವಾಗಿ, ಮೌನಕ್ಕೆ ಸಿಕ್ಕ ಜಯವಾಗಿ ಅಂತ್ಯವಾಗುತ್ತದೆ.&lt;br /&gt;&lt;br /&gt;ಮೌನಿ ಕಥೆಯೊಳಗೆ ಇಬ್ಬರು ವ್ಯಕ್ತಿಗಳ ನಡುವಿನ ಹಗೆಯೇ ಮುಖ್ಯ ನಾಯಕನಂತೆ ವಿಜೃಂಭಿಸುತ್ತದೆ. ಶ್ರೀ ಅನಂತಮೂರ್ತಿಯವರೇ ಬರೆದ ‘ಆಕಾಶ ಮತ್ತು ಬೆಕ್ಕು’ ಇದಕ್ಕಿಂತ ತೀರ ಭಿನ್ನವಾಗಿರುವುದು ಆರಂಭದಲ್ಲಿಯೇ ಅರಿವಾಗುತ್ತದೆ. ಇಲ್ಲಿ ಪ್ರತಿಪಾತ್ರ ಹಾಗೂ ಆ ಪಾತ್ರವು ಹೊತ್ತ ಭಾವನೆಗಳು ಲೌಕಿಕ ಭಾವನೆಗಳಾಗಿ ತೋರಿದರೂ ಸಹ ಅದೇ ಕಾರಣಕ್ಕೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ.&lt;br /&gt;&lt;br /&gt;‘ಮೌನಿ’ ಕಥೆಯಲ್ಲಿನ ‘ಇಬ್ಬರೂ ಕೈಲಿ ಬರಿಯ ತೀರ್ಥದ ಬಟ್ಟಲು ಹಿಡಿದು ಘಟ್ಟದ ಕೆಳಗಿನಿಂದ ದುಗ್ಗಾಣಿಯಿಲ್ಲದೆ ಅಡಿಕೆ ತೋಟ ಮಾಡಲು ಬಂದವರು.’ ಎಂಬ ವಾಕ್ಯವು ಘಟ್ಟದ ಕೆಳಗಿನಿಂದ ಬಂದ ಅಪ್ಪಣ್ಣಭಟ್ಟರು ಹಾಗೂ ಕುಪ್ಪಣ್ಣಭಟ್ಟರು ಬರಿಗೈಲಿ ಘಟ್ಟದ ಮೇಲೆ ಬಂದವರೆಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಘಟ್ಟದ ಮೇಲೆ ಬಂದು ಶ್ರೀ ಮಠದ ನರಸಿಂಹ ದೇವರುಗಳ ಒಕ್ಕಲಾಗಿ ಜೀವನ ಸಾಗಿಸುತ್ತಾರೆ. ಕಥೆಯು ಬರಿಯ ಕಥೆಯಾಗಿರದೇ ಅಲ್ಲೆಲ್ಲೋ ಸುತ್ತೂರುಗಳಲ್ಲೊಂದೂರಲ್ಲಿ ನಡೆದೇ ಇರಬೇಕು ಎನ್ನಿಸುವಷ್ಟರ ಮಟ್ಟಿಗೆ ನೈಜವಾಗಿ ಕಣ್ಮುಂದೆ ಬರುತ್ತದೆ.&lt;br /&gt;&lt;br /&gt;ಪುಟ್ಟ ಊರೊಂದರಲ್ಲಿನ ಪರಸ್ಪರ ವಿರುದ್ಧ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಕಥೆ ಚಲಿಸುತ್ತದೆ. ಯಾವುದೇ ಚಾಣಾಕ್ಷತನವಿಲ್ಲದೆ ತೀರ ಆಸಕ್ತಿಯೂ ಇರದೆಯೋ, ಕಳಕೊಂಡವರಾಗಿಯೋ ಇದ್ದಂತಹ ಕುಪ್ಪಣ್ಣಭಟ್ಟರ ಜೀವನ ಸಾಗುತ್ತಲಿರುತ್ತದೆ. ಆದರೆ ಅಪ್ಪಣ್ಣ ಭಟ್ಟರು ಜೀವನವನ್ನು ಸಾಗಿಸುತ್ತಲಿರುವಂಥ ವ್ಯಕ್ತಿಯಾಗಿ ತೋರಿಬರುತ್ತಾರೆ. ತಮ್ಮಲ್ಲಿರುವ ಚಾಣಾಕ್ಷತನವನ್ನು ಉಪಯೋಗಿಸಿಕೊಳ್ಳುವುದನ್ನೂ ಅರಿತ ವ್ಯಕ್ತಿ ಅಪ್ಪಣ್ಣಭಟ್ಟರು. ಅಲ್ಲದೇ ಪರರಲ್ಲಿನ ಕೊರತೆಯನ್ನೂ, ದೌರ್ಬಲ್ಯವನ್ನೂ ಉಪಯೋಗಿಸಿಕೊಂಡು ತಮ್ಮ ಶಕ್ತಿಯನ್ನು ಇಮ್ಮಡಿಯಾಗಿಸಿಕೊಳ್ಳುವುದನ್ನೂ ಬಲ್ಲವರು. ಹೀಗಿರುವಂಥ ಅಪ್ಪಣ್ಣ ಭಟ್ಟರು ಹಾಗೂ ಕುಪ್ಪಣ್ಣಭಟ್ಟರುಗಳ ಕಥೆಯೇ ‘ಮೌನಿ’.&lt;br /&gt;&lt;br /&gt;‘ಕುಪ್ಪಣ್ಣಭಟ್ಟರು ವಯಸ್ಸಿನಲ್ಲಿ ಹಿರಿಯರು. ಅವರು ಕಳೆದ ಐವತ್ತು ಸಂವತ್ಸರ ಒಣಗಿದ ಹುಳಿ ಮಾವಿನ ಹಣ್ಣಿನಂತಹ ಅವರ ಮುಖದಲ್ಲಿ ಎದ್ದು ಕಾಣುತ್ತದೆ.’- ಅನಂತಮೂರ್ತಿಯವರು ಕುಪ್ಪಣ್ಣಭಟ್ಟರ ಮುಖವನ್ನು ವರ್ಣಿಸುವಾಗ ಒಬ್ಬ ವ್ಯಕ್ತಿಯ ಮುಖವು ಆತನ ಭೂತಕಾಲವನ್ನೂ ಸಾರುತ್ತದೆ ಎಂದೆನ್ನಿಸುವ ಜೊತೆಗೆ ‘ಮುಖವೇ ಮನಸಿನ ಕನ್ನಡಿ’ ಎಂಬ ಮಾತು ಸಹ ನೆನಪಿಗೆ ಬಾರದೇ ಇರಲಾರದು.&lt;br /&gt;&lt;br /&gt;ಒಂದುಕಾಲದಲ್ಲಿ ಮಿತಭಾಷಿಯಾದರೂ ಅತೀ ನೇರ ಮಾತುಗಳನ್ನಾಡುತ್ತಿದ್ದ ಕುಪ್ಪಣ್ಣಭಟ್ಟರು ಕೊನೆಕೊನೆಯಲ್ಲಿ ಮೌನಿಯೇ ಆಗಿಬಿಡುತ್ತಾರೆ, ಬದುಕಿನ ಪರಿಸ್ಥಿತಿ ತಂದುಕೊಡುವ ಅನಿವಾರ್ಯ ಮೌನವೋ ಎನ್ನುವಂತೆ. ‘ಕಪ್ಪಗೆ ಕುಳ್ಳಗೆ ಕೃಶವಾದ ಅವರ ಶರೀರ ಮಾತ್ರ ದಿನಗಳೆದಂತೆ ಸೊರಗುತ್ತಿದೆ. ಉಳಿದ ಮರ್ಜಿಯಲ್ಲೇನು ಬದಲಿಲ್ಲ. ಅದೇ ಹೊಳೆಯುವ ಬೋಳುತಲೆ, ಒಂದು ಕಾಲದಲ್ಲಿ ಸದಾಸಿಡುಕಿನ, ಈಗ ಮಂಕಾಗಿ ಉರಿಯುವ ಸಣ್ಣ ಕಣ್ಣುಗಳು. ಗುಜ್ಜ ಮೂಗು. ದಿಂಡು ಮಾವಿನ ಮೂತಿಯ ಗದ್ದ. ಉಟ್ಟ ಪಂಚೆ ಹೊದ್ದ ದೋತ್ರಗಳ ಮೇಲೆ ಅವರ ಸಾಲದಂತೆಯೇ ವರ್ಷಾಂತರದಿಂದ ಉಳಿದು ಬಂದ ಬಾಳೆ ಕರೆ. ಅಡಿಕೆ ಕರೆ. ಬಾಯಿಯ ಒಂದು ಪಾರ್ಶ್ವದಲ್ಲಿ ಸದಾ ಒಂದು ಹೊಗೆಸೊಪ್ಪಿನ ಉಂಡೆ ಇದ್ದೇ ಇರಬೇಕು.’ - ಹೀಗೆ ಕಥೆಗಾರ ತನ್ನ ಕತೆಯ ಒಂದು ಪಾತ್ರವಾದ ಕುಪ್ಪಣ್ಣಭಟ್ಟರ ವ್ಯಕ್ತಿತ್ವನ್ನು ನಮಗೆ ಕಟ್ಟಿಕೊಡುತ್ತಾನೆ. ಈ ಕಥೆಯಲ್ಲಿ ಪ್ರತಿಯೊಂದು ಪಾತ್ರದ ಕಥೆಯನ್ನು ಕಥೆಗಾರನೇ ನಮ್ಮ ಮುಂದೆ ಇಡುತ್ತಾ ನಡೆಯುತ್ತಾನೆ. ಪ್ರತಿಯೊಂದು ಪಾತ್ರವೂ ಕಥೆಗಾರನ ಕಾಲ್ನಡಿಗೆಯ ಜೊತೆ ಸಾಗುತ್ತದೆ.ಅಪ್ಪಣ್ಣ ಭಟ್ಟರ ಪಾತ್ರವು ಕಥೆಯ ಅಂತ್ಯದತನಕ ಹಿನ್ನೆಲೆಯಲ್ಲೇ ಇದ್ದು ಅಂತ್ಯದಭಾಗದಲ್ಲಿ ಕುಪ್ಪಣ್ಣಭಟ್ಟರನ್ನು ಸಂಧಿಸುತ್ತಾ ನಮ್ಮೆದುರಾಗುತ್ತದೆ.&lt;br /&gt;&lt;br /&gt;ಅಪ್ಪಣ್ಣಭಟ್ಟರು ಜಮೀನನ್ನು ತುಂಬ ಚೆಂದವಾಗಿ ನೋಡಿಕೊಳ್ಳುವುದಲ್ಲದೆ ಮಠಕ್ಕೆ ಒಪ್ಪಿಸಬೇಕಾದ ವರ್ಷದ ಕಂತನ್ನು ಒಪ್ಪಿಸಿಬಿಡುತ್ತಾರೆ. ಕುಪ್ಪಣ್ಣಭಟ್ಟರು ವರ್ಷದ ಕಂತನ್ನು ಸರಿಯಾಗಿ ಮಠಕ್ಕೆ ಕಟ್ಟಲಾರದೇ ಮೈಮೇಲೆ ಒಂದಿಷ್ಟು ಸಾಲ ಹೊತ್ತು ಕೂತವರಾಗಿರುತ್ತಾರೆ. ಉಬ್ಬಸವಿರುವ ಹೆಂಡತಿ ಗೌರಮ್ಮನಂಥವರು ಪತಿಯ ಸರಾಗವಾದ ಉಸಿರಾದಾರು ಹೇಗೆ? ಸದಾ ಗೂರಲು ಹಿಡಿದ ಅವರು ಮೂಲೆಯಲ್ಲಿ ಕುಳಿತಿರುತ್ತಾರೆ. ವಯಸ್ಸಿಗೆ ಬಂದ ಮಗಳು ಭಾಗೀರತಿಯ ಮದುವೆಯ ಬಗೆಗಿನ ಚಿಂತೆ ಇವರ ಸಾಲದ ಭಾರಕ್ಕೆ ಇನ್ನಷ್ಟು ಭಾರಕೊಡಲು ಕಾಯುತ್ತಿರುತ್ತದೆ. ಜೊತೆಗೆ ಜ್ವರದಗಡ್ಡೆಯನ್ನು ಹೊಟ್ಟೆಯಳಗಿಟ್ಟುಕೊಂಡ ಐದು ವರ್ಷದ ಮಗ ಗಣಪನ ಹಸಿವು ಕುಪ್ಪಣ್ಣಭಟ್ಟರನ್ನು ಸದಾ ತಿನ್ನುತ್ತದೆ.&lt;br /&gt;&lt;br /&gt;ಇಂತಹ ಎಲ್ಲ ಒತ್ತಡಗಳ ಮಧ್ಯೆ ಕುಪ್ಪಣ್ಣಭಟ್ಟರು ತಮ್ಮೊಳಗೆ ದಟ್ಟೈಸಿರುವ ಸಿಟ್ಟು, ಛಲ, ದಿಟ್ಟತನದಂತಹ ವ್ಯಕ್ತಿ ವೈಲಕ್ಷಣ್ಯಗಳನ್ನು ಬಿಟ್ಟುಕೊಡದೆ ಕೊನೆಯಲ್ಲಿ ಜಮೀನು, ಸಂಬಂಧಗಳು, ಸಂಸಾರ ಸಕಲವನ್ನೂ ಕಳೆದುಕೊಂಡವರಾಗಿ ತಮ್ಮ ಛಲಕ್ಕೆ ತಾವೇ ಸೋಲಲಾರದೇ ಮೌನವಾಗುತ್ತಾರೆ. ಒಬ್ಬ ವ್ಯಕ್ತಿಯ ಗೆಲುವು ಆ ವ್ಯಕ್ತಿಯು ಸಮಾಜಕ್ಕೆ ತನ್ನನ್ನು ಹೇಗೆ ಒಗ್ಗಿಸಿಕೊಂಡಿರುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆಯೆಂಬ ಅಂಶ ಈ ಕಥೆಯಲ್ಲಿ ಕಾಣುತ್ತದೆ. ಏಕೆಂದರೆ ಈ ಕಥೆಯಲ್ಲಿ ಕುಪ್ಪಣ್ಣಭಟ್ಟರ ಮೌನವು ಕೊನೆಯಲ್ಲಿ ನಾಯಕನಂತೆ ಭಾಸವಾದರೂ ಕಥೆಯೊಳಗೆ ಕಥೆಯೊಳಗಿನ ಸಾಮಾಜಿಕ ಸಂಬಂಧಗಳ ನಡುವಿನ ಏರುಪೇರು, ಈ ಸಂಬಂಧಗಳನ್ನೇರ್ಪಡಿಸಲು ಬೇಕಾದ ಸಮಾಜದ ಪ್ರತಿಯೊಬ್ಬನ ಆಂತರಿಕ ವ್ಯತಿರಿಕ್ತತೆ ಕಥೆಗೆ ಆಧಾರವಾದದ್ದು ಕಾಣುತ್ತದೆ.&lt;br /&gt;&lt;br /&gt;ಕಥೆಯೊಳಗಿನ ಪ್ರತಿಪಾತ್ರವೂ ನಾವಾಗಿ ಚಿಂತಿಸುವಂತೆ ಮಾಡುತ್ತದೆ. ಅಪ್ಪಣ್ಣಭಟ್ಟರ ಪಾತ್ರದೊಳಗೆ ಬದುಕುವ ಹುಮ್ಮಸ್ಸು ಬೆಳಕಿನಂತೆ ಬೆಳಗಿದರೆ ಕುಪ್ಪಣ್ಣಭಟ್ಟರ ಪಾತ್ರದೊಳಗೆ ಪ್ರತಿ ಹೆಜ್ಜೆ ಸಾಗುವ ಮಾರ್ಗವೂ ಮಸಿಯಂಟಿಸಿಕೊಂಡ ಲಾಟೀನು ಹಿಡಿದು ಕತ್ತಲಲ್ಲಿ ಪಯಣಿಸುವ ಪಯಣಿಗನ ಪಯಣದ ಹಾಗೆ. ಬೆಳಕಿದ್ದೂ ಸುತ್ತ ಬೆಳಕರಿಯದ ಹಾಗೆ ಮಾಡುವಂಥ ಶಕ್ತಿಯಾಗಿ ಪರಿಣಮಿಸುತ್ತದೆ.&lt;br /&gt;&lt;br /&gt;ಬರಿಯೊಂದು ಬೇಲಿಯಾಚೆಗಿನ ಇಬ್ಬರ ತೋಟದ ಭೂಮಿ ಕೊಡುವ ಪ್ರತಿಫಲವೂ ಬೇರೆಯೇ. ಜೀವನ ಪೀತಿಯೆಂದರೆ ಬರಿ ತನ್ನನ್ನು ತಾನು ಪ್ರೀತಿಸಿಕೊಳ್ಳುವುದು ಮಾತ್ರವಲ್ಲ, ಸುತ್ತಲಿನ ಎಲ್ಲವನ್ನೂ ಪ್ರೀತಿಸುತ್ತ ಸಾಗಿದಾಗ ಸಿಗುವ ಪ್ರತಿಫಲದ ಪರಿಣಾಮ ಉಣಬಡಿಸಿದ ಪ್ರೀತಿಯ ತೂಕದಷ್ಟನ್ನೇ ಹಲವು ಬಾರಿ ತೂಗುತ್ತಲಿರುತ್ತದೆ. ಇದಕ್ಕೆ ಭೂಮಿತಾಯಿಯೂ ಹೊರತಲ್ಲ. ಜಮೀನನ್ನು ಸದಾ ಕಾಳಜಿಯಿಂದ ನೋಡಿಕೊಳ್ಳುವ ತೆಗೆದುಕೊಳ್ಳುವ ಅಪ್ಪಣ್ಣಭಟ್ಟರ ತೋಟವು ಒಳ್ಳೆಯ ಫಸಲುಭರಿತವಾಗಿದ್ದರೆ, ಆರೈಕೆಯನ್ನೇ ಕಾಣದ ಕುಪ್ಪಣ್ಣಭಟ್ಟರ ಜಮೀನು ಫಸಲು ಬರುವುದಿರಲಿ, ಕೊಳೆರೋಗ ಹಿಡಿದು ನೆಲದ ಪಾಲಾಗಿರುತ್ತದೆ.&lt;br /&gt;&lt;br /&gt;‘ಭಾಗೀರತಿ ಅಡಿಗೆ ಮನೆಯಲ್ಲಿ ಹಸಿ ಸೌದೆಗೆ ಅಗ್ನಿ ಆವೇಶಿತನಾಗುವಂತೆ ಮಾಡಲು ಊದುಗೊಳವೆಯಲ್ಲಿ ಊದಿ ಊದಿ ಕೆಮ್ಮಿದಳು. ನೀರು ಹರಿದು ಹರಿದು ಒಣಗಿದ ಕಣ್ಣುಗಳನ್ನು ಸೆರಗಿನಿಂದ ಒರೆಸಿಕೊಂಡಳು. ಕೆದರಿದ ತಲೆಗೂದಲನ್ನು ನೇವರಿಸಿಕೊಂಡಿದ್ದಳು. ಬತ್ತಿದ ಕೆನ್ನೆಗಳ ಪೆಚ್ಚು ಮೋರೆಯನ್ನೆತ್ತಿ ನಡುಮನೆಗೆ ಬಂದು “ಅಮ್ಮ ಹುಳಿ ಮಾಡಲು ತೊಗರಿಬೇಳೆಯಿಲ್ಲ”ವೆಂದಳು. “ಸೌತೆ ಬೀಜದ ಸಾರು ಮಾಡು”ಎಂದರು, ಗೌರಮ್ಮ.’ - ಕಥೆಯೊಳಗಿನ ಇಂಥ ಸಾಲುಗಳು ಕುಪ್ಪಣ್ಣಭಟ್ಟರ ಸಂಸಾರದೊಳಗಿನ ಕೊರತೆಯ ಜಾಡನ್ನು ಹಿಡಿದೆತ್ತಿ ತೋರುವಲ್ಲಿ ಸಫಲವಾಗುತ್ತವೆ. ಅಲ್ಲದೇ ಹಸಿಯ ಸೌದೆಗೆ ಅಗ್ನಿ ಆವೇಶಿತನಾಗುವಂತೆ ಊದುತ್ತ ಕುಳಿತುಕೊಳ್ಳುವ ಪರಿಸ್ಥಿತಿಯಿದೆಯೆಂದರೆ ಮನೆಯೊಳಗೆ ಒಣಕಟ್ಟಿಗೆಯ ಸಂಗ್ರಹ ಇಲ್ಲವೆಂಬುದೇ ಅರ್ಥ. ಭವಿಷ್ಯದ ಬಗ್ಗೆ ಜಾಗ್ರತೆಯಿಲ್ಲದೆ ಬದುಕು ಸಾಗಿದರೆ ಬದುಕಿನ ಉದ್ದಕ್ಕೂ ಹಸಿಕಟ್ಟಿಗೆ ಊದಿ ಅದು ಉಗುಳುವ ಹೊಗೆಯನ್ನೇ ಉಣಬೇಕಾದೀತೆನ್ನುವ ಸಾರ ಕಥೆಯೊಳಗೆ ಸೂಚ್ಯವಾಗಿ ಕಂಡರೆ ಅದು ಕಥೆಗಾರನ ಸೂಕ್ಷ್ಮ ಹೆಣಿಗೆಯ ಜಾಣ್ಮೆ.&lt;br /&gt;&lt;br /&gt;ಜೀವನದ ಮಧ್ಯಂತರದವರೆವಿಗೂ ಒಣಪ್ರತಿಷ್ಠೆ, ಅತೀಸ್ವಾಭಿಮಾನ, ನಿಷ್ಠುರ ಸ್ವಭಾವಗಳಿಂದಲೇ ಗೆಲುವು ಗಳಿಸಿಯೇನೆಂಬಂತೆ ನಡೆದು, ಏನೂ ಗಳಿಸಲಾಗದ ಮಧ್ಯಂತರದಲ್ಲಿ ಕಳೆದದ್ದನ್ನೆಲ್ಲ ಕೂಡುವ ಹಂಬಲ, ಪ್ರಯತ್ನಗಳ ಪ್ರತಿಫಲವು ಅಡಿಪಾಯವಿಲ್ಲದೇ ಮಧ್ಯಂತರದಿಂದಲೇ ಆರಂಭವಾಗುತ್ತದೆ. ಭದ್ರ ಬುನಾದಿಯಿಲ್ಲದ ತೂರಾಡುವ ಪ್ರಯತ್ನಕ್ಕೆ ತೂಗಾಡುವ ಫಲವೇ ಸಿಗುತ್ತದೆ. ಅಂತೆಯೇ ಒಣಪ್ರತಿಷ್ಠೆಯಿಂದ ಏನನ್ನೂ ಗಳಿಸಲಾಗದವರಾಗಿ ಕಳೆದುಕೊಂಡಿದ್ದೇ ಜಾಸ್ತಿಯೆನ್ನುವುದನ್ನು ಅರಿತ ಕುಪ್ಪಣ್ಣಭಟ್ಟರ ಆ ನಂತರದ ಪ್ರಯತ್ನಗಳೆಲ್ಲ ಸೋತು ಮೌನವಾಗುವ ಕಥೆಯೇ ಮೌನಿ.&lt;br /&gt;&lt;br /&gt;‘ಗೊಬ್ಬರದ ಗುಂಡಿಯಿಂದೆದ್ದು ಬಂದ ನೊಣ ಮೂಗಿನ ಮೇಲೆ ಏರಿಕೂತು ಉರಿಯಿತು. ಅಟ್ಟಿದರೂ ಕಣ್ಣಿಗೆ ಕಟ್ಟುವ ನುಸಿ. ಉಶ್, ಎಂದರು. ಕಿವಿಯಲ್ಲಿ ಕರ್ಣಪಿಶಾಚಿಯಂತೆ ಕಾಡುವ ಸೊಳ್ಳೆ. ಅಂಗಳದ ಮೂಲೆಯಲ್ಲೊಂದು ಹಲಸಿನ ಸೇಡೆ ಒಣಗುತ್ತಿತ್ತು. ಗಾಳಿ ಬೀಸಿದರೆ ಕೊಟ್ಟಿಗೆಯ ನಾತ. ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾದ ಐದು ವರ್ಷದ ಮಗ ಅಂಗಳದೊಂದು ಮೂಲೆಯಲ್ಲಿ ಬೆತ್ತಲೆ ಮೈಯಲ್ಲಿ ಕುಕ್ಕುರು ಕೂತಿದ್ದ. ಅಂಗಳದಲ್ಲಿದ್ದೊಂದು ಬೂದು ನಾಯಿ, ಬೂದಿ ಗುಡ್ಡೆಯ ಮೇಲೊರಗಿದ್ದೊಂದು ಕರಿ ನಾಯಿ ಕುಳಿತ ಹುಡುಗನಲ್ಲೆ ತದೇಕ ಮಗ್ನರಾಗಿದ್ದವು.’- ದಾರಿದ್ರ್ಯಕ್ಕೂ ಅಶುಭ್ರ ವಾತಾವರಣಕ್ಕೂ ಇರುವ ಒಂದು ಅಂಟಿನ ನಂಟನ್ನು ಕುಪ್ಪಣ್ಣಭಟ್ಟರ ಮನೆಯ ಸುತ್ತಮುತ್ತಲಿನ ವಾತಾವರಣದ ಚಿತ್ರವಾಗಿ ಕಾಣಬಹುದು. ಆರ್ಥಿಕತೆಗೆ ಒದಗಿದ ಕೆಳಮಟ್ಟದ ಸ್ಥಿತಿ ಬಡತನ. ದಾರಿದ್ರ್ಯವೆನ್ನುವುದು ಮನಸ್ಸಿಗೂ ಅಂಟಿಕೊಳ್ಳುವ ಸ್ಥಿತಿ. ಅದು ಅಶುಭ್ರ ವಾತಾವರಣವನ್ನು ಸೃಷ್ಟಿಸಬಲ್ಲುದು. ಅಂಥದೊಂದು ವಾತಾವರಣದ ಚಿತ್ರಣವು ಕಥೆಯನ್ನೋದುತ್ತಿದ್ದಂತೆ ಯಥಾವತ್ತಾಗಿ ಕಣ್ಮುಂದೆ ಕಟ್ಟಿಕೊಳ್ಳುತ್ತದೆ.&lt;br /&gt;&lt;br /&gt;ಹೆಂಡತಿ ಮಕ್ಕಳ ವ್ಯಾಧಿ, ಬಡತನ, ಮದುವೆಗೆ ನಿಂತ ಮಗಳು, ಹಸಿದ ಮಕ್ಕಳು-ಇಂಥ ಪಾತ್ರಗಳ ನಡುವೆ ಸುತ್ತೆಲ್ಲ ನಿಷ್ಠುರ ಕಟ್ಟಿಕೊಂಡ ಕುಪ್ಪಣ್ಣಭಟ್ಟರ ಪ್ರಯತ್ನ ಸೋಲುತ್ತ ಹೋಗುವಾಗ ಸಮಾಜದಲ್ಲಿ ಮುನ್ನುಗ್ಗಬೇಕಾದಾಗ ಹೇಗಿರಬೇಕು, ಹೇಗಿರಬಾರದೆಂಬ ಸಂದೇಶ ಇಡಿಯ ಕಥೆಯೊಳಗೆಲ್ಲ ಹರಿಯುತ್ತಿದೆಯೆಂಬುದು ಭಾಸವಾಗುತ್ತದೆ.&lt;br /&gt;&lt;br /&gt;ಆಪದ್ಬಾಂಧವಳಂತೆ ಕೊನೆಯಲ್ಲಿ ಕಾಣಿಸಿಕೊಳ್ಳುವ ಸೀತಕ್ಕ ಎಂಬ ಒಂಟಿ ಹೆಂಗಸಿನ ಪಾತ್ರವು ಆದಿಯಿಂದ ಅಂತ್ಯದತನಕವೂ ಇರುವ ಕುಪ್ಪಣ್ಣಭಟ್ಟರ ಪಾತ್ರದಷ್ಟೇ ನಾಜೂಕಾಗಿ ಕಾಡುತ್ತದೆ. ಕಥೆಯ ಅಂತ್ಯದಲ್ಲಿ ಅಪ್ಪಣ್ಣಭಟ್ಟರು ಕುಪ್ಪಣ್ಣಭಟ್ಟರನ್ನು ಖುದ್ದಾಗಿ ತಾವೇ ನೋಡಿಹೋಗಲು ಬಂದಾಗಿನ ಕುಪ್ಪಣ್ಣಭಟ್ಟರ ಅಯೋಮಯ ಸ್ಥಿತಿ ಸೋತು ಬಿದ್ದವನಿಗೂ ಸತ್ತುಬಿದ್ದವನಿಗೂ ಇರುವ ಸಾಮ್ಯತೆಯನ್ನು ಹೇಳುತ್ತದೆ. ಕಥೆಯ ಪಾತ್ರಗಳಷ್ಟೇ ಮುಖ್ಯವಾಗಿ ಕತೆಯಲ್ಲಿ ವರ್ಣಿಸಲಾದ ಸುತ್ತಮುತ್ತಲಿನ ವಾತಾವರಣವೂ ಸಹ ಅಷ್ಟೇ ಪ್ರಾಮುಖ್ಯವಹಿಸಿ ಕಥೆಯ ಆಳವನ್ನು ಇನ್ನಷ್ಟು ತೀವ್ರವಾಗಿಸುತ್ತದೆ.&lt;br /&gt;&lt;br /&gt;ಕತೆಯೊಳಗಿನ ಪಾತ್ರಗಳು:&lt;br /&gt;ಭಾವಿಕೆರೆ ಕುಪ್ಪಣ್ಣಭಟ್ಟರು, ಸೀಬಿನಕೆರೆ ಅಪ್ಪಣ್ಣಭಟ್ಟರು, ಶ್ರೀ ಮಠ, ವಸೂಲಿಸಾಬ, ಶಾನುಭೋಗರು, ಏಜೆಂಟರು, ಕುಪ್ಪಣ್ಣಭಟ್ಟರ ಮೈದುನ ಸುಬ್ರಹ್ಮಣ್ಯ, ಕುಪ್ಪಣ್ಣಭಟ್ಟರ ಹೆಂಡತಿ ಗೌರಮ್ಮ, ಕುಪ್ಪಣ್ಣಭಟ್ಟರ ಮಗಳು ಭಾಗೀರತಿ, ಗಿಂಡಿಮಾಣಿ, ಗುರುಗಳು, ಮಠದ ಉಗ್ರಾಣಿ, ಜ್ವರಗಡ್ಡೆಯಿಂದ ಹೊಟ್ಟೆಡೊಳ್ಳಾದ ಐದು ವರ್ಷದ ಮಗ ಗಣಪ, ಕುಪ್ಪಣ್ಣಭಟ್ಟರ ಅಂಗಳದ ಬೂದುನಾಯಿ ಮತ್ತು ಕರಿನಾಯಿ, ಮಂಜ, ಊರಜನ(ಕುಪ್ಪಣ್ಣಭಟ್ಟರಿಗೆ ಅಡಿಕೆ ಮಾರಿದವರು), ಕಾಂಪೌಂಡರ್, ಗೋಪಾಲಕಮ್ತಿಯ ಶಡ್ಡಗ, ಅಪ್ಪಣ್ಣಭಟ್ಟರ ಆಳು, ಅಮೀನ, ಬಾಲವಿಧವೆಯಾದ ಸೀತಕ್ಕ ಎಂಬ ಅಜ್ಜಿ.&lt;br /&gt;&lt;br /&gt;ಕಥೆಯೊಳಗೆ ಶ್ರೀ ಮಠ ಮತ್ತು ಕಥೆಗಾರ ಇಬ್ಬರೂ ಕಥೆಯ ಎದಿರು ಬಾರದೆಯೇ ಕಥೆಯ ಮುಖ್ಯ ಪಾತ್ರವೆನಿಸುತ್ತಾರೆ. ಕಥೆಯನ್ನು ನಮ್ಮೆದುರು ಯಾರೋ ಕುಳಿತು ಹೇಳುತ್ತಿರುವಂಥ ಆಪ್ತಭಾವಗಳು ಕಾಡುವಾಗ ಕಥೆಗಾರ ಇಲ್ಲೆಲ್ಲೋ ಕುಳಿತು ಕಥೆ ಹೇಳುತ್ತಿರುವಂತೆ ಕೆಲವೊಮ್ಮೆ ಅನ್ನಿಸದೇ ಇರಲಾರದು. ಇದು ಈ ಕಥೆಯ ಇನ್ನೊಂದು ವೈಶಿಷ್ಟ್ಯವೆನಿಸುತ್ತದೆ.&lt;br /&gt;***&lt;br /&gt;&lt;br /&gt;&lt;br /&gt;ಯು. ಆರ್. ಅನಂತಮೂರ್ತಿಯವರು ಬರೆದ ‘ಆಕಾಶ ಮತ್ತು ಬೆಕ್ಕು’ ‘ಮೌನಿ’ ಕಥೆಗಿಂತ ತೀರ ಭಿನ್ನವಾಗಿರುವುದು. ‘ಮೌನಿ’ ಕಥೆಯನ್ನು ಕಥೆಗಾರ ನಮ್ಮೆದುರು ಬಣ್ಣಿಸುತ್ತ ಹೋಗುವುದು ಭಾಸವಾದರೆ ‘ಆಕಾಶ ಮತ್ತು ಬೆಕ್ಕು’ ತನ್ನೊಳಗಿನ ಪಾತ್ರಗಳಿಂದಲೇ ತಾನು ಹೆಣೆಹೆಣೆದುಕೊಳ್ಳುತ್ತ ಬಿಚ್ಚಿಕೊಳ್ಳುವುದು ವಿಶೇಷ. ನಿರೂಪಕನಿಂದಲೇ ಕಥೆಯ ನಿರೂಪಣೆಯಾದರೂ ತದನಂತರದಲ್ಲಿ ಮುಖ್ಯ ಪಾತ್ರವಾದ ಜಯತೀರ್ಥ ಆಚಾರ್ಯರ ವ್ಯಕ್ತಿತ್ವ ಮತ್ತು ಜೀವನ ಚರಿತ್ರೆ ಮಗ ಕೃಷ್ಣಮೂರ್ತಿಯ ವ್ಯಥೆಯಾಗಿ ಶುರುವಿಟ್ಟುಕೊಳ್ಳುತ್ತದೆ.&lt;br /&gt;&lt;br /&gt;ಇಪ್ಪತ್ತು ವರ್ಷಗಳ ಪ್ರಿಯತಮ ಜಯತೀರ್ಥ ಆಚಾರ್ಯರು ಮರಣಶಯ್ಯೆಯಲ್ಲಿ ಇರುವಾಗಲೂ ಮೌನವಾಗಿದ್ದುಕೊಂಡು ಅವರ ಶುಶ್ರೂಷೆ ಮಾಡುವ ಗಂಗೂಬಾಯಿ ಮೆಲುವಾಗಿ ನಮ್ಮನ್ನೆಳೆದುಕೊಳ್ಳುತ್ತಾಳೆ. ಮತ್ತೆಲ್ಲೋ ಇಷ್ಟವಾಗುತ್ತಾಳೆ ಕೂಡ.&lt;br /&gt;&lt;br /&gt;ಸಾವಿನ ಅಂಚಿನಲ್ಲಿರುವ ಮನುಷ್ಯ ಕೊನೆಗಾಲದಲ್ಲಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಹೀಗೆ ಸಂಬಂಧಗಳಿಗೆ ಹೇಗೆ ಹೆಚ್ಚು ಒತ್ತುಕೊಡುತ್ತಾನೆ ಎಂಬುದು ಕಥೆಯನ್ನೋದುವಾಗ ಮನದಟ್ಟಾಗುತ್ತದೆ. ಸಮಾಜಕ್ಕೆ ವಿರುದ್ಧವಾದ ಕಾರ್ಯಗಳನ್ನೆಸಗುತ್ತಲಿರುವ ನಲವತ್ತು ವರ್ಷಗಳಷ್ಟು ಹಳೆಯ ಸ್ನೇಹಿತನಿಗೂ, ಹೆಂಡತಿ ಹಾಗೂ ಬೆಳೆದು ಸಂಸಾರೊಂದಿಗರಾಗಿರುವ ಮಕ್ಕಳೆಲ್ಲ ಇದ್ದೂ ಸಹ ಇಪ್ಪತ್ತು ವರ್ಷಗಳ ಪ್ರೇಯಸಿಗೂ ಪ್ರಾಶಸ್ತ್ಯ ಕೊಡುವುದನ್ನು ಕಂಡಾಗ ಸಾವು ಹಾಗೂ ಅದರ ಸಾಮೀಪ್ಯದ ಗಡುವು ತಂದುಕೊಡುವ ನಿರ್ಲಿಪ್ತ ಧೈರ್ಯದ ಬಗ್ಗೆ ಕಥೆ ಸೂಚ್ಯವಾಗಿ ಹೇಳುತ್ತದೆ.&lt;br /&gt;&lt;br /&gt;ಜಯತೀರ್ಥಾಚಾರ್ಯರ ಮರಣಾನಂತರ ಮಗ ಕೃಷ್ಣಮೂರ್ತಿಯ ಯೋಚನೆಗಳಾಗಿ ಸಾಲಾಗಿ ಸರಗಟ್ಟುವ ಆಚಾರ್ಯರ ಬದುಕಿನ ಒಂದರ ಹಿಂದೊಂದು ಹಂತಗಳು ಅವನನ್ನು ಕಾಡತೊಡಗುತ್ತವೆ. ತೀರ ವಾಸ್ತವದ ಬದುಕಿಗೆ ಹೊಂದಿಕೊಂಡು ಅತೀಸಾಮಾನ್ಯ ಜೀವನ ನಡೆಸುತ್ತಿರುವ ಕೃಷ್ಣಮೂರ್ತಿಗೆ ತನ್ನ ತಂದೆ ಜಯತೀರ್ಥಾಚಾರ್ಯರು ಹಾಗೂ ನಾಯರ್ ನಡುವಿನ ಮಾತುಕತೆಗಳು ಒಗಟಾಗಿ ಕಾಣಿಸತೊಡಗುತ್ತವೆ. ಬಾಂಧವ್ಯಕ್ಕೆ ಒತ್ತುಕೊಡುವವನಂತೆ ಕಾಣುವ ನಾಯರ್ ಆಡುವ ಒರಟು ಮಾತುಗಳೂ ಕೃಷ್ಣಮೂರ್ತಿಗೆ ಒಗಟುಗಳೇ. ಇಬ್ಬರು ವ್ಯಕ್ತಿಗಳ ನಡುವಿನ ಭಾವನೆಗಳು ಮತ್ತು ವಾಸ್ತವಗಳ ತೀವ್ರ ಸಮ್ಮಿಶ್ರ ಮೂರನೆಯ ವ್ಯಕ್ತಿಗೆ ಅರ್ಥವಾಗದ ಒಗಟಾಗಿ ಪರಿಣಮಿಸುವ ಪರಿಗೆ ಕೃಷ್ಣಮೂರ್ತಿ ಉದಾಹರಣೆಯೆನಿಸುತ್ತಾನೆ.&lt;br /&gt;&lt;br /&gt;ಒಬ್ಬ ವ್ಯಕ್ತಿಯ ಸಾವಿಗಿಂತಲೂ ಸಾಯುತ್ತಲಿರುವ ವ್ಯಕ್ತಿಯ ಸುಪರ್ದಿನಲ್ಲಿರುವ, ತಮಗೆ ಸಂದಬೇಕಾದ ವಸ್ತುಗಳು ಹೆಚ್ಚು ಬೆಲೆ ಪಡೆದುಕೊಳ್ಳುವಂಥ ಸೂಕ್ಷ್ಮ ಎಳೆಗಳು ವಿಷ್ಣುಮೂರ್ತಿಯಂಥ ಪಾತ್ರದೊಳಗೆ ಸಿಗುತ್ತವೆ.&lt;br /&gt;&lt;br /&gt;ಒಬ್ಬ ಸಂಪ್ರದಾಯಸ್ಥ ಬ್ರಾಹ್ಮಣ ಹೆಂಗಸು ಭಾವನೆಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯವನ್ನು ಸಂಪ್ರದಾಯದ ಕಟ್ಟಳೆಗಳಿಗೂ ಕೊಡುತ್ತಾಳೆ ಎಂಬಂತಹ ಆಳದ ಎಳೆಗಳು ಜಯತೀರ್ಥಾಚಾರ್ಯರ ಸಾವಿನ ಎದುರು ಹೆಂಡತಿ ರುಕ್ಮಿಣಿಯಮ್ಮನ ತಳಮಳಗಳಲ್ಲಿ ಕಾಣಬಹುದು. ಅನ್ಯಜಾತಿಯವಳನ್ನು ವಿವಾಹವಾದ ಮಗನ ಕೊರಳಲ್ಲಿ ಅಪ್ಪನ ಸಾವಿನ ಈ ಸಂದರ್ಭದಲ್ಲಿ ಜನಿವಾರ ಇದೆಯೋ ಇಲ್ಲವೋ ಎಂದೆಲ್ಲ ಕಳವಳಗೊಳ್ಳುವ ರುಕ್ಮಿಣಿಯಮ್ಮ ಎಲ್ಲ ಸಂಪ್ರದಾಯಸ್ಥ ಹೆಂಗಳೆಯರಿಗೆ ಸಾಕ್ಷ್ಯರೂಪವಾಗಿ ಭಾಸವಾಗುತ್ತಾರೆ. ಜಯತೀರ್ಥಾಚಾರ್ಯರ ಪ್ರೇಯಸಿ ಈ ಸಮಯದಲ್ಲಿ ತಮ್ಮ ಮನೆಯಲ್ಲಿಯೇ ಇರುವುದು ರುಕ್ಮಿಣಿಯಮ್ಮನಂಥ ಮರ್ಯಾದೆಗೆ ಅಂಜುವ ಹೆಣ್ಣಿಗೆ ಗಂಡನ ಸಾವಿಗಿಂತಲೂ ಬದುಕಿನ ನೀತಿಯೆದುರು ಮುಜುಗರವಾಗಿ ಬಿಂಬಿತವಾಗುತ್ತದೆ.&lt;br /&gt;&lt;br /&gt;ಎಲ್ಲವುಗಳ ನಡುವೆ ಗಂಗೂಬಾಯಿ ಇಡಿಯ ಕಥೆಯೊಳಗಿನ ಸಾರವನ್ನೆಲ್ಲ ಅರಿತ ವ್ಯಕ್ತಿಪಾತ್ರವಾಗಿ ಒಮ್ಮೊಮ್ಮೆ ಕಾಣುತ್ತಾಳೆ. ಎಲ್ಲರೂ ಕಂಡಂತಿರುವ ಆಚಾರ್ಯರ ಬದುಕಿನ ಒಂದು ಪಾರ್ಶ್ವದ ಕಥೆಯನ್ನು ಮಗ ಕೃಷ್ಣಮೂರ್ತಿಯ ಯೋಚನೆಗಳು, ಎಡಬಿಡದೆ ಆತನನ್ನು ಕಾಡುವ ತಂದೆಯ ನೆನಪುಗಳು ಸಾರುತ್ತವೆ. ಯಾರೂ ನೇರವಾಗಿ ಕಂಡಿರದ ಆಚಾರ್ಯರರ ಬದುಕಿನ ಇನ್ನೊಂದು ಮಗ್ಗುಲಿನ ಕಥೆ ಪ್ರೇಯಸಿ ಗಂಗೂಬಾಯಿಯ ನೆನಪುಗಳಾಗಿ ಹೊರಳುತ್ತದೆ.&lt;br /&gt;&lt;br /&gt;ದೇವಸ್ಥಾನದ ಪೂಜಾರಿಯ ಮಗನಾಗಿ ಹುಟ್ಟಿದ ಆಚಾರ್ಯರು ಸದಾ ಜ್ಞಾನದಾಹವುಳ್ಳವರು. ಅನೇಕ ವಿಚಾರಗಳಲ್ಲಿ ಆಸಕ್ತಿ ಇರುವ ವ್ಯಕ್ತಿಯ ಜೀವನವು ಏಕಮುಖವಾಗಿ ನಡೆಯದೇ ಕವಲು ಕವಲಾಗಿ ಹಂಬಿಕೊಳ್ಳುವ ರೀತಿಯನ್ನು ಈ ಕಥೆಯಲ್ಲಿ ಕಾಣಬಹುದು. ಆಚಾರ್ಯರ ಹರೆಯದ ಪ್ರೇಯಸಿ ಅಲಕಾದೇವಿಯ ಸಾವು ಕುವೆಂಪುರವರ ‘ಕಾನೂರು ಹೆಗ್ಗಡತಿ’ಯ ಸಾವನ್ನು ನೆನಪಿಸಿದರೆ, ಕೆಲಕಾಲ ಪೋಸ್ಟ್ ಮಾಸ್ಟರ್ ವೃತ್ತಿಯಲ್ಲಿರುವಾಗ ಅಲಕಾದೇವಿಯ ಎಸ್ಟೇಟಿನಲ್ಲಿ ರೈಟರ್ ಆಗಿಯೂ ಕೆಲಸ ಮಾಡುವ ಆಚಾರ್ಯರು ಅಬಚೂರಿನ ಪೋಸ್ಟ್ ಮಾಸ್ಟರ್ ಪಾತ್ರವನ್ನೂ ನೆನಪಿಸುತ್ತಾರೆ.&lt;br /&gt;&lt;br /&gt;ಕಥೆಯ ಪಾತ್ರಗಳು:&lt;br /&gt;ಜಯತೀರ್ಥ ಆಚಾರ್ಯರು, ಗೆಳೆಯ ಗೋವಿಂದನ್ ನಾಯರ್ (ಕೇರಳದ ಕಮ್ಯುನಿಸ್ಟ್), ಮಗ ಕೃಷ್ಣಮೂರ್ತಿ, ವಿಧವೆ ಮಗಳು ಸಾವಿತ್ರಿ, ಅವಳ ಹನ್ನೆರಡು ವರ್ಷದ ಮಗ ಹರಿಕುಮಾರ, ಸೊಸೆ ಮೀರಾ, ಮೊಮ್ಮಗ, ಇಪ್ಪತ್ತು ವರ್ಷಗಳ ಪ್ರೇಯಸಿ ಗಂಗೂಬಾಯಿ, ಹರೆಯದ ಪ್ರೇಯಸಿ ಅಲಕಾದೇವಿ, ಹೆಂಡತಿ ರುಕ್ಮಿಣಿಯಮ್ಮ, ಜಮೀನ್ದಾರ್ ವಿಷ್ಣುಮೂರ್ತಿ, ಎಂ. ವಿ. ವಾರಿಯರ್, ವೆಂಕಪ್ಪ ನಾಯಕ, ವಿಷ್ಣುಮೂರ್ತಿಯನ್ನು ದತ್ತು ತಂದೆ ನರಸಿಂಹಭಟ್ಟರು, ನರಸಿಂಹ ಭಟ್ಟರ ಹೆಂಡತಿ (ವಿಷ್ಣುಮೂರ್ತಿಯ ಸಾಕುತಾಯಿ), ವಿಷ್ಣುಮೂರ್ತಿಯ ಹೆಂಡತಿಯ ವಿಧವೆ ತಂಗಿ.&lt;br /&gt;&lt;br /&gt;ಎರಡೂ ಕಥೆಗಳ ಕುರಿತು:&lt;br /&gt;&lt;br /&gt;‘ಮೌನಿ’ ಕಥೆಯಲ್ಲಿ ಸುತ್ತಲಿನ ವಾತಾವರಣದ ಬಗೆಗಿನ ನಿರೂಪಣೆಯು ಕಥೆಯ ಜೀವಂತಪಾತ್ರಗಳ ಸಂವಹನಕ್ಕೆ ಸಂವಾದಿಯಾಗಿ ನಿಲ್ಲುತ್ತದೆ. ಸುತ್ತಲಿನ ವಾತಾವರಣವೂ ಪಾತ್ರಗಳಷ್ಟೇ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಭಾವಾಭಿವ್ಯಕ್ತಿಯನ್ನು ಪಾತ್ರಗಳ ಮೂಲಕ ಮಾತ್ರವಲ್ಲದೇ ಸುತ್ತಲಿನ ವಾತಾವರಣ ವರ್ಣನೆಯಲ್ಲೂ ಕಾಣಬಹುದು. ‘ಆಕಾಶ ಮತ್ತು ಬೆಕ್ಕು’ ಕಥೆಯಲ್ಲಿ ಮಾನವೀಯ ಸಂಬಂಧಗಳ ಮೌಲ್ಯ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವುದನ್ನು ಕಾಣಬಹುದು. ಸಾಮಾಜವು ಈ ಕಥೆಯ ಪ್ರಮುಖ ಮುಖ.&lt;br /&gt;&lt;br /&gt;ಕಥೆಗಳ ಸಾಮ್ಯ:&lt;br /&gt;&lt;br /&gt;ಮಾತಿನೊಳಗಿನ ನಯ, ನಿಷ್ಠುರ ಗುಣಗಳು ಜೀವನದ ಹಾದಿಯಲ್ಲಿ ಎಷ್ಟರ ಮಟ್ಟಿಗಿನ ಪರಿಣಾಮ ಬೀರುತ್ತವೆಂಬುದು ‘ಮೌನಿ’ ಕಥೆಯೊಳಗಿನ ಅಪ್ಪಣ್ಣಭಟ್ಟರು ಹಾಗೂ ಕುಪ್ಪಣ್ಣಭಟ್ಟರುಗಳ ಪಾತ್ರರೂಪಗಳಾಗಿ ಕಾಣಸಿಗುತ್ತವೆ. ಒಬ್ಬ ವ್ಯಕ್ತಿಯ ಸ್ವಭಾವವೂ ಸಹ ಸಮಾಜದಲ್ಲಿ ಸಮಬೆರೆಯುವ ಸಾಮರ್ಥ್ಯವನ್ನು ತಂದುಕೊಡುತ್ತದೆ, ನಡುವಳಿಕೆಯ ರೀತಿಯು ಜೀವನಶೈಲಿಯನ್ನು ಕೊಡುತ್ತದೆ ಎಂಬ ಸತ್ಯದ ಅರಿವು ‘ಮೌನಿ’ ಕಥೆಯನ್ನೋದುತ್ತ ಅರಳುತ್ತ ಹೋಗುತ್ತದೆ.&lt;br /&gt;&lt;br /&gt;ಹಾಗೆಯೇ ‘ಆಕಾಶ ಮತ್ತು ಬೆಕ್ಕು’ ಕಥೆಯಲ್ಲಿ ಕಾಣಸಿಗುವ ಸಮಕಾಲೀನ ವ್ಯಕ್ತಿಗಳಾದ ಆಚಾರ್ಯರು ಮತ್ತು ನಾಯರ್ ಇವರ ಸ್ವಭಾವಗಳಲ್ಲಿನ ಭಿನ್ನತೆ ಅವರ ಜೀವನ ರೀತಿಯಲ್ಲೂ ವ್ಯತ್ಯಾಸ ಮೂಡಿಸಿರುತ್ತದೆ. ಅಂದರೆ ಬದುಕಿರುವಾಗಿನ ಪ್ರತಿಕ್ಷಣದ ಪರಿಣಾಮ ಸಮುದಾಯದ ಮೇಲೆ ಏನಾಗುತ್ತದೆಯೆಂಬುದು ಮುಖ್ಯವೆಂದು ಭಾವಿಸುವ ನಾಯರ್ ಹಾಗೂ ಜಯತೀರ್ಥಾಚಾರ್ಯರು ಇಬ್ಬರೂ ಜೀವನದುದ್ದಕ್ಕೂ ಬಯಸಿದ್ದು, ಎಸಗಿದ್ದು ಜನೋಪಕಾರವನ್ನೇ ಆದರೂ ಅದರ ರೀತಿ ಹಾಗೂ ಜೀವನಶೈಲಿಯೊಳಗಿನ ವ್ಯತ್ಯಾಸ ಗಮನಾರ್ಹವಾಗಿದೆ.‘ಮೌನಿ’ಯು ಮೌನವಾಗಿಯೇ ಮನತಟ್ಟಿದರೆ ‘ಆಕಾಶ ಮತ್ತು ಬೆಕ್ಕು’ ಆಗಸದಷ್ಟೇ ಒಗಟಾಗಿ ಕಾಡುವ ಕಥೆಯೆನಿಸುತ್ತದೆ. ಸರಳವಾಗಿ ಅರ್ಥೈಸಿಕೊಳ್ಳುವಂತೆ ಹೆಣೆದ ಈ ಎರಡು ಕಥೆಗಳು ಓದುತ್ತಿರುವಾಗಲೂ, ಓದಿಮುಗಿದಬಳಿಕವೂ ಸುತ್ತ ಸುಳಿಯುತ್ತಿದ್ದರೆ ಕಾರಣ ಮಾತ್ರ ಕಥೆಗಳೊಳಗಿನ ರಸ ಮತ್ತು ಸ್ವಾರಸ್ಯ.&lt;br /&gt;&lt;br /&gt;-ಶಾಂತಲಾ ಭಂಡಿ&lt;br /&gt;&lt;br /&gt;&lt;span style="font-size:85%;"&gt;(‘ಅನಂತಮುಖದಮೂರ್ತಿ’ ಗ್ರಂಥದಲ್ಲಿ ಪ್ರಕಟವಾದ ಬರಹ.)&lt;br /&gt;&lt;br /&gt;‘ಅನಂತಮುಖದಮೂರ್ತಿ’ ಯು.ಆರ್.ಅನಂತಮೂರ್ತಿಯವರ ಸಾಹಿತ್ಯ ಸಮೀಕ್ಷೆ&lt;br /&gt;೨೦೦೯ ಡಿಸೆಂಬರಿನಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ&lt;br /&gt;ಸಂಪಾದಕರು: ಅಹಿತಾನಲ(ನಾಗ ಐತಾಳ)&lt;br /&gt;ಪ್ರಕಾಶಕರು : ಸಾಹಿತ್ಯಾಂಜಲಿ, ಕ್ಯಾಲಿಫೋರ್ನಿಯಾ ಮತ್ತು ಅಭಿನವ ಬೆಂಗಳೂರು&lt;br /&gt;&lt;br /&gt;&lt;/span&gt;&lt;strong&gt;&lt;span style="font-size:130%;color:#003300;"&gt;ಡಾ ಅನಂತಮೂರ್ತಿಯವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ&lt;/span&gt; &lt;/strong&gt;&lt;span style="font-size:100%;color:#003300;"&gt;ಹೇಳ್ತಾ ಈ ಲೇಖನವನ್ನ ಇಲ್ಲಿ ನನ್ನ ಬ್ಲಾಗಲ್ಲಿ ಇಟ್ಕೋತಾ ಇದೀನಿ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-3691718788111283261?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/3691718788111283261/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=3691718788111283261' title='5 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/3691718788111283261'/><link rel='self' type='application/atom+xml' href='http://www.blogger.com/feeds/5495085842856428066/posts/default/3691718788111283261'/><link rel='alternate' type='text/html' href='http://www.shantalabhandi.com/2010_12_01_archive.html#3691718788111283261' title='ನನ್ನ ಅಂಗಳದಲ್ಲಿ ‘ಮೌನಿ’ಯ ಜೊತೆಗೆ ‘ಆಕಾಶ ಮತ್ತು ಬೆಕ್ಕು’'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_gIx6mG3I3fg/TRBaEwsWLeI/AAAAAAAAA4E/nN5mkT6mgyA/s72-c/URA_shantalabhandi.jpg' height='72' width='72'/><thr:total>5</thr:total></entry><entry><id>tag:blogger.com,1999:blog-5495085842856428066.post-3554297678722478325</id><published>2010-12-17T22:51:00.000-08:00</published><updated>2010-12-18T11:55:36.211-08:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ನೋಟು ಚಿಲ್ಲರೆಗಳ ನಡುವೆ</title><content type='html'>ಸುರೇಶ ಅಲ್ಲಿಯೂ ಸಲ್ಲದೇ ಇಲ್ಲಿಯೂ ಸಲ್ಲದೇ ಹೋದವನಂತೆ ಕಾರ್ನರ್ ಸೈಟಿನಲ್ಲಿ ಮನೆ ಕಟ್ಟಿ ಕೂತುಬಿಟ್ಟಿದ್ದೇನೆ ಅಂತ ತನ್ನ ಆರಾಮ ಖುರ್ಚಿಯಲ್ಲಿ ಕೂತು ಯೋಚಿಸುತ್ತಿರುವ ಹೊತ್ತಿಗೆ ಹೆಂಡತಿ ಸಾವಿತ್ರಿ ಬಿಸೀ ಚಹವನ್ನು ತಂದು ಅವನ ಮುಂದಿನ ಟೇಬಲ್ಲಿನಲ್ಲಿ ಕುಕ್ಕಿ ಹೋಗಿದ್ದಳು.&lt;br /&gt; ಚಹದ ಕಪ್ಪಿಗೆ ಕೈ ಹಾಕಿ ಇನ್ನೇನು ತುಂಬಿದ ಕಪ್ಪನ್ನು ಮೇಲಕ್ಕೆತ್ತಬೇಕು ಎನ್ನುವಷ್ಟರಲ್ಲಿ ಅಡುಗೆಮನೆಯಲ್ಲಿ ಪಾತ್ರೆ ಬಿದ್ದ ಸದ್ದಿಗೆ ಕೈ ಅದುರಿ ಬಿಸೀ ಚಹ ಸುರೇಶನ ಪ್ಯಾಂಟಿನ ಒಳಗಿದ್ದ ತೊಡೆಯನ್ನು ಚುರ್ರೆನ್ನಿಸಿತು. ಥಟ್ಟಕ್ಕನೇ ಚಹದ ಕಪ್ಪನ್ನು ಟೇಬಲ್ಲಿನ ಮೇಲಿಟ್ಟವನ ಕಿವಿಗೆ ಕೇಳಿಸಿದ್ದು ಹೆಂಡತಿ ಸಾವಿತ್ರಿಯ ಗೊಣಗಾಟ.  &lt;br /&gt; &lt;br /&gt; ‘ಮೂರನೇ ತಾರೀಖಿಗೇ ಮೂಲೆ ಅಂಗಡಿ ಮಾದಪ್ಪನಿಗೆ ಕಿರಾಣಿಸಾಮಾನಿನ ಲಿಶ್ಟು ಕಳಿಸಿದ್ದೇನೆ. ಆಗಲೇ ಇವತ್ತು ಹದಿಮೂರನೇ ತಾರೀಖು, ಇನ್ನೂ ಕಿರಾಣೀನ ಮನೆಗೆ ಕಳ್ಸಿಲ್ಲ. ಲಿಸ್ಟಿನ ಜೊತೇಲೇ ಸಾವಿರದ ಎಂಟುನೂರು ರೂಪಾಯಿನ್ನೂ ಕಳಿಸಿದ್ದೀನಿ. ಎಷ್ಟಾಗತ್ತೆ ಅಂತ ಲೆಕ್ಕಾಚಾರ ಮಾಡಿ ಚಿಲ್ಲರೆನಾದ್ರೂ ವಾಪಸ್ಸು ಕಳಿಸ್ತಾನೋ ಅದೂ ಇಲ್ಲ ಬೆಪ್ಪುಮುಂಡೇದು. ವಿಚಾರಿಸಿದ್ರೆ ಮಂಡಿಯವ್ರು ಕಳಿಸಿದ್ ತಕ್ಷಣ ಕಳಿಸ್ತೀನಿ ಕಿರಾಣಿ ಜೊತೀಗೇ ಚಿಲ್ರೆನೂ ಕಳಿಸ್ತೀನಿ ನಮ್ ಹುಡುಗನ್ ಹಾಕಿ ಅಂತಾನೆ ಬೆಪ್ಪುತಕ್ಕಡಿ ಮಾದಪ್ಪ. ಮುಂದಿನ್ ತಿಂಗಳಿಂದ ಬೇರೆ ಅಂಗಡಿ ನೋಡ್ಕೊಳ್ಳದೇ ವಾಸಿ. ಗೊತ್ತಿರೋನು, ಪಕ್ಕದ್ ಬೀದೀಲೇ ಮನೆ ಬೇರೆ, ಇದೇ ಬೀದೀಲೇ ಅಂಗಡಿ ಹಾಕೀದಾನೆ ಪಾಪ, ಹೆಂಗಾದ್ರೂ ಬದಕ್ಲಿ ಅಂತ ನಾವು ನೋಡಿದ್ರೆ ... ಮನ್ಷ ನಂಬಿಕಸ್ಥನೂ ಅಲ್ಲಾ ಅಂತ ಪಕ್ಕದ್ಮನೆ ದೇವೀರಿ ಅಂತಿದ್ರು. ನಮ್ಮೆದ್ರುಗಡೆ ಚಂದಾಗೇ ಹಲ್ ಕಿಸೀತಾನೆ, ಈಚೆ ಬಂದ ಕ್ಷಣ ನಮ್ಮನ್ನೇ ಆಡ್ಕಂಡು ನಗ್ತಾನೆ, ನಂಬಬಾರ್ದು ಮಾತ್ರ ಮನ್ಷನ್ನ’ ಅಂತಿದ್ರು ನಿನ್ನೆ ರಾಯರ ಮಠದ ಭಜನೆಯಲ್ಲಿ ಸಿಕ್ಕಾಗ’ ಅಂತ ಊದ್ದಕ್ಕೆ ದೇವರ ಮುಂದಿನ ಅಗರಬತ್ತಿ ಹೊಗೆ ಬಿಟ್ಟಂಗೆ ಬಿಡ್ತಾನೇ ಇದ್ದಳು ಸಾವಿತ್ರಿ. &lt;br /&gt;&lt;br /&gt; ಕಪ್ಪಿನಲ್ಲಿ ಉಳಿದಷ್ಟು ಚಹವನ್ನ ಇದ್ದಷ್ಟೇ ಬಿಸಿಗೆ ಹಳ್ಳಿಮದ್ದು ಗಂಟಲಿಗರಿಸಿದಂಗೆ ಏರಿಸಿಕೊಂಡ ಸುರೇಶ. ಝಾಂಡೀಸಾದಾಗ ಹಳ್ಳಿ ಮದ್ದು ಕುಡ್ದು ವಾಂತಿ ಮಾಡಿದ್ದು ಮತ್ತೆ ನೆನಪಾಯ್ತು. ಸಿಂಕಿಗೆ ಹೋಗಿ ಬಾಯಿ ಮುಕ್ಕಳಿಸಿ ಬಂದ. ರೂಮಿಗೆ ಹೋಗಿ ಬೇರೆ ಪ್ಯಾಂಟು ಹಾಕ್ಕೊಂಡು ಚಹ ಚೆಲ್ಲಿದ್ ಪ್ಯಾಂಟನ್ನ ಮನೆಹಿಂದಿನ್ ಬಟ್ಟೆ ಒಗೆಯೋ ಕಲ್ಲಿಗೆ ಬಿಸಾಕಿದ. ಅದು ಅಲ್ಲೇ ಬಾಗಿಲ ಬುಡದಲ್ಲೇ ಬಿದ್ದಿದ್ದನ್ನೂ ತಲೆಗೆ ಹಾಕ್ಕೊಳ್ಳದೇ ಸಣ್ಣಗೇ ಸಿಳ್ಳೆ ಹಾಕೊಂಡು ರೂಮಿಗೆ ಬಂದ. ಕನ್ನಡಿ ಮುಂದೆ ನಿಂತ ಶಾಸ್ತ್ರ ಮಾಡಿ ಕೂದಲನ್ನ ಕೈಯ್ಯಲ್ಲೇ ಬಾಚಿಕೊಂಡು ಮನೆಯಿಂದ ಹೊರಗೆ ಬಂದೇ ಬಿಟ್ಟ. ಹೊರಗಿನ ಹವೆ ಪರವಾಗಿಲ್ಲ ಅನ್ನಿಸಿತು.&lt;br /&gt;&lt;br /&gt; ಚಪ್ಪಲಿ ಮೆಟ್ಟಿಕೊಂಡು ಈಗ ಸೀದ ಮಾದೇವಪ್ಪನ ಅಂಗಡಿ ಕಡೆ ಮುಖ ಮಾಡಿ ಹೊರಟ. ಅರ್ಧ ದಾರಿಗೆ ಬರೋಷ್ಟರಲ್ಲಿ ಗೊತ್ತಾಗಿದ್ದು ಮಗನ ಹಳೇ ಹಾವಾಯಿ ಚಪ್ಪಲಿ ಮೆಟ್ಟಿಕೊಂಡು ಬಂದಿದ್ದು. ನಾಲ್ಕು ಹೆಜ್ಜೆ ನಡೆದಿರಲಿಲ್ಲ, ಚಪ್ಪಲಿ ಬಾರು ಕಿತ್ತು ಪ್ಯಾರ್ ಬೇರೆ ಗಾನ್ ಬೇರೆ ಆಗಿ ಹಳೇ ಪ್ಯಾರಗಾನ್ ಚಪ್ಪಲಿಯ ಜಾಹೀರಾತು ಸುರೇಶನಿಗೆ ನೆನಪಾಗಿ ಚಪ್ಪಲಿಯನ್ನ ಅಲ್ಲೇ ರಸ್ತೆ ಪಕ್ಕಕ್ಕೆ ಬಿಸಾಕಿ ಪ್ಯಾರಗಾನ್, ಪ್ಯಾರಗಾನ್, ಪ್ಯಾರಗಾನ್ , ಪ್ಯಾರಗಾನ್... ಅಂತ ರಾಗವಾಗಿ ಹಾಡುತ್ತ ನಡೆದ. ಸುಮಾರು ಮುಂದೆ ಹೋದ ಮೇಲೆ ಯಾವುದೋ ಫ್ಯಾನಿನ ಜಾಹೀರಾತು ಹಿಂಗೇ ಬರ್ತಿತ್ತಲ್ಲ ಅಂತ ಅನ್ನಿಸೋಕೆ ಶುರುವಾಯ್ತು. ಯಾವ್ದು ಅಂತಲೆ ನೆನಪಾಗದೇ ತಲೆ ಕೆರೆಯುತ್ತ ನಡೆದ. &lt;br /&gt;&lt;br /&gt; ಮಾದೇವಪ್ಪ ಹಲ್ಕಿರಿದು ‘ಸುರೇಶಪ್ಪಾ ನಮಸ್ಕಾರ. ಏನು ತಮ್ಮ ಸವಾರಿ ಇಲ್ಲಿವರ್ಗೂ. ಸಾವಿತ್ರಮ್ಮಂಗೆ ಹುಸಾರಿಲ್ವ? ಅಂದವನು ಸುರೇಶನ ಉತ್ತರಕ್ಕೂ ಕಾಯದೇ ಅನ್ನುವುದಕ್ಕಿಂತ ಸುರೇಶನಿಗೆ ಉತ್ತರಿಸುವುದಕ್ಕೂ ಬಿಡದೇ ‘ಓಹೋ ಇವತ್ತು ಶೆನೀವಾರ.... ಅದ್ಕೇ ನಿಮ್ಮ ಸವಾರಿ ಈ ಕಡೆ ... ಹೆ ಹ್ಹೆ ಹ್ಹೆ’ ಅಂದ. &lt;br /&gt; &lt;br /&gt; ಈ ಮಾದೇವಪ್ಪ ಯಾವಾಗ ಶಕಾರಕ್ಕೆ ಸಕಾರ ಹಚ್ಚುತ್ತಾನೋ ಎಂಬುದು ಮುಸ್ಸಂಜೆಯಿಂದ ಬೀದೀಬಲ್ಬು ಹಾರುವತನಕವೂ ಅವನ ಅಂಗಡಿಯ ಮುಂದೇ ಕುಳಿತು ಅವರಿವರನ್ನು ಟೀಕೆ ಮಾಡುತ್ತ ಒಂದಾದ ಮೇಲೆ ಒಂದು ಸಿಗರೇಟು ಸೇದುತ್ತ ಕುಳಿತಿರುತ್ತಿದ್ದ ಆಚೆಬೀದಿಯ ಶೀನಂಗೂ ಗೊತ್ತಾಗದೇ ‘ಮಾದಪ್ಪನ್ನ ಅಣಕ ಮಾಡೋದು ಸಾನೇ ಕಷ್ಟ’ ಅಂತ ಊದ್ದ ಕೂದಲಡಿಯ ಕುತ್ತಿಗೆಯನ್ನ ತುರಿಸಿಕೊಳ್ಳುತ್ತಲೇ ಒಪ್ಪಿಕೊಂಡಿದ್ದ. ಅಂಥಾದ್ದರಲ್ಲಿ ಅಪರೂಪಕ್ಕೆ ಮಾದೇವಪ್ಪನನ್ನು ನೋಡುವ ಸಾದಾಸೀದಾ ಸುರೇಶನಿಗೆ ಮಾದೇವಪ್ಪ ಒಗಟಾಗಿ ಕಂಡಿದ್ದರಲ್ಲಿ ಅಂಥಾ ವಿಶೇಷವೇನಿರಲಿಲ್ಲ.&lt;br /&gt;&lt;br /&gt; ಆದರೂ ಮನೆಯಲ್ಲಿ ಬೆಳಗ್ಗೆದ್ದು ಮಾದೇವಪ್ಪನಿಗೆ ಹಚ್ಚಲಾಗಿದ್ದ ಊದುಬತ್ತಿ ತನ್ನ ಕಡೆ ತಿರುಗುವುದರೊಳಗಾಗಿ ಕಿರಾಣಿಯನ್ನು ಮನೆಗೆ ತಗೆದುಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇತ್ತು ಸುರೇಶನಿಗೆ. ಒಂದುವೇಳೆ ಕಿರಾಣಿ ಸಿಗದಿದ್ದರೂ ಕೊಟ್ಟದುಡ್ಡಿನ ಚಿಲ್ಲರೆಯನ್ನಾದ್ರೂ ತೆಗೆದುಕೊಂಡುಹೋಗದಿದ್ರೆ ಸುರೇಶನ ಇವತ್ತಿಡೀ ದಿನ ಚಿಲ್ಲರೆಯಾಗುವ ಎಲ್ಲ ಸೂಚನೆಯನ್ನೂ ಸಾವಿತ್ರಮ್ಮನ ಬೆಳಗಿನ ಊದುಬತ್ತಿ ಹೊಗೆ ಹೇಳಿಬಿಟ್ಟಿತ್ತು.&lt;br /&gt;&lt;br /&gt; ಅದೂ ಇದೂ ಮಾತಾಡೀ ಕೊನೇಲೀ ಕಿರಾಣಿ ಸಾಮಾನುಗಳನ್ನೆಲ್ಲ ತೂಗಿಸಿ ಅಂಗಡಿಯ ಹುಡುಗನ್ನ ಜೊತೇಲೇ ಕರೆದುಕೊಂಡು ಕಿರಾಣಿಯನ್ನ ಮನೆಗೆ ತರುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡೂ ಮುಕ್ಕಾಲು. ಗೇಟು ತೆರೆದು ಒಳಗೆ ಕಾಲಿಟ್ಟ ಸುರೇಶನಿಗೆ ಮೊದಲು ಕಂಡಿದ್ದು ಹಗ್ಗಕ್ಕೆ ತೂಗಾಡುತ್ತಿದ್ದ ಪ್ಯಾಂಟು. ಮೊನ್ನೆಯಷ್ಟೇ ಮಗ ಹೊಸಾ ಕೆಲಸ ಸಿಕ್ಕಾಗ ಕೊಡ್ಸಿದ್ದು, ರ್ಯಾಂಗ್ಲರ್ ಪ್ಯಾಂಟು, ಎರಡೂವರೆ ಸಾವರ ಕೊಟ್ಟು ಗರುಡಾ ಮಾಲಿಂದ ತಂದಿದ್ದು. ಬಲತೊಡೆಯ ಭಾಗಕ್ಕೆ ಸಮಾ ಅಂಗೈಯಷ್ಟಗಲ ಕಲೆ. ಸಾವಿತ್ರಮ್ಮನ ಕೋಪ ಕಲೆಯಾಗಿ ಪರಿಣಮಿಸಿದ್ದು ಮಾದಪ್ಪನ ಅಂಗಡಿಯ ಕಿರಾಣಿಗಿಂತ ಹೆಚ್ಚು ಭಾರವೆನಿಸಿ ಗೇಟಿನ ಬಳಿಯೇ ಕಿರಾಣಿಯನ್ನೆಲ್ಲ ಇಟ್ಟು ಹುಡುಗನಿಗೆ ಅವನ್ನೆಲ್ಲ ಮನೆಯೊಳಗೆ ಇಡುವಂತೆ ಕೈಸನ್ನೆ ಮಾಡಿದರು. &lt;br /&gt;&lt;br /&gt; ಕಲೆಯಾಗಿದ್ದು ಸಾವಿತ್ರಮ್ಮನ ಕೋಪದ ಶಕ್ತಿಯೋ ಅಥವಾ ಬೆಳಿಗ್ಗೆ ಚೆಲ್ಲಿದ ಚಹದ ಪರಿಣಾಮವೋ ಅಂತೆಲ್ಲ ಯೋಚಿಸುತ್ತಲಿರುವಾಗ ಆರಿದ ಬಟ್ಟೆಗಳನ್ನು ಒಳಗೆತ್ತಲು ಬಂದಿದ್ದ ಸಾವಿತ್ರಮ್ಮ ಇಂಥ ಚಹದ ಕಲೆಗೆ ಯಾವುದಾದ್ರೂ ಹೊಸಾ ಸ್ಟೈನ್ ಕಿಲ್ಲರ್ ಸಿಗಬಹುದಾ ಅಂತ ಯೋಚಿಸುತ್ತ ಆರಿದ ಬಟ್ಟೆಗಳನ್ನ ಎತ್ತಿಕೊಂಡು ‘ಒಳಗ್ಬನ್ನಿ... ಊಟಮಾಡೋಣ’ ಅಂದು ಒಳನಡೆದರು.&lt;br /&gt;&lt;br /&gt;[‘ನಾನು’ ಎಂಬ ಪ್ರಯೋಗವಿಲ್ಲದೆ ನಾನು ಬರೆದ ಮೊದಲ ಕತೆಯಿದು. ‘ನಾನು’ ಎಂಬ ಪದ ಬಳಸದೇ ಬರೆಯುವುದು ಸರಾಗ ಅಂತ ನಿನ್ನೆ ಈ ಕತೆ ಬರೆದಾಗ ಅನ್ನಿಸಿದ್ದು. ನನ್ನನ್ನು ನಾನು ತಿರುಗಿ ನೋಡಿಕೊಂಡಾಗ ಬೇಕಾಗಬಹುದಾದ ಮಾಹಿತಿಗಾಗಿ ಇಲ್ಲಿ ಈ ವಾಕ್ಯವನ್ನು ಬರೆದಿಟ್ಟುಕೊಳ್ಳುತ್ತಿದ್ದೇನೆ]&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-3554297678722478325?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/3554297678722478325/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=3554297678722478325' title='4 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/3554297678722478325'/><link rel='self' type='application/atom+xml' href='http://www.blogger.com/feeds/5495085842856428066/posts/default/3554297678722478325'/><link rel='alternate' type='text/html' href='http://www.shantalabhandi.com/2010_12_01_archive.html#3554297678722478325' title='ನೋಟು ಚಿಲ್ಲರೆಗಳ ನಡುವೆ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>4</thr:total></entry><entry><id>tag:blogger.com,1999:blog-5495085842856428066.post-495623394525574382</id><published>2010-11-18T13:26:00.000-08:00</published><updated>2010-11-18T18:23:11.945-08:00</updated><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ತಾರೆ ಅರಳುವ ಹೊತ್ತು</title><content type='html'>ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು&lt;br /&gt;ಆ ಹಾದಿಯಲಿ ಹಗಲು ಸರಿದು ಹೋಗುವ ಹೊತ್ತು&lt;br /&gt;ಮುಡಿವ ಮಲ್ಲಿಗೆ ಮೊಗ್ಗು ಅರೆಬಿರಿವ ಹೊತ್ತು&lt;br /&gt;ಚಂದಿರನ ಆಗಸದಿ ಅರಸಿ ಅರಸುವ ಹೊತ್ತು&lt;br /&gt;ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು&lt;br /&gt;&lt;br /&gt;ಮೊರೆವ ಅಲೆ ದಡನ  ತೋಯಿಸುವ ಹೊತ್ತು&lt;br /&gt;ತೆರೆದ ಅಲೆ ದಡನ ತೆಕ್ಕೆ ಸೇರುವ ಹೊತ್ತು&lt;br /&gt;ನೀರ್ಚುಕ್ಕಿ ನೂಪುರನ ಚುಂಬಿಸಿದ ಹೊತ್ತು&lt;br /&gt;ಬೇಸರದಿ ಭಾನು ಬಾನಿಂದಿಳಿವ ಹೊತ್ತು&lt;br /&gt;ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು&lt;br /&gt;&lt;br /&gt;ನಗುವ ನೇಸರನು ನೇಪಥ್ಯ ಸೇರಿದ ಹೊತ್ತು&lt;br /&gt;ಚಕೋರ ಚಂದಿರಗೆ ಕಾಯುತಿಹ ಆ ಹೊತ್ತು&lt;br /&gt;ಚಂದ್ರವೀದಿಯಲೀಗ ಚಂದ್ರಕಿ ನಲಿವ ಹೊತ್ತು&lt;br /&gt;ತುಂಬುದಿಂಗಳು ಶಶಿಗೆ ಜನ್ಮವೀಯುವ ಹೊತ್ತು&lt;br /&gt;ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು&lt;br /&gt;&lt;br /&gt;ನಗುವ ತಾರೆ ನಲಿವ ತಾರೆ ಮಿಂಚುಮಿಂಚಿನ ತಾರೆ&lt;br /&gt;ಉದ್ದ ತೊಟ್ಟಿನ ತಾರೆ ಪುಟ್ಟ ತೊಟ್ಟಿನ ತಾರೆ&lt;br /&gt;ಹೊನ್ನ ತೊಟ್ಟಿನ ತಾರೆ ಬೆಳ್ಳಿ ತೊಟ್ಟಿನ ತಾರೆ&lt;br /&gt;ಹೊನ್ನ ನೂಲನು ತಾರೆ ನೇಯ್ವ ಬೆರಳನು ತೋರೆ&lt;br /&gt;ಅಲ್ಲಿ ನೋಡೋ ಗೆಳೆಯ ನಾ ತಾರೆ ಮುಡಿಯುವ ಹೊತ್ತು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-495623394525574382?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/495623394525574382/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=495623394525574382' title='6 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/495623394525574382'/><link rel='self' type='application/atom+xml' href='http://www.blogger.com/feeds/5495085842856428066/posts/default/495623394525574382'/><link rel='alternate' type='text/html' href='http://www.shantalabhandi.com/2010_11_01_archive.html#495623394525574382' title='ತಾರೆ ಅರಳುವ ಹೊತ್ತು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>6</thr:total></entry><entry><id>tag:blogger.com,1999:blog-5495085842856428066.post-8064794577405113982</id><published>2010-11-03T11:45:00.000-07:00</published><updated>2010-11-03T12:47:50.701-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ದೀಪವೆಂದರೆ ಅಲ್ಲಿ...</title><content type='html'>ಜಗವೆಂಬ ದೇಗುಲದಿ ಮಿನುಗುತಿದೆ ದೀಪ&lt;br /&gt;ಬತ್ತಿ ಹೊಸೆದವರಾರು ಹಣತೆ ಇಟ್ಟವರಾರು&lt;br /&gt;ತೈಲ ಎರೆದವರಾರು ಬೆಳಕ ಹನಿಸಿದರ್ಯಾರು&lt;br /&gt;ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?&lt;br /&gt;&lt;br /&gt;ದೀಪವೆಂದರೆ ಅರಿವು ದೀಪವೆಂದರೆ ಬೆಳಗು&lt;br /&gt;ದೀಪವೆಂದರೆ ಜನನ ದೀಪವೆಂದರೆ ಮರಣ&lt;br /&gt;ಜನನ ಮರಣದ ನಡುವೆ ಮಿನುಗುತಿದೆ ದೀಪ&lt;br /&gt;ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?&lt;br /&gt;&lt;br /&gt;ಮನದೊಳವ ಮಿನುಗಿ ಮಂದಹಾಸದ ದೀಪ&lt;br /&gt;ನಯನದೊಳ ಮಿನುಗಿ ಸುಜ್ಞಾನ ದೀಪ್ತಿ&lt;br /&gt;ಅರಿವೆಂಬ ಅರಮನೆಯ ಸುತ್ತ ದೀವಳಿಗೆ&lt;br /&gt;ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?&lt;br /&gt;&lt;br /&gt;ಕತ್ತಲೆಯ ಕನ್ನಡಿಗೆ ಇಂಬಾಗಿ ದೀಪ&lt;br /&gt;ಬೆತ್ತಲೆಯ ಬದುಕಿಗೆ ಉಡುಪಾಗಿ ದೀಪ&lt;br /&gt;ಹಗಲು ರಾತ್ರಿಯ ನಡುವೆ ಉರಿಯುತಿದೆ ದೀಪ&lt;br /&gt;ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?&lt;br /&gt;&lt;br /&gt;ಜಗದ ಗರ್ಭದ ನೆಲದಿ ನಗುತಲಿಹ ಬೆಳಕು&lt;br /&gt;ಜನಮನ ಜಗದಿ ಝಗಝಗ ಝಳಪು&lt;br /&gt;ದೇವನೊಬ್ಬ ನಾಮ ಹಲವು ದೀಪ ಹಚ್ಚಿದವನ ಹೆಸರು&lt;br /&gt;ನೀನಲ್ಲ ನಾನಲ್ಲ  ದೀಪ ಹಚ್ಚಿದವರು ಯಾರು?&lt;br /&gt;&lt;br /&gt;ಹಣತೆ ಮಡಿಲ ತೈಲ ಹಾಸಲಿ ಅರಳು ಬತ್ತಿ ಬೆಳಕ ಹಾದಿ&lt;br /&gt;ಮಿನುಗು ದೀಪ ಉರಿವ ದೀಪ ಬೆಳಕು ದೀಪ ಝಳಪು ದೀಪ&lt;br /&gt;ದೀಪವೆಂದರೆ ಅಲ್ಲಿ ನಾವು ನೀವು. &lt;br /&gt;ನೀನಲ್ಲ ನಾನಲ್ಲ ದೀಪಹಚ್ಚಿಟ್ಟವರು ಯಾರು?&lt;br /&gt;&lt;br /&gt;ಜಗವೆಂಬ ದೇಗುಲದಿ ಮಿನುಗುತಿದೆ ದೀಪ&lt;br /&gt;ಬತ್ತಿ ಹೊಸೆದವರಾರು ಹಣತೆ ಇಟ್ಟವರಾರು&lt;br /&gt;ತೈಲ ಎರೆದವರಾರು ಬೆಳಕ ಹನಿಸಿದರ್ಯಾರು&lt;br /&gt;ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಹಣತೆ, ಬತ್ತಿ, ತೈಲ, ಎಲ್ಲವೂ ನಾವೇ. ಹಣತೆ,ತೈಲ, ಬತ್ತಿ, ಎಲ್ಲವೂ ಒಟ್ಟಿಗಿದ್ದಾಗ ಮೇಲಿದ್ದಾನಲ್ಲ ಅವನು ದೀಪ ಹಚ್ಚುತ್ತಾನೆ. ಆಗ ಒಬ್ಬರಿಗೊಬ್ಬರು ಬೆಳಕಾಗುತ್ತೇವೆ. ಬೆಳಕೆಂದರೆ ನಾವೇ ಆಗಬಲ್ಲೆವು. ಒಂದೊಂದೇ ದೀಪ ಹಚ್ಚಿದ ಮೇಲಾದ ದೀವಳಿಗೆಯೇ ದೀಪಾವಳಿ. ಎಲ್ಲ ಮನೆ ಬಾಗಿಲುಗಳ ರಂಗೋಲೆಯೂ ಬೆಳಕಲ್ಲಿ ಅರಳಲಿ. ಹಚ್ಚಿಟ್ಟ ಹಣತೆಯಲ್ಲಿ ಹೊಳೆಯುತ್ತಿರಲಿ ದೀಪ. ದೀಪಾವಳಿ ಎಲ್ಲರಿಗೂ ಇನ್ನಷ್ಟು ಬೆಳಕು ತರಲಿ.&lt;br /&gt;ಎಲ್ಲರಿಗೂ ಇನ್ನಷ್ಟು ಒಳಿತಾಗಲಿ.&lt;br /&gt;ಎಲ್ಲರಿಗೂ ದೀಪಾವಳಿಯ ಶುಭಾಶಯ.&lt;br /&gt;&lt;br /&gt;ವಂದನೆಗಳೊಂದಿಗೆ,&lt;br /&gt;ಪ್ರೀತಿಯಿಂದ,&lt;br /&gt;-ಶಾಂತಲಾ ಭಂಡಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-8064794577405113982?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/8064794577405113982/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=8064794577405113982' title='16 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/8064794577405113982'/><link rel='self' type='application/atom+xml' href='http://www.blogger.com/feeds/5495085842856428066/posts/default/8064794577405113982'/><link rel='alternate' type='text/html' href='http://www.shantalabhandi.com/2010_11_01_archive.html#8064794577405113982' title='ದೀಪವೆಂದರೆ ಅಲ್ಲಿ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>16</thr:total></entry><entry><id>tag:blogger.com,1999:blog-5495085842856428066.post-8120804893584495416</id><published>2010-09-09T09:53:00.000-07:00</published><updated>2010-09-09T23:00:36.041-07:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಗುಲಾಬಿ ಬಣ್ಣದ ದುಪಟ್ಟಾ...!!! (ಸೀತಿ ಭಾಗ -೨)</title><content type='html'>ಒಂದೊಂದೇ ಅಗುಳು ಬಾಯಲ್ಲಿಡುತ್ತ ಯೋಚಿಸ್ತಾ ಅದೆಷ್ಟೋ ಹೊತ್ತಾಗಿರ್ಬೇಕು. ಆಗಲೇ  ಜನ ಖಾಲಿಯಾಗಿ ಮೆಸ್ಸಿನ ಖುರ್ಚಿಗಳೆಲ್ಲ ಆಕಳಿಸೋಕೆ ಸುರು ಮಾಡಿದ್ವು. ನಿಧಾನಕ್ಕೆ ಎದ್ದುಹೋಗಿ ಪ್ಲೇಟು ಮತ್ತು ಕೈ ತೊಳಕೊಂಡು ರೂಮಿನ ಕಡೆ ವಾಪಸಾಗ್ತಾ ಇದ್ದೆ.  ನನ್ನಗಿಂತ ಹತ್ತು ಅಡಿ ಮುಂದಕ್ಕೆ ಒಬ್ಬಳೇ ಹುಡುಗಿ ಹೋಗ್ತಾ ಇದ್ಲು ಊಟ ಮುಗ್ಸಿ. ಸರಸರ ನಡಕೊಂಡು ಹೋಗಿ ಅವಳ ಮುಖನೋಡಿ ಮಾತಾಡಿದ್ ಮೇಲೆ ಧೈರ್ಯ ಬಂತು. &lt;br /&gt;&lt;br /&gt;ಮನಸ್ಸು ಹೆಂಗಿತ್ತು ಅಂದ್ರೆ ಆ ನಿಶ್ಶಬ್ಧದಲ್ಲಿ  ಒಬ್ಬಳೇ ನಡಕೊಂಡು ಹೋಗ್ತಿರೋ ಅವಳೇ ಸೀತೀನಾ ಅಂತೆಲ್ಲ ಅರೆಕ್ಷಣದಲ್ಲಿ ಯೋಚಿಸಿ ಅರ್ಧಂಬರ್ಧ ಧೈರ್ಯ ಮತ್ತು ಆ ಅನಾಥಭಾವದೊಳಗಿನ ಅಸಹಾಯಕತೆ ಅವಳನ್ನ ಹಿಡಿದು ಮಾತಾಡಿಸೋ ಹಾಗೆ ಮಾಡಿಬಿಡ್ತು. ಪರಿಚಯ ಮಾಡಿಕೊಳ್ಳೋ ಬದಲು ನಾನು ನೂರನೇ ನಂಬರ್ ರೂಮಲ್ಲಿದೀನಿ ಅಂತಲೇ ಮೊದಲಿಗೆ ಹೇಳಿದ್ದೆ. ಹೌದಾ? ಅಂತ ಕೇಳಿದವಳ ಮಾತಿನೊಳಗೆ ಭಾವಗಳ ಗುರ್ತೇ ಸಿಗಲಿಲ್ಲ. ಮತ್ತೆ ನಾನಾಗೇ ಮಾತಾಡೋಕೆ ಏನೂ ತೋಚ್ಲಿಲ್ಲ. ಜೊತೇಲೇ ಹೆಜ್ಜೆ ಹಾಕಿದ್ರೆ ಮಧ್ಯೆ ಯಾವುದೋ ರೂಮಿನೊಳಗೆ ಅವಳು ಹೊರಟುಹೋದ್ಲು. &lt;br /&gt;&lt;br /&gt;ಆಗಲೇ ಮತ್ತೆ ಅರಿವಾಗಿದ್ದು, ಜೊತೇಲಿ ಎಲ್ಲೀತನಕ ಯಾರೇ ಬಂದ್ರೂ ನೂರನೇ ನಂಬರ್ ರೂಮಿನೊಳಗೆ ಮಾತ್ರ ನನ್ನ ಜೊತೆ ಯಾರೂ ಬರೋಲ್ಲ ಅನ್ನೋದು. ರೂಮಿನ ಬೀಗ ತೆಗೆದು ರೂಮೊಳಗೆ ಹೊಕ್ಕೆ. &lt;br /&gt;&lt;br /&gt;ಹುಡುಗ ಮತ್ತೆ ನೆನಪಾದ. ಅಪ್ಪ ನೆನಪಾದ್ರು. ಅಮ್ಮ ನೆನಪಾದ್ರು ಅನ್ನೋದಕ್ಕಿಂತ ಮರೆತೇ ಇರಲಿಲ್ಲ ಅನ್ನೋದೇ ಸರಿ.  ಯಾಕೆ ಇವರೆಲ್ಲ ನನ್ನನ್ನ ತಮ್ಮ ಪರಿಧಿಯೊಳಗೇ ಇಟ್ಕೊಂಡು ಪ್ರೀತಿ ಮಾಡ್ತಾರೆ ಅನ್ನಿಸಿತು. ಮತ್ತೆ ನಾನಾದರೂ ಅಷ್ಟೇ, ಇದೇ ಹುಡುಗನ್ನ ಮದ್ವೆ ಆಗ್ಬೇಕು ಅನ್ನೋ ಕಾರಣಕ್ಕೆ ಮುಂದೆ ಓದ್ಬೇಕು ಅನ್ನೋ ನಿರ್ಧಾರ ತಗೊಂಡು ಅಪ್ಪನ ಮಾತನ್ನ ಮೀರಿ ಇಲ್ಲೀತನಕ ಬಂದಿದ್ದೀನಿ ಅಂದ್ರೆ...&lt;br /&gt;ಏನೇ ಆದ್ರೂ ವಾಪಸ್ಸಾಗ್ಬಾರ್ದು, ಅವರೆಲ್ಲ ಬಾ ಅನ್ನೋತನಕ ಊರಿಗೂ ಹೋಗ್ಬಾರ್ದು. ನಿರ್ಧರಿಸಿಯಾದಮೇಲಿನ ನಿಟ್ಟುಸಿರು. ಸೋಪು ಬ್ರಷ್ ತಗೊಂಡು ಬಾತ್ ರೂಮುಗಳಿರೋ ಕಡೆ ಹೊರಟೆ. &lt;br /&gt;ರೂಮಿಗೆ ಬಂದು ಮಲಗಿದ್ರೆ ಸ್ವಲ್ಪ ಹೊತ್ತು ನಿದ್ರೆ ಬರಲೇ ಇಲ್ಲ ಅನ್ನೋದು ಮಾತ್ರ ಗೊತ್ತು, ಬೆಳಿಗ್ಗೆ ಶ್ರೀನಗರದ ಹತ್ತಿರ ಬಂದ ಟ್ರೇನು ಕೂಗಿದಾಗ್ಲೇ ಎಚ್ಚರವಾಯ್ತು. ಗಂಟೆ ಐದೂವರೆ. &lt;br /&gt;&lt;br /&gt;ಎದ್ದು ಹೊರಬಂದುನೋಡಿದ್ರೆ ಆಗಲೆ ದೊಡ್ಡ ಬಾಯ್ಲರಿನ ಪುಟ್ಟ ನಲ್ಲಿಯ ಮುಂದೆ ಸಾಲು ಸಾಲು ಬಕೀಟು. ಹಿಂದೆ ನನ್ನ ಬಕೀಟು ಇಟ್ಟೆ. ಬಕೀಟಿನ ಹೊಸಹೊಳಪನ್ನು ಕಂಡ ಧ್ವನಿಯೊಂದು ಪ್ರಷ್ನೆ ಕೇಳ್ತು, ಪ್ರೀವಿಯಸ್ ಈಯರ್ರಾ? ಯಾವ ಡಿಪಾರ್ಟ್ಮೆಂಟು? ಅಂತ. &lt;br /&gt;ಜಿಯಾಗ್ರಫಿ ಅಂತ ಹೇಳಿ ಅಲ್ಲೇ ನಿಂತೆ. &lt;br /&gt;&lt;br /&gt;ಯಾವ ರೂಮಲ್ಲಿರೋದು? ಮತ್ತೊಂದು ಪ್ರಷ್ನೆ.&lt;br /&gt;&lt;br /&gt;ನೂರನೇ ನಂಬರ್ರು.&lt;br /&gt;&lt;br /&gt;ನೂರಾ? ಆ ರೂಮು ಯಾರ್ಗೂ ಕೊಡಾಂಗಿಲ್ಲಲ್ಲ!&lt;br /&gt;&lt;br /&gt;ನಂಗೆ ಕೊಟ್ಟಿದಾರೆ, &lt;br /&gt;&lt;br /&gt;ಮುಖ ಮುಖ ನೋಡಿಕೊಂಡಾಗ್ಲೇ ಗೊತ್ತಾಗಿದ್ದು ಅಲ್ಲಿ ಇನ್ನೂ ಎರಡ್ಮೂರು ಮುಖಗಳಿದ್ವು ಅನ್ನೋದು. ಇವತ್ತು ಬೆಳಗಾಗಿದೆ. ನಿನ್ನೆ ರಾತ್ರಿಯ ಭಯ, ಭಾವ ಏನೂ ಇರಲಿಲ್ಲ. ನಿರ್ಧಾರ ಮಾತ್ರ ಗಟ್ಟಿಯಾಗಿತ್ತು ಬೆಳಗಿನ ಈ ಬೆಳಕಿನಲ್ಲಿ. ನಾನು ಇದೇ ರೂಮಲ್ಲಿರಬೇಕು, ಇನ್ನೂ ತುಂಬ ಜನಕ್ಕೆ ನೂರನೆ ನಂಬರ್ರು ಅನ್ನೋ ಉತ್ತರ ಆಶ್ಚರ್ಯವಾಚಕಾನೋ, ಪ್ರಶ್ನಾರ್ಥಕಾನೋ ಆದ್ರೂ ಸರಿಯೇ. ನಾನು ಈ ವಿಚಾರಕ್ಕೆ ಪೂರ್ಣವಿರಾಮ ಕೊಟ್ಟು ಈ ವರ್ಷ ಪೂರ್ತಿ ಇದೇ ರೂಮಲ್ಲಿರ್ತೀನಿ ಅನ್ನೋದನ್ನ ನಿರ್ಧರಿಸಿಯಾಗಿತ್ತು. ಸ್ನಾನವಾದ ಮೇಲೆ ತೊಟ್ಟುಕೊಳ್ಳೋ ಬಟ್ಟೆ ಬರೆ ತರೋಣವೆಂದು ರೂಮಿಗೆ ಬಂದೆ. &lt;br /&gt;&lt;br /&gt; ಅರೆರೆ! ಬ್ಯಾಗೇ ಕಾಣಿಸ್ತಿಲ್ಲ! ಈ ಕಡೆ ತಿರುಗಿದ್ರೆ ಕಾಟಿನ ಮೇಲೆ ಬಿಳೀ ಚೂಡಿದಾರಕ್ಕೆ ಹೊದಿಕೆಯಾಗಿ ಗುಲಾಬಿ ಬಣ್ಣದ ವೇಲು. ಹೊರಗೆ ಹೋಗೋ ಮೊದಲು ಬ್ಯಾಗಿನಿಂದ ನಾನೇ ತೆಗೆದಿಟ್ಟದ್ದ? ಗುಲಾಬಿ ಬಣ್ಣದಲ್ಲಿ ನಗ್ತಾ ಕುಂತಿದೆ. ಮೆತ್ತನೆಯ ದುಪಟ್ಟಾ. ಕೆನ್ನೆಗೆ ಒತ್ತಿಕೊಂಡ್ರೆ ನವಿರುಭಾವ ಬರೋಹಾಗೆ. ಈ ದುಪಟ್ಟಾ ನನ್ನದೇ ಅಂದುಕೊಂಡ್ರೆ ಇನ್ನೆಂತದೋ ಪುಳಕ. ಅಷ್ಟು ಪ್ರೀತಿ ಬಿಳೀ ಬಣ್ಣಕ್ಕೆ ಗುಲಾಬಿಯ ಹೊಂದಿಕೆ ಅಂದರೆ. ನನ್ನ ಮತ್ತು ಹುಡುಗನ ಹೊಂದಿಕೆಯ ಹಾಗೆ.&lt;br /&gt;&lt;br /&gt;ನಾನು ಬಿಳಿ, ಅಂವ ಗುಲಾಬಿ ಅಂದುಕೊಂಡೆ. ಅಲ್ಲಲ್ಲ, ಗುಲಾಬಿ ಅವಗೆ ಹೋಲಿಕೆ ಆಗೊದಲ್ಲ, ನಾನೇ ಗುಲಾಬಿ ಅಂತೆಲ್ಲ ಯೋಚಿಸುತ್ತ ಬತ್ಟೆ ಎತ್ತಿಕೊಂಡು, ರೂಮಿನ ಬಾಗಿಲು ಭದ್ರಪಡಿಸಿ ಬಾತ್ ರೂಮಿನ ಎದುರು ಬಂದಾಗ ಮತ್ತೆ ನೆನಪಾಯ್ತು. ಮೊದಲೇ ಎತ್ತಿಟ್ಟುಕೊಂಡ ಬಟ್ಟೆ ಇತ್ತು, ಆದ್ರೆ ಬ್ಯಾಗು ರೂಮಲ್ಲೆಲ್ಲೂ ಕಾಣಿಸದೇ ಇದ್ದದ್ದು!!!&lt;br /&gt;&lt;br /&gt;ಈಗ ಮತ್ತೆ ಭಯ ಆವರಿಸೋಕೆ ಶುರುವಾಯ್ತು.   ಎಲ್ಲಕ್ಕಿಂತ ಹೆದ್ರಿಕೆಯಾಗಿದ್ದೆಂದರೆ ಬ್ಯಾಗಿನಿಂದ ಬಟ್ಟೆಯನ್ನು ನಾನು ಹೊರಗೆ ಎತ್ತಿಟ್ಟಿರಲೇ ಇಲ್ಲ. ಈ ಬಟ್ಟೆ ಹೊರಗೆ ಕಾಟಿನ ಮೇಲೆ ಬಂತಾದರೂ ಹೆಂಗೆ?&lt;br /&gt;&lt;br /&gt;ಬೆಳಕಿನೊಳಗೆ ಬಣ್ಣ ಮಾತ್ರವಲ್ಲ, ಭಯವೂ ಇದೆ ಅನ್ನಿಸೋಕೆ ಶುರುವಾಯ್ತು. ಸೀತಿಯಿನ್ನೂ ಅದೇ ರೂಮಲ್ಲಿದ್ದಾಳ ಅಂತ ಯೋಚನೆ ಬರೋಷ್ಟರಲ್ಲಿ ದುಗುಡ ಇಡೀ ಮೈಯಲ್ಲಿ ಹರಿದು ಕಣ್ಣಲ್ಲಿ ಹೊರಗೆ ಬಂತು.&lt;br /&gt;&lt;br /&gt;&lt;em&gt;&lt;strong&gt;ಹಬ್ಬ ಮುಗೀಲಿ, ಮತ್ತೆ &lt;a href="http://www.shantalabhandi.com/2010_08_01_archive.html#2200476969103510482"&gt;ಸೀತಿ &lt;/a&gt;ಬರ್ತಾಳೆ.&lt;/strong&gt;&lt;/em&gt;&lt;br /&gt;&lt;br /&gt;ಎಲ್ರಿಗೂ ಹಬ್ಬದ ಶುಭಾಶಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-8120804893584495416?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/8120804893584495416/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=8120804893584495416' title='14 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/8120804893584495416'/><link rel='self' type='application/atom+xml' href='http://www.blogger.com/feeds/5495085842856428066/posts/default/8120804893584495416'/><link rel='alternate' type='text/html' href='http://www.shantalabhandi.com/2010_09_01_archive.html#8120804893584495416' title='ಗುಲಾಬಿ ಬಣ್ಣದ ದುಪಟ್ಟಾ...!!! (ಸೀತಿ ಭಾಗ -೨)'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>14</thr:total></entry><entry><id>tag:blogger.com,1999:blog-5495085842856428066.post-2200476969103510482</id><published>2010-08-26T22:43:00.000-07:00</published><updated>2010-08-26T23:08:07.597-07:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಸೀತಿ</title><content type='html'>ಇವತ್ತಿನ್ನು ಬೇರೆ ಎಂತ ಇಲ್ಲೆ, ಇದು ಅಮವಾಸ್ಯೆಯೇ ಸೈ ಅಂತ ಕುಳಿತವಳಿಗೆ ದೂರದಲ್ಲಿ ಅಡಕತ್ತರಿಯನ್ನ ಅಗಲಿಸಿಟ್ಟ ಹಾಂಗೆ ಚಂದಿರ ಕಂಡ. ಓಹೋ ಬಿದಿಗೆಯೋ ತದಿಗೆಯೋ ಸೈ ಅಂದುಕೊಂಡೆ. ಕಶಾಯಕ್ಕೆ ಮೆಂತೆ ಒಂದು ಹಿಡಿ ಹಾಕ್ಲನೆ? ಅಂತ ಅಮ್ಮಮ್ಮ ಕರೆದದ್ದಕ್ಕೆ ದೊಡ್ಡಮ್ಮ ಬ್ಯಾಡ ಬ್ಯಾಡ, ತಂಡ್ಯಾಘೋಕು ಅಂದಿದ್ದಷ್ಟೇ ಕೇಳಿದ್ದು. ಮತ್ತೆಲ್ಲ ಅದೇ ಯೋಚನೆ. &lt;br /&gt;&lt;br /&gt;ಹಾಂಗಾದರೆ ೧೦೦ನೇ ನಂಬರ್ ರೂಮನ್ನ  ಯಾರಿಗೂ ಕೊಡದಿದ್ದಕ್ಕೆ  ಸರಿಯಾದ ಕಾರಣ ಯಾವ್ದು. ಸೀತಿ ಹೆಂಗೆ ಸತ್ತಳು? ಸತ್ತದ್ದ? ಕೊಲೆಯ? ಆತ್ಮಹತ್ಯೆ ಇರ್ಬಹುದ? ಎಂಥ ಚೆಂದ ಹೆಸರು, ಸೀತಿ. ಅಷ್ಟು ಚೆಂದದ ಹೆಸರಿನವ್ಳು ಎಂತಕೆ ಸತ್ತದ್ದು? ಅಂತ ಯೋಚನೆ. ಹಾಂಗೇ ಯೋಚನೆ ಹಿಂದೆ ಹೋದರೆ ಬರೀ ನೆನಪು. ತೀರ ಹಳೇದಲ್ಲ, ಮೊನ್ನೆ ಮೊನ್ನೆಯದಷ್ಟೇ ಮೂರು ಮಡಿಕೆ ಅಡಿಯದ್ದು.&lt;br /&gt;&lt;br /&gt;ಮೆರಿಟ್ ಅಲ್ಲಿ ಸೀಟು ಸಿಕ್ಕರೂ ಹಾಸ್ಟೆಲಲ್ಲಿ ಗೋಳು. ಲೇಟ್ ಎಡ್ಮಿಷನ್ ಆದವರು ಹಾಸ್ಟೆಲ್ ಅಲ್ಲಿ ಒಂದು ರೂಮು ಯಾರಾದ್ರೂ ಬಿಟ್ಟು ಹೋಗೋತನಕ ಕಾಯ್ಬೇಕು, ಸಾಲಲ್ಲಿ ನಿಂತು ಕಾಲೆಲ್ಲ ಸತ್ತೇಹೋಗಿತ್ತು. ಸ್ವಲ್ಪ ಆದ್ರೆ ಕುಸಿದುಬೀಳೋ ಹಾಗೆ. ಇನ್ನೇನು ನಂದೇ ಸರದಿ, ವಾರ್ಡನ್ ಮುಂದೆ ಹೋಗೋಷ್ಟರಲ್ಲಿ ಸೀರೆ ಉಟ್ಟ ವಾರ್ಡನ್ ಅಮ್ಮನಂಗೆ ಕಂಡು ಕಣ್ಣಲ್ಲಿ ಊದ್ದ ನೀರು. ಅರೆರೆ, ಒಂದೇ ಹೆಜ್ಜೆಗೆ ನೀರನ್ನೆಲ್ಲ ಒಳಗೆ ಎಳೆದಿದ್ದ? ಒಣಕಣ್ಣು, ಮಾತು ಆಚೆ ಬರೋಷ್ಟರಲ್ಲಿ. ಬಂಡವಾಳ ಅಂದ್ರೆ ಮಾರ್ಕ್ಸ್ ಕಾರ್ಡು, ಅದನ್ನೇ ಮುಂದಿಟ್ಟೆ. ಮೆರಿಟ್ ಅಲ್ಲಿ ಸೀಟು ಸಿಕ್ತು, ಹಾಸ್ಟೆಲಲ್ಲಿ ಸೀಟು ಸಿಗೋದೇ ಕಷ್ಟವಾಗ್ತಿದೆ ಅಂದೆ. &lt;br /&gt;&lt;br /&gt;ಅಮ್ಮನಂಗೆ ಕಂಡ ವಾರ್ಡನ್ನು ಅಮ್ಮನಂಗೆ ಇರಲಿಲ್ಲ. ಅಮ್ಮನೇ ಎನ್ನುವಂಗೆ ಮಾತು. ಅರೆಕ್ಷಣ ಮಾರ್ಕ್ಸ್ ನೋಡಿದಂಗೆ ಮಾಡಿದವ್ರು ಇವತ್ತು ಒಂದ್ಕೆಲ್ಸ ಮಾಡು, ಸಂಜೆತನಕ ನೋಡು, ಈ ಹಾಸ್ಟೆಲಲ್ಲಿ ಯಾರಾದ್ರೂ ಹುಡ್ಗೀರು ಫ್ರೆಂಡ್ಸ್ ಆದ್ರೆ ಅವರೊಟ್ಟಿಗೆ ಒಂದು ದಿನದ ಮಟ್ಟಿಗೆ ಉಳಕೋ, ನಾಳೆ ನಿಂಗೊಂದು ರೂಮು ಇದೇ ಹಾಸ್ಟೆಲಲ್ಲಿ ಸಿಗೋ ಹಾಂಗೆ ಮಾಡ್ಕೊಡ್ತೇನೆ, ಯಾವ್ದುಕ್ಕೂ ಸಂಜೆ ನಂಗೊಂದು ಕಾಲ್ ಮಾಡು, ಅಂತ ಒಂದಿಷ್ಟು ನಂಬರ್ ಬರ್ದಿರೋ ಚೀಟಿಯನ್ನ ಕೊಟ್ಟು ಹೊರಟೇ ಹೋದ್ರು ಅಮ್ಮನಂಥ ವಾರ್ಡನ್ ಮೇಡಮ್ಮು. &lt;br /&gt;&lt;br /&gt;ಐದು ವರ್ಷ ಒಂದೇ ಕಾಲಜಲ್ಲಿದ್ರೂ ಫ್ರೆಂಡು ಮಾತ್ರ ಒಬ್ಬಳೇ. ಅಂಥೋಳಿಗೆ ಇನ್ನು ಒಂದಿನಕ್ಕೆಲ್ಲ ಯಾರನ್ನ ಫ್ರೆಂಡು ಮಾಡ್ಕೊಳೋಕೆ ಸಾಧ್ಯ. ಸಂಜೆತನಕ ಕಾದು ಮತ್ತೆ ನೆನಪಾಗಿದ್ದು ವಾರ್ಡನ್ ಮೇಡಮ್ಮು ಕೊಟ್ಟ ಅದೇ ನಂಬರ್ರು. ಕಾಲ್ ಮಾಡಿ ಹದಿನೈದು ನಿಮಿಷದಲ್ಲಿ ಸ್ಕೂಟಿಯಲ್ಲಿ ಬಂದೇ ಬಿಟ್ಟರು. &lt;br /&gt;ಕೋಟಪ್ಪ, ಆ ನೂರನೇ ನಂಬರ್ ರೂಮಿದೆ ಅಲ್ಲ, ಅದನ್ನ ಓಪನ್ ಮಾಡಿ ಸ್ವಲ್ಪ ಕ್ಲೀನ್ ಮಾಡಿ ಈ ಹುಡುಗಿಗೆ ಕೊಡಿ, ಅಂದವರು ನಾನು ರೂಮಿನ ಒಳಗೆ ಹೋಗಿ ಗಟ್ಟಿ ಉಸಿರುಬಿಡೋತನಕ ನನ್ನ ಜೊತೇನೇ ಇದ್ರು. ಆಮೇಲೆ ಹೋದ್ರು. ಮತ್ತೆ ವಾಪಸ್ ಬಂದು ಏನೇ ತೊಂದ್ರೆ ಆದ್ರೂ ಒಂದು ಕಾಲ್ ಮಾಡು ಅಂದೇ ಹೋದದ್ದು.&lt;br /&gt;&lt;br /&gt;ಎಲ್ಲೇ ಹೋಗ್ಲಿ, ಇಂಥವರು ಒಬ್ಬರನ್ನ ಜೊತೆಗೆ ಕಳಿಸ್ತಾನೆ ದೇವ್ರು, ಇಂಥವರ ಪ್ರೀತಿ ಸದ್ಯುಪಯೋಗವಾಗ್ಲೀ ಅಂತಾನೇ ನನ್ನಂಥ ಪೆದ್ದುಗಳನ್ನೂ ಸೃಷ್ಟಿ ಮಾಡಿರ್ತಾನೆ ಅಂದುಕೊಂಡೆ. ಕೈಕಾಲು ತೊಳ್ಕೊಂಡು ಬಂದು ಬ್ಯಾಗು ಓಪನ್ ಮಾಡಿದ್ರೆ ಅದರಲ್ಲಿ ಮೇಲೆಯೇ ಸಿಕ್ಕಿದ್ದು ದಿನಾ ನಾ ಊಟ ಮಾಡುವ ತಟ್ಟೆ. ಅಮ್ಮ ಕೊನೇಲಿ ಮರೀದೆಲೆ ತುಂಬಿದ್ದರು ಅನ್ಸತ್ತೆ. ತಟ್ಟೆ ತೊಳೆಯೋಕೆ ಎರಡು ಹನಿ ಉದುರೇ ಹೋಯ್ತು. ಟವೆಲ್ಲು ಸಿಕ್ಕದೇ ಇಡೀ ಬ್ಯಾಗೆಲ್ಲ ತಡಕಾಡಿದೆ. ಅಮ್ಮ ಚಕ್ಕುಲಿಯನ್ನ ಕವರಲ್ಲಿ ಹಾಕಿ ಮೇಲಿಂದ ನ್ಯೂಸ್ ಪೇಪರಿನ ಒಂದು ಹಾಳೆಯನ್ನ ಸುತ್ತಿದ್ದರು. ಚೌತಿ ಹಬ್ಬಕ್ಕೆ ಮತ್ತೆ ಓಡಿ ಬರದೇನು ಬೇಡ, ಸರೀಗೆ ಅಭ್ಯಾಸ ಮಾಡು, ಸುಮ್ಮನೆ ಅಲ್ಲಿಂದಿಲ್ಲಿಗೆ ಒಂದಿನ ರಜಕ್ಕೆ, ಬರೀತೆ ಬಸ್ ಖರ್ಚು, ಅಂದ ಅಮ್ಮ ಚಕ್ಕುಲೀನ ಮರಿದೇ ಕಳಿಸಿದ್ದರಿರಬೇಕು. &lt;br /&gt;&lt;br /&gt;ಅಮ್ಮ ಸುತ್ತಿಕಳಿಸಿದ ಹಾಳೇನ ಬಿಸಾಕೋಕೆ ಮನಸಾಗದೇ ಎರಡಕ್ಷರ ಓದಿದ್ರೆ ಇಂಥದೇ ವಾಕ್ಯಗಳನ್ನ ಮತ್ತೆಲ್ಲೋ ಓದಿದೀನಿ ಅನ್ನಿಸಿ ಸರಿಯಾಗಿ ಓದಿದೆ. ಕೊನೇಲಿ ನನ್ನ ಹೆಸರೂ ಇತ್ತು. ನಾನೇ ಬರ್ದಿದ್ದು, ಅಲ್ಲೆಲ್ಲೋ ಪಬ್ಲಿಷ್ ಆಗಿದ್ದನ್ನ ಅಮ್ಮ ಬೇಕಂತಲೆ ಸುತ್ತಿ ಕಳಿಸಿರ್ತಾರೆ, ಅಮ್ಮ ಕಳಿಸಿದ ಏನನ್ನೂ ಮಗಳು ಬಿಸಾಕೋಲ್ಲ ಅನ್ನೋ ನಂಬಿಕೆಗೆ ಅಮ್ಮ ಹೇಳದೆಯೇ ಕಳಿಸಿದ ಇಂಥ ಅದೆಷ್ಟೋ ಹಾಳೆಗಳೇ ಸಾಕ್ಷಿ.  ಹಾಳೆ ಮಡಚಿ ಬ್ಯಾಗಿನಲ್ಲಿಟ್ಟು ಊಟಕ್ಕೆ ನಡೆದರೆ ಮೆಸ್ ಅಲ್ಲಿ ಎಲ್ಲ ಟೇಬಲ್ಲೂ ತುಂಬಿ ಹೋದಂಗೆ. ಒಂದೆರಡು ಚೇರ್ಸ್ ಖಾಲಿ ಇದ್ದ ಟೇಬಲ್ಲಿಗೆ ಕೂತು ಬಡಿಸಿಕೊಂಡ ಚಪಾತಿಯನ್ನ ಚೂರುಮಾಡೋದು ಸ್ವಲ್ಪ ಬಿಗಿಯೇ ಅನ್ನಿಸಿತು. ಹಾಂಗಾದ್ರೆ ನಮ್ಮ ಕಾಲೇಜಿನ ಸರ್ರು ಹೇಳಿದಂಗೆ ಇದು ಎಂ ಆರ್ ಎಫ್ ಟೈರೇ ಸೈ ಅಂತ ನೆನೆಸಿಕೊಂಡು ಒಬ್ಬಳಿಗೇ ನಗುಬಂತು. &lt;br /&gt;&lt;br /&gt;ಎಷ್ಟೊಂದು ಜನಕ್ಕೆ ಯುನಿವರ್ಸಿಟಿಯಲ್ಲಿ ಸೀಟು ಸಿಕ್ಕರೂ ಹಾಸ್ಟೆಲಲ್ಲಿ ಸೀಟು ಸಿಕ್ಕಿಲ್ಲಂತೆ. ಎಲ್ಲ ರೂಮೂ ತುಂಬಿ ನೂರನೇ ನಂಬರ್ ರೂಮನ್ನ ಯಾರಿಗೋ ಕೊಟ್ರಂತೆ, ಒಬ್ಬಳೇ ಹುಡ್ಗಿ ಇದಾಳಂತೆ ಆ ರೂಮಲ್ಲಿ. &lt;br /&gt;&lt;br /&gt;ರೂಮು ಕೊಟ್ರೂ ಅಲ್ಲಿ ರೂಮಿನ ಕಪಾಟು ಸಿಗಾಂಗೇ ಇಲ್ಲ, ಸೀತೀದು ಬಟ್ಟೆ ಬರೆ ಎಲ್ಲ ಅದ್ರಲ್ಲೇ ಇದೆ. ರೂಮು ಮಾತ್ರ ಎಮರ್ಜೆನ್ಸಿ ಕೊಟ್ಟಿರ್ತಾರೆ, ಅಷ್ಟೇ.&lt;br /&gt;&lt;br /&gt;ಯಾಕೆ, ಅವರ ಕಡ್ಯೋರು ಹೆಣ ತಗೋಂಡು ಹೋಗೋಕೆ ಬಂದೋರು ಅವಳ ಲಗ್ಗೇಜು ತಗಂಡು ಹೋಗ್ಲಿಲ್ವ?&lt;br /&gt;&lt;br /&gt;ಎಲ್ಲಿ ಹೆಣಕ್ಕೂ ಉನಿವರ್ಸಿಟಿಯವ್ರೇ ಗತಿ ಕಾಣ್ಸಿದ್ದಂತೆ, ಅವರ ಮನ್ಯೋರು ಮಗಳು ಮರ್ಯಾದೆ ತೆಗ್ದುಹೋದ್ಲು ಅನ್ನೋ ಕಾರಣಕ್ಕೆ ಯಾರೂ ಬರ್ಲೇ ಇಲ್ಲಂತೆ.&lt;br /&gt;&lt;br /&gt;ಮೂರುವರ್ಷ ಆಗಿತ್ತಂತೆ ಆ ರೂಮನ್ನ ಯಾರೂ ಉಪಯೋಗಿಸ್ದೆ, ಈ ವರ್ಷಾನೇ ಓಪನ್ ಆಗಿದ್ದು. &lt;br /&gt;&lt;br /&gt;ಆ ರೂಮಿನ್ ಬಾಗ್ಲು ತೆಗೀದೆ ಇದ್ರೂ ಕಿಟಕಿ ಬಾಗ್ಲು ಮಾತ್ರ ಆವಾಗಾವಗ ತೆಗ್ದೇ ಇರ್ತಿತ್ತು. ಕಿಟಕಿ ಬಾಗ್ಲು ತೆಗ್ದಿದ್ದಂಗೆ ಅನ್ಸಿದ್ರೆ ನಾ ಅಂತೂ ಆ ಕಡೆ ನೋಡದೇನೆ ಈ ಕಡೆ ಬಂದುಬಿಡ್ತೀನಪ್ಪ.  &lt;br /&gt;&lt;br /&gt;ಅದಕ್ಕೆ ನಂಗೆ ಹಾಸ್ಟೆಲಿನ್ ನೂರನೇ ನಂಬರ್ ರೂಮಿರೋ ಜಿ ವಿಂಗ್ ಅಂದ್ರೆ ಒಂಥರಾ ಮೈ ಜುಂ.  &lt;br /&gt;&lt;br /&gt;ಆ ರೂಮಲ್ಲಿರೋ ಹುಡ್ಗಿ ನಾನೇ ಅಂತ ಗೊತ್ತಿರದ ಹುಡ್ಗೀರು ಮಾತಾಡ್ತಲೇ ಇದ್ರು. ಈಗ ಕೈ ತೊಳೆದಾದ್ಮೇಲೆ ರೂಮಿಗೆ ವಾಪಸ್ಸಾಗೋದು ಹೆಂಗೆ? ಅಪ್ಪ ಹೇಳಿದಂಗೆ ಕೇಳಬೇಕಿತ್ತು. ಮಾಸ್ಟರ್ ಡಿಗ್ರೀ ಅದೂ ಇದೂಂತ ಊರು ಬಿಟ್ಟು ಬರ್ಲೇಬಾರದಿತ್ತು. ಅಪ್ಪನ ಬೇಜಾರು ಆರಿದಮೇಲೆ ಹೊರಟಿದ್ರೂ ಅಪ್ಪ ಜೊತೇಲೇ ಬಂದು ಎಲ್ಲ ವ್ಯವಸ್ಥೆ ಮಾಡಿಕೊಟ್ಟಾದ್ರೂ ಹೋಗ್ತಿದ್ರಾ? ವಾಪಸ್ಸು ಈಗಲೆ ಹೊರಟುಬಿಡೋಣಂದ್ರೆ ಊರಾದ್ರೂ ಹತ್ತಿರವಾ? ಮೂರು ತಾಸು, ಮೂರುತಾಸು ಬಸ್ ಪ್ರಯಾಣ ಮಾಡ್ಬೇಕು. ಈ ರಾತ್ರೀಲಿ ಹುಡ್ಗೀರನ್ನ ಹಾಸ್ಟೆಲಿಂದ ಹೊರಗೆ ಬಿಡೋದೂ ಇಲ್ಲ. ಸುಭದ್ರ ಕೋಟೆಯೊಳಗೆ ಅಭದ್ರ ನಡುಕ. ಅನಾಥ ಭಾವ.&lt;br /&gt;&lt;br /&gt;&lt;br /&gt;&lt;strong&gt;ಮುಂದುವರೀತದೆ, ಮತ್ತೆ ಬರೀತೇನೆ.&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-2200476969103510482?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/2200476969103510482/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=2200476969103510482' title='15 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/2200476969103510482'/><link rel='self' type='application/atom+xml' href='http://www.blogger.com/feeds/5495085842856428066/posts/default/2200476969103510482'/><link rel='alternate' type='text/html' href='http://www.shantalabhandi.com/2010_08_01_archive.html#2200476969103510482' title='ಸೀತಿ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>15</thr:total></entry><entry><id>tag:blogger.com,1999:blog-5495085842856428066.post-7776633766732999056</id><published>2010-08-20T22:42:00.000-07:00</published><updated>2010-08-22T15:13:58.173-07:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ಮಧ್ಯಾಹ್ನದ ಸಾರು</title><content type='html'>ಮುಗಿಲುಬಿದ್ದು ಮಳೆಯಾದ ದಿನಗಳಲ್ಲೋ, ಮಾಗಿಯ ಚಳಿಯಲ್ಲೋ, ಜಿಮುರು ಹನಿಯಲ್ಲೋ, ಬೆಳಗಿನ ಇಬ್ಬನಿಯಲ್ಲೋ ನಿನ್ನ ಪರಿಚಯವಾಗಿದ್ದರೆ ಖಂಡಿತ ಅದು ಪರಿಚಯವಾಗಿರದೇ ಪ್ರೀತಿಯಾಗೇ ಹೋಗುತ್ತಿತ್ತು. ಸುಡು ಬೇಸಿಗೆ ಮಧ್ಯಾಹ್ನ ನೀನು ಸಿಕ್ಕ ಗಳಿಗೆ ನಾನು ಒಗ್ಗರಣೆಗೆ ಕಬ್ಬಿಣದ ಹುಟ್ಟೊಳಗೆ ಎಣ್ಣೆ ಕಾಯಿಸಿಟ್ಟ ಹೊತ್ತು. ನೀನು ಯಾರು ಅಂತ ನನಗೆ ಗೊತ್ತಾದದ್ದು. ಅಲ್ಲಿಯತನಕವೂ ಅವರೆಲ್ಲರಿಗೆ ಏನು ಗೊತ್ತಿತ್ತೋ ಅದನ್ನೇ ನನಗೆ ಹೇಳಿದ್ದು, ನನಗೂ ಗೊತ್ತಾದದ್ದು. ಎಣ್ಣೆ ಆರಲುಬಿಟ್ಟು ನಿನ್ನ ಗುರುತು ಹಿಡಿದೆ ಅಂದರೆ ನೀನು ನನಗೆ ಬೇಕಾದ ವ್ಯಕ್ತಿ ಅನ್ನುವಷ್ಟು ಗೊತ್ತಿತ್ತು. &lt;br /&gt;&lt;br /&gt;ದಿನಕಳೆದ ಹಾಗೆ ಗೊತ್ತಾದ್ದೆಂದರೆ ನನಗೂ ನಿನಗೂ ಸೂರ್ಯ ಚಂದ್ರರಿಗಿರುವಷ್ಟು ಅಂತರವಿದೆಯೆಂಬುದು. ನಿನ್ನ ರಾತ್ರಿಗಳನ್ನೆಲ್ಲ ಬಗೆದು ನನ್ನ ಹಗಲಾಗಿಸಿಕೊಂಡೆ ಅಂದುಕೊಂಡೆ. ಬರಬರುತ್ತ ನೀನು ಹಗಲಿಗೂ ಬಿಜಿಯಾಗತೊಡಗಿ ರಾತ್ರಿಪಾಳಿಯ ಕೆಲಸಗಳೆಲ್ಲ ನನಗೇ ಬಿದ್ದವು. ನಾನು ಯಾವತ್ತೂ ನಿಶಾಚರಿಯೇ ಆದರೂ ನಿನ್ನ ಹಾಗೆ ಹಗಲುರಾತ್ರಿಗಳಲ್ಲಿ ಸಿಕ್ಕ ಹೊತ್ತನ್ನೆಲ್ಲ ಬದುಕಿಗೆ ಚಕ್ರವಾಗಿಸಿಕೊಂಡು ಬದುಕನ್ನೆಳೆಯುವುದು ಗೊತ್ತಿರಲಿಲ್ಲ. ಸಿಕ್ಕಹೊತ್ತನ್ನೆಲ್ಲ ಸುಮ್ಮನೇ  ಹೇರಿಕೊಂಡು ಭಾರವಾಗಿಸಿಕೊಂಡು ಬಾಗಿಹೋಗಿದ್ದೆ. ಅದಕ್ಕೇ ಇರಬೇಕು ತೂಕವನ್ನಿಷ್ಟು ಇಳಿಸಿಕೊಂಡು ಸ್ವಲ್ಪ ದಿನ ಹಗುರಾದೆ ಅಂದುಕೊಂಡೆ. ನೀನು ಬೆಳೆಯುತ್ತ ಹೋದೆ. &lt;br /&gt;&lt;br /&gt;ನೀನು ಮಾತ್ರ ಅರ್ಥವಾಗಲೇ ಇಲ್ಲ. ಅರ್ಥವಾದಷ್ಟೂ ನಿಗೂಢವಾದೆ. ಈಗಷ್ಟೇ ಕುದಿಯುತ್ತಲಿದ್ದ ನೀರು ಆ ಕ್ಷಣಕ್ಕೆ ತಣ್ಣಗೆ ಆರಿದ ಹಾಗೆ, ನೀನು ತಣ್ಣಗೋ, ಬಿಸಿಯೋ ಗೊತ್ತುಪಡಿಸಲೇ ಇಲ್ಲ. ಒಮ್ಮೆ ಅಮ್ಮನಂಥ ಮಮತೆಯಾದರೆ, ಇನ್ನೊಮ್ಮೆ ಅಪ್ಪನಂತೆ ಬೆಚ್ಚಗೆ. ಒಮ್ಮೆ ನೀನ್ಯಾರೂ ಅಲ್ಲದ ಹಾಗೆ. ನೀನೆಂದರೆ ಬಲು ಸೋಮಾರಿ ಅಂತ ನಾನು ಬಯ್ಯುವ ಹೊತ್ತಿಗೆ ನೀನು ಬಿಜಿಯಾಗಿರುತ್ತಿದ್ದೆ. ನೀನು ನಿದ್ರಿಸುವುದೇ ಇಲ್ಲ ಅಂತ ದೂರುವ ಹೊತ್ತಿಗೆ ನೀನು ಕಣ್ಮುಚ್ಚಿದ ಸದ್ದು. ನೀನು ನಿಶಾಚರಿ ಅಂದರೆ ನೀನು ಹಗಲೂ ನಿದ್ರಿಸುವುದಿಲ್ಲ ಅಂತ ನನಗೆ ಗೊತ್ತಿರಬೇಕು. ಅಂತೂ ನೀನು ಅರ್ಥವಾಗಲೇ ಇಲ್ಲ. &lt;br /&gt;&lt;br /&gt;ಸಾರು ಮಾಡಿಟ್ಟು ‘ಪ್ಲೀಸ್ ಒಂದು ಒಗ್ಗರಣೆ’ ಅಂದರೆ ನೀನು ಆ ಕ್ಷಣಕ್ಕೆ ರೆಡಿ. ಒಗ್ಗರಣೆಯ ಘಮಕ್ಕೆ ಸುಮಾರು ಮಂದಿ ಅಡುಗೆ ಚೆನ್ನಾಗಿದೆ ಅಂತ ಹೇಳಿದ ದಿನಗಳನ್ನು ನೀನು ಮರೆತರೂ ನಾನು ಕೃತಜ್ಞಳು. ಎಷ್ಟೋ ದಿನ ನೀನು ಇವತ್ತೊಂದು ಸಾರು ಮಾಡು ಅಂತ ನಾನು ಪೀಡಿಸಿದ್ದೇನೆ. ಅದಕ್ಕಾಗಿ ಕ್ಷಮಿಸು. ಆದರೂ ನೀನು ಮಾಡಿದ ಸಾರು ಇವತ್ತಿಗೂ ನನಗೆ ಪ್ರೀತಿ. ಎಷ್ಟೋ ಸರ್ತಿ ಕೆಟ್ಟದಾಗಿ ಒಗ್ಗರಣೆ ಕೊಟ್ಟ ಭಾಗ್ಯ ನನ್ನದು. ಸಲ್ಲಿಸಿಕೊಂಡ ಮಮತೆ ನಿನ್ನದು.  ನೀನು ಅರ್ಥವಾಗದೇ ಹೋದರೂ, ಅರ್ಥವಾಗದೇ ಇದ್ದರೂ.&lt;br /&gt;&lt;br /&gt;ಅಂಗಳದಲ್ಲಿಳಿಯಬೇಕು, ಕೆಸರು ಬೇಕು ಅಂದಾಗ ಸಿಗದ ಕೆಸರು ಕಾಡು ಹಾದಿಯಲ್ಲಿ ನಡೆಯುವಾಗಲಾದರೂ ಮುಂದೊಮ್ಮೆ ಸಿಕ್ಕಿತು. ಸಾಕು ಬಿಡು.  ಅಂಗಳದ ಬೆಳದಿಂಗಳು ಕಾಡುತ್ತಿದೆ, ಬೆಳದಿಂಗಳು ಸರಿದುಹೋಗದ ಹಾಗೆ ಚಪ್ಪರ ಹಾಕಿಸಯ್ಯ, ನನಗೆ ಬೆಳದಿಂಗಳು ಬೇಕು, ಬೆಳದಿಂಗಳಾಗಬೇಕು ಅಂತ ಅಂಗಲಾಚಿದರೆ ಊರಿದ್ದೂರೇ ಬೆಳದಿಂಗಳ ಕಾಣುವ ಹಾಗೆ ಮಾಡಿದೆಯಲ್ಲ, ಅಷ್ಟು ಸಾಕು. ನೀನು ಅರ್ಥವಾದಂತೆ. &lt;br /&gt;&lt;br /&gt;ನಾನು ನಿನಗೇನಾಗಬೇಕು ಅಂತ ನೀನು ಕೇಳಿದ ದಿನಗಳಲ್ಲಿ ನನಗೆ ಅನ್ನಿಸಿದ್ದು ಮಾತ್ರ ಇಷ್ಟೇ. ಏನೂ ಆಗದ, ಏನೂ ಆಗದೇ ಇರುವ ಸಂಬಂಧವಿದ್ದರೆ ಅದು ನಮ್ಮದು. ಇದಕ್ಕೂ ಮಿಕ್ಕಿ ಸಂಬಂಧವಿಲ್ಲದೇ ಇರುವ ಇಬ್ಬರನ್ನು ಬೇರೆಬೇರೆಯೇ ಗುರುತಿಸಿ ಇರದ ಸಂಬಂಧಕ್ಕೆ ಸಿಗದ ಬೆಲೆ ಅರ್ಥವಾದ ಹೊತ್ತಿಗೆ ನಾನು ನಿನಗೆ ಮಗಳಾಗಿರಬೇಕು ಅನ್ನಿಸಿದ್ದು ಸುಲಭದ್ದಲ್ಲ. ಆ ಹೊತ್ತಿಗೆ ನೀನು ಎಲ್ಲ ಸಂಬಂಧಗಳನ್ನು ಮೀರಿ ಬೆಳೆದಿರುತ್ತೀಯ, ಮಗಳೆ ಅನ್ನುವ ಹೊತ್ತಿಗೆ ನಾನು ಇನ್ನೊಂದು ತೀರದಲ್ಲಿರಬೇಕು ತಿರುಗಿ ನೋಡಲಾಗದಿರುವಷ್ಟು ಅನ್ನುವುದಿಷ್ಟೇ ಆಸೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-7776633766732999056?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/7776633766732999056/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=7776633766732999056' title='8 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/7776633766732999056'/><link rel='self' type='application/atom+xml' href='http://www.blogger.com/feeds/5495085842856428066/posts/default/7776633766732999056'/><link rel='alternate' type='text/html' href='http://www.shantalabhandi.com/2010_08_01_archive.html#7776633766732999056' title='ಮಧ್ಯಾಹ್ನದ ಸಾರು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>8</thr:total></entry><entry><id>tag:blogger.com,1999:blog-5495085842856428066.post-3625655040754947136</id><published>2010-07-20T21:17:00.000-07:00</published><updated>2010-07-20T21:51:56.990-07:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ಎಳ ನೀರು ಪಾಕ...</title><content type='html'>ಬರೆಯದೇ ಬಂದ ಬೇಸರದ ಮೇಲೆ ಧೂಳುಹಿಡಿದ ಹಳೇ ಕಡತವನ್ನೆಲ್ಲ ಸುರುವಿ ಕುಳಿತರೆ ನೋಟ್ಸಿನ ಕೊನೇ ಪುಟದಲ್ಲಿ ನಿನಗೆ ಹೇಳಬೇಕಿದ್ದ ಮಾತುಗಳೆಲ್ಲ ಸಿಕ್ಕವು. ಎಲ್ಲವನ್ನೂ ಒಂದು ಇಂಡಾಲಿಯಮ್ ಬೋಗುಣಿಯಲ್ಲಿ ನವಿರಾಗಿ ಸುರುವಿ ಒಂದಿಷ್ಟು ಬೆಲ್ಲ ಚೂರು ಉಪ್ಪು ಹಾಕಿ ಒಲೆಮೇಲಿಟ್ಟು ಕುದುಯುತ್ತದ ಅಥವಾ ಪಾಕ ಬರ್ತದಾ ಅಂತ ಕಾಯುತ್ತಲಿದ್ದರೆ ಅಂವ ಕಾಪಿ ಕುಡಿಯೋಣವಾ ಅಂದ. ಬೇಡ, ಹಿತ್ತಲ ಗಿಡದಲ್ಲಿ ಎಳೇ ತೆಂಗಿನಕಾಯಿದ್ದರೆ ಇಳಿಸು, ಎಳೆನೀರೇ ಸಾಕು ಅಂದೆ. &lt;br /&gt;&lt;br /&gt;ಎಳೆನೀರನ್ನ ಕುಡಿದಂವ ಯಾಕೇ ಇತ್ತೀಚೆಗೇನೂ ಬರೀತಿಲ್ಲ ಅಂತ ಕೇಳಿದ. ಎಳೆನೀರಿಗೆ ಶಕ್ತಿಯಿರ್ತದೆ ಅಂತ ಗೊತ್ತಿತ್ತು. ಇಷ್ಟು ಪ್ರಭಾವ ಬೀರ್ತದೆ ಅಂತ ಗೊತ್ತಿರಲಿಲ್ಲ.&lt;br /&gt;&lt;br /&gt; ಕಾಯೊಳಗಿಂದ ನೀರನ್ನ ಎಳಕೊಂಡು ಕುಡೀತೀವಲ್ಲ ಅದಕ್ಕಾಗಿ ಈ ನೀರಿಗೆ ಎಳನೀರು ಅಂತಾರ ಅಥವಾ ಎಳೇ ತೆಂಗಿನಕಾಯೊಳಗಿನ ನೀರಾದ್ದಕ್ಕೆ ಎಳೇನೀರು ಅಂತಾರ ಅಂತ ಕೇಳೋಣ ಅಂದುಕೊಂಡೆ. ಅಷ್ಟರೊಳಗೆ ಅಂವ ಕಾಫಿಮೇಕರ್ ವಿಷ್ಯ ಹೇಳಿದ. ಇನ್ಸ್ಟಂಟ್ ಕಾಪಿ ಅಷ್ಟು ಚೆನ್ನಾಗಿರಲ್ಲ ಅಂತಲೂ ಹೇಳಿದ. ನನಗೆ ಗ್ರೀನ್ ಟೀಯನ್ನ ಲೆಮನ್ ಗ್ರಾಸ್ ಇಂದ ಮಾಡ್ತಾರೆ ಅಂತ ಗೊತ್ತಿರಲಿಲ್ಲ ಅಂದೆ. ಅಷ್ಟ್ರಲ್ಲಿ ನೀರು ಖಾಲಿಯಾಗಿ ಸ್ಟ್ರಾ ಸೊರ್ ಅಂತು.  ಅಂವ ಕೆಲಸಕ್ಕೆ ಹೋದ. ನಾನು ನಿಂತೇ ಇದ್ದೆ.&lt;br /&gt;&lt;br /&gt;ಇಂಡಾಲಿಯಮ್ ಬೋಗುಣಿಯ ಸುತ್ತ ಗೋಡೆಗೆಲ್ಲ ಪಾಕ ಚಟ ಚಟ ಅಂಟಿಕೊಳ್ಳುತ್ತಿತ್ತು. ಪಾಕ ಬಂದಿದ್ದು ಹೇಳದೇ ಉಳಿದಿದ್ದ ಮಾತುಗಳದ್ದಾ ಅಥವಾ ಬೆಲ್ಲದ್ದ ಗೊತ್ತಾಗಲೇ ಇಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-3625655040754947136?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/3625655040754947136/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=3625655040754947136' title='12 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/3625655040754947136'/><link rel='self' type='application/atom+xml' href='http://www.blogger.com/feeds/5495085842856428066/posts/default/3625655040754947136'/><link rel='alternate' type='text/html' href='http://www.shantalabhandi.com/2010_07_01_archive.html#3625655040754947136' title='ಎಳ ನೀರು ಪಾಕ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>12</thr:total></entry><entry><id>tag:blogger.com,1999:blog-5495085842856428066.post-5560354147261777889</id><published>2010-05-24T13:47:00.000-07:00</published><updated>2010-05-24T17:52:20.071-07:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><title type='text'>ಓದಿದ ಮೇಲೆ ಮತ್ತು  ಬರೆಯುವುದರೊಳಗೆ</title><content type='html'>ಓದಿ ಮುಗಿದ ಮೇಲೆ ಏನನ್ನಿಸಿತು ಅಂತ ಹೇಳು ಅಂದಿದ್ದೆಯಲ್ಲ, ಹೇಳಲೇಬೇಕು ಅನ್ನುವಂಥದ್ದೇನೂ ಅನ್ನಿಸಲಿಲ್ಲ. ನನ್ನೊಳಗೇ ಇಟ್ಟುಕೊಳ್ಳುವಂಥದ್ದಾಗಿ ಒಂದಿಷ್ಟು ಅನ್ನಿಸಿತು. ಏನು ಗೊತ್ತಾ? ಮುಕುಂದ ಬಿಟ್ಟುಹೋಗಿ ಬದುಕು ಖಾಲಿಯಾದರೂ ಸರಿಯೇ ಶಿವರಾಮ ನೀನೇ ಆಗಿದ್ದ ಪಕ್ಷ  ಶರ್ವಾಣಿ ನಾನೇ ಆಗಬೇಕು ಅನ್ನಿಸಿತು. ಹೆಂಡತಿ ಬಾವಿಗೆ ಬೀಳುವುದನ್ನು ಕಂಡೂ ಸುಮ್ಮನಿದ್ದ ಶಿವರಾಮ ನೀನೇ ಆಗಿದ್ದಲ್ಲಿ ತಾಯಿಯನ್ನು ಕಳಕೊಂಡರೂ ಸರಿ ಶರ್ವಾಣಿ ನಾನೇ ಆಗಬೇಕು ಅನ್ನಿಸಿತು. &lt;br /&gt;ಒಟ್ಟಿನಲ್ಲಿ ನನಗೆ ಅನ್ನಿಸುವುದೆಂದರೆ ನಿನ್ನ ಮಗಳ ಸ್ಥಾನದಲ್ಲಿ ಯಾರೇ ಇದ್ದಿರಲಿ, ಅದು ಸದಾ ನಾನೇ ಆಗಬೇಕು ಅನ್ನಿಸಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-5560354147261777889?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/5560354147261777889/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=5560354147261777889' title='9 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/5560354147261777889'/><link rel='self' type='application/atom+xml' href='http://www.blogger.com/feeds/5495085842856428066/posts/default/5560354147261777889'/><link rel='alternate' type='text/html' href='http://www.shantalabhandi.com/2010_05_01_archive.html#5560354147261777889' title='ಓದಿದ ಮೇಲೆ ಮತ್ತು  ಬರೆಯುವುದರೊಳಗೆ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>9</thr:total></entry><entry><id>tag:blogger.com,1999:blog-5495085842856428066.post-6603920833507405635</id><published>2010-04-22T21:15:00.000-07:00</published><updated>2010-04-22T22:29:38.604-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><category scheme='http://www.blogger.com/atom/ns#' term='ಐ ಸರ್ಜರಿ'/><title type='text'>ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದೊಳು...</title><content type='html'>ಅಕ್ಕಿ ಆರಿಸುತ್ತ ಆರಿಸುತ್ತ&lt;br /&gt;ಆರಲಿದ್ದ ದೀಪಕ್ಕೆ ಬತ್ತಿ ಹೊಸೆಯುತ್ತ&lt;br /&gt;ದೀಪಕ್ಕೆಣ್ಣೆ ಹನಿಸುತ್ತ&lt;br /&gt;ಬೆಳಗುವಾಗ ಬೆಳಕಾಗುವಾಗ&lt;br /&gt;ಗೊತ್ತಿರಲಿಲ್ಲ&lt;br /&gt;ಕಣ್ಣಿದ್ದದ್ದು ಎರಡು ಕಂಡಿದ್ದು ಮಾತ್ರ ಒಂದು ಎಂಬುದು&lt;br /&gt;ನೆನಪನ್ನು ಒಂದರಲ್ಲಿ ತುಂಬಿಟ್ಟು &lt;br /&gt;ಕನಸನ್ನು ಇನ್ನೊಂದರಲ್ಲಿಟ್ಟು&lt;br /&gt;ಖುಷಿಪಟ್ಟಾಗ ಗೊತ್ತಿರಲಿಲ್ಲ&lt;br /&gt;ಕನಸು ಕಾಣದೇ ಹೋದದ್ದು&lt;br /&gt;&lt;br /&gt;ನಿನ್ನೆ ನಿನ್ನ ಮರೆಯುವದಕ್ಕೆ ಅಂತ&lt;br /&gt;ಡಾಕ್ಟರ ಬಳಿ ಹೋದರೆ&lt;br /&gt;ಕಣ್ಣುಗಳೊಳಗಿಣುಕಿ&lt;br /&gt;ಒಂದರಲ್ಲಿ ಬರೀ ನೆನಪಿದೆ&lt;br /&gt;ಇನ್ನೊಂದು ಖಾಲಿ ಅಂದಾಗಲೇ ಗೊತ್ತಾದ್ದು&lt;br /&gt;ಕನಸುಗಣ್ಣು ಖಾಲಿಯಾಗಿಯೇ ಇದ್ದದ್ದು&lt;br /&gt;ನೆನಪುಗಳನ್ನು ಅಳಿಸಿಕೊಡಿ ಅಂತ ಹೋದರೆ&lt;br /&gt;ಕನಸುಗಳನ್ನು ತುಂಬಿಕೊಡುತ್ತೇನೆ ಅಂದವರಿಗೆ &lt;br /&gt;ನಮಸ್ಕಾರ&lt;br /&gt;ನಿನ್ನ ನೆನಪೇನಾದರೂ ಅಳಿಸಿಹೋದರೆ&lt;br /&gt;ಧನ್ಯವಾದ&lt;br /&gt;&lt;br /&gt;ಬಲಕ್ಕೆ ಹೊಸಕಣ್ಣು ಬರುವಾಗ&lt;br /&gt;ನಿನ್ನ ನೆನಪುಗಳು ಎಡವಾಗದಿರಲಿ&lt;br /&gt;ಮತ್ತೆ ಮರಳಿದರೂ ಹೇಳುವುದಿಷ್ಟೇ&lt;br /&gt;ನನಗೆ ನಿನ್ನ ನೆನಪೇ ಇಲ್ಲ&lt;br /&gt;ಆದರೆ ನಾನು ನಿನ್ನನ್ನೆಲ್ಲೋ ನೋಡಿದ್ದೇನೆ&lt;br /&gt;ಆದರೂ ನೆನಪಿನ ಹಂಗು ನನ್ನದಲ್ಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-6603920833507405635?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/6603920833507405635/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=6603920833507405635' title='13 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/6603920833507405635'/><link rel='self' type='application/atom+xml' href='http://www.blogger.com/feeds/5495085842856428066/posts/default/6603920833507405635'/><link rel='alternate' type='text/html' href='http://www.shantalabhandi.com/2010_04_01_archive.html#6603920833507405635' title='ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದೊಳು...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>13</thr:total></entry><entry><id>tag:blogger.com,1999:blog-5495085842856428066.post-2906035242367966949</id><published>2010-04-14T22:02:00.000-07:00</published><updated>2010-04-15T10:07:02.479-07:00</updated><category scheme='http://www.blogger.com/atom/ns#' term='ಅಜ್ಜನ ಮನೆಗೆ ಹೋಗುವ ಬಸ್ಸು'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಹೈಸ್ಕೂಲಜ್ಜ</title><content type='html'>ನಂಬಲೇ ಆಗುತ್ತಿಲ್ಲ, ಆದರೂ ವಾಸ್ತವ. ನೆನೆದರೆ ಅಳು ಉಕ್ಕಿ ಬಂದೀತೆಂಬ ಕಾರಣಕ್ಕೆ ನೆನಯದೇ ಒಣಕಣ್ಣುಗಳನ್ನು ಬಿಚ್ಚಿಟ್ಟುಕೊಳ್ಳುವ ಯತ್ನ ಈ ಮೂರುದಿನದಿಂದ.&lt;br /&gt;&lt;br /&gt;ಹೈಸ್ಕೂಲಜ್ಜ ಎಂದರೆ ಬೇರಾರೂ ಅಲ್ಲ. ನನ್ನಜ್ಜನ ತಮ್ಮ. &lt;br /&gt;ಗಾಡಿನಿಲ್ಲಿಸುತ್ತಿದ್ದ ಮನೆಯಲ್ಲಿ ಚಿಕ್ಕಂದಿನಿಂದ ನಾವೆಲ್ಲ ಹತ್ತಿ ಕೂತು ನಮ್ಮಗಳ ಬಾಯಲ್ಲಿಯೇ ಸ್ಟಾರ್ಟ್ ಆಗಿ ಸವಾರಿಯೂ ಆಗಿ  ಹೈಸ್ಕೂಲಜ್ಜನ ರಾಜದೂತ್ ಮೋಟ್ರುಸೈಕಲ್ಲು ಹಳತಾದ್ದೇನೋ ಅನ್ನಿಸುತ್ತದೆ.&lt;br /&gt;ಮನೆಯ ಮೊಮ್ಮಕ್ಕಳಾದ ನಮಗೆ ಮಾತ್ರವಲ್ಲದೇ ಊರಮಕ್ಕಳಿಗೆಲ್ಲ ಇವರು ಜೆಮ್ಸು ಮತ್ತು ಚಾಕಲೇಟಿನ ಪೊಟ್ಟಣ. ಇವರು ಯಾರಿಗೂ ಒಂದು ಮಾತು ಅಂದದ್ದು ಕಂಡೂ ಇಲ್ಲ, ಕೇಳಿದ್ದೂ ಇಲ್ಲ. &lt;br /&gt;ಜಾತಕವೆಂಬುದು ನಿಜವಾಗುತ್ತದೆಯಾದರೆ ಅದು ಹೈಸ್ಕೂಲಜ್ಜ ನೋಡಿ ಹೇಳಿದ್ದು ಮಾತ್ರ ಅಂತ ದೇವರನ್ನೂ ಮರೆತ ಕ್ಷಣದಲ್ಲೂ ಈ ಮನಸ್ಸು ನಂಬುತ್ತದೆ.&lt;br /&gt;ಮುಂದಕ್ಕೆ ಹೈಸ್ಕೂಲಜ್ಜ ಇಟ್ಟುಕೊಟ್ಟ ಮುಹೂರ್ತಕ್ಕೆ ಮಗನ ಉಪನಯನ ಮಾಡಬೇಕಿತ್ತು. ಹೈಸ್ಕೂಲಜ್ಜ ಇನ್ನಿಲ್ಲ. ಜಾತಕ ನೋಡುವುದನ್ನು ಹೈಸ್ಕೂಲಜ್ಜ ಬಿಟ್ಟ ದಿನದಿಂದ ಜಾತಕವನ್ನೇ ತೋರಿಸುವುದನ್ನು ಬಿಟ್ಟುಬಿಡಬೇಕೆಂದು ತೀರ್ಮಾನವಿತ್ತು. ಗೊತ್ತಿಲ್ಲ.&lt;br /&gt;&lt;br /&gt;ನಂಬಲಾಗದಂಥ ವಾಸ್ತವ. ಸುಳ್ಳೇನೋ ಎಂಬ ಭ್ರಮೆ. ಫೋನಲ್ಲಿ ಅಮ್ಮ ಕೂಡ ಹೇಳಿದ್ದು ‘ಮಗಾ... ಹೈಸ್ಕೂಲಜ್ಜ ’ ಅಮ್ಮ ಹೇಳಿದ್ದೆಂದರೇ ನಂಬಲೇ ಬೇಕು. ಇಂಥ ಹೊತ್ತಿನಲ್ಲಿ ಪದೇ ಪದೇ ಅನ್ನಿಸುತ್ತಿದೆ, ಒಂದು ಹೊಳೆಯಾಚೆಯ ಅಂತರದಲ್ಲಿ ತವರೂರು ಇರಬೇಕು ಅಂತ. ಆದರೆ ಹೊಳೆಗೂ ಸಮುದ್ರಕ್ಕೂ ತುಂಬ ಅಂತರ ಅಂತ ಮನಸ್ಸು ಅಳುತ್ತದೆ.&lt;br /&gt;&lt;br /&gt;ನಂಬುವುದಾ ಬಿಡುವುದಾ? ವಾಸ್ತವವಾ ಭ್ರಮೆಯಾ? ಕಣ್ಣು ಒಣ ಒಣ, ಕಣ್ಣುರಿ. ನಿನ್ನೆಯಿಂದ ಭರ್ರನೆ ಬೀಸುತ್ತಿರುವ ಗಾಳಿಗೇ ಇರಬೇಕು. &lt;br /&gt;&lt;br /&gt;ಎಲ್ಲವೂ ಸುಳ್ಳಾಗಿ ಈ ಬಾರಿಗೆ ಊರಿಗೆ ಹೋದರೆ ಹೈಸ್ಕೂಲಜ್ಜ ಇರಬೇಕು. ಶನಿವಾರ ಹೊರಟುನಿಂತರೆ ‘ಶನಿವಾರ ಪ್ರಯಾಣ ಒಳ್ಳೆಯದಲ್ಲ’ ಅಂದುಬಿಡಬೇಕು ಹೈಸ್ಕೂಲಜ್ಜ.  ಸೋಮವಾರ ಕಾಲೇಜಿಗೆ ಹೊರಡುವುದಕ್ಕೆ  ಬೆಳಗಿನ ರಾಹುಕಾಲವನ್ನು ಹೈಸ್ಕೂಲಜ್ಜ ನೆನಪಿಸಿ ಏಳಕ್ಕೆ ಮುಂಚೆಯೇ ಮನೆಯ ಹೊರಕ್ಕೆ ಬಂದುಬಿಡಬೇಕು. ಇಲ್ಲವೇ ಬೇಗ ಒಂಬತ್ತುಗಂಟೆಯಾಗಲಿ ಅಂತ ಕಾಯುತ್ತ ಮನೆಯ ತುದಿಕಟ್ಟೆಯಂಚಿಗೆ ಕೂತಿರಬೇಕು.  ಮೇ ರಜೆ ಮುಗಿದು ಶಾಲೆ ಯಾವತ್ತಾದರೂ ತೆರಕೊಳ್ಳಲಿ, ನಮಗೆ ಮಾತ್ರ ಗುರುವಾರವೇ ಮೊದಲಾಗಿ ಶಾಲೆ ತೆರಕೊಳ್ಳಬೇಕು. ಊರಿಗೆಲ್ಲ ಕಕ್ಕಯ್ಯ, ಜಯದೇವ ಮಾಸ್ತರು. ನಮಗೆ ಮಾತ್ರ ಯಾವತ್ತೂ ಮಾಸ್ತರೆನಿಸಲೇ ಇಲ್ಲ. ಪ್ರೀತಿ ತುಂಬಿದ ಕಣ್ಣುಗಳ, ಬೆಚ್ಚನೆ ಬೊಗಸೆಯ ಹೈಸ್ಕೂಲಜ್ಜ. ಚಾಕಲೇಟು ಮತ್ತು ಜೆಮ್ಸು. ಕೊಂಡು ತಿಂದರೆ ಆ ರುಚಿ ಬರಲಾರದು. ಅಂಥ ಚಾಕಲೇಟು ಇನ್ನು ಸಿಕ್ಕಲಾರದು. &lt;br /&gt;&lt;br /&gt;&lt;br /&gt;&lt;a href="http://4.bp.blogspot.com/_gIx6mG3I3fg/S8anwwt81zI/AAAAAAAAAvo/NPOV7M0dTkg/s1600/Highschoolajja.png"&gt;&lt;img style="cursor:pointer; cursor:hand;width: 232px; height: 400px;" src="http://4.bp.blogspot.com/_gIx6mG3I3fg/S8anwwt81zI/AAAAAAAAAvo/NPOV7M0dTkg/s400/Highschoolajja.png" border="0" alt=""id="BLOGGER_PHOTO_ID_5460236054386497330" /&gt;&lt;/a&gt;&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_gIx6mG3I3fg/S8anpiTOZpI/AAAAAAAAAvg/jU_wO-Yg4iE/s1600/Hischoolajja1.png"&gt;&lt;img style="cursor:pointer; cursor:hand;width: 400px; height: 325px;" src="http://1.bp.blogspot.com/_gIx6mG3I3fg/S8anpiTOZpI/AAAAAAAAAvg/jU_wO-Yg4iE/s400/Hischoolajja1.png" border="0" alt=""id="BLOGGER_PHOTO_ID_5460235930257221266" /&gt;&lt;/a&gt;&lt;br /&gt;&lt;br /&gt;&lt;a href="http://2.bp.blogspot.com/_gIx6mG3I3fg/S8aqIlVjzJI/AAAAAAAAAvw/v8jdi2plQEM/s1600/Hischoolajja2.png"&gt;&lt;img style="cursor:pointer; cursor:hand;width: 385px; height: 400px;" src="http://2.bp.blogspot.com/_gIx6mG3I3fg/S8aqIlVjzJI/AAAAAAAAAvw/v8jdi2plQEM/s400/Hischoolajja2.png" border="0" alt=""id="BLOGGER_PHOTO_ID_5460238662671518866" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-2906035242367966949?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/2906035242367966949/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=2906035242367966949' title='8 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/2906035242367966949'/><link rel='self' type='application/atom+xml' href='http://www.blogger.com/feeds/5495085842856428066/posts/default/2906035242367966949'/><link rel='alternate' type='text/html' href='http://www.shantalabhandi.com/2010_04_01_archive.html#2906035242367966949' title='ಹೈಸ್ಕೂಲಜ್ಜ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_gIx6mG3I3fg/S8anwwt81zI/AAAAAAAAAvo/NPOV7M0dTkg/s72-c/Highschoolajja.png' height='72' width='72'/><thr:total>8</thr:total></entry><entry><id>tag:blogger.com,1999:blog-5495085842856428066.post-1229011791189942967</id><published>2010-03-30T10:53:00.000-07:00</published><updated>2010-12-20T22:58:03.420-08:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಜೋಗಿ ಅವರ ‘ಯಾಮಿನಿ’ಯೊಂದಿಗೆ ಮುಖಾಮುಖಿ</title><content type='html'>&lt;div align="justify"&gt;&lt;span style="font-size:85%;"&gt;&lt;strong&gt;&lt;span style="color:#666600;"&gt;ಕನ್ನಡ ಸಾಹಿತ್ಯ ರಂಗ ಅಮೆರಿಕ ಮತ್ತು ಅಭಿನವ ಪ್ರಕಟಿಸಿದ ಮೈ.ಶ್ರೀ.ನಟರಾಜ ಅವರ ಸಂಪಾದಕತ್ವದಲ್ಲಿ ೨೦೦೯ರಲ್ಲಿ ಬಿಡುಗಡೆಯಾದ "ಕನ್ನಡ ಕಾದಂಬರಿ ಲೋಕದಲ್ಲಿ... ...ಹೀಗೆ ಹಲವು..." ಕೃತಿಯಲ್ಲಿ ಪ್ರಕಟ.&lt;/span&gt;&lt;/strong&gt;&lt;br /&gt;&lt;/span&gt;&lt;br /&gt;&lt;strong&gt;&lt;span style="font-size:180%;color:#330033;"&gt;             ಜೋಗಿಯವರ ‘ಯಾಮಿನಿ’ಯೊಂದಿಗೆ ಮುಖಾಮುಖಿ&lt;/span&gt;&lt;br /&gt;&lt;br /&gt;&lt;/strong&gt;&lt;span style="color:#6666cc;"&gt;&lt;span style="font-size:85%;"&gt;ಶಾಂತಲಾ ಭಂಡಿ&lt;br /&gt;ಕೂಪರ್ಟಿನೋ, ಕ್ಯಾಲಿಫೋರ್ನಿಯಾ, ಯು.ಎಸ್.ಎ.&lt;/span&gt;&lt;br /&gt;&lt;/span&gt;&lt;br /&gt;ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ಜೋಗಿಯವರ ಈ ಕಾದಂಬರಿಯನ್ನು ಅಂಕಿತ ಪುಸ್ತಕದ ೨೭೩ನೇ ಪ್ರಕಟಣೆಯಾಗಿ ಪ್ರಕಾಶ್ ಕಂಬತ್ತಳ್ಳಿಯವರು ಆಸ್ಥೆಯಿಂದ ೨೦೦೮ರಲ್ಲಿ ಹೊರತಂದಿದ್ದಾರೆ. ಉದಯ ಮರಕಿಣಿಯವರ ಮುನ್ನುಡಿ, ಲೇಖಕರ ಸ್ವಗತ ಹೊಂದಿದ ಈ ಕಿರು ಕಾದಂಬರಿ ಜೋಗಿಯವರ ಬರಹ ಶಕ್ತಿಗೊಂದು ಸಾಕ್ಷಿ.&lt;br /&gt;&lt;br /&gt;&lt;span style="font-size:130%;"&gt;&lt;span style="color:#3333ff;"&gt;ಕೃತಿ ಮತ್ತು ಕರ್ತೃ:&lt;/span&gt;&lt;br /&gt;&lt;/span&gt;&lt;br /&gt;‘ಓದುಗನಾಗಲು ಹೊರಟವನು ಕಥೆ ಬರೆದೆ. ಮೆಚ್ಚಿಕೊಂಡರು. ಮತ್ತೊಂದಿಷ್ಟು ಕಥೆಗಳನ್ನು ಬರೆದು ಪ್ರಕಟಿಸಿದೆ. ಮದುವೆಯಾಯಿತು. ಕತೆಯೊಂದು ಸಿನೇಮಾ ಆಯ್ತು. ರಾಜ್ಯಪ್ರಶಸ್ತಿಯೂ ಬಂತು. ಸೀರಿಯಲ್ಲು ಸಿನೆಮಾಗಳಿಗೆ ಸಂಭಾಷಣೆ ಬರೆದೆ. ಮನೆಯಾಯಿತು. ಖುಷಿಕೊಡುವುದು ಕನ್ನಡಪ್ರಭ ಪುರವಣಿ ವಿಭಾಗದ ಹುದ್ದೆ. ‘ಬರೆಯುವುದಿಲ್ಲ’ ಎಂದು ಕುಳಿತಾಗೆಲ್ಲ ಕತೆಗಳು ಹುಡುಕಿಕೊಂಡು ಬಂದು ಕಾಡಿವೆ. ಅಂಥ ಬೇಡಿಕೆಯ ಫಲ: ಜಾನಕಿ ಕಾಲಂ, ಜೋಗಿ ಮನೆಯ ಹಿತ್ತಲಹಾಡು, ರವಿ ಕಾಣದ್ದು, ಜೋಗಿ ಕತೆಗಳು, ಹಿಟ್ ವಿಕೆಟ್, ನದಿಯ ನೆನಪಿನ ಹಂಗು, ಸೀಳು ನಾಲಗೆ.’ ಹೀಗೆ ಕವಿ, ಕಥೆಗಾರ, ಕಾದಂಬರಿಕಾರರಾದ ಜೋಗಿಯವರು ಕಿರುಎಳೆಯಲ್ಲಿ ತಮ್ಮ ಪರಿಚಯ ಮಾಡಿಕೊಡುತ್ತಾರೆ. ‘ನಲವತ್ತು ದಾಟಿದ್ದೇ ಸುಮ್ ಸುಮ್ನೆ ಕಣ್ಣೀರು’ ಎಂಬುದಾಗಿ ಯಾಮಿನಿಯ ಆರಂಭಕ್ಕೆ ಮೊದಲು ಕಣ್ದುಂಬಿ ನುಡಿಯುತ್ತಾರೆ.&lt;br /&gt;&lt;br /&gt;ಇವಿಷ್ಟು ಜೋಗಿಯವರ ತೆರೆದಿಟ್ಟ ಮನಸಾದರೆ, ಅವರಿವರಿಂದ ಕೇಳಿ, ಓದಿ ಜೋಗಿಯವರ ಬಗ್ಗೆ ನನಗೆ ತಿಳಿದದ್ದಿನ್ನಷ್ಟು. ‘ಶಿಕಾರಿ’, ‘ಶಕ್ತಿ’, ‘ಜೀವನ’, ‘ಬೆಳ್ಳಿತೆರೆ’ ಮುಂತಾದ ದೂರದರ್ಶನ ಧಾರವಾಹಿಗಳಿಗೆ ಸಂಭಾಷಣೆ ಹಾಗೂ ‘ಶರಪಂಜರ’, ‘ಕಲ್ಯಾಣಿ’, ‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’, ‘ಬಂದೇ ಬರತಾವ ಕಾಲ’ ಧಾರವಾಹಿಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಒದಗಿಸಿದ ಗೌರವ ಜೋಗಿಯವರಿಗೆ ಸಲ್ಲುತ್ತದೆ. ಜೋಗಿಯವರಿಂದ ಲಿಖಿತವಾದ ‘ಜೋಗಿ ಕತೆಗಳು’ ಕಥಾಸಂಕಲನವು ‘ವಿಶ್ವೇಶ್ವರಯ್ಯ ಪ್ರಶಸ್ತಿ’, ಮತ್ತು ‘ಜಾನಕಿ ಕಾಲಂ’ ‘ಹಾ. ಮಾ. ನಾಯಕ ಪ್ರಶಸ್ತಿ’ಯನ್ನೂ ಅವರಿಗೆ ಗಳಿಸಿಕೊಟ್ಟಿವೆ. ‘ಕಾಡಬೆಳದಿಂಗಳು’ ಚಲನಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಜೋಗಿಯವರೇ ನೀಡಿದ್ದು, ಈ ಚಲನಚಿತ್ರವು ‘ಕರ್ನಾಟಕ ರಾಜ್ಯ ಪ್ರಶಸ್ತಿ’ಯನ್ನು ಪಡೆದಿರುತ್ತದೆ. ‘ಮೌನಿ’ ಚಿತ್ರಕ್ಕೆ ಹಾಗೂ ‘ಕೇರ್ ಆಫ್ ಫುಟ್ ಪಾಥ್’ ಚಲನಚಿತ್ರಕ್ಕೆ ಚಿತ್ರಕಥೆ ಒದಗಿಸಿರುವ ಜೋಗಿಯವರಿಂದ ‘ರಾಯಭಾಗದ ರಹಸ್ಯ ರಾತ್ರಿ’ ‘ಯಾಮಿನಿ’ಯ ಜೊತೆಯಾಗಿ ಬಂದ ಹೊಸ ಕಥಾಸಂಕಲನ. ಜೋಗಿಯವರನ್ನು ಕಥೆ, ಕಾದಂಬರಿಕಾರರಾಗಿ ಈ ಪರಿಯಾಗಿ ಪರಿಚಯಿಸಿಕೊಳ್ಳಬಹುದು.&lt;br /&gt;&lt;br /&gt;ಆರಂಭದ ಪುಟವನ್ನೋದಿ ಪುಟ ಹೊರಳಿಸಿದರೆ ದಪ್ಪಕ್ಷರಗಳಲ್ಲಿ ಎದುರಾಗಿ ನಿಲ್ಲುತ್ತಾಳೆ ‘ಯಾಮಿನಿ’. ನಂತರದ ಪುಟಪರದೆಯ ಮೇಲೆ ಕಾಣುವ ಉದಯ ಮರಕಿಣಿಯವರ ಮನಃಸ್ಪರ್ಶಿ ಮಾತುಗಳು ‘ಯಾಮಿನಿ’ಯ ಬಗ್ಗೆ. ಜೊತೆ ಜೊತೆಗೆ ಜೋಗಿಯವರ ಬಗ್ಗೆಯೂ. ಜೋಗಿ ಮತ್ತು ‘ಯಾಮಿನಿ’ಯ ಬಗೆಗಿನ ಉದಯ ಮರಕಿಣಿಯವರ ಮಾತುಗಳು ಅಂತ್ಯವಾಗುತ್ತಿದ್ದಂತೆ ಪರದೆಯ ಮೇಲೆದ್ದು ಬಂದಂತೆ ಜೋಗಿ ಕಾಣಿಸಿಕೊಂಡು ಈ ತೆರನಾಗಿ ನುಡಿಯುತ್ತಾರೆ: ‘ಸಿನಿಮಾಕ್ಕೊಂದು ಕಥೆ ಕೊಡಿ ಎಂದು ಗೆಳೆಯ ಲಿಂಗದೇವರು ಕೇಳಿದಾಗ ಹೊಳೆದದ್ದು ಈ ಕಾದಂಬರಿ. ಯಾಮಿನಿ, ಚಿರಾಯು ಇಬ್ಬರೂ ನನಗಿಷ್ಟ; ಅವರು ಕೇಳಿಕೊಳ್ಳುವ ಪ್ರಶ್ನೆಗಳು ಕೂಡ. ಉತ್ತರ ಇನ್ನೂ ಸಿಕ್ಕಿಲ್ಲ ಎನ್ನುವುದಷ್ಟೇ ಖುಷಿ.’ (ಪುಟ-೭) ಎಂಬ ಅವರ ನುಡಿ ಕಾದಂಬರಿ ಓದಲು ನಮ್ಮನ್ನು ಇನ್ನಷ್ಟು ಪ್ರೇರೇಪಿಸುತ್ತದೆ. ಚಿರಾಯು ಹಾಗೂ ಯಾಮಿನಿ ಪರಸ್ಪರ ಕೇಳಿಕೊಳ್ಳುವ ಪ್ರಶ್ನೆಗಳ ದಿಕ್ಕಿನೆಡೆ ಕುತೂಹಲ ಹೆಚ್ಚುತ್ತಿದ್ದಂತೆ ಕೈ ತಾನಾಗಿಯೇ ಸರಕ್ಕನೆ ಆ ಪುಟ ಮಗುಚಿದರೆ ಕಾದಂಬರಿ ಓದಲು ಮನ ಅಣಿಯಾಗುತ್ತದೆ.&lt;br /&gt;&lt;br /&gt;&lt;span style="font-size:130%;color:#330033;"&gt;ಕಥೆಯ ಪರಿಚಯಾತ್ಮಕ ವಿಶ್ಲೇಷಣೆ:&lt;/span&gt;&lt;br /&gt;&lt;br /&gt;ಉತ್ಸಾಹದಲ್ಲಿ ಪುಟ ತಿರುವಿದಾಗ ಓದಲು ಸಿಗುವ ಮೊದಲ ವಾಕ್ಯವೇ ಕೊಂಚ ಇರುಸು ಮುರುಸಿನೊಂದಿಗೆ ಸಾಗುತ್ತದೆ. ‘ಈ ವಾಕ್ಯವೇ ಕಾದಂಬರಿಯ ಆದಿಯಾಗುವ ಅನಿವಾರ್ಯತೆಯಾದರೂ ಏನಿತ್ತು?’ ಅಂದುಕೊಳ್ಳುತ್ತ ಓದುತ್ತ ಹೋದಂತೆ ಕಾದಂಬರಿಯ ಕಥಾನಾಯಕ ಒಬ್ಬ ಕಾದಂಬರಿಕಾರನಾಗಿದ್ದು ಜೋಗಿ ಬರೆಯುವ ಯಾಮಿನಿಯ ಆರಂಭದ ಸಾಲುಗಳನ್ನು ಕಥಾನಾಯಕನಾದ ಚಿರಾಯುವೇ ಬರೆಯುತ್ತಾನೆನ್ನುವುದು ಕಾದಂಬರಿಯ ಆರಂಭದ ವಿಶೇಷತೆಗಳಲ್ಲೊಂದಾಗಿ ಕಾಣುತ್ತದೆ. ಹಾಗೆಯೇ ಆರಂಭದ ಈ ಸಾಲುಗಳ ಬಗೆಗೆ ತಮಗಿದ್ದ ಮುಜುಗರವನ್ನು ಸ್ವತಃ ಜೋಗಿಯವರು ‘ಇಷ್ಟು ಶೃಂಗಾರಮಯವಾಗಿಯೋ ಲಜ್ಜೆಗೇಡಿಯಂತೆಯೋ ಬರೆಯುವುದು ನವ್ಯದ ಶೈಲಿಯಾಯಿತಲ್ಲವೇ? ಈಗ ತೀರ ಹೊಸತೆನಿಸುವಂತೆ ಬರೆಯಲು ಹೊರಟವನನ್ನು ನವ್ಯದ ಅದೇ ಹಳೆಯ ಗುಂಗು ಯಾಕೆ ಕಾಡಬೇಕು? ವಿಮರ್ಶಕರು ಇದನ್ನು ಒಪ್ಪುತ್ತಾರಾ? ಓದುಗರಿಗೆ ಅದರಲ್ಲಿ ಆಸಕ್ತಿ ಹುಟ್ಟಲು ಸಾಧ್ಯವಾ?’ (ಪುಟ-೯) ಎಂಬಂತಹ ಮಾತುಗಳನ್ನು ಚಿರಾಯುವಿನ ಮನದ ಪ್ರಶ್ನಾಲಹರಿಗಳನ್ನಾಗಿಸಿ ಬಿಂಬಿಸುತ್ತ ಚಿರಾಯುವಿನ ಪಾತ್ರವನ್ನು ಇನ್ನಷ್ಟು ಒಗಟಾಗಿಸುವಲ್ಲಿ ಜೋಗಿ ಸಫಲರಾಗುತ್ತಾರೆ. ಅಲ್ಲದೆ, ಆರಂಭಿಕ ಸಾಲುಗಳನ್ನು ಚಿರಾಯುವಿನಿಂದ ಬರೆಸಿ ತಾವು ಆ ಸಾಲುಗಳಿಂದ ಜಾರಿಕೊಂಡು ಕಾದಂಬರಿಯ ಆರಂಭದ ಬಗೆಗಿನ ತಮ್ಮ ಮುಜುಗರವನ್ನಿಷ್ಟು ಕಡಿಮೆ ಮಾಡಿಕೊಂಡಂತೆ ಅನಿಸುತ್ತದೆ.&lt;br /&gt;&lt;br /&gt;ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಕಾದಂಬರಿ ಚರ್ಚೆಗೆ ನಿಲ್ಲಬೇಕಾದರೆ ಕಾದಂಬರಿಯೊಂದು ಹೇಗಿರಬೇಕೆಂಬುದರ ಬಗೆಗಿನ ತಮ್ಮ ನಿಲುವನ್ನು ಲೇಖಕರು ಶ್ರದ್ಧಾ ಎಂಬ ಸ್ತ್ರೀ ಪಾತ್ರದ ಮೂಲಕ ಹೊರಗಿಡುತ್ತಾರೆ. ಹಾಗೆಯೇ ಹೆಣ್ಣೊಬ್ಬಳು ಸಮಾಜದಲ್ಲಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಎಷ್ಟೇ ಜಾಣೆಯಾಗಿದ್ದರೂ ಅವಳ ಸಲಹೆಯನ್ನು ಎಲ್ಲ ಸಂದರ್ಭಗಳಲ್ಲಿಯೂ ಒಪ್ಪಿಕೊಳ್ಳಲಾರದಂತಹ ಗಂಡಿನ ಸಹಜ ಈಗೋ ಬಗ್ಗೆಯೂ ಸೂಕ್ಷ್ಮವಾದ ಹೇಳಿಕೆಗಳು ಸೂಕ್ಷ್ಮಸತ್ಯವನ್ನು ಬಯಲಿಗಿಟ್ಟು ಖುಷಿಕೊಡುತ್ತವೆ ಮತ್ತು ಓದಿದಾಗ ಮನಸ್ಸು ಆ ಸತ್ಯವನ್ನು ಒಪ್ಪಿಕೊಳ್ಳುತ್ತದೆ. ಮುಂದೆ ‘ಗಂಡು ತನ್ನ ಅಹಂಕಾರವನ್ನು ಮರೆತು ಒಂದು ಹೆಣ್ಣಿನ ಜೊತೆ ಮಾತ್ರ ಬೆರೆಯಬಲ್ಲ’ (ಪುಟ-೨೯) ಎಂಬ ಹೇಳಿಕೆ ಈ ಹಿಂದಿನ ಚಿರಾಯುವಿನ ಯೋಚನೆಗೆ ತದ್ವಿರುದ್ಧವಾಗಿದ್ದರೂ ಸಂದರ್ಭೋಚಿತವಾಗಿ ಸರಿಯೆನಿಸುತ್ತದೆ.&lt;br /&gt;&lt;br /&gt;‘ಸತ್ತ ಶಾನುಬೋಗರ ದಪ್ಪನೆಯ ಹೆಂಡತಿ ಮರಹತ್ತಿ ನೇಣು ಹಾಕಿಕೊಂಡದ್ದಾದರೂ ಹೇಗೆ?’ (ಪುಟ-೯) ಅಂತೆಲ್ಲ ನಮ್ಮಂತೆಯೇ ಸಾಮಾನ್ಯವಾಗಿ ಯೋಚಿಸುವ, ಹಳೆಯ ದಿನಗಳನ್ನ ನೆನಪಿಸಿಕೊಳ್ಳುವ ಚಿರಾಯು ಅತೀ ಸಾಮಾನ್ಯವ್ಯಕ್ತಿಯಾಗಿ ಆರಂಭದಲ್ಲಿಯೇ ಇಷ್ಟವಾಗಿಬಿಡುತ್ತಾನೆ. ಹಾಗೆಯೇ ಅದೇ ಮುಂದಿನ ಸಾಲುಗಳಲ್ಲಿ ಅಂತರಾಷ್ಟ್ರೀಯ ಸಂಸ್ಥೆಯೊಂದರ ಇಪ್ಪತ್ತೆಂಟು ಲಕ್ಷ ರೂಪಾಯಿಗಳಿಗೆ ಒಂದು ಕಾದಂಬರಿ ಬರೆಯುವ ಒಪ್ಪಂದಕ್ಕೆ ಅಂಟಿಕೊಂಡು ಆರುಲಕ್ಷ ರೂಪಾಯಿಗಳಷ್ಟು ಹಣವನ್ನು ಮುಂಗಡ ಪಡೆದುಕೊಂಡ ಚಿರಾಯು ಬೇರೆಯದೇ ವ್ಯಕ್ತಿಯಾಗಿ- ಅಪ್ಪಟ ವ್ಯಾವಹಾರಿಕ ಸಾಹಿತಿಯಂತೆ- ಭಾಸವಾಗುತ್ತಾನಲ್ಲದೆ ಮನಸ್ಸು ಚಿರಾಯುವಿನ ಪಾತ್ರಕ್ಕೆ ಜುಬ್ಬಾ ಧರಿಸಿ ಗಡ್ಡಧಾರಿಯಾದ ಮಹಾನ್ ಸಾಹಿತಿಯೊಬ್ಬನ ಚಿತ್ರವೊಂದನ್ನು ಕಟ್ಟಿಕೊಳ್ಳುತ್ತದೆ.&lt;br /&gt;&lt;br /&gt;ತನಗೆ ಬೇಸರವಾದಾಗ, ಬರೆಯುವ ಮನಸ್ಸಿಲ್ಲದೇ ಖಾಲಿ ಕುಳಿತಿದ್ದಾಗ ಚಿರಾಯುವಿಗೆ ಯಾಮಿನಿಯ ನೆನಪು ಕಾಡುತ್ತದೆ. ಅಂತಹ ಸಂದರ್ಭದಲ್ಲಿ ಅವಳನ್ನು ಬರಹೇಳಬೇಕು ಎಂದುಕೊಳ್ಳುವ ಚಿರಾಯು ಸ್ವಾರ್ಥಿಯಾಗಿ ಕಾಣಿಸಿದರೆ ಅದು ಚಿರಾಯುವಿನಂತಹ ಪಾತ್ರದ ತಪ್ಪು. ಹಾಗೆ ಯಾಮಿನಿಯನ್ನು ಬರಹೇಳಿದಾಗ ಯಾಮಿನಿ ‘ಬರುವುದಿಲ್ಲ’ ಎಂದು ಹೇಳಿ ಕರೆ ಮಾಡುವ ಮುನ್ನ ಎಸ್ಸೆಮ್ಮೆಸ್ಸು ಕಳಿಸಿ ಚಿರಾಯುವಿನ ಮನಸ್ಸನ್ನು ಆ ಸುದ್ದಿಗೆ ಸಿದ್ಧಗೊಳಿಸುವಂಥ ಸಣ್ಣ ಎಳೆಗಳು ಪುಟ್ಟ ಕೆಲಸಕ್ಕೂ ಬೇಕಾಗಿರುವ ಪೂರ್ವಸಿದ್ಧತೆಯ ಬಗ್ಗೆ ಹೇಳುತ್ತವೆ.&lt;br /&gt;&lt;br /&gt;‘ವ್ಯಕ್ತಿತ್ವ ಇಲ್ಲದೇ ಇರುವವರು ಮಾತ್ರ ನಮ್ಮ ಅಹಂಕಾರಕ್ಕೆ ಹತ್ತಿರವಾಗಬಲ್ಲರು.’ (ಪುಟ-೧೨) ಎಂಬಂತಹ ಸಾಲುಗಳು ಒಮ್ಮೆ ಕಾದಂಬರಿ ಓದುವುದನ್ನು ಬಿಟ್ಟು ನಮಗೆ ಹತ್ತಿರವಾಗಿರುವವರ ಕುರಿತು ಯೋಚಿಸುವಂತೆ ಮಾಡುತ್ತವೆ. ನಮ್ಮ ಹತ್ತಿರದ ವ್ಯಕ್ತಿಗಳಿಗೇ ವ್ಯಕ್ತಿತ್ವವಿಲ್ಲವೋ ಅಥವಾ ನಮಗೇ ಅಹಂಕಾರವಿಲ್ಲವೋ ಅಂತೆಲ್ಲ ಒಮ್ಮೆ ನಾವು ಯೋಚಿಸಿದಾಗ ಆ ಸಾಲು ಇಷ್ಟವಾಗುತ್ತದೆ. ಇದೇ ಯೋಚನೆಯನ್ನು ತಿರುವುಮುರುವಾಗಿಸಿಕೊಂಡು ನಮಗೆ ವ್ಯಕ್ತಿತ್ವವಿಲ್ಲದ್ದಕ್ಕೆ ನಮ್ಮ ಹತ್ತಿರದವರ ಅಹಂಕಾರಕ್ಕೆ ನಾವು ಸಾಥಿಗಳಾಗಿದ್ದೀವೇನೋ ಅನ್ನಿಸಿ ನಗು ಬರುತ್ತದೆ. ಇಷ್ಟೆಲ್ಲ ಯೋಚಿಸಿದ ಮೇಲೂ ಆ ಸಾಲು ಸಾಂದರ್ಭಿಕವಾಗಿ ಕಾದಂಬರಿಗೆ ಉಚಿತವೆನಿಸುತ್ತದೆಯಲ್ಲದೇ ನೆನಪಿನಲ್ಲುಳಿಯಬಹುದಾದ ಸಾಲುಗಳಲ್ಲಿ ಒಂದಾಗಿಬಿಡುತ್ತದೆ.&lt;br /&gt;&lt;br /&gt;ಬೆಳದಿಂಗಳನ್ನು ಕಮ್ಯುನಿಸಮ್ಮಿಗೆ ಹೋಲಿಸಿ ಚಿರಾಯು ನಗುವಾಗ ನಮ್ಮೊಳಗೂ ಒಂದು ಪುಟ್ಟ ನಗು ಹಾದುಹೋಗುತ್ತದೆಯಾದರೂ ಎಂತಹ ನವಿರನ್ನೂ ತೀಕ್ಷ್ಣ ವಿಚಾರಕ್ಕೆ ಹೋಲಿಸಿದಾಗ ನವೀನ ರೀತಿಯ ಹೋಲಿಕೆ ಹೊಸಯೋಚನೆಗಳಿಗೆ ನಾಂದಿಹಾಡುತ್ತದೆಯೆಂಬುದೂ ಸಹ ಅಷ್ಟೇ ಸತ್ಯದ ಮಾತಾಗುತ್ತದೆ. ‘ಬದುಕುವ ಮೂಲಕ ಬದುಕಿನಿಂದ ಬಿಡುಗಡೆ ಪಡೆಯುವ ಹಾಗೆ ಓದುವ ಮೂಲಕ ಬರೆದದ್ದರಿಂದ ಮುಕ್ತಿ ಹೊಂದಲು ಸಾಧ್ಯವಾ?’ (ಪುಟ-೧೯) ಎಂಬಂತಹ ಚಿರಾಯುವಿನ ಯೋಚನೆಗಳು, ಪ್ರಶ್ನೆಗಳನ್ನು ಓದುಗನ ಮುಂದಿಡುವ ಮೂಲಕ ಓದುಗನ ಪ್ರಶ್ನೆಗಳಿಗೆ ಉತ್ತರಿಸುತ್ತವೆ. ಮರಳಿ ‘ಚಿರಾಯು’ ಎಂಬ ಪಾತ್ರವನ್ನು ಮರೆಯಾಗದಂತೆ ತಡೆಯುತ್ತವೆ. ‘ನಿಮಿಷಕ್ಕೆ ನಲವತ್ತು ಪದ ಟೈಪ್ ಮಾಡಬಲ್ಲವನು ಗಂಟೆಗೆ ಎರಡು ಸಾವಿರ ಪದ ಟೈಪ್ ಮಾಡುತ್ತಾನೆ. ದಿನಕ್ಕೆ ನಾಲ್ಕು ಗಂಟೆ ಬರೆದರೂ ಸುಮಾರು ಹತ್ತು ಸಾವಿರ ಪದಗಳಾಗುತ್ತವೆ, ಒಂದು ಕಾದಂಬರಿಗೆ ಹೆಚ್ಚೆಂದರೆ ಅರವತ್ತು ಸಾವಿರ ಪದಗಳಿದ್ದರೆ ಸಾಕು, ಯೋಚಿಸಿ ಬರೆದರೂ ಇಪ್ಪತ್ತು ದಿನಗಳಲ್ಲಿ ಕಾದಂಬರಿ ಮುಗಿಯಬೇಕು’ (ಪುಟ-೧೬). ಈ ತೆರನಾಗಿರುವ ಪ್ರೊಫೆಷನಲ್ ವಿಚಾರಧಾರೆಗಳಿಂದಾಗಿ ಒದಗುವಂತಹ ಪಡಿಪಾಟಲುಗಳು, ಪ್ರೊಫೆಷನಲ್ ಬರಹಗಾರನೊಬ್ಬನ ಕಷ್ಟಕಾರ್ಪಣ್ಯಗಳನ್ನು, ತಲ್ಲಣಗಳನ್ನು ಪರೋಕ್ಷವಾಗಿ ಲೆಕ್ಕಾಚಾರಸಹಿತ ನಮ್ಮೆದುರು ತೆರೆದಿಡುತ್ತವೆ.&lt;br /&gt;&lt;br /&gt;‘ಕಥೆಗಾರ ಮುಗ್ಧನಾಗಿರಬೇಕು. ಅಜ್ಞಾನಿಯಾಗಿರಬೇಕು. ತರ್ಕಬದ್ಧವಾಗಿ ಯೋಚಿಸಬಲ್ಲ ಸಾಮರ್ಥ್ಯ ಅವನಿಗೆ ಇರಕೂಡದು, ಹುಂಬನೂ ತನಗೆ ಅನಿಸಿದ್ದನ್ನು ಬರೆಯಬಲ್ಲವನೂ ಆಗಿರಬೇಕು’ (ಪುಟ-೨೩). ಈ ಪರಿಯಾಗಿ ತನ್ನ ಯೋಚನೆಗಳನ್ನು ತಿದ್ದುತ್ತಾ ಹೋಗುವ ಚಿರಾಯುವಿನ ಆಲೋಚನೆಗಳು ಒಮ್ಮೆ ಅಲ್ಲವೆನ್ನಿಸಿದರೆ, ಇನ್ನೊಮ್ಮೆ ಹೌದೆನ್ನಿಸುವಂತೆ ಸಾಗುತ್ತವೆ. ಅಂದರೆ ಲೇಖಕ ‘ಲೆಸ್ ಇನ್ಫೋರ್ಮ್‌ಡ್’ ಆಗಿರಬೇಕು ಎನ್ನುವ ನೆಲೆಗೆ ನಿಲ್ಲುವ ಯೋಚನೆಯ ತಿರುಳನ್ನು ಒಂದು ಪಕ್ಷ ಓದುವ ಯಾವುದೋ ಒಂದು ಮನಸ್ಸು ಒಪ್ಪಿಕೊಳ್ಳದಿದ್ದರೂ, ಬರೆಯುವ ಮನಸ್ಸು ಒಪ್ಪಿಕೊಳ್ಳುತ್ತದೆ. ಹಾಗೂ ಸಾಗುವ ಸಾಲುಗಳು ಲೇಖಕನಿಗೆ ಅಹಂಕಾರವಿರಕೂಡದೆಂಬುದನ್ನು ಅರಿತವರಿಗೂ ಸಹ ಲೇಖಕನಲ್ಲಿರುವ ಯಾವ ರೀತಿಯ ಅಹಂಕಾರವು ಲೇಖಕನಿಗೆ ಹೇಗೆ ಸ್ವಭರವಸೆಯಿತ್ತು ಅವನನ್ನು ಮುನ್ನಡೆಸಬಲ್ಲುದು ಎಂಬುದನ್ನು ಹೇಳುತ್ತವೆ.&lt;br /&gt;&lt;br /&gt;ಈ ಕಾದಂಬರಿಯ ಪಾತ್ರವಾಗಿರದೆ, ಚಿರಾಯುವಿನ ಯಾವುದೋ ಕಾದಂಬರಿಯ ಪಾತ್ರವಾಗಿ ಈ ಕಾದಂಬರಿಯಲ್ಲಿ ಬರುವ ಸರಸ್ವತಿಯ ಪಾತ್ರ ತಣ್ಣಗೆ ಇಷ್ಟವಾಗುತ್ತದೆ. ತುಂಬ ತೀವ್ರವಾಗಿ ಬದುಕಿರದ, ಯಾವುದನ್ನೂ ಒಪ್ಪಿಕೊಳ್ಳದ, ಯಾವುದಕ್ಕೂ ಪ್ರತಿಕ್ರಿಯಿಸದ, ಯಾರನ್ನೂ ಅಷ್ಟು ಸುಲಭವಾಗಿ ತನ್ನೊಳಗೆ ಕರೆದುಕೊಳ್ಳದ ಹೆಣ್ಣಾಗಿ ಯಾವುದೋ ಕಾದಂಬರಿಯಲ್ಲಿ ಚಿತ್ರಿತವಾಗಿದ್ದ ಸರಸ್ವತಿಯದು ಇಲ್ಲಿ ಚಿರಾಯುವಿನೊಳಗಣ ನೆನಪಾಗಿ ಬರುವ ಪಾತ್ರವಾದರೂ, ಕೇವಲ ಮೂರೇವಾಕ್ಯಗಳಲ್ಲಿ ಆ ಪಾತ್ರ ಮುಗಿದೇ ಹೋದರೂ ಯಾಮಿನಿಗಿಂತಲೂ ಕೊಂಚ ಹೊತ್ತುನಿಲ್ಲುವ ಪಾತ್ರವಾಗಿ ಕಾಡುತ್ತಾಳೆ. ಯಾರೂ ಗಮನಿಸದ ಪಾತ್ರಗಳನ್ನು ಗುರುತಿಸಿದಾಗಲೇ ಪಾತ್ರಕ್ಕೂ ಹಾಗೂ ಪಾತ್ರದ ರಚನೆಕಾರನಿಗೂ ಹೆಚ್ಚು ಮಹತ್ವ ಸಿಗುವುದು ಸುಳ್ಳಲ್ಲವೆಂಬಂಥದೊಂದು ಹೇಳಿಕೆಯನ್ನು ಚಿರಾಯುವಿನ ಮನಸ್ಸಿನೊಳವಾಗಿ ಈ ಕಾದಂಬರಿಯಲ್ಲಿ ಕಾಣಬಹುದು.&lt;br /&gt;&lt;br /&gt;ಅತ್ಯಂತ ಚಿಕ್ಕವಯಸ್ಸಿನಲ್ಲಿ ‘ಜ್ಞಾನಪೀಠ’ ಪ್ರಶಸ್ತಿ ಗಳಿಸುವ ಚಿರಾಯು ಸುತ್ತಮುತ್ತ ಹೊಗಳುತ್ತಿದ್ದವರಿಂದಲೇ ಆಕ್ಷೇಪಗಳನ್ನು ಕೇಳಬೇಕಾಗುತ್ತದೆ. ಇಂದಿನ ಸಾಹಿತ್ಯದ ಒಂದು ಭಾಗವಾಗಿರುವ ರಾಜಕೀಯ ನಡೆಯುವ ದಾರಿಯೆಡೆಗಿನ ಎಳೆಗಳನ್ನು ಕಿರಿದಾಗಿ ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಬರಹಗಳು, ಅವುಗಳ ಗುಣಮಟ್ಟ, ಅವು ತಂದುಕೊಡುವ ಪ್ರಶಸ್ತಿ, ಪುರಸ್ಕಾರಗಳೇ ಕೆಲವೊಮ್ಮೆ ಬರಹಗಾರನ ವೈಯಕ್ತಿಕ ಬದುಕನ್ನ ಬಯಲಿಗಿಡುವ ಹಾದಿಯೂ ಸಹ ಬರಹಗಾರನನ್ನು ವಿರೋಧಿಸುವ ಒಂದು ಮಾರ್ಗವಾಗಿರುವುದರ ಬಗ್ಗೆ ಸೂಕ್ಷ್ಮ ಎಳೆಗಳಿವೆ. ಚಿರಾಯು ಜ್ಞಾನಪೀಠ ಗಳಿಸಿದ ನಂತರ ಹೆಚ್ಚುವ ಪ್ರವಾಸಗಳು, ಭಾಷಣಗಳು ಅವನ ಸಮಯ ಹಾಗೂ ಇಚ್ಛೆಗೆ ಅವಲಂಬಿತವಾಗಿರದೇ ಅನಿವಾರ್ಯವಾಗುತ್ತವೆ. ವ್ಯಕ್ತಿಯು ಉನ್ನತಮಟ್ಟಕ್ಕೆ ಏರಿದಂತೆ ಅವನ ವೈಯಕ್ತಿಕ ಬದುಕಿನ ಇಚ್ಛೆಗಳು ಹಲವು ಬಾರಿ ಅವನವಾಗಿರದೆ ಸಮಾಜದೊಳಗಿನ ಸುತ್ತುಗಳಾಗಿ ಕುತ್ತುಗಳಾಗುತ್ತವೆ ಎಂಬುದು ಹೊಸ ವಿಚಾರವಲ್ಲದೆಯೂ ಸಹ ಪ್ರತಿಯೊಬ್ಬನ ಬದುಕು ಹಾಗೂ ವೃತ್ತಿ ವಿಭಿನ್ನವಾಗಿರುವಂತೆ ಸಮಸ್ಯೆಗಳ ಹುಟ್ಟು ಸಹ ವಿಭಿನ್ನವಾಗಿರುವುದನ್ನಿಲ್ಲಿ ಕಾಣಬಹುದು.&lt;br /&gt;&lt;br /&gt;ಉನ್ನತ ಸ್ಥಾನಮಾನಗಳು ವ್ಯಕ್ತಿಯನ್ನು ಸಮಾಜದ ಸುತ್ತೊಳಗೆ ಕಟ್ಟಿಟ್ಟೂ ಸಹ ಸಮಾಜದ ಜನರಿಂದ ವ್ಯಕ್ತಿ ಹೊರತಾಗಲ್ಪಡುತ್ತಾನೆ. ವ್ಯಕ್ತಿ ತನ್ನ ಸ್ಥಾನಮಾನ, ಘನತೆಗಳನ್ನು ಕಳಚಿಟ್ಟಾಗ ಸಾಮಾನ್ಯ ಜನರೊಂದಿಗೆ ಸಾಮಾನ್ಯನಾಗಿರಲು, ಎಲ್ಲರೂ ತನ್ನನ್ನು ಸಹಜವಾಗಿ ನೋಡಲಿ ಎಂಬುದಾಗಿ ಬಯಸಿದರೂ ತಾನೆಣೆಸಿಕೊಂಡಂತಿರಲಾಗದ ಮನಃಸ್ಥಿತಿಯೊಂದು ಕಾದಂಬರಿಯಲ್ಲಿ ನಮಗೆ ಗೋಚರವಾಗುತ್ತದೆ. ‘ವಿರೋಧಿಗಳನ್ನು ಎದುರಿಸುವುದೇನೂ ಕಷ್ಟದ ಕೆಲಸ ಆಗಿರಲಿಲ್ಲ ಚಿರಾಯುವಿಗೆ. ಮೇಲ್ನೋಟಕ್ಕೆ ಅವನು ಹೇಗೇ ಪ್ರತಿಕ್ರಿಯಿಸಿದರೂ ಒಳಗೊಳಗೇ ಅವನಿಗೊಂದು ಆತ್ಮಶಕ್ತಿಯಿತ್ತು; ಯಾವ ಟೀಕೆಯೂ ಯಾವ ಮೆಚ್ಚುಗೆಯೂ ಅವನನ್ನು ಕಂಗಾಲು ಮಾಡುತ್ತಿರಲಿಲ್ಲ. ತನ್ನ ಸಂತೋಷ, ಬೇಸರ, ಕೋಪ, ಸಂಕೋಚ, ವಿನಯ ಎಲ್ಲವೂ ನಟನೆಯೆಂಬುದು ಚಿರಾಯುವಿಗೆ ಗೊತ್ತಿತ್ತು’ (ಪುಟ-೩೬). ಈ ಸಾಲುಗಳಲ್ಲಿ ಎಲ್ಲವನ್ನೂ ಸಮಾನವಾಗಿ ಕಾಣುವ ಚಿರಾಯುವಿನ ಮನಸ್ಸು ಇಷ್ಟವಾಗುತ್ತದೆ. ಈ ಸಾಲುಗಳನ್ನು ಓದುತ್ತಲೇ ಹೊಗಳಿಕೆ ತೆಗಳಿಕೆಗಳನ್ನೆಲ್ಲ ನಿರ್ಲಕ್ಷಿಸಿದರೆ ಮನುಷ್ಯನಿಗೆ ಮನಃಶಾಂತಿ ಕೊಂಚ ಲಭ್ಯವಾಗಬಹುದೇ ಎಂಬೆಲ್ಲ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಅಂತೆಯೇ ಸಾಗುವ ಸಾಲುಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಮಾಧ್ಯಮಗಳು ತಲೆಹಾಕುವುದನ್ನು ಚಿರಾಯು ವಿರೋಧಿಸುವ ವಿಚಾರವೊಂದು ಮೂಡಿ ಚಿರಾಯುವಿನ ಪಾತ್ರದ ಆತ್ಮಶಕ್ತಿಯನ್ನು ವಿವರಿಸುತ್ತದೆ.&lt;br /&gt;&lt;br /&gt;‘ಆವತ್ತು ಹಾಗಿದ್ದೆ, ನನ್ನ ಯೌವನದಲ್ಲಿ ಹುಲಿಬೇಟೆ ಆಡಿದ್ದೆ, ಒಂದು ಕಾಲದಲ್ಲಿ ಹಾಗೆ ಮಾಡುತ್ತಿದ್ದೆ, ಅಂತ ಹೇಳಿಕೊಳ್ಳುವುದು ಸಧ್ಯದ ಅಸಹಾಯಕತೆಯನ್ನು ತೋರಿಸುತ್ತದೆ. ವರ್ತಮಾನದಲ್ಲಿ ನಿರ್ಬಲನೂ, ನಿಷ್ಕ್ರಿಯನೂ ಆದ ಮನುಷ್ಯ, ಭೂತಕಾಲಕ್ಕೆ ಕನ್ನಡಿ ಹಿಡಿಯುವ ಮೂಲಕ ತನ್ನ ಶಕ್ತಿ, ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಊರ್ಜಿತಗೊಳಿಸುವ ರೀತಿ ಅವನನ್ನು ತಲ್ಲಣಗೊಳಿಸುತ್ತಿತ್ತು’ (ಪುಟ-೩೮). ಈ ಸಾಲುಗಳು ಬಹಳವೇ ಇಷ್ಟವಾಗುತ್ತವೆ. ಇಂದು ಮಾಡಲಾಗದೆ ಇದ್ದಪಕ್ಷ ನಾವು ಹಿಂದೆ ಮಾಡಿದ್ದನ್ನು ನೆನೆದು ಕೊರಗುತ್ತೇವೆ, ಇನ್ನೊಬ್ಬರ ಮುಂದೆ ಹೇಳಿಕೊಳ್ಳುವ ಅನಿವಾರ್ಯತೆಯೂ ಆಗಿಬಿಡುತ್ತದೆ; ಸುಳ್ಳಲ್ಲ ಅನ್ನಿಸುತ್ತದೆ.&lt;br /&gt;&lt;br /&gt;ಚಿರಾಯು ಬರಹಗಾರನಾಗಿ ಪ್ರಸಿದ್ಧನಾಗುವುದಕ್ಕೂ ಮೊದಲು ಶರತ್ ಕುಮಾರ್ ಎಂಬ ಪ್ರಸಿದ್ಧ ನಟನೊಬ್ಬನನ್ನು ಕಾಣುವ ತವಕ ಹೊಂದಿರುವುದು, ಆ ನಟನನ್ನು ಸಂಧಿಸಿ ಅವನೊಡನೆಯೇ ನಾಲ್ಕು ದಿನ ಕಳೆಯಬೇಕಾಗಿ ಬಂದಾಗ ಅಷ್ಟೆಲ್ಲ ಪ್ರಸಿದ್ಧಿ ಪಡೆದಿದ್ದ ಶರತ್ ಕುಮಾರ್ ಅಂತರಂಗದಲ್ಲಿ ಎಲ್ಲರಂತಿದ್ದ ಎನ್ನುವ ವಿಚಾರ ಚಿರಾಯುವಿಗೆ ಒಪ್ಪಿಕೊಳ್ಳಲಾಗದೇ ಇರುವಂತಹುದು, ನಟನೊಬ್ಬನು ಕಾಣಿಸುವ ನಟನೆ, ಬರಹಗಾರನೊಬ್ಬನು ಬರೆದ ಬರಹಗಳಲ್ಲಿನ ಭಾವಗಳನ್ನು ಇತರರು ಎಲ್ಲ ಸಂದರ್ಭಗಳಲ್ಲಿಯೂ ಬಾಲಿಶವಾಗಿ ಆ ವ್ಯಕ್ತಿಯೊಳಗೆ ಹುಡುಕಿ ನಿರಾಶರಾಗುವ ರೀತಿಯನ್ನಿಲ್ಲಿ ಪರೋಕ್ಷವಾಗಿ ಕಾಣಬಹುದು. ವೃದ್ಧಾಪ್ಯದಲ್ಲಿ ಮಾತಿಗೆ ಹಾತೊರೆಯುತ್ತಲಿದ್ದರೂ, ಏಕಾಕಿಯಾಗಿದ್ದರೂ ತನ್ನ ಸಧ್ಯದ ಸ್ಥಿತಿಯಿಂದ ಹೊಮ್ಮುವ ಅನುಕಂಪ, ಒಂದು ಕಾಲದಲ್ಲಿ ತಾನು ಇಡೀ ನಾಡನ್ನೇ ತನ್ನೆಡೆಗೆ ಸೆಳೆದುಕೊಂಡಿದ್ದೆ ಅನ್ನುವ ಸತ್ಯದಿಂದ ಹೊಮ್ಮುವ ಅಹಂಕಾರ ಎರಡೂ ಬೇಡವೆಂಬಂತೆ ಬದುಕುತ್ತಿರುವ ನಟ ಶರತ್ ಕುಮಾರ್ ಪಾತ್ರ ನಮ್ಮನ್ನು ಒಂದೆಡೆ ಹಿಡಿದಿಡುತ್ತದೆ. ಸಮಾಜದಲ್ಲಿ ಪ್ರಸಿದ್ಧಿ ಪಡೆದವರ ಪಾಡಿಗೆ ಶರತ್ ಕುಮಾರ್ ಪಾತ್ರ ಮತ್ತೊಂದು ಉದಾಹರಣೆಯಾಗುತ್ತದೆ. ‘ದೊಡ್ಡ ಬರಹಗಾರ ಎಂಬ ಹೆಸರಿನಲ್ಲೇ ಲೇಖಕನ ಸಾಮರ್ಥ್ಯ ಸೋರಿ ಹೋಗುತ್ತದೆ. ತನ್ನ ಮುಂದೆ ನಿಂತು ಯುದ್ಧ ಮಾಡುವವನ ಅರ್ಧಶಕ್ತಿಯನ್ನು ಹೀರಿಕೊಳ್ಳುವಂಥ ಹಾರವೊಂದು ವಾಲಿಯ ಬಳಿ ಇತ್ತಂತೆ. ಹೊಗಳುಭಟರೂ ಹಾಗೇ, ಅರ್ಧ ಸೃಜನಶೀಲತೆಯನ್ನು ಕಸಿದುಕೊಂಡು ತನ್ನನ್ನು ಅದೇ ಪಂಜರದೊಳಗೆ ಬಂಧಿಯಾಗಿಸುತ್ತಾರೆ’ (ಪುಟ-೫೩) ಎಂಬಂತಹ ಹೇಳಿಕೆಗಳು ಮೇಲಿನ ಸಂದರ್ಭಕ್ಕೆ ಪೂರಕವಾಗಿ ಮುಂದಿನ ಪುಟಗಳಲ್ಲಿ ಕಾಣಸಿಗುತ್ತವೆ.&lt;br /&gt;&lt;br /&gt;ಚಿರಾಯುವಿಗೆ ‘ಜ್ಞಾನಪೀಠ’ ತಂದುಕೊಟ್ಟ ಕಾದಂಬರಿ ಯಾವುದಾಗಿರಬಹುದೆಂಬ ವಿಚಾರ ಕಥೆಯ ಅರ್ಧದತನಕ ನಮ್ಮನ್ನು ಕಾಡಿದರೂ ನಂತರ ಉತ್ತರ ಸಿಗುತ್ತದೆ. ಅದು ‘ಮೇಘ ಮಲ್ಹಾರ’. ‘ಮೇಘ ಮಲ್ಹಾರ’ ಹೆಣ್ಣೊಬ್ಬಳ ವಿಷಾದವನ್ನು ಮಳೆಗೆ ಹೋಲಿಸಿ ಬರೆದ ಕಾದಂಬರಿಯೆನ್ನುವುದರ ಜೊತೆಗೆ ಆ ಕಥೆ ಅಲ್ಲಿಂದ ಬಿಚ್ಚಿಕೊಳ್ಳುತ್ತದೆ. ಒಂದು ಪಾತ್ರಕ್ಕೊಂದು ರೂಪಕವಾಗಲೀ, ಉಪಮೆಯಾಗಲೀ ಸೃಷ್ಟಿಯಾಗುವಾಗ, ಉಪಮೆ ರೂಪಕಗಳೇ ಇನ್ನೊಂದು ಪಾತ್ರವಾಗಿ ಕಥೆ ಕವಲೊಡೆದುಬಿಡುವಂತಹ ಸಮಸ್ಯೆ ಚಿರಾಯುವನ್ನು ಕಾಡುತ್ತದೆ. ಇದು ಓದುವಾಗ ನಮಗೆ ಅಂಥ ಸಮಸ್ಯೆಯಾಗಿ ಕಾಣಬರದಿದ್ದರೂ ಬರಹಗಾರನಿಗಿದು ಸಮಸ್ಯೆಯೇ. ಎಣಿಸಿಕೊಂಡ ರೀತಿಯಲ್ಲಿ ಕಥೆಯನ್ನು ಅಂತ್ಯಗೊಳಿಸಲಾಗದ ಸಂದಿಗ್ಧ ಸ್ಥಿತಿಯಲ್ಲಿ ಕಥೆಗಾರ ಗೆದ್ದರೂ ಸೋಲುತ್ತಾನೆ. ಇನ್ನು ಕೆಲವೊಮ್ಮೆ ಕಥೆ ಕವಲೊಡೆದಾಗ ಅಂತ್ಯ ಹೇಗೋ ಮುಗಿದುಹೋಗಿ ಗೋಜಲಾಗಿ ನಿಜವಾಗಿಯೂ ಕಥೆಗಾರ ಸೋಲುವ ಸಾಧ್ಯತೆಯೂ ಇದೆ ಎಂಬ ವಿಚಾರವನ್ನು ಕಾದಂಬರಿಯೊಳಗೆ ಚಿರಾಯುವೇ ಯೋಚಿಸುವ ಸಮಸ್ಯೆಯಾಗಿ ಕಾಣಬಹುದಾಗಿದೆ.&lt;br /&gt;&lt;br /&gt;ಕಾದಂಬರಿಯಲ್ಲಿ ಬರುವ ನಿರ್ಮಲೆಯ ಅನೈತಿಕ ಸಂಬಂಧದ ಬಗ್ಗೆ ಹಿಂದಿನಿಂದ ಆಡಿಕೊಳ್ಳುವವರ ನಡುವೆಯೇ ಇದ್ದೂ ಚಿರಾಯು ಆ ಬಗ್ಗೆ ತಲೆಕೆಡಿಸಿಕೊಳ್ಳದೇ, ಎಲ್ಲರಂತೆ ಏನೇನೋ ಯೋಚಿಸದೆ ಮೌನವಾಗಿದ್ದುಬಿಡುವ ರೀತಿ ಇಷ್ಟವಾಗುತ್ತದೆ. ಅಂದರೆ ಕಂಡವರ ಬಗ್ಗೆ ಅನಾವಶ್ಯಕ ಆಡಿಕೊಳ್ಳದವರನ್ನು ನೋಡಿದಾಗ ಸಹಜ ಖುಷಿಯಾಗುವಂತೆ ಚಿರಾಯುವಿನ ಪಾತ್ರವೂ ಹಿಡಿಸುತ್ತದೆ. ಆದರೆ ಅದೇ ನಿರ್ಮಲೆಯೊಂದಿಗೆ ಮುಂದೆ ಚಿರಾಯು ಸಹ ಸಂಬಂಧ ಬೆಳೆಸುತ್ತಾನೆ. ಚಿರಾಯು ಅನಾರೋಗ್ಯದಲ್ಲಿದ್ದಾಗ ಸೇವೆ ಮಾಡುವ ನಿರ್ಮಲೆಯಲ್ಲಿ ಚಿರಾಯು ಒಂದಾಗುತ್ತಾನೆ.&lt;br /&gt;&lt;br /&gt;‘ತನ್ನ ಪಾಲಿಗೆ ಮತ್ತೆ ಚಿಗುರಲಾರದಷ್ಟು ಗೊಡ್ಡಾಗಿರುವ ಮರ, ಹೊರನೋಟಕ್ಕೆ ಹಸಿರು ತುಂಬಿಕೊಂಡಂತೆ ಕಾಣಿಸುತ್ತದೆ. ಆದರೆ ಆ ಮರದಲ್ಲಿ ಗೂಡುಕಟ್ಟಿರುವ ಹಕ್ಕಿಗಳಿಗೆ ಈ ಮರದ ಆಯಸ್ಸು ಮುಗಿಯುತ್ತಾ ಬಂದಿದೆ ಅಂತ ಮೊದಲೇ ಗೊತ್ತಾಗಿಬಿಡುತ್ತದೆ. ಅಂಥ ಮರಗಳಲ್ಲಿ ಹಕ್ಕಿಗಳು ಗೂಡುಕಟ್ಟುವುದಿಲ್ಲ. ಪ್ರತಿವರ್ಷ ಗೂಡು ಕಟ್ಟುತ್ತಿದ್ದ ಗೀಜಗವೋ ಗಿಳಿಯೋ ಗೊರವಂಕವೋ ಅಲ್ಲಿ ಗೂಡುಕಟ್ಟಿಲ್ಲ ಅಂದರೆ ಅದರ ಆಯಸ್ಸು ಮುಗಿಯಿತು ಅಂತಲೇ ಅರ್ಥ’ (ಪುಟ-೫೩) ಎಂಬಂತಹ ಸಾಲುಗಳಲ್ಲಿ ಕಾದಂಬರಿ ಕರ್ತೃ ಜೋಗಿ ಕಾಣಿಸಿಕೊಳ್ಳುತ್ತಾರೆ. ಹಾಗೆಯೇ ಮುಂದುವರೆಯುತ್ತಾ ‘ತಿಳುವಳಿಕೆಗೆ, ಅರಿವಿಗೆ ಕಾಲದ ಮಿತಿಯಿಲ್ಲ. ಆದರೆ, ಮಾಹಿತಿ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ’ (ಪುಟ-೫೫) ಎನ್ನುತ್ತಾರೆ ಜೋಗಿ. ಇಂತಹವುಗಳೆಲ್ಲ ಜೋಗಿಯವರಿಂದಲೇ ಉದ್ಭವಿಸಿದ ಹೊಸ ಯೋಚನೆಗಳಲ್ಲವಾದರೂ, ತಮ್ಮೊಳಗಿನ ಇಂತಹ ಅನೇಕ ಸಿದ್ಧಾಂತಗಳನ್ನು ಅಲ್ಲಲ್ಲಿ ಮಂಡಿಸುತ್ತಾ, ಹೀಗೆ ಬರಹದ ರೂಪದಲ್ಲಿ ಅವುಗಳನ್ನು ಉಳಿಸಿಕೊಳ್ಳುತ್ತಾ ಹೋಗುತ್ತಾರೆ ಜೋಗಿಯವರು.&lt;br /&gt;&lt;br /&gt;ಬೆಂಗಳೂರಿನಲ್ಲಿ ಕುಳಿತು ಬರೆಯುವುದಕ್ಕೆ ಸಾಧ್ಯವೇ ಇಲ್ಲ ಅನ್ನಿಸಿದಾಗ, ಚಿರಾಯು ಏಕಾಂತ ಅರಸಿ ಜನನಿಬಿಡವಾದ ನೆಟ್ವರ್ಕ್ ಸಿಗದ ತಾಣಕ್ಕೆ ಬಂದಿದ್ದಾಗಲೂ ತನಗೆ ಬರೆಯುವುದು ಸಾಧ್ಯವೇ ಇಲ್ಲವೆನಿಸಿ ‘ಪೆಂಗ್ವಿನ್’ ಸಂಸ್ಥೆಯ ಆರು ಲಕ್ಷ ರೂಪಾಯಿಗಳ ಚೆಕ್ಕನ್ನು ಪೆಂಗ್ವಿನ್ ಸಂಸ್ಥೆಗೇ ಮರಳಿಸಿಬಿಡಬೇಕೆಂದು ಯೋಚಿಸುವ ಚಿರಾಯು, ಹಾಗೆಯೇ ಮಾಡುತ್ತಾನೆ.&lt;br /&gt;&lt;br /&gt;&lt;span style="color:#330033;"&gt;&lt;span style="font-size:130%;"&gt;ಕಥೆಯೊಳಗೆದುರಾಗುವ ಪಾತ್ರಗಳು&lt;/span&gt;:&lt;/span&gt;&lt;br /&gt;&lt;br /&gt;ಇಲ್ಲಿಯತನಕವೂ ಶೇಷು ಮತ್ತು ಚಿರಾಯು ಇಬ್ಬರೇ ನೇರವಾಗಿ ನಮ್ಮೆದುರು ಕಾಣಿಸಿಕೊಳ್ಳುವ ಪಾತ್ರಗಳಾಗಿರುತ್ತವೆ. ಚಿರಾಯುವಿನ ನೆನಪಾಗಿಯೋ, ಯೋಚನೆಗಳಾಗಿಯೋ ಅಥವಾ ಅವನ ಯಾವುದೋ ಕಥೆಗಳ ಪಾತ್ರಗಳಾಗಿಯೋ ಬರುವ ಜಯದೇವ, ವಿಜಯಲಕ್ಷ್ಮಿ, ಜಾಹ್ನವಿ, ಸತ್ತ ಶಾನುಬೋಗರ ಹೆಂಡತಿ, ಶ್ರದ್ಧಾ, ಮಾಲವಿಕಾ, ಭಾಗೀರಥಿ ಚಿಕ್ಕಮ್ಮ, ಶಶಿಧರ, ಅರ್ಚಕರಾಗಿದ್ದ ಚಿರಾಯುವಿನ ಅಪ್ಪ, ಅಮ್ಮ, ಶಾಮಣ್ಣ ಮೇಷ್ಟ್ರು, ಅಕ್ಕ ಸರಸ್ವತಿ, ಸುಶೀಲ್ ಸಹಾನಿ, ಊರ್ಮಿಳಾ ದೇಸಾಯಿ, ಸರಸ್ವತಿ (ಸುಶೀಲೆ), ಸುಶೀಲೆಯ ಮಾವ, ಸುಶೀಲೆಯ ಗಂಡ ದೇವರಾಯ, ಸಂದರ್ಶಕಿ ವಂದನಾ ರಾವ್, ಸುಪರ್ಣಾ ದಾಸ್ ಗುಪ್ತಾ, ಸುಚಿತ್ರಾ ನಾಯಕ್, ಪತ್ರಕರ್ತ ರಂಜನ್, ಸುರೇಂದ್ರ ಬಸು, ನಳಿನಿ ಹೆಗಡೆ, ಕೊಂಡಜ್ಜಿ ನಾಗರಾಜ, ನಟ ಶರತ್ ಕುಮಾರ್, ಸುಬ್ಬಣ್ಣ, ತುಂಗಮ್ಮ, ಮೊಕ್ತೇಸರ ಶಂಕರನಾರಾಯಣ ನಾವಡ, ಭಾಗ್ಯಲಕ್ಷ್ಮಿ, ಬಾಬಣ್ಣ, ವಿಕ್ಟರ್‌ನ ಅಪ್ಪ ಜರ್ಮಿ, ಅನ್ನಪೂರ್ಣೆ, ನಿರ್ಮಲ, ವಾಸುದೇವ ಕಿಣಿ, ಶಿರೀಷ್, ಶಶಾಂಕ್ ಶರ್ಮ, ಮುಂತಾದ ಮೂವತ್ತೆಂಟಕ್ಕೂ ಹೆಚ್ಚು ಪಾತ್ರಗಳಲ್ಲಿ ಕೆಲ ಪಾತ್ರಗಳು ನೇರವಾಗಿ ಕಾಣಿಸಿಕೊಳ್ಳತೊಡಗಿ ಕಥೆಗೊಂದು ತಿರುವು ಬರುತ್ತದೆ. ಚಾಲನೆ ಸಿಗುತ್ತದೆ.&lt;br /&gt;&lt;br /&gt;ಕಥೆಯ ಮಧ್ಯಂತರದಿಂದಾಚೆ ನೇರವಾಗಿಯೋ, ನೇರಪಾತ್ರಗಳ ನೆನಪಾಗಿಯೋ, ಯೋಚನೆಗಳಲ್ಲಿಯೋ ಸಿಗುವ ಪಾತ್ರಗಳಾಗಿ ರೋಹಿಣಿ ಟೀಚರ್, ವಿಕ್ಟರ್ ಡಿಸೋಜ, ಉಂಗುರ ಬೆರಳಿನ ಹೆಡ್ಮಾಸ್ಟರು, ವಿಕ್ಟರನ ಅಪ್ಪ, ರೋಹಿಣಿ ಟೀಚರ್ ಗಂಡ, ಕೃಷ್ಣಪ್ರಸಾದ, ಸಾಂಬ, ಸತ್ಯನಾರಾಯಣ ಮೇಷ್ಟ್ರು, ವಿಮಲಾ ಟೀಚರ್, ಶಾಲಿನಿ, ಸುಚಿತ್ರಾಳ ಗಂಡ ಸದಾಶಿವ ಫಣಿಕ್ಕರ್, ಸ್ಮಿತಾ, ಷಣ್ಮುಖ, ಚಿರಾಯುವಿನ ಮಾವ ನರಸಿಂಹಯ್ಯ, ನಾಗಪ್ಪಯ್ಯ, ಪುಸ್ತಕದಂಗಡಿಯ ಪಡುಕೋಣೆ, ಚೇತನ ತೀರ್ಥ, ವಿನಾಯಕ, ಚಿರಾಯುವಿನ ಅತ್ತೆ ಮಂಗಳಾ, ಮಾವ ವೇದವ್ಯಾಸ, ಮಣಿಯಾಣಿ, ಸ್ವಾಮೀಜಿಗಳು, ಸದಾನಂದಯ್ಯ, ನಾಗೇಶ ಐತಾಳ, ಶ್ರೀಪತಿ, ಸ್ಮಿತಾಳ ಅಮ್ಮ, ನಿತ್ಯಾನಂದ, ಭುವನೇಂದ್ರ, ಸಾಜೀದಾ, ಜಾಯ್ಸ್, ಫ್ರಾನ್ಸಿಸ್, ಪುರಂದರ, ಲಕ್ಷ್ಮಿ, ಸ್ವಾಮಿ, ಮುಂತಾದವರು ಕಂಡುಬರುತ್ತಾರೆ.&lt;br /&gt;&lt;br /&gt;&lt;span style="font-size:130%;color:#330033;"&gt;&lt;strong&gt;ಮಧ್ಯಂತರದಿಂದಾಚೆಯ ಕಥೆಯ ಪರಿಚಯಾತ್ಮಕ ವಿಶ್ಲೇಷಣೆ:&lt;br /&gt;&lt;/strong&gt;&lt;/span&gt;&lt;br /&gt;‘ಪೆಂಗ್ವಿನ್’ ಸಂಸ್ಥೆಯ ಚೆಕ್ಕನ್ನು ಮರಳಿಸಿದ ಚಿರಾಯು ಎಲ್ಲಿದ್ದಾನೆ ಎಂಬುದನ್ನು ಹುಡುಕುವುದೇ ಆ ಸಂಸ್ಥೆಯ ಕಾರ್ಯಕರ್ತರಿಗೆ ಸಮಸ್ಯೆಯಾಗುತ್ತದೆ, ದಿಗಿಲು ಹುಟ್ಟಿಸುತ್ತದೆ. ಏಕೆಂದರೆ ಬೆಂಗಳೂರಿನಲ್ಲಿ ಕುಳಿತು ಬರೆಯುವುದಕ್ಕೆ ಸಾಧ್ಯವೇ ಇಲ್ಲವೆಂದುಕೊಂಡ ಚಿರಾಯು ಏಕಾಂತವನ್ನರಸಿ ಹೋದದ್ದೆಲ್ಲಿಗೆ ಎಂಬುದರ ಸುಳಿವು ಯಾರಿಗೂ ಇರುವುದಿಲ್ಲ. ಉಳಿದರ್ಧ ಕಾದಂಬರಿಯ ತುಂಬೆಲ್ಲ ಕಥೆಗಾರ ಚಿರಾಯುವಿನ ಹುಡುಕಾಟವೇ ನಡೆಯುತ್ತದೆ.&lt;br /&gt;&lt;br /&gt;ಈ ಮಧ್ಯೆ ಕಥೆ ಬರೆಯುವುದಿಲ್ಲವೆಂದು ನಿರ್ಧರಿಸಿ ಒಂಟಿಯಾಗಿ ಕುಳಿತ ಚಿರಾಯು, ಶೇಷು ತಂದಿಟ್ಟ ತನ್ನ ಹಳೆಯ ಕಾದಂಬರಿಗಳಲ್ಲಿ ಮೊದಲನೆಯದನ್ನು ಓದುವುದಕ್ಕಾಗಿ ಎತ್ತಿಕೊಳ್ಳುತ್ತಾನೆ. ಆ ಕಾದಂಬರಿಯ ಕಥೆಯೊಳಗಿನ ಯೋಚನೆಗಳು ಸುಳಿಯಾಗಿ ಸುಳಿಯಲಾರಂಭಿಸುತ್ತವೆ. ಆ ಸಂದರ್ಭದಲ್ಲಿ ಚಿರಾಯುವಿನ ಯೋಚನೆಯೊಂದು ಹೀಗೆ ಹೇಳಿಕೆಯಾಗಿ ಮೂಡುತ್ತದೆ, ‘ಎಲ್ಲರ ಕಥೆಯೂ ಒಂದೇ. ಎಲ್ಲರ ಬದುಕಿನ ಗತಿಯೂ ಒಂದೇ. ಅದು ಬರೆಯುವವನ ಮನಃಸ್ಥಿತಿಗೆ ತಕ್ಕಂತೆ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಹೀಗಾಗಿ ಕಥೆಗಾರನೇ ನಿಜವಾದ ಅರ್ಥದಲ್ಲಿ ಸೃಷ್ಟಿಕರ್ತ. ಅವನು ಭಾವನೆಗಳನ್ನು ರೂಪಿಸುತ್ತಾ ಹೋಗುತ್ತಾನೆ. ಯಾವಾಗ ಅಳಬೇಕು, ಯಾವಾಗ ಸಂತೋಷ ಪಡಬೇಕು, ಯಾವ ಭಾವವನ್ನು ಆರಾಧಿಸಬೇಕು; ಸೌಂದರ್ಯ, ಸಜ್ಜನಿಕೆ, ವಿನಯವಂತಿಕೆ, ಆದರ್ಶ ಎಲ್ಲವೂ ಅವನೇ ಸೃಷ್ಟಿಸಿ ಅದನ್ನು ಮುಂದಿನ ಜನಾಂಗಕ್ಕೆ ದಾಟಿಸುತ್ತಾ ಹೋಗುತ್ತಾನೆ.’ ತಕ್ಷಣದ ಮುಂದಿನ ಸಾಲು ಹೀಗಿದೆ ‘ಕ್ರಮೇಣ ಮನುಷ್ಯ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋಗುತ್ತಾನೆ. ಅಳುವುದಕ್ಕೆ, ನಗುವುದಕ್ಕೆ, ಸಂಘಜೀವನಕ್ಕೆ, ಕಾಮುಕತೆಗೆ, ವೈರಾಗ್ಯಕ್ಕೆ ಹೊಸ ಹೊಸ ನೆಪಗಳು ಸೃಷ್ಟಿಯಾಗುತ್ತಾ ಹೋಗುತ್ತವೆ’ (ಪುಟ-೭೦).&lt;br /&gt;&lt;br /&gt;ಚಿರಾಯುವನ್ನು ಹುಡುಗಿಯರ ಹಿಂದೆ ಬೀಳದಂತೆ ಕಾಯ್ದುಕೊಳ್ಳುವ ಸಲುವಾಗಿ ಚಿರಾಯುವಿನ ಪತ್ನಿ ಸ್ಮಿತಾ ಶೇಷು ಎಂಬ ಹುಡುಗನನ್ನು ನೇಮಕ ಮಾಡುತ್ತಾಳೆ. ಆದರೆ ಶೇಷು ಸ್ಮಿತಾಳಿಗಿಂತ ಹೆಚ್ಚಾಗಿ ಚಿರಾಯುವಿಗೇ ನಿಷ್ಠನಾಗಿರುತ್ತಾನೆ. ಕಾದಂಬರಿಯ ಆದಿಯಿಂದ ಅಂತ್ಯದ ಕ್ಷಣಗಳವರೆಗೂ ಕಾಣಿಸಿಕೊಳ್ಳುವ ಶೇಷುವಿನ ಪಾತ್ರ ಆಪ್ತವಾಗುತ್ತದೆ. ಚಿರಾಯುವಿನ ಜೊತೆಯಲ್ಲಿಯೇ ಇದ್ದು ಅವನ ಬೇಕು ಬೇಡಗಳನ್ನೆಲ್ಲ ನಿಷ್ಠೆಯಿಂದ ಗಮನಿಸಿ ಪೂರೈಸುವ ಶೇಷುವಿನ ಪಾತ್ರಕ್ಕೆ ಮೌನವಾಗಿದ್ದುಕೊಂಡೇ ಎಲ್ಲರ ಮನಗೆಲ್ಲುವ ಸಾಮರ್ಥ್ಯವಿದೆ. ಕಾದಂಬರಿಯಲ್ಲಿ ಯಾಮಿನಿಗಿಂತಲೂ ಶೇಷು ಹೆಚ್ಚು ಇಷ್ಟವಾಗುತ್ತಾನೆ. ಈ ನಡುವೆ ಸ್ಮಿತಾ ಯಾಮಿನಿಯೊಡನಾಡುವ ಮಾತುಗಳು ‘ವಿಮಾನದಲ್ಲಿ ಬರುವಾಗ ನನಗೆ ಇಷ್ಟ ಆಗದೆ ಇರೋರು ಪಕ್ಕದ ಸೀಟಲ್ಲಿ ಕೂತಿದ್ರೆ ನಲವತ್ತು ನಿಮಿಷ ಅಂಥವರನ್ನು ಸಹಿಸೋಕ್ಕಾಗಲ್ಲ ನನ್ನ ಕೈಲಿ. ಇನ್ನು ನಲವತ್ತು ವರ್ಷ ಹೇಗೆ ಸಹಿಸಿಕೊಳ್ಳಲಿ. ನೀವಿಬ್ಬರೂ ಜೊತೆಗಿರಿ, ನನ್ನ ಕಣ್ಣೆದುರು ನಿನ್ನ ಚಿರಾಯು ಇರಬೇಕಾಗಿಲ್ಲ’ (ಪುಟ-೭೯). ಈ ಮಾತುಗಳು ಇಷ್ಟವಾಗದೇ ಇರುವುದಿಲ್ಲ.&lt;br /&gt;&lt;br /&gt;ಧರ್ಮಪತ್ನಿಯಿಂದ ಯಾವತ್ತೋ ದೂರಾಗಿದ್ದ ಚಿರಾಯುವನ್ನು ಯಾಮಿನಿಯೂ ಬಿಟ್ಟು ಹೋದಾಗ ಬರುವ ಸಾಲುಗಳು ಇಂತಿವೆ: ‘ಬಾಳೆಯೆಲೆ ಹರಿದಿತ್ತು, ಅದನ್ನಿನ್ನು ಒಣಗಿಸಿದರೂ ಅಷ್ಟೇ, ಬಾಡಿಸಿದರೂ ಅಷ್ಟೇ, ಹಾಗೇ ಬಿಟ್ಟರೂ ಅಷ್ಟೇ’ (ಪುಟ-೭೯). ಕಾದಂಬರಿಯಲ್ಲಿ ಸಿಗುವ ಅವರವರ ಭಾವಕ್ಕೆ ಬಿಡುವ ಇಂತಹ ಸಾಲುಗಳು ಇಷ್ಟವಾಗುತ್ತವೆ. ಬದುಕಿನಲ್ಲಿ ಗಂಡಹೆಂಡಿರ ನಡುವೆ ಬರುವ ಗೆಳತಿಯೊಬ್ಬಳಿಂದ ಬದುಕು ಬೇರೆಯದೇ ತಿರುವು ಕಾಣುತ್ತದೆಯೆಂಬ ಕಥೆ ತೀರಾ ಸಾಮಾನ್ಯವಾದುದಾದರೂ ಬರಹಗಾರನ ಬದುಕಿನಲ್ಲಿ ಅದೊಂದು ಅವಶ್ಯಕತೆಯೆಂಬುದಾಗಿ ಇಲ್ಲಿ ಮೂಡಿರುವ ರೀತಿ ಸ್ವಲ್ಪ ಹೊಸದೆನಿಸುತ್ತದೆ. ಸರಿ ತಪ್ಪುಗಳನ್ನು ಯೋಚಿಸುತ್ತ ಓದುವವರಿಗೆ ಯೋಚನೆಗೊಂದು ಘನವಿಷಯ ಸಿಕ್ಕಂತಾಗುತ್ತದೆ. ಕಥೆಯೊಂದನ್ನು ಬರಿಯ ಕಥೆಯಾಗಿ ಮಾತ್ರ ಓದುವ ನನ್ನಂಥವರಿಗೆ ಕಥೆ ಇಷ್ಟವಾಗಲೂಬಹುದು.&lt;br /&gt;&lt;br /&gt;ಗಂಭೀರವಾಗಿ ಸಾಗುವ ಕಥೆಯ ಮಧ್ಯೆ ನಾಗಪ್ಪಯ್ಯನವರ ಪಾತ್ರ ಗಾಂಭೀರ್ಯವನ್ನು ತುಸು ಸಡಿಲಿಸುತ್ತದೆ. ಅಲ್ಲಿ ನವಿರು ಹಾಸ್ಯವನ್ನು ಸಹ ಕಾಣಬಹುದಾಗಿದೆ. ಕಾದಂಬರಿ ಸಿನಿಮಾ ಆದರೆ ಹೇಗಿರುತ್ತದೆ? ಎಂಬುದಾಗಿ ಕಲ್ಪಿಸಿಕೊಳ್ಳುತ್ತಾ ಓದಿದಾಗ ಈ ಸನ್ನಿವೇಶ ಸ್ವಲ್ಪ ಹೆಚ್ಚೇ ನಗುವನ್ನು ತರಿಸುತ್ತದೆ. ಯೇಟ್ಸ್, ಮ್ಯಾಡ್ ಜೇನ್ ಮತ್ತು ವಾನ್ ಗೋ ಬಗ್ಗೆಯೂ ಒಂದು ಸಂಭಾಷಣೆಯಲ್ಲಿ(೯೮-೯೯ನೆಯ ಪುಟಗಳು) ಪ್ರಸ್ತಾಪವಿದ್ದು, ಈ ಪ್ರಸ್ತಾಪಗಳು ಕಥೆಯ ಪಾತ್ರಗಳಿಗೆ ಹೊಳಪು ಕೊಡುತ್ತವೆ. ‘ಭಾವನಾತ್ಮಕ ಸಂಬಂಧವನ್ನು ಮೀರಿದ್ದು ಸೃಷ್ಟಿಸುವ, ಪ್ರದರ್ಶಿಸಿಕೊಳ್ಳುವ, ಮೀರುವ, ಮೆರೆಯುವ ಅಭಿಲಾಷೆ. ಅದು ಪರಸ್ಪರ ಪೂರಕವಾಗಿದ್ದಾಗಷ್ಟೇ ಸಮಬಂಧ ಶಾಶ್ವತವಾಗುತ್ತದೆ. ಪ್ರೀತಿಯಿಂದಾಗಿ ಕ್ರಿಯಾಶೀಲನಾಗುವ ಮನುಷ್ಯ, ದ್ವೇಷದಿಂದಲೂ ಅಷ್ಟೇ ಕ್ರಿಯಾಶೀಲ ಆಗಬಲ್ಲ.’ (ಪುಟ-೧೦೦) ಎಂಬಂತಹ ಸೈದ್ಧಾಂತಿಕ ಸಾಲುಗಳು ‘ಕಾದಂಬರಿ ಚೆನ್ನಾಗಿಲ್ಲ, ಇಷ್ಟವಾಗಲಿಲ್ಲ’ ಎಂದು ಸಲೀಸಾಗಿ ಹೇಳಿಬಿಡಬಲ್ಲವರ ಮಾತುಗಳನ್ನು ಕಟ್ಟಿಹಾಕುತ್ತವೆ.&lt;br /&gt;&lt;br /&gt;‘ಎಲ್ಲಿಗೆ ಎಂದು ಹೊರಟಾಗಲೂ ಗೊತ್ತಿರಬಾರದು, ತಲುಪಿದ ಮೇಲೆ ಹೊರಟ ಜಾಗ ನೆನಪಿರಬಾರದು, ಅಂಥ ಸ್ಥಿತಿಯಲ್ಲೇ ನಿಜವಾದ ಸಂತೋಷ ಸಿಗೋದಕ್ಕೆ ಸಾಧ್ಯ.’ (ಪುಟ-೧೧೦) ಅಂದುಕೊಳ್ಳುತ್ತಾ ಚಿರಾಯು ಎಲ್ಲದರಿಂದಲೂ, ಎಲ್ಲವುಗಳಿಂದಲೂ ಮುಕ್ತವಾಗುತ್ತಾ ಯಾಮಿನಿಯೊಂದಿಗೆ ಹೊರಟುಹೋಗುತ್ತಾನೆ. ಕಾದಂಬರಿಯ ಅಂತ್ಯದತನಕವೂ ಕಾಣಿಸಿಕೊಳ್ಳುವವನೆಂದರೆ ಆರಂಭದಿಂದಲೂ ಇರುವ ಶೇಷು. ಚಿರಾಯು ವಹಿಸಿದ ಕೆಲಸವನ್ನು ಮುಗಿಸಿದ ಶೇಷು ಕೊನೆಯ ಪುಟದಲ್ಲಿ ಯಾ ಸಿನೇಮಾ ಪರದೆಯ ನಡುವಿನ ದಟ್ಟ ಕಾಡಿನಲ್ಲಿ ಹರಿದ ಹಾದಿಯಲ್ಲಿ ಡ್ರೈವ್ ಮಾಡಿಕೊಂಡು ಮರೆಯಾಗುತ್ತಾನಾದರೂ ಓದಿದವರ ಮನಸ್ಸಿನಿಂದ ಮರೆಯಾಗುವುದಿಲ್ಲ. ಓದುಗರ ಮನಸ್ಸಿನಲ್ಲಿ ಶೇಷು ಚಿರಾಯುವಾಗಿಬಿಡುತ್ತಾನೆ.&lt;br /&gt;&lt;br /&gt;&lt;span style="font-size:130%;color:#330033;"&gt;&lt;strong&gt;ಮುಗಿಸುತ್ತಾ:&lt;br /&gt;&lt;/strong&gt;&lt;/span&gt;&lt;br /&gt;ಸಿನೇಮಾಕ್ಕಾಗಿಯೇ ಬರೆದ ಕಾದಂಬರಿಯೆಂದ ಮೇಲೆ ಸಿನೇಮಾ ಆದಲ್ಲಿ ಒಳ್ಳೆಯ ಸಿನೇಮಾವೇ ಆಗುವಲ್ಲಿ ಸಂದೇಹವಿಲ್ಲ. ಮಧ್ಯಂತರದ ತನಕ ತಣ್ಣಗೆ ಸಾಗುವ ಕಥೆ ಆ ನಂತರ ಭರದಲ್ಲಿ ಸಾಗುವುದರಿಂದ ಚಾಲಾಕು ಜನರಿಗೂ ಇಷ್ಟವಾಗಬಹುದು. ಸಾಹಿತಿಗಳನ್ನಲ್ಲದೇ, ಪತ್ರಿಕೆಯವರನ್ನಲ್ಲದೇ ಎಲ್ಲಾ ರೀತಿಯ ಜನರನ್ನೂ ಆಕರ್ಷಿಸಬಲ್ಲ ಪುಟ್ಟ ಪುಟ್ಟ ಕಥೆಗಳು ಈ ಕಾದಂಬರಿಯಲ್ಲಿವೆ ಎಂಬುದು ಒಂದು ಅಭಿಪ್ರಾಯ. ಕಾದಂಬರಿಗಿಂತಲೂ, ತೆರೆಯ ಮೇಲೆ ಚಿರಾಯುವಿನ ಪಾತ್ರ ಇನ್ನಷ್ಟು ಕಾಡಬಹುದಾದ ಪಾತ್ರವಾಗಬಹುದು ಎನ್ನಿಸುತ್ತದೆ. ಹಾಗೆಯೇ ಅಭಿನಯ ಮತ್ತು ಚಿತ್ರಕಥೆಯೊಳಗಿನಿಂದ ಪೂರ್ಣಗೊಂಡಾಗಲೇ ಪ್ರತೀ ಪಾತ್ರಗಳೂ ಇನ್ನಷ್ಟು ಕಳೆಕಟ್ಟಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿವೆಯೇನೋ ಅನ್ನಿಸುತ್ತದೆ.&lt;br /&gt;&lt;br /&gt;&lt;br /&gt;&lt;span style="font-size:100%;color:#3333ff;"&gt;&lt;strong&gt;ಕೃತಿ: ಯಾಮಿನಿ&lt;br /&gt;ಕರ್ತೃ: ಗಿರೀಶ್ ರಾವ್ (ಜೋಗಿ)&lt;br /&gt;ಪ್ರಕಾಶಕರು: ಅಂಕಿತಾ ಪುಸ್ತಕ, ಗಾಂಧಿ ಬಜಾರ್, ಬೆಂಗಳೂರು&lt;br /&gt;ಮುದ್ರಣ: ೨೦೦೮&lt;br /&gt;ಪುಟಗಳು: ೧೨೦&lt;br /&gt;ಕ್ರಯ: ರೂ ೮೦/-&lt;/strong&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-1229011791189942967?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/1229011791189942967/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=1229011791189942967' title='5 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/1229011791189942967'/><link rel='self' type='application/atom+xml' href='http://www.blogger.com/feeds/5495085842856428066/posts/default/1229011791189942967'/><link rel='alternate' type='text/html' href='http://www.shantalabhandi.com/2010_03_01_archive.html#1229011791189942967' title='ಜೋಗಿ ಅವರ ‘ಯಾಮಿನಿ’ಯೊಂದಿಗೆ ಮುಖಾಮುಖಿ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>5</thr:total></entry><entry><id>tag:blogger.com,1999:blog-5495085842856428066.post-6746746189277739236</id><published>2010-03-24T00:31:00.000-07:00</published><updated>2010-03-24T17:13:11.902-07:00</updated><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ಸಮಯವಿರದ ಹೊತ್ತಿಗೆ</title><content type='html'>ತಂಪು ಗಾಳಿ ಸೆರಗಿಗೆ&lt;br /&gt;ಸುತ್ತಿಕೊಂಡ ತರಗೆಲೆ&lt;br /&gt;ಸರಬರ ಹೊರಳು ಸದ್ದು&lt;br /&gt;ನೀ ಸರಿದು ಹೋದ ಹಾಗೆ&lt;br /&gt;&lt;br /&gt;ಮುಚ್ಚಿದ ಕದದಂಚಿನ&lt;br /&gt;ಕೆತ್ತನೆಯ ಮೇಲೆಲ್ಲ&lt;br /&gt;ಕೈಯ್ಯಾಡಿದಂತೆ ನುಣುಪು&lt;br /&gt;ನೀ ಸವರಿ ಹೋದ ಹಾಗೆ&lt;br /&gt;&lt;br /&gt;ಮಿಂಚುತೆರೆಮಂಜಿನಲಿ&lt;br /&gt;ಕಡಲು ಕಡೆದಿಹ ಕವನ&lt;br /&gt;ಬೆಳ್ಳನೆ ಹಗಲ ಸುಳಿವು&lt;br /&gt;ನೀ ಕದವ ತೆರೆದ ಹಾಗೆ&lt;br /&gt;&lt;br /&gt;ಪಟಪಟನೆ ಬಿರಿದಂಥ&lt;br /&gt;ಪುಸ್ತಕದ ಪುಟಗಳಲಿ&lt;br /&gt;ಪಿಸುಪಿಸು ಮಾತುಕೇಳಿ&lt;br /&gt;ನೀ ನುಡಿದು ಹೋದ ಹಾಗೆ&lt;br /&gt;&lt;br /&gt;ಬಯಲ ಮಂದಿರಕಿಲ್ಲಿ&lt;br /&gt;ಗೋಡೆಯೆಂಬುದೆ ಇಲ್ಲ&lt;br /&gt;ಬಯಲ ಬಾನಿನ ಅಂಚು&lt;br /&gt;ನಿನ್ನೊಂದು ಮನದ ಹಾಗೆ&lt;br /&gt;&lt;br /&gt;ಕಣಿವೆ ಆಳದಲಲೆದು&lt;br /&gt;ಅಳೆದ ಬೆಟ್ಟದ ಅಡಿಯು&lt;br /&gt;ಬೆಳೆದ ಎತ್ತರದಳತೆ&lt;br /&gt;ನಿನ್ನೊಂದು ನೆನಪ ಹಾಗೆ&lt;br /&gt;&lt;br /&gt;ಮೂರು ಕನಸುಗಳಲ್ಲಿ&lt;br /&gt;ಒಂದೆಂದೋ ಸತ್ತಿತು&lt;br /&gt;ಒಂದಕೆ ಇನ್ನೆಂಟು  ಗಳಿಗೆ&lt;br /&gt;ಸಿಗದೆಯೂ ಉಳಿದ ಹಾಗೆ&lt;br /&gt;&lt;br /&gt;ಮೂರನೆಯ ಕನಸದುವೆ&lt;br /&gt;ತುಂಬ ಚಂದದ ಕನಸು&lt;br /&gt;ಕನಸಾಗಿ ಇರಲಿ ಅದು&lt;br /&gt;ಎಂದೆಂದೂ ಕನಸ ಹಾಗೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-6746746189277739236?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/6746746189277739236/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=6746746189277739236' title='16 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/6746746189277739236'/><link rel='self' type='application/atom+xml' href='http://www.blogger.com/feeds/5495085842856428066/posts/default/6746746189277739236'/><link rel='alternate' type='text/html' href='http://www.shantalabhandi.com/2010_03_01_archive.html#6746746189277739236' title='ಸಮಯವಿರದ ಹೊತ್ತಿಗೆ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>16</thr:total></entry><entry><id>tag:blogger.com,1999:blog-5495085842856428066.post-8643899576772649280</id><published>2010-02-27T22:47:00.000-08:00</published><updated>2010-02-28T16:39:44.356-08:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ನಿಜ, ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷ್ಯವಾಗಿಬಿಡಬೇಕು</title><content type='html'>ಹೀಗೆಯೇ ಎಷ್ಟೋ ದಿನ ಯೋಚಿಸುತ್ತೇನೆ. ಲೇಖಕರಿಗಾಗಿ ಮಾತ್ರವಲ್ಲ, ಕಲಾವಿದರ ಬಗ್ಗೆ ನಾನು ಯಾವತ್ತೂ ಹೀಗೆಯೇ ಯೋಚಿಸುತ್ತೇನೆ. ಅವರ ವೈಯಕ್ತಿಕ ಬದುಕು ತೆರೆಯ ಮುಂದೆ ಬಾರದೇ ತೆರೆಯ ಹಿಂದೂ ಸಿಗದೆ ಸುಮ್ಮನೆ ಹೀಗಿರಬಹುದಾ ಅಂತ ಊಹಿಸುತ್ತಲೋ, ಹೀಗಿರಲಿ ಅಂತ ಹಾರೈಸುತ್ತಲೋ ಇರುವಷ್ಟು ಮಾತ್ರ ನನ್ನಂಥ ಅಭಿಮಾನಿಯೊಬ್ಬಳಿಗೆ ದಕ್ಕಬೇಕು. ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷ್ಯವಾಗಿಬಿಡಬೇಕು ಕಲಾವಿದ ಅಂತ ಯೋಚಿಸುತ್ತಿರುವಾಗ ಸುತ್ತ ನೋಡಿದರೆ ನಾನೊಬ್ಬಳೇ ಬೆಪ್ಪುಬೆಪ್ಪಾಗಿ ಯೋಚಿಸುವವಳಂತೆ ಅನ್ನಿಸಿ ಸುಮ್ಮನಾಗುತ್ತೇನೆ, ಸಾಕು ಸುಮ್ಮನಿರು ಅಂತ ಮನಸ್ಸಿಗೆ ಬುದ್ಧಿ ಹೇಳಿ ಒಬ್ಬನ ವೈಯಕ್ತಿಕ ನಿಲುವಿಗೆ ನಿಲುಕಲಾರದ ಈ ವಿಷಯದ ಬಗ್ಗೆ ಹೀಗೊಂದು ನಿಯಮವನ್ನೇ ನಿರ್ಧರಿಸಿಬಿಡುವುದು ಒಳ್ಳೆಯದಲ್ಲ ಅಂತ ನನ್ನನ್ನೇ ನಾನು ಸುಮ್ಮನಿರಿಸುತ್ತೇನೆ.&lt;br /&gt;&lt;br /&gt;ಇವತ್ತು ಖುಷಿಯಾಗಿದೆ. ನಾನು ನನ್ನೊಳಗೆ ಸದಾ ಯೋಚಿಸಿದಂತೆ ಒಬ್ಬರು ಬರೆದಿದ್ದಾರಲ್ಲ ಎನ್ನುವ ಖುಷಿಗಿಂತಲೂ ಹೀಗೆ ಯೋಚಿಸುವವರು ಇದ್ದಾರೆ ಎನ್ನುವ ಸಮಾಧಾನ ಹೆಚ್ಚಾಗಿದೆ. ಕಾರ್ತಿಕ್ ಅವರ ವೈಯಕ್ತಿಕ ಪರಿಚಯ ನನಗಿಲ್ಲ. ಆದರೆ ಕಾರ್ತಿಕ್ ಎಂಬ ಲೇಖಕರೊಬ್ಬರ ಯೋಚನೆಗಳಿಗೆ ಅಭಿಮಾನಿಯಾಗುತ್ತ ಕಾರ್ತಿಕ್ ಬರೆದ ‘&lt;a href="http://hejje.blogspot.com/2010/02/blog-post_26.html"&gt;ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷ್ಯವಾಗಿಬಿಡಬೇಕು ಲೇಖಕ&lt;/a&gt;’ ಲೇಖನವನ್ನು ನನ್ನ ಬ್ಲಾಗಲ್ಲಿಯೂ ಇಟ್ಟುಕೊಳ್ಳುತ್ತಿದ್ದೇನೆ. ಹೀಗೆ ಮಾಡುತ್ತಿದ್ದೇನೆಂದರೆ ಕಾರ್ತಿಕ್ ಅವರ ಯೋಚನೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಮಾತ್ರವೇ ಅಂತಲ್ಲ, ನನ್ನ ಯೋಚನೆಗಳಿಗೆ ಸಿಕ್ಕ ಬೆಂಬಲದ ಬಗೆಗಿನ ಖುಷಿಯೂ ಮತ್ತು ಧನ್ಯವಾದವೂ ಇದರಲ್ಲಿದೆ. ಅದಕ್ಕಾಗಿಯೇ ನನ್ನೀ ಬರಹಕ್ಕೂ ಕಾರ್ತಿಕ್ ಅವರ ಲೇಖನದ ಶೀರ್ಷಿಕೆಯನ್ನೇ ಇಟ್ಟಿದ್ದೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-8643899576772649280?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/8643899576772649280/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=8643899576772649280' title='10 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/8643899576772649280'/><link rel='self' type='application/atom+xml' href='http://www.blogger.com/feeds/5495085842856428066/posts/default/8643899576772649280'/><link rel='alternate' type='text/html' href='http://www.shantalabhandi.com/2010_02_01_archive.html#8643899576772649280' title='ನಿಜ, ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷ್ಯವಾಗಿಬಿಡಬೇಕು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>10</thr:total></entry><entry><id>tag:blogger.com,1999:blog-5495085842856428066.post-359166538794694446</id><published>2010-02-10T22:46:00.000-08:00</published><updated>2010-02-13T21:45:53.400-08:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ಸುಮ್ಮನೆ ಉಕ್ಕಿದ ತೆರೆ...</title><content type='html'>&lt;a href="http://1.bp.blogspot.com/_gIx6mG3I3fg/S3cPGZd2R2I/AAAAAAAAAsI/io3M4B9CyLc/s1600-h/apple-ipod-shuffle2_14_2009.jpg"&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನನ್ನನ್ನೇ ನಾನು ಇಕ್ಕಟ್ಟಿನೊಳಗೆ ಬಿಚ್ಚಿಟ್ಟುಕೊಂಡೇನೆಂಬ ಭಯಕ್ಕೆ ನಾನು ಕೆಲವೊಮ್ಮೆ ಸುಮ್ಮನಾಗುತ್ತೇನೆ ಹೊರತು ಅದು ಮೌನವಲ್ಲ. ಪ್ರತಿಯೊಂದಕ್ಕೂ ಕಾರಣ ಹುಡುಕುವ ನಿನಗೆ ನಾನು ಸುಮ್ಮನೇ ಇದ್ದಿದ್ದೇ ನಾನು ಮಾತನಾಡದೇ ಇರುವುದಕ್ಕೆ ಕಾರಣ ಅಂತ ಅನ್ನಿಸಿದರೆ ಸಹಜ.&lt;br /&gt;&lt;br /&gt;ಯಾಕೆ? ನಿನ್ನ ಪ್ರಶ್ನೆಗಳಿಗೆ ನಾನು ಉತ್ತರಿಸಿಯೇ ಇಲ್ಲವ? ‘ಎಲ್ಲಿ ಹೋಗಿದ್ದೆ ಇಷ್ಟು ಹೊತ್ತು?’ ಅಂತ ನೀ ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದ್ದೆ ‘ಲೊಕೇಶನ್ನ ನೋಡೋಕೆ’ ಅಂತ. ನೀನು ‘ ಲೋಕೇಶ್ ಅಂದ್ರೆ ಯಾರು?’ ಅಂತ ಕೇಳಿದ್ದಕ್ಕೆ ನಾನಾಗಿದ್ದಕ್ಕೆ ನಗಲಿಲ್ಲ. ನಾನು ಹೇಳಿದ್ದು ಶೂಟಿಂಗಿಗೆ ಲೊಕೇಶನ್ನು ನೋಡೋಕೆ ಅಂತ. ನೀನಂದುಕೊಂಡಿದ್ದು ಲೋಕೇಶ ಅನ್ನೋ ವ್ಯಕ್ತಿಯನ್ನ ನೋಡೋಕೆ ಅಂತ. ಮಾತಿಗಿರುವ ಅರ್ಥ ಎಂದರೆ ಇದೇ ಇರಬೇಕು. ಮಾತು ಆಡುವವನೊಳಗೊಂದರ್ಥ ಕೇಳುವವಗೊಂದರ್ಥ ಕೊಡುತ್ತದೆ ಎಂದರೆ ಇಂಥದೇ ಹೊತ್ತುಗಳಲ್ಲಿ ನಾನು ನಂಬುತ್ತೇನೆ. ಇದೇ ಕಾರಣಕ್ಕೆ ನಾನು ಯಾವುದಕ್ಕೂ ಕಾರಣಗಳನ್ನು ಹುಡುಕುವುದಿಲ್ಲ.&lt;br /&gt;&lt;br /&gt;ಅಕ್ಕಿ ಒಬ್ಬನಿಗೆ ಅನ್ನವಾದರೆ ಇನ್ನೊಬ್ಬನಿಗೆ ಅಕ್ಷತೆಯಾಗುತ್ತದೆ. ಅಕ್ಷರವೂ ಹಾಗೆಯೇ.&lt;br /&gt;ಆಯಾವ್ಯಕ್ತಿಗಳಿಗನುಗುಣವಾಗಿ ವಸ್ತುಗಳ ಬಳಕೆ. ಪದಗಳೂ ಹಾಗೆಯೇ. ಮಾತೂ ಅಷ್ಟೇ. ಯಾವುದೇ ಆಗಲಿ ಸದ್ಯುಪಯೋಗವಾಗಲಿ. ಇಕ್ಕಟ್ಟಿನೊಳಗೆ ಬಿಚ್ಚಿಕೊಳ್ಳಲು ಯತ್ನಿಸುವ ಬಲಪ್ರಯೋಗ ಬೇಡ. ಬಯಲಿಗೆ ಬಾ, ನೀನಾಗಿಯೇ ತೆರೆದುಕೊಳ್ಳುತ್ತೀಯ, ವಿಶಾಲವಾಗುತ್ತೀಯ. ಸಹನೆಯ ಕಟ್ಟೆ ಈಗ ಒಡೆಯುತ್ತಿರಬೇಕು ಅಂದುಕೊಳ್ಳಬೇಡ, ಕಟ್ಟೆ ಒಡೆಯುವುದಕ್ಕೆ ಅದರೊಳಗೆ ಸಹನೆಯೇ ಇಲ್ಲ ಎಂಬ ಸತ್ಯವೂ ನಿನಗೆ ಗೊತ್ತಿರಲಿ.&lt;br /&gt;&lt;br /&gt;ಆ ಕಲ್ಲು ಬೆಂಚಿನ ಆಚೆ ಚರಂಡಿ ಇದೆ ಅಂತ ಹೇಳಿದಾಗಲೇ ನೀನು ಅರ್ಥಮಾಡಿಕೊಳ್ಳಬಹುದಿತ್ತು, ಆ ಕಲ್ಲುಬೆಂಚಿನ ಮೇಲೆ ಕುಳಿತುಕೊಳ್ಳಬಾರದು ಅಂತ. ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳುವುದಕ್ಕೆ ನನ್ನಿಂದ ಅಸಾಧ್ಯ ಎಂಬ ದೌರ್ಬಲ್ಯವನ್ನೇ ನೀನು ಬಳಸಿಕೊಂಡು ನಾನಾಡಿದ ಪ್ರತಿಪದವನ್ನೂ ಬಿಡಿಬಿಡಿಸಿ ನಿನ್ನದೇ ಅರ್ಥಗಳನ್ನು ಕಲ್ಪಿಸಿಕೊಳ್ಳುವುದು. ಇದ್ಯಾವುದಕ್ಕೂ ನನ್ನ ತಕರಾರಿಲ್ಲ. ಇದ್ದುದನ್ನು ಇದ್ದ ಹಾಗೆಯೇ ಸ್ವೀಕಾರ ಮಾಡುವ ಜಾಯಮಾನ ನನ್ನದು. ಬದಲಾವಣೆ ಜಗದ ನಿಯಮ, ಇರಬಹುದು. ಆದರೆ ಇದ್ದುದೆಲ್ಲ ಇದ್ದ ಹಾಗೆಯೇ ಇದ್ದರೆ ನನ್ನ ತಕರಾರಿಲ್ಲ, ಬದಲಾವಣೆ ನನಗೆ ಬೇಕಾಗಿಯೇ ಇಲ್ಲ. ತಣ್ಣನೆಯ ಗಾಳಿ ಬೀಸಿ ನನ್ನೆಡೆಗೆ ಹರಿದುಬಂದರೆ ಖುಷಿಯೇ. ಸುಮ್ಮನೆ ಉಕ್ಕುವ ತೆರೆ ನನ್ನೆಡೆಗೆ ಬಂದರೆ ಖುಷಿಯೇ. ಆದರೆ... ಇವೆಲ್ಲವೂ ನನ್ನನ್ನು ಖುಷಿಗೊಳಿಸಲೇ ಬಂದಿದ್ದು ಅಂದುಕೊಳ್ಳುವಷ್ಟು ವಾಸ್ತವಕ್ಕೆ ದೂರವಾಗಿ ನಾನಿಲ್ಲ. ತಣ್ಣನೆಯ ಗಾಳಿ, ತೆರೆ ಎಲ್ಲವೂ ನಿಸರ್ಗ. ಅದರೊಳಗೆ ನಾನೊಬ್ಬಳು. ಪುಟ್ಟ ತೆರೆಯೂ ಅಲ್ಲ, ತಣ್ಣನೆಯ ಒಂದು ಸಣ್ಣ ಅಲೆಯೂ ಅಲ್ಲ.&lt;br /&gt;&lt;br /&gt;ಸಂಜೆಯಾಗುತ್ತಿದೆ, ತೆರೆಗಳು ಮರಳುವ ಮೊದಲು ಮನೆಗೆ ತೆರಳಲೇಬೇಕು. ಒಲೆಯಮೇಲಿನ ಅಕ್ಕಿ ಅಗುಳಾಗಿ ಅರಳುತ್ತಿರಬೇಕು.&lt;br /&gt;ಪಾತ್ರವೊಂದನ್ನು ಸೃಷ್ಟಿಸಿಬಿಟ್ಟರೆ ಕತೆಗಾರನ ಕೆಲಸ ಮುಗಿದಂತಲ್ಲ. ಸೃಷ್ಟಿಯಷ್ಟೇ ಸುಂದರವಾದ ಹಂದರವೊಂದನ್ನು ರೂಪಿಸುವ ತಾಳ್ಮೆ ಕೊನೆಯತನಕವೂ ಇರಬೇಕು. ಹಾಗೆಯೇ ಒಲೆಯಮೇಲೊಂದು ಪಾತ್ರೆ ಇಡುವಾಗಿನ ತಾಳ್ಮೆ ಇಳಿಸುವಾಗಲೂ ಇರಬೇಕು. ಅದಕ್ಕಾಗಿಯೇ ನಾನು ಮತ್ತೆ ತೆರಳುತ್ತಿದ್ದೇನೆ, ಒಲೆಯಮೆಲಿನ ಪಾತ್ರೆಯನ್ನು ಇಳಿಸಬೇಕೀಗ, ಸೀದಲುಬಿಡಬಾರದು, ಮತ್ತೆ ಸಿಗುತ್ತೇನೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-359166538794694446?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/359166538794694446/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=359166538794694446' title='13 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/359166538794694446'/><link rel='self' type='application/atom+xml' href='http://www.blogger.com/feeds/5495085842856428066/posts/default/359166538794694446'/><link rel='alternate' type='text/html' href='http://www.shantalabhandi.com/2010_02_01_archive.html#359166538794694446' title='ಸುಮ್ಮನೆ ಉಕ್ಕಿದ ತೆರೆ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>13</thr:total></entry><entry><id>tag:blogger.com,1999:blog-5495085842856428066.post-8051219552806106385</id><published>2010-01-13T16:01:00.000-08:00</published><updated>2010-01-18T22:07:31.452-08:00</updated><category scheme='http://www.blogger.com/atom/ns#' term='ಅಜ್ಜನ ಮನೆಗೆ ಹೋಗುವ ಬಸ್ಸು'/><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ಬೆಳದಿಂಗಳ ಬೇರು</title><content type='html'>ಅಂದೆಂದೋ ಸುತ್ತ ತಿರುಗುತ್ತ ತನ್ನದಲ್ಲದ ಕಥೆಗಳನ್ನು ತನ್ನದೇ ಶೈಲಿಯಲ್ಲಿ ಹೇಳುತ್ತ ‘ಮುಂದೆ ಕೇಳು ಅಜ್ಜಾ ಸುದ್ದಿ’ ಎನ್ನುವಾಗಲೆಲ್ಲ ಎನ್ನುತ್ತ ಏನೂ ಹೇಳದೇ ಬರೀ ಪ್ರಶ್ನೆಗಳನ್ನೇ ಕೇಳುವ ಆ ವೈಖರಿಗೆ ವಕೀಲವೃತ್ತಿಯೇ ಸರಿ ಎನ್ನುವ ನಿರ್ಧಾರಕ್ಕೆ ಬರುವಷ್ಟರಲ್ಲಿ ಅಡಕತ್ತರಿಗೆ ಅಡುವಾಗಿ ಕುಳಿತ ಅಡಿಕೆ ಚೂರು ಚೂರಾಗಿತ್ತು. ಯೋಚನೆಗೆ ಹಚ್ಚುವ ಅದೇ ಪ್ರಶ್ನೆಗಳು ಬೆಳೆಯುತ್ತ ಬೆಳೆಯುತ್ತ ತಮ್ಮೊಳಗಿನ ದಿಟ್ಟತನವನ್ನೆಲ್ಲ ಒಂದೆಡೆ ಜೋಡಿಸಿಟ್ಟು ನವಿರಾದ ಬೆಳದಿಂಗಳೇ ತಾನು ಎನ್ನುವ ನವಿರು ಧೈರ್ಯವನ್ನು ಸುತ್ತ ಇಬ್ಬನಿಯಂತೆ ಚಿಮುಕಿಸಬಲ್ಲವು ಎಂಬ ವಿಷಯ ಎಳೆಯ ವೀಳ್ಯದೆಲೆ ಮಾತ್ರ ಅಗಿಯುವ ಮಟ್ಟಿನ ವಯಸ್ಸಾದಾಗಲೇ ಅರಿವಾದ್ದು.&lt;br /&gt;&lt;br /&gt;ಹೊಸತಾಗಿ ಮೊನ್ನೆಯಷ್ಟೇ ತಂದುಕೊಟ್ಟ ಕೆಂಪಿಕಾರನ್ನು ಅವ ಮಂಚದ ಕಾಲಿಗೆ ಕಟ್ಟಿ ‘ಎಮ್ಮೆ ಕಟ್ಟಿದ್ದೇನೆ, ಹತ್ತಿರ ಬರಬೇಡಿ, ಹೊರುತ್ತದೆ’ ಅಂದಾಗ ಇವಗಿನ್ನೂ ಎರಡೇ ವರ್ಷ ಅಂತ ಸುಮ್ಮನಾದದ್ದೇ ಎಡವಾಗಿದ್ದು. ಹಸು ಎಮ್ಮೆಗಳನ್ನು ಪ್ರೀತಿಸುವ ಮನುಷ್ಯ ನಾಳೆ ದೊಡ್ಡ ಕೊಟ್ಟಿಗೆಯನ್ನೇ ಕಟ್ಟಿಯಾನು, ಅದಾದರೂ ಸರಿ, ಯಾವತ್ತೂ ಒಳಿತಾಗಿದ್ದರೆ ಸಾಕು ಎಂದುಕೊಳ್ಳುತ್ತ ಗಲ್ಲಾ ಏರಿ ಕೂತು ಕಾಸು ಎಣಿಸುತ್ತ ಇದೀಗ ಇಪ್ಪತ್ತು ವರ್ಷದ ಮೇಲೂ ಅಂಥದೇ ಕಲ್ಪನೆಗಳು.&lt;br /&gt;&lt;br /&gt;ಅವಳೂ ಬೆಳದಿಂಗಳಂತೆ, ಅವಳಿಗಿನ್ಯಾರೊ ಚಂದ್ರಮ. ಸಾಗರದಾಚೆ ಸಾಗುವಷ್ಟರಲ್ಲಿ ಪ್ರಶ್ನೆಗಳನ್ನೆ ಉತ್ತರವಾಗಿಸಿಕೊಂಡು ಸುಮ್ಮನಾದವಳು, ‘ನಾಳೆ ಬರ್ರುತ್ತೇನೆ ಅಜ್ಜಾ’ ಎಂದು ಸುಮ್ಮನೆ ಸಾರಿ ಸಾಗಿ ಹೋದವಳು.&lt;br /&gt;ಇತ್ತ ತಿರುಗಿದರೆ ಇವ ತಾನೂ ಚಂದ್ರನೇ ಎನ್ನುತ್ತಾನೆ, ತನ್ನ ಸುತ್ತೆಲ್ಲ ಇರುವುದು ಬೇರೆಯದೇ ಬೆಳದಿಂಗಳು, ‘ಗುಡ್ ನೈಟ್’ ಹೇಳುವಾಗೆಲ್ಲ ಸುತ್ತ ಆವರಿಸುತ್ತಾಳೆ ಎನ್ನುವ ಕನವರಿಕೆ ಸದಾ ಅವನದು.&lt;br /&gt;&lt;br /&gt;ಮುಂದಿನದೆರಡು ಹಲ್ಲುಮುರಕೊಂಡ ಹೊತ್ತಿನಲ್ಲೆ ಅವನನ್ನೆತ್ತಿಕೊಂಡು ಫೋಟೋ ತೆಗೆಸಿಕೊಳ್ಳಬೇಕಾದೀತು ಅಂತ ಅವಳಿಗೂ ಗೊತ್ತಿರಲಿಲ್ಲ. ಅವಳ ತೊಡೆಯ ಮೇಲೆ ಕೂತು ಹಲ್ಲಿಲ್ಲದ ಬಾಯಲ್ಲಿ ನಕ್ಕವನು ತಾನೇ ಎನ್ನುವುದು ಅವನಿಗೂ ಗೊತ್ತಿರಲಿಕ್ಕಿಲ್ಲ. ಅವಳಾವುದೋ ಊರಿನ ಬೆಳದಿಂಗಳಾಗಿ, ಇವನ್ಯಾವುದೋ ಸೀಮೆಯ ಚಂದ್ರನಾಗಿದ್ದಕ್ಕೆ ಅಜ್ಜನಾಗಿ ಯೋಚಿಸುವಾಗ ಖುಷಿಯಾಗುತ್ತದೆ ಅಂತ ಯಾರಮುಂದೆಯೂ ಹೇಳಲಾಗದೇ ಕಾಣದ ಎರಡೂ ಕಣ್ಣುಗಳು ಹನಿಯಾಗುತ್ತಿವೆ. ಮಳೆನೀರು ಮನೆಯೊಳಗೇ ಪರದೆಯಾದಂತ ಮಸುಕು.&lt;br /&gt;&lt;br /&gt;ಸಮುದ್ರದಾಚೆಯಿಂದ ‘ಹುಣ್ಣಿಮೆಯ ಕರೆಯೋಲೆ ಬೆಳದಿಂಗಳಿರುವಿನಲಿ ನನ್ನಿನಿಯ ಚಂದ್ರಮಗೆ ಮದುವೆಯಂತೆ’ ಅಂತ ಅವಳು ಗೀಚಿಟ್ಟ ಸಾಲಿಗೆ ಎಂಟುವರ್ಷ ಚಿಕ್ಕದಾದ ಮತ್ತೊಂದು ಮನಸ್ಸು ಟ್ಯೂನ್ ಹಾಕುತ್ತದೆ. ಯಾವುದು ಎಂತಾದರೂ ಸರಿ, ಫೋನಲ್ಲಿ ಕೇಳಿದ್ದು ಮಾತ್ರ ಗಂಧರ್ವ ಗಾನವೆನಿಸುತ್ತಿದೆ ಮುದಿಯ ಮನಸ್ಸಿಗೆ. ದೂರದ ಧ್ವನಿ ‘ಹೆಂಗಿದ್ದು ಅಜ್ಜಾ, ನಾ...ನಿನ್ನ ಮೊಮ್ಮಗಳು ಬರದ್ದಿ, ನಿನ್ನ ಮೊಮ್ಮಗ ಟ್ಯೂನ್ ಹಾಕಿದ್ದ’ ಅಂದರೆ ಗಂಟಲು ಕತ್ತರಿಸಿಹೋದ ಖುಷಿ ಒಂದು ನಿಟ್ಟುಸಿರಿನಲ್ಲಿ. ಆಚೆಯ ಮನಸ್ಸುಗಳಿಗೆ ಈ ನೆಮ್ಮದಿ ಸ್ವಲ್ಪವೇ ತಿಳಿದರೂ ಸಾಕು, ಅಜ್ಜನಾದ್ದಕ್ಕೆ, ಮೊಮ್ಮಕ್ಕಳನ್ನು ತಲೆಮೇಲೆ ಕೂರಿಸಿಕೊಂಡು ಆವತ್ತು ಮೆರೆದದ್ದಕ್ಕೆ, ಅವರಾಡಿದ್ದಕ್ಕೆಲ್ಲ ಸೊಪ್ಪುಹಾಕುತ್ತ ಅವರ ಬಲಕ್ಕೆ ನಿಂತ ಸಲುವಾಗಿ ಮಕ್ಕಳಿಂದ ಮಾತುಕೇಳಿದ್ದಕ್ಕೂ ಸಾರ್ಥಕ.&lt;br /&gt;ಹಣ್ಣುಬಿಡಲಿ ಅಂತ ನೆಟ್ಟ ಹಿತ್ತಲಿನ ದಾಳಿಂಬೆಯ ಗಿಡ ಹೂಬಿಡುತ್ತಿದೆ. ಹಣ್ಣಿಲ್ಲದಿದ್ದರೂ ಬೆಳಗ್ಗೆದ್ದರೆ ದೇವರಿಗೆ ಹೂ ಆಯಿತೆಂಬ ಸಮಾಧಾನ ನಮ್ಮೊಳಗಿರಬೇಕಷ್ಟೇ. ಬೆಣ್ಣೆ ಗಿಡಹಾಕಿ ಹಣ್ಣುಬಿಡದೇ ನೋಯುವುದಾಗಲಿಲ್ಲ ಎನ್ನುವ ಸಮಾಧಾನ ಮುದಿಯ ವಯಸ್ಸಿಗೆ ಮತ್ತು ಮನಸ್ಸಿಗೆ ಸಿಕ್ಕರೆ ಇವತ್ತಿನ ತನಕ ಬದುಕಿದ್ದಕ್ಕೂ ಸಾರ್ಥಕ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-8051219552806106385?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/8051219552806106385/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=8051219552806106385' title='7 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/8051219552806106385'/><link rel='self' type='application/atom+xml' href='http://www.blogger.com/feeds/5495085842856428066/posts/default/8051219552806106385'/><link rel='alternate' type='text/html' href='http://www.shantalabhandi.com/2010_01_01_archive.html#8051219552806106385' title='ಬೆಳದಿಂಗಳ ಬೇರು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>7</thr:total></entry><entry><id>tag:blogger.com,1999:blog-5495085842856428066.post-4273450090717011403</id><published>2010-01-03T22:16:00.000-08:00</published><updated>2010-01-03T23:14:03.389-08:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಒಂದು ಮುತ್ತು ಕೊಟ್ಟಿದ್ದರೆ...</title><content type='html'>ಕಾಲ ಜಾರುತ್ತಲೇ ಇರುವಾಗ ನೀನು ಎಲ್ಲಿದ್ದೆ? ಎಲ್ಲಿದ್ದೆ ಎಂಬ ಪ್ರಷ್ನೆ ನೆನಪಾಗಿ ಸವಿಯೆನಿಸುತ್ತಿರುವಾಗಲೇ ಕನಸುಗಳು ಕನ್ನಡಿ ನೋಡಿಕೊಳ್ಳುತ್ತಿವೆ. ಪ್ರತಿಬಿಂಬ ಸೊಗಸಾಗಿದೆ. ಸ್ವಲ್ಪವೇ ಆಚೆ ಸರಿದರೆ ಅದೇನು ಬರಿಯ ಗೋಡೆ. ಬರಿಯದೇ ಗೋಡೆ. ಕನಸುಗಳು ಕಾಲ್ಗೆಜ್ಜೆಯ ನಾದಕ್ಕೆ ತಾಳ ಹಾಕುತ್ತಿರಬೇಕು. ತಾಳದ ಸದ್ದು ಸದ್ದೇ ಇಲ್ಲದೆ ಜಾರುತ್ತಿದೆ. ಇನ್ನೇನು ಜಾರಿಯೇ ಹೋಯಿತು ಎಂದುಕೊಳ್ಳುತ್ತಿರುವಾಗಲೇ ಬೆನ್ನಿಗೆ ಭರವಸೆ ಬಂದು ಬಡಿದಂಥ ಭಾಸ. ಕಿವಿಯೋಲೆ ಕಾಲರಿನ ಬಟನ್ನಿಗಿಟ್ಟ ಕಾಜೊಳಗೆ ಸಿಕ್ಕಿದ್ದಷ್ಟೇ ನೆನಪು, ಓಲೆಯ ಹಿಂಭಾಗದ ಕೋಳೆ ಸಿಗಲೇ ಇಲ್ಲ, ಹುಡುಕಿದ್ದಷ್ಟೇ ಲಾಭ. ಭಾಸವಾಗಿದ್ದು ಬೇರೆಯೇ, ಕಲ್ಪನೆ ಇದಕ್ಕೆ ತೀರ ಭಿನ್ನ. ಉಪಮೆ ರೂಪಕಗಳೆಲ್ಲೂ ಸಿಗುತ್ತಿಲ್ಲ, ಅಂಗಡಿಗಳ ಮುಂದೆ ಸೋಲ್ಡ್ ಔಟ್ ಬೋರ್ಡು.&lt;br /&gt;&lt;br /&gt;ತಂದಿಟ್ಟ ಮುತ್ತುಗಳನ್ನೆಲ್ಲ ಪೋಣಿಸುತ್ತಕೂತರೆ ಮಧ್ಯೆ ಪೋಣಿಸಬೇಕಿದ್ದ ಗುಲಾಬಿ ಮುತ್ತು ನಿನ್ನ ಅಂಗಿಯ ಕಿಸೆಯಲ್ಲಿಯೇ ಇದ್ದದ್ದು ನೆನಪಾಗಿ ನೀ ಬಂದಂತೆ ಕನಸುಕಾಣುತ್ತ ಕೂರುವಂತಾಯಿತು ನೋಡು, ಆ ಒಂದು ಮುತ್ತು ಕೊಟ್ಟಿದ್ದರೆ ಮುತ್ತಿನಸರ ಪೂರ್ತಿಯಾಗುತ್ತಿತ್ತು. ಬಿಗಿದಪ್ಪಿ ತಲೆನೇವರಿಸಿದಂತ ಪ್ರೀತಿಯದೊಂದು ಬಂಧನ. ಸಕಲ ಬಂಧನವೂ ಸಂಕೋಲೆಯಲ್ಲ ಅಂತ ಗೊತ್ತಾದದ್ದು ತಲೆನೇವರಿಸಿದಾಗಲೇ. ಬೆಳಗೆಂದರೆ ಸುಪ್ರಭಾತವೆನ್ನುವುದು ತಿಳಿದದ್ದೇ ತಡ ಮೂಕಳಾಗಿದ್ದೇನೆ. ಬೆಳಗೆಂದರೆ ಬಿಕ್ಕು ಎಂಬುದು ಒಂದು ಬೆಳಿಗ್ಗೆ ಗೊತ್ತಾದರೆ ನೀನು ಹೊಣೆಯಲ್ಲ. ಸುಮ್ಮನಿರುತ್ತೇನೆ. ಎಲ್ಲದಕ್ಕೂ ಕಣ್ಣೀರು ಖರ್ಚಾಗಿಸುವುದು ನ್ಯಾಯವಲ್ಲ. ಕಣ್ಣೀರ ಖರ್ಚನ್ನು ಮೌನದೊಳಗೆ ಉಳಿಸಿದ್ದೇನೆ ಭವಿಷ್ಯಕ್ಕಾಗಿ, ಇದ್ದವರಿಗೆ ಭವಿಷ್ಯವಿದೆಯಲ್ಲ.&lt;br /&gt;&lt;br /&gt;ಆ ಕವಿತೆಗಳ ಸಾಲುಗಳು ಎಷ್ಟುಹುಡುಕಿದರೂ ಸಿಗುತ್ತಿಲ್ಲ, ಇನ್ನು ‘ಸೇಲ್’ಗಾಗಿ ಕಾಯುವುದೂ ಸರಿಯಲ್ಲ. ಭರವಸೆ ಬೆನ್ನುಡಿಯಾಗಿದ್ದೇ ಸಾಕು ಮುನ್ನಡೆಸುವದಕ್ಕೆ. ಮಧ್ಯೆ ಒಂದಿಷ್ಟು ಬೋಳು ಹಾಳೆಗಳು, ನೂರಿಪ್ಪತ್ತೇ ಇರಬೇಕೆಂದರೆ ಐವತ್ತು ಹೊಂದಿಸಬಹುದು. ಶೀರ್ಷಿಕೆಗೆ ನಿನ್ನ ಹೆಸರೇ ಇರಲಿ ಅಥವಾ ನೀನೆ ಬರೆದುಬಿಡು. ‘ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಇನಿತು ಅಂತರ’. ಬೋಳು ಹಾಳೆಗಳನ್ನೆಲ್ಲ ತುಂಬಿಸುವುದಕ್ಕೆ ಬಣ್ಣಗಳನ್ನು ತರಿಸಿಟ್ಟರೆ ಅದರಲ್ಲಿ ಬಿಳಿಬಣ್ಣವೇ ಕಾಣುತ್ತಿಲ್ಲ. ಹಾದಿಮಧ್ಯದಲ್ಲಿ ಬೀಳಿಸಿಲ್ಲ ಅಂತಲೇ ನಂಬಬೇಕಷ್ಟೇ. ಎಷ್ಟೆಂದರೂ ಬಿಳಿಯೊಂದು ಬಣ್ಣವೇ ಅಲ್ಲ ಎಂಬ ಹೇಳಿಕೆಗೆ ಬಿಳಿಬಣ್ಣ ಕಾಣದೇ ಹೋದರೆ ದೋಷವೇನಲ್ಲ ಬಿಡು. ಎಲ್ಲವನ್ನೂ ಬಿಳಿಬಣ್ಣಮಾಡುವದಕ್ಕಾಗಿ ಅಷ್ಟೂಬಣ್ಣವನ್ನು ಟಾಯರು ಉರುಳಿಸುವ ಕೋಲಿನಿಂದ ತಿರುಗಿಸುತ್ತ ಕೂತರೆ ಒಲವಿನ ಬಣ್ಣಬಣ್ಣಗಳೆಲ್ಲ ಬೆಳ್ಳಗಾಗುವುದಕ್ಕೆ ಬಣ್ಣಗಳಿಗೇನು ಬ್ಲೀಚ್ ಬಳಿದಿಲ್ಲ, ಏಳು ಸಾಕು. ಜೀವ ನದಿಯಾಗಿ ಹರಿಯುತ್ತಿದೆ, ಹರಿದದ್ದನ್ನೆಲ್ಲ ಒಂದಿಷ್ಟು ಹೊಲಿಯಬೇಕಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-4273450090717011403?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/4273450090717011403/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=4273450090717011403' title='12 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/4273450090717011403'/><link rel='self' type='application/atom+xml' href='http://www.blogger.com/feeds/5495085842856428066/posts/default/4273450090717011403'/><link rel='alternate' type='text/html' href='http://www.shantalabhandi.com/2010_01_01_archive.html#4273450090717011403' title='ಒಂದು ಮುತ್ತು ಕೊಟ್ಟಿದ್ದರೆ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>12</thr:total></entry><entry><id>tag:blogger.com,1999:blog-5495085842856428066.post-6623025360950124803</id><published>2009-11-06T10:09:00.000-08:00</published><updated>2009-11-06T11:12:58.566-08:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><title type='text'>ಹಕ್ಕಿಹಾಡ ಹಂಚಿಕೊಳ್ಳಲೋಸುಗ...</title><content type='html'>ದೂರದ ಮನೆಯ ಹಿಂದಿನ ಮರದ ಸುತ್ತ ಯಾವುದೋ ಪುಟ್ಟ ಹಕ್ಕಿಗಳು ಗಿರಿಗುಟ್ಟಿ ತಿರುಗುತ್ತಿವೆ. ನೋಡುತ್ತ ಕುಳಿತರೆ ಯಾವ ಕಥೆಗೂ ಸಾಟಿಯಿಲ್ಲದ ಚಿತ್ರವೊಂದು ಸುತ್ತ ತಿರುಗುತ್ತಿದೆ. ವಾತಾವರಣ ಒಮ್ಮೆ ಶುಭ್ರ, ಇನ್ನೊಮ್ಮೆ ನಿರಭ್ರ. ಸೂರ್ಯನಿಗೂ ಮರುಳು. ಒಮ್ಮೆ ಮನೆಯೆದುರು ಬಂದು ಇನ್ನೊಮ್ಮೆ ಮನೆಯಾಚೆ ಮರೆಯಾಗುವ ಮರುಳ. ಬಿಸಿಲು, ಮೋಡ ಎಲ್ಲವೂ ಜೊತೆಯಾಗಿವೆ. ಸುತ್ತೆಲ್ಲ ಬೆಳ್ಳನೆಯ ತಂಪು. ಚೆಂದದ ಕವಿತೆ ಹುಟ್ಟಬಹುದಿತ್ತು, ಈಗಿಲ್ಲೊಬ್ಬ ಒಳ್ಳೆಯ ಕವಿಯೂ ಇರಬೇಕಿತ್ತು. ದೂರದ ಮರದ ಹಕ್ಕಿ ಚಿಲಿಗುಟ್ಟುತ್ತಿದೆ, ಬರೆಯುವುದೇನು ಬಂತು ಹಾಡಿಯೇನು ಕೇಳು ಎನ್ನುವಂತೆ. ಹಕ್ಕಿಹಾಡ ಹಂಚಿಕೊಳ್ಳಲೋಸುಗ ಈ ಪತ್ರ. ಇವಿಷ್ಟು ಬರೆಯದೇ ಇರಲಾಗಲಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-6623025360950124803?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/6623025360950124803/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=6623025360950124803' title='15 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/6623025360950124803'/><link rel='self' type='application/atom+xml' href='http://www.blogger.com/feeds/5495085842856428066/posts/default/6623025360950124803'/><link rel='alternate' type='text/html' href='http://www.shantalabhandi.com/2009_11_01_archive.html#6623025360950124803' title='ಹಕ್ಕಿಹಾಡ ಹಂಚಿಕೊಳ್ಳಲೋಸುಗ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>15</thr:total></entry><entry><id>tag:blogger.com,1999:blog-5495085842856428066.post-9031598075093085613</id><published>2009-10-17T10:42:00.000-07:00</published><updated>2009-10-17T19:34:00.797-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಭೂಹಣತೆಯೊಳಗೆ ಕುಡಿದೀಪ ಮಿನುಗಿ...</title><content type='html'>&lt;p align="center"&gt;&lt;a href="http://www.panditjiusa.com/_borders/Ganesh_Orange_animated.gif"&gt;&lt;img style="WIDTH: 179px; HEIGHT: 176px; CURSOR: hand" border="0" alt="" src="http://www.panditjiusa.com/_borders/Ganesh_Orange_animated.gif" /&gt;&lt;/a&gt;&lt;/p&gt;&lt;p align="center"&gt;&lt;a href="http://3.bp.blogspot.com/_gIx6mG3I3fg/StpAQEna8fI/AAAAAAAAApg/DtGk5cOBBKw/s1600-h/diwali.gif"&gt;&lt;img style="WIDTH: 400px; HEIGHT: 300px; CURSOR: hand" id="BLOGGER_PHOTO_ID_5393694148590760434" border="0" alt="" src="http://3.bp.blogspot.com/_gIx6mG3I3fg/StpAQEna8fI/AAAAAAAAApg/DtGk5cOBBKw/s400/diwali.gif" /&gt;&lt;/a&gt;&lt;/p&gt;&lt;div align="center"&gt;&lt;span style="color:#ff6666;"&gt;ಭೂಹಣತೆಯೊಳಗೆ ಕುಡಿದೀಪಗಳು ಮಿನುಗಿ&lt;br /&gt;ಬೆಳಕಾಗಿ ಭೂರಮೆಯ ತನುಮನದ ಒಳಹೊರಗೆ&lt;br /&gt;ನಾವು ಬೆಳಗೋಣ ತೈಲವೇ ನಾವಾಗಿ,&lt;br /&gt;ಬತ್ತಿಯೇ ನಾವಾಗಿ, ದೀಪವೇ ನಾವಾಗಿ,&lt;br /&gt;ಕೊನೆಯಲ್ಲಿ ಬೆಳಕೂ ನಾವಾಗಿ&lt;br /&gt;ಬೆಳಗೋಣ ಬನ್ನಿ ಭೂರಮೆಯನೆಲ್ಲ&lt;br /&gt;&lt;br /&gt;ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.&lt;br /&gt;ಎಲ್ಲರಿಗೂ ದೀಪಾವಳಿಯು ಇನ್ನಷ್ಟು ಬೆಳಕು ಕೊಡಲಿ.&lt;br /&gt;&lt;br /&gt;ವಂದನೆಗಳೊಂದಿಗೆ,&lt;br /&gt;ಪ್ರೀತಿಯಿಂದ,&lt;br /&gt;-ಶಾಂತಲಾ ಭಂಡಿ.&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-9031598075093085613?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/9031598075093085613/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=9031598075093085613' title='9 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/9031598075093085613'/><link rel='self' type='application/atom+xml' href='http://www.blogger.com/feeds/5495085842856428066/posts/default/9031598075093085613'/><link rel='alternate' type='text/html' href='http://www.shantalabhandi.com/2009_10_01_archive.html#9031598075093085613' title='ಭೂಹಣತೆಯೊಳಗೆ ಕುಡಿದೀಪ ಮಿನುಗಿ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_gIx6mG3I3fg/StpAQEna8fI/AAAAAAAAApg/DtGk5cOBBKw/s72-c/diwali.gif' height='72' width='72'/><thr:total>9</thr:total></entry><entry><id>tag:blogger.com,1999:blog-5495085842856428066.post-6773394461066594420</id><published>2009-10-02T16:01:00.000-07:00</published><updated>2009-10-02T18:21:15.364-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಹ್ಯಾಪಿ ಬರ್ಥ್ ಡೇ ಟು ಬ್ಲಾಗ್ ಮರಿ</title><content type='html'>ಗರಿಬಿಚ್ಚಿ, ಗರಿಗೆದರಿ, ಗರಿಮುರಿದು, ಗರಿಮುದುರಿ ಅಲ್ಲಲ್ಲಿ ಬಿದ್ದಿದ್ದ ಆ ಅಕ್ಷರಗಳಿಗೊಂದು ಗೂಡು ಬೇಕೆನಿಸಿದ್ದು ಈ ಬ್ಲಾಗಿನಿಂದ. ಗೂಡಾಗುವ ಬದಲು ಗರಿಬಿಚ್ಚಿದ ಬ್ಲಾಗು ಹಕ್ಕಿಯೇ ತಾನಾಯಿತು. ಅಕ್ಷರದ ಅಕ್ಕಿಯನ್ನೆಲ್ಲ ಹೆಕ್ಕಿ ಹೆಕ್ಕಿ ತಿಂದು ಹೊಟ್ಟೆತುಂಬಿಸಿಕೊಂಡು ಒಮ್ಮೆ ಹಾರಿತು, ಮತ್ತೊಮ್ಮೆ ಮುದುಡಿ ಕುಳಿತಿತು. ಮೊಟ್ಟೆಯಿಡುವ ಬದಲು ತಾನೇ ಮರಿಯಾಯಿತು. ಬ್ಲಾಗ್ ಮರಿಯಾಯಿತು. ಹಾರುವುದನ್ನೇ ಮರೆತು ಹಾಡಿತು. ಹಾಡುವುದನ್ನೇ ಮರೆತು ನಲಿಯಿತು. ನಲಿಯುವುದನ್ನೇ ಮರೆತು ಸುಮ್ಮನಾಯಿತು. ಮತ್ತೆ ನಕ್ಕಿತು, ಅಳುವನ್ನೇ ಮರೆತಂತೆ. ಅತ್ತಿತು ನಕ್ಕೇ ಇಲ್ಲವೆಂಬಂತೆ. ಹೋಯಿತಾ ಹಾರಿ ಅಂತ ನೋಡುತ್ತಿರುವಂತೆ ಮತ್ತಿಲ್ಲೇ ಬಂದಿಳಿಯಿತು. ದೂರದೂರದಲ್ಲಿ&lt;br /&gt;ಚಿಲಿಪಿಲಿಗುಡುತ್ತಿರುವವರನ್ನೇ ಕೂಗಿಕೂಗಿ ಕರೆಯುತ್ತಲಿತ್ತು. ಆ ದೂರದ ಚಿಲಿಪಿಲಿಗಳು ಸನಿಹವಾದವು. ಚೆಂದಚೆಂದದ ಸುಮಾರಷ್ಟು ಬೆಳಗನ್ನು ಕಾಣುತ್ತಿರುವಂತೆಯೇ ಸುತ್ತೆಲ್ಲ&lt;br /&gt;ಚಿಲಿಪಿಲಿಯ ಗಾನ. ತನ್ನ ಕೂಗನ್ನೇ ತಾ ಮರೆತು ಚಿಲಿಪಿಲಿಯನಾಲಿಸುತ್ತ ಅತ್ತಿತ್ತ ನೋಡುತ್ತಿರುವಷ್ಟರಲ್ಲಿ ವರ್ಷಗಳೆರಡು ಕಳೆದುಹೋದವು ಬ್ಲಾಗ್ ಮರಿಗೆ. ನಿಮ್ಮಗಳ ಅಂಗಳದಲ್ಲಿ, ಅಂಗಳದ ಗಿಡದಲ್ಲಿ, ಗಿಡದ ಗೂಡಲ್ಲಿ, ಮನದಮಡಿಲಲ್ಲಿ ಬ್ಲಾಗ್ ಮರಿ ಆಡುತ್ತ ಕಳೆದ ಎರಡುವರ್ಷ ತೀರ ಚಂದದ್ದು. ಹೇಳಲಾಗದ್ದು. ಬ್ಲಾಗ್ ಮರಿಯೊಡನೆ ಸುತ್ತುತ್ತಲಿರುವಾಗ ಸಿಕ್ಕಿದ ಎಲ್ಲ ಬಾಂಧವರಿಗೂ ಬೊಗಸೆಯೊಳಗಿಷ್ಟು ಪ್ರೀತಿ, ಮುಷ್ಠಿ ಮುಷ್ಠಿ ಮೊಗೆದಷ್ಟೂ ಮುಗಿಯದಷ್ಟು ನಿಮ್ಮಿಂದ ದಕ್ಕಿದ್ದು.&lt;br /&gt;&lt;br /&gt;&lt;br /&gt;ಅಕ್ಟೋಬರ್ ಎರಡು ಗಾಂಧಿಜಯಂತಿ, ಲಾಲ್ ಬಹದ್ದೂರ್ ಜಯಂತಿಗಳ ಜೊತೆಗೆ ನನ್ನೀ ಬ್ಲಾಗ್ ಮರಿಗೂ ಹುಟ್ಟಿದದಿನ. (ಅಕ್ಟೋಬರ್-2) ಇಂದಿಗೆ ಈ ಬ್ಲಾಗ್ ಮರಿಗೆ ಎರಡುವರ್ಷ. ಮರಿಗೆ ಹೊಸಬಟ್ಟೆ ತೊಡಿಸಬೇಕಿತ್ತು, ತೊಡಿಸಿಯಾಯಿತು. ಕೇಕ್ ಕತ್ತರಿಸಬೇಕಿತ್ತು, ಕತ್ತರಿಸಬೇಕು. ಸುತ್ತೆಲ್ಲ ನೀವಿರಬೇಕು ಹರಸುತ್ತ ಹಾರೈಸುತ್ತ, ಹಾಡುತ್ತ. ನಿಮ್ಮೆಲ್ಲರ ಬರುವ ಕಾಯುತ್ತ ನಿಮ್ಮೆಲ್ಲರ ಬ್ಲಾಗ್ ಮರಿ ಬಾಗಿಲಲ್ಲೇ ಕುಳಿತಿದೆ. ಜೊತೆಯಲ್ಲಿ ನಾನೂ.&lt;br /&gt;&lt;br /&gt;&lt;br /&gt;&lt;a href="http://2.bp.blogspot.com/_gIx6mG3I3fg/SsahVC-VZpI/AAAAAAAAApY/Y38_wPVSSiU/s1600-h/cockatiel.gif"&gt;&lt;img style="WIDTH: 400px; HEIGHT: 286px; CURSOR: hand" id="BLOGGER_PHOTO_ID_5388171387143022226" border="0" alt="" src="http://2.bp.blogspot.com/_gIx6mG3I3fg/SsahVC-VZpI/AAAAAAAAApY/Y38_wPVSSiU/s400/cockatiel.gif" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-6773394461066594420?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/6773394461066594420/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=6773394461066594420' title='31 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/6773394461066594420'/><link rel='self' type='application/atom+xml' href='http://www.blogger.com/feeds/5495085842856428066/posts/default/6773394461066594420'/><link rel='alternate' type='text/html' href='http://www.shantalabhandi.com/2009_10_01_archive.html#6773394461066594420' title='ಹ್ಯಾಪಿ ಬರ್ಥ್ ಡೇ ಟು ಬ್ಲಾಗ್ ಮರಿ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_gIx6mG3I3fg/SsahVC-VZpI/AAAAAAAAApY/Y38_wPVSSiU/s72-c/cockatiel.gif' height='72' width='72'/><thr:total>31</thr:total></entry><entry><id>tag:blogger.com,1999:blog-5495085842856428066.post-504002243767027119</id><published>2009-09-15T10:29:00.001-07:00</published><updated>2009-10-02T00:48:46.573-07:00</updated><title type='text'>ಚೆಲುವೆಂಬ ಬಾಗಿಲ ಹಿಂದೆ...</title><content type='html'>&lt;span style="font-size:100%;color:#993399;"&gt;ಬಾಗಿಲು ಬಡಿದ ಸದ್ದಿಗೆ ತೆರೆದ ಬಾಗಿಲನ್ನು ಹಿಂದೆತಳ್ಳಿ ಬಾಗಿಲ ಮುಂದೆ ನಿಂತಿದ್ದೇನೆ.&lt;br /&gt;ಸಂಕೋಚ ಹೊತ್ತು ನಿಂತವಳು ಕೇಳುತ್ತಾಳೆ ‘ನಿನ್ನ ಮಗ ಯಾವ ಶಾಲೆಗೆ ಹೋಗ್ತಾನೆ?’ ಅವಳ ಪ್ರಶ್ನೆಗೆ ಒಂದು ಪದದ ಉತ್ತರವಿತ್ತು ಕಣ್ಣನ್ನೇ ಪ್ರಶ್ನೆಯಾಗಿಸಿಕೊಂಡು ನಿಂತಿದ್ದೇನೆ. ಒಳಕ್ಕೆ ಬಾ ಎನ್ನುವುದಕ್ಕೆ ನನಗವಳ ಪರಿಚಯವಿಲ್ಲ. &lt;/span&gt;&lt;span style="font-size:100%;color:#993399;"&gt;ಪರಿಚಯವಿರದೆಯೇ ಮನೆಯೆದುರು ಬಂದ ಅತಿಥಿಗಳ ಕರೆದು ಒಳಕೂರಿಸಿ ಆದರಿಸಿ ಆಮೇಲೆ ಪರಿಚಯಿಸಿಕೊಳ್ಳಲು ಇದು ಕದಂಬರಾಳಿದ ಊರಲ್ಲ.&lt;br /&gt;ನಿಂತಿದ್ದೇನೆ ಕಣ್ಣಾಳದಲ್ಲಿ ‘ನೀನ್ಯಾರು?’ ಎಂಬ ಪ್ರಶ್ನೆಯ ಹೊತ್ತು. ‘ನಾನು ಜಾಹ್ನವಿಯ ಅಮ್ಮ’ ಎನ್ನುತ್ತಾಳೆ ತಾನೇ.&lt;br /&gt;&lt;br /&gt;ಜಾಹ್ನವಿ! ಜಾಹ್ನವಿ! ಇದು ನನಗೆ ಚಿರಪರಿಚಿತ ಹೆಸರು. ನನ್ನ ಬದುಕಿಗೊಂದು ಅರ್ಥಕೊಟ್ಟವನ ಅಮ್ಮನ ಹೆಸರು. &lt;/span&gt;&lt;span style="font-size:100%;color:#993399;"&gt;ಆ ಅಮ್ಮ ಅಲ್ಲಿಯೇ ಸೋಫಾದಲ್ಲಿ ‘ಮಿಥುನ’ ಪುಸ್ತಕದಲ್ಲಿನ ಬುಚ್ಚಿಲಕ್ಷ್ಮಿ ಮತ್ತು ಅಪ್ಪಾದಾಸುವಿನ ಕತೆ ಓದುತ್ತಿದ್ದವಳೀಗ ಎದ್ದು ಬಾಗಿಲಿಗೆ ಬಂದಿದ್ದಾಳೆ, ತನ್ನ ಹೆಸರಿನ ಹುಡುಗಿಯ ಅಮ್ಮನನ್ನು ನೋಡಲು.&lt;br /&gt;&lt;br /&gt;ಯಾಕೋ ಇದೀಗ ಅಪರಿಚಿತಳು ಆತ್ಮೀಯಳಂತೆ ಕಾಣುತ್ತಿದ್ದಾಳೆ, ನನ್ನತ್ತೆಯ ಹೆಸರನ್ನೇ ಮಗಳಿಗಿಟ್ಟವಳಾಗಿದ್ದಕ್ಕಿರಬೇಕು. ಬಾ ಒಳಗೆ ಕುಳಿತುಕೋ ಎಂದರೆ ಬಾಗಿಲಾಚೆ ನಿಂತೇ ಇದ್ದಾಳೆ. ಮತ್ತೆ ಕೇಳುತ್ತಾಳೆ ‘ಕೆಲದಿನಗಳ ಹಿಂದೆ ಭಾರತದಿಂದ ಬಂದೆವು, ನಿನ್ನ ಮಗ ಹೋಗುವ ಶಾಲೆಗೇ ನನ್ನ ಮಗಳನ್ನೂ ಸೇರಿಸಿದ್ದೇವೆ. ನನಗೆ ಡ್ರೈವಿಂಗ್ ಗೊತ್ತಿಲ್ಲ. ಬೆಳಿಗ್ಗೆ ನನ್ನ ಗಂಡ ನಮ್ಮ ಮಗಳನ್ನು ಶಾಲೆಗೆ ಬಿಟ್ಟುಬರುತ್ತಾನೆ. ದೂರದ ಆಫೀಸು ಅವನಿಗೆ. ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆತರುವುದು ಕಷ್ಟವಾಗ್ತಿದೆ. &lt;/span&gt;&lt;span style="font-size:100%;color:#993399;"&gt;ನೀನು ಹೇಗಿದ್ದರೂ ನಿನ್ನ ಮಗನ ಕರೆತರುವುದಕ್ಕೆ ಹೋಗ್ತೀಯಲ್ಲ, ದಿನಾ ಮಧ್ಯಾಹ್ನ ಶಾಲೆಬಿಟ್ಟ ತಕ್ಷಣ ನನ್ನ ಮಗಳನ್ನೂ ಮನೆಗೆ ಕರಕೊಂಡು ಬರ್ತೀಯ ಪ್ಲೀಸ್?’ ಎನ್ನುತ್ತಿದ್ದಾಳೆ.&lt;br /&gt;&lt;br /&gt;&lt;/span&gt;&lt;span style="font-size:100%;color:#993399;"&gt;ನನ್ನ ಒಂದುಪದದ ಮಾತನ್ನೀಗ ಉದ್ದವಾಗಿಸಲೇಬೇಕಿದೆ, ಎರಡು ಪದಗಳ ಪ್ರಶ್ನೆ ಕೇಳಲೇಬೇಕಾದ ಅನಿವಾರ್ಯತೆ ಕೂಡ. ‘ಎಲ್ಲಿದೆ ನಿಮ್ಮನೆ?’&lt;br /&gt;‘ಇಲ್ಲಿಯೇ, ಪಕ್ಕದ್ದು, ನಿಮ್ಮನೆಯಿಂದ ಮೂರನೆಯ ಮನೆ.’ ನನ್ನಿಂದಾಗದು ಅಂತ ಹೇಳುವುದಾದರೂ ಹೇಗೆ? ‘ಸರಿ’ ಎಂದಿದ್ದೇನೆ. ಅವಳು ಥ್ಯಾಂಕ್ಸ್ ಹೇಳುತ್ತ ಮನೆಯೆದುರಿಂದ ಮರೆಯಾಗುತ್ತಿದ್ದಾಳೆ.&lt;br /&gt;&lt;/span&gt;&lt;span style="font-size:100%;color:#993399;"&gt;ಅಗೋ.. ಅಲ್ಲೇ ತಿರುವಿನಲ್ಲಿನ್ನು ಅವಳು ಮರೆಯಾಗುತ್ತಾಳೆ. ಏನೋ ಜ್ಞಾಪಕ ಬಂದಂತಾಗಿ ‘ಜಾಹ್ನವಿಯ ಕ್ಲಾಸ್ ರೂಮ್ ನಂಬರ್!’ ಎನ್ನುತ್ತೇನೆ . ‘ರೂ ನಂಬರ್ 66’ ಎಂದವಳೀಗ ನಿಜವಾಗಿಯೂ ಮರೆಯಾಗುತ್ತಾಳೆ. ಬಾಗಿಲನ್ನು ಮುಂದಕ್ಕೆ ತಳ್ಳಿ ನಾನೀಗ ಬಾಗಿಲಿಗೆ ಬೆನ್ನು ಹಾಕುತ್ತೇನೆ.&lt;br /&gt;&lt;/span&gt;&lt;span style="font-size:100%;color:#993399;"&gt;ನಾನು ಒಳಕ್ಕೆ ಬರುವುದನ್ನೇ ಕಾಯುತ್ತಿದ್ದವರಂತೆ ಕುಳಿತ ಅತ್ತೆ ಹೇಳುತ್ತಾರೆ ‘ಇಲ್ಲೂ ಒಬ್ಬಳು ನನ್ನ ಹೆಸರವಳೇ ಇದ್ದಾಳೆಂದರೆ ಖುಷಿಯಾಯಿತು’ ಎನ್ನುತ್ತಾರೆ. ‘ನನಗೂ’ ಎಂಬಂತೆ ಅವರ ಮುಖ ನೋಡುತ್ತೇನೆ. ಕಣ್ಣಿನ ಭಾಷೆ, ಮುಖದ ಭಾವದೊಳಗೇ ಉತ್ತರ ಕಂಡುಕೊಳ್ಳುವುದೀಗ ಅತ್ತೆಗೂ ಅಭ್ಯಾಸವಾಗಿದೆ. ಮುಗುಳ್ನಕ್ಕು ಪುಸ್ತಕದೊಳಗೆ ಕಣ್ಣಿಡುತ್ತಾರೆ.&lt;br /&gt;&lt;br /&gt;****************&lt;br /&gt;&lt;br /&gt;ಮಗನನ್ನು ಕ್ಲಾಸ್ ಬಿಟ್ಟ ತಕ್ಷಣ ಕರೆದುಕೊಂಡು ಇದೀಗ ಕ್ಲಾಸ್ ರೂಮ್ ನಂಬರ್ 66 ಎದುರು ನಿಂತಿದ್ದೇನೆ. &lt;/span&gt;&lt;span style="font-size:100%;color:#993399;"&gt;ಮಗ ಹೇಳುತ್ತಿದ್ದಾನೆ ‘ಅವಳೇಮ್ಮಾ ಜಾಹ್ನವಿ, ಪಿಂಕ್ ಶರ್ಟ್ ಹಾಕಿದ್ದಾಳಲ್ಲ, ಅವಳೇ’ ಅಂತ. ಪುಟ್ಟ ಹುಡುಗಿಯರು ತೊಡುವ ಬಣ್ಣಗಳಲ್ಲಿ ಪಿಂಕೇ ಹೆಚ್ಚು ಈ ದೇಶದಲ್ಲಿ. ನೀಲಿ ನೀಲಿಯವರೆಲ್ಲ ಪುಟ್ಟ ಹುಡುಗರು. ಅಲ್ಲಿರುವ ಎಂಟು ಹುಡುಗಿಯರಲ್ಲಿ ಪಿಂಕ್ ಶರ್ಟ್ ತೊಟ್ಟವಳನ್ನು ಹುಡುಕಬೇಕೀಗ. ಹೆಚ್ಚಿನವರೆಲ್ಲ ಪಿಂಕ್ ಶರ್ಟಿನವರೇ.&lt;br /&gt;&lt;br /&gt;&lt;/span&gt;&lt;span style="font-size:100%;color:#993399;"&gt;ಅಮ್ಮ ಕನ್ನಡಕ ಹಾಕಿದ್ದಾಳಲ್ಲ ಅವಳು ಜಾಹ್ನವಿ ಎನ್ನುತ್ತಾನೆ ಮಗ.&lt;br /&gt;&lt;/span&gt;&lt;span style="font-size:100%;color:#993399;"&gt;‘ಹಾಯ್ ಜಾಹ್ನವಿ...’ ಎನ್ನುತ್ತೇನೆ. ‘ಹಾಯ್’ ಎನ್ನುತ್ತಾಳೆ ಚುಟುಕಾಗಿ. ನನಗೊಬ್ಬಳು ಒಳ್ಳೆಯ ಜೊತೆಗಾತಿ ಎನ್ನಿಸುತ್ತದೆ. ಕೇಳಿದ್ದಕ್ಕಷ್ಟೇ ಸ್ಪಷ್ಟ ಚುಟುಕು ಉತ್ತರ ಕೊಡುವ ಮಿತಭಾಷೆಯ ಅವಳು ಇಷ್ಟವಾಗುತ್ತಾಳೆ. ಮಕ್ಕಳಿಬ್ಬರನ್ನೂ ಹಿಂದಿನ ಸೀಟಿಗೆ ಕೂರಿಸಿ ಮುಂದಕ್ಕೆ ಬಂದು ಕುಳಿತು ಸೀಟ್ ಬೆಲ್ಟ್ ಹಾಕಿ ಕಾರ್ ಸ್ಟಾರ್ಟ್ ಮಾಡುತ್ತೇನೆ. ಮೊದಲ ದಿನ ಅವಳು ನನ್ನನ್ನು ನೋಡುತ್ತಿದ್ದಾಳೆ, ಇನ್ನೊಂದೆರಡು ಮಾತನಾಡಿದರೆ ನಾಳೆಯಿಂದ ನನ್ನಷ್ಟಕ್ಕೆ ಡ್ರೈವ್ ಮಾಡಿಕೊಂಡಿದ್ದರೂ ಆದೀತು, ಇವತ್ತು ಅವಳನ್ನು ಇನ್ನೊಂದೆರಡು ವಾಕ್ಯ ಮಾತನಾಡಿಸುವ ಅನಿವಾರ್ಯತೆಯಿದೆ ಅನ್ನಿಸುತ್ತದೆ.&lt;br /&gt;&lt;br /&gt;&lt;/span&gt;&lt;span style="font-size:100%;color:#993399;"&gt;ಡ್ರೈವ್ ಮಾಡುತ್ತ ಹಿಂದಿರುಗಲಾರದೇ ಮುಂದೆ ನೋಡುತ್ತಲೆ ಹಿಂದಿನ ಸೀಟಲ್ಲಿದ್ದವಳನ್ನು ಮಾತನಾಡಿಸುತ್ತೇನೆ. ‘ಹಾಯ್ ಜಾಹ್ನವಿ....ನಿನ್ನ ಕ್ಲಾಸ್ ಟೀಚರ್ ಯಾರು?’ ಎನ್ನುತ್ತೇನೆ. ಸರಿಯಾಗಿ ನನ್ನ ಹಿಂದೆ ಕುಳಿತ ಆ ಪುಟ್ಟ ಹುಡುಗಿ ಮಾತನಾಡುವುದಿಲ್ಲ. ಮತ್ತೆ ಕೇಳುತ್ತೇನೆ.&lt;br /&gt;&lt;br /&gt;&lt;/span&gt;&lt;span style="font-size:100%;color:#993399;"&gt;‘ಹಾಯ್ ಜಾಹ್ನವಿ....ನಿನ್ನ ಕ್ಲಾಸ್ ಟೀಚರ್ ಯಾರು?’&lt;br /&gt;&lt;br /&gt;ಅವಳು ಉತ್ತರಿಸುತ್ತಿಲ್ಲ.&lt;br /&gt;&lt;br /&gt;ಮತ್ತೆ ಕೇಳುತ್ತೇನೆ ನಿಧಾನಕ್ಕೆ ‘ಹಾಯ್ ಜಾಹ್ನವಿ....ನಿನ್ನ ಕ್ಲಾಸ್ ಟೀಚರ್ ಯಾರು?’&lt;br /&gt;ಸುಮಾರು ನಾಲ್ಕೈದು ಬಾರಿ ಕೇಳುತ್ತೇನೆ. ಆದರೂ ಅವಳ್ಯಾಕೋ ಉತ್ತರಿಸುತ್ತಲೇ ಇಲ್ಲ.&lt;br /&gt;&lt;br /&gt;ಸ್ವಲ್ಪವೇ ಕತ್ತನ್ನು ಹಿಂದಕ್ಕೆ ತಿರುಗಿಸಿ ನೋಡಿದರೆ ಮಗನ ಮುಖ ಕಾಣಿಸುತ್ತದೆ. ಸರಿಯಾಗಿ ನನ್ನ ಹಿಂದಕ್ಕೆ ಕುಳಿತವಳ ಮುಖ ನನಗೆ ಕಾಣಿಸುತ್ತಿಲ್ಲ. ಮಗನನ್ನು ಕೇಳುತ್ತೇನೆ ‘ಪುಟ್ಟಾ..ಜಾಹ್ನವಿ ಏನು ಮಾಡ್ತಿದ್ದಾಳೆ?’ ಅಂತ. ‘ಅಮ್ಮ ಅವಳು ನನ್ನ ಮುಖ ನೋಡುತ್ತ ನಗುತ್ತ ಸುಮ್ಮನೆ ಇದ್ದಾಳೆ. ಅವಳಿಗೆ ನೀನು ಹೇಳಿದ್ದು ಕೇಳಿಸುತ್ತಿಲ್ಲಾಮ್ಮ, ಅವಳಿಗೆ ಕಿವಿ ಕೇಳಿಸುವುದಿಲ್ಲ. ಅವಳೊಡನೆ ಮಾತಾಡುವಾಗ ಅವಳೆದುರು ನಿಂತು ಮಾತನಾಡುತ್ತೀಯ ಪ್ಲೀಸ್, ಆಗ ಅವಳಿಗೆ ನೀನು ಹೇಳಿದ್ದು ಅರ್ಥವಾಗುತ್ತದೆ ಅಂತ ಅವರಮ್ಮ ನಿನ್ನೆ ನನಗೆ ಹೇಳಿದ್ದಾರೆ, ನಾನು ಹಾಗೆಯೇ ಮಾಡುತ್ತಿದ್ದೇನೆ, ನೀನೂ ಹಾಗೆಯೇ ಮಾಡ್ತೀಯಾಮ್ಮಾ?’ ಅಂತ ಮಗ ಹೇಳಿದಾಗ ಒಮ್ಮೆಲೇ ಕಣ್ಣೊಳಗೆ ಒರತೆಯೆದ್ದು ಬಂದಂತೆ ಗಂಟಲಾಳದಿಂದ. ಎದುರಿಗೆ ಗ್ರೀನ್ ಸಿಗ್ನಲ್ , &lt;/span&gt;&lt;span style="font-size:100%;color:#993399;"&gt;ಕಣ್ಣೊಳಗೆ ಮುನ್ನಡೆಸಲಾಗದಷ್ಟು ತೇವಮುಸುಕು.&lt;br /&gt;&lt;br /&gt;&lt;/span&gt;&lt;span style="font-size:100%;color:#993399;"&gt;ಮನೆ ತಲುಪಿದಾಗ ಅವರಮ್ಮ ಅಲ್ಲೇ ಬಾಗಿಲಲ್ಲಿ ನಿಂತಿದ್ದಾರೆ. ಈ ತಾಯಿಯ ಎದುರು ಯಾವತ್ತೂ ಯಾರ ಕಿವಿಯ ಬಗ್ಗೆಯೂ ಮಾತನಾಡಲೇಬಾರದೂಂತ ನಾನು ನಿಶ್ಚಯಿಸಿದ ಹಾಗಿದೆ. ‘ನಿನ್ನ ಮಗಳಿನ ಕಣ್ಣು ತುಂಬ ಸುಂದರವಾಗಿದೆ, ಆ ರೆಪ್ಪೆಗಳನ್ನು ನೋಡು, ಊದ್ದಕ್ಕೆ’ ಅಂತ ಮಾತು ಮುಗಿಸಿದೆ. ‘ತುಂಬ ದೂರ ನಿಂತಿದ್ದೀಯ, ಇನ್ನೂ ಹತ್ತಿರಕ್ಕೆ ಬಂದು ಹೇಳು, ನೀನು ಮಾತನಾಡುವಾಗ ನಿನ್ನ ತುಟಿಗಳ ಚಲನೆ ನನ್ನ ಮಗಳಿಗೂ ಕಾಣಿಸಿದರೆ ಅವಳೇ ನಿನಗೆ ಥ್ಯಾಂಕ್ಸ್ ಹೇಳುತ್ತಾಳೆ’ ಎನ್ನುತ್ತಾಳೆ ಜಾಹ್ನವಿಯ ಅಮ್ಮ.&lt;br /&gt;&lt;br /&gt;&lt;br /&gt;ಹಾಗಾದರೆ ಇನ್ನು ಮುಂದೆ ನಾನು ಕಣ್ಣುಗಳ ಬಗ್ಗೆಯೂ ಮಾತನಾಡುವ ಹಾಗಿಲ್ಲ ಆ ತಾಯಿಯ ಮುಂದೆ. ನಿರ್ಧರಿಸಿಬಿಟ್ಟಿದ್ದೇನೆ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-504002243767027119?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/504002243767027119/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=504002243767027119' title='19 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/504002243767027119'/><link rel='self' type='application/atom+xml' href='http://www.blogger.com/feeds/5495085842856428066/posts/default/504002243767027119'/><link rel='alternate' type='text/html' href='http://www.shantalabhandi.com/2009_09_01_archive.html#504002243767027119' title='ಚೆಲುವೆಂಬ ಬಾಗಿಲ ಹಿಂದೆ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>19</thr:total></entry><entry><id>tag:blogger.com,1999:blog-5495085842856428066.post-402983522174837284</id><published>2009-08-31T20:07:00.000-07:00</published><updated>2009-08-31T21:14:05.114-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಕನ್ನಡಿಯೊಳಗಿನ ಗಂಟು ಕದ್ದವರಿಗೆ...</title><content type='html'>ಗುಂಪಿನಲ್ಲೂ ಏಕಾಂತವಾಗಿರುವವರನ್ನು&lt;br /&gt;ಕಂಡು ಕದ್ದುನುಡಿವ&lt;br /&gt;ತತ್ವಜ್ಣಾನಿಗಳನ್ನು&lt;br /&gt;ಯಾವತ್ತೋ ಕ್ಷಮಿಸಿಯಾಗಿದೆ&lt;br /&gt;ಕ್ಷಮೆಯ ಬಣ್ಣವೇ ತಂಪು&lt;br /&gt;ಸುತ್ತಲೂ ತಂಪೇ&lt;br /&gt;ತಣ್ಣಗೆ&lt;br /&gt;ಅದೇ ಸದಾ ಒಳಿತು&lt;br /&gt;&lt;br /&gt;ಒಂದಿಷ್ಟು  ಕದ್ದದ್ದು ಕದ್ದ ಹಾಗೇ &lt;br /&gt;ಹಸಿಹಸಿಯೇ&lt;br /&gt;ಸಹಿ ಮಾತ್ರ ಸ್ವಂತದ್ದು&lt;br /&gt;ಯಾರದ್ದೋ ಮಾರ್ಕ್ಸ್ ಕಾರ್ಡಿಗೆ&lt;br /&gt;ಸ್ವಂತ ಹೆಸರು&lt;br /&gt;ಯಾರೋ ಬಿಡಿಸಿದ ಚಿತ್ರಕ್ಕೆ&lt;br /&gt;ಪೌಡರು ಬಳಿಯುವ ಕೆಲಸ&lt;br /&gt;ಸುಮಾರೇ ಅನುಭವ ಬೇಕು&lt;br /&gt;ಮೇಲಿಂದ ಬಳಿದ ಪೌಡರು&lt;br /&gt;ತಣ್ಣನೆಯ ಗಾಳಿಸಾಕು&lt;br /&gt;&lt;br /&gt;ಹಳೇ ಹವ್ಯಾಸ &lt;br /&gt;ನಾಳೆಬಿಟ್ಟರೂ&lt;br /&gt;ಇವತ್ತು ಸಿಕ್ಕ ಬಿರುದು&lt;br /&gt;ಖಾಯಮ್&lt;br /&gt;&lt;br /&gt;ಕದ್ದಿದ್ದು ಅಕ್ಷಯ ಪಾತ್ರೆಯೊಳಗಿಂದ&lt;br /&gt;ಕದ್ದಷ್ಟೂ ಒಳಿತೇ&lt;br /&gt;ಖಾಲಿಯಾಗದ್ದು&lt;br /&gt;ಆದರೂ ಒಂದು ತಣ್ಣನೆಯ ಹಾರೈಕೆ&lt;br /&gt;ಕದಿಯುವಾಗ ಮಾತ್ರ&lt;br /&gt;ದಯವಿಟ್ಟು ಜೋಪಾನ&lt;br /&gt;ಗೊತ್ತಿರಬೇಕಲ್ಲ&lt;br /&gt;ಅಡಿಕೆ ಕದ್ದ ಮಾನ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-402983522174837284?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/402983522174837284/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=402983522174837284' title='11 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/402983522174837284'/><link rel='self' type='application/atom+xml' href='http://www.blogger.com/feeds/5495085842856428066/posts/default/402983522174837284'/><link rel='alternate' type='text/html' href='http://www.shantalabhandi.com/2009_08_01_archive.html#402983522174837284' title='ಕನ್ನಡಿಯೊಳಗಿನ ಗಂಟು ಕದ್ದವರಿಗೆ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>11</thr:total></entry><entry><id>tag:blogger.com,1999:blog-5495085842856428066.post-6693224949211896060</id><published>2009-07-11T15:57:00.000-07:00</published><updated>2010-12-31T13:43:09.255-08:00</updated><category scheme='http://www.blogger.com/atom/ns#' term='ಮನಸಿಗೆ ಬಂದಿದ್ದು'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಹಕ್ಕಿಗರಿಯಂತೆ ಹಾರಿ ಸೇರಲಿ...</title><content type='html'>ಸ್ವಲ್ಪ ಇರು , ನಿನ್ನ ಪತ್ರಕ್ಕೆ ನನ್ನ ಉತ್ತರ ಯಾಕಿಲ್ಲ ಅಂತ ನಿನಗೆ ಹೇಳಿಬಿಡುತ್ತೇನೆ. ಆವತ್ತು ಬೆಳಗಾಯಿತಾ... ಬೆಳಗಿನಲ್ಲೇನಿದೆ ವಿಶೇಷ ಅಂತ ಕೇಳುವುದು ಬೇಡ. ಬೆಳಗಾಯಿತು ಅಷ್ಟೇ... ಅಂತ ಹೇಳಿಬಿಡಲಿಕ್ಕಾಗುವುದಿಲ್ಲ. ಸೂರ್ಯ ಬಂದ ಬೆಳಗಾಯಿತು. ಅಷ್ಟೇನಾ ಬೆಳಗು? ಹೋಗಲಿಬಿಡು, ಬೆಳಗಾದರೆ ಬರುತ್ತಾನಲ್ಲ ಈ ಸೂರ್ಯ, ಇವನಿಗಿಂತ ನನಗೆ ಚಂದ್ರ ಇಷ್ಟವಾಗುತ್ತಾನೆ. ಯಾಕೇಂತ ಕೇಳು, ಹೇಳುತ್ತೇನೆ. ಈ ಸೂರ್ಯ ಹಗಲಿಗೆ ಬರುತ್ತಾನೆ. ಕತ್ತಲಾಗುತ್ತಿದ್ದಂತೆ ಕಾಣೆಯಾಗುತ್ತಾನೆ! ಚಂದಿರನಾದರೆ ಹಾಗಲ್ಲ ನೋಡು, ಕತ್ತಲೆಯ ರಾತ್ರಿಗೆ ಬೆಳಕಾಗಿ ಬರುತ್ತಾನೆ. ಅದಕ್ಕೆ ನನಗವನು ಇಷ್ಟ. ತಾರೆಗಳನ್ನ ಹರವಿಕೊಂಡು ಅಂಗಡಿ ಹಾಕಿಕೊಂಡು ಕುಳಿತಿದ್ದ  ಚಂದಿರನ ಅರ್ಧ ಭಾಗ ಕಿಟಕಿಯ ಪರದೆಯೊಳಗಿಂದಾಚೆ ಕಾಣುತ್ತಿತ್ತಾ...ನೋಡುತ್ತ ನಿದ್ರೆ ಹೋಗೋಣವೆಂದರೆ ನಿದ್ರೆ ಬಾರದೇ ಇರುವ ಹಾಗಿನಂತದ್ದೇ ಕನಸು.&lt;br /&gt;&lt;br /&gt;ಬೆಳಗಾಯಿತು. ಗಳಿಗೆ ಸರಿಯುವುದೇ ಇಲ್ಲ. ಅವರೆಲ್ಲ ಬರುವವರಿದ್ದರು. ಆಕಾಶದಲ್ಲಿ ಹಾರಿಕೊಂಡು ಬರುವವರಿದ್ದರು. ಅವರು ಭೂಮಿಗೆ ಇಳಿಯುವ ಗಳಿಗೆಗಾಗಿ ನಾನು  ಕಾಯುತ್ತಿದ್ದೆ. ಭೂಮಿಯಲ್ಲಿದ್ದವರೇ ಆಗಸದಲ್ಲಿ ಹಾರಿಬರುವ ಕ್ಷಣಕ್ಕಾಗಿ ಕಾಯುವ ಗಳಿಗೆಯೇ ಈಷ್ಟುದ್ದವಾಗಿರುವಾಗ ಭೂಮಿಗೆ ಹೊಸತಾಗಿ ಕಾಲಿಡುವ ಚಿಲುಮೆಗೆ  ಕಾಯುತ್ತ ಕುಳಿತ ಅಪ್ಪ ಅಮ್ಮಂದಿರು ಕಳೆವ ಆ ಗಳಿಗೆ ಇನ್ನೆಷ್ಟುದ್ದವೋ ಅಂತೆಲ್ಲ ಅಸಂಗತ ಯೋಚನೆಗಳ ನಡುವೆ ದಾಲ್ ಮಾಡಲಿಕ್ಕಾಗಿ ತೊಳೆದ ತೊಗರಿಬೇಳೆಗಿಷ್ಟು ಹೆಸರು ಬೇಳೆ ಸೇರಿಸಿ ಕುಕ್ಕರ್ ಇಟ್ಟೆ. ಈವತ್ತು ಕುಕ್ಕರ್ ಸಹ ಕೂಗಲಿಕ್ಕೆ ತಡ ಮಾಡುತ್ತಿದೆ. ಅದಕ್ಕೂ ಗೊತ್ತಾಗಿಬಿಟ್ಟಿದೆ ಯಾರೋ ಬರಲಿದ್ದಾರೆ ಅಂತ. ಹನ್ನೆರಡುಗಂಟೆಯ ಹೊತ್ತಿಗೆ ಅಮ್ಮ ಮಾಡಿದ ಸಕ್ಕರೆ ಒಬ್ಬಟ್ಟಿನ ಘಮ ಆವರಿಸಿಕೊಳ್ಳುವುದಕ್ಕೂ ಕುಕ್ಕರ್ ಕೂಗುವುದಕ್ಕೂ ಸರಿಯಾಯಿತು. ಅಂದರೆ? ಬರುವವರಿದ್ದರಲ್ಲ, ಅವರು ಬಂದೇಬಿಟ್ಟರಂತಲ್ಲ. ಭೂಮಿಗೆ ಇಳಿದಿರಬೇಕು. ಭೂಮಿಗೆ ಇಳಿದ ಮೇಲೂ ಅವರಿಳಿದ ಜಾಗಕ್ಕೆ ನಲವತ್ತು ಮೈಲಿ ದೂರದಲ್ಲಿ ನಾನು ಕಾಯುತ್ತಿದ್ದೇನೆ. ನಾನಿರುವಲ್ಲಿಗೆ ಅವರು ಬರುವುದಕ್ಕೆ ಸ್ವಲ್ಪ ತಡವಿದೆ. ಬಂದವರು ಅಪ್ಪಾಮ್ಮ ಇರಬೇಕು ಎಂಬ ನಿನ್ನಾಲೋಚನೆ ಬದಿಗೊತ್ತಿ ಕೇಳು, ಬಂದವರು ಅಪ್ಪಾಮ್ಮ ಅಲ್ಲ, ಅತ್ತೆಮಾವ. ನೀನು ತಡಮಾಡಿದ್ದೇಕೆ, ಅವರಿಳಿದ ಜಾಗಕ್ಕೇ ನೀನು ಹೋಗಿ ಅವರನ್ನು ಬರಮಾಡಿಕೊಳ್ಳಬಹುದಿತ್ತಲ್ಲ! ಅಂತ ಕೇಳಿಬಿಡಬೇಡ. ಅವರು ಬರುವ ಹೊತ್ತಿಗೆ ಸ್ಯಾನ್ ಫ್ರಾನ್ಸಿಸ್ಕೋ ಕಡೆಯಿಂದ ಬಂದ ಗಾಳಿಗೆ ನಮ್ಮನೆಯ ದೇವರದೀಪ ಆರಿಹೋಗದ ಹಾಗೆ ನಾನು ಕಾಯ್ದುಕೊಳ್ಳುವುದಕ್ಕಾಗಿ ಮನೆಯಲ್ಲಿದ್ದೆ. ಅಷ್ಟೇ ಅಲ್ಲ. ಬಂದ ತಕ್ಷಣ ಬಾಗಿಲಲ್ಲಿ ನಿಂತು ಸ್ವಾಗತಿಸುವ ಜವಾಬ್ಧಾರಿಯನ್ನು ಸುಮಾರು ವರ್ಷಗಳ ಹಿಂದೆಯೇ ಕಲಿತುಕೊಂಡಿದ್ದೇನೆ. &lt;br /&gt;&lt;br /&gt;ಅಲ್ಲಿಂದಿಲ್ಲಿಯ ತನಕ ಪ್ರೀತಿಯ ಹೊತ್ತು ಬಂದವರು ಇಲ್ಲಿಗೆ ಬಂದಾಗ ಸುಸ್ತಾಗಿದ್ದರು. ತಂದ ಪ್ರೀತಿಯೊಳಗೆ ಹಲಸು, ಮಾವು, ಸಾಟೆ, ಚಿಪ್ಸು, ಒಬ್ಬಟ್ಟುಗಳ ಪರಿಮಳವಿಟ್ಟು ತಂದಿದ್ದರು. ಅಮ್ಮ ತಾನು ಕಳಿಸಿದ ಸಾಂಬಾರ ಪುಡಿ, ಚಟ್ನಿಪುಡಿ, ಉಪ್ಪಿನಕಾಯಿ, ಮಾವಿನಕಾಯಿ ಕೆಂಪುಚಟ್ನಿಯ ಘಾಟು ಆರಿಸುವುದಕ್ಕಾಗಿ ಅವೆಲ್ಲವುಗಳ ಮೇಲೆ ಸಿಹಿಸಕ್ಕರೆ ಒಬ್ಬಟ್ಟನ್ನಿಟ್ಟು ಅದರೊಳಗೆ ಬೊಗಸೆ ಪ್ರೀತಿಯ ಸುರುವಿ ಕಳಿಸಿದ್ದರಿರಬೇಕು. ಭಾರವೇ ಆಗಿತ್ತು.&lt;br /&gt;ಅತ್ತೆಮಾವ ತಂದ ಹೊಸಸೀರೆಯ ಮಡಿಕೆ ಬಿಡಿಸಿದರೆ ಅಮ್ಮ ಕಳಿಸಿದ್ದನ್ನು ಉಟ್ಟುಕೊಳ್ಳುವುದಾವಾಗಲೆಂಬ ಚಿಂತೆ. ಅರ್ಧ ಬ್ಯಾಗಿನ ತುಂಬ ಹೊಸಪುಸ್ತಕದ್ದೇ ಘಮ. &lt;br /&gt;&lt;br /&gt;ಘಮವಾರುವುದರೊಳಗೆ ಓದಿಬಿಡಬೇಕೆಂಬ ತವಕ. ಈಗಷ್ಟೇ ಕರಿದಿಟ್ಟ ಹಪ್ಪಳದ ಹಾಗೆ ಪ್ರತಿಪುಟವೂ ಗರಿಗರಿ. &lt;br /&gt;&lt;br /&gt;ಇದೆಲ್ಲ ಖುಷಿ ನನ್ನದೇ ಅಂದುಕೊಳ್ಳುವಾಗ ಮತ್ತಿಷ್ಟು ಸಂಭ್ರಮ. ಒಂದಿಷ್ಟು ಹೊತ್ತು ನಿನ್ನ ಮರೆತಿದ್ದು ಸುಳ್ಳಲ್ಲ. ನಿನ್ನನ್ನೇನು, ನನ್ನನ್ನೇ ಮರೆತಿದ್ದೆ. ಆ ಹೊತ್ತಿಗೆ ನೀನಿಲ್ಲದ್ದು  ಒಳಿತೇ ಆಯಿತು. ಹೊಸಬಟ್ಟೆಗೆ, ಕುರುಕಲು ತಿಂಡಿಗೆಲ್ಲ ಖುಷಿಪಡುವುದನ್ನು ನೀ ಕಲಿತದ್ದು ಯಾವಾಗ ಅಂತ ನೀನು ನೊಂದುಕೊಳ್ಳುತ್ತಿದ್ದೆ. ಇದನ್ನೆಲ್ಲ ಖುಷಿಪಡುವುದು ಕಲಿತಿದ್ದೂ  ಆವತ್ತೇ, ಆವತ್ತೆಂದರೆ ಪುಟ್ಟ ಬೆರಳು ಮಡಚಿ ಒಂದು ಎರಡು ಎಣಿಸುವಾಗಲೇ ಕಲಿತಿದ್ದಿದು. ಇನ್ನೂ ಮರೆಯಲಿಕ್ಕಾಗಲೇ ಇಲ್ಲ ನೋಡು. ನನ್ನ ಖುಷಿಕಂಡು ಅವರಿಗೆಷ್ಟು  ಖುಷಿಯಾಯಿತು ಗೊತ್ತ! ಇದ್ದ ಸುಸ್ತಿಗೆ ನಿದ್ರಿಸದೇ ನನ್ನನ್ನೇ ನೋಡಿದರು. ಅವೆಲ್ಲವನ್ನೂ ನಾನು ನಿಧಾನಕ್ಕೆ ಒಳಗೆತ್ತಿಡುತ್ತಿದ್ದರೆ ಮನೆಯೊಳಗೆ ಹಬ್ಬ. ಅದರೆದುರು ಯಾವ  ಚೌತಿಯೂ ಇರಲಿಲ್ಲ, ದೀಪಾವಳಿಯೂ ಇರಲಿಲ್ಲ. &lt;br /&gt;&lt;br /&gt;ಇಷ್ಟೇ ಅಲ್ಲ, ನನ್ನ ಖುಷಿ ಹೇಳಿಮುಗಿವಷ್ಟಿಲ್ಲ. ಆದರೀಗ ಮುಗಿಸುತ್ತೇನೆ. ಮುನ್ನ ನಿನಗೊಂದು ವಿಷಯ ಹೇಳಬೇಕು. ನಿನ್ನ ಆಫೀಸಿಗೆ ಬಂದಿದ್ದೆ. ನಿನ್ನ ಜಾಗದಲ್ಲಿ ನೀನಿರಲಿಲ್ಲ. ಪಕ್ಕದ ಗೋಡೆಗೆ ನಾನು ಆನಿಸಿಟ್ಟು ಹೋಗಿದ್ದ ವಸ್ತು ಕಾಣಿಸದೇ ಸುತ್ತೆಲ್ಲ ತಡಕಾಡಬೇಕಾಯಿತು. ಕೊನೆಯಲ್ಲಿ ಅದು ನೀನು ಕುಳಿತುಕೊಳ್ಳುವ ಜಾಗದಲ್ಲಿದ್ದ ಟೇಬಲ್ಲಿಗಿದ್ದ ಡ್ರಾವರ್ ಎಳೆದಾಗ ಸಿಕ್ಕಿತು. ತೆಗೆದುಕೊಂಡು ಹೊರಡುವಾಗ ನಿನಗೆ ತಿಳಿಸಿ ಹೋಗೋಣವೆಂತಲೇ ನಿನಗಾಗೆ ಕಾದೆ. ತುಂಬ ಹೊತ್ತಾದರೂ ನೀನು ಬರಲೇ ಇಲ್ಲ. ಮತ್ತಷ್ಟು ಕಾಯುವುದಕ್ಕೆ ನನಗೆ ಪುರುಸೊತ್ತಿರಲಿಲ್ಲ. ನಾನು ಬರೆದ  ಅಕ್ಷರ ನಿನಗೆ ಅರ್ಥವಾಗದಿರಲಿ ಅಂತಲೇ ನಿನಗೆ ಅರ್ಥವಾಗದ, ಆದರೆ ನನ್ನ ಪ್ರೀತಿಯ ಭಾಷೆಯನ್ನೇ ಬಳಸಿ ನಾಲ್ಕುಸಾಲು ಬರೆದೆ. ಅಲ್ಲಿಯೇ ಟೇಬಲ್ ಮೇಲೆ ನಿದ್ರಿಸಿದ್ದ ನಿನ್ನ ಮೊಬೈಲ್ ಅಡಿಯ ಆಸರೆಯಾಗಿ ನನ್ನ ಪತ್ರ ಇಟ್ಟಿದ್ದೇನೆ. ಹೇಗಾದರೂ ಓದುತ್ತೀಯ, ಅದನ್ನು ಓದಿ ಬ್ಲಾಗಿಗೆ ಬಂದೇ ಬರುತ್ತೀಯ, ಮತ್ತದೇ ಗುಂಡಗಿನ ನಿನಗರ್ಥವಾಗದ ಅಕ್ಷರಕ್ಕೆ ನಿನ್ನ ನಗು ಸಾಥ್ ಕೊಡುತ್ತದೆ. ಹಳೆ ಗೆಳೆಯರನ್ನು ಹುಡುಕು, ಅವರಲ್ಲಿ ನಿನಗಿದನ್ನು ಅರ್ಥಮಾಡಿಸುವವರಿದ್ದಾರೆ. ಅರ್ಥವಾದರೆ ನೀನು ಉತ್ತರ ಬರೆಯುವುದಿಲ್ಲ. ಅರ್ಥವಾಗದ ಪಕ್ಷ ಕುತೂಹಲಕ್ಕಾದರೂ ಅದೇನು ಬರ್ದಿದೀಯ, ಎರೆಡೆರಡು ಸಲ ಓದಿದೆ, ಯಾಕೋ ಏಕಾಗ್ರತೆ ಬರ್ತಿಲ್ಲ, ಇನ್ನೊಮ್ಮೆ ಓದಿ ಬರೀತೀನಿ ಅಂತ ಬರೆದೇ ಬರೆಯುತ್ತೀಯ ಅದೇ ನಿನ್ನ ಭಾಷೆಯೊಳಗೆ.&lt;br /&gt;&lt;br /&gt;ಮತ್ತೊಂದು ವಿಷಯ, ನಿನ್ನ ಆಫೀಸಿಗೆ ಬಂದರೆ ನನಗೆ ಒಳಗೆ ಪ್ರವೇಶ ಸಿಗುತ್ತಿಲ್ಲ, ಕೇವಲ ಆಮಂತ್ರಿತರಿಗೆ ಮಾತ್ರ ಪ್ರವೇಶ ಅಂತ ಬೋರ್ಡು ಬೇರೆ.  ಹ್ಞಾ...ಇನ್ನೊಂದು ವಿಷಯ, ನಿನ್ನ ಆಫೀಸಿನಿಂದ ನನಗೊಂದು ಚೆಕ್ ಕಳಿಸಿದ್ದಾರೆ. ನನಗೆ ಖುಷಿಯಾಗಿದೆ. ಆ ಚೆಕ್ ಅನ್ನು ಬ್ಯಾಂಕಿಗೆ ಹಾಕಿಬರಲು &lt;br /&gt;ಅಮ್ಮನಿಗೆ ಪತ್ರ ಬರೆದಿದ್ದೇನೆ. &lt;br /&gt;&lt;br /&gt;ಮತ್ತೊಂದು ವಿಷಯ ಏನು ಗೊತ್ತ, ಪುಟ್ಟದಾಗಿ ಹೇಳಬೇಕು. ಪಕ್ಕದಮನೆಯಲ್ಲಿನ ಕ್ಯಾಲೆಂಡರಿನಲ್ಲಿ ಕಳೆದ ತಿಂಗಳು ಹದಿನೈದಕ್ಕೇ ನಿಂತಿದ್ದ ಮಾರ್ಕು ಈ ತಿಂಗಳು  ಇಪ್ಪತ್ತೈದಾದರೂ ಮಾರ್ಕು ಬಿದ್ದೇ ಇಲ್ಲ. ನಾನು ನಾಳೆ ಹೋಗಿ ಕಂಗ್ರಾಟ್ಸ್ ಹೇಳಿ ಬರಬೇಕೆಂದುಕೊಂಡಿದ್ದೇನೆ.&lt;br /&gt;&lt;br /&gt;ಇನ್ನುಳಿದ ವಿಷಯ ದೊಡ್ಡದಾಗಿಯೇ ಓದಿಕೊಂಡರೂ ಪರವಾಗಿಲ್ಲ ಮೇಲಿನ ಒಂದು ಸಾಲನ್ನು ಮಾತ್ರ ಮನಸಿನಲ್ಲಿಯೇ ಓದಿಕೋ. &lt;br /&gt;&lt;br /&gt;ಸ್ನೇಹಿತನೊಬ್ಬನಿಗೆ ಫೋನಾಯಿಸಿದ್ದೆ. ಹದಿನೈದು ದಿನದ ಹಿಂದೆ ಮಳೆಯೇ ಇಲ್ಲ ಅಂತ ಗೋಗರೆಯುತ್ತಿದ್ದವನೀಗ ‘ಅತೀವೃಷ್ಟಿ, ಅನಾವೃಷ್ಟಿ ಅಂತ ಅಜ್ಜಿಯ ಬಾಯಲ್ಲಿ ಕೇಳಿದ್ದೆ, ಕಣ್ಣಾರೆ ಕಾಣುತ್ತಿದ್ದೇನೆ ಕಣೇ, ಭತ್ತದ ಗದ್ದೆಯ ಆಸೆ ಬಿಟ್ಟಿದ್ದೇ ಆಯ್ತು, ಅಡಿಕೆ ಬೆಳೆ ಇರದಿದ್ದರೂ ಕೊಳೆಯಂತೂ ನಿಶ್ಚಿತ’ ಅಂದು ನಿಟ್ಟುಸಿರುಟ್ಟು ಫೋನಿಟ್ಟಿದ್ದಾನೆ. ಸಂಕಟವಾಯಿತು. ಸಮಾಧಾನವೂ. ಆವತ್ತು ಅವನು ಪ್ರಪೋಸ್ ಮಾಡಿದ್ದಾಗ ನಾ ಒಪ್ಪಿಕೊಂಡಿದ್ದರೆ ಅಪ್ಪ ‘ಗನಾ ಮಾಣಿ’ ಅಂತಂದು ಅವನಿಗೆ ಧಾರೆಯೆರೆದುಬಿಡುತ್ತಿದ್ದರು. ಮಳೆಯಿಲ್ಲದಾಗ ಕಣ್ಣೊರೆಸಿಕೊಳ್ಳುತ್ತ, ಮಳೆ ಬಂದಾಗ ನೆಲವೊರೆಸುತ್ತ ಕಳೆಯಬೇಕಿದ್ದ  ಅವನ ಜೊತೆಯ ಜೀವನ ನನ್ನದಾಗಲಿಲ್ಲವಲ್ಲ ಅನ್ನುವ ಸ್ವಾರ್ಥ ಸಮಾಧಾನದಲ್ಲಿ  ಫೋನಿಟ್ಟಿದ್ದೇನೆ. ರಿಸೆಷನ್ನು ಮಣ್ಣು ಎಂಬೆಲ್ಲ ಘನ ವಿಷಯಗಳ ಮುಂದೆ ಮಾದ್ಯನ ಪುಟ್ಟಗದ್ದೆ ಖಾಲಿಬಿದ್ದಿರುವುದು ಮಾದ್ಯನ ಮನೆಯ ಊಟದಅಕ್ಕಿಡಬ್ಬಿಗೆ ಮಾತ್ರ ಗೊತ್ತಿದೆ ಅಂತಲೂ ತಮ್ಮನೆಯ ಕೆಲಸದಾಳಿನ ಗೋಳು ಬಗೆದಿಟ್ಟಿದ್ದರೆದುರು ಅವನ ಕಷ್ಟ ದೊಡ್ಡದೆನಿಸಲಿಲ್ಲ.&lt;br /&gt;  &lt;br /&gt;&lt;br /&gt;ಬದುಕಿನೊಂದು ಸಾರ್ಥಕ್ಯವಾಗಿ ಎದುರಾಗಿ ನಿಲ್ಲುವ ಪ್ರತಿ ಗಳಿಗೆಯನ್ನೂ ಒಟ್ಟುಮಾಡಿ ಗಂಟು ಕಟ್ಟಿಡುತ್ತಿದ್ದೇನೆ ಮುಂದೆ ಮತ್ಯಾರಿಗಾದರೂ ಆದೀತೆಂಬ ಆಸೆಯಿಂದ. &lt;br /&gt;&lt;br /&gt;ಇವತ್ತಿಗಂತೂ ಇದ್ದ ಸುಖ ಸಾಕು.  &lt;br /&gt;&lt;br /&gt;ಹೇಳಲಿಕ್ಕೆ ಇನ್ನಷ್ಟಿದೆ, ಸಮಯ ಸಿಕ್ಕಾಗ ಬರುತ್ತೇನೆ. ಅಲ್ಲಿಯತನಕ ಒಂದಿಷ್ಟು ವಿಶ್ರಾಂತಿ ನನಗೂ ನಿನಗೂ. ಅಲ್ಲಿ ಅಜ್ಜ ಬೇರುಗೂಡಿಯೇ ನೆಟ್ಟ ಜಾಜಿಹೂವಿನಗಿಡ ಬಾಡಿಹೋಗುತ್ತಿದೆಯಲ್ಲ ಅಂತ ಮರುಗುತ್ತಿದ್ದರೆ ಮೊಮ್ಮಗ ಬೀನ್ಸ್ ಬೀಜ ಬಿತ್ತಿ ಪಾಪ್ ಕಾರ್ನ್ ಬೆಳೆಯುವ ಹುನ್ನಾರದಲ್ಲಿದ್ದಾನೆ. ಇಂಥ ಹೊತ್ತುಗಳೆಲ್ಲ ನನ್ನೊಳಗಿನ  ಮುಗುಳ್ನಗೆಯಾಗಿ ಮುಗಿದುಹೋಗುತ್ತಿವೆ. &lt;br /&gt;ಇಲೆಕ್ಟ್ರಿಕ್ ಸ್ಟೋವಿಗೆ ಕೈಕೂತ ತಕ್ಷಣ ಒಂದೆರಡು ಲೋಟದಷ್ಟಾದರೂ ಬೇಳೆ ನೆನೆಸಿ ಹೋಳಿಗೆ ಮಾಡಿಬಿಡಬೇಕೆಂದು ಅತ್ತೆ ತುದಿಗಾಲಲ್ಲಿ ಕಡಲೆಬೇಳೆ ಡಬ್ಬಿಹಿಡಿದು  ಒಲೆಮುಂದೆ ನಿಂತಿದ್ದಾರೆ. ಒಬ್ಬೊಬ್ಬರೂ ಒಂದೊಂದು ಪಾತ್ರೆ ತೊಳೆದಿಟ್ಟು ಡಿಶ್ ವಾಷರ್ ಮಾತನಾಡುವುದನ್ನೇ ಬಿಟ್ಟಿದೆ. &lt;br /&gt;&lt;br /&gt;ಹೇಳಲಿಕ್ಕೆ ಇನ್ನೇನಿದೆಬಿಡು. ಎಲ್ಲ ಇಂಥದ್ದೇ.  ನಾನು ಹೇಳುವ ವಿಷಯ ನೀನು ಬಿಡಿಸಿಟ್ಟ ಚಿತ್ರದಷ್ಟು ಚೆಂದವೇನಲ್ಲ ಅಂತ ಗೊತ್ತಿದ್ದೂ ಅನಿವಾರ್ಯವಾಗಿ ಬರೆದ ಪತ್ರವಿದು. ಅವರೆಲ್ಲ ಸಿಕ್ಕರೆ ಅವರಿಗೆ ಹೇಳಿಬಿಡು. ಅವಳ ಬ್ಲಾಗಲ್ಲಿ ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸುವುದಕ್ಕಾದರೂ ಅವಳು ಮತ್ತೊಮ್ಮೆ ಬ್ಲಾಗಿಗೆ ಬಂದೇ ಬರುತ್ತಾಳೆ, ನಿಮ್ಮನ್ನೆಲ್ಲ ಅವಳು  ಮರೆತಿಲ್ಲ ಅಂತ ದಯವಿಟ್ಟು ತಿಳಿಸಿಬಿಡು. ನಾನು ಬಿಜಿ ಇದ್ದೇನೆ ಅಂತ ಹೇಳಿಬಿಡಬೇಡ ಮತ್ತೆ. ನಾನು ಸೋಮಾರಿಯ ಹಾಗೆ ಸುಮ್ಮನಿದ್ದೇನೆ ಅಂತ ಸುಮಾರು ಜನರಿಗೆ ಸುಳ್ಳು ಹೇಳಿದ್ದೇನೆ. ನೀನೂ ಹಾಗೆಯೇ ಹೇಳಿಬಿಡು. ನನ್ನೆದುರೀಗ ಚೆಂದದ ಹೊತ್ತುಗಳಿವೆ, ಕಳೆಯುವುದಕ್ಕೆ ಸಮಯ ಮಾತ್ರ ಇಲ್ಲ. ಎಲ್ಲಿಂದಾದರೂ ಸರಿ, ಒಂದಿಷ್ಟು ಹೊತ್ತನ್ನು ಕಳಿಸಿಕೊಡು. ಸಿಕ್ಕಾಗ ನಿನ್ನ ಹೊತ್ತನ್ನು ನಿನಗೆ ಮರಳಿಸುವ ಹೊಣೆ ನನ್ನದಾಗಿರಲಿ.&lt;br /&gt;&lt;br /&gt; ಹೊತ್ತು ಸರಿದದ್ದೇ ಗೊತ್ತಾಗುವುದಿಲ್ಲ ನಿನಗೆ ಪತ್ರ ಬರೆಯಲು ಕುಳಿತರೆ.  ನಾವು ಹೋದಾಗ ಕಂಡ ಗುಡ್ಡದ ಮೇಲೆ ಈಗಲೂ ಸ್ನೋ ಇದ್ದರೆ ಒಂದಿಷ್ಟು ನೋಡು. ಬಿಸಿಲಿಗೆ ಕರಗಿದ್ದರೆ ನಾನೇನು ಮಾಡಲಿಕ್ಕಾದೀತು! &lt;br /&gt;&lt;br /&gt;ನನ್ನ ಪರಿಚಯವದವರು ಸಿಕ್ಕರೆ ಒಂದು ಸಾಲಿನ ಹಾಡು, ನೀನು ಹಾಡಿಬಿಡು.  ಹೊಸತೇನಲ್ಲ, ಹಳೆಯದೇ. ಹಾಡಿದಷ್ಟೂ ಹೊಳಪು ಬರುವ ಕೆ.ಎಸ್. ನ ಅವರ ಹಾಡು. ಅವರೇ ಬರೆದದ್ದಂತೆ, ನಾನು ಆಗಾಗ ಹಾಡುತ್ತಿರುತ್ತೇನೆ. &lt;br /&gt;&lt;br /&gt; ‘ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ’ &lt;br /&gt;&lt;br /&gt;ಚೆಂದಿರನೇತಕೆ ನಿನಗೆ ತುಂಬ ಇಷ್ಟ ಅಂತ ಮತ್ತೆ ಕೇಳಬೇಡ, ಬೆಳದಿಂಗಳಾಗಿ ಬಂದಿಬಿಡುತ್ತೇನೆ ನೋಡು. ಇದೊಂದು ಕರ್ರನೆಯ ಬೆಳದಿಂಗಳೆಂದು ನೀನು ನಗುವಾಗೆಲ್ಲ ನಾನು ಕೋಪ ಮಾಡಿಕೊಂಡಿದ್ದೇ ನೆನಪು, ಈಗನಿಸುತ್ತದೆ, ನಕ್ಕು ನಾನೂ ಬೆಳದಿಂಗಳಾಗಬಹುದಿತ್ತು ಅಂತ. ನಾನು ಮಾತನಾಡುವುದೇ ಹಾಗೆ. ಹಿಂದೊಮ್ಮೆ ‘ಹೂವಿನಗಿಡ ನೆಟ್ಟಿದ್ದೇನೆ, ಹೂಬಿಟ್ಟಿದೆ’ ಅಂತ ನಿನ್ನ ಕರೆಸಿ ಮೆಣಸಿನ ಗಿಡದೊಳಗಿನ ಹೂ ತೋರಿಸಿದ್ದಕ್ಕೆ ನೀನು ಕೋಪಿಸಿಕೊಂಡಿದ್ದೇಕೆಂಬುದೇ ನನಗಿನ್ನೂ ಅರ್ಥವಾಗದ ವಿಷಯ. ಮೆಣಸಿನ ಹೂವು ಹೂವಲ್ಲವ ಹಾಗಾದರೆ! ನೀನೆಂದ ಹಾಗೆ ಶತದಡ್ಡಿ ನಾನಲ್ಲ ಕಣೋ, ಅದು ನೀನು.&lt;br /&gt;ಹಳೆಯದೆಲ್ಲ ಆಗಾಗ ನೆನೆಯುತ್ತಿರಬೇಕು ಅಂತ ನೀನು ಹೇಳಿದ್ದಕ್ಕೆ ನೀನು ಬರೆದ ಪತ್ರಗಳನ್ನೆಲ್ಲ ನೀರಲ್ಲಿ ನೆನೆಸಿಟ್ಟಿದ್ದೇನೆ. ಮೊಳಕೆಯೊಡೆದರೆ, ಸಸಿಯಾದರೆ ನಿನಗೂ ಕೊಡುತ್ತೇನೆ. ಇಲ್ಲವಾದರೆ ಹೇಗೂ ನಾಳೆಯ ದೋಸೆಗೆ ಇನ್ನೂ ಅಕ್ಕಿ ನೆನೆಸಿಲ್ಲ, ಅದನ್ನೇ ರುಬ್ಬುತ್ತೇನೆ.&lt;br /&gt;&lt;br /&gt;&lt;br /&gt;ಮತ್ತೆ ಸಿಗುತ್ತೇನೋ.&lt;br /&gt;ಈ ಕಾಗದವನ್ನು ಬರೆದು ನೀರಿನಲ್ಲಿ ತೇಲಿಬಿಡುತ್ತಿದ್ದೇನೆ. ಅದು ಹಕ್ಕಿಗರಿಯಂತೆ ಹಾರಿ ನಿನ್ನ ಸೇರಲಿ ಅಂತೆಲ್ಲ ಹಳೇ ಸಿನೇಮಾ ಡೈಲಾಗು ಬಿಡಲು ನನ್ನಿಂದಾಗದು. ಒಂದಿಷ್ಟು ಗೀಚಿ ಈ ಪತ್ರವನ್ನು ಗಾಳಿಯಲ್ಲಿ ಹಾರಿಬಿಟ್ಟಿದ್ದೇನೆ, ಹಕ್ಕಿಗರಿಯಂತಾದರೂ ಸರಿ, ಹೆಬ್ಬಾವಿನಂತಾದರೂ ಸರಿ. ಮೊದಲಿಗೆ ಇದು ನಿನ್ನ ಸೇರಲಿ, ಬಾಕಿ ವಿಷಯ ಮೊಕ್ತ.&lt;br /&gt;&lt;br /&gt;ಇಂತಿ,&lt;br /&gt;ಬೆಳದಿಂಗಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-6693224949211896060?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/6693224949211896060/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=6693224949211896060' title='0 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/6693224949211896060'/><link rel='self' type='application/atom+xml' href='http://www.blogger.com/feeds/5495085842856428066/posts/default/6693224949211896060'/><link rel='alternate' type='text/html' href='http://www.shantalabhandi.com/2009_07_01_archive.html#6693224949211896060' title='ಹಕ್ಕಿಗರಿಯಂತೆ ಹಾರಿ ಸೇರಲಿ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>0</thr:total></entry><entry><id>tag:blogger.com,1999:blog-5495085842856428066.post-2381622139671946800</id><published>2009-06-04T11:34:00.000-07:00</published><updated>2009-06-04T16:02:55.811-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ತುಳಸೀವನ</title><content type='html'>ಬರೆಯಬೇಕು. ಬರೆಯುವುದಕ್ಕೆ ತುಂಬ ಇದೆ. ಈ ವಾರದಲ್ಲಿ ಧನ್ಯವಾದ ಅರ್ಪಿಸಲಿಕ್ಕೇಂತಲೇ ಸುಮಾರು ಏಳೆಂಟು ಪತ್ರಗಳನ್ನಾದರೂ ಬರೆಯಬೇಕಿದೆ. ಏನಂತ ಬರೆಯುವುದು, ಎಲ್ಲಿಂದ ಶುರುಮಾಡುವುದು, ಯಾರಿಗೆ ಮೊದಲು ಪತ್ರ ಬರೆಯುವುದು,  ಗೊತ್ತಾಗುವುದೇ ಇಲ್ಲ. ಸುಮ್ಮನೆ ಪ್ಯಾಟಿಯೋದ ಗಾಜಿನ ಬಾಗಿಲ ಬಳಿ ನಿಂತಿದ್ದೇನೆ. ಗಿಡಗಳೇ ಇಲ್ಲದ ಅಂಗಳದ ಮಣ್ಣಿನ  ವಾಸನೆಯೂ ಬರಿತೇ ಬೋಳು. ಮೇಲಿನ ಅಡ್ಡಕಂಬದ ಮೂಲೆಗೆ ಪಾರಿವಾಳ ಜಾತಿಯ ಹಕ್ಕಿ ಗೂಡು ಕಟ್ಟಿ ಎರಡು ಮೊಟ್ಟೆಗಳ ಮೇಲೆ ತಾನೇ ಕೂತಿದೆ. ಮೂರ್ನಾಲ್ಕು ತಾಸುಗಳಿಗೊಮ್ಮೆ ಬೇರೆ ಬೇರೆ ಕೋನದಲ್ಲಿ ಕೂತು ಕಾವು ಕೊಡುತ್ತಿದೆಯಿರಬೇಕು. ಅದನ್ನೇ ನೋಡುತ್ತ ಸುಮ್ಮನೆ ನಿಂತ ಮನಸ್ಸು ಮಾತ್ರ ವಸಂತೋತ್ಸವದಲ್ಲೇ ಇದೆ. ಗೆಳೆಯ ‘ಇತ್ತ ಬಾ ಸಾಕು’ ಅಂತ ಕರೆಯುತ್ತಾನೆ. ‘ಶ್... ಸುಮ್ಮನಿರು, ಪಾರಿವಾಳ ಗೂಡು ಕಟ್ಟಿದೆ’ ಅನ್ನುತ್ತೇನೆ. ‘ಈವತ್ತು ಗೂಡು ಕಟ್ಟಿದೆ, ಅದರೊಳಗೆ ಮೊಟ್ಟೆಯಿದೆ, ನಾಳೆ ಮರಿಯಾಗುತ್ತವೆ, ಚಿಲಿಪಿಲಿಗುಡುತ್ತವೆ, ನೀನು ಅದನ್ನೇ ನೋಡುತ್ತ ಆ ಹಕ್ಕಿಗೂಡನ್ನೇ ತುಂಬ ಹಚ್ಚಿಕೊಂಡು ಕೂರುತ್ತೀಯ. ನಾಳೆ ಅವು ಹಾರಿಹೋದ ಮೇಲೆ ನಿನ್ನ ಸಮಾಧಾನಿಸಲು ಯಾವ ಹಕ್ಕಿಯ ತರಬೇಕು ನಾನು?, ಸುಮ್ಮನೆ ಇತ್ತ ಬಾ’ ಅನ್ನುತ್ತಾನೆ. ಖಾಲಿಯ ಅಂಗಳತುಂಬಲು `ತುಳಸೀವನ' ಅರ್ಧ ಹಾದಿಯತನಕ ಬಂದಿದೆ. ನಾಳೆಯಾದರೂ ಸರಿ, ನಮ್ಮನೆಯ ಅಂಗಳಕ್ಕೆ ತಂದಿಡಬೇಕು ಅಂದುಕೊಳ್ಳುತ್ತ ಒಳಗೆ ಬಂದಿದ್ದೇನೆ.&lt;br /&gt; ಅಮ್ಮನೂರಿಂದ ಬಂದಾಗಲೂ ಹೀಗೆಯೇ ಆಗಿತ್ತು. ಸ್ವಲ್ಪ ದಿನ ಬೇಕು ಸುಧಾರಿಸಿಕೊಳ್ಳಲು. ಯಾವುದಕ್ಕೂ ದೇಹಕ್ಕೂ ಮನಸಿಗೂ ಹಿಡಿದ ಜ್ವರದ ಸುಸ್ತು ಇಳಿಯಲಿ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-2381622139671946800?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/2381622139671946800/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=2381622139671946800' title='13 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/2381622139671946800'/><link rel='self' type='application/atom+xml' href='http://www.blogger.com/feeds/5495085842856428066/posts/default/2381622139671946800'/><link rel='alternate' type='text/html' href='http://www.shantalabhandi.com/2009_06_01_archive.html#2381622139671946800' title='ತುಳಸೀವನ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>13</thr:total></entry><entry><id>tag:blogger.com,1999:blog-5495085842856428066.post-748688501776050502</id><published>2009-05-21T22:51:00.000-07:00</published><updated>2009-05-21T23:25:49.497-07:00</updated><category scheme='http://www.blogger.com/atom/ns#' term='ಸ್ನಾಕ್ ಟೈಂ'/><title type='text'>ಟ್ರೇನಿನ ಹಾದಿ</title><content type='html'>ಟ್ರೇನಿಗೆ ಕೊಂಡಿದ್ದು ಓಪನ್ ಟಿಕೆಟ್&lt;br /&gt;ಎಷ್ಟು ಹೊತ್ತಿಗೆ ಹೊರಡುವೆನೋ ಗೊತ್ತಿಲ್ಲ&lt;br /&gt;ಟಿಕೆಟ್ ಕೊಟ್ಟವನಿಗೂ ಗೊತ್ತಿಲ್ಲ&lt;br /&gt;ಹೊರಡುವ ಸಮಯ ನಿಗಧಿಯಾಗಬೇಕಷ್ಟೇ&lt;br /&gt;ಟ್ರೇನಿಗೂ ನನಗೂ&lt;br /&gt;&lt;br /&gt;ಬೆಳಗಿನ ಬಿಸಿಕಾಫಿ&lt;br /&gt;ಸಂಜೆತನಕ ಇರಬೇಕೆಂದರೆ...&lt;br /&gt;ಸುಮ್ಮನೆ ತಮಾಷೆ ಬೇಡ&lt;br /&gt;ಆರಿದ್ದು ಕಾಫಿಯಲ್ಲ ಕೋಲ್ಡ್ ಕಾಫಿ &lt;br /&gt;ಕುಡಿ ಬೇಗ ಟ್ರೇನ್ ಎಷ್ಟೊತ್ತಿಗೆ ಹೊರಡುವುದೋ ಗೊತ್ತಿಲ್ಲ&lt;br /&gt;&lt;br /&gt;ಕಪ್ಪುಬಿಳುಪಿನ ಬೋರ್ಡು&lt;br /&gt;ಟ್ರೇನಿಗೆ ಸೂಟಾಗುವುದಿಲ್ಲ&lt;br /&gt;ಟ್ರೇನಿಗೂ ಬೋರ್ಡಿಗೂ ಸೂಟಾಗಬೇಕಿಲ್ಲ &lt;br /&gt;ಹೊಸಬಣ್ಣ ಬಳಿಯಬೇಕು&lt;br /&gt;ಬಿಡಿಸಿಟ್ಟ ಬೋರ್ಡಿಗೆ ಬಣ್ಣ ಬಳಿಯುವುದು ಹೇಗೆ?&lt;br /&gt;&lt;br /&gt;ಬೋರ್ಡೇ ಟ್ರೇನಲ್ಲ ನೋಡು&lt;br /&gt;ಟ್ರೇನಿನ ಬೋರ್ಡು&lt;br /&gt;ಬಣ್ಣವಾಗಿದ್ದರೆ ಮಾರ್ಕೆಟ್ಟು&lt;br /&gt;ಕಾಡಿಗೆ ಹೋಗುವ ಹಾದಿ&lt;br /&gt;ಸಂತೆಯೊಳಗೆ ಸಿಗುತ್ತದೆಯೇ?&lt;br /&gt;&lt;br /&gt;ತಲೆಬಿಸಿಯಿಲ್ಲ&lt;br /&gt;ಕೊಂಡ ಟಿಕೆಟ್ ಓಪನ್ನು&lt;br /&gt;ಸಮಯ ಇನ್ಯಾವುದೋ ಒಂದು&lt;br /&gt;ಹೊರಟಾದ ಮೇಲೆಯೇ ಗೊತ್ತು&lt;br /&gt;ಯಾವಾಗ ಹೊರಡುತ್ತೇವೋ ಎಂದು&lt;br /&gt;&lt;br /&gt;&lt;br /&gt;ಸಮಯ ತನ್ನಷ್ಟಕ್ಕೆ ನಿಗಧಿಯಾಗುತ್ತದೆ&lt;br /&gt;ಟ್ರೇನು ಹೊರಡುತ್ತದೆ&lt;br /&gt;ಟಿಕೆಟ್ಟಿನ ಬೆಲೆ ಕೊಂಡವರಿಗೆ ಮಾತ್ರ &lt;br /&gt;ಕೊಟ್ಟವರಿಗಲ್ಲ&lt;br /&gt;ಹೊರಡುವ ಮುನ್ನ ಯಾರೂ ಸೀಟಿ ಊದುವುದಿಲ್ಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-748688501776050502?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/748688501776050502/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=748688501776050502' title='12 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/748688501776050502'/><link rel='self' type='application/atom+xml' href='http://www.blogger.com/feeds/5495085842856428066/posts/default/748688501776050502'/><link rel='alternate' type='text/html' href='http://www.shantalabhandi.com/2009_05_01_archive.html#748688501776050502' title='ಟ್ರೇನಿನ ಹಾದಿ'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>12</thr:total></entry><entry><id>tag:blogger.com,1999:blog-5495085842856428066.post-5865842871407611253</id><published>2009-05-18T13:56:00.000-07:00</published><updated>2009-05-18T16:14:18.832-07:00</updated><category scheme='http://www.blogger.com/atom/ns#' term='ಕವಿಕಾವ್ಯ ಸ್ಪೂರ್ತಿಗರ್ಪಣೆ'/><title type='text'>ಗಣೇಶನ್ನ ಮಾಡ್ರಿ ಅಂದ್ರೆ ಅವರಪ್ಪನ್ನ ಮಾಡಿದೀರ ಅಂದ್ರೆ ನಿಮಗೆ ಕೋಪ ಬರತ್ತ?</title><content type='html'>ಮಿಂಚಿ ಮಿನುಗಿದವರು ಮತ್ತು ಮಿಂಚುತ್ತಿರುವವರು... &lt;br /&gt;&lt;br /&gt;&lt;br /&gt;ತಮ್ಮ ಐದನೆಯ ವಯಸ್ಸಿನಲ್ಲಿ ಹಾಡುಗಾರರಾಗಿ ವೇದಿಕೆಗೆ ಬಂದ ಚಾರ್ಲಿ ಚಾಪ್ಲಿನ್  ಎಪ್ರಿಲ್ ೧೬, ೧೮೮೯ ಇಂಗ್ಲೆಂಡಿನಲ್ಲಿ ಜನಿಸಿದ ಇವರು ಮುಂದೆ ಹಾಸ್ಯನಟರಾಗಿ ಜಗತ್ಪ್ರಸಿದ್ಧರಾದರು. ತೆವಳುತ್ತಲಿದ್ದ ಚಲನಚಿತ್ರರಂಗವನ್ನು ಹಿಡಿದೆತ್ತಿ ನಿಲ್ಲಿಸಿದ ಕೀರ್ತಿ ಚಾಪ್ಲಿನ್ ಅವರನ್ನೂ ಸಂದುತ್ತದೆ.&lt;br /&gt;ಹಳತೆನಿಸಿದರೂ ಕಣ್ಣುಗಳಲ್ಲಿ ಹೊಸತಾಗಿಯೇ ಇದ್ದುಬಿಡುವ  ಕಪ್ಪುಬಣ್ಣಕ್ಕಿಷ್ಟು ಮಾಸಲು ಬಳಿದಿರುವಂಥ ಚಾರ್ಲಿಯ ಕೋಟು, ಆ ಪ್ಯಾಂಟು, ಆತನ ತಲೆಯಲ್ಲೊಮ್ಮೆ, ಕೈಯಲ್ಲೊಮ್ಮೆ ಆಡುವ ಮರೆಯಲಾಗದೇ ನಮ್ಮನ್ನೇ ಸುತ್ತಿಕೊಳ್ಳುವ ಸುತ್ತಾವರಿ ಟೋಪಿ, ಮೇಲ್ದುಟಿಗಂಟಿಕೊಂಡು ಕುಣಿಯುತ್ತಲಿರುವ ಚೋಟುದ್ದದ ಮೀಸೆ, ಕೈಯಲ್ಲೊಂದು ವಿವಿಧ ಕೆಲಸಮಾಡುವ ವಾಕಿಂಗ್ ಸ್ಟಿಕ್.  ಚಾಪ್ಲಿನ್ ಚಿತ್ರಗಳನ್ನು ಕಂಡವರಿಗೆ ಆತನ ನೆನಪೊಂದು ಇಷ್ಟೂ ಹೊತ್ತು ನಮ್ಮೊಡನಿದ್ದು ಈಗಷ್ಟೇ ಎದ್ದುಹೋದ ಆಪ್ತ ಗೆಳೆಯನ ಹಾಗೆ.&lt;br /&gt;&lt;br /&gt;ಚಾಪ್ಲಿನ್ ಅಪ್ಪನ ಅಲೆಯುವ ಹಾಡನ್ನಾಲಿಸಿದರೋ ಬಿಟ್ಟರೋ, ಹಾಡುಗಾರ್ತಿ ಅಮ್ಮ ಹೆನ್ಹಾ ಹಾಲ್  ಜೊತೆ ಬಾಲ್ಯ ಕಳೆದ ಚಾರ್ಲಿ ಬೆಳೆದದ್ದು ಆರ್ಥಿಕ ಬಡತನದಲ್ಲಿಯೇ. ಮೂಲತಃ ಹಾಡುಗಾರ್ತಿಯಾಗಿದ್ದ ಚಾರ್ಲಿಯ ತಾಯಿ ಹೆನ್ಹಾ ವೇದಿಕೆಯೊಂದರಲ್ಲಿ ಹಾಡುತ್ತ ತಮ್ಮ ಧ್ವನಿಕಳೆದುಕೊಂಡು ಹಾಡಲಾರದೇ ನಿಲ್ಲಿಸಿದ ಅರ್ಧಹಾಡನ್ನು ಐದುವರ್ಷದ ಬಾಲಕ ಚಾರ್ಲಿ ಹಾಡಿಮುಗಿಸಿದ್ದು ಕಥೆಯಲ್ಲ, ಕೇಳಿದವರ ಕಣ್ಣೀರೂ ಅಲ್ಲ, ಅದು ಆತನ ಬದುಕು. ಹಾಡಲಾಗದೇ ಹಾಡಿನ ಹೆಸರಾಗಿ ಮಾತ್ರ ಉಳಿದ ತಾಯಿ ಹೆನ್ಹಾ ಹಾಲ್ ಳ ಹೆಸರನ್ನೇ ಬಳಸಿಕೊಳ್ಳುತ್ತ ತನ್ನಮ್ಮ ಹಾಡಿದ ವೇದಿಕೆಗಳಲ್ಲೆಲ್ಲ ತಮ್ಮ ಧ್ವನಿ ತೆರೆದಿಡುತ್ತ ಎಂಟನೆಯ ವಯಸ್ಸಿನಲ್ಲಿ ಹಾಡುಗಾರ ಎನಿಸಿಕೊಂಡರು.&lt;br /&gt;&lt;br /&gt; ತಮ್ಮ ಬದುಕಿನ ಮುಂದಿನ ದಿನಗಳಲ್ಲಿ ಚಾಪ್ಲಿನ್ ನಟಿಸಿದ ಪ್ರಥಮಚಿತ್ರ  Making a Living ೧೯೧೪ರಲ್ಲಿ ಬಿಡುಗಡೆಯಾದದ್ದು ಸೋಲನ್ನು ತರಲಿಲ್ಲ. ನಟರಾಗಿ ಚಿತ್ರರಂಗಕ್ಕೆ ಬಂದ ಚಾರ್ಲಿ ೧೯೧೫ರಲ್ಲಿ The Tramp ಚಿತ್ರವನ್ನು ಸ್ವಥಹ ತಾವೇ ನಿರ್ದೇಶಿಸುವಲ್ಲಿ ಯಶಸ್ವಿಯಾದರು. ಮುಂದೆ ತಮ್ಮ ಚಿತ್ರಕ್ಕೆ  ರೈಟರ್, ಪ್ರೊಡ್ಯೂಸರ್, ಡೈರಕ್ಟರ್, ಕಂಪೋಸರ್ ಎಲ್ಲವೂ ತಾವೇ ಆಗುತ್ತ ಹಲವುಪಾತ್ರಗಳನ್ನು ನಿಭಾಯಿಸುವಲ್ಲಿ ಹಾಸ್ಯನಟರಾಗಿ ಪ್ರಸಿದ್ದಿಪಡೆದರು. City Lights ೧೯೩೫ರಲ್ಲಿ ಬಿಡುಗಡೆಯಾದ ಚಾಪ್ಲಿನ್ ಅವರು ನಿರ್ದೇಶಿಸಿದ ಪ್ರಥಮ ಮೂಕಿಚಿತ್ರ. ಚಾಪ್ಲಿನ್ ಕೊನೆಯ ಚಿತ್ರ  A Countess from Hong Kong ೧೯೬೬ರಲ್ಲಿ ಬಿಡುಗಡೆಯಾಯಿತು. ಅಲ್ಲಿಂದ ಇಲ್ಲಿಯತನಕವೂ ಚಾಪ್ಲಿನ್ ತಮ್ಮ ಅಭಿನಯದಿಂದ ವೀಕ್ಷಕರನ್ನೊಮ್ಮೆ ಅಳಿಸಿದರೂ ಮತ್ತೆ ನಗಿಸುವ ಭಾರವನ್ನೂ ತಾವೇ ಹೊತ್ತವರು. &lt;br /&gt;&lt;br /&gt;೧೯೧೮ರಲ್ಲಿ ಮಿಲ್ಡ್ರೆಡ್ ಹ್ಯಾರೀಸ್ ಎಂಬ ಹದಿನಾರುವರ್ಷದ ಯುವತಿಯನ್ನು ಚಾರ್ಲೀ ವಿವಾಹವಾದರು. ಆರುವರ್ಷಗಳ ತರುವಾಯ ಲೀಟಾ ಗ್ರೆ ಎಂಬ ಯುವತಿಯನ್ನು ವಿವಾಹವಾದರು. ಈ ಎರಡೂ ವಿವಾಹಗಳು ವಿಚ್ಛೇದನದೊಂದಿಗೆ ಅಂತ್ಯವಾದವು. ಚಾರ್ಲಿಯ ಮೂರನೆಯ ಮಡದಿಯೇ ಚಿತ್ರನಟಿ ಪೌಲೆಟ್. ನಾಲ್ಕನೆಯ ಮಡದಿ ಊನಾ ಹಾಗೂ ಮಕ್ಕಳೊಂದಿಗೆ ಚಾಪ್ಲಿನ್ ಸ್ವಿಡ್ಜರ್ ಲ್ಯಾಂಡ್ ಗೆ ತೆರಳಿದ್ದು ೧೯೫೨ರ ನಂತರದಲ್ಲಿ. ಒಂಬತ್ತುಮಕ್ಕಳ ತಂದೆಯಾಗಿದ್ದರು ಚಾಪ್ಲಿನ್. ಹೀಗೆ ಚಾರ್ಲಿ ಬದುಕಿದ ಬದುಕೋ, ಬಾಳಿದ ಬಾಳ್ವೆಯೋ...ಹಿಂದೆಹರಿಯುತ್ತ ಹೋದರೆ ತೆರಯ ಮೇಲೆ ಕಂಡಂಥ ಅಳು-ನಗುವಿನ ಸಮಾಗಮವೇ ತೆರೆಯ ಹಿಂದೆಯೂ ಕಾಣುವುದು. ೧೯೭೭ ಡಿಸೆಂಬರ್ ೨೫ರಲ್ಲಿ ಚಾರ್ಲಿ ಚಾಪ್ಲಿನ್ ತೆರೆಯ ಹಿಂದಿನಿಂದ ಕಣ್ಮರೆಯಾಗಿ ತೆರೆಯಮೇಲೆ ಮಾತ್ರ ಉಳಿದರು. ಅನೇಕ ಮನಸ್ಸುಗಳು ತಮ್ಮೊಳಗಿನ ಜೀವಂತ ಚಾಪ್ಲಿನ್ ನನ್ನು ಕಳಿಸಿಕೊಡದೇ ಚಾಪ್ಲಿನ್  ಹಲವಾರು ಮನಗಳಲ್ಲಿ ಉಳಿದುಬಿಟ್ಟರು.&lt;br /&gt;&lt;br /&gt;ಚಾಪ್ಲಿನ್ ನ ಮೂಕಾಭಿನಯ, ಆಂಗಿಕ ಹಾವಭಾವಗಳು ಜನಮನದಲ್ಲಿ ಹೂತುಹೋದವು. ಹುಬ್ಬು, ಮೀಸೆ ಮುಖಚರ್ಯೆ, ಹಾವಭಾವಗಳಲ್ಲೇ ಮಾತಿಲ್ಲದೇ ಮೋಡಿಮಾಡಿದರು. ಬಾಯಿ, ತುಟಿ, ಕಂಠ ಮಾತ್ರವಲ್ಲದೇ ಇಡಿಯ ದೇಹಕ್ಕೂ ಮಾತಾಡಬಲ್ಲ ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟರು. ಆ ಮಾಂತ್ರಿಕ ನಟನೆ ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಅಳಿದರೂ ಉಳಿಹೋದರು ಚಾಪ್ಲಿನ್. ಅವರ ಸ್ಥಾನವನ್ನು ಅಲ್ಪಮಟ್ಟಿಗೆ ತುಂಬಿಕೊಂಡರು ಮಿ.ಬೀನ್.&lt;br /&gt;&lt;br /&gt;ಚಾಪ್ಲಿನ್ ಭೌತಿಕವಾಗಿ ಮರೆಯಾದರೂ ಅವರ ಸ್ಥಾನವನ್ನಿಷ್ಟು ತುಂಬಿಕೊಟ್ಟವರು ಮಿ. ಬೀನ್ ಎಂದೇ ಪ್ರಖ್ಯಾತರಾದ ರೊವನ್ ಆಟ್ಕಿನ್ ಸನ್. ಇವರು ಹುಟ್ಟಿದ್ದು ಜನವರಿ ೬, ೧೯೫೫ರಲ್ಲಿ.  ಇಂಗ್ಲೆಂಡಿನ ನ್ಯೂ ಕ್ಯಾಸಲ್ ಎಂಬಲ್ಲಿ. ಐದು ಅಡಿ ಹತ್ತುಮುಕ್ಕಾಲು ಇಂಚಿನಷ್ಟು ಎತ್ತರವಿರುವ ಇವರು ಹುಬ್ಬು,ತಲೆಗೂದಲಲ್ಲದೇ ಕೈಬೆರಳ ತುದಿಯಿಂದಲೂ ಭಾವಭಿವ್ಯಕ್ತಪಡಿಸುವಂತಹ ಕಲೆಬಲ್ಲವರು. ಬ್ರಿಟನ್ನಿನ  Black Adder ಕಾಮಿಡಿಯಿಂದಾಗಿ  ಮಿಂಚಿದರಲ್ಲದೇ ಜನಪ್ರಿಯರಾದರು. ನಟ ಹಾಗೂ ಬರಹಗಾರಾದ ಇವರು ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ನಲ್ಲಿ ಬ್ಯಾಚುಲರ್ ಡಿಗ್ರಿಯನ್ನು ನ್ಯೂ ಕ್ಯಾಸಲ್ ಯುನಿವರ್ಸಿಟಿಯಿಂದಲೂ ಹಾಗೂ ಮಾಸ್ಟರ್ಸ್ ಡಿಗ್ರಿಯನ್ನು ಕ್ವೀನ್ಸ್ ಕಾಲೇಜ್, ಆಕ್ಸ್ಫರ್ಡ್ ಇಂದಲೂ ಪಡೆದರು. ಆದರೂ ಒಲವುಮಾತ್ರ ನಟನೆಯತ್ತ. ಹಾಸ್ಯನಟನಾಗಿ ಮಿಂಚಿದರು, ಮಿ.ಬೀನ್ ಆದರು.&lt;br /&gt;&lt;br /&gt; ಸುನೇತ್ರಾ ಶಾಸ್ತ್ರಿ ಎಂಬ ಬ್ರಿಟಿಷ್ ಹಿಂದು ಯುವತಿಯನ್ನು ವಿವಾಹವಾದರು. ಇಬ್ಬರು ಮಕ್ಕಳನ್ನು ಹೊಂದಿರುವ ಆಟ್ಕಿನ್ ಸನ್ ಹಾಸ್ಯನಟರಾಗಿ ಹೆಚ್ಚು ಪ್ರಸಿಧ್ಧರಾದವರು. ಹತ್ತುವರ್ಷಕ್ಕಿಂತಲೂ ಪುಟ್ಟಬಾಲಕನ ಮುಗ್ಧತೆಯನ್ನು ತಮ್ಮ ನಟನೆಯೊಳಗೆ ಕಾಣಿಸಬಲ್ಲವರು. ಕೆಲವೊಮ್ಮೆ ‘ಬ್’ ಅಕ್ಷರ ಉಚ್ಛಾರಣೆ ಆಟ್ಕಿನ್ ಸನ್ ಗೆ ಸ್ವಲ್ಪ ಸಮಸ್ಯೆಯೆನಿಸಿದರೂ ಆ  ಸಮಸ್ಯೆಯನ್ನು ನಿವಾಳಿಸಿ ಹಾಕಿಬಿಡಬಲ್ಲ ಸಾಮರ್ಥ್ಯ ಅವರ ನಟನೆಗಿದೆ.&lt;br /&gt;&lt;br /&gt;೧೯೮೩ರಲ್ಲಿ Dead on Time , ೧೯೭೬ರಲ್ಲಿ Pleasure at Her Majesty's , ೧೯೮೯ರಲ್ಲಿ The Tall Guy, ೧೯೮೩ರಲ್ಲಿ Never Say Never Again ಚಿತ್ರಗಳಲ್ಲಿ ನಟಿಸಿದ ರೊವಾನ್ ೧೯೯೦ರಲ್ಲಿ  "Mr. Bean" , ೧೯೭೯ರಲ್ಲಿ  "Not the Nine O'Clock News" , ೧೯೮೩ರಲ್ಲಿ "The Black Adder" ಮತ್ತು ೧೯೯೨ರಲ್ಲಿ  "Funny Business" ಮುಂತಾದ ಟೀವಿ ಶೋಗಳಲ್ಲಿ ಕಾಣಿಸಿಕೊಂಡರಲ್ಲದೇ  ಚಾರ್ಲಿ ಚಾಪ್ಲಿನ್ ಸ್ಥಾನವನ್ನು ತುಂಬುವಲ್ಲಿ ಅಲ್ಪನಿಟ್ಟಿನ ಯಶಸ್ಸುಗಳಿಸಿದ ಕೀರ್ತಿ ಈ ನಟನಿಗೆ ಸಲ್ಲುತ್ತದೆ.&lt;br /&gt;&lt;br /&gt;ಮಾತಿಲ್ಲದ ಮಿ.ಬೀನ್ ಭಾವಾಭಿನಯದ ಮಾಯೆಯೊಳಗೆ ಹಲವುಬಾರಿ ಚಾಪ್ಲಿನ್ ಸುಳಿದಾಡಿದಂತೆನಿಸುವುದು ಸುಳ್ಳಲ್ಲ. ಮಿ.ಬೀನ್ ಮುಖವನ್ನು ಹಿಂಡಿಹಿಪ್ಪೆಮಾಡಿ ಭಾವನೆಗಳು ಬಸಿಯುವಾಗ ನಿಜವಾಗಿಯೂ ಆಟ್ಕಿನ್ ಸನ್ ಮುಖಕ್ಕೆ ಮೂಳೆಯೇ ಇಲ್ಲವೇನೋ, ಬರೀ ರಬ್ಬರಿನಿಂದ ಮಾಡಿಟ್ಟ ಮುಖವೇನೋ ಇದು ಎಂಬಷ್ಟು ಆಶ್ಚರ್ಯವಾಗುತ್ತದೆ. ನಟನೆಯೊಳಗಿನ ಆ ಮುಗ್ಧತೆ ಕೆಲವೊಮ್ಮೆ ನಗಿಸಿದರೆ ಕೆಲವೊಮ್ಮೆ ಕನಿಕರ ಹುಟ್ಟಿಸಿ ಕಣ್ಣುಮಂಜಾದರೆ ಪರದೆಯಲ್ಲಿ ಚಾಪ್ಲಿನ್ ಕಾಣಿಸುತ್ತಾರೆ.&lt;br /&gt;&lt;br /&gt; ಮರೆಯಾದರೂ ಮಿನುಗುತ್ತಿರುವ ಚಾರ್ಲಿಚಾಪ್ಲಿನ್, ತೆರೆಯಮೇಲೆ ಮಿಂಚುವ ಮಿ. ಬೀನ್ ರಂಥಹ ಹಾಸ್ಯನಟರದು ಬರೀ ನಟನೆಯೆಂದರೆ ಸಾಲದು. ಅದು ಅಂಥಹ ಮಹಾನ್ ವ್ಯಕ್ತಿಗಳನ್ನಷ್ಟೇ ಆರಿಸಿಕೊಂಡು ಒಲಿದಂತಹ ಕಲೆಯೆಂದರೆ ಬರೀ ಒಂದು ಮಾತಾದೀತು. ಇಲ್ಲ. ಅದು ಚಾಪ್ಲಿನ್, ಬೀನ್ ರಂಥವರನ್ನು ಆರಿಸಿಕೊಂಡು ಒಲಿದ ಕಲೆ ಎಂದರಷ್ಟೇ ಸಾಲದು, ಆ ಗಳಿಗೆಯಲ್ಲಿ  ವೀಕ್ಷಕರನ್ನು ಆವರಿಸಿಕೊಂಡು ಆಳುವ ಭಾವಾಭಿವ್ಯಕ್ತಿಯ ಬಲೆ. ನಟನೆಯಲ್ಲೂ  ನೈಜತೆ. &lt;br /&gt;&lt;br /&gt;&lt;em&gt;&lt;strong&gt;ಬಲ್ಲವರ ನುಡಿ &lt;/strong&gt;&lt;/em&gt;: ಕನ್ನಡಪ್ರಭದಲ್ಲಲ್ಲ, ‘ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿತ್ತು ಅಂತ ಬರೀರಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-5865842871407611253?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/5865842871407611253/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=5865842871407611253' title='6 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/5865842871407611253'/><link rel='self' type='application/atom+xml' href='http://www.blogger.com/feeds/5495085842856428066/posts/default/5865842871407611253'/><link rel='alternate' type='text/html' href='http://www.shantalabhandi.com/2009_05_01_archive.html#5865842871407611253' title='ಗಣೇಶನ್ನ ಮಾಡ್ರಿ ಅಂದ್ರೆ ಅವರಪ್ಪನ್ನ ಮಾಡಿದೀರ ಅಂದ್ರೆ ನಿಮಗೆ ಕೋಪ ಬರತ್ತ?'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>6</thr:total></entry><entry><id>tag:blogger.com,1999:blog-5495085842856428066.post-9044427183600847743</id><published>2009-05-03T22:46:00.000-07:00</published><updated>2009-05-04T00:22:02.730-07:00</updated><category scheme='http://www.blogger.com/atom/ns#' term='ನಗಬೇಡ'/><title type='text'>ಕನಸುಗಳ ನೆನಪು</title><content type='html'>ಸುಮಾರು ಆರು ತಿಂಗಳಿನಷ್ಟು ಹಿಂದೆಯೇ ನಡೆದದ್ದಿದು. &lt;br /&gt;ನಾನು ಸಾಹಿತಿಯೊಬ್ಬರ ಕಾರಿನ ಡ್ರೈವರ್ ಆಗಿದ್ದೆ. ಸಾಹಿತಿಗಳು ಬಂದು 'ಏನೋ ಹೇಳ್ತೀನಿ ಟೈಪ್ ಮಾಡು, ಯಾಕೋ ಟೈಪ್ ಮಾಡೋಕ್ ಆಗ್ತಿಲ್ಲ' ಅಂದರು.  ‘ಸರಿ ಸಾರ್, ಟೈಪ್ ಮಾಡಿಕೊಡ್ತೀನಿ’ ಅಂತ ಟೈಪ್ ಮಾಡೋಕೆ ಶುರು ಮಾಡಿದೆ. ಸಾಹಿತಿಗಳು ತುಂಬ ಫಾಸ್ಟಾಗಿ ಹೇಳಿದ್ದರಿಂದ ಅವರು ಹೇಳಿದ್ದನ್ನೆಲ್ಲ ಟೈಪ್ ಮಾಡೋಕೆ ಆಗ್ಲಿಲ್ಲ ನನ್ ಹತ್ರ. ನಾನು ತುಂಬ ಸ್ಲೋ ಟೈಪ್ ಮಾಡಿದ್ದರಿಂದ ಸಾಹಿತಿಗಳಿಗೆ ಬೇಸರವಾಗಿ ತಾವೇ ಎಲ್ಲವನ್ನೂ ಸರಸರನೆ ಟೈಪ್ ಮಾಡಿಕೊಂಡ್ರು.&lt;br /&gt;ಅಬ್ಬಾ! ಅಷ್ಟರಲ್ಲಿ ಎಚ್ಚರವಾಯ್ತು! ಕನಸು ಅಂತ ಗೊತ್ತಾದಾಗ ಎಷ್ಟು ನಿರಾಳವಾಗತ್ತಲ್ವ?&lt;br /&gt;&lt;br /&gt;**********&lt;br /&gt;&lt;br /&gt;&lt;br /&gt;ಸ್ವಲ್ಪ ದಿನಗಳ ನಂತರದಲ್ಲಿ ಮತ್ತೊಂದು ಕನಸು ಬಿದ್ದಿತ್ತು. ನನ್ನದೊಂದು ಕಥಾಸಂಕಲನ ಬಿಡುಗಡೆ ಸಮಾರಂಭ. ಹಾಲ್ ಅಲ್ಲಿ ನಾವೊಂದಿಷ್ಟು ಕೆಲವೇ ಜನರು ಸೇರಿದ್ದೇವೆ. ನಾನು ಸಾಹಿತಿಯೊಬ್ಬರ ಹತ್ತಿರ ‘ಸಂಕಲನಕ್ಕೆ ನೀವೇ ಮುನ್ನುಡಿ ಬರೆಯಬೇಕು ಸಾರ್’ ಅಂತ ಗೋಗರೆಯುತ್ತಿದ್ದೇನೆ.  ಅಲ್ಲಿಯೇ ಪಕ್ಕದಲ್ಲಿದ್ದ ಮತ್ತೊಬ್ಬರು ಸಾಹಿತಿಗಳು ‘ನಾನೇ ಮುನ್ನುಡಿ, ಬೆನ್ನುಡಿ, ಎರಡನ್ನೂ ಬರೆಯೋದು’ ಅಂತ ಹೇಳ್ತಿದ್ದಾರೆ. &lt;br /&gt;ಆ ಕಡೆ ಪಕ್ಕದಲ್ಲಿ ನಮ್ಮಮ್ಮ ಒಂದು ಟೇಬಲ್ ಮುಂದಿಟ್ಟುಕೊಂಡು ಖುರ್ಚಿಯಲ್ಲಿ ಕುಳಿತಿದ್ದಾರೆ. ಪುಟ್ಟಪುಟ್ಟ ಕಾಗದದ ಚೀಟಿಯಲ್ಲಿ ಏನನ್ನೋ ಬರೆದು ಬರೆದು ಬಂದವರಿಗೆಲ್ಲ ಕೊಡ್ತಿದಾರೆ.&lt;br /&gt;ಅಷ್ಟರಲ್ಲಿ ಎಚ್ಚರವಾಯ್ತು.&lt;br /&gt;&lt;br /&gt; ಈ ಎರಡನೇ ಕನಸು ಬಿದ್ದಾಗ ಮಾತ್ರ ಎಚ್ಚರವಾದಾಗ ಸುಧಾರಿಸಿಕೊಳ್ಳೋಕೆ ಸುಮಾರು ಸಮಯವೇ ಬೇಕಾಯ್ತು. ಆದ್ರೆ ಆವತ್ತು ಇಡೀ ದಿನದಲ್ಲಿ ಈ ಕನಸು ನೆನಪಾಗಿ ನನ್ನಷ್ಟಕ್ಕೇ ನಕ್ಕಿದ್ದೇನೆ. ಮೂರ್ನಾಲ್ಕು ಬಾರಿ ಗೆಳೆಯನೊಂದಿಗೂ ಹೇಳಿ ನಕ್ಕಿದ್ದೇನೆ. ಇಷ್ಟು ದುಬಾರಿ ಕನಸು ಬಿದ್ದಿರುವುದನ್ನು ಬಾರಿ ಬಾರಿಗೆ ಹೇಳಿದರೆ ಯಾವ ಗೆಳೆಯ ತಾನೆ ಎಷ್ಟು ಬಾರಿ ನಕ್ಕಾನು!&lt;br /&gt;&lt;br /&gt;ನನಗೆ ನಗು ಬಂದದ್ದು ಬೇರಾವುದಕ್ಕೂ ಅಲ್ಲ. ಎಷ್ಟು ವಿಚಿತ್ರ ಕನಸುಗಳು ಬೀಳುತ್ತವೆ ಅಂದ್ರೆ...ಅಬ್ಬಾ! ಪುಸ್ತಕ ಬಿಡುಗಡೆಯ ಸಮಾರಂಭದ ದಿನ ಸಮಾರಂಭದ ಹಾಲಿನಲ್ಲಿ ಅದೇ ಪುಸ್ತಕಕ್ಕೆ ಮುನ್ನುಡಿ ಬರೆಸಿಕೊಳ್ಳುತ್ತಿದ್ದ ನನ್ನನ್ನೇ ನೋಡಿ ನಂಗೆ ನಗು.&lt;br /&gt;&lt;br /&gt;ನಮ್ಮಮ್ಮ ಅಲ್ಲಿ ಕೂತ್ಕೊಂಡು ಚೀಟಿಯಲ್ಲಿ ಎಲ್ಲರಿಗೂ ಅದೇನನ್ನೋ ಬರೆದುಕೊಡ್ತಿದ್ದರಲ್ಲ, ಅದೇನಾಗಿರಬಹುದು ಅನ್ನೋ ಕುತೂಹಲ ಮಾತ್ರ ಇನ್ನೂ ಆಗಾಗ ಮತ್ತೆ ಮತ್ತೆ ಕಾಡತ್ತೆ. ‘ಖಂಡಿತ ಯಾರೂ ಈ ಪುಸ್ತಕ ತಗೋಬೇಡಿ’ ಅಂತ ಬರೆದುಕೊಟ್ಟಿರಬಹುದಾ? ಅಂತ ನನ್ನ ಸಂಶಯ. ಯಾಕೇಂದ್ರೆ ಜನರಿಗೆ ಮಾತ್ರ ಮೋಸವಾಗ್ಬಾರ್ದು ಅನ್ನೋ ನಮ್ಮಮ್ಮನ ಕಳಕಳಿ ನನ್ನ ಕನಸಲ್ಲಿಯೂ ಜಾಗೃತವಾಗಿರಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-9044427183600847743?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/9044427183600847743/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=9044427183600847743' title='15 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/9044427183600847743'/><link rel='self' type='application/atom+xml' href='http://www.blogger.com/feeds/5495085842856428066/posts/default/9044427183600847743'/><link rel='alternate' type='text/html' href='http://www.shantalabhandi.com/2009_05_01_archive.html#9044427183600847743' title='ಕನಸುಗಳ ನೆನಪು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>15</thr:total></entry><entry><id>tag:blogger.com,1999:blog-5495085842856428066.post-5645583850399447939</id><published>2009-04-23T12:03:00.000-07:00</published><updated>2009-04-23T18:22:15.557-07:00</updated><category scheme='http://www.blogger.com/atom/ns#' term='ಗಿಣಿ ಗುಬ್ಬಿ ಅಚ್ಚು ಮುದ್ದು ಮತ್ತು ಅಮ್ಮ.'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಸಾವಿರದ ಸಾಸಿವೆಯಲಿ ಸಾವಿರದೊಂದು...</title><content type='html'>ನಾನು ತುಂಬ ಅಂಟಿಕೊಂಡಿದ್ದ ಆ ಕಣ್ಣುಗಳು ಮತ್ತೆ ನನಗೆ ಕಾಣಸಿಗುತ್ತಾವೆಂಬ ಭರವಸೆಯಿರಲಿಲ್ಲ. ಅಲೆಮಾರಿ ಕಣ್ಣು ಅವಿತಿಟ್ಟುಕೊಳ್ಳುವುದೆಂತು. ನನ್ನೆದುರು ಬಂತು. &lt;br /&gt;&lt;br /&gt;‘ನೀನ್ಯಾರು?’ ಅಂತ ಕೇಳಿದರೆ...&lt;br /&gt; ‘ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಅಲೆಮಾರಿ ನಾನು. ನಾನೇ ತಿಳಿಯದ ನಾನು ನಾನು.’ &lt;a href="http://www.blogger.com/profile/17600389292765437667"&gt;ಗೌತಮ &lt;/a&gt;ಉತ್ತರಿಸಿದ್ದಿಷ್ಟು.&lt;br /&gt; &lt;br /&gt;‘ ಓ ಅಲೆಮಾರಿ, ನಿನಗೆ ಹಾಡಲು ಬರತ್ತ?’ ಅಂತ ಕೇಳಿದರೆ...&lt;br /&gt;"ನಿನ್ನ ಕಣ್ಣ ಕೊಳದ ಒಳಗೆ &lt;br /&gt;ಕನಸ ಮೀನು ನನದು ಕಣೆ.&lt;br /&gt;ಎದೆಯ ತುಂಬ ಅವಿತು ಕುಳಿತ &lt;br /&gt;ನೂರು ಆಸೆ ನಿನದೆ ಕಣೆ&lt;br /&gt;ಬಾಳ ತುಂಬ ಒಲವು ಸುರಿವ &lt;br /&gt;ನವಿರು ನಂಟು ನಮದು ಕಣೆ"&lt;br /&gt; ಅಂತ ತಾನೇ ಬರೆದಈ ಹಾಡನ್ನು ಹಾಡುವಾಗ ಆ ಕಣ್ಣುಗಳು ಯಾರನ್ನೋ ಅರಸುವಂತೆ ಭಾವಸ್ಫುರಿಸುತ್ತವೆ. &lt;br /&gt;&lt;br /&gt;‘ನೀ ಬುದ್ಧನೇನೋ?’ ಅಂತ ಕೇಳಿದರೆ ಸಾವಿರದ ಮನೆಯ ಸಾಸಿವೆ ಕಾಳಿನ ಬಗ್ಗೆಯೂ ಮಾತನಾಡುತ್ತಾನೆ.&lt;br /&gt;‘ಬರೆಯೋಕೆ ಬರತ್ತೇನೋ ಗೌತಮ ಬುದ್ಧ?’ ಅಂತ ಕೇಳಿದರೆ...&lt;br /&gt;"ಬರೆದಿಟ್ಟ ಕವನ ನೂರು &lt;br /&gt;ಕವನಕೆ ಉಸಿರೇ ನೀನು&lt;br /&gt;ಮೌನದ ಪ್ರಶ್ನೆ ಸಾಕಿನ್ನು &lt;br /&gt;ಉತ್ತರಕೆ ಕಾದಿಹ ನಾನು" ಅಂತ ತಾನೇ ಬರೆದ ಈ ಹಾಡನ್ನು ಎಲ್ಲೋ ನೋಡುತ್ತ ಹಾಡುತ್ತಾನೆ.&lt;br /&gt;ಇವ ಬುದ್ಧನಲ್ಲ, ಕಿಂದರಜೋಗಿಯೇನೋ ಅನಿಸಿಬಿಡುತ್ತದೆ.&lt;br /&gt;&lt;br /&gt;ಇವ ಯಾರು ಅಂತ ದಯವಿಟ್ಟು ಕೇಳಬೇಡಿ. ಇವ ಯಾರು ಅಂತ ನನಗೂ ಗೊತ್ತಿಲ್ಲ. ನಾನು ಈ ಭುವಿಗೆ ಬಂದಹಾಗೆಯೇ ಇವನೂ ಬಂದಿರಬಹುದು. ವಯಸ್ಸಲ್ಲಿ ನನಗಿಂತ ಸಾಕಷ್ಟು ಚಿಕ್ಕವನಾದರೂ ದೊಡ್ದವನಿರಬೇಕು ಅಂತ ಮನಸು ಸುಮ್ಮ ಸುಮ್ಮನೆ ಹೇಳುತ್ತದೆ. ನಾನು ನಂಬುವುದಿಲ್ಲ.&lt;br /&gt;‘ಖಾಲಿ ಬಿದ್ದ ನನ್ನೆರಡು ಬ್ಲಾಗುಗಳಿವೆ, ಒಂದರಲ್ಲಿ ಏನಾದರೂ ಗೀಚುತ್ತೀಯ?’ ಅಂತ ಕೇಳಿದೆ. ‘ನನಗೇನೂ ತೊಂದರೆ ಇಲ್ಲ, ಓದುವವರಿಗೆ ತೊಂದರೆಯಾಗಬಹುದು ಅಷ್ಟೇ.’ ಎನ್ನುತ್ತ ತಲೆಕೆರೆದುಕೊಳ್ಳುತ್ತಾನೆ. ‘ಇಲ್ಲ ಕಣೋ, ನಾ ಗೀಚಿದ್ದನ್ನೇ ಎಷ್ಟೆಲ್ಲ ಪ್ರೀತಿಯಿಂದ ಓದುತ್ತಾರೆ ಇವರೆಲ್ಲ, ನೀ ಬರೆದದ್ದನ್ನೂ ಸಹ ಹೇಗಿದ್ದರೂ ಒಪ್ಪಿಸಿಕೊಳ್ಳುವಂಥಹ ಹಿರಿಮೆ ಅವರದು’ ಅಂದೆ. ಒಪ್ಪಿಕೊಂಡ.&lt;br /&gt;&lt;br /&gt;ನನ್ನ ಪ್ರೀತಿಯ ನೀವುಗಳೇ...&lt;br /&gt;ನಾನು ಪ್ರೀತಿಯಿಂದ ಪ್ರೀತಿಸಿದ &lt;a href="http://ammaaaaa.blogspot.com/"&gt;ಒಂದುಸಾಲಿಗಾಗಿ ಒಂದು ಬ್ಲಾಗನ್ನೇ &lt;/a&gt;ತೆರೆದಿಟ್ಟುಬಿಟ್ಟಿದ್ದೆ. ಅದನ್ನೀಗ ಅಲೆಮಾರಿಯೊಬ್ಬ ಮುಂದುವರೆಸುತ್ತಾನೆ. ‘ಅಲೆಮಾರಿಯ ಬರಹಗಳ ಮಧ್ಯೆ ಮತ್ತಿವಳ ಬರಹಗಳನ್ನು ಅಲ್ಲಿಯೂ ಓದಬೇಕಾ?’ ಅಂತ ದಯಮಾಡಿ ಯೋಚಿಸಬೇಡಿ. ಭರವಸೆ ಕೊಡುತ್ತೇನೆ, ನಾನು ಇನ್ನುಮುಂದಲ್ಲಿ ಬರೆಯುವುದಿಲ್ಲ. ನಾನಾಯಿತು, ನನ್ನ ಪಾಡಾಯಿತು ಅಂತ ನನ್ನ ‘ನೆನಪು ಕನಸುಗಳ ನಡುವೆ’ ಇದ್ದುಬಿಡುತ್ತೇನೆ. ಅಲೆಮಾರಿ ಅಲೆಯುತ್ತ ಅಲ್ಲಿಗೆ ಬರಬಹುದೆಂಬ ಕಾರಣಕ್ಕೇ ನಾನಲ್ಲಿ ಬರೆದದ್ದನ್ನೆಲ್ಲ ಯಾವತ್ತೋ ಗುಡಿಸಿ ಒರೆಸಿಬಿಟ್ಟಿದ್ದೇನೆ. ಇನ್ನಲ್ಲಿ ಅವನು ಬರೆಯುತ್ತಲಿರುತ್ತಾನೆ, ಅಲೆಯುತ್ತ ಎಲ್ಲಿ ನಡೆದರೂ  ಮರಳಿ ಅಲ್ಲಿಗೆ ಮರಳುತ್ತಾನೇನೋ ಎಂಬ ಭರವಸೆ ಅವನ ಮೇಲಿದೆ.&lt;br /&gt;&lt;br /&gt;‘ಏನಪ್ಪಾ? ಇದೆಂಥ ಕತೆ? ಅಷ್ಟೆಲ್ಲ ಪ್ರೀತಿಸಿದ ಒಂದುಸಾಲಿಗಾಗಿ ತೆರೆದಿಟ್ಟ ಇಡಿಯ ಬ್ಲಾಗನ್ನು ಗೊತ್ತುಗುರಿಯಿಲ್ಲದ ಅಲೆಮಾರಿಗೆ ಕೊಟ್ಟುಬಿಟ್ಟಳಲ್ಲ! ಇವಳ್ಯಾವ  ಸೀಮೆಯವಳು?’ ಅಂತ ಯೋಚಿಸ್ತಿದ್ದೀರ? ಅವನ್ಯಾರು ಅಂತ ನಾನು ಹೇಳದೇ ಇರುವ ಕಾರಣವಿಷ್ಟೇ. ಅವನಿನ್ನೂ ಚಿಕ್ಕವನು. ಅವನ್ಯಾರೆಂಬುದು ಇನ್ನೂ ಗೊತ್ತಾಗಬೇಕಿದೆ. ಅಷ್ಟರೊಳಗೆ ಅವನ್ಯಾರು ಅಂತ ನಾನು ನಿಮಗೆ ಹೇಳುವುದಾದರೂ ಏನನ್ನು?&lt;br /&gt;&lt;br /&gt;ನಿಮ್ಮೆಲ್ಲರ ಹಾರೈಕೆ, ಒಂದಿಷ್ಟು ಪ್ರೀತಿ, ಒಂದು ಹಿಡಿ ಪ್ರೋತ್ಸಾಹವೇ ಸಾಕಾಗಬಹುದು ಅವನಿನ್ನು ಬರೆಯುವುದಕ್ಕೆ. ಅವನ ಹಾರೈಸುವಿರ?&lt;br /&gt;&lt;br /&gt;ಅವನ ಬರಹಗಳನ್ನು ನಾನೂ ಓದಿಲ್ಲ. ಬೇರಿನ ಮೇಲಿಟ್ಟ ಪ್ರೀತಿಯೇ ಮೊಳಕೆಯ ಮೇಲೂ ಇರುವ ಹಾಗೆ. ಪ್ರೀತಿ, ಮಮತೆಯ ಜೊತೆ ಒಂದು ಭರವಸೆ. ಆ ಭರವಸೆ ಹುಸಿಯಾಗದಿರಲಿ. ಬುದ್ಧನಾಗದೆ, ಅಲೆಮಾರಿಯೂ ಅಲ್ಲದೆ ಅವನು ಗೌತಮನಾಗಿಯೇ ಗುರುತಿಸಿಕೊಳ್ಳಲಿ ಎಂಬ ಹಾರೈಕೆಯೊಂದಿಗೆ...&lt;br /&gt;&lt;br /&gt;ವಂದನೆಗಳೊಂದಿಗೆ,&lt;br /&gt;ಪ್ರೀತಿಯಿಂದ,&lt;br /&gt;-ಶಾಂತಲಾ ಭಂಡಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-5645583850399447939?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/5645583850399447939/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=5645583850399447939' title='11 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/5645583850399447939'/><link rel='self' type='application/atom+xml' href='http://www.blogger.com/feeds/5495085842856428066/posts/default/5645583850399447939'/><link rel='alternate' type='text/html' href='http://www.shantalabhandi.com/2009_04_01_archive.html#5645583850399447939' title='ಸಾವಿರದ ಸಾಸಿವೆಯಲಿ ಸಾವಿರದೊಂದು...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>11</thr:total></entry><entry><id>tag:blogger.com,1999:blog-5495085842856428066.post-2152414598983573868</id><published>2009-04-17T15:25:00.000-07:00</published><updated>2009-04-17T18:00:25.121-07:00</updated><category scheme='http://www.blogger.com/atom/ns#' term='ಗಿಣಿ ಗುಬ್ಬಿ ಅಚ್ಚು ಮುದ್ದು ಮತ್ತು ಅಮ್ಮ.'/><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಅಜ್ಜನಮನೆಗೆ ಹೋಗುವ ಬಸ್ಸು...</title><content type='html'>ಅರ್ಧಂಬರ್ಧ ಎಚ್ಚರ. ಅತ್ತೆ ಮಗೂನ ತೋರ್ಸಿ ನಿಮ್ಮಿಬ್ರುನ್ನೂ ಹೋಲ್ತಾನೆ ನನ್ನ ಮೊಮ್ಮಗ ಅಂದ್ರು. ಹಾಗೆ ಹೇಳುತ್ತಲೇ ನನ್ನ ಕೆನ್ನೆ ಸವರಿದ್ರು. ಅಮ್ಮ ಹಣೆ ನೇವರಿಸಿದ್ರು. ಸಣ್ಣಗೆ ನಕ್ಕೆ ಅನ್ಸತ್ತೆ, ನಿದ್ರೆ ಬಂತು. &lt;br /&gt;&lt;br /&gt;ಇವತ್ತು ನಮ್ಮತ್ತೆಯ ಮೊಮ್ಮಗನ್ನ ಕೇಳಿದೆ ‘ಕನ್ನಡ ಓದೋಕೆ ಬರತ್ತ?’ ಅಂದೆ. ‘ಸಾರೀಮ್ಮಾ.. ಬರೋಲ್ಲ’ ಅಂದ. ಹಾಗಾದ್ರೆ ಆವತ್ತು ಅತ್ತೆ ಹೇಳಿದ್ದು ಸುಳ್ಳ? ಅಂವ ನಮ್ಮಿಬ್ರನ್ನೂ ಹೋಲ್ತಾನೆ ಅಂದ್ರೆ ಅವಗೆ ಕನ್ನಡ ಬರಬೇಕಿತ್ತು, ಯಾಕೇಂದ್ರೆ ನಮ್ಮಿಬ್ಬರಿಗೂ ಕನ್ನಡ ಬರುತ್ತಲ್ಲ! ಯೋಚನೆಗೆ ಬಿದ್ದೆ. &lt;br /&gt;&lt;br /&gt;‘ಅಯ್ಯೋ...ಕನ್ನಡ ಓದೋಕೆ ಬರಲ್ಲ ಅಂದ್ರೆ ನಿಂಗೆ ಮುಂದೆ ತುಂಬ ಕಷ್ಟ ಇದೆ’ ಅಂದೆ. ‘ಹೌದಾಮ್ಮ?’ ಅಂದ. ‘ಹ್ಞೂ...ಅಜ್ಜನಮನೆಗೆ ಹೋಪ ಬಸ್ಸಿನ ಬೋರ್ಡು ಕನ್ನಡದಲ್ಲೇ ಇಪ್ಪದು...’ ಅಂದೆ. ಅವನಿಗೆ ತಲೆಬಿಸಿ ಶುರುವಾಯ್ತು. ಇನ್ನೊಂದೆರಡು ಜಾಸ್ತಿನೇ ಹುಳಬಿಡೋಣ ಅನ್ನಿಸಿ ಮತ್ತೆ ಅವನ ಮುಂದೆ ಪಟ್ಟಾಗಿ ಕೂತೆ. ‘ಅಷ್ಟೇ ಅಲ್ಲ..ನೋಡು ಈವಾಗ...ಯಾರಾದ್ರೂ ಬಂದೂ ನಿನ್ನ ಮಾತೃಭಾಷೆ ಯಾವುದು ಅಂತ ಕೇಳಿದ್ರೆ ನೀನೇನು ಹೇಳ್ತೀಯ?’ ಅಂದೆ. ‘ಹಾಗಂದ್ರೇನಮ್ಮಾ..?’ ಬಂತು ಪ್ರಶ್ನೆ. ‘ಹಾಗಂದ್ರೆ....ಮದರ್ ಟಂಗ್’ ಅಂದೆ. ‘ನೀನು ದೊಡ್ಡವನಾದ್ಮೇಲೆ ನಿನಗೇ ಅನ್ನಿಸ್ಬಾರ್ದು ಅಲ್ವ? ಅಪ್ಪ ಅಮ್ಮ, ಅಜ್ಜಿ, ತಾತ ಎಲ್ರೂ ಮಾತಾಡ್ತಿದ್ದ ಭಾಷೆ ನಿಂಗೆ ಓದೋಕೆ ಬರೋಲ್ಲ ಅನ್ನಿಸಿದ್ರೆ ನಿಂಗೆ ಬೇಸರವಾಗೋಲ್ವ? ಅದೂ ಅಲ್ದೇನೆ ಅಮ್ಮ ಬ್ಲಾಗ್ ಬರೀತಾರಲ್ಲ ...ಅದೂ ಕನ್ನಡದಲ್ಲೇ ಇದೆ, ನಿಂಗೆ ಅಮ್ಮ ಬರ್ದಿದ್ದನ್ನ ಓದ್ಬೇಕು ಅನ್ನಿಸೋಲ್ವ? ನಿನ್ನದೇ ಆದ ಸ್ವಂತ ಭಾಷೆಯೇ ಇಲ್ಲ ಅಂತ ಮುಂದೊಂದು ದಿನ ನಿನಗೆ ಅನ್ನಿಸಬಾರದಲ್ವ?’ ಅಂತೆಲ್ಲ ತಲೆಬಿಸಿ ಹುಟ್ಟಿಸಿ ನಿಧಾನಕ್ಕೆ ಅವನ ಮುಂದಿಂದ ಏಳುವ ಯತ್ನ ಮಾಡಿದೆ.&lt;br /&gt;&lt;br /&gt; ‘ನನಗೆ ಹಾಗನ್ನಿಸಿದಾಗ ನೀ ಕಲಿಸಿಕೊಟ್ಟರಾಯ್ತಲ್ವಾ....?’ಲಾಜಿಕ್ಕು ಶುರುವಾಯ್ತು. ಇಂಥ ಲಾಜಿಕ್ಕಿಗೆ ಸೆಂಟಿ ಡಯಲಾಗ್ಸಿನಂಥ ಮೆಡಿಸಿನ್ ಬೇರೊಂದಿಲ್ಲ.&lt;br /&gt;‘ನೋಡು..ಎಷ್ಟು ವರ್ಷದತನಕ ನಿನ್ನಮ್ಮ ಹೀಗೆ ನಿಂಗೆಲ್ಲ ಕಲಿಸಿಕೊಡುತ್ತ ನಿನ್ನ ಜೊತೆಯೇ ಇರೋಕಾಗತ್ತೆ? ನೀ ಬೆಳೆದು ದೊಡ್ಡವನಾದಾಗ ನಿನ್ನಮ್ಮ ನಿನ್ನ ಜೊತೆಯಿಲ್ಲದ ಒಂದುದಿನ ನಿಂಗೆ ಹಾಗನ್ನಿಸಿಬಿಟ್ರೆ!’ ಮತ್ತೆ ಕೇಳಿದೆ.&lt;br /&gt; ‘ಸರೀಮ್ಮ, ಏನಾದ್ರೂ ಕಲಿಸಿಕೊಡು, ಓದ್ತೀನಿ’ ಅಂದ. ಅಲ್ಲಿಗೆ ಏನನ್ನೋ ಸಾಧಿಸಿದ ಖುಷಿಯಲ್ಲಿ ಅವನ ಕೆನ್ನೆತಟ್ಟಿ ತಲೆನೇವರಿಸಿ ‘ಜಾಣ ಮರಿ’ ಅಂದೆ.&lt;br /&gt;&lt;br /&gt;&lt;br /&gt; ಅಂತೂ ಆವತ್ತು ಅಂವ ಕನ್ನಡ ಓದಿದ. ನಿಜ, ಅಂತೂ ಅವ ಆವತ್ತು ಕನ್ನಡ ಓದಿದ.&lt;br /&gt;&lt;br /&gt;&lt;object width="320" height="266" class="BLOG_video_class" id="BLOG_video-c5586b3fe5148798" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v12.nonxt5.googlevideo.com/videoplayback?id%3Dc5586b3fe5148798%26itag%3D5%26app%3Dblogger%26ip%3D0.0.0.0%26ipbits%3D0%26expire%3D1329897801%26sparams%3Did,itag,ip,ipbits,expire%26signature%3D1197E373524215730F4BF1557ED9FD303167E920.79F91F3245AE97C6905F87A0F23DF09EC4E48D2C%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3Dc5586b3fe5148798%26offsetms%3D5000%26itag%3Dw160%26sigh%3DsnE5D92fpBZvSpZ3RWFJyJB2pn4&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="320" height="266" bgcolor="#FFFFFF"flashvars="flvurl=http://v12.nonxt5.googlevideo.com/videoplayback?id%3Dc5586b3fe5148798%26itag%3D5%26app%3Dblogger%26ip%3D0.0.0.0%26ipbits%3D0%26expire%3D1329897801%26sparams%3Did,itag,ip,ipbits,expire%26signature%3D1197E373524215730F4BF1557ED9FD303167E920.79F91F3245AE97C6905F87A0F23DF09EC4E48D2C%26key%3Dck1&amp;iurl=http://video.google.com/ThumbnailServer2?app%3Dblogger%26contentid%3Dc5586b3fe5148798%26offsetms%3D5000%26itag%3Dw160%26sigh%3DsnE5D92fpBZvSpZ3RWFJyJB2pn4&amp;autoplay=0&amp;ps=blogger"allowFullScreen="true" /&gt;&lt;/object&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-2152414598983573868?l=www.shantalabhandi.com' alt='' /&gt;&lt;/div&gt;</content><link rel='enclosure' type='video/mp4' href='http://www.blogger.com/video-play.mp4?contentId=c5586b3fe5148798&amp;type=video%2Fmp4' length='0'/><link rel='replies' type='application/atom+xml' href='http://www.shantalabhandi.com/feeds/2152414598983573868/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=2152414598983573868' title='18 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/2152414598983573868'/><link rel='self' type='application/atom+xml' href='http://www.blogger.com/feeds/5495085842856428066/posts/default/2152414598983573868'/><link rel='alternate' type='text/html' href='http://www.shantalabhandi.com/2009_04_01_archive.html#2152414598983573868' title='ಅಜ್ಜನಮನೆಗೆ ಹೋಗುವ ಬಸ್ಸು...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>18</thr:total></entry><entry><id>tag:blogger.com,1999:blog-5495085842856428066.post-6089027456365414826</id><published>2009-03-10T01:05:00.000-07:00</published><updated>2009-03-14T00:32:04.206-07:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಜಾಲದ ಜಾಲದಲಿ ಮಗದೊಂದು ಮರಿಚುಕ್ಕಿ...</title><content type='html'>ನಿನ್ನೆಯತನಕ ಮನೆಯ ಹಿಂದಿನ ಹಸಿರುರೆಂಬೆಗಳು ಪರಸ್ಪರ ಗಾಳಿಹಾಕಿಕೊಳ್ಳುತ್ತಲೇ ಇದ್ದವು. ಇವತ್ತು ಬೆಳಗಾಗುವುದರೊಳಗೆ ಇಡಿಯಮರವೇ ತುಂಡುತುಂಡು.ಯೋಚಿಸುತ್ತಲೇ ನೆಟ್ಟದೃಷ್ಟಿಯನ್ನೇ ಹಿಂಬಾಲಿಸಿ ಬಾಗಿಲಿಂದಾಚೆಗೆ ಮನೆಹೊರಬಂದು ನಿಂತೆ. ಹೊರಗೋಡೆಯ ಮೇಲಿನ ಬಿಸಿಲಜವನಿಕೆಯನ್ನು ಯಾರೋ ಚೂರೇಚೂರು ಸರಿಸುತ್ತಿರುವಂತೆ  ಬಿಸಿಲತೆರೆ ಇಷ್ಟಿಷ್ಟೇ ಇಂಚಿಂಚಾಗಿ ಇಳಿದುಬರುತ್ತಲಿತ್ತು. ಇನ್ನೊಂಚೂರು ಈ ಎಳೆಬಿಸಿಲಿಳಿದು ಬಂದಿದ್ದರೆ ಬೆಚ್ಚನೆಯ ಬಿಸಿಲಲ್ಲಿ ನೆನೆಯುತ್ತ, ಬೆಳಗಿನ ಈ ಚಳಿಗೊಂದು ಹದ ಬರುತ್ತಿತ್ತು ಅಂದುಕೊಳ್ಳುತ್ತ ಟೀ ಹೀರುತ್ತ ನಿಂತಿದ್ದೇನೆ. ಮೇಲೆ ನೋಡಿದರೆ ಸೂರ್ಯ ಪದತ್ಯಾಗ ಮಾಡಿದ ಅಧಿಕಾರಿಯ ಹಾಗೆ ಗುಮ್ಮಗಿದ್ದಾನೆ.&lt;br /&gt;&lt;br /&gt;&lt;br /&gt;ಪಕ್ಕದಮನೆಯ ಅಮ್ಮನಿಗೆ ಇವತ್ತು ಕೋಪ. ಮೂರುವರ್ಷದ ಮಗಳು ‘ಅಮ್ಮಾ’ ಅಂತ ಮೂರುಬಾರಿ ಕರೆದರೂ ಮಾತನಾಡುತ್ತಿಲ್ಲ. ಆ ಮುದ್ದುಕರೆಗೆ ‘ಓ’ಗೊಟ್ಟುಬಿಡಲಾ ಅಂದುಕೊಳ್ಳುತ್ತೇನೆ. ಅತ್ತ ತಿರುಗಿದರೆ ಆ ಮುಂಜಾವಿಗೆ ಅರಳಿದ ಎಳೆಪಕಳೆಯೊಳಗೂ ಅಂಥದೇ ಜಿನುಗು, ಕರೆದೂ &lt;br /&gt;ಕರೆದೂ ಅತ್ತು ಸುಮ್ಮನಾದ ಮಗುವಿನ ಎಳೆಯಕಣ್ಣುಗಳ ಹಾಗೆ. ಈಗ ಆ ಅಮ್ಮನಿಗೂ ‘ಓ’ಗೊಡದೇ ಇರಲಾಗದೇ ಅಗೋ ‘ಹ್ಞೂ... ಬಂದೇ...’ಅಂದೇಬಿಟ್ಟಿದ್ದಾಳೆ. ಖುಷಿಯಲ್ಲಿ ಎರಡುಗುಟುಕಿನಷ್ಟೂ ಚಹ ಒಮ್ಮೆಲೇ ಹೀರುತ್ತೇನೆ. ಯೋಚನೆಗಳೆಲ್ಲೋ ಹಾರುತ್ತವೆ.ಚಹವನ್ನು ಪೂರ್ತಿ ಹೀರುವಷ್ಟರಲ್ಲಿ ಗೋಡೆಯ ಮೇಲಿನ ಬಿಸಿಲು ಗೋಡೆಯಿಂದ ಹರಿದಿಳಿದು ನೆಲದ ಮೇಲೆ ಆವಾರವಾಗುತ್ತಿದೆ.&lt;br /&gt; &lt;br /&gt;ಮನಸ್ಸು ಹಿಂದೆಹರಿಯಲಾರಂಭಿಸುತ್ತಿದೆ. ಆವತ್ತೂ ಅಷ್ಟೇ....ಹೀಗೆ ಮನಸ್ಸನ್ನು ಸುಮ್ಮನೆ ತಿರುಗಾಡಲುಬಿಟ್ಟು ಕುಳಿತಿದ್ದೆ. ರಾಜೇಂದ್ರ ಫೋನಾಯಿಸಿ ಇಲ್ಲೊಂದು ಬ್ಲಾಗ್ ಇದೆ, ಅದರ ಲಿಂಕ್ ನಿಂಗೆ ಮೇಲ್ ಮಾಡಿರ್ತೀನಿ, ಆ ಬ್ಲಾಗ್ ನ ಬಲಭಾಗದಲ್ಲಿ ಒಂದೆರಡು ಬ್ಲಾಗ್ ಗಳಿವೆ. ಚೆನ್ನಾಗಿವೆ,&lt;br /&gt;ನೀನು ಓದು’ ಅಂತಂದು ಮೇಲ್ ಕಳಿಸಿದ. ಆ ಬ್ಲಾಗಿನ ಬಲಭಾಗದಲ್ಲಿ  ಮೊದಲಿಗೆ ಸಿಕ್ಕಿದ್ದು &lt;a href="http://www.hisushrutha.blogspot.com/"&gt;ಸುಶ್ರುತ&lt;/a&gt;ನ ಬ್ಲಾಗ್. ಓದಿದೆ. ಅದೆಷ್ಟು ಚೆಂದದ ಬ್ಲಾಗ್.&lt;br /&gt;ಊರ ನೆನಪಾಗಿ ಕಣ್ಣೀರು ತುಂಬಿಕೊಂಡು ನನ್ನದೇ ತಮ್ಮನ ಬರಹಗಳಿಗೆ ಪ್ರತಿಕ್ರಿಯಿಸುವ ಹಾಗೆ ಕಣ್ದುಂಬಿಕೊಂಡು ಪ್ರತಿಕ್ರಿಯಿಸಿದೆ.&lt;a href="http://hisushrutha.blogspot.com/2007/08/blog-post_17.html"&gt;ನಾಗರಪಂಚಮಿಯ ಸಲುವಾಗಿ &lt;/a&gt;ಸುಶ್ರುತ ಬರೆದ ಬರಹವನ್ನೋದಿದಾಗ ತಮ್ಮನ ನೆನಪಾಗಿ, ರಾಖಿಹಬ್ಬದಂದು ತಮ್ಮನಿಗೆ ಖುದ್ದಾಗಿ ರಾಖಿ ಕಟ್ಟಲಾಗಲಿಲ್ಲವಲ್ಲ ಅನ್ನುವ ಬೇಸರ ಕಣ್ಣಹನಿಯಾಗಿ ಹರಿದಿಳಿದುಬಂತು. ಕಣ್ಣೊರೆಸಿಕೊಳ್ಳುತ್ತಲೇ ಸುಶ್ರುತನ ಬ್ಲಾಗಿಗೆ ಪ್ರತಿಕ್ರಿಯಿಸಿದೆ. ಹಾಗೆಯೇ ಹರ್ಷ ಭಟ್, &lt;a href="http://shree-lazyguy.blogspot.com/"&gt;ಶ್ರೀನಿಧಿ&lt;/a&gt;, &lt;a href="http://blog.nadahalli.com/"&gt;ಸಂದೀಪ ನಡಹಳ್ಳಿ &lt;/a&gt;ಯವರುಗಳ ಚೆಂದದ ಬ್ಲಾಗುಗಳೂ ಓದಲು ಸಿಕ್ಕಿದ್ದು ಖುಷಿಯಾಗಿತ್ತು. &lt;br /&gt;&lt;br /&gt;ಸುಶ್ರುತನ ಬ್ಲಾಗಿನಲ್ಲಿ ಸಿಕ್ಕ &lt;a href="http://nenapu-nevarike.blogspot.com/"&gt;ಸಿಂಧಕ್ಕನ ಬ್ಲಾಗ್ &lt;/a&gt;ನೋಡಿದಾಗಲಂತೂ ಆದ ಖುಷಿ ಅಷ್ಟಿಷ್ಟಲ್ಲ. ತುಂಬ ದಿನಗಳ ಬಳಿಕ ಚೆಂದದ ಅಕ್ಕಳೊಬ್ಬಳು ದಿಢೀರ್ ಅಂತ ಸಿಕ್ಕಿಬಿಟ್ಟರೆ ಆಗುವಂಥದ್ದೇ ಅನಿರ್ವಚನೀಯ ಭಾವ. ಆ ಅನುಪಮ ಬರಹಗಳು, ಅದರೊಳಗಿನ ಪ್ರತಿಸಾಲುಗಳು ಸೆಳೆವರೀತಿಯ ಝಳಪೆಷ್ಟೆಂದರೆ, ಸಿಂಧು ಅಕ್ಕ ಬರೆದ ಪ್ರತಿಸಾಲುಗಳೂ ‘ನೀನೂ ಬರೆ, ಯತ್ನಿಸು’ ಎಂಬುದಾಗಿ ಓದಿದವರನ್ನು ಹುರಿದುಂಬಿಸುವ ಹಾಗೆ ಅವಳ ಬರಹಬಿಂಬದೊಳಗಿನ ಚುಂಬಕ ಶಕ್ತಿ. ಕೂಗಳತೆಯ ದೂರದಲ್ಲಿ ಎಲ್ಲವೂ ಸಿಕ್ಕಹಾಗೆ ಅವಳ  ಬರಹಗಳನೋದುತ್ತಿದ್ದರೆ. ಅದು ಬರಿಯ ಬ್ಲಾಗ್ ಬರಹವಲ್ಲ, ಪುಸ್ತಕ ರೂಪಕೊಟ್ಟರೆ ಅನುಪಮ ಸಾಹಿತ್ಯ. &lt;br /&gt;&lt;br /&gt;‘ಸಿಂಧು ಬ್ಲಾಗ್ ನೋಡಿದರೆ ನಂಗೂ ಬರೀಬೇಕು ಅನ್ಸತ್ತೆ’ ಅಂತ ನನ್ನಷ್ಟಕ್ಕೆ ಆಡಿಕೊಳ್ಳುತ್ತ ಕಂಪ್ಯೂಟರ್ ಮುಂದಿಂದ ಎದ್ದಾಗ, ನಾನಾಡಿದ ಮಾತು ಪಕ್ಕದಲ್ಲಿದ್ದ ರಾಜೇಂದ್ರ ಅವರ ಕಿವಿಗೂ ಕೇಳಿಸಿತಿರಬೇಕು. ತಕ್ಷಣವೇ ಅದೇ ದಿನ ಅಂದರೆ, ಅಕ್ಟೋಬರ್ ಎರಡು, ಎರಡುಸಾವಿರದ ಏಳರ ಸಂಜೆ ಬ್ಲಾಗ್ ತೆರೆಯಲಾಯಿತು. ಪಲ್ಯಕ್ಕೆ ಒಗ್ಗರಣೆ ಹಾಕುತ್ತಿದ್ದವಳಿಗೆ ಕೇಳಿದ, ‘ಏನಾದರೂ... ಟೈಟಲ್ ಹೇಳು’ ಅಂತ. ಒಗ್ಗರಣೆ ಹಾಕುತ್ತ ಹೆಚ್ಚಿಗೇನೂ ಯೋಚಿಸದೇ ‘ನೆನಪು ಕನಸುಗಳ ನಡುವೆ’ ಅಂದೆ. ‘ಹ್ಮ್.....’ ಅಂದವನು ಟೈಪಿಸಿದ. ಮರುದಿನ ಹಳೆಕಡತ ಬಿಚ್ಚಿಟ್ಟುಕೊಂಡು ಸಾಲಾಗಿ ಹಳೆಕಡತವನ್ನೆಲ್ಲ ಬ್ಲಾಗಿನಲ್ಲಿ ಸುರುವುತ್ತ ಬಂದೆ. ಆ ದಿನವೇ ಹರ್ಷಭಟ್ಟರಿಗೆ ರಾಜೇಂದ್ರ ಭಂಡಿಯವರಿಂದ ಒಂದು ಇ-ಮೇಲ್ ರವಾನೆಯಾಯಿತು &lt;a href="shantalabhandi.blogspot.com "&gt;ಬ್ಲಾಗಿನ ಲಿಂಕ್ ಸಹಿತ&lt;/a&gt;. ನನ್ನ ಬ್ಲಾಗಿನ ಪ್ರಥಮ ಓದುಗರೆಂದರೆ (ರಾಜೆಂದ್ರ ಮತ್ತು ನಾನು, ಇಬ್ಬರ ಹೊರತಾಗಿ) &lt;a href="http://harshacharitre.blogspot.com/"&gt;ಹರ್ಷ ಭಟ್ಟರು&lt;/a&gt;. ಪ್ರಪ್ರಥಮ ಪ್ರತಿಕ್ರಿಯೆ ಕೂಡ ಹರ್ಷಭಟ್ಟರದೇ.&lt;br /&gt;&lt;br /&gt;ಹಾಗೆಯೇ ರಾಜೇಂದ್ರ ಭಂಡಿ, ರವಿ ಭಂಡಿ, ಆಶುಮರಿ, &lt;a href="http://poornimabhat.blogspot.com/"&gt;ಪೂರ್ಣಿಮಾ ಭಟ್ಟ ಸಣ್ಣಕೇರಿ&lt;/a&gt;, &lt;a href="http://manassu-preethi.blogspot.com/"&gt;ಪ್ರೋಟೋನ್&lt;/a&gt;,&lt;a href="http://tejaswi-m.blogspot.com/"&gt;ತೇಜಸ್ವಿ&lt;/a&gt;, ಸುಶ್ರುತ, ಪ್ರಕಾಶ ಹೇಮಾದ್ರಿ, &lt;a href="http://www.flickr.com/photos/mrbhat"&gt;ಮಂಜುನಾಥ್ ಭಟ್ &lt;/a&gt;ಮುಂತಾದವರೆಲ್ಲರ  ಪ್ರೋತ್ಸಾಹದಿಂದ ಅಷ್ಟಿಷ್ಟು ಗೀಚುತ್ತ, ಚೆಂದ ಚೆಂದದ ಬ್ಲಾಗ್ ಬರಹಗಳನ್ನೆಲ್ಲ ಓದುತ್ತಿರುವಾಗಲೇ &lt;a href="http://suptadeepti.blogspot.com/"&gt;ಜ್ಯೋತಿ ಅಕ್ಕ&lt;/a&gt;, &lt;a href="http://kaalaharana.blogspot.com/"&gt;ಜಗಲಿಭಾಗವತರು&lt;/a&gt;, &lt;a href="http://decemberstud.wordpress.com/"&gt;A Paradise of Dreamers&lt;/a&gt;, &lt;a href="http://www.tulasivana.com/"&gt;ತ್ರಿವೇಣಿ ಅಕ್ಕ&lt;/a&gt;, &lt;a href="http://hathwar.blogspot.com/"&gt;ವಿಕ್ರಮ ಹತ್ವಾರ್&lt;/a&gt;,&lt;a href="http://www.seemahegde78.blogspot.com/"&gt;ಸೀಮಕ್ಕ&lt;/a&gt;, &lt;a href="http://heegesummne.blogspot.com/"&gt;Sree&lt;/a&gt; ಮತ್ತು &lt;a href="http://noorukanasu.blogspot.com/index.html"&gt;ಶ್ರೀ &lt;/a&gt;ಮತ್ತು ಶ್ರೀನಿಧಿ, ಸಂದೀಪ ನಡಹಳ್ಳಿ, &lt;a href="http://shyamus.blogspot.com/"&gt;ಶ್ಯಾಮಾ&lt;/a&gt;, &lt;a href="http://manaswini-mana.blogspot.com/"&gt;ಮನಸ್ವಿನಿ&lt;/a&gt;,&lt;a href="http://nandagokula.blogspot.com/"&gt;ಮಾಲಾ&lt;/a&gt;, &lt;a href="http://vikasavada.blogspot.com/"&gt;ವಿಕಾಸ&lt;/a&gt;, &lt;a href="http://baala-doni.blogspot.com/"&gt;ಹರೀಶ&lt;/a&gt;,&lt;a href="http://nannakhajaane.blogspot.com/"&gt;ಅನ್ನಪೂರ್ಣ ದೈತೋಟ&lt;/a&gt;, &lt;a href="http://sallaap.blogspot.com/"&gt;ಸುನಾಥ ಅಂಕಲ್&lt;/a&gt;, &lt;a href="http://chetanachaitanya.wordpress.com/"&gt;ಚೇತನಾ&lt;/a&gt;, &lt;a href="http://tinazone.wordpress.com/"&gt;ಟೀನಾ&lt;/a&gt;, &lt;a href="http://mruganayanee.blogspot.com/"&gt;ಮೃಗನಯಿನಿ&lt;/a&gt;, &lt;a href="http://parisarapremi.blogspot.com/"&gt;ಪರಿಸರ ಪ್ರೇಮಿ&lt;/a&gt;, &lt;a href="http://gubbacchi.blogspot.com/"&gt;ಅಮರ&lt;/a&gt;, &lt;a href="http://chendemaddale.wordpress.com/"&gt;ಚೆಂಡೆಮದ್ದಳೆ&lt;/a&gt;, &lt;a href="http://rajesh-naik.blogspot.com/"&gt;ಅಲೆಮಾರಿಯ ಅನುಭವ&lt;/a&gt;, &lt;a href="http://venuvinod.blogspot.com/index.html"&gt;ಮಂಜುಮುಸುಕಿದ ದಾರಿ&lt;/a&gt;, &lt;a href="http://jomon-malehani.blogspot.com/"&gt;ಮಳೆಹನಿ&lt;/a&gt;,&lt;a href="http://chittey.blogspot.com/"&gt;ಶಿವ್&lt;/a&gt;, &lt;a href="http://www.jogeemane.blogspot.com/"&gt;ಜೋಗಿಮನೆ&lt;/a&gt;, &lt;a href="http://madhu-vana.blogspot.com/"&gt;ಮಧು&lt;/a&gt;, &lt;a href="http://manasa-hegde.blogspot.com/"&gt;ತೇಜಸ್ವಿನಿ&lt;/a&gt;, &lt;a href="http://chitrahegde.blogspot.com/"&gt;ಚಿತ್ರಾ&lt;/a&gt;...ಹೀಗೆ ಬ್ಲಾಗಿಂದ ಬ್ಲಾಗುಗಳ ಬೆನ್ನುಹತ್ತಿ ಓದಿದ ದಿನಗಳು ಚೆಂದವೇ ಇದ್ದವು. ಚೆಂದ ಚೆಂದ ಬರಹ ಕೊಟ್ಟು ಓದಲನುವುಮಾಡಿಕೊಡುತ್ತ, ಬರೆದವರನ್ನು ಪ್ರೋತ್ಸಾಹಿಸುತ್ತಲಿದ್ದ ಎಲ್ಲ ಉತ್ಸಾಹಿಬರಹಗಾರ/ಗಾರ್ತಿಯರ ಭರ್ಜರಿಯ ದಿನಗಳವು. ಮತ್ತೆ ಹೊಸ ಹೊಸ ಚೆಂದದ ಬ್ಲಾಗುಗಳ ಸುರಿಮಳೆಯಾಗಿ ನಾವೆಲ್ಲ ಅಂಥ ಚೆಂದದೊಂದು ಕನ್ನಡದ ಬ್ಲಾಗುಗಳ ಮಳೆಯಲ್ಲಿ ತೋಯುತ್ತ ನಲಿಯುತ್ತ, ಆನಂದಿಸುತ್ತಲಿರುವುದೊಂದು ಕನ್ನಡದ ಹೆಮ್ಮೆಯೇ ಸರಿ. ಇಂದೀಗ ಮತ್ತೊಮ್ಮೆ ಎಲ್ಲರಿಗೂ ವಂದನೆಗಳು. &lt;br /&gt;&lt;br /&gt;&lt;br /&gt;ಇದೀಗ ನನ್ನ ಬ್ಲಾಗ್ ಮರಿಯ ವಿಳಾಸ ಬದಲಾಗುತ್ತಲಿದೆ. shantalabhandi.blogspot.com ಇದ್ದಿದ್ದೀಗ shantalabhandi.com ಎಂದಾಗಿದೆ. ಸಧ್ಯಕ್ಕೆ shantalabhandi.blogspot.com ವಿಳಾಸವನ್ನು ಅಷ್ಟು ಸುಲುಭವಾಗಿ ನನ್ನಿಂದ ಬಿಡಲಾಗುತ್ತಿಲ್ಲವಾದ ಕಾರಣ ನಾನೂ ಸಹ ಇದೇ ವಿಳಾಸವನ್ನು ಬಳಸುತ್ತಿದ್ದೇನೆ. ‘ಜೊತೆಯಾಗಿ... ಹಿತವಾಗಿ...’ ನನ್ನನ್ನು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿರುವವರನೆಲ್ಲ ತೊರೆದು ಬ್ಲಾಗ್ ಮರಿಯನ್ನೆತ್ತಿಕೊಂಡು ಒಂದೇಸಲಕ್ಕೆ ಮನೆಬದಲಾಯಿಸುವ ಕೆಲಸಕ್ಕೆ ಮನವೊಪ್ಪುತ್ತಿಲ್ಲ. ಆದರೆ ತಿಂಗಳೊಪ್ಪತ್ತಿನಲ್ಲಿ ಕೇವಲ shantalabhandi.com ಮಾತ್ರ ಉಳಿಯಬಹುದು.  ವಿಳಾಸ ಬದಲಾದ ಮಾತ್ರಕ್ಕೆ ವಿಶೇಷತೆ, ವಿಭಿನ್ನತೆಯ ನಿರೀಕ್ಷೆಯನ್ನು ಖಂಡಿತವಾಗಿ ಇಟ್ಟುಕೊಳ್ಳಬೇಡಿ ಎಂಬುದು  ಪ್ರೀತಿಯ ಎಲ್ಲರಲ್ಲಿ ನನ್ನ ಪುಟ್ಟಮನವಿ.  shantalabhandi.blogspot.com ನಲ್ಲಿದ್ದಂತೆ ನಾನು ಮತ್ತೆ ನನ್ನ ಸಪ್ಪೆಬರಹಗಳೊಂದಿಗೆ ಖಂಡಿತ ನಿಮ್ಮೆಲ್ಲರನ್ನು ಕಾದಿರುತ್ತೇನೆ. ಅಲ್ಲಿಗೂ ಬನ್ನಿ. ಎಲ್ಲರನ್ನೂ ಮತ್ತೊಮ್ಮೆ ನೆನೆಯುತ್ತ... ಅನಂತ ಧನ್ಯವಾದಗಳನರ್ಪಿಸುತ್ತ...&lt;br /&gt;&lt;br /&gt;&lt;br /&gt;&lt;br /&gt;ವಂದನೆಗಳೊಂದಿಗೆ,&lt;br /&gt;ಪ್ರೀತಿಯಿಂದ,&lt;br /&gt;-ಶಾಂತಲಾ ಭಂಡಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-6089027456365414826?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/6089027456365414826/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=6089027456365414826' title='24 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/6089027456365414826'/><link rel='self' type='application/atom+xml' href='http://www.blogger.com/feeds/5495085842856428066/posts/default/6089027456365414826'/><link rel='alternate' type='text/html' href='http://www.shantalabhandi.com/2009_03_01_archive.html#6089027456365414826' title='ಜಾಲದ ಜಾಲದಲಿ ಮಗದೊಂದು ಮರಿಚುಕ್ಕಿ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>24</thr:total></entry><entry><id>tag:blogger.com,1999:blog-5495085842856428066.post-4553711094677639249</id><published>2009-02-10T14:56:00.000-08:00</published><updated>2009-02-12T17:50:08.987-08:00</updated><category scheme='http://www.blogger.com/atom/ns#' term='ಮರುಳುಮಲ್ಲಿಗೆ'/><title type='text'>ಶ್ರಾವಣ ಸಂಜೆಯಲಿ ನೀನಿರದ ಹೊತ್ತು...</title><content type='html'>&lt;p&gt;&lt;/p&gt;&lt;br /&gt;&lt;br /&gt;&lt;p&gt;&lt;/p&gt;&lt;br /&gt;&lt;br /&gt;&lt;p&gt;&lt;br /&gt;&lt;br /&gt;&lt;object width="697" height="602" class="BLOG_video_class" id="BLOG_video-e60ad5928b6f68ec" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v20.nonxt5.googlevideo.com/videoplayback?id%3De60ad5928b6f68ec%26itag%3D5%26app%3Dblogger%26ip%3D0.0.0.0%26ipbits%3D0%26expire%3D1329897801%26sparams%3Did,itag,ip,ipbits,expire%26signature%3D72BE0FAB1849CBE13F3D2ECD6BCB36DB3315585C.71AFA164A570BEDAE017E08C5F97E2EC00791DB0%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3De60ad5928b6f68ec%26offsetms%3D5000%26itag%3Dw160%26sigh%3DFQkUxS8QHrcB8MTvs6dl1xx4ctM&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="697" height="602" bgcolor="#FFFFFF"flashvars="flvurl=http://v20.nonxt5.googlevideo.com/videoplayback?id%3De60ad5928b6f68ec%26itag%3D5%26app%3Dblogger%26ip%3D0.0.0.0%26ipbits%3D0%26expire%3D1329897801%26sparams%3Did,itag,ip,ipbits,expire%26signature%3D72BE0FAB1849CBE13F3D2ECD6BCB36DB3315585C.71AFA164A570BEDAE017E08C5F97E2EC00791DB0%26key%3Dck1&amp;iurl=http://video.google.com/ThumbnailServer2?app%3Dblogger%26contentid%3De60ad5928b6f68ec%26offsetms%3D5000%26itag%3Dw160%26sigh%3DFQkUxS8QHrcB8MTvs6dl1xx4ctM&amp;autoplay=0&amp;ps=blogger"allowFullScreen="true" /&gt;&lt;/object&gt;&lt;br /&gt;&lt;br /&gt;&lt;br /&gt;&lt;/p&gt;&lt;p align="justify"&gt;ಶ್ರಾವಣದ ಸಂಜೆ ಮಳೆಗಾಲದೊಂದು ದಿನ&lt;/p&gt;&lt;p align="justify"&gt;ಗೆಳೆಯ ನೀನಂದು ಮನೆಯೊಳಗಿರದ ಹೊತ್ತು&lt;/p&gt;&lt;p align="justify"&gt;ಚೆಲುವ ಚೆನ್ನಿಗನು ಮಳೆರಾಯ ಬಂದಾಗ&lt;/p&gt;&lt;p align="justify"&gt;ಸೂರಂಚು ಸೊಗಸಾಗಿ ಸೋರುತ್ತಲಿತ್ತು&lt;/p&gt;&lt;br /&gt;&lt;br /&gt;&lt;p align="justify"&gt;ನೆನಪಿಗಾಸರೆಯಾಗಿ ಸೂರಂಚ ಕಂಬ&lt;/p&gt;&lt;p align="justify"&gt;ಸೂರಂಚ ನೀರಲಿ ನಿನ್ನ ಬರುವಿನ ಬಿಂಬ&lt;/p&gt;&lt;p align="justify"&gt;ಆಗಸದಿ ಕವಿದಿರಲು ಹನಿಹೊತ್ತ ಮೋಡ&lt;/p&gt;&lt;p align="justify"&gt;ಮನದೊಳಗೆ ಕವಿದಿಹ ನೀ ಕವಿಯೇ ಗೆಳೆಯ&lt;/p&gt;&lt;p align="justify"&gt;&lt;br /&gt;ನುಲಿವ ಬೆರಳಂಚಲ್ಲಿ ಕಣ್ಣಂಚು ಕುಳಿತು&lt;/p&gt;&lt;p align="justify"&gt;ಹನಿಹನಿಗಳೊಳಗೆಲ್ಲ ಮಿಂದೆದ್ದ ಕನಸು&lt;/p&gt;&lt;p align="justify"&gt;ಸೂರಂಚ ಹನಿಯಲ್ಲಿ ಸೆರಗಂಚು ನೆನೆದು&lt;/p&gt;&lt;p align="justify"&gt;ಹಸಿಹೆಜ್ಜೆಗಳಲೆಲ್ಲ ನಿನ್ನದೇ ಹೆಸರು&lt;br /&gt;&lt;/p&gt;&lt;p align="justify"&gt;&lt;br /&gt;ನೆನಪು ನವಿರಾಗಿ ಹನಿಯಾಗಿ ಇಳಿದಿರಲು&lt;/p&gt;&lt;p align="justify"&gt;ಬಲಗೆನ್ನೆ ರಂಗಾದ್ದು ಕನ್ನಡಿಗೆ ಗೊತ್ತು&lt;/p&gt;&lt;p align="justify"&gt;ಹಾದಿತಿರುವಿನಲಿ ಕೈಹಿಡಿದು ಎಳೆದದ್ದು&lt;/p&gt;&lt;p align="justify"&gt;ಕೊರಳತಿರುವಿನಲ್ಲಿಹ ಕರಿಮಣಿಯ ಸೊತ್ತು&lt;/p&gt;&lt;p align="justify"&gt; &lt;/p&gt;&lt;p align="justify"&gt;&lt;br /&gt;ಅಂಗಳದ ನೀರಿನಲಿ ನೀನಿರದ ದೋಣಿ&lt;/p&gt;&lt;p align="justify"&gt;ತೇಲುತಿದೆ ನೆನಪು ಹುಟ್ಟಿರದ ನಾವೆಯಲಿ&lt;/p&gt;&lt;p align="justify"&gt;ಜಡೆಯೆಳೆದು ನಕ್ಕು ಕಿರುಬೆರಳ ಕಚ್ಚಿದ್ದು&lt;/p&gt;&lt;p align="justify"&gt;ನೆನಪಲ್ಲ ಗೆಳೆಯ ಅದು ಹಳೆಯ ಕನಸು&lt;/p&gt;&lt;p align="justify"&gt; &lt;/p&gt;&lt;p align="justify"&gt;&lt;br /&gt;ಉದುರುವ ಹನಿಗಳಲೇ ಹೊತ್ತುಗಳ ಅಳೆದು&lt;/p&gt;&lt;p align="justify"&gt;ಬೊಗಸೆಯ ತುಂಬೆಲ್ಲ ತಾಸುಗಳೇ ಸುರಿದು&lt;/p&gt;&lt;p align="justify"&gt;ನೀ ಬರುವ ಹಾದಿಗೆ ಕಂಗಳ ಕಳಿಸಿದ್ದೆ&lt;/p&gt;&lt;p align="justify"&gt;ಹಾದಿಯ ಬದಿಯಲ್ಲಿ ನಿನ್ನೆದುರಾದವೇನು?&lt;/p&gt;&lt;p align="justify"&gt;&lt;br /&gt;&lt;br /&gt;ನೀ ಬಂದ ಹೊತ್ತಲ್ಲಿ ಹೊರದೆಯೇ ಹೆರಿಗೆ&lt;/p&gt;&lt;p align="justify"&gt;ನಿನ್ನಿಂದ ಹುಟ್ಟಿಹವು ಈ ಎಲ್ಲ ಸಾಲು&lt;/p&gt;&lt;p align="justify"&gt;ನೀನೇ ಸಾಲುಗಳ ‘ತಂದೆ’, ತಾಯಿ ನಾನು&lt;/p&gt;&lt;p align="justify"&gt;ಮತ್ತೆ ಹನಿಗಳಲ್ಲಿ ತೇಲಿ ನೆನಪನೌಕೆ&lt;br /&gt;&lt;/p&gt;&lt;p align="justify"&gt;&lt;br /&gt;ಶ್ರಾವಣದ ಸಂಜೆ ಮಳೆಗಾಲದೊಂದು ದಿನ&lt;/p&gt;&lt;p align="justify"&gt;ಗೆಳೆಯ ನೀನಂದು ಮನೆಯೊಳಗಿರದ ಹೊತ್ತು&lt;/p&gt;&lt;p align="justify"&gt;ಚೆಲುವ ಚೆನ್ನಿಗನು ಮಳೆರಾಯ ಬಂದಾಗ&lt;/p&gt;&lt;p align="justify"&gt;ಸೂರಂಚು ಸೊಗಸಾಗಿ ಸೋರುತ್ತಲಿತ್ತು&lt;/p&gt;&lt;br /&gt;&lt;br /&gt;&lt;p align="justify"&gt;**************************************************************************************************&lt;/p&gt;&lt;br /&gt;&lt;br /&gt;&lt;a href="http://1.bp.blogspot.com/_gIx6mG3I3fg/SZS9C2c_fbI/AAAAAAAAAag/jMjnEJNjg5M/s1600-h/Anudeep10.jpg"&gt;&lt;img id="BLOGGER_PHOTO_ID_5302070517996420530" style="WIDTH: 400px; CURSOR: hand; HEIGHT: 300px" alt="" src="http://1.bp.blogspot.com/_gIx6mG3I3fg/SZS9C2c_fbI/AAAAAAAAAag/jMjnEJNjg5M/s400/Anudeep10.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_gIx6mG3I3fg/SZS9Cls0iUI/AAAAAAAAAaY/PSchhsEHmrk/s1600-h/Anudeep2.JPG"&gt;&lt;img id="BLOGGER_PHOTO_ID_5302070513499408706" style="WIDTH: 400px; CURSOR: hand; HEIGHT: 300px" alt="" src="http://1.bp.blogspot.com/_gIx6mG3I3fg/SZS9Cls0iUI/AAAAAAAAAaY/PSchhsEHmrk/s400/Anudeep2.JPG" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;p align="justify"&gt;&lt;br /&gt;&lt;a href="http://1.bp.blogspot.com/_gIx6mG3I3fg/SZS9CmKcVTI/AAAAAAAAAaQ/TptKsRC3xVM/s1600-h/Anudeep3.JPG"&gt;&lt;img id="BLOGGER_PHOTO_ID_5302070513623651634" style="WIDTH: 400px; CURSOR: hand; HEIGHT: 300px" alt="" src="http://1.bp.blogspot.com/_gIx6mG3I3fg/SZS9CmKcVTI/AAAAAAAAAaQ/TptKsRC3xVM/s400/Anudeep3.JPG" border="0" /&gt;&lt;/a&gt;&lt;/p&gt;&lt;br /&gt;&lt;br /&gt;&lt;p align="justify"&gt;&lt;/p&gt;&lt;br /&gt;&lt;br /&gt;&lt;a href="http://2.bp.blogspot.com/_gIx6mG3I3fg/SZS9CsTNtaI/AAAAAAAAAaI/27MYooXbYyo/s1600-h/Anudeep4.JPG"&gt;&lt;img id="BLOGGER_PHOTO_ID_5302070515271054754" style="WIDTH: 400px; CURSOR: hand; HEIGHT: 300px" alt="" src="http://2.bp.blogspot.com/_gIx6mG3I3fg/SZS9CsTNtaI/AAAAAAAAAaI/27MYooXbYyo/s400/Anudeep4.JPG" border="0" /&gt;&lt;/a&gt;&lt;br /&gt;&lt;br /&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;/p&gt;&lt;p align="justify"&gt;*&lt;br /&gt;&lt;br /&gt;&lt;a href="http://4.bp.blogspot.com/_gIx6mG3I3fg/SZS9Cuhnx8I/AAAAAAAAAaA/8jewfyiJwFQ/s1600-h/Anudeep5.JPG"&gt;&lt;img id="BLOGGER_PHOTO_ID_5302070515868354498" style="WIDTH: 400px; CURSOR: hand; HEIGHT: 300px" alt="" src="http://4.bp.blogspot.com/_gIx6mG3I3fg/SZS9Cuhnx8I/AAAAAAAAAaA/8jewfyiJwFQ/s400/Anudeep5.JPG" border="0" /&gt;&lt;/a&gt;&lt;br /&gt;&lt;/p&gt;&lt;br /&gt;&lt;br /&gt;&lt;p align="justify"&gt;ಅನುದೀಪ ಒಂದು ಉಂಗುರ(ಚಿನ್ನದ್ದಲ್ಲ, ಪ್ರೀತಿದು) ತೊಡಿಸಿ ‘ಆಯ್ ಲವ್ ಯು ಅಮ್ಮಾ’ ಅಂದಾಗ ಈ ದಿನದ ಅರ್ಥವನ್ನ ಹುಡುಕ್ತಾ ಹೋದ್ರೆ ಅರ್ಥ ತುಂಬ ವಿಶಾಲವಾಗಿದೆ ಅನ್ನಿಸಿಬಿಡ್ತು. ನಾನು ಯಾವತ್ತೂ ಮಗನಿಗಿಂತಲೂ ಚಿಕ್ಕವಳೇ ಅಂತ ಯಾವತ್ತೋ ಗೊತ್ತಾದ ವಿಷಯಕ್ಕೆ ಇವತ್ತೂ ಮುಗುಳ್ನಕ್ಕು ಸುಮ್ಮನಾಗುತ್ತೇನೆ. &lt;/p&gt;&lt;br /&gt;&lt;br /&gt;&lt;p align="justify"&gt;ಹೊಸದಿನದಲ್ಲೊಂದು ಹೊಸ ಅರ್ಥ ಕಂಡು ಬದುಕ ಹಸನಾಗಿಸಿಕೊಳ್ಳುವುದು ಅವರವರ ಅರ್ಥಕ್ಕೆ ಬಿಟ್ಟಿದ್ದು. ಅರ್ಥವೆಂದರೆ ಇಷ್ಟೆಯೇ.       ಮತ್ತು.................&lt;/p&gt;&lt;br /&gt;&lt;p align="justify"&gt;&lt;/p&gt;&lt;br /&gt;&lt;p align="justify"&gt;&lt;a href="http://1.bp.blogspot.com/_gIx6mG3I3fg/SZTPnVtRSXI/AAAAAAAAAaw/l2upE5LFOpM/s1600-h/14209.jpg"&gt;&lt;img id="BLOGGER_PHOTO_ID_5302090936070785394" style="WIDTH: 300px; CURSOR: hand; HEIGHT: 400px" alt="" src="http://1.bp.blogspot.com/_gIx6mG3I3fg/SZTPnVtRSXI/AAAAAAAAAaw/l2upE5LFOpM/s400/14209.jpg" border="0" /&gt;&lt;/a&gt;       ಅರ್ಥವೆಂದರೆ ಇದೇ ಅರ್ಥವಲ್ಲ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-4553711094677639249?l=www.shantalabhandi.com' alt='' /&gt;&lt;/div&gt;</content><link rel='enclosure' type='video/mp4' href='http://www.blogger.com/video-play.mp4?contentId=e60ad5928b6f68ec&amp;type=video%2Fmp4' length='0'/><link rel='replies' type='application/atom+xml' href='http://www.shantalabhandi.com/feeds/4553711094677639249/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=4553711094677639249' title='21 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/4553711094677639249'/><link rel='self' type='application/atom+xml' href='http://www.blogger.com/feeds/5495085842856428066/posts/default/4553711094677639249'/><link rel='alternate' type='text/html' href='http://www.shantalabhandi.com/2009_02_01_archive.html#4553711094677639249' title='ಶ್ರಾವಣ ಸಂಜೆಯಲಿ ನೀನಿರದ ಹೊತ್ತು...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_gIx6mG3I3fg/SZS9C2c_fbI/AAAAAAAAAag/jMjnEJNjg5M/s72-c/Anudeep10.jpg' height='72' width='72'/><thr:total>21</thr:total></entry><entry><id>tag:blogger.com,1999:blog-5495085842856428066.post-6276982671952219603</id><published>2009-01-10T14:36:00.000-08:00</published><updated>2009-01-13T11:42:09.504-08:00</updated><category scheme='http://www.blogger.com/atom/ns#' term='ಗಿಣಿ ಗುಬ್ಬಿ ಅಚ್ಚು ಮುದ್ದು ಮತ್ತು ಅಮ್ಮ.'/><title type='text'>ಜಯ ಜಯರಾಮಾ...ಜಯ ಘನಶ್ಯಾಮಾ...</title><content type='html'>ಹಳೆಯ ಬಾವಿಯಲ್ಲಿ ಹೊಸನೀರು ಬಂದರೆ ನೀರು ಮಾತ್ರ ಹೊಸದು, ಬಾವಿ ಹಳೆಯದೇ. ಹೊಸವರ್ಷ ಬಂದಿದೆ, ನಾನು ಹಳತಾಗಿಯೇ ಇದ್ದೇನೆ. ಹೊಸ ಹೊಸ ಕನಸುಗಳ ಹಂಚುವ ಮೊದಲಿಷ್ಟು ಹಳೆಯ ನೆನಪನ್ನೇ ಬಿಚ್ಚಿಡುವ ಯತ್ನದಲ್ಲಿಯೇ ಇದ್ದೇನೆ.&lt;br /&gt;&lt;br /&gt;ಆಗ ನನಗೆ ಮೂರುವರೆ ನಾಲ್ಕು ವರ್ಷವಿದ್ದಿರಬಹುದು. ದೂರದೂರಿನಿಂದ ನಮ್ಮೂರ ಕನ್ನಡಶಾಲೆಗೆ ಬರುತ್ತಿದ್ದ ಜಯರಾಮ ಎಂಬ ಹುಡುಗನೊಬ್ಬ ದೊಡ್ಡಜ್ಜನ ಮನೆಗೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ. ಅವನು ಆಗ ಐದನೇ ಕ್ಲಾಸು ಅನ್ನುವುದು ನನಗೆ ಚೆನ್ನಾಗಿ ನೆನಪಿರುವುದಕ್ಕೆ ಕಾರಣ ಅವನು ಯಾರೆಂಬುದಾಗಿ ನಾನೊಮ್ಮೆ ಅಮ್ಮನಲ್ಲಿ ವಿಚಾರಿಸಿದಾಗ ಅಮ್ಮ ನನಗೆ ಹೇಳಿದ್ದಿಷ್ಟು. ‘ಅವನು ಜಯರಾಮ, ಅವನ ಊರಿನ ಶಾಲೆಯಲ್ಲಿ ಬರಿಯ ನಾಲ್ಕನೆಯ ತರಗತಿಯತನಕ ಮಾತ್ರ ಇರುವುದರಿಂದ ದಿನಾಲೂ ಅಷ್ಟು ದೂರದಿಂದ ನಮ್ಮೂರ ಶಾಲೆಗೆ ಬರುತ್ತಾನೆ, ಮಧ್ಯಾಹ್ನ ಇಲ್ಲಿಗೆ ಊಟಕ್ಕೆ ಬರುತ್ತಾನೆ.’ ಎಂಬುದಾಗಿ ಅಮ್ಮ ಹೇಳಿದ್ದರು.&lt;br /&gt;&lt;br /&gt;ಶಾಲೆಗೆ ಹೋಗುವ ಮಕ್ಕಳ ಬಗ್ಗೆ ನನಗೆ ಆಗ ಎಲ್ಲಿಲ್ಲದ ಕುತೂಹಲ. ‘ಅವನು ಶಾಲೆಯಲ್ಲಿ ಎಷ್ಟನೇ ನಂಬರ್(ರ್ಯಾಂಕ್) ಬರುತ್ತಾನೆ?’ ಅಂತ ನಾನು ಕೇಳಿದ್ದಕ್ಕೆ ಅಮ್ಮ ಹೇಳಿದ್ದರು ‘ಅವನು ನಾಲ್ಕನೆಯ ಕ್ಲಾಸಲ್ಲಿ ಫೇಲ್ ಆಗಿದ್ದನಂತೆ, ಆದರೂ ಅವರ ಕ್ಲಾಸಿನಲ್ಲಿ ಮೂರೇ ಜನರಿದ್ದ ಕಾರಣ ಅವನಿಗೇ ಮಾಸ್ತರು ಮೂರನೇ ನಂಬರ್ ಕೊಟ್ಟಿದ್ದಾರಂತೆ’ ಅಂತ ಜಯರಾಮನೇ ಅಮ್ಮನಿಗೆ ಹೇಳಿದ ವಿಚಾರವನ್ನು ಹೇಳುವಾಗ ಅಮ್ಮ ಬಾಯಿಗೆ ಕೈಯಿಟ್ಟುಕೊಂಡಿದ್ದರಿಂದ ಅವರು ನಕ್ಕಿದ್ದರೋ ಇಲ್ಲವೋ ಗೊತ್ತಿಲ್ಲ.&lt;br /&gt;&lt;br /&gt;ನನಗೆ ಮಾತ್ರ ಜಯರಾಮ ದೇವರ ಹಾಗೆ ಆಗಾಗ ನೆನಪಾಗುವುದು ಸುಳ್ಳಲ್ಲ. ಜಯರಾಮ ಖಂಡಿತವಾಗಿಯೂ ಈಗೊಬ್ಬ ಸದ್ ಗೃಹಸ್ಥನಾಗಿರುತ್ತಾನೆ ಎನ್ನುವ ನನ್ನ ಭಾವನೆ ಖಂಡಿತ ಸುಳ್ಳಾಗದಿರಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ.&lt;br /&gt;&lt;br /&gt;ಚಿಕ್ಕವಳಿರುವಾಗ ದೇವರಿಗೆ ಪೂಜಿಸಲು(ಲೇಪಿಸಲು) ತೇಯ್ದಿಟ್ಟ ಗಂಧವನ್ನು ಮೈತುಂಬ ಬಳಿದುಕೊಂಡು ಅಮ್ಮನ ಹತ್ತಿರ ಬೈಸಿಕೊಳ್ಳುವುದೆಂದರೆ ನನಗೆ ತುಂಬ ಪ್ರಿಯವಾದ ಕೆಲಸವಾಗಿತ್ತು ಮತ್ತು ಅಮ್ಮ ‘ಹಣೆಗೆ ಮಾತ್ರ ಹಚ್ಚಿಕೋ’ ಅಂತ ಎಷ್ಟೇ ಬೈದರೂ ಗಂಧಬಟ್ಟಲಿನಲ್ಲಿ ಅಜ್ಜ ತೇಯ್ದಿಟ್ಟ ಗಂಧ ಖಾಲಿಯಾಗುವ ತನಕ ಮೈ ತುಂಬ ಬಳಿದುಕೊಳ್ಳುವುದನ್ನು ಬಿಡುತ್ತಿರಲಿಲ್ಲ. ಅದಕ್ಕಾಗಿಯೇ ಇರಬೇಕು ಅಜ್ಜ ಬೆಳಿಗ್ಗೆ ದೇವರ ಪೂಜೆ ಮಾಡುವಾಗ ನಸುನಗುತ್ತ ಒಂದಿಷ್ಟು ಗಂಧವನ್ನು ಜಾಸ್ತಿಯೇ ತೇಯ್ದಿಡುತ್ತಿದ್ದರು.&lt;br /&gt;&lt;br /&gt;ನಾನು ಮೈಗೆಲ್ಲ ಗಂಧ ಬಳಿದುಕೊಂಡು ಉಳಿದ ಗಂಧವನ್ನು ಮನೆಯಲ್ಲಿರುವವರಿಗೆಲ್ಲ ‘ಸ್ವಲ್ಪ ಹಚ್ಚಲಾ, ಸ್ವಲ್ಪ ಹಚ್ಚಲಾ’ ಅಂತ ಒತ್ತಾಯ ಮಾಡಿ ಕಡೇ ಪಕ್ಷ ಮನೆಯವರೆಲ್ಲರ ಹಣೆಗಾದರೂ ಬಳಿದಾಗಲೂ ಬಟ್ಟಲಲ್ಲಿ ಹೆಚ್ಚುಳಿದ ಗಂಧ ನೋಡಿ ಯಾರಿಗಾದರೂ ಹಚ್ಚಬೇಕು ಎನ್ನಿಸಿ ‘ಯಾರಿಗೆ ಬಳಿಯಲಿ ಇದಿಷ್ಟು ಗಂಧವನ್ನು..’ ಎನ್ನುವ ಪ್ರಶ್ನೆ ಹೊತ್ತು ಯೋಚಿಸುತ್ತ ಗಂಧಬಟ್ಟಲನ್ನು ಹಿಡಿದೇ ಮನೆತುಂಬ ಓಡಾಡುತ್ತಿದ್ದೆ. ಹಾಗಂತ ಮನೆಮಂದಿಗೆಲ್ಲ ಮೈಗೆ ಬಳಿಯಲು ಹೋದರೆ ಬೈಸಿಕೊಂಡೇನು ಎನ್ನುವ ಭಯವೂ ಕಾಡಿ ಗಂಧಬಟ್ಟಲನ್ನು ಹಿಡಿದು ಮನೆಒಳಹೊರಗೆಲ್ಲ ಅಲೆದಾಡುತ್ತಲಿರುವ ದಿನಗಳಲ್ಲಿ ದೇವರ ಹಾಗೆ ಸಿಕ್ಕವನೇ ಈ ಜಯರಾಮ.&lt;br /&gt;&lt;br /&gt;ಜಯರಾಮ ದಿನಾಲೂ ಮಧ್ಯಾಹ್ನ ಊಟವಾದ ನಂತರ ಶಾಲೆಗೆ ಹೊರಡುವ ಸಮಯದತನಕ ನಮ್ಮ ಮನೆಯ ಎದುರುಬಾಗಿಲಿಗೆ ಅಂಟಿಕೊಂಡಿರುವ ಮೆಟ್ಟಿಲಿನ ಮೇಲೆ ಕುಳಿತಿರುತ್ತಿದ್ದ. ಅವನು ಶಾಲೆಯ ಸಮವಸ್ತ್ರ ಅಂದರೆ ಬಿಳಿ ಅಂಗಿ ಹಾಗೂ ನೀಲಿಯ ಚಡ್ಡಿ ಧರಿಸಿರುತ್ತಿದ್ದ. ಮೊದಲು ಗಂಧವನ್ನು ಜಯರಾಮನ ಮುಖಕ್ಕೆ ಬಳಿಯುತ್ತಿದ್ದೆ. ನಗುತ್ತಲೇ ಬಳಿಸಿಕೊಳ್ಳುತ್ತಿದ್ದ. ಆನಂತರ ಅವನು ತೊಟ್ಟಿದ್ದ ಬಿಳಿಅಂಗಿಯ ಅರ್ಧ ತೋಳಿನ ನಂತರ ಖಾಲಿ ಇರುತ್ತಿದ್ದ ಅವನ ತೋಳಿಗೆ, ಅವನ ಪಾದದಿಂದ ಮೊಣಕಾಲಿನತನಕವೂ ಗಂಧ ಬಳಿಯುತ್ತಿದ್ದೆ.&lt;br /&gt;&lt;br /&gt;ಆ ಸಂಧರ್ಭದಲ್ಲಿ ನನ್ನ ಅಮ್ಮ ಏನಾದರೂ ನಾನು ಹೀಗೆ ಜಯರಾಮನ ಕೈ ಕಾಲ್ಗಳಿಗೆಲ್ಲ ಗಂಧ ಬಳಿಯುತ್ತಿದ್ದುದನ್ನು ನೋಡಿದರೆ ಜಯರಾಮನಿಗೂ ‘ಜಯರಾಮ..ನೀನು ಸುಮ್ಮನೆ ಕುಳಿತಿರ್ಬೇಡ, ಮೈಗೆಲ್ಲ ಹಚ್ಚಬೇಡ ಅಂತ ನೀನವಳಿಗೆ ಹೇಳದಿದ್ರೆ ಅವಳಿಗೆ ಗೊತ್ತಾಗೋಲ್ಲ, ನಿನ್ನ ಮೈ ಪೂರ್ತಿ ಗಂಧಮಯ ಮಾಡಿಬಿಡ್ತಾಳೆ’ ಅಂತ ಅವನಿಗೂ ಹೇಳಿಕೊಡುತ್ತಿದ್ದರು. ನನಗೆ ಅಮ್ಮನ ಮೇಲೆ ಕೋಪ ಬರುತ್ತಿತ್ತು, ಅಮ್ಮ ಹೀಗೆಲ್ಲ ಜಯರಾಮನಿಗೆ ಹೇಳಿಕೊಟ್ಟು ನಾಳೆಯಿಂದ ಜಯರಾಮನೂ ಗಂಧ ಬಳಿಸಿಕೊಳ್ಳದೇ ಹೋದರೆ...ಅಂತ ತುಂಬ ಬೇಸರವಾಗಿ ಅಳು ಬರುತ್ತಿತ್ತು. ಜಯರಾಮ ಮಾತ್ರ ಮಾತನಾಡದೇ ಗಂಧ ಬಳಿಸಿಕೊಳ್ಳುತ್ತಿದ್ದ. ಅವನು ಶಾಲೆಗೆ ಹೊರಡುವಷ್ಟರಲ್ಲಿ ಗಂಧ ಆರಿ ಬಿಳಿ ಬಿಳಿಯಾಗಿರುತ್ತಿತ್ತು. ಅವನು ಒಂದಿಷ್ಟೂ ಬೇಸರಿಸಿಕೊಳ್ಳದೇ ನಗುತ್ತಲೇ ಅದನ್ನಿಟ್ಟುಕೊಂಡು ನನಗೆ ಟಾಟಾ ಹೇಳಿ ಶಾಲೆಗೆ ಹೋಗುತ್ತಿದ್ದ. ಅವನು ಶಾಲೆಗೆ ಹೊರಡುವಾಗ ನನ್ನ ಅಮ್ಮ ‘ಜಯರಾಮ, ಆ ಗಂಧವನ್ನ ತೊಳೆದುಕೊಂಡಾದರೂ ಹೋಗೋ ಪುಟ್ಟಾ’ ಅಂತ ಹೇಳಿದರೂ ‘ಬೇಡ, ಹಿಂಗೇ ಇರ್ಲಿ’ ಅನ್ನುತ್ತ ನಡೆಯುತ್ತಿದ್ದ. ಹಾಗೆಯೇ ಎರಡು ವರ್ಷ ಇದೇ ದಿನಚರಿ ನಡೆದು ಅವನು ಏಳನೆಯ ತರಗತಿ ಮುಗಿಸಿಹೋದವನು ಈಗೆಲ್ಲಿದ್ದಾನೋ ಗೊತ್ತಿಲ್ಲ.&lt;br /&gt;&lt;br /&gt;ತಮಾಷೆಗೆ ಹೇಳುತ್ತಿಲ್ಲ. ನನಗೆ ಈಗಲೂ ಗಂಧವನ್ನು ನೋಡಿದಾಗ ಜಯರಾಮನದೇ ನೆನಪಾಗುತ್ತದೆ. ನಾನು ಬಳಿದ ಗಂಧವನ್ನು ಹಾಗೆಯೇ ಆರಲು ಬಿಟ್ಟು ಒಂದಿನಿತೂ ಬೇಸರಿಸದೇ ಶಾಲೆಗೆ ಹೋದಾಗ ಮೈತುಂಬ ಗಂಧ ಬಳಿದುಕೊಂಡು ಬಂದದ್ದಕ್ಕಾಗಿ ಜಯರಾಮನಿಗೆ ಮಾಸ್ತರು ಬೈದಿರಲಿಲ್ಲವಾ, ಅವನ ತರಗತಿಯ ಹುಡುಗ ಹುಡುಗಿಯರು ಅವನನ್ನು ನೋಡಿ ನಕ್ಕಿರಲಿಲ್ಲವ, ಆ ಬಗ್ಗೆ ಪ್ರಶ್ನಿಸಿರಲಿಲ್ಲವ, ಅವನು ಎಲ್ಲಿರಬಹುದು, ಈಗ ಏನು ಮಾಡುತ್ತಿರಬಹುದು, ಚೆಂದದ ಸಂಸಾರಸ್ಥನಾಗಿ ಬಾಳ್ವೆ ಮಾಡುತ್ತಿರಬಹುದು, ಅವನಿಗೂ ಗಂಧ ನೋಡಿದಾಗ ನನ್ನ ನೆನಪಾಗಬಹುದಾ, ಅವನು ನಮ್ಮನೆಯಲ್ಲಿ ಊಟಮಾಡುತ್ತಿದ್ದನೆಂಬ ಸಂಕೋಚಕ್ಕೆ ಗಂಧವನ್ನು ಬಳಿಸಿಕೊಳ್ಳುತ್ತಿದ್ದನಾ, ಅಂತೆಲ್ಲ ಅನ್ನಿಸಿ ಅವನು ಸಿಕ್ಕರೆ ಕ್ಷಮೆಕೇಳಬೇಕು ಅಂತೆಲ್ಲ ಅಂದುಕೊಳ್ಳುತ್ತೇನೆ. ಹಿಂದೆಯೇ ಗಂಧವನ್ನು ಕೈಕಾಲುಗಳಿಗೆಲ್ಲ ಬಳಿಸಿಕೊಳ್ಳುವಾಗ ಇಲ್ಲಿ ಹಚ್ಚು ಇಲ್ಲಿ ಹಚ್ಚು ಅಂತ ಗಂಧ ಹಚ್ಚಲು ಅನುಕೂಲವಾಗುವಂತೆ ಅವನು ತನ್ನ ಮೊಣಕಾಲು ಹಾಗೂ ಮೊಣಕೈಗಳನ್ನು ತಿರುವಿಟ್ಟುಕೊಂಡು ಮೆಟ್ಟಿಲಿನ ಮೇಲೆ ಕೂರುತ್ತಿದ್ದುದು ನೆನಪಾಗಿ ಯಾವುದೇ ಸಂಕೋಚಕ್ಕಾಗಿ ಅವನು ಗಂಧ ಬಳಿಸಿಕೊಳ್ಳುತ್ತಿರಲಿಲ್ಲ, ಪ್ರೀತಿಯಿಂದಲೇ ಬಳಿಸಿಕೊಳ್ಳುತ್ತಿದ್ದನೇನೋ ಅನ್ನಿಸಿ ಸಮಾಧಾನವಾಗುತ್ತದೆ.&lt;br /&gt;&lt;br /&gt;ದೇವರಂಥ ಮೌನಿ, ಸದ್ಗುಣಿ ಜಯರಾಮನಿಗೆ ದಿನಾಲೂ ಗಂಧಾರ್ಚನೆ ಮಾಡಿದ್ದೆನಲ್ಲ, ಅವನು ದಿನವೂ ನನ್ನನ್ನು ಹರಸಿದುದೂ ಸಹ ಕಾರಣವಾಗಿರಬೇಕು ಇವತ್ತು ನಾನು ಖುಷಿಯಲ್ಲಿ ಆರಾಮವಾಗಿರುವುದಕ್ಕೆ.&lt;br /&gt;&lt;br /&gt;ಹಾಗೆಯೇ ಜಯರಾಮನೂ ಖುಷಿಯಲ್ಲಿ ಸದ್ಗೃಹಸ್ಥನಾಗಿ ಬಾಳ್ವೆ ನಡೆಸುತ್ತಿರಲಿ ಅಂತ ಆವತ್ತು ಗಂಧ ಬಳಿಸಿಕೊಂಡ ದೇವರಂಥ ಜಯರಾಮನಲ್ಲೇ ಕೇಳಿಕೊಳ್ಳುತ್ತೇನೆ.&lt;br /&gt;&lt;br /&gt;ಎಲ್ಲವೂ ಒಳಿತಾಗಲಿ, ವಂದನೆಗಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-6276982671952219603?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/6276982671952219603/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=6276982671952219603' title='15 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/6276982671952219603'/><link rel='self' type='application/atom+xml' href='http://www.blogger.com/feeds/5495085842856428066/posts/default/6276982671952219603'/><link rel='alternate' type='text/html' href='http://www.shantalabhandi.com/2009_01_01_archive.html#6276982671952219603' title='ಜಯ ಜಯರಾಮಾ...ಜಯ ಘನಶ್ಯಾಮಾ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>15</thr:total></entry><entry><id>tag:blogger.com,1999:blog-5495085842856428066.post-2367779587825367894</id><published>2009-01-03T10:35:00.000-08:00</published><updated>2009-01-13T12:05:43.271-08:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಹೊಸ ವರ್ಷದಿ ಹಳೆಯ ನೆನಪು</title><content type='html'>ಹೊಸವರ್ಷ ಆರಂಭವಾಗುವ ಮುನ್ನಾದಿನ ಅಂದರೆ ಡಿಸೆಂಬರ್ ಮೂವತ್ತೊಂದರ ರಾತ್ರಿ ಈ ಸಲ ತುಂಬ ವಿಶೇಷವಾಗಿ ಕಳೆಯಿತು. ಏನೆಂದರೆ ನಾವು ನಾಲ್ಕೈದು ಜನ ಕುಳಿತು ಹಳೆಯ ಸುಂದರ ನೆನಪಿನ ಹಂದರವನ್ನು ಹರವುತ್ತ ಕುಳಿತೆವು. ಮಧ್ಯೆ ಕೇಕ್, ಮಂಡಕ್ಕಿ, ಚಹ ಸಂತರ್ಪಣೆಯೂ ಆಯಿತು. ಸವಿ ಸವಿ ನೆನಪಿನೊಂದಿಗೆ ಖಾರದ ಮಂಡಕ್ಕಿ ಮೆಲ್ಲುತ್ತ, ಬಿಸಿ ಬಿಸಿ ಟೀ ಹೀರುವಾಗ ಆ ಖುಷಿ ಹೇಳಲಸಾಧ್ಯ.&lt;br /&gt;&lt;br /&gt;ನಿದ್ರೆಗೆ ಒಂದೆರಡು ತಾಸು ಅವಕಾಶ ಕೊಡಬೇಕು ಅಂತ ನೆನಪುಗಳನ್ನ ಸವಿಮಡಿಕೆಯೊಳಗೆ ಮತ್ತೆ ಮಡಚಿಟ್ಟು ಹೊರಟೆವು. ಮನೆಗೆ ಬಂದಾಗ ಬೆಳಗಿನ ಜಾವ ಮೂರು ಗಂಟೆ ಮೂವತ್ತು ನಿಮಿಷ. ಮತ್ತೆ ನಾವಿಬ್ಬರೇ ಕುಳಿತು ಎರಡು ತಾಸು ಕೆಲವು ನಮ್ಮ ನಡುವಿನ ನವಿರು ನೆನಪುಗಳನೆಲ್ಲ ನೇವರಿಸುತ್ತ ಕುಳಿತೆವು.&lt;br /&gt;&lt;br /&gt;ಮರೆತುಹೋದಂತಿದ್ದ, ಆದರೆ ಮರೆಯಲಾಗದ ಹದಿಮೂರು ವರ್ಷಗಳ ಹಿಂದಿನ ದಿನಗಳನ್ನೇ ನೆನಪಿಸಿಕೊಡೆವು.&lt;br /&gt;&lt;br /&gt;* ಆಗಷ್ಟೇ ನಾನು ಕಾಲೇಜಿಗೆ ಸೇರಿದ ದಿನಗಳವು. ಫೈನಲ್ ಈಯರ್ ಹುಡುಗರು ಪಿ.ಯು ಕ್ಲಾಸ್ ಗಳು ಮುಗುಯುತ್ತಿದ್ದಂತೆ ಕ್ಲಾಸ್ ರೂಮಿನ ಬಾಗಿಲಿಗೆ ಸುತ್ತುಗಟ್ಟಿಬಿಡುತ್ತಿದ್ದರು. ಹೇಗೋ ಕಷ್ಟಪಟ್ಟು ಹೊರಗೆ ಬಂದಾಗ ಹಣೆಯಲ್ಲೆಲ್ಲ ಬೆವರು ಹನಿಗಟ್ಟಿರುತ್ತಿತ್ತು. ಕಾಲೇಜಿನ ರೂಮ್ ನಂಬರ್ ಎಂಟರಲ್ಲಿ ಎಕಾನಾಮಿಕ್ಸ್ ಕ್ಲಾಸ್ ಮುಗಿಸಿ ಹೊರಗೆ ಬರುವ ಯತ್ನದಲ್ಲಿದ್ದೆವು. ಗೆಳತಿಯೊಬ್ಬಳ ಹಣೆಯಲ್ಲಿ ಬಿಂದಿಯಿರಲಿಲ್ಲ, ಹುಡುಗರ ಗುಂಪಿನಿಂದೊಬ್ಬ ಹೀಗೆ ಕೇಳಿದ ‘ಅಯ್ಯೋ...ಇಷ್ಟ್ ಲಗು ಆನು ಸತೋಜಿ ಮಾಡ್ಕ್ಯಂಡ್ಯನೆ?’ (ಇಷ್ಟು ಬೇಗ ನಾನು ಸತ್ತು ಹೋದೆ ಅಂದುಕೊಂಡೆಯ?)&lt;br /&gt;&lt;br /&gt;* ಗೆಳತಿಯರೆಲ್ಲ ಪ್ರಾಕ್ಟಿಕಲ್ ಮುಗಿಸಿ ಲ್ಯಾಬ್ ಇಂದ ಹೊರಬಂದಾಗ ಸಂಜೆ ಸುಮಾರು ಐದುಗಂಟೆಯಾಗಿರುತ್ತಿತ್ತು. ಆ ಸಮಯದಲ್ಲಿ ಹೆಚ್ಚಿನ ವಿಧ್ಯಾರ್ಥಿಗಳು ಕ್ಲಾಸ್ ಮುಗಿಸಿ ಮನೆಗೆ ಹೋಗಿರುತ್ತಿದ್ದರಾದ್ದರಿಂದ ಕಾಲೇಜು ಶಾಂತವಾಗಿರುತ್ತಿತ್ತು. ಹೀಗೆಯೇ ಲ್ಯಾಬ್ ಇಂದ ಹೊರಬಿದ್ದಾಗ ಅಲ್ಲಿ ಕೆಲವು ಫೈನಲ್ ಈಯರ್ ನ ಹುಡುಗರು ಭಿಕ್ಷುಕರ ಸೋಗು ಹಾಕಿ ‘ಐದು ಪೈಸೆ ಹಾಕಿ’ ಅಂತಲೋ ಏನೋ ಹೇಳುತ್ತ ಹುಡುಗಿಯರನ್ನು ಚುಡಾಯಿಸುತ್ತ ಕುಳಿತಿದ್ದರಂತೆ (ಸಂಭಾಷಣೆ ಸರಿಯಾಗಿ ನೆನಪಿಲ್ಲ) . ಆ ಮೇಲಿನಿಂದ ಫೈನಲ್ ಈಯರ್ ನ ಆ ಗುಂಪಿನಲ್ಲಿದ್ದ ಒಬ್ಬ ಹುಡುಗನಿಗೆ ‘ಐದು ಪೈಸೆಯವನು’ ಅನ್ನುವ ಬಿರುದು ಕೊಟ್ಟುಬಿಟ್ಟೆವು. ನಾವೇ ಕೆಲವು (ಪಿ ಯು)ಹುಡುಗಿಯರು ಮಾತಾಡಿಕೊಳ್ಳುವಾಗ ಅವನು ಯಾವತ್ತೂ ‘ಐದು ಪೈಸೆಯವನು’ ಆಗಿದ್ದ. ಬಿ ಎಸ್ ಸಿ ಡಿಗ್ರಿ ಪಡೆದು ಹೋದ ‘ಐದು ಪೈಸೆಯವನು’ ಆಮೇಲೆ ಕಾಣಲು ಸಿಗಲಿಲ್ಲ. ಬೇರೆ ಊರಿನಲ್ಲಿ ಓದು ಮುಂದುವರೆಸುತ್ತಿದ್ದಾನೆ ಎಂಬ ಯಾರೋ ಹೇಳಿದ ಸುದ್ದಿಯನ್ನು ನಾನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ.&lt;br /&gt;&lt;br /&gt;* ನಾವು ರೂಮ್ ಮಾಡಿಕೊಂಡಿದ್ದ ಬಿಲ್ಡಿಂಗ್ ಎದುರಗಡೆ ಅದೇ ಮಾಲೀಕರದ್ದು ಒಂದು ಶಾಪಿಂಗ್ ಕಾಂಪ್ಲೆಕ್ಸ್ ಇತ್ತು. ನಮ್ಮ ಬಿಲ್ಡಿಂಗ್ ಅಲ್ಲಿ ಬರಿಯ ಹುಡುಗಿಯರು ಮಾತ್ರ ಇರುತ್ತಿದ್ದ ಕಾರಣಕ್ಕೆ, ನಮ್ಮ ಭದ್ರತೆಗಾಗಿ ಆ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಸಭ್ಯ ಜನಗಳಿಗೆ ಮಾತ್ರ ಬಾಡಿಗೆ ಕೊಟ್ಟಿದ್ದರು. ಅಲ್ಲಿದ್ದ ಕಿರಾಣಿ ಅಂಗಡಿಯಲ್ಲಿ ನಮಗೆ ಬೇಕಾದ ದಿನಸೀ ಪದಾರ್ಥಗಳನ್ನು ಕೊಳ್ಳುತ್ತಿದ್ದೆವು. ಹೀಗೆ ಒಂದು ದಿನ ಏನೋ ಕೊಳ್ಳಲು ಹೋದಾಗ ಅಂಗಡಿಯವರು ಒಂದು ಕಾಫಿ ಬೈಟ್ ಚಾಕಲೇಟ್ ಕೊಟ್ಟು ಇದನ್ನು ಇಂಥವರು ನಿಮಗೆ ಕೊಡಲು ಹೇಳಿದ್ದಾರೆ ಅಂತ ಕೊಟ್ಟರು. ಏನು ಮಾತನಾಡುವುದಂತ ಅರಿಯದೆ ಸುಮ್ಮನೆ ಚಾಕಲೇಟ್ ತಗೊಂಡು ಬಂದೆ. ರೂಮಿಗೆ ಬಂದವಳು ಗೆಳತಿಯರಿಗೆ ಹೇಳಿದೆ “ಆ ಐದು ಪೈಸೆಯವನು... ಅದೇ ಹೋದ್ವರ್ಷ ಕಾಲೇಜಿಗೆ ಬರ್ತಿದ್ನಲ್ಲ, ಅವನು ನಂಗೆ ಚಾಕಲೇಟ್ ಕೊಡಲಿಕ್ಕೆ ಹೇಳಿದ್ದಾನಂತೆ, ಅಂಗಡಿಯವರು ಕೊಟ್ರು, ಅಲ್ಲೆಲ್ಲ ಜನ ಇದ್ರು, ಏನು ಮಾಡ್ಬೇಕು ಗೊತ್ತಾಗ್ದೇ ತಗೊಂಡು ಬಂದೆ’ ಅಂತ ಹೇಳಿದೆ. ಗೆಳತಿಯರಿಗೆ ನನ್ನನ್ನು ಹಾಸ್ಯ ಮಡುವುದಕ್ಕೆ ಹೊಸ ಥರಹದ ವಿಷಯ ಸಿಕ್ಕಿತು, ತುಂಬ ಕಾಡಿಸಿದರು.&lt;br /&gt;ಅದೇನೋ ಗಾದೆ ಇದೆಯಲ್ಲ, ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಅನ್ನುವ ಹಾಗಾಯಿತು. ಆದರೂ ಗೆಳತಿಯರು ನನ್ನನ್ನು ಕಾಪಾಡುತ್ತಾರೆ ಎನ್ನುವ ಭರವಸೆ ಇದ್ದೇ ಇತ್ತು.&lt;br /&gt;‘ ಅಲ್ಲಾ..ಅವನಿಗೆ ಚಾಕಲೇಟ್ ಕೊಡೋಕೆ ಬೇರೆ ಯಾರೂ ಸಿಕ್ಲಿಲ್ವ? ನಿನ್ ಹತ್ರ ಅವನು ಒಂದು ಸಲ ಮಾತಾಡಿದ್ರೆ ಕೊಟ್ಟಿರೋ ಚಾಕಲೇಟನ್ನೂ ವಾಪಸ್ ತಗೊಂಡು ಹೋಗ್ತಿದ್ದ. ನೀನು ನಿಧಾನಕ್ಕೆ ಮಾತಾಡುವಷ್ಟರಲ್ಲೇ ಅವನಿಗೆ ಬೇಸರ ಬಂದು ಬಿಡ್ತಾ ಇತ್ತು’ ಅಂತೆಲ್ಲ ನಕ್ಕಾಗ ಹೌದೆನಿಸಿತು. ಯಾಕೆಂದರೆ ನಾನಾಗ ತುಂಬ ಕಡಿಮೆ ಮಾತನಾಡುತ್ತಿದ್ದೆ. ಆಡಿದರೂ ಅದು ತುಂಬ ನಿಧಾನಕ್ಕೆ. ತುಂಬ ಅವಸರದಲ್ಲಿರುವವರು ನನ್ನನ್ನ ಮಾತನಾಡಿಸುತ್ತಲೇ ಇರಲಿಲ್ಲ.&lt;br /&gt;&lt;br /&gt;*ಮತ್ತೆ ಮರುದಿನವೂ ಚಾಕಲೇಟ್ ಸಿಕ್ಕಿತು. ಆ ಮರುದಿನವೂ. ನನಗೆ ಕೋಪ ಬಂದರೂ ಚಾಕಲೇಟ್ ವಿಷಯವಾದ್ದರಿಂದ ತೋರಿಸಿಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ಪುಕ್ಕಟೆ ಸಿಗುತ್ತಿರುವ ನನ್ನಿಷ್ಟದ ಚಾಕಲೇಟ್ ಬಿಡಲು ನಿಜವಾಗಿಯೂ ನನಗೆ ಮನಸಿರಲಿಲ್ಲ. ಕೋಪವನ್ನಾಗಲೀ ಅಥವಾ ಚಾಕಲೇಟ್ ಮೇಲಿನ ಪ್ರೀತಿಯನ್ನಾಗಲೀ ತೋರಿಸಿಕೊಳ್ಳದೆ ಅಂಗಡಿಯವರಿಗೆ ಹೇಳಿದೆ ‘ಅವರು ಎಷ್ಟು ಚಾಕಲೇಟ್ ಕೊಡಲಿಕ್ಕೆ ಹೇಳಿದ್ದಾರೋ..ಅಷ್ಟೂ ಚಾಕಲೇಟ್ ಅನ್ನು ಇವತ್ತೇ ಕೊಟ್ಟು ಬಿಡಿ’ ಅಂದೆ. ಹೀಗೆ ಹೇಳುವಾಗ ನನ್ನ ಮೂವರು ಗೆಳತಿಯರೂ ಜೊತೆಯಲ್ಲಿಯೇ ಇದ್ದರಾದ್ದರಿಂದ ಹೆಚ್ಚು ಧೈರ್ಯ ಬಂದಿತ್ತು. ಅಂಗಡಿಯವರು ‘ದಿನಾ ಒಂದೊಂದೇ ಚಾಕಲೇಟ್ ಕೊಡಕ್ಕೆ ಹೇಳಿದಾರೆ’ ಅಂದರು. ಸುಮ್ಮನೆ ಒಂದು ಚಾಕಲೆಟ್ ತಗೊಂಡು ಬ್ಯಾಗಲ್ಲಿ ಇಟ್ಟುಕೊಂಡೆ. ನಾಲ್ಕುದಿನವಾದ ಬಳಿಕ ಗೆಳತಿಯರಿಗೂ ಒಂದೊಂದು ಚಾಕಲೇಟ್ ಕೊಟ್ಟು ತಿನ್ನುವುದು ನನ್ನ ಹುನ್ನಾರವಾಗಿತ್ತು. ಈ ಕಡೆ ಬಂದಾಗ ಗೆಳತಿಯರು ‘ಈ ಚಾಕಲೇಟನ್ನ ಐದು ಪೈಸೆಯವನೇ ಕೊಡ್ತಿದಾನ, ಅಥ್ವ ಅಂಗಡಿಯವರೇ ಕೊಡ್ತಿದಾರ, ಸ್ವಲ್ಪ ವಿಚಾರಿಸ್ಬೇಕು ’ ಅಂದರು. ನನಗಾಗಲೇ ದಿನಾ ಒಂದು ಕಾಫಿ ಬೈಟ್ ಚಾಕಲೇಟ್ ತಿಂದು ಅಭ್ಯಾಸವಾಗಿದ್ದ ಕಾರಣ ‘ಯಾರು ಕೊಟ್ರೆ ನಮಗೇನು, ಚಾಕಲೇಟ್ ಮುಖ್ಯ ಬಿಡ್ರೆ’ ಅಂದುಬಿಟ್ಟೆ. ನನ್ನಂಥ ನಾನೂ ಹೀಗೆ ಹೇಳಿದಾಗ ಗೆಳತಿಯರು ತಲೆದೂಗಲೇ ಬೇಕಾಯಿತು. ಗೆಳತಿಯರಿಗೂ ನಾನೇನು ಮಾಡಿದರೂ ಸಭ್ಯ ಕೆಲಸವನ್ನಷ್ಟೇ ಮಾಡುತ್ತೇನೆಂಬ ನಂಬಿಕೆ ಮೊದಲೇ ಬೇರೂರಿತ್ತಾದ್ದರಿಂದ ಇಲ್ಲಿಯೂ ಸಭ್ಯತೆಯೇ ಕಾಣಿಸಿತೇನೋ, ಸುಮ್ಮನಾಗಿಬಿಟ್ಟರು. ನಾಲ್ಕು ದಿನವಾದ ಮೇಲೆ ಚಾಕಲೇಟ್ ಹಂಚಿ ತಿಂದೆವು. ವಿಷ ಗಿಷ ಹಾಕಿದ್ದಾರಾ ಅಂತ ಚೆಕ್ ಮಾಡಿ ಹಾಗೆ ಮಾಡಿರಲಿಕ್ಕಿಲ್ಲ ಅನ್ನಿಸಿ ತಿಂದುಬಿಟ್ಟೆವು. ಅಲ್ಲದೆ ಆವತ್ತು ಐದು ಪೈಸೆಯವವನಿಗೆ ಪ್ರಮೋಶನ್ ಕೊಟ್ಟು ‘ಕಾಫಿ ಬೈಟ್’ ಎಂಬುದಾಗಿ ಮರುನಾಮಕರಣಮಾಡಿದೆವು. ಆಗಾಗ ಅವನ ಹೆಸರಲ್ಲಿ ಸಿಗುತ್ತಿದ್ದ ಕಾಫಿ ಬೈಟ್ ಮಾತ್ರ ಖುಷಿಯಲ್ಲಿ ತಿನ್ನುತ್ತಿದ್ದೆ. ಅವನು ಯಾವ ಊರಲ್ಲಿದ್ದಾನೆ ಅಂತ ವಿಚಾರಿಸುವ ಗೋಜಿಗೂ ಹೋಗಲಿಲ್ಲ.&lt;br /&gt;************&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಐದು ವರ್ಷಗಳ ನಂತರ ನನ್ನ ವಿವಾಹ ನಿಶ್ಚಯವಾಗಿ ಮದುವೆ ಮಂಟಪದಲ್ಲಿ ಅದೇ ಕಾಫಿ ಬೈಟ್ ಹುಡುಗನ ಮುಂದೆ ತಲೆ ಬಾಗಿ, ಕತ್ತು ಬಗ್ಗಿಸಿ, ಕುತ್ತಿಗೆಯೊಡ್ಡಿ ನಿಂತಿದ್ದೆ. ಆಗಲೂ ಬೇಸರವಾಗಲಿಲ್ಲ. ಕಾಫಿ ಬೈಟ್ ತಿಂದ ಋಣ ನನ್ನ ಮೇಲಿತ್ತಲ್ಲ. ಮತ್ತೆ ಖುಷಿಯಾಯಿತು.&lt;br /&gt;&lt;br /&gt;ಎಲ್ಲರಿಗೂ ಹೊಸ ವರ್ಷ ಇನ್ನಷ್ಟು ಶುಭ ತರಲಿ. ವಂದನೆಗಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-2367779587825367894?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/2367779587825367894/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=2367779587825367894' title='29 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/2367779587825367894'/><link rel='self' type='application/atom+xml' href='http://www.blogger.com/feeds/5495085842856428066/posts/default/2367779587825367894'/><link rel='alternate' type='text/html' href='http://www.shantalabhandi.com/2009_01_01_archive.html#2367779587825367894' title='ಹೊಸ ವರ್ಷದಿ ಹಳೆಯ ನೆನಪು'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>29</thr:total></entry><entry><id>tag:blogger.com,1999:blog-5495085842856428066.post-7222668224620288223</id><published>2008-12-22T21:06:00.000-08:00</published><updated>2009-01-13T12:05:43.272-08:00</updated><category scheme='http://www.blogger.com/atom/ns#' term='ನಗಬೇಡ'/><title type='text'>ನಕ್ಕು ಬಿಡು ಒಮ್ಮೆ...</title><content type='html'>‘ನೀ ತಮ್ಮನ್ ಸಂತಿಗೆ ಬಾರೇ...’ ಅಂದವರು ಪೇಟೆಗೆ ಹೋಗಿದ್ದಾಯ್ತು. ‘ಒಂದ್ನಿಮಿಷ...’ ಅಂತ ಕರೆಯುತ್ತಿದ್ದರೆ ಅಲ್ಲಿ ಸ್ಕೂಟಿ ಹೊರಟೇ ಹೋಯ್ತು. ರೆಡಿಯಾಗಿ ಅಡುಗೆ ಮನೆಗೆ ಬಂದೆ. ಅತ್ತೆ ‘ಅಯ್ಯ..ಪ್ಯಾಟಿಗೆ ಹೋಗ್ತಿ, ಖರೀದಿ ಎಲ್ಲ ಮುಗದ್ದಿಲ್ಲೆ ಹೇಳಿದ್ಯಲೇ... ರಾಜು ಪ್ಯಾಟಿಗೆ ನಡದ್ನಲೆ...ರವಿ ಹೋಗ್ತ್ನನ ತಗ , ಅವನ್ನ ಸಂತಿಗೆ ಹೋಗ್ಲಕ್ಕಡ್ಡ’ ಅಂದ್ರು ರವಿಯತ್ತ ನೋಡುತ್ತ.&lt;br /&gt;&lt;br /&gt;ರವಿಯೋ ಅಪರೂಪಕ್ಕೆ ಮನೆಗೆ ಬಂದಿದ್ದ ಗೆಳೆಯರ ಜೊತೆ ‘ನಿಂಗ ಬಂದವ್ವೆಯ ಪಿ.ಆರ್ ಗೆ ಅಪ್ಲೈ ಮಾಡ್ಬಿಡಿ. ಡಿಲೇ ಮಾಡ್ಕ್ಯಳಡಿ, ಆನು ಹಂಗೆ ಮಾಡ್ಕ್ಯಂಡು ಕಡಿಗ್ ಮಳ್ ಹರಿಯಂಗೆ ಆತು’ ಅಂತೇನೋ ಹೇಳ್ತಾ ಇದ್ದ. ಗಹನವಾದ ವಿಚಾರ ನಡೆಯುತ್ತಿತ್ತಾದ್ದರಿಂದ ಅವನು ನನ್ನ ಮುಖವನ್ನ ನೋಡುವುದನ್ನೇ ಕಾಯುತ್ತಿದ್ದವಳು ಮಾತಿನ ಮಧ್ಯೆ ನನ್ನ ಮುಖ ನೋಡಿದ್ದೇ ‘‘ಐದು ಗಂಟಿಗ್ ಹೋಪದ ಪ್ಯಾಟಿಗೆ?" ಅಂತ ಕೇಳಿಯೇ ಬಿಟ್ಟೆ. ಅವನು ‘ಹ್ಞ...ಹೋಪ, ಇನ್ನು ಹತ್ತೇ ನಿಮ್ಷ’ ಅಂದು ಮತ್ತೆ ಗೆಳೆಯರ ಮುಖ ನೋಡಿ ಮಾತು ಮುಂದುವರೆಸಿದ.&lt;br /&gt;&lt;br /&gt;ಐದು ನಿಮ್ಷ..ಹತ್ತು ನಿಮ್ಷ...ಇಲ್ಲಾ...ಹದಿನೈದು ನಿಮ್ಷವಾಯ್ತು....ಅರೆರೆ ಅರ್ಧ ಗಂಟೆ ಕಳ್ದೇ ಹೋಯ್ತು. ಐದೂ ಇಪ್ಪತ್ತು ಗಡಿಯಾರದಲ್ಲಿ. ಸುಮ್ಮನೆ ಅತ್ತೆಯವರ ಮುಖವನ್ನೊಮ್ಮೆ ನೋಡಿದೆ. ಇವತ್ತೇ ಮುಗಿಸಿಕೊಳ್ಳಬೇಕಾದ ಕೆಲಸಗಳು, ಪ್ಯಾಕಿಂಗ್ , ಜೊತೆಯಲ್ಲಿ ನಾನಿನ್ನೂ ಪೇಟೆಗೆ ಹೊರಟಿಲ್ಲವೆಂಬ ಕಳಕಳಿ ಅತ್ತೆಯವರ ಮುಖದಲ್ಲಿಯೇ ಜಾಸ್ತಿ ಇದ್ದಂತಿತ್ತು.&lt;br /&gt;&lt;br /&gt;ಸುಮ್ಮನೆ ತನ್ನ ಪಾಡಿಗೆ ತಾನು ಯಾವುದೋ ಚಾನೆಲ್ ಊದುತ್ತಿದ್ದ ಟಿ.ವಿ ಮುಂದೆ ಕುಳಿತೆ. ಯಾವತ್ತೂ ಟಿ.ವಿ ನೋಡದವಳು ಟಿ.ವಿ ಮುಂದೆ ಕೂತಾಗಲೇ ಅತ್ತೆಯವರಿಗೆ ಡೌಟು ಬಂದಿರಬೇಕು. ನಾ ಕುಳಿತಲ್ಲಿಗೇ ಬಂದು ‘ನೀ ಅವನ್ನ ಸಂತಿಗೆ ಹೋದ್ರಾಗ್ತಿತ್ತು, ಈಗ ಇಂವ ಎಷ್ಟೊತ್ತಿಗ್ ಹೊಂಡ್ತ್ನ ಏನ’ ಅಂದರು. ನನ್ನ ಬೇಜಾರಕ್ಕಿಷ್ಟು ಪ್ರೋತ್ಸಾಹ ಸಿಕ್ಕಂತಾಗಿ ‘ತಮ್ಮನ್ ಸಂತಿಗ್ ಬಾ ಹೇಳಿಕ್ಕೆ ನಡದ್ರು..’ ಇನ್ನೂ ಅಳುಮುಖ ಮಾಡಿ ಕೂತೆ. ‘ ಈ ಹುಡುಗ್ರೂವ ಸಧ್ಯದಲ್ಲೆ ಆಷ್ಟ್ರೇಲಿಯಾಕ್ಕೆ ಹೋಪ ಹುಡುಗ್ರು ಕಾಣ್ತು, ಇಂವ ಅವ್ಕೆ ಎಂತೆಂತೋ ಸಲಹೆ ಕೊಟ್ಗೋತಿದ್ದ, ನೀ ಒಂದ್ಸಲ ಅವಂಗೆ ಪ್ಯಾಟಿಗ್ ಹೋಪ್ದಿದ್ದು ಹೇಳಿ ನೆನಪಾರೂ ಮಾಡು, ಅಪ್ರೂಪಕ್ಕೆ ಸಿಕ್ಕಿದ್ವಲೇ ದೋಸ್ತ್ರು... ಅವ್ಕೂ ಗಡಬಿಡಿ ಆಗ್ತು ಈಗ ಪಾಪ... ’ ಅನ್ನುತ್ತ ಒಳನಡೆದರು.&lt;br /&gt;&lt;br /&gt;ನಾನಾ...ಒಂದು ಸಲ ಏನನ್ನಾದ್ರೂ ಹೇಳಿಬಿಟ್ರೆ ಮುಗೀತು, ಇನ್ನೊಂದು ಸಲ ಹೇಳೋದೂ ಇಲ್ಲ, ಕೇಳೋದೂ ಇಲ್ಲ. ಒಣಜಂಭ ಅಂದುಕೊಂಡ್ರೂ ಪರವಾಗಿಲ್ಲ. ಒಂದೇ ಸಲಕ್ಕೆ ನನ್ ಈ ಹಾಳುಬುದ್ಧಿ ಬದಲಾಗೋದಾದ್ರೂ ಹ್ಯಾಗೆ? ನಾನೇನೂ ಕೇಳ್ಲಿಲ್ಲ.&lt;br /&gt;&lt;br /&gt;ಮತ್ತೂ ಹದಿನೈದು ನಿಮಿಷಗಳು ಸರಿದಾಗ ‘ರವಿ ಲೇಟಾತೋ...’ ಅಂತ ಹೇಳೋಣ ಅಂದುಕೊಂಡವಳು ಅವನ ಮುಂದೆ ಕುಳಿತ ಅತಿಥಿಗಳ ನೆನಪಾಗಿ ಸುಮ್ಮನೆ ಮತ್ತೆ ವಾಪಸ್ ಬಂದು ಮತ್ತೆ ಟಿ.ವಿ ಮುಂದೆ ಕುಳಿತೆ. ಹೊರಗಡೆಯಿಂದ ಒಳಬಂದ ಮಾವನವರು ಟಿ.ವಿ ಮುಂದಿದ್ದ ನನ್ನ ನೋಡಿ ‘ಎಂತ ಆತೇ ಕೂಸೆ..’ ಅಂದ್ರು. ಅಂದರೆ ನನ್ನ ಈ ಜನಗಳಿಗೆ ಚೆನ್ನಾಗಿ ಗೊತ್ತಾಗ್ಬಿಟ್ಟಿದೆ ನನ್ನ ಬಗ್ಗೆ. ನನಗೆ ಬೇಜಾರಾಗಿದ್ರೆ ಮಾತ್ರ ಟಿ.ವಿ ಮುಂದೆ ಕೂತಿರುತ್ತೇನೆ ಅನ್ನುವದನ್ನೂ ಅರ್ಥೈಸಿಕೊಂಡಿದ್ದಾರೆ ಇವರು. ಸ್ವಲ್ಪ ಗಂಭೀರವಾಗಿಯೇ ‘ಎಂತ ಆಜಿಲ್ಲೆ’ ಅಂದೆ, ರವಿಯ ಮೇಲಿನ ಕೋಪವನ್ನು ಮಾವನವರ ಮೇಲೆ ಬಿಟ್ಟೆ.&lt;br /&gt;&lt;br /&gt;ಮಾವನವರು ನಂಗೆ ಹೀಗೆ ಫ್ರೆಂಡು. ಏನನ್ನಾದ್ರೂ ಎಲ್ಲಾದ್ರೂ ಇಟ್ಕೊಂಡು ಹುಡುಕೋವಾಗ( ಹೆಚ್ಚಾಗಿ ಸ್ವಿಚ್ ಆಫ್ ಆಗಿರೋ ಮೊಬೈಲೋ ಅಥವಾ ಹೇರ್ ಕ್ಲಿಪ್ಪೋ ಹೀಗೆ...) ಸಹ ಅವರು ನನ್ನ ಸಾಹಾಯಕ್ಕೆ ಬರಬೇಕಾಗುತ್ತದೆ. ಸಣ್ಣಪುಟ್ಟದಕ್ಕೆ ಕಾಲೆಳೆಯುವ ಅವರೊಡನೆ ಸುಳ್ಳೆಪುಳ್ಳೆ ಕಾದಾಟ ನಂಗಿಷ್ಟ. ಸಂಜೆ ಅವರ ಜೊತೆ ಪೇಟೆಗೆ ಹೋಗಿ ಮಿರ್ಚಿಬಜೆ, ಅರ್ಧರ್ಧ ಮಸಾಲೆ ದೋಸೆ ತಿಂದು ವಾಪಸು ಬರೋವಾಗ ಅಲ್ಲಿ ಮಾವನವರ ಪರಿಚಯದವರ್ಯಾರಾದರೂ ಸಿಕ್ಕು ‘ಭಂಡಿ ಹೆಗಡೆಯವ್ರು.. ಮಗಳ ಜೊತೆ ಪೇಟೆಗ್ ಬಂದಿದ್ದಾ?’ ಅಂತ ಕೇಳಿದರೆ ಅವರು ಖುಷಿಖುಷಿಯಿಂದ ‘ಹ್ಞ...ಹೌದು ’ ಅಂದರೆಂದರೆ ಅಲ್ಲಿಗೆ ಎಲ್ಲ ಸರಿಯಾಗುತ್ತದೆ. ಪೇಟೆಯಲ್ಲಿ ಹೊಟ್ಟೆ ತುಂಬ ತಿಂದು ಮನೆಗೆ ಹೋಗಿ ಸರಿಯಾಗಿ ಊಟ ಮಾಡದೇ ಇದ್ದಾಗ ‘ಮೊದ್ಲೇ ಹೇಳಿದ್ರೆ ಅನ್ನಕ್ಕೇ ಇಡ್ತಿದ್ನಿಲ್ಲೆ’ ಅಂತ ಅತ್ತೆಯವರು ಹೇಳಿದರೆ ಅವರ ಮುಖ ನೋಡಿ ನಕ್ಕು ಬಿಡುತ್ತೇನೆ. ಈಗ ಅವರು ನಕ್ಕೇ ನಗುತ್ತಾರೆ.&lt;br /&gt;&lt;br /&gt;ಅದನ್ನೆಲ್ಲ ಹೇಳ್ತಾಇದ್ರೆ ಇವತ್ತು ಮುಗಿಯೋಲ್ಲ ಬಿಡಿ. ವಿಷ್ಯ ಏನಂದ್ರೆ ನಾಳೆ ಸಂಜೆಯಾದ್ರೆ ಬೆಂಗಳೂರು ಬಸ್ ಹತ್ತಬೇಕು. ನಾಡಿದ್ದು ಸಂಜೆ ಫ್ಲೈಟ್ ಹತ್ಬೇಕು. ವಿಷಯ ಹೀಗಿಲ್ಲವಾಗಿದ್ದಲ್ಲಿ ಈ ಮೈದುನ ಎಷ್ಟು ಹೊತ್ತು ಯಾರ ಹತ್ರ ಮಾತಾಡಿದ್ರೂ ನಂಗೇನೂ ತೊಂದ್ರೆ ಇರ್ಲಿಲ್ಲ. ಒಂದಿಷ್ಟು ಆವತ್ತೇ ಮುಗಿಸಬೇಕಾಗಿದ್ದ ಖರೀದಿ ಕೆಲಸ ಹಾಗೇ ಉಳಿದಿತ್ತು. ಆದರೆ ಅವನ ಗೆಳೆಯರೂ ಅಪರೂಪಕ್ಕೆ ಸಿಕ್ಕಿದ್ದಾರೆ. ಅವರೂ ಅವನಿರುವ ದೇಶಕ್ಕೆ ಕಾರ್ಯ ನಿಮಿತ್ತ ಹೊರಟವರು. ಸಲಹೆ-ಚರ್ಚೆ ನಡೀತಾ ಇತ್ತು. ಅವನೂ ನಾಳೆಯೇ ಬೆಂಗಳೂರಿಗೆ ಹೊರಟು, ನಾಡಿದ್ದು ಆಷ್ಟ್ರೇಲಿಯಾಕ್ಕೆ ತೆರಳುವವನಾದ್ದರಿಂದಲೂ, ಅವರು ಅಪರೂಪಕ್ಕೆ ನಮ್ಮ ಮನೆಗೆ ಬಂದ ಅತಿಥಿಗಳಾಗಿದ್ದರಿಂದಲೂ ಮಾತುಕತೆ ನಡೆಯುತ್ತಲೇ ಇತ್ತು. (ಮಾತಿಗೆ ಜನ ಸಿಕ್ಕಿಬಿಟ್ಟರೆ ಅಣ್ಣ ತಮ್ಮ ಇಬ್ಬರೂ ಒಂದೇ)&lt;br /&gt;&lt;br /&gt;ನಾನು ಅಡುಗೆ ಮನೆಯಲ್ಲಿ ಅವನನ್ನು ನೋಡಿದಾಗ ಕೈಯಲ್ಲಿ ಮುಗಿದು ಹೋದ ಒಂದೆರಡು ಬ್ಯಾಟರಿಗಳನ್ನು ಆ ಕೈಯಿಂದ ಈ ಕೈಗೆ, ಈ ಕೈಯಿಂದ ಆ ಕೈಗೆ ಬದಲಿಸುತ್ತ ಮಾತನಾಡ್ತಿದ್ದ. ಮಾತೆಲ್ಲ ಮುಗಿದು ಅಡುಗೆ ಮನೆಯಿಂದ ಹೊರಬಿದ್ದು ಟಿ.ವಿ ಇದ್ದ ಜಾಗಕ್ಕೆ ಬಂದವರು ‘ಅತ್ಗೆ, ಬಾರೆ ಯಮ್ಮನಿಗೆ, ಬತ್ಯ ಯಂಗ’ ಅಂತ ಹೊರಟಾಗ ಮನೆಗೆ ಬಂದ ಅತಿಥಿಗಳು ಬೇಗ ಹೊರಟರಲ್ಲ ಅನ್ನುವ ಬೇಸರ ಹಾಗೂ ಈಗ ರವಿ ಪೇಟೆಗೆ ಹೊರಡುತ್ತಾನೆ ಅನ್ನುವ ಖುಷಿ ಎಲ್ಲ ಒಟ್ಟಿಗೇ. ನನ್ನ ಬುದ್ಧಿ ಅರಿತಿದ್ದ ಈ ರವಿ ಮಹಾಷಯ ಅವರನ್ನು ಬೀಳ್ಕೊಡಲು ಅವರ ಹಿಂದೆಯೇ ಹೊರಡುತ್ತ ಅವರೊಡನೆ ಮಾತನಾಡುತ್ತಲೇ ತನ್ನ ಕೈಯ್ಯಲ್ಲಿದ್ದ ಬ್ಯಾಟರಿಗಳನ್ನ ನನ್ನ ಕೈಗೆ ವರ್ಗಾಯಿಸಿ ರಾಜೀ ಮಾಡಿಕೊಂಡು ಅವರ ಹಿಂದೆ ಹೊರನಡೆದ.&lt;br /&gt;&lt;br /&gt;ಎಲ್ಲರಿಗೂ ಟಾಟಾ ಹೇಳಿ ಮನೆಯಿಂದ ಹೊರಟ ಗಾಡಿ ಸೀದ ಗಜಾನನ ಸ್ಟೋರ್ಸ್ ಎದುರು ನಿಂತಿತ್ತು. ಅಲ್ಲಿ ಹೋಗಿದ್ದೇಕೆಂದರೆ ಹಿಂದಿನ ದಿನ ಒಂದಿಷ್ಟು ಬಟ್ಟೆ ಖರೀದಿಸಿ ಬಿಲ್ ನೋಡುತ್ತ ಆಚೆ ಬಂದಾಗ ಹೇಳಿದ್ದ ರವಿ ‘ಭಾರೀ ಕಡ್ಮೆ ಹಾಕಿದ್ನಲೇ ಬಿಲ್ ಅಲ್ಲಿ’ ಅಂದಿದ್ದ. ಮನೆಗೆ ಬಂದು ನೋಡಿದ್ರೆ ನಾನು ಆರಿಸಿಟ್ಟ ಒಂದು ಇಳಕಲ್ ಸೀರೆ ಅಂಗಡಿಯಲ್ಲೇ ಬಿಟ್ಟು ಹೋಗಿತ್ತು. ಹಾಗಾಗಿ ಅದರ ಬೆಲೆಯನ್ನೂ ಬಿಲ್ ಅಲ್ಲಿ ಸೇರಿಸಿರಲಿಲ್ಲ.&lt;br /&gt;&lt;br /&gt;ಗಜಾನನ ಸ್ಟೋರ್ಸ್ ಕೆಲಸ ಮುಗಿಸಿ ಹೊರಬಿದ್ದು ‘ಇನ್ನೆಂಥ ಕೆಲ್ಸ? ಲಿಸ್ಟ್ ನೋಡು’ ಅಂದಾಗ ನಾನು ನಿಧಾನಕ್ಕೆ ‘ಸ್ಟಫ್ಸ್ ಟು ಬಿ ಡನ್’ ಲಿಸ್ಟ್ ತೆಗೆದು ಅವನ ಕೈಗೇ ಕೊಟ್ಟೆ. ಲಿಸ್ಟ್ ಅಲ್ಲಿನ ಕೊನೆಯ ಸಾಲು ಓದಿ ಕಣ್ಣರಳಿಸಿ ಮುಖ ನೋಡಿದ. ನನಗೆ ಅರ್ಥವಾಯಿತು. ಏಕೆಂದರೆ ಆ ಲಿಸ್ಟ್ ಬರೆದದ್ದು ನಾನೇ. ಇಷ್ಟೆಲ್ಲ ಕೆಲಸಕ್ಕೇ ಸಮಯ ಸಾಕಾಗದಷ್ಟು ಗಡಿಬಿಡಿಯಿರುವಾಗ ‘ಮಸಾಲೆ ಪೂರಿ ಕೊಡಿಸು’ ಅಂತ ಕೇಳುವುದಾದರೂ ಹೇಗೆ? ಆಗಲೇಬೇಕಾಗಿದ್ದ ಕೆಲಸಗಳ ಪಟ್ಟಿಯಲ್ಲಿ ‘ಮಾಸಾಲೆ ಪೂರಿ’ ಅಂತಲೂ ಸೇರಿಸಿದ್ದೆ. ಭಾರತಕ್ಕೆ ಬಂದು ಮೂರುವಾರವಿದ್ದೂ ಮಸಾಲೆ ಪೂರಿ ತಿಂದಿದ್ದು ಮಾತ್ರ ಒಂದೇ ದಿನ. ಆವತ್ತು ಬೆಂಗಳೂರಿನ ಬಿಗ್ ಬಾಝಾರಿನಲ್ಲಿ, ಬಿಟ್ಟರೆ ಇವತ್ತು ಚೀಟಿಯಲ್ಲಿ ಬರೆದಿಡಬೇಕಾದ ಹೊತ್ತು ಬಂದಿತ್ತು.&lt;br /&gt;&lt;br /&gt;ಎರಡನೆಯದಾಗಿ ಚಪ್ಪಲಿ ಅಂಗಡಿ ಹೊಕ್ಕು ಚಪ್ಪಲಿ ನೋಡತೊಡಗಿದರೆ ಅಂಗಡಿಯವರು ನಮ್ಮ ಕಾಲಿಗೆ ಚಪ್ಪಲಿಯನ್ನು ತೊಡಿಸಲು ಸಹಾಯ ಮಾಡಿದಾಗ ಯಾಕೋ ಇರಿಸು ಮುರಿಸು. ಮೊದಲೆಲ್ಲ ಚಪ್ಪಲಿ ತಗೊಳುವಾಗ ಅಂಗಡಿಯವರು ತೊಡಿಸಿ, ನಮಗೆ ಇಷ್ಟವಾದ ಮೇಲೆಯೇ ಚಪ್ಪಲಿ ತರುತ್ತಿದ್ದುದೆಲ್ಲ ಈಗಷ್ಟು ಸೊಗಸುತ್ತಿಲ್ಲ. ಮತ್ತೇನಿಲ್ಲ, ನಮ್ಮ ಕಾಲಿಗೆ ಹೊಂದುವ ಚಪ್ಪಲಿಯನ್ನು ನಾವೇ ಧರಿಸಿ ನೋಡಲಾಗದಷ್ಟು ಪರಾವಲಂಬಿತನ ಈಗೀಗ ಇಷ್ಟವಾಗುತ್ತಿಲ್ಲ. ಚಪ್ಪಲಿಯೊಂದನ್ನು ತೊಡಿಸಿ ‘ಅವರಿಗೆ ತೋರ್ಸಿ ಮೇಡಂ’ ಅಂತ ಅಂಗಡಿಯ ಯಜಮಾನರು ನಕ್ಕು ಹೇಳಿದಾಗ ನಾನು ನಗಲಿಲ್ಲ. ಆ ಅಂಗಡಿಯವರು ಶೋಕೇಸ್ ಇಂದ ಚಪ್ಪಲಿಯನ್ನು ತೆಗೆದು ನನ್ನ ಕಾಲಿನಲ್ಲಿನ ಹಳೆ ಚಪ್ಪಲಿ ತೆಗೆಸಿ, ಹೊಸ ಚಪ್ಪಲಿ ತೊಡಿಸುವವರೆಗೂ ಪ್ರತಿಯೊಂದನ್ನೂ ಅಲ್ಲಿಯೇ ಕುಳಿತು ರವಿ ನೋಡುತ್ತಿದ್ದಾನೆ. ಇನ್ನು ನಾನು ಆ ಚಪ್ಪಲಿಯಲ್ಲಿ ಮತ್ತೆ ತೋರಿಸುವುದದರೂ ಏನನ್ನು? ಯಾಕೋ ರವಿಯ ಮುಖ ನೋಡಬೇಕೆನ್ನಿಸಿ ನೋಡಿದೆ. ಅವನು ನನ್ನ ಹಾಗೆಯೇ ಸುಮ್ಮನಿದ್ದ.&lt;br /&gt;&lt;br /&gt;ಚಪ್ಪಲಿ ಇಷ್ಟವಾಯ್ತು. ಚಪ್ಪಲಿ ಆಯ್ಕೆ ನನಗೆ ಮೀರಿದ್ದು ಅಂತ ಅಂಗಡಿಯವರು ನಿರ್ಧರಿಸಿದಂತಿತ್ತು. ಅಂಗಡಿಯವರು ಬಿಡುತ್ತಲೇ ಇಲ್ಲ ‘ಬೇಕಿದ್ರೆ ಅವರಿಗೆ ತೋರ್ಸಿ ಮೇಡಂ, ಚೊಲೋ ಉಂಟು ಚಪ್ಪಲಿ, ಹೇಳಿ ಕೇಳಿ ಬಾಟಾ ಅಲ್ವ?’ ಅಂದ್ರು. ಇನ್ನು ಆಗದ ಕೆಲಸವೆಂದು ನಿಧಾನಕ್ಕೆ ಎದ್ದು ನಿಂತು ರವಿಯ ಮುಖ ನೋಡಿ ‘ಹ್ಯಾಂಗಿದ್ದಾ?’ ಅಂತ ಕೇಳಿದೆ. ಅಂವ ನನ್ನಮುಖ ನೋಡಿದ ‘ನಿನ್ನ ಮುಖಕ್ಕೆ ಚೆನ್ನಾಗಿ ಒಪ್ಪುತ್ತದೆ’ ಎನ್ನುವವನಂತೆ. ‘ಹೀಲ್ಡ್ ಇದ್ದಿದ್ ಬ್ಯಾಡ್ದನ, ಅಣ್ಣಯ್ಯನ್ ಕಿಂತ ಎತ್ತರಕ್ಕೆ ಕಾಣ್ತ್ಯನ ನೀನು’ ಅಂದ. ಮದುವೆಯಾದಾಗಿಂದ ಬೇಸರದ ಏಕೈಕ ವಿಚಾರವೇ ಇದು! ಒಂದಿಚು ಹೀಲ್ಡ್ ಇರುವ ಚಪ್ಪಲಿ ತಗೊಂಡರೂ ಸೀರೆ ಉಟ್ಟಾಗ ನಾನು ಇವರಿಗಿಂತ ಎತ್ತರಕ್ಕೆ ಕಾಣಿಸುತ್ತೇನೆ ಅನ್ನುವುದು ಅನೇಕರ ಅಂಬೋಣ. ನನಗೋ ಅಶ್ಚರ್ಯ, ನನಗಿಂತ ೪ ಇಂಚು ಎತ್ತರ ಜಾಸ್ತಿಯಿರುವ ಇವರಿಗಿಂತ ನಾನು ಎತ್ತರ ಕಾಣಿಸುವುದಾದರೂ ಹೇಗೆ ಅನ್ನುವುದು. ಆದರೂ ರವಿ ಈ ಮಾತನ್ನು ಯಾವತ್ತೂ ಹೇಳಿರಲಿಲ್ಲ. ಇವತ್ತು ಅವನೂ ಹೇಳಿದ ಮೇಲೆ ನನ್ನ ಮನಸ್ಸಿಗೆ ಒಪ್ಪಿಗೆಯಾದ ಚಂದದ ಯಾವತ್ತಿನಂತದೇ ಫ್ಲ್ಯಾಟ್ ಚಪ್ಪಲಿಜೊತೆಯನ್ನ ನನಗಾಗಿ ಖರೀದಿಸಿ, ನನ್ನವರಿಗೂ ಹಾಗೂ ರವಿಗೂ ಇಬ್ಬರಿಗೂ ಚಪ್ಪಲಿಗಳನ್ನ ತಗೊಂಡು ಬಂದದ್ದಾಯ್ತು.&lt;br /&gt;&lt;br /&gt;ಇನ್ನು ಹೇರ್ ಕ್ಲಿಪ್ ತಗೋಬೇಕು. ಸರಿ, ರಸ್ತೆ ಪಕ್ಕದ ಅಂಗಡಿಯೊಂದಕ್ಕೆ ನುಗ್ಗಿದ್ದಾಯ್ತು. ಹೇರ್ ಕ್ಲಿಪ್, ಹೇರ್ ಬ್ಯಾಂಡ್,&lt;br /&gt;ಬ್ರೇಸ್ ಲೆಟ್’ಗಳ ವಿಚಾರಕ್ಕೆ ರವಿಯೇ ಸರಿ. ‘ಬಾರಾ.. ’ ಅಂತ ರವಿಯನ್ನ ಕರೆದೆ. ಅಂವ ಅಲ್ಲಿಯೇ ಇದ್ದ ಲೆಡೀಸ್ ಬ್ರೇಸ್ ಲೆಟ್ ಒಂದನ್ನು ನೋಡುತ್ತ ‘ಪಲ್ಲವಿಗೆ ಇಂತದೆಲ್ಲ ಒಂದಿಷ್ಟು ತಗಂಡೋಗ್ತಿ’ ಅನ್ನುತ್ತ ಬ್ರೇಸ್ ಲೆಟ್ ಒಂದನ್ನ ಕೈಗೆ ತೊಟ್ಟು ಟೆಸ್ಟ್ ಮಾಡಬೇಕೆನ್ನುವಷ್ಟರಲ್ಲಿ ಅದು ಹರಿದು ಚೆಲ್ಲಾಪಿಲ್ಲಿಯಾಗಿ ಚಂದಕ್ಕೆ ಹರಡಿಕೊಂಡಿತು. ‘ಅದೂ ಲೇಡೀಸ್ ಬ್ರೇಸ್ ಲೆಟ್ ರವೀ...’ ಅಂದೆ.&lt;br /&gt;ಇದಕ್ಕಿಂತ ಮೊದಲು ನಾನು ಹೇರ್ ಕ್ಲಿಪ್ಪೊಂದನ್ನು ಎತ್ತಿಕೊಂಡು ಕೈಯಲ್ಲಿ ಹಿಡಿದು ನೋಡುತ್ತಿರುವಂತೆಯೇ ಅದು ಮುರಿದುಬಿದ್ದಾಗ ಕಣ್ಣುಬಿಟ್ಟು ನನ್ನ ಮುಖ ನೋಡಿ ಆಮೆಲೆ ಸಣ್ಣಕ್ಕೆ ನಕ್ಕಿದ್ದ ರವಿ ಈಗ ಬ್ರೇಸ್ ಲೆಟ್ ಹರಿದು ಹೋದಾಗ ಕಣ್ಮುಚ್ಚಿಕೊಂಡ. (ಒಂದೆರಡು ಸೆಕೆಂಡುಗಳಲ್ಲಿ ಕಣ್ಬಿಟ್ಟ) ಅಂಗಡಿಯ ಓನರ್ ನಮ್ಮನ್ನು ನೋಡುತ್ತ ಕಣ್ ಕಣ್ ಬಿಡುತ್ತ ನಿಂತುಬಿಟ್ಟಿದ್ದರು. ನಾನು ಬಗ್ಗಿ ಕುಳಿತು ಒಂದೊಂದಾಗಿ ಆ ಮಣಿಗಳನ್ನ ಆರಿಸತೊಡಗಿದರೆ ರವಿಯೂ ಸಹಾಯಕ್ಕೆ ಬಂದ. ಓನರು ‘ಇರ್ಲಿ ಬಿಡಿ’ ಅಂತ ನಕ್ಕು ತಮ್ಮ ಸದ್ಗುಣವನ್ನು ಸಾರಿಯೇಬಿಟ್ಟರು. ‘ಅದ್ಕಲ್ಲ, ನಂಗೆ ಬೇಕು ಇದು, ಅದಕ್ಕೇ ಆರಿಸ್ಕೊಳ್ತಾ ಇದೇನೆ’ ಅಂತ ಹೇಳಿದಾಗ ‘ಯಾವುದಕ್ಕಲ್ಲ?’ ಅಂತ ಅವರು ಕೇಳದೇ ಅವರೂ ಸಹಾಯಕ್ಕೆ ಬಂದರು. ಮುರಿದು ಹೋದ ಕ್ಲಿಪ್ ಜೊತೆ ಹರಿದುಬಿದ್ದ ಮಣಿಗಳನ್ನೆಲ್ಲ ಪ್ಯಾಕ್ ಮಾಡಿಸ್ಕೊಂಡು, ಮಾಡಿದ ತಪ್ಪಿಗೆ ಒಂದಿಷ್ಟು ಸ್ಟಿಕರ್ಸ್ (ಬಿಂದಿ), ಹೇರ್ ಕ್ಲಿಪ್ಸ್ ಎಲ್ಲ ತಗೊಂಡು ದುಡ್ಡು ಕೊಟ್ಟು ಹೊರಬಿದ್ದಾಗ ನಮಗಿನ್ನು ಹೆಚ್ಚು ಸಮಯ ಇರಲಿಲ್ಲ.&lt;br /&gt;&lt;br /&gt;ಮಧ್ಯೆ ಮಧ್ಯೆ ಅಣ್ಣ ತಮ್ಮ ಒಬ್ಬರಿಗೊಬ್ಬರು ಕೆಲಸ ಕಾರ್ಯಗಳು ಮುಗಿದದ್ದೆಷ್ಟು, ಮಾಡಬೇಕಾದ್ದೆಷ್ಟು ಎನ್ನುವುದನ್ನ ಫೋನಿಸಿ ವಿನಿಮಯ ಮಾಡಿಕೊಳ್ಳುತ್ತ, ಅಂತೂ ಕೆಲಸಗಳನೆಲ್ಲ ಮುಗಿಸಿದೆವು. ಮುಗಿಸಿ ನಟರಾಜ್ ರೋಡಿನಲ್ಲಿ ವಾಪಸ್ ಬರುವಾಗ ಸಿಕ್ಕಾಪಟ್ಟೆ ವಾಹನ ದಟ್ಟಣೆ. ನಮ್ಮ ಹಿಂದಿನ ಗಾಡಿಯ ಮಾಣಿಯೊಬ್ಬ ‘ಬಾವಯ್ಯ...ಹಾರನ್ ಮಾಡ್ಕ್ಯೋತ ಹೋಗ್ದೇ ಇದ್ರೆ ಬೆಳಗಾದ್ರೂ ಮನೆ ಮುಟ್ತ್ವಿಲ್ಲೆ ನಾವು, ಇಲ್ಲಿ ಹಾರನ್ ಮಾಡ್ದೇ ಇದ್ರೆ ಕಳಿತಿಲ್ಲೆ...’ ಅಂತ ಸಲಹಿಸಿದ್ದಲ್ಲದೆ ಹಾರನ್ ಮಾಡುತ್ತ ಮಾಡುತ್ತ ನಮ್ಮ ಮುಂದೆಯೇ ರ್ರುಂಯ್ ಅಂತ ಹೊರಟೇ ಹೋದ. ರವಿಗೆ ಅವರು ಹೇಳಿದ್ದು ಕೇಳಿಸಿರಲಿಲ್ಲವಾದ್ದರಿಂದ ನಾನು ಅವನ ಹೆಲ್ಮೆಟ್ ಹತ್ತಿರ ಹೋಗಿ ಹೆಲ್ಮೆಟ್ ಒಳಗಿದ್ದ ಅವನ ಕಿವಿಗೂ ಕೇಳಿಸುವ ಹಾಗೆ ಸ್ವಲ್ಪ ದೊಡ್ಡ ಧ್ವನಿಯಲ್ಲಿ “ಹಾರನ್ ಮಾಡವಡೋ..’ ಅಂದೆ. ಪಕ್ಕದಲ್ಲಿದ್ದ ಕೆಲವರು ಆ ಕಡೆ ಈ ಕಡೆ ನೋಡಿದರಿರಬೇಕು ಕೂಗಿದವರು ಯಾರಿರಬಹುದು ಅಂತ. ನಾನು ಮಾತ್ರ ಆ ಕಡೆ ಈಕಡೆ ನೋಡದೇ ಕುಳಿತಿದ್ದೆ.&lt;br /&gt;&lt;br /&gt;ಹೊಸ ಹೊಸ ಧ್ವನಿಯ ಹಾರನ್ ಗಳನ್ನೆಲ್ಲ ಅಂದರೆ ಹಕ್ಕಿ ಕೂಗಿದಂಗೆ, ನಾಯಿ ಬೊಗಳಿದಂಗೆ ಇರೋಥರದ ಹಾರನ್ ಗಳನ್ನೆಲ್ಲ ಬಳಸುತ್ತ ಮೆಣ್ಸಿಕೇರಿಯಿಂದ ಭಂಡಿ ಎಲೆಕ್ಟ್ರಾನಿಕ್ಸ್ ತನಕವೂ ಒಂದೇ ವೇಗದಲ್ಲಿ ರ್ರುಂಯ್ ಅಂತ ಹೋಗುತ್ತಿದ್ದ ರವಿ, ಉಳಿದಂತೆ ಒಂದಿನಿತೂ ಬದಲಾಗದ ಈ ರವಿಯಲ್ಲಿ ಇವತ್ತು ಕಾಣಿಸಲಿಲ್ಲ. ಒಂದು ಗತಿಯಲ್ಲಿ ಗಾಡಿ ಓಡಿಸುತ್ತಿದ್ದ ರವಿಯಲ್ಲಿ ಪ್ರೌಢತೆ ಇನ್ನಷ್ಟು ಕಾಣಿಸಿತು. ಒಮ್ಮೆಯೂ ‘ನಿಧಾನಕ್ಕೆ ಹೋಗು ರವೀ..’ ಅಂತ ನಾನು ಅವನಿಗೆ ಹೇಳುವ ಪ್ರಸಂಗವೂ ಬರದೇ ನಮ್ಮಿಬ್ಬರ ನಡುವೆ ಜಗಳವೂ ಆಗಲಿಲ್ಲ.&lt;br /&gt;&lt;br /&gt;ಕೊನೆಯಲ್ಲಿ ನೀಲೇಕಣಿಯಲ್ಲಿ ಶುಂಠಿ ಸೋಡಾ ಕುಡಿವಾಗ ನನಗೂ ಕೊಡಿಸಿದ. ‘ನಿಂಗೆ ಮತ್ತೆಂತೋ ಕೊಡಸ್ತಿಕಾ...’ ಅನ್ನುತ್ತ ಖರ್ಜೂರದ ಪಾನ್ ಕೊಡಿಸಿದ. ತಿನ್ನುವಾಗ ನನ್ನ ಕೈ ಅಂಟಾಯಿತು. ಕೈತೊಳೆಯಲು ನೀರು ಬೇಕು ಅಂದೆ. ಕಣ್ಬಿಟ್ಟು ಗಾಡಿ ಹತ್ತಿ ಗಾಡಿ ಸ್ಟಾರ್ಟ್ ಮಾಡಿದ. ಅಂಟಾದ ಕೈಯ್ಯಲ್ಲಿ ಖರೀದಿಸಿದ ವಸ್ತುಗಳ ಬ್ಯಾಗ್ ಹಿಡ್ಕೊಂಡು ಗಾಡಿಯಲ್ಲಿ ಕೂತ್ಕೋಳೋಲ್ಲ ಅಂತ ಹೇಳಿದ್ದಕ್ಕೆ ‘ನೀನೇನ್ ತಲೆ ಮ್ಯಾಲ್ ಹೊತ್ಗಂಡ್ ಕುತ್ಗತ್ಯ, ಬ್ಯಾಡ್ದೇ ಹೋದ್ರೆ ಬಿಸಾಕ್ ಅತ್ಲಗೆ’ ಅಂದ. ನಾನು ಗಾಡಿಯಲ್ಲಿ ಕುಳಿತೇ ಅವನ್ನೆಲ್ಲ ಕೆಳಕ್ಕೆ ಬಿಸಾಕಿ ನನ್ನ ಮುಗ್ಧತೆಯನ್ನ ಪ್ರದರ್ಶಿಸಿದೆ. ಎಲ್ಲವನ್ನೂ ಎತ್ತಿಕೊಟ್ಟ, ಇಟ್ಕೊಂಡು ಕುಳಿತೆ.&lt;br /&gt;&lt;br /&gt;ಕೆಲಸಗಳನ್ನೆಲ್ಲ ಮುಗಿಸಿಕೊಂಡು ಮೂವರೂ ಒಟ್ಟಾಗಿ ಮನೆಗೆ ಬಂದೆವು. ಊಟ ಮುಗಿಸಿ ಒಂದೆರಡು ತಾಸು ಎಲ್ಲರೂ ಒಟ್ಟಿಗೆ ಅಪ್ಪಯ್ಯ -ಆಯಿ(ಅತ್ತೆ-ಮಾವ)ಯವರ ರೂಮಿನಲ್ಲಿ ಕುಳಿತು ಹರಟಿದೆವು. ನನ್ನ ಅಮ್ಮ, ತಮ್ಮ ಎಲ್ಲರೂ ಆವತ್ತು ನಮ್ಮ ಮನೆಯಲ್ಲಿ ಸೇರಿದ್ದುದು ಖುಷಿಯನ್ನಿಷ್ಟು ಹೆಚ್ಚಿಸಿತ್ತು.&lt;br /&gt;&lt;br /&gt;ಆ ವತ್ತು ರಾತ್ರಿ ನಿದ್ರೆ ಬರುವುದು ತಡವಾಯ್ತಿರಬೇಕು. ಆದರೂ ಬೆಳಗಾಯ್ತು. ಮಧ್ಯಾಹ್ನವೂ ಆಗಿ ಊಟವಾದ ತಕ್ಷಣ ಅಮ್ಮ ‘ಹೊರಟುಬಿಡ್ತೀನಿ, ರಾತ್ರಿ ನೀವೆಲ್ಲ ಹೊರಡುವ ಸಮಯದಲ್ಲಿ... ಬೇಡ ಈಗ್ಲೇ ಹೊರಟುಬಿಡ್ತೀನಿ’ ಅಂತ ಹೇಳಿ ಮೊಮ್ಮಗನನ್ನ ಮುದ್ದಿಸಿ, ನನ್ನ ಹಣೆಗೂ ಒಂದು ಮುತ್ತಿಟ್ಟು ಆಟೋ ಹತ್ತಿ ಮುಂದೆ ಹೋದ್ಮೇಲೆ ಕಣ್ಣೊರಿಸಿಕೊಂಡರಿರಬೇಕು. ಅಮ್ಮನ ಕಣ್ಣೀರು ಆಚೆ ಬಂದಿದ್ದೇ ಅದರೆ ಖಂಡಿತ ತಮ್ಮ ಒರೆಸಿರುತ್ತಾನೆ ಎಂಬ ಸಮಾಧಾನದಿಂದ ಮನೆಯವರೆಲ್ಲರ ಜೊತೆ ಒಳಬಂದೆ.&lt;br /&gt;&lt;br /&gt;ಸಂಜೆಯಾಗ್ತಿದ್ದ ಹಾಗೆ ಗೆಳೆಯ ಗೆಳತಿಯರು ಒಬ್ಬೊಬ್ಬರಾಗಿ ಸೇರುತ್ತಿದ್ದರೆ ಮನೆಯೊಳಗೆ ಬರೀ ನಗು ಅಪ್ಪುಗೆ. ಮಾತೆಲ್ಲ ಖರ್ಚಾಗಿ ಹೋದಂತೆನಿಸ್ತು ನಮಗೆ ಗೆಳತಿಯರಿಗೆ. ಗೆಳೆಯರೆಲ್ಲ ಸುಮ್ಮ ಸುಮ್ಮನೆ ನಗುತ್ತಲಿದ್ದರು. ‘ಬೇಗ್ನೆ ಊಟ ಮಾಡಿ ರೆಡಿಯಾಗ್ರೋ...’ ಅನ್ನುವಂಥಹ ಮಾತಿಗೂ ನಗುತ್ತಲಿದ್ದರು. ನಕ್ಕು ವಾತಾವರಣವನ್ನು ತಿಳಿಯಾಗಿಸೋದಕ್ಕೋ, ಅಥವಾ ಒಳಗೆ ನಡೆಯುತ್ತಲಿದ್ದ ಅಗಲಿಕೆಯ ನೋವನ್ನ ಕರಗಿಸಲಿಕ್ಕೋ... ಒಟ್ಟಿನಲ್ಲಿ ಹೀಗೆಲ್ಲ ಮಾಡುತ್ತಲಿದ್ದರು. ಅಂತೂ ನಮ್ಮ ನಾಲ್ವರ ಹತ್ತು ಬ್ಯಾಗುಗಳು ಮನೆಯಿಂದಾಚೆ ಬಂದಾಗ ಮನೆಯೆಲ್ಲ ಖಾಲಿಯಾಯಿತು. ನಾವೂ ಹೊರಬಂದಾಗ.....&lt;br /&gt;&lt;br /&gt;&lt;br /&gt;ಪೇಟೆಯೊಳಗೆ ಬಂದಾಗ ಬೆಂಗಳೂರಿಗೆ ಹೊರಟುನಿಂತಿದ್ದ ವಿ ಆರ್ ಎಲ್ ನಮಗೇ ಕಾಯುತ್ತಲಿತ್ತು. ನಾವು ನಾಲ್ವರು ಬಸ್ ಹತ್ತಿದೆವು. ನಮ್ಮನ್ನು ಬೀಳ್ಕೊಡಲು ಬಂದಿದ್ದ ಇಪ್ಪತ್ತೈದು ಮೂವತ್ತು ಜನರೆಲ್ಲ ಬಸ್ಸಿನ ಹೊರಗೆ ನಿಂತಿದ್ದರು. ಕಿಟಕಿಯಲ್ಲಿ ಬಗ್ಗಿ ಸೀಟಿನಲ್ಲಿ ಕುಳಿತುಕೊಳ್ಳುತ್ತ ಟಾಟಾ ಟಾಟಾ ಎನ್ನುವಾಗ ಜೀನ್ಸ್ ಕಿಸೆಯಲ್ಲಿದ್ದ ಪಾನ್ ನೆನಪಾಗಿ ತೆಗೆದೆ. ಗೆಳೆಯನೊಬ್ಬ ನಮಗಿಷ್ಟವಾಗುವ ಸ್ವೀಟ್ ಪಾನ್ ಕಟ್ಟಿಸಿ ತಂದು ಡೈನಿಂಗ್ ಟೇಬಲ್ ಮೇಲಿಟ್ಟಿದ್ದನ್ನ ಬರುವಾಗ ಅತ್ತೆ ನನ್ನ ಕೈಲಿಟ್ಟಿದ್ದರು, ಕಿಸೆಯಲ್ಲಿ ತುಂಬಿಕೊಂಡಿದ್ದೆ. ತೆಗೆದು ರವಿಯ ಪಾಲನ್ನು ಅವನ ಕೈಲಿಟ್ಟೆ. ತೆಗೆದುಕೊಂಡು ಕಿಸಿಯಲ್ಲಿಟ್ಟುಕೊಂಡ.&lt;br /&gt;&lt;br /&gt;ನಮ್ಮನ್ನು ಕಳಿಸಲು ಬಂದಿದ್ದ ಗೆಳೆಯ ಗೆಳತಿಯರು, ಮನೆಯವರು ಕೆಳಗೆ ನಿಂತಿದ್ದರು. ಅರ್ರೆ..ಅಪ್ಪಯ್ಯ ಕಾಣ್ತಾ ಇಲ್ಲೆ.... ಬಸ್ಸಿನಲ್ಲಿ ಬೇಕಾಗದಿರಬಹುದು ಅಂತ ಹಣ್ಣನ್ನು ಮನೆಯಿಂದ ತಂದಿರಲಿಲ್ಲ. ನನಗೇಂತ ಹಣ್ಣು ಕೊಳ್ಳಲು ಅಪ್ಪಯ್ಯ(ಮಾವ) ಹಣ್ಣಿನಂಗಡಿಗೆ ಹೋಗಿದ್ದರಿರಬೇಕು. ಬಸ್ಸು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಬಂದೇ ಬಿಟ್ಟರು. ಕಿಟಕಿಯಲ್ಲಿ ಹಣ್ಣು ಕೊಟ್ಟರು. ತಗೊಂಡೆ. ಇನ್ನೊಂದು ಬಾರಿ ಅವರನ್ನಪ್ಪಿ ಅಳಬೇಕೆನ್ನಿಸಿದರೂ ಬಸ್ಸು ಹೊರಟೇ ಬಿಟ್ಟಿತು. ಟಾ...ಟಾ...&lt;br /&gt;&lt;br /&gt;ಏರ್ ಪೋರ್ಟ್ ಹೊಕ್ಕಾಗ ಮಗ ಕೆಳಿದ ‘ಅಮ್ಮಾ...... ಅಪ್ಪಚ್ಚಿ ನಮ್ ಸಂತಿಗೆ ಬರ್ತ್ನಿಲ್ಯ?’ ಅಂತ. ಅಳುತ್ತಿದ್ದ ಮಗನನ್ನ ನಾನು ರಮಿಸಿದೆ ‘ಅಂವ ನಮ್ ಸಂತಿಗೆ ಬರ್ತ್ನಿಲ್ಲೆ ಮಗ, ಅಲ್ಲಿ ಪಲ್ಲವಿ ಚಿಕ್ಕಮ್ಮ ಒಬ್ಳೇ ಆಗೋಗ್ತಲ, ಅದ್ಕೇ ಅಂವ ಮತ್ತೆ ಆಷ್ಟ್ರೇಲಿಯಾಕ್ಕೆ ಹೋಗ್ತ, ಅವಂಗೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಫ್ಲೈಟ್,&lt;br /&gt;ದೇ...ಅಲ್ನೋಡು..&lt;br /&gt;ಇನ್ನೂ ಅಪ್ಪಚ್ಚಿ ಅಲ್ಲಿ ನಿತ್ಗಂಡಿದ್ದ....&lt;br /&gt;ಟಾಟಾ ಮಾಡು...&lt;br /&gt;ದೇ... ಅಲ್ಲಿ....&lt;br /&gt;ಗ್ಲಾಸಿನ್ ಹೊರಗೆ...’&lt;br /&gt;&lt;br /&gt;&lt;br /&gt;‘ಹಲೋ ಅಪ್ಪಯ್ಯ...ಯಂಗ ಫ್ಲೈಟ್ ಅಲ್ಲಿದ್ಯ, ಹೋಗಿ ಮುಟ್ಟಿದ್ಕುಳೆ ಕಾಲ್ ಮಾಡ್ತ್ಯ, ಟಾಟಾ....’&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-7222668224620288223?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/7222668224620288223/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=7222668224620288223' title='23 Comments'/><link rel='edit' type='application/atom+xml' href='http://www.blogger.com/feeds/5495085842856428066/posts/default/7222668224620288223'/><link rel='self' type='application/atom+xml' href='http://www.blogger.com/feeds/5495085842856428066/posts/default/7222668224620288223'/><link rel='alternate' type='text/html' href='http://www.shantalabhandi.com/2008_12_01_archive.html#7222668224620288223' title='ನಕ್ಕು ಬಿಡು ಒಮ್ಮೆ...'/><author><name>ಶಾಂತಲಾ ಭಂಡಿ</name><uri>http://www.blogger.com/profile/00119083151368093886</uri><email>noreply@blogger.com</email><gd:image rel='http://schemas.google.com/g/2005#thumbnail' width='30' height='32' src='http://4.bp.blogspot.com/-VHKqss3vMaw/Tx9P-LTWX7I/AAAAAAAACDE/rTmQeZ96FAA/s220/profilepic.jpg'/></author><thr:total>23</thr:total></entry><entry><id>tag:blogger.com,1999:blog-5495085842856428066.post-3391151749253031710</id><published>2008-12-20T12:51:00.000-08:00</published><updated>2009-01-13T12:05:43.272-08:00</updated><category scheme='http://www.blogger.com/atom/ns#' term='ಎಲ್ಲರಿಗೂ ನಮಸ್ಕಾರ'/><title type='text'>ಕೊನೆಯ ಕನಸಿಗೊಂದು ನಮನ</title><content type='html'>ಕನಸಿನಂಗಡಿಯೊಡತಿ ನಾನು&lt;br /&gt;ನನಗೆ ಲಾಭ ನಷ್ಟವಿಲ್ಲ&lt;br /&gt;ಬಿದ್ದರೆ ಒಡೆಯುವವು&lt;br /&gt;ಬೆಳೆಸಿದರೆ ಬೆಳೆವವು&lt;br /&gt;ಬಿದ್ದು- ಬೆಳೆಯುವ ನಡುವೆ ಲಾಭನಷ್ಟವೆಲ್ಲ&lt;br /&gt;&lt;br /&gt;&lt;br /&gt;ಕೊಳುವಾಗ ಕನಸುಗಳ&lt;br /&gt;ಬೆಲೆಯ ಕೇಳುವುದಿಲ್ಲ&lt;br /&gt;ಮಾರಿಬಂದ ಲಾಭಕ್ಕೆ&lt;br /&gt;ಮಾರುಹೋಗುವುದಿಲ್ಲ&lt;br /&gt;ಕೊಡು-ಕೊಳುಗಳ ನಡುವೆ ಲಾಭನಷ್ಟವೆಲ್ಲ&lt;br /&gt;&lt;br /&gt;ಸತ್ತರೀ ಕನಸುಗಳು&lt;br /&gt;ನೆನಪಾಗಿ ಬರುವವು&lt;br /&gt;ಬೆಳೆಯುತಲಿ ಬದುಕಿದರೆ&lt;br /&gt;ನನಸಾಗಿ ನಲಿಯುವವು&lt;br /&gt;ನೆನಪು-ನನಸುಗಳ ನಡುವೆ ಲಾಭನಷ್ಟವೆಲ್ಲ&lt;br /&gt;&lt;br /&gt;ನೆನಪು ಕನಸುಗಳ ನಡುವೆ ಲಾಭ ನಷ್ಟವಿಲ್ಲ&lt;br /&gt;&lt;br /&gt;ಕನಸುಗಳ ಹುಗಿಯೆ&lt;br /&gt;ಘೋರಿಯಾಯ್ತದುವೆ&lt;br /&gt;ಸುಟ್ಟರೆ ಕಟ್ಟಿಗೆಯಡಿ&lt;br /&gt;ಸುಡುಬೂದಿಯಾಯ್ತು&lt;br /&gt;ಸುಟ್ಟು-ಹುಗಿಯುವ ನಡುವೆ ಲಾಭನಷ್ಟವೆಲ್ಲ&lt;br /&gt;&lt;br /&gt;ನಾನು ಅಂಗಡಿಯ ಒಡತಿ&lt;br /&gt;ಕನಸ ಕಾಣುವುದನಿವಾರ್ಯ&lt;br /&gt;ಅಂಗಡಿಯಿದಿರು ನನ್ನಂತ ನೂರುಜನ&lt;br /&gt;ಇಕೋ ಕೊಳ್ಳಿ ಕನಸುಗಳ&lt;br /&gt;ಕನಸ ಕಾಣುವರಿಗೆಂದೂ ಲಾಭನಷ್ಟವಿಲ್ಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5495085842856428066-3391151749253031710?l=www.shantalabhandi.com' alt='' /&gt;&lt;/div&gt;</content><link rel='replies' type='application/atom+xml' href='http://www.shantalabhandi.com/feeds/3391151749253031710/comments/default' title='Post Comments'/><link rel='replies' type='text/html' href='http://www.blogger.com/comment.g?blogID=5495085842856428066&amp;postID=3391
