May 24, 2010

ಓದಿದ ಮೇಲೆ ಮತ್ತು ಬರೆಯುವುದರೊಳಗೆ

ಓದಿ ಮುಗಿದ ಮೇಲೆ ಏನನ್ನಿಸಿತು ಅಂತ ಹೇಳು ಅಂದಿದ್ದೆಯಲ್ಲ, ಹೇಳಲೇಬೇಕು ಅನ್ನುವಂಥದ್ದೇನೂ ಅನ್ನಿಸಲಿಲ್ಲ. ನನ್ನೊಳಗೇ ಇಟ್ಟುಕೊಳ್ಳುವಂಥದ್ದಾಗಿ ಒಂದಿಷ್ಟು ಅನ್ನಿಸಿತು. ಏನು ಗೊತ್ತಾ? ಮುಕುಂದ ಬಿಟ್ಟುಹೋಗಿ ಬದುಕು ಖಾಲಿಯಾದರೂ ಸರಿಯೇ ಶಿವರಾಮ ನೀನೇ ಆಗಿದ್ದ ಪಕ್ಷ ಶರ್ವಾಣಿ ನಾನೇ ಆಗಬೇಕು ಅನ್ನಿಸಿತು. ಹೆಂಡತಿ ಬಾವಿಗೆ ಬೀಳುವುದನ್ನು ಕಂಡೂ ಸುಮ್ಮನಿದ್ದ ಶಿವರಾಮ ನೀನೇ ಆಗಿದ್ದಲ್ಲಿ ತಾಯಿಯನ್ನು ಕಳಕೊಂಡರೂ ಸರಿ ಶರ್ವಾಣಿ ನಾನೇ ಆಗಬೇಕು ಅನ್ನಿಸಿತು.
ಒಟ್ಟಿನಲ್ಲಿ ನನಗೆ ಅನ್ನಿಸುವುದೆಂದರೆ ನಿನ್ನ ಮಗಳ ಸ್ಥಾನದಲ್ಲಿ ಯಾರೇ ಇದ್ದಿರಲಿ, ಅದು ಸದಾ ನಾನೇ ಆಗಬೇಕು ಅನ್ನಿಸಿತು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

ಖಾಲಿ ಕಣಜ

.