ಗೆಳೆಯ/ಗೆಳತಿಯರೇ...
ನಮ್ಮೆಲ್ಲರ ಪ್ರೀತಿಯ, ಮುದ್ದಿನ, ಚಂದದ ದೋಣಿಯೊಂದು ದೂರತೀರಯಾನ ಹೊರಟಿದೆ. ಹಿಡಿದು ನಿಲ್ಲಿಸುವ ಬನ್ನಿ. ಸಣ್ಣಗೆ ನಗುವ ತಣ್ಣಗಿನ ಮೌನದಲಿ, ಮುದ್ದಿಸುವ ಮಾತಿನಲಿ, ತಂಪುಗಾಳಿಯಲಿ, ಇಂಪು ಮುಸ್ಸಂಜೆಯಲಿ, ಚುಮುಚುಮು ನಸುಕಿನಲಿ, ಅರೆಬಿರಿದ ಬೆಳಗಿನಲಿ, ಬೆಳಕರೆವ ಹಾದಿಯಲಿ, ಎಳೆಬೆಳದಿಂಗಳಲಿ, ದಿನಬೆಳೆದ ಚಂದ್ರನಡಿ ಸದ್ದಿರದ ತಂಗಾಳಿಯೊಲರಳಿ ಘಮ ಸೂಸಿದ ಮೊಗ್ಗಿನಲಿ, ಗರಿಗರಿಯ ಮಂಜಿನಲಿ, ಬಿಳಿಬೆರೆತ ಇಬ್ಬನಿಯಲಿ, ಭಾವ ಬಿರಿದರಳಿದ ಹೂವಿನಲಿ, ಬಳ್ಳಿಯಂಚಲರಳಿದ ಗೊಂಚಗೊಂಚಲು ಮಲ್ಲಿಗೆಯಲಿ, ನೀರಪರದೆಯಲಿ ಬೆರಳಂಚು ಬೆರೆತಾದ ಆ ಸಣ್ಣ ಅಲೆಯಲ್ಲಿ ನಮ್ಮನೆಲ್ಲ ನವಿರಾಗಿ ಹೊತ್ತೊಯ್ದು ತೀರದಲೆಗಳಲಿ ತೇಲಿಸಿ ನಲಿನಲಿಸಿದ ದೋಣಿಯೊಂದು ಯಾನ ಹೊರಟಿದೆ, ಹಿಡಿದು ನಿಲ್ಲಿಸುವ ಬನ್ನಿ.
ಯಾನವಿರಾಮದಲಿ ಪಯಣಿಸಿದ ಹಾಡು ಇಲ್ಲಿ ಕೆಳಗಿದೆ ನೋಡಿ, ದಯಮಾಡಿ ಹಿಡಿದು ನಿಲ್ಲಿಸಿ ದೋಣಿ...
-ಶಾಂತಲಾ ಭಂಡಿ.
ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..
ಕಣ್ಣಿಗೆ ಕಂಡದ್ದೆಲ್ಲವನ್ನೂ
ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;
ಒಳಗೆ ಮೂಡಿದ್ದೆಲ್ಲವನ್ನೂ
ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.
ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.
ಇಷ್ಟಕ್ಕೂ ಭಾವವೊಂದು
ನನ್ನದೇ ಮಾತಾಗಿ ದಾಖಲಾಗಲೇಬೇಕೆ!
ಗುಳ್ಳೆ-
ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..
- ಎಲ್ಲ ಗುಳ್ಳೆಗಳೂಒಡೆದಿವೆ,
ಈ ದಾರಿ ಕೊನೆಗೊಂಡಿದೆ.
ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ
ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..
-ಪ್ರೀತಿಯಿಂದ
ಸಿಂಧು
September 29, 2008
September 28, 2008
ನೋವೇ ನೀ ನಗುವೆಯೇನೆ?
ಕನಸುಗಳೆಲ್ಲ ರೆಕ್ಕೆ
ಬಿಚ್ಚಿಹಾರಿದವು
ನಡೆದದ್ದನ್ನೆಲ್ಲ ಮರೆತು
ಕೊನೆಗೂ ತಲುಪಿದ್ದೆಲ್ಲಿಗೆ ಗೊತ್ತೇನೋ
ನಿನ್ನ ನೆನಪ ಗೂಡಿಗೆ
ಕವಿತೆಗೆ ಕಾದು ಕಾದು
ಓದಲು ಹವಣಿಸಿದ
ಮನಕವಿದ ಹುಡುಗನೇ
ಕೊನೆಗೆ ನೀ ಕವಿಯಾದದ್ದು ಹೇಗೆ?
ವೈಯಕ್ತಿಕ ಪ್ರಶ್ನೆಗಳಿಗೆಲ್ಲ
ಉತ್ತರ ಸಾರ್ವರ್ತ್ರಿಕವಾದಾಗಲೇ
ಅರಿವಿಗೆ ಬಂದಿದ್ದು
ನೀನು ಮನದೊಳಗಿಲ್ಲ
ಮನೆಹೊರಗಿದ್ದೀಯ
ಎಂಬುದು
ಮನದ ನೆಲವೊಣಗಿ
ಮಳೆಯಹನಿಗಾಗಿ ಹಪಹಪಿಸಿ
ಕೊನೆಗೂ ಕಣ್ಣಬಾಂದಳದಿಂದ
ಸೋನೆಸುರಿದೇ ಬಿಟ್ಟಿತು
ಅದೇ ಕಣೋ .. ಕಣ್ಣೀರು
ಕಣ್ಣಬಟ್ಟಲಲಿ ಬಣ್ಣಬಣ್ಣಗಳು
ಕಲೆತು
ಕಣ್ಣಂಚ ಕುಂಚದಲಿ ನವಿರ ಎಳೆ ಹೊರಳಿ
ಬಣ್ಣಬಣ್ಣದ ಕಲೆಗೂ
ರಂಗೇರುತ್ತಿತ್ತು ಹುಡುಗಾ
ಕೊನೆಯಚಿತ್ರವರಳಿದ್ದು ಮಾತ್ರ
ನೀರೊಳಗೆ
ಬಿಚ್ಚಿಹಾರಿದವು
ನಡೆದದ್ದನ್ನೆಲ್ಲ ಮರೆತು
ಕೊನೆಗೂ ತಲುಪಿದ್ದೆಲ್ಲಿಗೆ ಗೊತ್ತೇನೋ
ನಿನ್ನ ನೆನಪ ಗೂಡಿಗೆ
ಕವಿತೆಗೆ ಕಾದು ಕಾದು
ಓದಲು ಹವಣಿಸಿದ
ಮನಕವಿದ ಹುಡುಗನೇ
ಕೊನೆಗೆ ನೀ ಕವಿಯಾದದ್ದು ಹೇಗೆ?
ವೈಯಕ್ತಿಕ ಪ್ರಶ್ನೆಗಳಿಗೆಲ್ಲ
ಉತ್ತರ ಸಾರ್ವರ್ತ್ರಿಕವಾದಾಗಲೇ
ಅರಿವಿಗೆ ಬಂದಿದ್ದು
ನೀನು ಮನದೊಳಗಿಲ್ಲ
ಮನೆಹೊರಗಿದ್ದೀಯ
ಎಂಬುದು
ಮನದ ನೆಲವೊಣಗಿ
ಮಳೆಯಹನಿಗಾಗಿ ಹಪಹಪಿಸಿ
ಕೊನೆಗೂ ಕಣ್ಣಬಾಂದಳದಿಂದ
ಸೋನೆಸುರಿದೇ ಬಿಟ್ಟಿತು
ಅದೇ ಕಣೋ .. ಕಣ್ಣೀರು
ಕಣ್ಣಬಟ್ಟಲಲಿ ಬಣ್ಣಬಣ್ಣಗಳು
ಕಲೆತು
ಕಣ್ಣಂಚ ಕುಂಚದಲಿ ನವಿರ ಎಳೆ ಹೊರಳಿ
ಬಣ್ಣಬಣ್ಣದ ಕಲೆಗೂ
ರಂಗೇರುತ್ತಿತ್ತು ಹುಡುಗಾ
ಕೊನೆಯಚಿತ್ರವರಳಿದ್ದು ಮಾತ್ರ
ನೀರೊಳಗೆ
September 25, 2008
ನೀಲ ಬೆಳದಿಂಗಳು
ಬೆಳಕು ಅರೆಬಿರಿದು ಕಣ್ಣುಮಿಟುಕಿಸುತ್ತಿದೆ ಚುಮು ಚುಮು ತುಂತುರಿನಲ್ಲಿ. ಅಂಗಳದ ಮಣ್ಣು ತುಂತುರ ನೆನೆದು ನಗುತ್ತಿದೆ. ಕೊಂಚವೇ ಹಸಿಯಾಗುತ್ತ ನಾಚುತ್ತಲಿದೆ. ಘಮ ಘಮವೆನಿಸುತ್ತದೆ. ಸೀರೆಯಂಚನ್ನ ಚೂರು ಮೇಲಕ್ಕೆತ್ತಿ ಪಾದಗಳನ್ನ ಅಂಗಳದ ಹಸಿಯೊಳಗಿಡುತ್ತಿದ್ದೇನೆ. ತಂಪು, ತಂಪೇ ಇದು. ಆಹ್ಲಾದ. ಮಳೆಯಲ್ಲಿ ಮನೆಯೊಳಗೆ ಕುಳಿತು ಹೀರುವ ಬಿಸಿಕಾಫಿಗಿಂತ ಆಹ್ಲಾದ. ನಿನ್ನ ನೆನಪಾಗುತ್ತೆ. ನೀನಿದ್ದರೆ ಇನ್ನೂ ಖುಷಿ ಪಡುತ್ತಿದ್ದೆಯೆನಿಸಿ ನಗು . ಮೊನ್ನೆ ತಂದ ಕಾಲ್ಗೆಜ್ಜೆ ಕೆಸರೊಂದಿಗೆ ಮಿಲನವಾಗುತ್ತೆ. ಎಲ್ಲವೂ ಹೊಸತು, ಹೊಸತನದ ಗುಂಗಿನಲ್ಲಿ ಅಂಗಳದಲ್ಲಿ ಸಾಲು ಚುಕ್ಕಿಗಳಿಳಿದು ಮೂಡುತ್ತವೆ. ಒಂದೊಂದು ಚುಕ್ಕಿಯನ್ನೂ ಸೇರಿಸುತ್ತ ಸೇರಿಸುತ್ತ ಮನಸಿಗೆ ಬಂದಂತೆ ನನ್ನಿಷ್ಟದ ಹಾಗೆ ಗೆರೆ ಎಳೆಯುತ್ತ ಸುತ್ತದಿಕ್ಕುಗಳಿಂದೆಲ್ಲ ಕತ್ತು ಹೊರಳಿಸಿ ಬಗ್ಗಿಸಿ ತಿರುವುತ್ತ ಆಹ್! ಎಂದುಕೊಳ್ಳುತ್ತೇನೆ. ಅಲ್ಲೊಂದು ಸುಂದರ ರಂಗೋಲೆ, ನಾನು ಬಿಡಿಸಿದ ನನ್ನೊಳಗಿನ ಚಿತ್ರ ಅಂಗಳದ ಬಾಗಿಲಿಗೆ ರಂಗೋಲೆ. ನೀನಿರಬೇಕಿತ್ತು ಎನಿಸುತ್ತೆ. ಸುತ್ತೆಲ್ಲ ನೋಡುತ್ತೇನೆ. ಹಸಿರೆಲೆಗಳೇ ಹೂಬಿಟ್ಟಂತೆ! ಒಂದೊಂದು ಎಲೆಗೂ ನೀಲಿ ನೀಲಿ ಹೂಗಳ ಗುಚ್ಚ. ಆಗಸವೂ ಮಂದ ನೀಲಿ. ತುಂತುರು. ಎಳೆಬಿಸಿಲು ಯಾರನ್ನೋ ಚುಂಬಿಸಲೆಂದೇ ಬಂದಿರುವಂತೆ, ಹಸಿರೆಲೆಗಳ ನಡುವೆ ನೀಲಿ ಹೂಗಳಲಿ ನೆಲೆಯಾಗುವಂತೆ ಹರಡಿಕೊಳ್ಳುತ್ತದೆ. ಹೂಗಳು ನನ್ನ ನೋಡಿ ಮಂದಹಾಸ ಬೀರುತ್ತವೆ. ನಾನೂ ನಗುತ್ತೇನೆ.
ನನ್ನದೇ ಗುಂಗಿನಲ್ಲಿ ಕತ್ತೆತ್ತಿದರೆ ಸೂರ್ಯನ ಬಣ್ಣ ಬೆಳಕಾಗುವುಷ್ಟರಲ್ಲಿ ಬೇರೆಯದೇ! ಆ ಬಣ್ಣವೂ ಇಷ್ಟವೇ ಎನಿಸಿಬಿಡುತ್ತದೆ. ಅವನು ಯಾವ ಬಣ್ಣದಲ್ಲಿದ್ದರೂ ನನಗಿಷ್ಟವೇ,ಅವನೇ ಹಾಗೆ, ಬೆಳಿಗ್ಗೆ, ಮಧ್ಯಾಹ್ನ ಸಂಜೆಯೊಳಗೆ ಬಣ್ಣ ಬದಲಾಯಿಸೋದು ಹೊಸತೇನಲ್ಲ ಅನಿಸಿ ಅವನ ನೆನೆದು ಮುದ್ದುಬರುತ್ತೆ. ಮುಗುಳ್ನಕ್ಕು ಕಣ್ಣುಮಿಟುಕಿಸಿ ಮಗುವಾಗುತ್ತೇನೆ. ತುಂತುರುವೊಂದು ಆಗಸದಿಂದ ಕಣ್ಣಂಚಿಗೆ ಬಂದು ‘ನನಗಿಂತ ನಿನ್ನ ಮನ ತಣ್ಣಗಿದೆಯಲ್ಲೆ, ಮನಸನ್ನೊಂಚೂರು ಬಿಸಿಲಿಗೆ ಹರವು, ಸರಿಹೋಗುತ್ತೆ’ ಪಿಸುನುಡಿದು ಕೆನ್ನೆಗುಂಟ ಕಂಬನಿಯ ಹಾದಿಯನ್ನ ಹಿಡಿದು ನನ್ನೆದೆಗಿಳಿದು ಆರಿ ಹೋಗತ್ತೆ. ಮತ್ತೆ ಒಂಟಿಯೆನಿಸುತ್ತೆ. ಕತ್ತು ನೇರವಾಗಿ ಸುತ್ತ ನೋಡಿದರೆ ಸುತ್ತಲಿನ ಪ್ರಕೃತಿ ನನ್ನೆಡೆಗೆ ಮುತ್ತಿಕೊಂಡು ಕಳೆದುಹೋಗುತ್ತೇನೆ. ಅಂಗಳವನ್ನು ಇನ್ನಷ್ಟು ಚಂದ ಮಾಡುವ ಹುಮ್ಮಸ್ಸು.ತುಂತುರುವಿನ ಸಾನ್ನಿಧ್ಯದಲ್ಲೂ ಇಬ್ಬನಿಯ ನೆನಪು. ಹಾಡೊಂದನ್ನ ಗುನುಗುತ್ತೇನೆ.
"ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ"
ಹಾಡುಮುಗಿವಂತೆ ಅಂಗಳ ಮಂಗಳದಮನೆಯಾಗುತ್ತದೆ. ಸುತ್ತೆಲ್ಲ ಕಣ್ಣು ಹಾಯಿಸಿ ನನ್ನೊಳಗೇ ಹಿಗ್ಗುತ್ತೇನೆ. ಅಂಗಳದ ತುಂಬೆಲ್ಲ ಸಂತಸದ ಹರಿವು. ನೀಲಿಸೀರೆಯ ನಿರಿಗೆಗಳನ್ನ ಉದ್ದಕ್ಕೆ ಅಲೆಸುತ್ತ ಅಂಗಳದಲ್ಲೆಲ್ಲ ನಡೆದಾಡುತ್ತೇನೆ. ನಾಲ್ಕು ಹೆಜ್ಜಯಿಡುವಷ್ಟರಲ್ಲಿ ನನ್ನದೇ ಹೆಜ್ಜೆಗುರುತುಗಳ ಅಲ್ಲಿ ಕಂಡು ನಾಚುತ್ತೇನೆ. ಅಲ್ಲೆಲ್ಲೋ ನೀನು ಅವಿತು ಕುಳಿತಿರಬಹುದೆನಿಸುತ್ತದೆ ಇದನ್ನೆಲ್ಲ ನೋಡುತ್ತ, ಭಯ ಆವರಿಸಿ ಕೈಯೊಳಗಿನ ಹೂವಿನ ಪಾತ್ರೆ, ರಂಗೋಲೆ ಬಟ್ಟಲುಗಳನ್ನ ಸರಕ್ಕನೆ ಎತ್ತಿಕೊಂಡು ಅಂಗಳದಿಂದ ಮಾಯವಾಗುತ್ತೇನೆ.
ಬಿಸಿಯಕಾಫಿ ಬಟ್ಟಲ ಹಿಡಿದು ಬರುವಷ್ಟರಲ್ಲಿ ನೀನಲ್ಲಿ ಕುಳಿತು ತಂಬೂರ ನುಡಿಸುತ್ತಿರುತ್ತೀಯ. ನಾನದನು ನಿಧಾನಕ್ಕೆ ಪಕ್ಕಕ್ಕಿಟ್ಟು ಕಾಫಿಬಟ್ಟಲನ್ನು ಕೈಯೊಳಗಿತ್ತು ಪಕ್ಕ ನಿಲ್ಲುತ್ತೇನೆ. ನೀನ್ಯಾವತ್ತಿನಂತೆ ‘ನೀಲಾ’ ಅಂತ ಕರೆಯೋದಿಲ್ಲ. ನೀಲಿಯಂಗಳದ ತುಂಬೆಲ್ಲ ನೀಹಾರ! ಸುತ್ತಲಿನ ನೀಹಾರ ಕೂಡ ನೀರಸವೆನಿಸುತ್ತದೆ. ಬಿಸಿಲಿಗೂ ಬೇರೆಯದೇ ಬಣ್ಣ. ನೂಪುರದ ಸದ್ದಡಗಿ ನೀರವ. ‘ಅಂಗಳ ಹೇಗಿದೆ’ ಕೇಳುತ್ತೇನೆ. ‘ಆತ್ಮರತಿ ಅನಿಸುತ್ತಿಲ್ಲವಾ’ ನಿನ್ನ ಧ್ವನಿಯೊಳಗಿನ ಭಾವ ಕೇಳಿಸುವುದಿಲ್ಲ, ಮಾತು ಮಾತ್ರ. ನಿಲ್ಲದೆ ಹೊರಟುಹೋಗುತ್ತೀಯ. ‘ನಿನ್ನಮನೆ ಬೀಗದಕೈ,ನನಗಿದು ಭಾರ, ನೀನಿಟ್ಟುಕೋ’ ಅಂತ ಅಂಗಲಾಚಿದ್ದು ಕೇಳದಷ್ಟು ಆಳಕ್ಕಿಳಿದ ಯೋಚನೆ ನಿನ್ನಾಳವನ್ನು ಅಲುಗಿಸಗೊಡುವುದಿಲ್ಲ, ನಾನೂ ಮೌನಿಯಾಗಿ ಮನೆಯೊಳಗಡಿಯಿಡುತ್ತೇನೆ.
ಮತ್ತೆ ವಾಪಸಾಗುವಷ್ಟರಲ್ಲಿ ಅಂಗಳದ ಅಲಂಕಾರವೇ ಹೊಸತೆನಿಸುತ್ತದೆ. ಹಸಿರುಗಿಡದ ನೀಲಿಹೂಗಳ ಬಿಟ್ಟು ನಾನಿತ್ತ ರಂಗೋಲೆಯ ಹರಿವಿಲ್ಲ, ಬೆಳ್ಳಿಚುಕ್ಕೆಗಳ ಬೆಳದಿಂಗಳಿಲ್ಲ, ಸುತ್ತ ಬಳ್ಳಿಗಿಡದ ನಿಲುವಿಲ್ಲ. ನೀಲಿ ಬಣ್ಣದ ಹೂಗಳ ನಡುವೆ ನೀಲ ನಕ್ಷತ್ರಗಳು, ಸುತ್ತ ನೀಲಬೆಳದಿಂಗಳು ಮಾತ್ರ ನೆಲೆಯಾಗಿರುತ್ತವೆ. ಹೊಸತೆನಿಸುತ್ತದೆ. ಅಲ್ಲಿ ನನ್ನ ಹೆಜ್ಜೆಯ ಗುರುತನ್ನೆಲ್ಲ ಯಾರೋ ಅಳಿಸಿದ ನೋವು ಕಾಡುತ್ತದೆ. ಅದು ನೀನೆ ಅನ್ನುವುದಕ್ಕೆ ಅನುಮಾನವೇ ಇರೋಲ್ಲ. ಕೋಪದಿಂದ ನಿನ್ನ ಕಣ್ಣುಗಳ ದಿಟ್ಟಿಸುತ್ತೇನೆ, ಅಲ್ಲಿಯೂ ನೀಲ ಹೊಳಪು. ಕೇಳುತ್ತೇನೆ ‘ನಾನು ಬಡವ ಅನ್ನುತ್ತಿದ್ದೆಯಲ್ಲ, ಒಲವೇ ನಮ್ಮ ಬದುಕಾಗಿರುವಾಗ ಇಷ್ಟು ದುಬಾರಿಯ ನೀಲ ಹೊಳಪು ನಿನ್ನ ಕಣ್ಣುಗಳಿಗೆ ಹೇಗೆ ಬಂತು? ಅಂಗಳದಲ್ಲಿ ನೀಲ ನಕ್ಷತ್ರಗಳ ತಂದಿಟ್ಟವರಾರು?’ ಅಂತ. ಮಾತು ಕಳೆದವನಂತೆ ನೀಲಿಗಿಡಗಳ ನೆಡುವುದರಲ್ಲಿ ನೀನು ಮಗ್ನನಾಗಿದ್ದು ಅಳು ಬರಿಸುತ್ತದೆ. ಮುಖಕ್ಕೆ ಸೆರಗು ಮುಚ್ಚಿಕೊಂಡು ಹೊರಟುಬಿಡುತ್ತೇನೆ. ಮನಸ್ಸು ತಡೆಯದೇ ಮತ್ತೆ ವಾಪಸ್ಸಾದರೆ ಅಲ್ಲಿ ನೀನಿರುವುದಿಲ್ಲ. ಅಂಗಳದ ತುಂಬ ನೀಲಿ ಹೂ, ನಕ್ಷತ್ರ, ನೀಲಿ ಬೆಳಕು ಮತ್ತು ಬೆಳದಿಂಗಳು ಹಗಲಿನಲ್ಲೂ, ದೂರದಲ್ಲೊಂದು ನನ್ನದೇ ಹೆಜ್ಜೆಗುರುತು.
ಏನಾಗುತ್ತಿದೆ ಅಂತ ಅರಿವುದರೊಳಗೆ ಒಪ್ಪಓರಣಗಳನೆಲ್ಲ ಕಿತ್ತುಬಿಸಾಕುತ್ತೇನೆ. ಅರಿವನ್ನೆಲ್ಲ ಸಂಪೂರ್ಣಕಳೆದುಕೊಂಡು ಹಲುಬುತ್ತೇನೆ,ಅಳುತ್ತೇನೆ. ಮೌನಿ ನೀನು, ನೀನಿದ್ದರೂ ಮಾತು ಸಿಗುತ್ತಿರಲಿಲ್ಲ ಆ ಹೊತ್ತಿಗೆ ಅನ್ನುವದನರಿತೂ ಅಂಗಳದ ತುಂಬೆಲ್ಲ ಹರಿದಾಡುತ್ತ ಬಿಕ್ಕುತ್ತೇನೆ "ಯಾರು ಹೇಳ್ತಾರೆ ಬೆಳಗಿಗೆ ಬೆಳಕಿದೆ ಅಂತ. ನೋಡು ಬೆಳಗಿಗೆ ಬಣ್ಣವೂ ಇಲ್ಲ, ಬೆಡಗೂ ಇಲ್ಲ. ಬೆಳಗು ಬಂಧನ. ನೀನು ಮಾತಾಡ್ಬೇಡ, ನಂಗಿಷ್ಟವಾಗೋಲ್ಲ. ನಿನ್ನ ಧ್ವನಿ ನನಗೆ ಹಿಡಿಸೋಲ್ಲ. ಇನ್ನು ಮೇಲೆ ಹಾಡಬೇಡ. ಆ ತಂಬೂರವಿದೆಯಲ್ಲ! ಅದರ ತಂತಿಗಳನ್ನ ಕಿತ್ತು ಬಿಸಾಕಿದ್ದೇನೆ. ಅದು ಹೇಗೆ ನುಡಿಸುತ್ತೀಯೋ ನಾನೂ ನೋಡುತ್ತೇನೆ. ಹಾರ್ಮೋನಿಯಂ ಇದೆಯಲ್ಲ, ಅದರ ಮನೆಗಳೆಲ್ಲ ನೋಡು ಚೂರಾಗಿ ಬಿದ್ದಿವೆ ನನ್ನೆದೆ ಗೂಡಿನ ಹಾಗೆ. ಯಾವುದೋ ಹಾಡು ಕೇಳಿಸಿದೆಯಲ್ಲ..ನೋಡು ಅದಕ್ಕೆ ಧ್ವನಿಯೇ ಇಲ್ಲ.ಅಥವಾ ನನ್ನ ಕಿವಿ ಸತ್ತು ಹೋಗಿರಬೇಕು ನಿನ್ನ ಮಾತುಗಳ ಹಾಗೆ.ಹಾಡು ಅಲ್ಲಿ ಬಿದ್ದಿದೆ ನೋಡು ಕಾಗದ ಚೂರೊಳಗಿನ ದೋಣಿಯಾಗಿ! ತೇಲುವಷ್ಟು ನೀರಿಲ್ಲದೆ ತುಂತುರಲ್ಲಿ ನೆನೆದು ನೀಲಿ ನೀಲಿಮಸಿಯನೆಲ್ಲ ಹೀರಿಕೊಂದು ನೀಲಿಯಾಗಿ ಬಿದ್ದಿದೆ.
ನಾನು ನಿನ್ನ ಹಾಗಲ್ಲ ನೋಡು, ನಿನಗೊಂದು ಬದುಕಿದೆ, ಆ ಬದುಕಿಗೆ ನೀಲಿಯ ಬಣ್ಣವಿದೆ. ‘ನೀನೋ ಬೆಳದಿಂಗಳು’ ಅಂತಿದ್ಯಲ್ಲ!ಹೌದಲ್ಲವಾ? ನಗುವಲ್ಲಿ ಇಂದು ಬೆಳದಿಂಗಳಿಲ್ಲ. ನಗು ಬೆಳದಿಂಗಳಲ್ಲ ಅಂತ ನಾನು ಹೇಳಿರ್ಲಿಲ್ಲ ನಿಂಗೆ. ನೀನು ಆವತ್ತೇ ಅರ್ಥ ಮಾಡ್ಕೋಬೇಕಿತ್ತು. ನನ್ನ ಕೋಪವೆಂದರೆ ಅಳು ಮಾತ್ರ. ಅಳುವನ್ನ ನೀನು ನೋಡಿಲ್ಲ. ಅದಕ್ಕೇ ಕೋಪವೂ ಚಂದವೇ ಅಂದ್ಯಲ್ಲ. ಇನ್ನೊಂದಿಷ್ಟು ಸಾಲುಗಳು ಬೇಕಿದ್ದವು ನಿನಗೆ, ಅದಕ್ಕೆ ಕೋಪದಲ್ಲೂ ಚೆಲುವನರಸಿದ್ದು. ಬಿಸಿ ಕಾಫಿ ಆರುವ ತನಕವೂ ನಿಂತಲ್ಲೇ ನಿಂತಿದ್ದೆನಲ್ಲ. ನಿನ್ನ ಕಣ್ಣುಗಳು ಅಲ್ಲಿ ಏನನ್ನೋ ಅರಸುತ್ತಿದ್ದವು, ನನಗಾಗಿ ಅಲ್ಲ, ಕಳೆದುಕೊಂಡಿದ್ದನ್ನೇನೋ, ಇನ್ನೇನೋ ಪಡೆಯಲಿಕ್ಕಾಗಿ.
ನೀನು ಏನು ಅಂತ ಚೆನ್ನಾಗಿ ಗೊತ್ತಿತ್ತು, ಗೊತ್ತಿದೆ, ನಿನ್ನಂಥವರೇ ಇಷ್ಟವಾಗೋದು, ಯಾಕೆ ಹೇಳು. ದುರ್ಜನರ ಸಂಗಕ್ಕಿಂತ ಸಜ್ಜನರೊಡನೆ ಜಗಳ ಲೇಸು." ಹಲುಬುತ್ತಿರುವಂತೆ ಮಧ್ಯಾಹ್ನ ಅಂಗಳವನಾವರಿಸುತ್ತದೆ. ನಿಂತಲ್ಲೆ ಕುಸಿದು ಬೀಳುತ್ತೇನೆ ನಿನ್ನ ಬರುವಿಕೆಯ ಹಾದಿಯಲ್ಲಿ.
ಎಚ್ಚರವಾಗುತ್ತದೆ.ನೀಲಿಯ ಪರದೆಯೊಳಗೆ ನೀಲಿ ಮಂಚದ ನೀಲಿ ಹಾಸಿಗೆಯಲ್ಲಿ ನಾನು ನೀಲಿಯ ಬೆಳದಿಂಗಳಾಗಿ ಮಲಗಿರುವುದು ಗೋಚರಿಸುತ್ತದೆ. ಏಳುತ್ತಿರುವಂತೆಯೇ ನೀ ತಂದ ನೀಲಿ ಪೀತಾಂಬರ ನೆನಪಿಗೆ ಬಂದು ‘ನೀಲಿ ಪೀತಾಂಬರ ’ ಬೇಕು ಅಂತ ಹಠಮಾಡುತ್ತೇನೆ . ನಾಲ್ಕೈದು ದಾದಿಯರು ನನ್ನ ಗಟ್ಟಿಯಾಗಿ ಹಿಡಿದು ಮತ್ತೆ ಹಾಸಿಗೆಯಲ್ಲಿಟ್ಟು ರಮಿಸುತ್ತಾರೆ. ನೀನು ನನ್ನ ನೀಲಿ ಪೀತಾಂಬರ ಹಿಡಿದು ಬರುತ್ತೀಯ. ನೀನು ಮೌನಿ. ನಾನೂ ಶಾಂತವಾಗುತ್ತೇನೆ.
ದಿನವೂ ನೀ ಬರುವ ಹೊತ್ತು ‘ನೀಲ ಮನೋಚೇತನ’ ಆಸ್ಪತ್ರೆಯಲ್ಲಿ ನನ್ನ ಕೋಣೆ ಶಾಂತವಗಿರುತ್ತದೆ. ಸುತ್ತಲೂ ಮೌನ ಕವಿದುಕೊಳ್ಳುತ್ತದೆ. ತಿಂಗಳು ಕಳೆಯುತ್ತಿದ್ದಂತೆಯೇ ಅಂಥದೇ ಒಂದುಸಂಜೆ ನೀ ಬಂದಾಗ ನಿನ್ನ ಕೈಯೊಳಗೊಂದು ಹೊತ್ತಿಗೆಯಿರುತ್ತದೆ, ನೀನೇ ಬರೆದದ್ದು. ನಿನ್ನ "ನೀಲ ಬೆಳದಿಂಗಳು" ಹೊತ್ತಿಗೆಯ ಮೂವತ್ಮೂರು ಕತೆಗಳು ಹೊತ್ತ ನಾಯಕಿ ನಾನೇ ಆಗಿರುತ್ತೇನೆ.
ನನ್ನದೇ ಗುಂಗಿನಲ್ಲಿ ಕತ್ತೆತ್ತಿದರೆ ಸೂರ್ಯನ ಬಣ್ಣ ಬೆಳಕಾಗುವುಷ್ಟರಲ್ಲಿ ಬೇರೆಯದೇ! ಆ ಬಣ್ಣವೂ ಇಷ್ಟವೇ ಎನಿಸಿಬಿಡುತ್ತದೆ. ಅವನು ಯಾವ ಬಣ್ಣದಲ್ಲಿದ್ದರೂ ನನಗಿಷ್ಟವೇ,ಅವನೇ ಹಾಗೆ, ಬೆಳಿಗ್ಗೆ, ಮಧ್ಯಾಹ್ನ ಸಂಜೆಯೊಳಗೆ ಬಣ್ಣ ಬದಲಾಯಿಸೋದು ಹೊಸತೇನಲ್ಲ ಅನಿಸಿ ಅವನ ನೆನೆದು ಮುದ್ದುಬರುತ್ತೆ. ಮುಗುಳ್ನಕ್ಕು ಕಣ್ಣುಮಿಟುಕಿಸಿ ಮಗುವಾಗುತ್ತೇನೆ. ತುಂತುರುವೊಂದು ಆಗಸದಿಂದ ಕಣ್ಣಂಚಿಗೆ ಬಂದು ‘ನನಗಿಂತ ನಿನ್ನ ಮನ ತಣ್ಣಗಿದೆಯಲ್ಲೆ, ಮನಸನ್ನೊಂಚೂರು ಬಿಸಿಲಿಗೆ ಹರವು, ಸರಿಹೋಗುತ್ತೆ’ ಪಿಸುನುಡಿದು ಕೆನ್ನೆಗುಂಟ ಕಂಬನಿಯ ಹಾದಿಯನ್ನ ಹಿಡಿದು ನನ್ನೆದೆಗಿಳಿದು ಆರಿ ಹೋಗತ್ತೆ. ಮತ್ತೆ ಒಂಟಿಯೆನಿಸುತ್ತೆ. ಕತ್ತು ನೇರವಾಗಿ ಸುತ್ತ ನೋಡಿದರೆ ಸುತ್ತಲಿನ ಪ್ರಕೃತಿ ನನ್ನೆಡೆಗೆ ಮುತ್ತಿಕೊಂಡು ಕಳೆದುಹೋಗುತ್ತೇನೆ. ಅಂಗಳವನ್ನು ಇನ್ನಷ್ಟು ಚಂದ ಮಾಡುವ ಹುಮ್ಮಸ್ಸು.ತುಂತುರುವಿನ ಸಾನ್ನಿಧ್ಯದಲ್ಲೂ ಇಬ್ಬನಿಯ ನೆನಪು. ಹಾಡೊಂದನ್ನ ಗುನುಗುತ್ತೇನೆ.
"ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ"
ಹಾಡುಮುಗಿವಂತೆ ಅಂಗಳ ಮಂಗಳದಮನೆಯಾಗುತ್ತದೆ. ಸುತ್ತೆಲ್ಲ ಕಣ್ಣು ಹಾಯಿಸಿ ನನ್ನೊಳಗೇ ಹಿಗ್ಗುತ್ತೇನೆ. ಅಂಗಳದ ತುಂಬೆಲ್ಲ ಸಂತಸದ ಹರಿವು. ನೀಲಿಸೀರೆಯ ನಿರಿಗೆಗಳನ್ನ ಉದ್ದಕ್ಕೆ ಅಲೆಸುತ್ತ ಅಂಗಳದಲ್ಲೆಲ್ಲ ನಡೆದಾಡುತ್ತೇನೆ. ನಾಲ್ಕು ಹೆಜ್ಜಯಿಡುವಷ್ಟರಲ್ಲಿ ನನ್ನದೇ ಹೆಜ್ಜೆಗುರುತುಗಳ ಅಲ್ಲಿ ಕಂಡು ನಾಚುತ್ತೇನೆ. ಅಲ್ಲೆಲ್ಲೋ ನೀನು ಅವಿತು ಕುಳಿತಿರಬಹುದೆನಿಸುತ್ತದೆ ಇದನ್ನೆಲ್ಲ ನೋಡುತ್ತ, ಭಯ ಆವರಿಸಿ ಕೈಯೊಳಗಿನ ಹೂವಿನ ಪಾತ್ರೆ, ರಂಗೋಲೆ ಬಟ್ಟಲುಗಳನ್ನ ಸರಕ್ಕನೆ ಎತ್ತಿಕೊಂಡು ಅಂಗಳದಿಂದ ಮಾಯವಾಗುತ್ತೇನೆ.
ಬಿಸಿಯಕಾಫಿ ಬಟ್ಟಲ ಹಿಡಿದು ಬರುವಷ್ಟರಲ್ಲಿ ನೀನಲ್ಲಿ ಕುಳಿತು ತಂಬೂರ ನುಡಿಸುತ್ತಿರುತ್ತೀಯ. ನಾನದನು ನಿಧಾನಕ್ಕೆ ಪಕ್ಕಕ್ಕಿಟ್ಟು ಕಾಫಿಬಟ್ಟಲನ್ನು ಕೈಯೊಳಗಿತ್ತು ಪಕ್ಕ ನಿಲ್ಲುತ್ತೇನೆ. ನೀನ್ಯಾವತ್ತಿನಂತೆ ‘ನೀಲಾ’ ಅಂತ ಕರೆಯೋದಿಲ್ಲ. ನೀಲಿಯಂಗಳದ ತುಂಬೆಲ್ಲ ನೀಹಾರ! ಸುತ್ತಲಿನ ನೀಹಾರ ಕೂಡ ನೀರಸವೆನಿಸುತ್ತದೆ. ಬಿಸಿಲಿಗೂ ಬೇರೆಯದೇ ಬಣ್ಣ. ನೂಪುರದ ಸದ್ದಡಗಿ ನೀರವ. ‘ಅಂಗಳ ಹೇಗಿದೆ’ ಕೇಳುತ್ತೇನೆ. ‘ಆತ್ಮರತಿ ಅನಿಸುತ್ತಿಲ್ಲವಾ’ ನಿನ್ನ ಧ್ವನಿಯೊಳಗಿನ ಭಾವ ಕೇಳಿಸುವುದಿಲ್ಲ, ಮಾತು ಮಾತ್ರ. ನಿಲ್ಲದೆ ಹೊರಟುಹೋಗುತ್ತೀಯ. ‘ನಿನ್ನಮನೆ ಬೀಗದಕೈ,ನನಗಿದು ಭಾರ, ನೀನಿಟ್ಟುಕೋ’ ಅಂತ ಅಂಗಲಾಚಿದ್ದು ಕೇಳದಷ್ಟು ಆಳಕ್ಕಿಳಿದ ಯೋಚನೆ ನಿನ್ನಾಳವನ್ನು ಅಲುಗಿಸಗೊಡುವುದಿಲ್ಲ, ನಾನೂ ಮೌನಿಯಾಗಿ ಮನೆಯೊಳಗಡಿಯಿಡುತ್ತೇನೆ.
ಮತ್ತೆ ವಾಪಸಾಗುವಷ್ಟರಲ್ಲಿ ಅಂಗಳದ ಅಲಂಕಾರವೇ ಹೊಸತೆನಿಸುತ್ತದೆ. ಹಸಿರುಗಿಡದ ನೀಲಿಹೂಗಳ ಬಿಟ್ಟು ನಾನಿತ್ತ ರಂಗೋಲೆಯ ಹರಿವಿಲ್ಲ, ಬೆಳ್ಳಿಚುಕ್ಕೆಗಳ ಬೆಳದಿಂಗಳಿಲ್ಲ, ಸುತ್ತ ಬಳ್ಳಿಗಿಡದ ನಿಲುವಿಲ್ಲ. ನೀಲಿ ಬಣ್ಣದ ಹೂಗಳ ನಡುವೆ ನೀಲ ನಕ್ಷತ್ರಗಳು, ಸುತ್ತ ನೀಲಬೆಳದಿಂಗಳು ಮಾತ್ರ ನೆಲೆಯಾಗಿರುತ್ತವೆ. ಹೊಸತೆನಿಸುತ್ತದೆ. ಅಲ್ಲಿ ನನ್ನ ಹೆಜ್ಜೆಯ ಗುರುತನ್ನೆಲ್ಲ ಯಾರೋ ಅಳಿಸಿದ ನೋವು ಕಾಡುತ್ತದೆ. ಅದು ನೀನೆ ಅನ್ನುವುದಕ್ಕೆ ಅನುಮಾನವೇ ಇರೋಲ್ಲ. ಕೋಪದಿಂದ ನಿನ್ನ ಕಣ್ಣುಗಳ ದಿಟ್ಟಿಸುತ್ತೇನೆ, ಅಲ್ಲಿಯೂ ನೀಲ ಹೊಳಪು. ಕೇಳುತ್ತೇನೆ ‘ನಾನು ಬಡವ ಅನ್ನುತ್ತಿದ್ದೆಯಲ್ಲ, ಒಲವೇ ನಮ್ಮ ಬದುಕಾಗಿರುವಾಗ ಇಷ್ಟು ದುಬಾರಿಯ ನೀಲ ಹೊಳಪು ನಿನ್ನ ಕಣ್ಣುಗಳಿಗೆ ಹೇಗೆ ಬಂತು? ಅಂಗಳದಲ್ಲಿ ನೀಲ ನಕ್ಷತ್ರಗಳ ತಂದಿಟ್ಟವರಾರು?’ ಅಂತ. ಮಾತು ಕಳೆದವನಂತೆ ನೀಲಿಗಿಡಗಳ ನೆಡುವುದರಲ್ಲಿ ನೀನು ಮಗ್ನನಾಗಿದ್ದು ಅಳು ಬರಿಸುತ್ತದೆ. ಮುಖಕ್ಕೆ ಸೆರಗು ಮುಚ್ಚಿಕೊಂಡು ಹೊರಟುಬಿಡುತ್ತೇನೆ. ಮನಸ್ಸು ತಡೆಯದೇ ಮತ್ತೆ ವಾಪಸ್ಸಾದರೆ ಅಲ್ಲಿ ನೀನಿರುವುದಿಲ್ಲ. ಅಂಗಳದ ತುಂಬ ನೀಲಿ ಹೂ, ನಕ್ಷತ್ರ, ನೀಲಿ ಬೆಳಕು ಮತ್ತು ಬೆಳದಿಂಗಳು ಹಗಲಿನಲ್ಲೂ, ದೂರದಲ್ಲೊಂದು ನನ್ನದೇ ಹೆಜ್ಜೆಗುರುತು.
ಏನಾಗುತ್ತಿದೆ ಅಂತ ಅರಿವುದರೊಳಗೆ ಒಪ್ಪಓರಣಗಳನೆಲ್ಲ ಕಿತ್ತುಬಿಸಾಕುತ್ತೇನೆ. ಅರಿವನ್ನೆಲ್ಲ ಸಂಪೂರ್ಣಕಳೆದುಕೊಂಡು ಹಲುಬುತ್ತೇನೆ,ಅಳುತ್ತೇನೆ. ಮೌನಿ ನೀನು, ನೀನಿದ್ದರೂ ಮಾತು ಸಿಗುತ್ತಿರಲಿಲ್ಲ ಆ ಹೊತ್ತಿಗೆ ಅನ್ನುವದನರಿತೂ ಅಂಗಳದ ತುಂಬೆಲ್ಲ ಹರಿದಾಡುತ್ತ ಬಿಕ್ಕುತ್ತೇನೆ "ಯಾರು ಹೇಳ್ತಾರೆ ಬೆಳಗಿಗೆ ಬೆಳಕಿದೆ ಅಂತ. ನೋಡು ಬೆಳಗಿಗೆ ಬಣ್ಣವೂ ಇಲ್ಲ, ಬೆಡಗೂ ಇಲ್ಲ. ಬೆಳಗು ಬಂಧನ. ನೀನು ಮಾತಾಡ್ಬೇಡ, ನಂಗಿಷ್ಟವಾಗೋಲ್ಲ. ನಿನ್ನ ಧ್ವನಿ ನನಗೆ ಹಿಡಿಸೋಲ್ಲ. ಇನ್ನು ಮೇಲೆ ಹಾಡಬೇಡ. ಆ ತಂಬೂರವಿದೆಯಲ್ಲ! ಅದರ ತಂತಿಗಳನ್ನ ಕಿತ್ತು ಬಿಸಾಕಿದ್ದೇನೆ. ಅದು ಹೇಗೆ ನುಡಿಸುತ್ತೀಯೋ ನಾನೂ ನೋಡುತ್ತೇನೆ. ಹಾರ್ಮೋನಿಯಂ ಇದೆಯಲ್ಲ, ಅದರ ಮನೆಗಳೆಲ್ಲ ನೋಡು ಚೂರಾಗಿ ಬಿದ್ದಿವೆ ನನ್ನೆದೆ ಗೂಡಿನ ಹಾಗೆ. ಯಾವುದೋ ಹಾಡು ಕೇಳಿಸಿದೆಯಲ್ಲ..ನೋಡು ಅದಕ್ಕೆ ಧ್ವನಿಯೇ ಇಲ್ಲ.ಅಥವಾ ನನ್ನ ಕಿವಿ ಸತ್ತು ಹೋಗಿರಬೇಕು ನಿನ್ನ ಮಾತುಗಳ ಹಾಗೆ.ಹಾಡು ಅಲ್ಲಿ ಬಿದ್ದಿದೆ ನೋಡು ಕಾಗದ ಚೂರೊಳಗಿನ ದೋಣಿಯಾಗಿ! ತೇಲುವಷ್ಟು ನೀರಿಲ್ಲದೆ ತುಂತುರಲ್ಲಿ ನೆನೆದು ನೀಲಿ ನೀಲಿಮಸಿಯನೆಲ್ಲ ಹೀರಿಕೊಂದು ನೀಲಿಯಾಗಿ ಬಿದ್ದಿದೆ.
ನಾನು ನಿನ್ನ ಹಾಗಲ್ಲ ನೋಡು, ನಿನಗೊಂದು ಬದುಕಿದೆ, ಆ ಬದುಕಿಗೆ ನೀಲಿಯ ಬಣ್ಣವಿದೆ. ‘ನೀನೋ ಬೆಳದಿಂಗಳು’ ಅಂತಿದ್ಯಲ್ಲ!ಹೌದಲ್ಲವಾ? ನಗುವಲ್ಲಿ ಇಂದು ಬೆಳದಿಂಗಳಿಲ್ಲ. ನಗು ಬೆಳದಿಂಗಳಲ್ಲ ಅಂತ ನಾನು ಹೇಳಿರ್ಲಿಲ್ಲ ನಿಂಗೆ. ನೀನು ಆವತ್ತೇ ಅರ್ಥ ಮಾಡ್ಕೋಬೇಕಿತ್ತು. ನನ್ನ ಕೋಪವೆಂದರೆ ಅಳು ಮಾತ್ರ. ಅಳುವನ್ನ ನೀನು ನೋಡಿಲ್ಲ. ಅದಕ್ಕೇ ಕೋಪವೂ ಚಂದವೇ ಅಂದ್ಯಲ್ಲ. ಇನ್ನೊಂದಿಷ್ಟು ಸಾಲುಗಳು ಬೇಕಿದ್ದವು ನಿನಗೆ, ಅದಕ್ಕೆ ಕೋಪದಲ್ಲೂ ಚೆಲುವನರಸಿದ್ದು. ಬಿಸಿ ಕಾಫಿ ಆರುವ ತನಕವೂ ನಿಂತಲ್ಲೇ ನಿಂತಿದ್ದೆನಲ್ಲ. ನಿನ್ನ ಕಣ್ಣುಗಳು ಅಲ್ಲಿ ಏನನ್ನೋ ಅರಸುತ್ತಿದ್ದವು, ನನಗಾಗಿ ಅಲ್ಲ, ಕಳೆದುಕೊಂಡಿದ್ದನ್ನೇನೋ, ಇನ್ನೇನೋ ಪಡೆಯಲಿಕ್ಕಾಗಿ.
ನೀನು ಏನು ಅಂತ ಚೆನ್ನಾಗಿ ಗೊತ್ತಿತ್ತು, ಗೊತ್ತಿದೆ, ನಿನ್ನಂಥವರೇ ಇಷ್ಟವಾಗೋದು, ಯಾಕೆ ಹೇಳು. ದುರ್ಜನರ ಸಂಗಕ್ಕಿಂತ ಸಜ್ಜನರೊಡನೆ ಜಗಳ ಲೇಸು." ಹಲುಬುತ್ತಿರುವಂತೆ ಮಧ್ಯಾಹ್ನ ಅಂಗಳವನಾವರಿಸುತ್ತದೆ. ನಿಂತಲ್ಲೆ ಕುಸಿದು ಬೀಳುತ್ತೇನೆ ನಿನ್ನ ಬರುವಿಕೆಯ ಹಾದಿಯಲ್ಲಿ.
ಎಚ್ಚರವಾಗುತ್ತದೆ.ನೀಲಿಯ ಪರದೆಯೊಳಗೆ ನೀಲಿ ಮಂಚದ ನೀಲಿ ಹಾಸಿಗೆಯಲ್ಲಿ ನಾನು ನೀಲಿಯ ಬೆಳದಿಂಗಳಾಗಿ ಮಲಗಿರುವುದು ಗೋಚರಿಸುತ್ತದೆ. ಏಳುತ್ತಿರುವಂತೆಯೇ ನೀ ತಂದ ನೀಲಿ ಪೀತಾಂಬರ ನೆನಪಿಗೆ ಬಂದು ‘ನೀಲಿ ಪೀತಾಂಬರ ’ ಬೇಕು ಅಂತ ಹಠಮಾಡುತ್ತೇನೆ . ನಾಲ್ಕೈದು ದಾದಿಯರು ನನ್ನ ಗಟ್ಟಿಯಾಗಿ ಹಿಡಿದು ಮತ್ತೆ ಹಾಸಿಗೆಯಲ್ಲಿಟ್ಟು ರಮಿಸುತ್ತಾರೆ. ನೀನು ನನ್ನ ನೀಲಿ ಪೀತಾಂಬರ ಹಿಡಿದು ಬರುತ್ತೀಯ. ನೀನು ಮೌನಿ. ನಾನೂ ಶಾಂತವಾಗುತ್ತೇನೆ.
ದಿನವೂ ನೀ ಬರುವ ಹೊತ್ತು ‘ನೀಲ ಮನೋಚೇತನ’ ಆಸ್ಪತ್ರೆಯಲ್ಲಿ ನನ್ನ ಕೋಣೆ ಶಾಂತವಗಿರುತ್ತದೆ. ಸುತ್ತಲೂ ಮೌನ ಕವಿದುಕೊಳ್ಳುತ್ತದೆ. ತಿಂಗಳು ಕಳೆಯುತ್ತಿದ್ದಂತೆಯೇ ಅಂಥದೇ ಒಂದುಸಂಜೆ ನೀ ಬಂದಾಗ ನಿನ್ನ ಕೈಯೊಳಗೊಂದು ಹೊತ್ತಿಗೆಯಿರುತ್ತದೆ, ನೀನೇ ಬರೆದದ್ದು. ನಿನ್ನ "ನೀಲ ಬೆಳದಿಂಗಳು" ಹೊತ್ತಿಗೆಯ ಮೂವತ್ಮೂರು ಕತೆಗಳು ಹೊತ್ತ ನಾಯಕಿ ನಾನೇ ಆಗಿರುತ್ತೇನೆ.
September 24, 2008
ನಾವು ಅವರ ಹಾಗಲ್ಲ...
ಅಂದು ಹೆಂಗಳೆಯರು ಭಾವನೆಗಳನು
ಮೆಣಸು-ಸಾಸಿವೆ ಡಬ್ಬಿಯೊಳಿಟ್ಟು
ಸಾರಿಗೆ ಒಗ್ಗರಣೆ ಇಡುವಾಗ ಸುಟ್ಟು
ಗಂಡಸರ ಹೊಟ್ಟೆಗೆ ಸೇರಿಸಿಬಿಟ್ಟರು
ಅರಿತೋ ಅರಿಯದ ಗಂಡಸರು ನುಂಗಿಬಿಟ್ಟರು ಪಾಪ!!
ಮರಳಿಸೇರಿಸಿಟ್ಟರು ಹೆಂಗಳೆಯರು
ಮತ್ತೆ ಡಬ್ಬಿಯೊಳಗೇ...
ಇಂದು ನಾವುಗಳೂ ಅಷ್ಟೇ
ಹಾಗಲ್ಲ ನಾವೆಂದು
ಸೇರಿಸಿಟ್ಟೆವು ಭಾವಗಳ ಹಾಳೆಯೊಳಗೆ
ಗಂಡಸರು ಓದಿ(ಬಿ)ಟ್ಟರು
ಓದಿ(ಬಿ)ಟ್ಟಿದ್ದೇನೋ ನಿಜ
ಬಿಟ್ಟವರು ಮತ್ತೆ ನಡೆದದ್ದು
ನುಂಗುವ ಮತ್ತೊಂದು ಹಾದಿಯೊಳಗೆ
ನಾವುಗಳು ಬರೆದಿಟ್ಟಿದ್ದೂ ಬರೆದಿಟ್ಟಿದ್ದೇ...
ಮೆಣಸು-ಸಾಸಿವೆ ಡಬ್ಬಿಯೊಳಿಟ್ಟು
ಸಾರಿಗೆ ಒಗ್ಗರಣೆ ಇಡುವಾಗ ಸುಟ್ಟು
ಗಂಡಸರ ಹೊಟ್ಟೆಗೆ ಸೇರಿಸಿಬಿಟ್ಟರು
ಅರಿತೋ ಅರಿಯದ ಗಂಡಸರು ನುಂಗಿಬಿಟ್ಟರು ಪಾಪ!!
ಮರಳಿಸೇರಿಸಿಟ್ಟರು ಹೆಂಗಳೆಯರು
ಮತ್ತೆ ಡಬ್ಬಿಯೊಳಗೇ...
ಇಂದು ನಾವುಗಳೂ ಅಷ್ಟೇ
ಹಾಗಲ್ಲ ನಾವೆಂದು
ಸೇರಿಸಿಟ್ಟೆವು ಭಾವಗಳ ಹಾಳೆಯೊಳಗೆ
ಗಂಡಸರು ಓದಿ(ಬಿ)ಟ್ಟರು
ಓದಿ(ಬಿ)ಟ್ಟಿದ್ದೇನೋ ನಿಜ
ಬಿಟ್ಟವರು ಮತ್ತೆ ನಡೆದದ್ದು
ನುಂಗುವ ಮತ್ತೊಂದು ಹಾದಿಯೊಳಗೆ
ನಾವುಗಳು ಬರೆದಿಟ್ಟಿದ್ದೂ ಬರೆದಿಟ್ಟಿದ್ದೇ...
September 22, 2008
ವನಸುಮದೊಳೆನ್ನ ಜೀವನವು ವಿಕಸಿಸುವಂತೆ...
ಕಾಡುಬಳ್ಳಿಯೊಂದು ನಾಡಬೇಲಿಗೆ ಹಬ್ಬಿಕೊಳ್ಳುತ್ತಲಿತ್ತು. ಹೀಗೆಯೇ ಹಬ್ಬುತ್ತಿರುವಾಗ ನಾಡಬೇಲಿಯೊಳಗೆ ಹಬ್ಬಿಕೊಂಡಿದ್ದ ನೀಳಬಳ್ಳಿಯಲಿ ಅರಳಿದ್ದ ಬಾಡದ ಹೂವೊಂದು ಅದರ ಕಣ್ಣಿಗೆ ಬಿತ್ತು. ಆ ಹೂವು ಬಾಡದ ಹೂವೆಂಬುದು ಕಾಡುಬಳ್ಳಿಗೆ ತಿಳಿದಿರಲಿಲ್ಲ. ಹೂಗಳೇ ಇರದ ತನ್ನೊಳಗೊಂದು ‘ಚಂದಕ್ಕಿರಲಿ’ ಅಂತ ಆ ಹೂವನ್ನು ಕಿತ್ತುಕೊಂಡೆನೆಂದುಕೊಂಡಿತು. ಅಸಲಿ ಹೇಳಬೇಕೆಂದರೆ ಬಾಡದ ಹೂವನ್ನು ಕಿತ್ತುಕೊಳ್ಳುವುದು ಸಾಧ್ಯವೇ ಇರಲಿಲ್ಲ, ಏಕೆಂದರೆ ಅದು ಅಂಟಿಕೊಂಡಿದ್ದ ಬಳ್ಳಿಗೂ ಹಾಗೂ ಅದಕ್ಕೂ ಕಿತ್ತುಹೋಗಲಾರದಂತಹ ನಂಟಿತ್ತು ಮತ್ತು ಹಾಗೇ ಅವೆರಡೂ ಅಂಟಿಕೊಂಡಿದ್ದವು.
ಕೆಲವುದಿನಗಳ ಬಳಿಕ ಕಾಡುಬಳ್ಳಿಗೆ ಯಾವತ್ತೂ ಬಾಡದ ಹೂವನ್ನು ನೋಡಿ ನೋಡಿ ಬೇಸರವಾಯಿತು. ಕಾಡುಬಳ್ಳಿ ಹೂಬಿಟ್ಟುಅಳಿದಖಾಲಿಬಳ್ಳಿಯೊಂದಕ್ಕೆ ಬಾಡದ ಹೂವನ್ನು ರವಾನಿಸಲು ಯತ್ನಿಸಿತು. ಅಲ್ಲದೇ ತಾನು ಹಬ್ಬಿದಲ್ಲೆಲ್ಲ ಬಾಡದ ಹೂವಿನ ಬಗ್ಗೆ ‘ಆ ಹೂ ಬಾಡದ ಹೂವಲ್ಲ, ಬಾಡಿದ ಹೂ’ ಎಂಬುದಾಗಿ ಸುಳ್ಳುಸುದ್ದಿ ಹಬ್ಬಿಸುತ್ತ ಹೋಯಿತು. ಬಾಡದ ಹೂ ಮಾತ್ರ ಇಂತಹ ಬಳ್ಳಿಗಳಿಗೆಲ್ಲ ಅಂಟಿಕೊಂಡಂತೆ ತೋರಗೊಡುತ್ತ ಅಂಟಿಕೊಳ್ಳದೆ ತನ್ನ ಪಾಡಿಗೆ ತಾನು ಇರುತ್ತಿದ್ದುದರಿಂದಲೋ, ಅಥವಾ ಬಳ್ಳಿಗಳಿಗೂ ತನಗೂ ಆರೋಗ್ಯಕರವಾದ ಒಂದು ಅಂತರವನ್ನು ನಿಭಾಯಿಸುವ ತಾಳ್ಮೆ, ಸೌಜನ್ಯಗಳಿದ್ದುದರಿಂದಲೋ ಅಂಟಿಕೊಳ್ಳದೆಯೇ ಒಂದುಬಳ್ಳಿಯಿಂದ ಇನ್ನೊಂದು ಬಳ್ಳಿಗೆ ರವಾನಿಸ ಯತ್ನಿಸಿದ ಈ ಬಳ್ಳಿಗಳನ್ನು ನೋಡಿ ಸುಮ್ಮನೆ ನಗುತ್ತಲಿತ್ತು. ನಕ್ಕಷ್ಟೂ ಸುಂಗಂಧವನ್ನು ಬೀರುತ್ತಲಿತ್ತು.ಜೀವಿ ನಿರ್ಜೀವಿಗಳನ್ನು ಒಂದೇ ಮನಸ್ಸಿನಿಂದ ಪ್ರೀತಿಸಿತು. ಹಾಗೆಯೇ ಬಾಡದಹೂವಿಗೂ ಸಕಲವುಗಳ ಪ್ರೀತಿ ದೊರಕಿ ನಳನಳಿಸುತ್ತಿತ್ತು.
ತನ್ನನ್ನು, ತನ್ನ ಸುಗಂಧವನ್ನು ದೂರದಿಂದ ಆಸ್ವಾದಿಸಿ ಹೊಗಳಿದ ಸಹೃದಯ ಬಳ್ಳಿಗಳಿಗೆ ವಂದಿಸುತ್ತ, ತನ್ನನ್ನೇ ಕಿತ್ತುಕೊಂಡು ಮುಡಿಯಲು ಬಂದ ಬಳ್ಳಿಗಳನ್ನು ತನ್ನ ಸೌಜನ್ಯ ಸುಗಂಧದಿಂದಲೇ ದೂರವಿಡುತ್ತ ಮಾಸದೇ ನಗುತ್ತಲಿತ್ತು. ಬಾಡದ ಹೂವಿನ ಈ ಸೌಜನ್ಯದಿಂದಾಗಿ ಕೆಲವುಬಳ್ಳಿಗಳಿಗೆ ಬಾಡದ ಹೂವಿನ ಬಗ್ಗೆ ಅತೀ ಅಸಹನೆ ಇತ್ತು. ಕಾಡುಬಳ್ಳಿ ತನ್ನಷ್ಟಕ್ಕೆ ತಾನು ಹಬ್ಬುತ್ತ, ತಾನು ನಿಡುಸುಯ್ಯಬೇಕಾದ ಅಸಲಿ ಮಾತುಗಳನ್ನು ಬೇರೆಬಳ್ಳಿಗಳ ಧ್ವನಿಯೊಳಗಿರಿಸಿ ಆಡಿಸಿ ಬಾಡದಹೂವನ್ನು ನವಿರಾಗಿ ನೋಯಿಸುತ್ತ ಅಚಾನಕ್ ಎದುರಿಗೆ ಸಿಕ್ಕ ಬಾಡದಹೂವನ್ನು ಚಂದವಾಗಿ ಮಾತನಾಡಿಸುತ್ತ ನಾಟಕವೊಂದನ್ನು ಯಶಸ್ವಿಯಾಗಿ ಅಭಿನಯಿಸಿದ ಖುಷಿಯಲ್ಲಿರುತ್ತಿತ್ತು, ಹೀಗೆ ನಾಟಕವಾಡುವುದು ಕಾಡುಬಳ್ಳಿಯ ಖಯಾಲಿ ಎಂಬುದನ್ನಿರತ ಬಾಡದಹೂ ಬಾಡದೆಯೇ ಮಂದಹಾಸಬೀರುತ್ತಲೇ ಇತ್ತು. ಇಂತಹದೊಂದು ಬಾಡದಹೂ ತಮ್ಮೊಳಗೆ ಅರಳದ್ದಕ್ಕಾಗಿ ಖೇದವೂ ಸೇರಿಕೊಂಡು ಕೆಲವು ಬಳ್ಳಿಗಳು ಬಾಡದ ಹೂವನ್ನು ಬಾಡಿಸಲು ನೋಡಿದವು. ಅಸಲಿ ಹೇಳಬೇಕೆಂದರೆ ಬಾಡದ ಹೂ ಬಾಡುವ ಗುಣವನ್ನೂ ಹೊಂದಿರಲಿಲ್ಲ, ಅಳಿದುಹೋಗುವಷ್ಟು ಅರಳಿರಲೂ ಇಲ್ಲ. ಯಾವತ್ತೂ ಇದ್ದ ಹಾಗೆಯೇ ಇರುತ್ತಿತ್ತು. ತನ್ನ ನೋವು ನಲಿವನ್ನೆಲ್ಲ ಸುಗಂಧವಾಗಿಸಿ ಸೌಜನ್ಯತೆಯ ಸುವಾಸನೆ ಬೀರುತ್ತಲೇ ಇತ್ತು. ನೋವಿಗೂ ನಲಿವಿಗೂ ಸಮಾನವಾದ ನಗುವೊಂದನ್ನು ಕೊಡಲು ಬಾಡದ ಹೂ ಎಂದಿಗೂ ಮರೆಯಲಿಲ್ಲ. ತನ್ನ ಈ ಜೀವನ ಪ್ರೀತಿಯಿಂದ ಮುಡುಮುಡುಗಿ ಬಾಡಲೂ ಇಲ್ಲ, ಅತ್ತು ಅತ್ತು ಅಳಿಯಲೂ ಇಲ್ಲ. ನಗುತ್ತಲೇ ಇತ್ತು, ನಗುವ ಹಂಚುತ್ತಲೇ ಇತ್ತು. ಹೀಗೆ...
ಹೀಗೆಯೇ... ಜೀವನಪ್ರೀತಿಯನ್ನೇ ತುಂಬಿ ಅರಳಿ ಅಳಿಯದ ಬಾಡದ ಹೂವೊಂದರ ಕಥೆಯನ್ನು ಬರೆಯೋಣವೆನ್ನಿಸಿತು. ಹೀಗೊಂದು ಕಥೆ ಬರೆಯುವ ಕಲ್ಪನೆಯಿಂದಲೇ ಜೀವನವನ್ನು ಇನ್ನಷ್ಟು ಪ್ರೀತಿಸಬೇಕೆನಿಸುತ್ತಿದೆ. ಕಥೆಬರೆಯೋದು ಬೇಡವೆನ್ನಿಸಿ ಜೀವನವನ್ನು ಇನ್ನಷ್ಟು ಪ್ರೀತಿಸುವ ಕಲೆಯ ಬಗ್ಗೆ ಯೋಚಿಸುತ್ತ ಸುಮ್ಮನೆ ಕುಳಿತಿದ್ದೇನೆ, ಸುತ್ತಲಿನ ಹಸಿರನ್ನು ಅಗಾಧವಾಗಿ ಪ್ರೀತಿಸುತ್ತ...
ಜೀವತುಂಬಿ ಕನಸುಕಾಣುತ್ತಿರುವ ಚಂದದನೆನಪುಗಳ ನೈಜಲೋಕಕ್ಕೆ ಯಾರೋ ಇನ್ನಷ್ಟು ಜೀವತುಂಬಿಹೋಗಿದ್ದಾರೆ, ಕಣ್ಣಿಂದ ಕ್ಲಿಕ್ಕಿಸುತ್ತಿದ್ದೇನೆ. ಅಂತಹದೊಂದು ಕಲ್ಪನೆಯ ಚಿತ್ತಾರಗಳ ಕಣ್ಣೊಳಗೆ ಕ್ಲಿಕ್ಕಿಸುವ ಖುಷಿ ಸುತ್ತೆಲ್ಲ ಅವರಿಸಿ ಕಣ್ಣಿನ ದಿಕ್ಕು ಆ ತುದಿಯ ಕಲ್ಲುಬೆಂಚಿಗೆ ಚುಚ್ಚಿ ನಿಂತಿದೆ. ಅಲ್ಲೋರ್ವರು ಕ್ಯಾಮೆರಾ ಹಿಡಿದು ಕುಳಿತಿದ್ದಾರೆ. ಆ ಮಹಾನ್ ವ್ಯಕ್ತಿಯ ಕ್ಯಾಮೆರಾ ಕಣ್ಣೊಳಗೆ ‘ಅಣ್ಣನ ನೆನಪು’ ಹರಿಯುತ್ತಿದೆ. ಕ್ಯಾಮೆರಾದೊಳಗಿಂದಾಚೆ ಹರಿಯುತ್ತಿರುವ ‘ಅಣ್ಣನ ನೆನಪು’ಗಳನ್ನೆಲ್ಲ ಸುಮ್ಮನೆ ನನ್ನೀ ಕಣ್ಣು ಕ್ಲಿಕ್ಕಿಸುತ್ತಿದೆ. ಮನದಲ್ಲಿ ತಾವಾಗಿವೇ ಡೌನ್ ಲೋಡ್ ಆಗುತ್ತಿರುವ ಈ ನೆನಪುಗಳು ಭದ್ರವಾಗಿ ಸುತ್ತೆಲ್ಲ ಸ್ಟೋರ್ ಆಗುತ್ತಲಿದ್ದಂತೆ ಥಂಬ್ ನೈಲ್ ಡ್ರೈವ್ ಇಲ್ಲೆಲ್ಲೋ ಹಸಿರು ಹುಲ್ಲೊಳಗೆ ಬಿದ್ದು ಕಳೆದುಹೋಗಿದೆ, ಹುಡುಕುತ್ತಿದ್ದೇನೆ. ಹಸಿರೊಳಗಿನ ಹುಡುಕಾಟ ಹಸನೆನಿಸಿದೆ. ಹುಡುಕುತ್ತಲೇ ಇರಬೇಕೆನಿಸಿದೆ. ಕಳೆದು ಹೋದದ್ದನ್ನಲ್ಲ. ಕ್ಷಣ ಕಣಕ್ಕೂ ಕಳೆದು ಸಿಗುವ ಹೊಸಹೊಸ ಹಸನುಗಳನು!!
ಕೆಲವುದಿನಗಳ ಬಳಿಕ ಕಾಡುಬಳ್ಳಿಗೆ ಯಾವತ್ತೂ ಬಾಡದ ಹೂವನ್ನು ನೋಡಿ ನೋಡಿ ಬೇಸರವಾಯಿತು. ಕಾಡುಬಳ್ಳಿ ಹೂಬಿಟ್ಟುಅಳಿದಖಾಲಿಬಳ್ಳಿಯೊಂದಕ್ಕೆ ಬಾಡದ ಹೂವನ್ನು ರವಾನಿಸಲು ಯತ್ನಿಸಿತು. ಅಲ್ಲದೇ ತಾನು ಹಬ್ಬಿದಲ್ಲೆಲ್ಲ ಬಾಡದ ಹೂವಿನ ಬಗ್ಗೆ ‘ಆ ಹೂ ಬಾಡದ ಹೂವಲ್ಲ, ಬಾಡಿದ ಹೂ’ ಎಂಬುದಾಗಿ ಸುಳ್ಳುಸುದ್ದಿ ಹಬ್ಬಿಸುತ್ತ ಹೋಯಿತು. ಬಾಡದ ಹೂ ಮಾತ್ರ ಇಂತಹ ಬಳ್ಳಿಗಳಿಗೆಲ್ಲ ಅಂಟಿಕೊಂಡಂತೆ ತೋರಗೊಡುತ್ತ ಅಂಟಿಕೊಳ್ಳದೆ ತನ್ನ ಪಾಡಿಗೆ ತಾನು ಇರುತ್ತಿದ್ದುದರಿಂದಲೋ, ಅಥವಾ ಬಳ್ಳಿಗಳಿಗೂ ತನಗೂ ಆರೋಗ್ಯಕರವಾದ ಒಂದು ಅಂತರವನ್ನು ನಿಭಾಯಿಸುವ ತಾಳ್ಮೆ, ಸೌಜನ್ಯಗಳಿದ್ದುದರಿಂದಲೋ ಅಂಟಿಕೊಳ್ಳದೆಯೇ ಒಂದುಬಳ್ಳಿಯಿಂದ ಇನ್ನೊಂದು ಬಳ್ಳಿಗೆ ರವಾನಿಸ ಯತ್ನಿಸಿದ ಈ ಬಳ್ಳಿಗಳನ್ನು ನೋಡಿ ಸುಮ್ಮನೆ ನಗುತ್ತಲಿತ್ತು. ನಕ್ಕಷ್ಟೂ ಸುಂಗಂಧವನ್ನು ಬೀರುತ್ತಲಿತ್ತು.ಜೀವಿ ನಿರ್ಜೀವಿಗಳನ್ನು ಒಂದೇ ಮನಸ್ಸಿನಿಂದ ಪ್ರೀತಿಸಿತು. ಹಾಗೆಯೇ ಬಾಡದಹೂವಿಗೂ ಸಕಲವುಗಳ ಪ್ರೀತಿ ದೊರಕಿ ನಳನಳಿಸುತ್ತಿತ್ತು.
ತನ್ನನ್ನು, ತನ್ನ ಸುಗಂಧವನ್ನು ದೂರದಿಂದ ಆಸ್ವಾದಿಸಿ ಹೊಗಳಿದ ಸಹೃದಯ ಬಳ್ಳಿಗಳಿಗೆ ವಂದಿಸುತ್ತ, ತನ್ನನ್ನೇ ಕಿತ್ತುಕೊಂಡು ಮುಡಿಯಲು ಬಂದ ಬಳ್ಳಿಗಳನ್ನು ತನ್ನ ಸೌಜನ್ಯ ಸುಗಂಧದಿಂದಲೇ ದೂರವಿಡುತ್ತ ಮಾಸದೇ ನಗುತ್ತಲಿತ್ತು. ಬಾಡದ ಹೂವಿನ ಈ ಸೌಜನ್ಯದಿಂದಾಗಿ ಕೆಲವುಬಳ್ಳಿಗಳಿಗೆ ಬಾಡದ ಹೂವಿನ ಬಗ್ಗೆ ಅತೀ ಅಸಹನೆ ಇತ್ತು. ಕಾಡುಬಳ್ಳಿ ತನ್ನಷ್ಟಕ್ಕೆ ತಾನು ಹಬ್ಬುತ್ತ, ತಾನು ನಿಡುಸುಯ್ಯಬೇಕಾದ ಅಸಲಿ ಮಾತುಗಳನ್ನು ಬೇರೆಬಳ್ಳಿಗಳ ಧ್ವನಿಯೊಳಗಿರಿಸಿ ಆಡಿಸಿ ಬಾಡದಹೂವನ್ನು ನವಿರಾಗಿ ನೋಯಿಸುತ್ತ ಅಚಾನಕ್ ಎದುರಿಗೆ ಸಿಕ್ಕ ಬಾಡದಹೂವನ್ನು ಚಂದವಾಗಿ ಮಾತನಾಡಿಸುತ್ತ ನಾಟಕವೊಂದನ್ನು ಯಶಸ್ವಿಯಾಗಿ ಅಭಿನಯಿಸಿದ ಖುಷಿಯಲ್ಲಿರುತ್ತಿತ್ತು, ಹೀಗೆ ನಾಟಕವಾಡುವುದು ಕಾಡುಬಳ್ಳಿಯ ಖಯಾಲಿ ಎಂಬುದನ್ನಿರತ ಬಾಡದಹೂ ಬಾಡದೆಯೇ ಮಂದಹಾಸಬೀರುತ್ತಲೇ ಇತ್ತು. ಇಂತಹದೊಂದು ಬಾಡದಹೂ ತಮ್ಮೊಳಗೆ ಅರಳದ್ದಕ್ಕಾಗಿ ಖೇದವೂ ಸೇರಿಕೊಂಡು ಕೆಲವು ಬಳ್ಳಿಗಳು ಬಾಡದ ಹೂವನ್ನು ಬಾಡಿಸಲು ನೋಡಿದವು. ಅಸಲಿ ಹೇಳಬೇಕೆಂದರೆ ಬಾಡದ ಹೂ ಬಾಡುವ ಗುಣವನ್ನೂ ಹೊಂದಿರಲಿಲ್ಲ, ಅಳಿದುಹೋಗುವಷ್ಟು ಅರಳಿರಲೂ ಇಲ್ಲ. ಯಾವತ್ತೂ ಇದ್ದ ಹಾಗೆಯೇ ಇರುತ್ತಿತ್ತು. ತನ್ನ ನೋವು ನಲಿವನ್ನೆಲ್ಲ ಸುಗಂಧವಾಗಿಸಿ ಸೌಜನ್ಯತೆಯ ಸುವಾಸನೆ ಬೀರುತ್ತಲೇ ಇತ್ತು. ನೋವಿಗೂ ನಲಿವಿಗೂ ಸಮಾನವಾದ ನಗುವೊಂದನ್ನು ಕೊಡಲು ಬಾಡದ ಹೂ ಎಂದಿಗೂ ಮರೆಯಲಿಲ್ಲ. ತನ್ನ ಈ ಜೀವನ ಪ್ರೀತಿಯಿಂದ ಮುಡುಮುಡುಗಿ ಬಾಡಲೂ ಇಲ್ಲ, ಅತ್ತು ಅತ್ತು ಅಳಿಯಲೂ ಇಲ್ಲ. ನಗುತ್ತಲೇ ಇತ್ತು, ನಗುವ ಹಂಚುತ್ತಲೇ ಇತ್ತು. ಹೀಗೆ...
ಹೀಗೆಯೇ... ಜೀವನಪ್ರೀತಿಯನ್ನೇ ತುಂಬಿ ಅರಳಿ ಅಳಿಯದ ಬಾಡದ ಹೂವೊಂದರ ಕಥೆಯನ್ನು ಬರೆಯೋಣವೆನ್ನಿಸಿತು. ಹೀಗೊಂದು ಕಥೆ ಬರೆಯುವ ಕಲ್ಪನೆಯಿಂದಲೇ ಜೀವನವನ್ನು ಇನ್ನಷ್ಟು ಪ್ರೀತಿಸಬೇಕೆನಿಸುತ್ತಿದೆ. ಕಥೆಬರೆಯೋದು ಬೇಡವೆನ್ನಿಸಿ ಜೀವನವನ್ನು ಇನ್ನಷ್ಟು ಪ್ರೀತಿಸುವ ಕಲೆಯ ಬಗ್ಗೆ ಯೋಚಿಸುತ್ತ ಸುಮ್ಮನೆ ಕುಳಿತಿದ್ದೇನೆ, ಸುತ್ತಲಿನ ಹಸಿರನ್ನು ಅಗಾಧವಾಗಿ ಪ್ರೀತಿಸುತ್ತ...
ಜೀವತುಂಬಿ ಕನಸುಕಾಣುತ್ತಿರುವ ಚಂದದನೆನಪುಗಳ ನೈಜಲೋಕಕ್ಕೆ ಯಾರೋ ಇನ್ನಷ್ಟು ಜೀವತುಂಬಿಹೋಗಿದ್ದಾರೆ, ಕಣ್ಣಿಂದ ಕ್ಲಿಕ್ಕಿಸುತ್ತಿದ್ದೇನೆ. ಅಂತಹದೊಂದು ಕಲ್ಪನೆಯ ಚಿತ್ತಾರಗಳ ಕಣ್ಣೊಳಗೆ ಕ್ಲಿಕ್ಕಿಸುವ ಖುಷಿ ಸುತ್ತೆಲ್ಲ ಅವರಿಸಿ ಕಣ್ಣಿನ ದಿಕ್ಕು ಆ ತುದಿಯ ಕಲ್ಲುಬೆಂಚಿಗೆ ಚುಚ್ಚಿ ನಿಂತಿದೆ. ಅಲ್ಲೋರ್ವರು ಕ್ಯಾಮೆರಾ ಹಿಡಿದು ಕುಳಿತಿದ್ದಾರೆ. ಆ ಮಹಾನ್ ವ್ಯಕ್ತಿಯ ಕ್ಯಾಮೆರಾ ಕಣ್ಣೊಳಗೆ ‘ಅಣ್ಣನ ನೆನಪು’ ಹರಿಯುತ್ತಿದೆ. ಕ್ಯಾಮೆರಾದೊಳಗಿಂದಾಚೆ ಹರಿಯುತ್ತಿರುವ ‘ಅಣ್ಣನ ನೆನಪು’ಗಳನ್ನೆಲ್ಲ ಸುಮ್ಮನೆ ನನ್ನೀ ಕಣ್ಣು ಕ್ಲಿಕ್ಕಿಸುತ್ತಿದೆ. ಮನದಲ್ಲಿ ತಾವಾಗಿವೇ ಡೌನ್ ಲೋಡ್ ಆಗುತ್ತಿರುವ ಈ ನೆನಪುಗಳು ಭದ್ರವಾಗಿ ಸುತ್ತೆಲ್ಲ ಸ್ಟೋರ್ ಆಗುತ್ತಲಿದ್ದಂತೆ ಥಂಬ್ ನೈಲ್ ಡ್ರೈವ್ ಇಲ್ಲೆಲ್ಲೋ ಹಸಿರು ಹುಲ್ಲೊಳಗೆ ಬಿದ್ದು ಕಳೆದುಹೋಗಿದೆ, ಹುಡುಕುತ್ತಿದ್ದೇನೆ. ಹಸಿರೊಳಗಿನ ಹುಡುಕಾಟ ಹಸನೆನಿಸಿದೆ. ಹುಡುಕುತ್ತಲೇ ಇರಬೇಕೆನಿಸಿದೆ. ಕಳೆದು ಹೋದದ್ದನ್ನಲ್ಲ. ಕ್ಷಣ ಕಣಕ್ಕೂ ಕಳೆದು ಸಿಗುವ ಹೊಸಹೊಸ ಹಸನುಗಳನು!!
September 19, 2008
ನಕ್ಕು ಬಿಡು ಒಮ್ಮೆ...
‘ಈ ವರ್ಷ ನಿಮ್ಮೆಜಮಾನ್ರ ಬರ್ಥಡೇಗೆ ಏನ್ ಸ್ಪೆಷಲ್, ಏನಾದ್ರೂ ಸರ್ಪ್ರೈಸ್!!’ ಅಂತ ಗೆಳತಿ ಕೇಳಿದ್ಲು. ನಾನ್ ಹೇಳ್ದೆ ‘ಹ್ಮ್...ಸುರ್ಪ್ರೈಸ್ ಮಾಡೋಕೆ ಹೋಗಿ ಅವರ ಬರ್ಥ್ ಡೇನೆ ಮರತ್ಬಿಟ್ಟಿದ್ದೆ...’ ಅಂದೆ. ‘ಆರು ವರ್ಷ ಆಯ್ತಾ ಮದ್ವೆ ಆಗಿ?’ ಅಂತ ಕೇಳಿದ್ಲು. ‘ಎಂಟು ವರ್ಷ ಆಗ್ತಾ ಬಂತು’ ಅಂದೆ. ‘ ಮದ್ವೆ ಆಗಿ ಐದು ವರ್ಷದ್ ತನಕ ಜ್ಞಾಪಕ ಇಟ್ಕೊಂಡ್ರೆ ಸಾಕಾಗತ್ತೆ, ಏಳು ವರ್ಷ ಮರಿದೇನೆ ವಿಶ್ ಮಾಡಿದ್ಯಲ್ಲ ಸಾಕು ಬಿಡು’ ಅಂದ್ಲು.
ಆವತ್ತು ಗೆಳತಿ ಹೇಳ್ತಾ ಇದ್ಲು. ‘ನಿನ್ನೆ ರಾತ್ರಿ ನಿದ್ರೆ ಮಾಡೋದು ತುಂಬ ಲೇಟ್ ಆಯ್ತು ಕಣೇ...’ ಅಂತ. ‘ಯಾಕೇ?’ ಅಂದೆ ಕಕ್ಕುಲತೆಯಿಂದ. ‘ಮಕ್ಕಳು ಮಲ್ಗೋದೆ ಲೇಟು, ಅದಾದ್ಮೇಲೆ ಇವನು ಕೈಕಾಲೆಲ್ಲ ನೋವು’ ಅಂದ. ‘ಕೈಕಾಲನ್ನೆಲ್ಲ ಮಸಾಜ್ ಮಾಡ್ಕೊಟ್ಬಿಟ್ಟು ನಾನು ಮಲ್ಕೊಳೋದೇ ಲೇಟ್ ಆಗೋಯ್ತು’ ಅಂದ್ಲು. ಮಧ್ಯೆ ಅದ್ಯಾರೋ ಕೇಳಿದ್ರು ‘ಅಲ್ಲಾ, ಕಂಪ್ಯೂಟರ್ ಮುಂದೆ ಕೂತು ಕೆಲ್ಸ ಮಾಡಿದ್ದಕ್ಕೆ ದಿನಾ ಮಸಾಜ್ ಮಾಡೋಷ್ಟು ಗ್ರಹಚಾರದ್ ನೋವಾ...ಏನ್ ದೋಡ್ ಕಲ್ಲ್ ಕಡಿಯೋಕೆ ಹೋಗೋರ ಥರ. ಬೆಳಗ್ಗೆದ್ದು ಪಾದಕ್ಕೆ ನಮಸ್ಕಾರ ಮಾಡೋ ಪರಿಪಾಠನೂ ಇದ್ಯಾ ಮತ್ತೆ?’ ಅಂತೆಲ್ಲ ಪ್ರಶ್ನಿಸಿ ವಿಷ್ಯ ಬೆಳಗ್ಗೆದ್ದು ಯಾರ್ಯಾರು ಅವರ ಪತಿಯ ಪಾದಕಮಲಗಳಿಗೆ ಎರಗಿ(ಎಡವಿ)ಬೀಳ್ತಾರೆ ಅನ್ನುವಲ್ಲಿಗೆ ಮುಟ್ಟಿದ್ದಾಯ್ತು. ನಾನಂತು ಸುಮ್ನಾಗ್ಬಿಟ್ಟೆ. ನಾನು ಬೆಳಿಗ್ಗೆದ್ದು ಇವನ ಪಾದ ಹುಡುಕ್ಕೊಂಡು ಕೂತ್ರೆ ಬೆಳಗಿನ ಕೆಲ್ಸ ಎಲ್ಲ ಮುಗಿದಂಗೆ. ಇವನು ಒಂದೊಂದು ಪಾದ ಒಂದೊಂದ್ ದಿಕ್ಕಿಗೆ ಎಸೆದು ಮಲ್ಕೊಂಡಿರ್ತಾನೆ, ಅವುಗಳನ್ನ ಎಲ್ಲಿಲ್ಲಿವೆ ಅಂತ ಹುಡುಕಿ, ಜೋಡ್ಸಿ ನಮಸ್ಕಾರ ಮಾಡೋಷ್ಟ್ರಲ್ಲಿ ಅವನಿಗೇ ಆಫೀಸಿಗೆ ಲೇಟ್ ಆಗ್ಬಿಡತ್ತೆ . ಇಲ್ಲಾ ಅಂದ್ರೆ ಪಾದಕ್ಕೆರ್ಗಕ್ಕೆ ನಂದೇನೂ ಆಬ್ಜಕ್ಷನ್ ಇರ್ಲಿಲ್ಲ.
ಹೀಗೆ ಒಂದಿನ ಸುಮ್ನೆ ಕೂತಿದ್ದೆ. ನಾನು ಸುಮ್ನೆ ಕೂತಿದ್ರೂ ನೋಡೋಕಾಗಲ್ಲ ಆಸಾಮಿಗೆ. ‘ಏನು....ಇವತ್ಯಾವ್ದ್ರ ಬಗ್ಗೆ ಆಲೋಚನಾ ಸಂಶೋಧನೆ? ಎಷ್ಟುವರ್ಷದ್ ಹಿಂದೆ ನಾನೇನ್ ಮಾಡಿದ್ದೆ ಅಂತ ನಿಂಗಿವತ್ತು ಕೋಪ?’ ಅಂದ್ಕೊಂಡು ಬರ್ತಾನೆ. ‘ಅದ್ಯಾವ ಜನ್ಮದಲ್ಲಿ ಪಾಪ ಮಾಡಿದ್ನೋ ಅಂತಾರೆ ನೋಡು, ಅ ಮಾತನ್ನ ಯಾವತ್ತೋ ಏನೋ ಮಾಡಿದ್ದನ್ನ ಇವತ್ತು ನೆನಪಿಸ್ಕೊಂಡು ಬೇಸರ ಮಾಡ್ಕೊತೀರ ನೀವು ಹೆಂಗಸ್ರು, ಅದ್ಕೆ ಗಂಡಸರು ಮಾತ್ರ ಆಡ್ಬೇಕಾಗಿರೋ ಮಾತುಗಳು ಅವು, ನೀವು ಹೆಂಗಸ್ರು ಹಾಗೆ ಹೇಳ್ಲೇ ಬಾರದು’ ಅಂತೆಲ್ಲ ಭಾಷಣ ಶುರು ಮಾಡಿದ. ನಾನ್ಯಾವತ್ತೂ ಆಡ್ದೇ ಇರೋ ಮಾತಿಗೂ ಇವತ್ತೊಂದು ಕೊಂಕು. ಇವತ್ತಿವಳು ಸುಮ್ನೆ ಇರ್ತಾಳೆ ಅಂತ ಗೊತ್ತಾದ್ರೆ ಇವರುಗಳು ಜೋರಾಗೇಬಿಡ್ತಾರೆ. ನಾನೇನಾದ್ರೂ ಧಬಾಯಿಸಿ ಉತ್ರ ಕೊಟ್ರೆ ಮತ್ತೆ ಒಂಥರಾ ನಗೋದು ನನ್ನ ಕಡೆ ನೋಡಿ. ಇವೇ ಆಗೋಲ್ಲ. ಒಂದ್ಸಲ ಅವನ ಕಡೆ ನೋಡಿ ‘ಸಾಕು, ಸುಮ್ನೆ ಇದ್ಬಿಡೋಣ’ ಅಂದ್ಕೊಂಡು ಸುಮ್ನಾದೆ. ಅವನಷ್ಟಕ್ಕೆ ಅವನು ಹೇಳ್ತಾ ಇದ್ದ. ‘ನೀನು ಸುಮ್ನೆ ಏನೇನೋ ಹೇಳ್ಬೇಡ, ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನೂ ವಹಿಸ್ಕೋತಾ ಇದೀನಿ’ ಅಂದ. ನಾನೇನು ಹೇಳ್ದೇನೆ ಇವನ್ಯಾಕೆ ಇದನ್ನೆಲ್ಲ ಹೇಳ್ತಿದಾನೆ ಅನ್ನಿಸ್ತು. ಮದುವೆ ಆದಾಗಿಂದ ಒಂದುಕಾಸು ಸಂಪಾದನೆ ಇಲ್ದೇ ಮನೇಲಿ ಕೂತಿರೋಳು ನಾನು. ಆದ್ರೂ ಅವನ ತಲೇಲಿ ಈ ಸಂಸಾರಕ್ಕೆ ತಾನೇನೂ ಮಾಡ್ತಿಲ್ಲ ಅಂತ ಅನ್ನಿಸೋ ಅಷ್ಟು ಕೊರೆದು ಮನೇಲಿ ಕುಳಿತು ನಾ ಮಾಡೋ ಅಡುಗೆ ಕೆಲಸವೇ ಸಂಸಾರ ನಡೆಯೋಕೆ ಆಧಾರ ಅನ್ನಿಸೋ ಹಾಗೆ ತಲೆಕೊರ್ದಿದೀನಾ ಅನ್ನಿಸ್ತು. ಈ ಕುಡುಕ್ರು ಪಡಕ್ರು , ಮನೆ ಹಾಳು ಮಾಡ್ಕೊಂಡೋವ್ರು ಎಲ್ಲ ಹೇಳೋ ಹಾಗೆ ಇನ್ನೊಂದ್ಸಲ ಹೇಳ್ದ. ‘ನಿಜವಾಗ್ಲೂ ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನು ವಹಿಸ್ಕೋತಾ ಇದೀನಿ, ಪುಟ್ಟುಗೆ ಸ್ನಾನಗೀನ ಮಾಡಿಸ್ತೀನಲ್ಲ’ಅಂದ. ‘ಪಾಪ, ಎಷ್ಟೆಲ್ಲ ಜವಾಬ್ಧಾರಿವಹಿಸ್ಕೊಂಡಿದಾನೆ ಮನೆದು’
ಅನ್ನಿಸ್ತು. ‘ನಮ್ಮದೇ ಮಗು ತಾನೆ, ನೀನ್ ಸ್ನಾನ್ ಮಾಡ್ಸೋದ್ ಪಕ್ಕದ್ ಮನೆ ಮಗೂಗೇನೂ ಅಲ್ವಲ್ಲಾ?’ ಅಂತ ಕೇಳಿ ದಂಗುಮಾಡಿಬಿಡೋಣ ಅನ್ನಿಸ್ತು.
ಆದ್ರೂ ಯಾವಾಗ್ಲೂ ಮನೆ ಜವಾಬ್ಧಾರಿ ವಹಿಸ್ಕೊಂಡಿದ್ದು ಅವನೇ ಅನ್ನೋ ರಹಸ್ಯ ಅವನಿಗೇ ಗೊತಾಗೋಕೆ ನಾನು ಬಿಡದೇ ಇರೋ ನನ್ನ ಸಾಮರ್ಥ್ಯಕ್ಕೆ ನಾನೇ ಭುಜ ತಟ್ಕೊಂಡೆ. ‘ಏನದು? ಭುಜ ತಟ್ಕೋತಾ ಇದೀಯ?’ ಅಂದ. ‘ಇಲ್ಲ, ಇವತ್ಯಾಕೋ ಬೆನ್ನು ನೋವು’ ಅಂದೆ.
ಪಾಪ, ಆವತ್ತು ಅವನು ಮನೆ ಜವಾಬ್ಧಾರಿ ನಿಭಾಯಿಸ್ತಾ ಇದ್ದ (ಅದೇ ಮಗನಿಗೆ ಸ್ನಾನ ಮಾಡಿಸೋದು). ತುಂಬ ಹೊತ್ತಿಂದ ಸ್ನಾನ ಮಾಡ್ತಿಲ್ಲ ಬೇರೇನೋ ಮಾಡ್ತಿರಬೇಕು, ಹೋಗಿ ನೋಡೋಣ ಅಂದ್ಕೊಂಡು ಬಾಥ್ ರೂಂಗೆ ಹೋಗಿ ನೋಡಿದ್ರೆ ಮಗನಿಗೆ ಹಲ್ಲುಜ್ಜಿಸ್ತಾ ಇದ್ರು ಅವರಪ್ಪ. ಮಗನ ಬಾಯಿತುಂಬಾ ನೊರೆನೊರೆ. ಮಗ ದೋಡ್ ದಾಗಿ ಬಾಯಿ ತೆರಕೊಂಡು ನಾಲಿಗೇನ ಊದ್ದಕ್ಕೆ ಹೊರಗೆ ಚಾಚ್ಕೊಂಡು ಟೂಥ್ ಬ್ರಶ್ ನಿಂದ ಗಸ ಗಸ ನಾಲಿಗೇನ ಉಜ್ಜತಾ ಇದ್ದ ಬಾಥ್ ರೂಂ ತೊಳೆದಂಗೆ. ಅವರಪ್ಪ ‘ಹೂಂ....ಉಜ್ಜು ಉಜ್ಜು, ಇನ್ನು ಗಟ್ಟಿ’ ಅಂತಾ ಇದ್ರು. ‘ಏನ್ ಮಾಡ್ತಿದೀರಾ ಇಬ್ರೂ?’ ಅಂತ ಕೇಳಿದ್ದಕ್ಕೆ ‘ನಾಲಿಗೆ ಉಜ್ತಿದಾನೆ’ ಅಂತ ನನ್ ಕಡೆ ತಿರುಗ್ದೆನೇ ಉತ್ತರ ಬಂತು. ಬಾಯಿ ತುಂಬ ನೊರೆ ತುಂಬ್ಕೊಂಡಿದ್ರಿಂದ ತಾವಿಬ್ರೂ ಮಾಡ್ತಿರೋ ಸಾಹಸಾನ ವರ್ಣಿಸೋಕಾಗದೆ ಮಗ ಬಾಯಿ ತೆರಕೊಂಡೇ ಕೋರೆಗಣ್ಣಲ್ಲಿ ನನ್ನ ನೋಡಿ ಮತ್ತೆ ತನ್ನ ಕೆಲಸ ಮುಂದ್ವರಿಸಿದ. ‘ಏನಷ್ಟೊಂದು ನೊರೆ?’ ಅಂದಿದ್ದಕ್ಕೆ ‘ಟೂಥ್ ಪೇಸ್ಟ್ ಹಾಕಿ ಉಜ್ಜತಿದಾನೆ’ ಅಂತ ಉತ್ರ ಬಂತು. ಸಧ್ಯ ಶಾಂಪೂ ಹಾಕಿ ಉಜ್ಜಲಿಲ್ವಲ್ಲ! ಅಂದ್ಕೊಂಡು ಸುಮ್ನೆ ಈ ಕಡೆ ಬಂದು ಸ್ವಲ್ಪ ಹೊತ್ತು ಕೂತ್ಕೊಂಡು ನನಗೆ ನಾನೆ ಸಮಾಧಾನ ಹೇಳ್ಕೊಂಡು ಎದ್ದೆ.
ದೀತ್ಯಾ ದೊಡ್ಡಬಾಯಿ ತೆರೆದು, ಮುದ್ದಾದ ಎರಡೇ ಹಲ್ಲು ತೋರ್ಸಿ ಆಹ್ಹ ಆಹ್ಹ ಆಹ್ಹ ಅಂತ ನಗುವಾಗ ನನ್ ಮಗ ‘ಎಂತದೇ ಮುಗಳ್ನಗಾಡ್ತೆ’ ಅಂದಾಗ ಸುಮ್ನೇ ನೋಡ್ತಾ ಇದ್ದೆ. ಆಗ ನಗು ಬರಲಿಲ್ಲ. ಮರುದಿನ ಒಬ್ಬಳೇ ಕುಳಿತಿದ್ದಾಗ ದೀತ್ಯಾ ಅಷ್ಟು ದೋಡ್ ದಾಗಿ ನಗ್ತಿದ್ರೆ ನನ್ ಮಗ ‘ಯಾಕೆ ಮುಗುಳ್ನಗ್ತೀಯಾ?' ಅಂತ ಕೇಳಿದ್ದು ನೆನಪಾಗಿ ನಗು ಬಂತು. ಪರವಾಗಿಲ್ಲ, ಅರ್ಥ ಗೊತ್ತಾಗ್ದಿದ್ರೂ ನಿಧಾನಕ್ಕೆ ಶಬ್ದಸಂಗ್ರಹಿಸ್ತಿದಾನೆ ಅನ್ಕೊಂಡು ಸುಮ್ನಾದೆ. ಇವನೇನೋ ಚಿಕ್ಕವನು, ಇವರಪ್ಪ ಯಾಕೆ ಹಾಗೆ ಅಂತ ಯೋಚ್ಸಿದಾಗ ನಾನೂ ಒಂದ್ಸಲ ಒಬ್ಬಳೇ ದೋಡ್ಡದಾಗಿ ಹೆ ಹ್ಹೆ ಹ್ಹೆ ಅಂತ ನಕ್ಕೆ. ಮತ್ತೆ ಇವನು ‘ಅದ್ಯಾಕೆ ಹಾಗೆ ಮುಗುಳ್ನಗ್ತೀಯಾ’ ಅನ್ನೋಥರ ನನ್ನೇ ನೋಡ್ತಾ ಇದ್ದ. ಆ ಜಾತಿನೆ ಹಾಗೆ ಅನಿಸಿಬಿಡ್ತು...
ಆವತ್ತು ಮಧ್ಯಾಹ್ನ ನನ್ ಕೊರೆತ ತಪ್ಪಿಸ್ಕೊಂಡು ಆಫೀಸಿಗೆ ಹೊರಟ ಖುಷಿಯಲ್ಲಿ ಲ್ಯಾಪ್ ಟಾಪ್ ಮನೆಲ್ಲೇ ಬಿಟ್ಟು ಓಡಿ ಹೊರಟಿದ್ದ. ಮತ್ತೆ `ಲ್ಯಾಪ್ ಟಾಪ್ ತಗೊಂಡುಹೋಗೋಕೆ ಬಂದೆ’ ಅಂತ ವಾಪಸ್ ಬರ್ತಾನೆ ಅಂತ ನಾನು ಬೇಗ ಬೇಗ ಅದನ್ನ ತಗೊಂಡು ಹೋಗಿ ಅವನ ಹೆಗಲಿಗೇರಿಸಿ ಕಳ್ಸಿದ್ದೆ. ಹೋಗೋವಾಗ ‘ಎಷ್ಟೊತ್ತಿಗ್ ಬರ್ತೀಯ?’ ಅಂದ್ರೆ ‘ಐದು ಗಂಟೆ’ ಅಂದ. ನಾನೂ ಬಿಡ್ಲಿಲ್ಲ ‘ನಾಲ್ಕು ಗಂಟೆಗೇ ಬಾ’ ಅಂದೆ. ‘ಹೆ ಹ್ಹೆ ಹ್ಹೆ’ ಅಂದ. ‘ಮೂರು ಗಂಟೆಗೆ ಬರ್ತೀನಿ’ ಅಂದ್ರೂ ‘ಎರಡ್ ಗಂಟೆಗೇ ಬಾ’ ಅನ್ನೋದೊಂಥರಾ ಅಭ್ಯಾಸ ನಂಗೆ. ಆದ್ರೂ ಇವನು ಹೀಗೆ ನಗೋದು ಸರಿಯಲ್ಲ ಅಲ್ವಾ? ನಾನೂ ಅವನನ್ನ ನೋಡಿ ಹೀಗೇ ನಗ್ತಾ ಇದ್ರೆ? ಒಂಥರಾ ಚೆನ್ನಾಗಿರಬಹುದು ಬಿಡಿ, ಬೆಳಿಗ್ಗೆಯಿಂದ ಸಂಜೆತನಕ ಮನೆಯೊಳಗೆ ಮಾತಿಲ್ಲ ಕಥೆಯಿಲ್ಲ, ಎಲ್ಲದಕ್ಕೂ ನಗು.
ಆವತ್ತು ಗೆಳತಿ ಹೇಳ್ತಾ ಇದ್ಲು. ‘ನಿನ್ನೆ ರಾತ್ರಿ ನಿದ್ರೆ ಮಾಡೋದು ತುಂಬ ಲೇಟ್ ಆಯ್ತು ಕಣೇ...’ ಅಂತ. ‘ಯಾಕೇ?’ ಅಂದೆ ಕಕ್ಕುಲತೆಯಿಂದ. ‘ಮಕ್ಕಳು ಮಲ್ಗೋದೆ ಲೇಟು, ಅದಾದ್ಮೇಲೆ ಇವನು ಕೈಕಾಲೆಲ್ಲ ನೋವು’ ಅಂದ. ‘ಕೈಕಾಲನ್ನೆಲ್ಲ ಮಸಾಜ್ ಮಾಡ್ಕೊಟ್ಬಿಟ್ಟು ನಾನು ಮಲ್ಕೊಳೋದೇ ಲೇಟ್ ಆಗೋಯ್ತು’ ಅಂದ್ಲು. ಮಧ್ಯೆ ಅದ್ಯಾರೋ ಕೇಳಿದ್ರು ‘ಅಲ್ಲಾ, ಕಂಪ್ಯೂಟರ್ ಮುಂದೆ ಕೂತು ಕೆಲ್ಸ ಮಾಡಿದ್ದಕ್ಕೆ ದಿನಾ ಮಸಾಜ್ ಮಾಡೋಷ್ಟು ಗ್ರಹಚಾರದ್ ನೋವಾ...ಏನ್ ದೋಡ್ ಕಲ್ಲ್ ಕಡಿಯೋಕೆ ಹೋಗೋರ ಥರ. ಬೆಳಗ್ಗೆದ್ದು ಪಾದಕ್ಕೆ ನಮಸ್ಕಾರ ಮಾಡೋ ಪರಿಪಾಠನೂ ಇದ್ಯಾ ಮತ್ತೆ?’ ಅಂತೆಲ್ಲ ಪ್ರಶ್ನಿಸಿ ವಿಷ್ಯ ಬೆಳಗ್ಗೆದ್ದು ಯಾರ್ಯಾರು ಅವರ ಪತಿಯ ಪಾದಕಮಲಗಳಿಗೆ ಎರಗಿ(ಎಡವಿ)ಬೀಳ್ತಾರೆ ಅನ್ನುವಲ್ಲಿಗೆ ಮುಟ್ಟಿದ್ದಾಯ್ತು. ನಾನಂತು ಸುಮ್ನಾಗ್ಬಿಟ್ಟೆ. ನಾನು ಬೆಳಿಗ್ಗೆದ್ದು ಇವನ ಪಾದ ಹುಡುಕ್ಕೊಂಡು ಕೂತ್ರೆ ಬೆಳಗಿನ ಕೆಲ್ಸ ಎಲ್ಲ ಮುಗಿದಂಗೆ. ಇವನು ಒಂದೊಂದು ಪಾದ ಒಂದೊಂದ್ ದಿಕ್ಕಿಗೆ ಎಸೆದು ಮಲ್ಕೊಂಡಿರ್ತಾನೆ, ಅವುಗಳನ್ನ ಎಲ್ಲಿಲ್ಲಿವೆ ಅಂತ ಹುಡುಕಿ, ಜೋಡ್ಸಿ ನಮಸ್ಕಾರ ಮಾಡೋಷ್ಟ್ರಲ್ಲಿ ಅವನಿಗೇ ಆಫೀಸಿಗೆ ಲೇಟ್ ಆಗ್ಬಿಡತ್ತೆ . ಇಲ್ಲಾ ಅಂದ್ರೆ ಪಾದಕ್ಕೆರ್ಗಕ್ಕೆ ನಂದೇನೂ ಆಬ್ಜಕ್ಷನ್ ಇರ್ಲಿಲ್ಲ.
ಹೀಗೆ ಒಂದಿನ ಸುಮ್ನೆ ಕೂತಿದ್ದೆ. ನಾನು ಸುಮ್ನೆ ಕೂತಿದ್ರೂ ನೋಡೋಕಾಗಲ್ಲ ಆಸಾಮಿಗೆ. ‘ಏನು....ಇವತ್ಯಾವ್ದ್ರ ಬಗ್ಗೆ ಆಲೋಚನಾ ಸಂಶೋಧನೆ? ಎಷ್ಟುವರ್ಷದ್ ಹಿಂದೆ ನಾನೇನ್ ಮಾಡಿದ್ದೆ ಅಂತ ನಿಂಗಿವತ್ತು ಕೋಪ?’ ಅಂದ್ಕೊಂಡು ಬರ್ತಾನೆ. ‘ಅದ್ಯಾವ ಜನ್ಮದಲ್ಲಿ ಪಾಪ ಮಾಡಿದ್ನೋ ಅಂತಾರೆ ನೋಡು, ಅ ಮಾತನ್ನ ಯಾವತ್ತೋ ಏನೋ ಮಾಡಿದ್ದನ್ನ ಇವತ್ತು ನೆನಪಿಸ್ಕೊಂಡು ಬೇಸರ ಮಾಡ್ಕೊತೀರ ನೀವು ಹೆಂಗಸ್ರು, ಅದ್ಕೆ ಗಂಡಸರು ಮಾತ್ರ ಆಡ್ಬೇಕಾಗಿರೋ ಮಾತುಗಳು ಅವು, ನೀವು ಹೆಂಗಸ್ರು ಹಾಗೆ ಹೇಳ್ಲೇ ಬಾರದು’ ಅಂತೆಲ್ಲ ಭಾಷಣ ಶುರು ಮಾಡಿದ. ನಾನ್ಯಾವತ್ತೂ ಆಡ್ದೇ ಇರೋ ಮಾತಿಗೂ ಇವತ್ತೊಂದು ಕೊಂಕು. ಇವತ್ತಿವಳು ಸುಮ್ನೆ ಇರ್ತಾಳೆ ಅಂತ ಗೊತ್ತಾದ್ರೆ ಇವರುಗಳು ಜೋರಾಗೇಬಿಡ್ತಾರೆ. ನಾನೇನಾದ್ರೂ ಧಬಾಯಿಸಿ ಉತ್ರ ಕೊಟ್ರೆ ಮತ್ತೆ ಒಂಥರಾ ನಗೋದು ನನ್ನ ಕಡೆ ನೋಡಿ. ಇವೇ ಆಗೋಲ್ಲ. ಒಂದ್ಸಲ ಅವನ ಕಡೆ ನೋಡಿ ‘ಸಾಕು, ಸುಮ್ನೆ ಇದ್ಬಿಡೋಣ’ ಅಂದ್ಕೊಂಡು ಸುಮ್ನಾದೆ. ಅವನಷ್ಟಕ್ಕೆ ಅವನು ಹೇಳ್ತಾ ಇದ್ದ. ‘ನೀನು ಸುಮ್ನೆ ಏನೇನೋ ಹೇಳ್ಬೇಡ, ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನೂ ವಹಿಸ್ಕೋತಾ ಇದೀನಿ’ ಅಂದ. ನಾನೇನು ಹೇಳ್ದೇನೆ ಇವನ್ಯಾಕೆ ಇದನ್ನೆಲ್ಲ ಹೇಳ್ತಿದಾನೆ ಅನ್ನಿಸ್ತು. ಮದುವೆ ಆದಾಗಿಂದ ಒಂದುಕಾಸು ಸಂಪಾದನೆ ಇಲ್ದೇ ಮನೇಲಿ ಕೂತಿರೋಳು ನಾನು. ಆದ್ರೂ ಅವನ ತಲೇಲಿ ಈ ಸಂಸಾರಕ್ಕೆ ತಾನೇನೂ ಮಾಡ್ತಿಲ್ಲ ಅಂತ ಅನ್ನಿಸೋ ಅಷ್ಟು ಕೊರೆದು ಮನೇಲಿ ಕುಳಿತು ನಾ ಮಾಡೋ ಅಡುಗೆ ಕೆಲಸವೇ ಸಂಸಾರ ನಡೆಯೋಕೆ ಆಧಾರ ಅನ್ನಿಸೋ ಹಾಗೆ ತಲೆಕೊರ್ದಿದೀನಾ ಅನ್ನಿಸ್ತು. ಈ ಕುಡುಕ್ರು ಪಡಕ್ರು , ಮನೆ ಹಾಳು ಮಾಡ್ಕೊಂಡೋವ್ರು ಎಲ್ಲ ಹೇಳೋ ಹಾಗೆ ಇನ್ನೊಂದ್ಸಲ ಹೇಳ್ದ. ‘ನಿಜವಾಗ್ಲೂ ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನು ವಹಿಸ್ಕೋತಾ ಇದೀನಿ, ಪುಟ್ಟುಗೆ ಸ್ನಾನಗೀನ ಮಾಡಿಸ್ತೀನಲ್ಲ’ಅಂದ. ‘ಪಾಪ, ಎಷ್ಟೆಲ್ಲ ಜವಾಬ್ಧಾರಿವಹಿಸ್ಕೊಂಡಿದಾನೆ ಮನೆದು’
ಅನ್ನಿಸ್ತು. ‘ನಮ್ಮದೇ ಮಗು ತಾನೆ, ನೀನ್ ಸ್ನಾನ್ ಮಾಡ್ಸೋದ್ ಪಕ್ಕದ್ ಮನೆ ಮಗೂಗೇನೂ ಅಲ್ವಲ್ಲಾ?’ ಅಂತ ಕೇಳಿ ದಂಗುಮಾಡಿಬಿಡೋಣ ಅನ್ನಿಸ್ತು.
ಆದ್ರೂ ಯಾವಾಗ್ಲೂ ಮನೆ ಜವಾಬ್ಧಾರಿ ವಹಿಸ್ಕೊಂಡಿದ್ದು ಅವನೇ ಅನ್ನೋ ರಹಸ್ಯ ಅವನಿಗೇ ಗೊತಾಗೋಕೆ ನಾನು ಬಿಡದೇ ಇರೋ ನನ್ನ ಸಾಮರ್ಥ್ಯಕ್ಕೆ ನಾನೇ ಭುಜ ತಟ್ಕೊಂಡೆ. ‘ಏನದು? ಭುಜ ತಟ್ಕೋತಾ ಇದೀಯ?’ ಅಂದ. ‘ಇಲ್ಲ, ಇವತ್ಯಾಕೋ ಬೆನ್ನು ನೋವು’ ಅಂದೆ.
ಪಾಪ, ಆವತ್ತು ಅವನು ಮನೆ ಜವಾಬ್ಧಾರಿ ನಿಭಾಯಿಸ್ತಾ ಇದ್ದ (ಅದೇ ಮಗನಿಗೆ ಸ್ನಾನ ಮಾಡಿಸೋದು). ತುಂಬ ಹೊತ್ತಿಂದ ಸ್ನಾನ ಮಾಡ್ತಿಲ್ಲ ಬೇರೇನೋ ಮಾಡ್ತಿರಬೇಕು, ಹೋಗಿ ನೋಡೋಣ ಅಂದ್ಕೊಂಡು ಬಾಥ್ ರೂಂಗೆ ಹೋಗಿ ನೋಡಿದ್ರೆ ಮಗನಿಗೆ ಹಲ್ಲುಜ್ಜಿಸ್ತಾ ಇದ್ರು ಅವರಪ್ಪ. ಮಗನ ಬಾಯಿತುಂಬಾ ನೊರೆನೊರೆ. ಮಗ ದೋಡ್ ದಾಗಿ ಬಾಯಿ ತೆರಕೊಂಡು ನಾಲಿಗೇನ ಊದ್ದಕ್ಕೆ ಹೊರಗೆ ಚಾಚ್ಕೊಂಡು ಟೂಥ್ ಬ್ರಶ್ ನಿಂದ ಗಸ ಗಸ ನಾಲಿಗೇನ ಉಜ್ಜತಾ ಇದ್ದ ಬಾಥ್ ರೂಂ ತೊಳೆದಂಗೆ. ಅವರಪ್ಪ ‘ಹೂಂ....ಉಜ್ಜು ಉಜ್ಜು, ಇನ್ನು ಗಟ್ಟಿ’ ಅಂತಾ ಇದ್ರು. ‘ಏನ್ ಮಾಡ್ತಿದೀರಾ ಇಬ್ರೂ?’ ಅಂತ ಕೇಳಿದ್ದಕ್ಕೆ ‘ನಾಲಿಗೆ ಉಜ್ತಿದಾನೆ’ ಅಂತ ನನ್ ಕಡೆ ತಿರುಗ್ದೆನೇ ಉತ್ತರ ಬಂತು. ಬಾಯಿ ತುಂಬ ನೊರೆ ತುಂಬ್ಕೊಂಡಿದ್ರಿಂದ ತಾವಿಬ್ರೂ ಮಾಡ್ತಿರೋ ಸಾಹಸಾನ ವರ್ಣಿಸೋಕಾಗದೆ ಮಗ ಬಾಯಿ ತೆರಕೊಂಡೇ ಕೋರೆಗಣ್ಣಲ್ಲಿ ನನ್ನ ನೋಡಿ ಮತ್ತೆ ತನ್ನ ಕೆಲಸ ಮುಂದ್ವರಿಸಿದ. ‘ಏನಷ್ಟೊಂದು ನೊರೆ?’ ಅಂದಿದ್ದಕ್ಕೆ ‘ಟೂಥ್ ಪೇಸ್ಟ್ ಹಾಕಿ ಉಜ್ಜತಿದಾನೆ’ ಅಂತ ಉತ್ರ ಬಂತು. ಸಧ್ಯ ಶಾಂಪೂ ಹಾಕಿ ಉಜ್ಜಲಿಲ್ವಲ್ಲ! ಅಂದ್ಕೊಂಡು ಸುಮ್ನೆ ಈ ಕಡೆ ಬಂದು ಸ್ವಲ್ಪ ಹೊತ್ತು ಕೂತ್ಕೊಂಡು ನನಗೆ ನಾನೆ ಸಮಾಧಾನ ಹೇಳ್ಕೊಂಡು ಎದ್ದೆ.
ದೀತ್ಯಾ ದೊಡ್ಡಬಾಯಿ ತೆರೆದು, ಮುದ್ದಾದ ಎರಡೇ ಹಲ್ಲು ತೋರ್ಸಿ ಆಹ್ಹ ಆಹ್ಹ ಆಹ್ಹ ಅಂತ ನಗುವಾಗ ನನ್ ಮಗ ‘ಎಂತದೇ ಮುಗಳ್ನಗಾಡ್ತೆ’ ಅಂದಾಗ ಸುಮ್ನೇ ನೋಡ್ತಾ ಇದ್ದೆ. ಆಗ ನಗು ಬರಲಿಲ್ಲ. ಮರುದಿನ ಒಬ್ಬಳೇ ಕುಳಿತಿದ್ದಾಗ ದೀತ್ಯಾ ಅಷ್ಟು ದೋಡ್ ದಾಗಿ ನಗ್ತಿದ್ರೆ ನನ್ ಮಗ ‘ಯಾಕೆ ಮುಗುಳ್ನಗ್ತೀಯಾ?' ಅಂತ ಕೇಳಿದ್ದು ನೆನಪಾಗಿ ನಗು ಬಂತು. ಪರವಾಗಿಲ್ಲ, ಅರ್ಥ ಗೊತ್ತಾಗ್ದಿದ್ರೂ ನಿಧಾನಕ್ಕೆ ಶಬ್ದಸಂಗ್ರಹಿಸ್ತಿದಾನೆ ಅನ್ಕೊಂಡು ಸುಮ್ನಾದೆ. ಇವನೇನೋ ಚಿಕ್ಕವನು, ಇವರಪ್ಪ ಯಾಕೆ ಹಾಗೆ ಅಂತ ಯೋಚ್ಸಿದಾಗ ನಾನೂ ಒಂದ್ಸಲ ಒಬ್ಬಳೇ ದೋಡ್ಡದಾಗಿ ಹೆ ಹ್ಹೆ ಹ್ಹೆ ಅಂತ ನಕ್ಕೆ. ಮತ್ತೆ ಇವನು ‘ಅದ್ಯಾಕೆ ಹಾಗೆ ಮುಗುಳ್ನಗ್ತೀಯಾ’ ಅನ್ನೋಥರ ನನ್ನೇ ನೋಡ್ತಾ ಇದ್ದ. ಆ ಜಾತಿನೆ ಹಾಗೆ ಅನಿಸಿಬಿಡ್ತು...
ಆವತ್ತು ಮಧ್ಯಾಹ್ನ ನನ್ ಕೊರೆತ ತಪ್ಪಿಸ್ಕೊಂಡು ಆಫೀಸಿಗೆ ಹೊರಟ ಖುಷಿಯಲ್ಲಿ ಲ್ಯಾಪ್ ಟಾಪ್ ಮನೆಲ್ಲೇ ಬಿಟ್ಟು ಓಡಿ ಹೊರಟಿದ್ದ. ಮತ್ತೆ `ಲ್ಯಾಪ್ ಟಾಪ್ ತಗೊಂಡುಹೋಗೋಕೆ ಬಂದೆ’ ಅಂತ ವಾಪಸ್ ಬರ್ತಾನೆ ಅಂತ ನಾನು ಬೇಗ ಬೇಗ ಅದನ್ನ ತಗೊಂಡು ಹೋಗಿ ಅವನ ಹೆಗಲಿಗೇರಿಸಿ ಕಳ್ಸಿದ್ದೆ. ಹೋಗೋವಾಗ ‘ಎಷ್ಟೊತ್ತಿಗ್ ಬರ್ತೀಯ?’ ಅಂದ್ರೆ ‘ಐದು ಗಂಟೆ’ ಅಂದ. ನಾನೂ ಬಿಡ್ಲಿಲ್ಲ ‘ನಾಲ್ಕು ಗಂಟೆಗೇ ಬಾ’ ಅಂದೆ. ‘ಹೆ ಹ್ಹೆ ಹ್ಹೆ’ ಅಂದ. ‘ಮೂರು ಗಂಟೆಗೆ ಬರ್ತೀನಿ’ ಅಂದ್ರೂ ‘ಎರಡ್ ಗಂಟೆಗೇ ಬಾ’ ಅನ್ನೋದೊಂಥರಾ ಅಭ್ಯಾಸ ನಂಗೆ. ಆದ್ರೂ ಇವನು ಹೀಗೆ ನಗೋದು ಸರಿಯಲ್ಲ ಅಲ್ವಾ? ನಾನೂ ಅವನನ್ನ ನೋಡಿ ಹೀಗೇ ನಗ್ತಾ ಇದ್ರೆ? ಒಂಥರಾ ಚೆನ್ನಾಗಿರಬಹುದು ಬಿಡಿ, ಬೆಳಿಗ್ಗೆಯಿಂದ ಸಂಜೆತನಕ ಮನೆಯೊಳಗೆ ಮಾತಿಲ್ಲ ಕಥೆಯಿಲ್ಲ, ಎಲ್ಲದಕ್ಕೂ ನಗು.
September 16, 2008
ಪೂರ್ಣಿಮೆಯ ಚಂದಿರನ ಕನ್ನಡಿಯ ಭಿತ್ತಿಯಲಿ...
ಇವತ್ತಿಗೂ ನಾನು ಹುಣ್ಣಿಮೆಯನ್ನು ಪ್ರೀತಿಸುತ್ತೇನೆ. ಹುಣ್ಣಿಮೆಯನ್ನು, ಬೆಳದಿಂಗಳನ್ನು ಪ್ರೀತಿಸು ಅಂತ ಅವಳೇ ನನಗೆ ಹೇಳಿಕೊಟ್ಟಳು. ಹುಣ್ಣಿಮೆಯನ್ನು ಹೇಗೆ ಪ್ರಿತಿಸಬೇಕಂತ ಕಲಿಸಿದಳು. ನಾನು ದಿನದ ಹೆಚ್ಚುಸಮಯವನ್ನು ಅವಳ ಜೊತೆ ಕಳೆದೆ. ಅವಳನ್ನು ಪ್ರೀತಿಸಿದೆ, ಆರಾಧಿಸಿದೆ. ನನಗೆ ಎಲ್ಲವೆಂದರೆ ಎಲ್ಲವೂ ಅವಳೇ ಆದಳು. ಅವಳು ಬಿಳಿಯ ಬಣ್ಣವನು ಪ್ರೀತಿಸಿದಳು. ಬಣ್ಣಗಳ ಗಾಢತೆಯನ್ನು ವಿರೋಧಿಸಿದಳು. ನೀಲಿ, ಕಪ್ಪು, ರಣಗೆಂಪು, ಹಸಿರುಗಳಂತಹ ಬಣ್ಣಗಳನ್ನು ದ್ವೇಷಿಸಿದಳು. ನನಗೂ ‘ಬಿಳಿಯ ಬಣ್ಣವನ್ನೇ ಪ್ರೀತಿಸು’ ಎಂದಳು. ಬಿಳಿಯಬಟ್ಟೆಯನ್ನೇ ತೊಡಿಸಿದಳು. ‘ನೀನು ನಮ್ಮನೆಯಲ್ಲಿ ಎಲ್ಲರಿಗಿಂತ ಸ್ವಲ್ಪ ಕಪ್ಪು, ಬಿಳಿಬಣ್ಣ ನಿನಗೊಪ್ಪುತ್ತೆ’ ಅಂತ ನನಗೂ ಬಿಳಿಬಟ್ಟೆಗಳನ್ನೇ ಖರೀದಿಸಿದ್ದಕ್ಕೆ ತನ್ನನ್ನು ತಾನೇ ಸಮರ್ಥಿಸಿಕೊಂಡಳು. ಹೈಸ್ಕೂಲು ಮೆಟ್ಟಿಲು ಹತ್ತುತ್ತಿದ್ದಂತೆಯೇ ಬಾಯ್ ಕಟ್ ಆಗಿದ್ದ ನನ್ನ ಕೂದಲನ್ನೆಲ್ಲ ‘ಇನ್ನು ಕತ್ತರಿಸುವುದು ಬೇಡ’ ಎಂದಳು. ಅಂಗಳದಲ್ಲಿ ನನಗಾಗಿ ಇನ್ನೊಂದೆರಡು ಮಲ್ಲಿಗೆಯನ್ನು, ನಾ ಪ್ರೀತಿಸಿದ ಕಪ್ಪುಗುಲಾಬಿಯ ಗಿಡಗಳನ್ನು ನೆಟ್ಟಳು, ಆರೈದಳು ನನ್ನನ್ನು ಆರೈದಂತೆಯೇ, ಪ್ರೀತಿಸಿದಳು ಕೂಡ ನನ್ನನ್ನು ಪ್ರೀತಿಸಿದಂತೆಯೇ.
‘ಬಿತ್ತರದ ಬಾನಿನಲಿ ಬತ್ತಲೆಯ ಬಯಲಿನಲಿ ನಂದನೋದ್ಯಾನವನೆ ಬೆಳೆವ ಮನವಿಲ್ಲ
ಪೂರ್ಣಿಮೆಯ ಚಂದಿರನ ಕನ್ನಡಿಯ ಭಿತ್ತಿಯಲಿ ಹೆಸರನ್ನು ಕೆತ್ತುವ ಆಸೆಯೆನಗಿಲ್ಲ’ ಎಂದು ಹಾಡಿದಳು.
ಮುಸ್ಸಂಜೆಯನ್ನು ಪ್ರೀತಿಸಿದಳು ಹೇಗೆ ಗೊತ್ತಾ? ಒಂದೇ ಒಂದು ಕಿಟಕಿಯಿರುವ ಅವಳ ರೂಮಿನೊಳಗೆ ಕುಳಿತು. ಕಿಟಕಿಯಿಂದಾಚೆ ಮುಸ್ಸಂಜೆಗೆ ಯಾವ ಬಣ್ಣ ಭಾವಗಳಿವೆ ನೋಡದೆಯೇ ಒಳಗೇ ಕುಳಿತು ಮನಸಿನ ಮೂಟೆಯನ್ನು ಬಿಚ್ಚಿ ಕನಸುಗಳ ಹೆಕ್ಕಿದಳು. ನೋವನ್ನು ಕುಕ್ಕಿದಳು. ಭಾವಗಳ ಬದಿಗೊತ್ತಿದಳು.‘ಈ ಕನಸು, ಭಾವ, ನೋವುಗಳನ್ನ ಹೀಗೆ ಬೇರೆಬೇರೆಯಾಗಿ ವಿಂಗಡಿಸಿಟ್ಟು ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿಕೋಬೇಕು, ಇಲ್ಲವಾದರೆ ನನ್ನ ಹಾಗಾಗ್ತೀಯ ನೋಡು’ ಅಂತ ನನ್ನನ್ನು ಗದರಿದಳು, ಅನವಶ್ಯಕ ನಕ್ಕಳು. ಈ ನಗುವಿನ ಅರ್ಥ ನಂಗೆ ಗೊತ್ತಾಗದೇ ಅವಳೊಡನೆ ನಗಲು ಯತ್ನಿಸಿದ ಮರುಕ್ಷಣಕ್ಕೆ ಅತ್ತುಬಿಟ್ಟಳು. ಅವಳನ್ನು ನಾನು ಅಥೈಸಿಕೊಂಡಿದ್ದು ಇಂತದೇ ಕ್ಷಣಗಳಲ್ಲಿ.
ಅವತ್ತವತ್ತು ಗರಿಗರಿ ಒಣಗಿದ ಬಟ್ಟೆಗಳನ್ನು ರೂಮೊಳಗೆ ಗುಡ್ಡೆಹಾಕಿಕೊಂಡು ಆವತ್ತೇ ಇಸ್ತ್ರಿ ಮಾಡಿದಳು. ಇಸ್ತ್ರಿ ಕಂಡ ಬಟ್ಟೆಯನ್ನು ಕೈಯಲೊಮ್ಮೆ ಸವರಿದಳು. ನಿಟ್ಟುಸಿರುಬಿಟ್ಟಳು, ಇಸ್ತ್ರಿಯಾದ ಬಟ್ಟೆಗಳನ್ನೆಲ್ಲ ಮಡಿಸಿ ಹ್ಯಾಂಗರ್ ಅಲ್ಲಿ ಜೋಡಿಸಿ ಬೀರುವಿನಲ್ಲಿಟ್ಟಳು. ಮುಗುಳ್ನಕ್ಕು ಹೊರಬಂದಳು ಮನಸನ್ನೂ ಇಸ್ತ್ರಿಹಾಕಿ ಮಡಿಸಿಟ್ಟು ಬಂದವಳಂತೆ ಕಾಣಿಸಿದಳು. ಮಾತು, ಮೌನ, ಮನೆ ಎಲ್ಲಕ್ಕೂ ಇಸ್ತ್ರಿಹಾಕಿದ್ದಲ್ಲದೆ ನನಗೂ ಇಸ್ತ್ರಿಹಾಕಿ ಶಿಸ್ತಿನಿಂದ ಬೆಳೆಸಿದಳು.
ಬೇಸಿಗೆಯ ಅಂಗಳವನ್ನು ನುಣುಪು ಮಣ್ಣು ಹಾಕಿಸಿ ತಾನೇ ಒರೆದು ಇನ್ನಷ್ಟು ನುಣುಪು ಮಾಡಿದಳು. ಅಂಗಳದ ಅಂಚಿಗೆಲ್ಲ ಹೂಕುಂಡಗಳನ್ನಿಟ್ಟು ಚೌಕು ಮಾಡಿದಳು. ಹೂಬಿಟ್ಟ ಅವನ್ನೆಲ್ಲ ಹುಣ್ಣಿಮೆಯ ಬೆಳಕಿನಲಿ ಪ್ರೀತಿಸಿದಳು, ಮುದ್ದಿಸಿದಳು. ಬೆನ್ನಮೇಲೆ ಕುಣಿಯುವ ನಿಳುಜಡೆ, ಅವಳು ಪ್ರೀತಿಸಿ ತೊಡುತ್ತಿದ್ದ ಆ ಬಿಳಿಯ ಬಣ್ಣ ಹಾಗೂ ಅದರ ಮೇಲಿನ ತೆಳುಬಣ್ಣದ ಡಿಸೈನನ್ನು ನಾನು ಪ್ರೀತಿಸುತ್ತ ಹೋದೆ. ಅವಳ ಹಿಂದೆಯೇ ಹೆಜ್ಜೆಯಿಟ್ಟ ನನ್ನನ್ನು ನೋಡಿ ನಕ್ಕಳು.
ಮತ್ತೆ ಕನಸು ಕಂಡಳು. ‘ನೀನಿಷ್ಟಪಟ್ಟವನನ್ನು ಮದುವೆಯಾಗೋದು ಬೇಡ, ನಿನ್ನನ್ನಿಷ್ಟಪಟ್ಟವನನ್ನು ಮದುವೆಯಾಗು’ ಅಂತ ಹೇಳಿದಳು.
ಮನದೊಳಗೆ ನನ್ನ ಮದುವೆಯ ತಯಾರಿನಡೆಸಿಬಿಟ್ಟಿದ್ದಳು. ಯಾವ ಬಣ್ಣದ ಸೀರೆ ಉಡಬೇಕಂತ ನಿರ್ಧರಿಸಿದಳು. ಕಿವಿಗೆ ಬುಗುಡಿ ಚುಚ್ಚಿಸಿಕೊಂಡಳು. ‘ನಿನ್ನ ಮದುವೆ ದಿನ ದೊಡ್ದ ಮುತ್ತಿನಬುಗುಡಿ ತೊಟ್ಟುಕೊಳ್ಳುವೆ’ ಅಂತ ಬೀಗಿದಳು. ‘ಆವತ್ತು ಜಡೆಹಾಕಿಕೊಳ್ಳೋಲ್ಲ, ನೋಡ್ತಿರು ತುರುಬು ಹಾಕ್ಕೊಂಡು ಹೇಗೆ ಮೆರೀತೀನಿ ಅಂತ’ ಅಂದಳು. ನನ್ನ ಮದುವೆಗೆ ತಯಾರಿ ನಡೆಸಿಯೇಬಿಟ್ಟಳು ಅದೆಷ್ಟೋ ವರ್ಷಗಳ ಮೊದಲೇ.
ಹಾಡಿದಳು, ನರ್ತಿಸಿದಳು, ಪ್ರಬಂಧಗಳ ಬರೆದಳು,ಚಿತ್ರಬರೆದಳು, ರಂಗೋಲೆ ಹಾಕಿದಳು ಮನೆಮುಂದೆ, ಮನೆಯೊಳಗೆ ಮಾತ್ರವಲ್ಲ! ತಾಲ್ಲೂಕುಮಟ್ಟದತನಕ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಗಿಟ್ಟಿಸಿದಳು. ಶೀಲ್ಡ್ ತಂದು ಜೋಪಾನವಾಗಿಟ್ಟಳು. ಚುಕ್ಕಿರಂಗೋಲೆಸ್ಪರ್ಧೆಯಲ್ಲಿ ಇವಳು ಬಿಡಿಸಿದ ಚುಕ್ಕೆರಂಗೋಲೆಯಾಗಿ ಅದ್ಭುತ ರೀತಿಯಲ್ಲಿ ಮೂಡಿದ ಗಣಪತಿ ಫ್ರೀಹ್ಯಾಂಡ್ ಡಿಸೈನೊಳಗೆ ಕಂಗೊಳಿಸಿದಂತೆ ಕಂಗೊಳಿಸಿದ. ಜಡ್ಜ್ ಇದು ಫ್ರೀಹ್ಯಾಂಡ್ ಅಂತ ಸ್ಪರ್ಧೆಗೆ ಪರಿಗಣಿಸದೇ ಹೋದ್ದಕ್ಕೆ ಅವನ ಮುಂದೆಯೇ ಚುಕ್ಕೆಯಿಟ್ಟು ಇನ್ನೊಮ್ಮೆ ಅದೇ ರಂಗೋಲೆ ಬಿಡಿಸಿಟ್ಟು ಅವನನ್ನು ದಿಗ್ಭ್ರಮೆಗೊಳಿಸಿದಳು. ಮೊದಲಬಹುಮಾನ ಗೆದ್ದಳು.
ಮನೆಗೆ ಬಂದವಳೇ ಹೇಳಿದಳು ‘ಇನ್ನು ಮೇಲೆ ಸ್ಪರ್ಧೆಗಳಿಗೆ ಭಾಗವಹಿಸೋಲ್ಲ, ನೆನಪಿಟ್ಟುಕೋ... ನೀನೂ ಸಹ ಯಾವ ಸ್ಪರ್ಧೆಗೂ ಭಾಗವಹಿಸ್ಬೇಡ, ನಿನಗೆ ತಾಕತ್ತಿದ್ದರೆ ನೀನಾಗೇ ನಿನ್ನಷ್ಟಕ್ಕೆ ಮುಂದೆಹೋಗು, ಯಾರೂ ನಮಗೆ ಬಹುಮಾನ ಕೊಡೋದು ಬೇಕಾಗಿಲ್ಲ’ ಅಂತ ಬಿಕ್ಕಿ ಬಿಕ್ಕಿ ಅತ್ತಳು.
"ಎದೆ ತುಂಬಿ ಹಾಡಿದೆನು ಅಂದು ನಾನು" ಅಂತ ಎದೆತುಂಬಿ ಹಾಡಿದಳು.
ಸ್ಕೂಲಿಂದ ಮಧ್ಯಾಹ್ನ ಊಟಕ್ಕೆ ಓಡೋಡಿ ಬರುತ್ತಿದ್ದ ನನಗಾಗಿ ಕಾಯುತ್ತ ಕುಳಿತಳು. ಯಾವತ್ತಾದರೂ ಪಲ್ಯ, ಸಾಂಬಾರಗಳು ಖಾರವೆಂತನಿಸಿದ ದಿನ ‘ಗೊಂಬಕ್ಕನ ಗೊಜ್ಜು’ ಮಾಡಿಟ್ಟು ನನಗೆ ಕಾದಳು. ‘ಸರಿಯಾಗಿ ಊಟ ಮಾಡು, ನಿನಗಿಷ್ಟದ ಗೊಂಬಕ್ಕನ ಗೊಜ್ಜು ಮಾಡಿದೀನಿ ಇವತ್ತು’ ಅಂದಳು. ತುತ್ತು ತುತ್ತು ತಿನ್ನುವಾಗಳೂ ನನ್ನನ್ನೇ ನೋಡಿದಳು. ತುಂಬ ಪ್ರೀತಿ ಉಕ್ಕಿದ ದಿನ ನನ್ನ ಪ್ಲೇಟಿನಿಂದ ತುತ್ತನ್ನೊಂದ ಎತ್ತಿಕೊಂಡು ತಿಂದಳು, ನನ್ನ ಮುದ್ದಿಸಿ ಸ್ಕೂಲಿಗೆ ಕಳಿಸಿದಳು.
ಯಾಕೋ ಏನೋ..ಆಮೇಲಾಮೇಲೆ ಬಿಳಿಬಣ್ಣದ ಹೊರತಾಗಿ ಕೆಲವು ಬಣ್ಣಗಳನ್ನು ಪ್ರೀತಿಸಿದಳು. ತಿಳಿಗುಲಾಬಿ, ತಿಳಿನೀಲಿ, ಜೇನುತುಪ್ಪದ ಬಣ್ಣಗಳನ್ನು.
ಬರಬರುತ್ತ ಗಾಢಬಣ್ಣಗಳನ್ನೇ ಪ್ರೀತಿಸಿದಳು. ಕಪ್ಪು ಸೀರೆಯೊಂದನ್ನು ತಂದು ಅದಕ್ಕೆ ಕಸೂತಿ ಮಾಡಿದಳು. ಕೆಂಪುಬಣ್ಣದ ರೇಷ್ಮೆ ಸೀರೆ ಕೊಂಡಳು. ‘ಈ ಬಣ್ಣ ಚೆನ್ನಾಗಿದೆಯಲ್ಲ! ನಿನ್ನ ಮದುವೆ ದಿನ ಈ ಸೀರೆಯನ್ನು ಹತ್ತುನಿಮಿಷವಾದರೂ ಉಟ್ಟುಕೊಳ್ಳುತ್ತೇನೆ’ ಅಂತ ಮನೆಮಂದಿಯ ಮುಂದೆಯೇ ಹೇಳಿದಳು.
ಅವಳಪ್ರೀತಿಯನ್ನೆಲ್ಲ ಮೈದುಂಬಿಕೊಳ್ಳುತ್ತ ಅವಳನ್ನೇ ಆರಾಧಿಸುತ್ತ, ಅವಳನ್ನೇ ಮೈವೆತ್ತುಹೋಗುವಂತೆ ನನ್ನ ಬೆಳೆಸಿದಳು. ಹಿಂದೆಯೇ ಸುಳಿದಾಡುತ್ತಿದ್ದ ಅವನನ್ನೊಮ್ಮೆ ಭೇಟಿ ಮಾಡಿಸಿದೆ. ‘ಅವನನ್ನು ಒಮ್ಮೆ ನೋಡು’ ಎಂದೆ. ಭೇಟಿಯಾಗಿಸಿದೆ. ಕೋರ್ಟಿನಲ್ಲಿ ಪ್ರಶ್ನೆ ಕೇಳುವಂತೆ ಅವನೆದುರು ಪ್ರಶ್ನೆಗಳನ್ನು ಕೇಳಿದಳು. ಅವನು ಕೆಲವಕ್ಕೆ ಉತ್ತರಿಸಿದ, ಕೆಲವಕ್ಕೆ ಮೌನವಾದ. ಮನೆಗೆ ಬಂದು ‘ಆತ ನಿನ್ನ ತುಂಬ ಪ್ರೀತಿಸ್ತಾನೆ, ನೀನು ಅವನನ್ನು ಪ್ರೀತಿಸು, ಮದುವೆ ಆದರೆ ಅವನನ್ನೇ ಮದುವೆಯಾಗು, ಯಾರ ಮಾತಿಗೂ ಜಗ್ಗಬೇಡ’ ಅಂತ ಹಠಮಾಡುವುದ ಕಲಿಸಿದಳು. ಆವತ್ತಿಂದ ಅವನನ್ನ ಗಮನಿಸುತ್ತ ಬಂದೆ. ಅವಳು ಹೇಳಿದಂಗೆ ಅವನ ನೋಡಿದ ಮೇಲೆ ನನಗೆ ಪ್ರೀತಿಸೋಕೆ ಬರೋಲ್ಲ ಅನ್ನಿಸಿತು, ಅಷ್ಟು ಗಾಢವಾಗಿ ಅವನು ನನ್ನ ಪ್ರೀತಿಸಿದ.
ಒಂದು ದಿನ ಕಾಲೇಜಿಂದ ಮನೆಗೆ ಬರುವಂತೆ ಮನೆಯಿಂದ ಕರೆಬಂತು. ಮನೆಗೆ ಬಂದಾಗ ಮನೆತುಂಬ ಜನ ನೆರೆದಿದ್ದರು. ‘ಹಾರ್ಟ್ ಅಟ್ಯಾಕ್ ಅಂತೆ’ ಅಂತ ಗುಸುಗುಸುಮಾಡುತ್ತಿದ್ದರು. ನನಗೆ ಮನೆಯೊಳಗೆ ಬರಲು ದಾರಿ ಕೊಟ್ಟರು.ಅವಳು ಜಗುಲಿಯಲ್ಲಿ ಉದ್ದಕ್ಕೆ ಮಲಗಿದ್ದಳು. ಬಿಳಿಬಣ್ಣವನ್ನೇ ತೊಟ್ಟಿದ್ದಳು. ಬಿಳಿಯ ಬಟ್ಟೆಯೊಂದನ್ನು ಮೈಮೇಲೆ ಹೊದೆಸಿದ್ದರು. ಎಲ್ಲರೂ ಅಳುತ್ತಿದ್ದರು. ನಾನು ಅಳಲಿಲ್ಲ. ಅವಳ ಮುಂದಿನ ಮೂಲೆಯಲ್ಲಿ ಕುಳಿತೆ. ಯಾರೂ ಇಲ್ಲದ ಹೊತ್ತಲ್ಲಿ ಮುಷ್ಠಿಯಾಗಿ ಬಿಗಿದಿದ್ದ ಅವಳ ಬೆರಳುಗಳನ್ನು ಬಿಡಿಸಲು ಯತ್ನಿಸಿದೆ, ವಜ್ರಮುಷ್ಠಿಯಾಗಿತ್ತು. ಕಣ್ಣನ್ನು ಉದ್ದನೆಯ ರೆಪ್ಪೆಗಳು ಮುಚ್ಚಿಕೊಂಡಿದ್ದವು. ಬಿಡಿಸಲು ನೋಡಿದೆ, ಆಗಲಿಲ್ಲ.
ಪೋಸ್ಟ್ ಮಾರ್ಟಮ್ ಆಗಬೇಕಿತ್ತು. ಪೋಲೀಸ್ ಬಂದವರು ‘ಏನೂ ಬೇಡ, ನಾವೆಲ್ಲ ನೋಡಿಕೊಳ್ತೇವೆ’ಅಂತ ಯಾವಗಲಾದರೊಮ್ಮೆ ಅವಳ ಕೈ ಅಡುಗೆಯ ಊಟಮಾಡಿಹೋಗಿದ್ದನ್ನ ನೆನಪಿಸಿಕೊಂಡರು. ಅವಳನ್ನು ಇಡಿಯಾಗಿ ಸುಡಲು ಅವಕಾಶ ಕೊಟ್ಟರು.
ಅಲ್ಲೊಬ್ಬ ನತದೃಷ್ಟ ಕೂತಿದ್ದ ನನ್ನ ಹಾಗೆಯೇ ಮೂಲೆಯಲ್ಲಿ. ಅವನಿದ್ದ ಮೂಲೆಗೆ ಹೋಗಿ ಕೇಳಿದೆ ‘ಅವಳಿಗೆ ಏನಾಯ್ತು?’ ಅಂತ. ‘ಗೊತ್ತಿಲ್ಲ, ಸ್ಕೂಲಿಂದ ಮನೆಗೆ ಬಂದಾಗ ಹಸಿವಾಗಿತ್ತು, ಅದಕ್ಕೆ ಮನೆಯೆಲ್ಲ ಇವಳಿಗಾಗಿ ಹುಡುಕಾಡ್ದೆ, ಮೇಲೆ ಬಂದ್ರೆ ಹೊಲಿಗೆ ಯಂತ್ರದ ಮುಂದೆ ಅಮ್ಮ ಇದ್ರು, ಆದ್ರೆ ಖುರ್ಚಿಯಿಂದ ಬಿದ್ದಿದ್ರು’ ಬಾಯಿಪಾಠ ಮಾಡಿಕೊಂಡಂತೆ ಹೇಳಿಮುಗಿಸಿದ. ಮುಂದೆ ಕೇಳೋಕಾಗ್ಲಿಲ್ಲ. ಮೇಲಕ್ಕೊಮ್ಮೆ ಹೋಗಿ ನೋಡ್ಕೊಂಡು ಬಂದೆ. ಅಲ್ಲೊಂದು ತಂಬಿಗೆ ನೀರು, ಹಗ್ಗದಂತೆ ತಿರುಪಿಕೊಂಡಿದ್ದ ಟೆರಿಲಿನ್ ಸೀರೆ ಎಲ್ಲವನ್ನೂ ಹೇಳಿದವು. ಮಹಡಿಯ ಅಂಕಣಕ್ಕೆ ತಟಸ್ಥವಾಗಿದ್ದ ಲೋಹದ ಬಳೆ ತನಗೇನೇನೂ ಗೊತ್ತಿಲ್ಲವೆಂಬಂತಿತ್ತು.
‘ಡಿಪ್ರೆಶನ್ನು....ಹೀಗೆಲ್ಲ ಆಗತ್ತೆ ಒಮ್ಮೊಮ್ಮೆ, ಯಾರೂ ಏನೂ ಮಾಡೋಕಾಗಲ್ಲ’ ಅಂತಿದ್ರು ಕೆಲವರು. ನನಗೆ ಕೇಳಿಸ್ತಾ ಇತ್ತು.
‘ಬಿತ್ತರದ ಬಾನಿನಂತಹ ಬದುಕೊಂದು ಅವಳಿಗೆ ಬೇಕಾಗಿತ್ತು’ ಅಂತ ಚೀರೋಣ ಅನ್ನಿಸ್ತು. ಆದ್ರೆ ಹಾಗೆ ಮಾಡ್ಲಿಲ್ಲ. ಯಾಕೇಂದ್ರೆ ಇದೇ ಜನರ ಮಧ್ಯೆ ಬಿತ್ತರದ ಬಾನಿನಂತಹ ಬದುಕನ್ನು ನಾನು ಕಾಣಬೇಕಿತ್ತು. ಅವಳು ಮಾತ್ರ ಹೊರಟುಹೋಗಿದ್ಲು ಇದ್ಯಾವುದರ ಬಗ್ಗೆಯೂ ಯೋಚಿಸದೇ...ಅವಳಸುತ್ತಲಿರುವ ಅವಳನ್ನೆ ಅವಲಂಬಿಸಿದ ಅನೇಕ ಜನರ ಬಗ್ಗೆ ಯೋಚಿಸದೇ. ಸುತ್ತೆಲ್ಲ ಮೂಲೆಗಳನ್ನು ನೋಡಿದೆ, ನನ್ನ ಹಾಗೆಯೇ ಮೂಲೆಯಲ್ಲಿ ಕುಳಿತ ಅನೇಕರಿದ್ದರು ಅಲ್ಲಿ. ಒಬ್ಬರಿಗೊಬ್ಬರು ಸಮಾಧಾನ ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಯಾಕೆಂದರೆ ಎಲ್ಲರಿಗೂ ಅವಳು ಬೇಕಾಗಿದ್ದಳು. ಜೋರಾಗಿ ನಗಬೇಕೆನಿಸಿತು.
ಅವಳು... ಅವಳು ಯಾವತ್ತೂ ಹೀಗೆ ಹೋಗುತ್ತೇನೆಂದು ನನಗೆ ಹೇಳಿರಲೇ ಇಲ್ಲ.
‘ಬಿತ್ತರದ ಬಾನಿನಲಿ ಬತ್ತಲೆಯ ಬಯಲಿನಲಿ ನಂದನೋದ್ಯಾನವನೆ ಬೆಳೆವ ಮನವಿಲ್ಲ
ಪೂರ್ಣಿಮೆಯ ಚಂದಿರನ ಕನ್ನಡಿಯ ಭಿತ್ತಿಯಲಿ ಹೆಸರನ್ನು ಕೆತ್ತುವ ಆಸೆಯೆನಗಿಲ್ಲ’ ಎಂದು ಹಾಡಿದಳು.
ಮುಸ್ಸಂಜೆಯನ್ನು ಪ್ರೀತಿಸಿದಳು ಹೇಗೆ ಗೊತ್ತಾ? ಒಂದೇ ಒಂದು ಕಿಟಕಿಯಿರುವ ಅವಳ ರೂಮಿನೊಳಗೆ ಕುಳಿತು. ಕಿಟಕಿಯಿಂದಾಚೆ ಮುಸ್ಸಂಜೆಗೆ ಯಾವ ಬಣ್ಣ ಭಾವಗಳಿವೆ ನೋಡದೆಯೇ ಒಳಗೇ ಕುಳಿತು ಮನಸಿನ ಮೂಟೆಯನ್ನು ಬಿಚ್ಚಿ ಕನಸುಗಳ ಹೆಕ್ಕಿದಳು. ನೋವನ್ನು ಕುಕ್ಕಿದಳು. ಭಾವಗಳ ಬದಿಗೊತ್ತಿದಳು.‘ಈ ಕನಸು, ಭಾವ, ನೋವುಗಳನ್ನ ಹೀಗೆ ಬೇರೆಬೇರೆಯಾಗಿ ವಿಂಗಡಿಸಿಟ್ಟು ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿಕೋಬೇಕು, ಇಲ್ಲವಾದರೆ ನನ್ನ ಹಾಗಾಗ್ತೀಯ ನೋಡು’ ಅಂತ ನನ್ನನ್ನು ಗದರಿದಳು, ಅನವಶ್ಯಕ ನಕ್ಕಳು. ಈ ನಗುವಿನ ಅರ್ಥ ನಂಗೆ ಗೊತ್ತಾಗದೇ ಅವಳೊಡನೆ ನಗಲು ಯತ್ನಿಸಿದ ಮರುಕ್ಷಣಕ್ಕೆ ಅತ್ತುಬಿಟ್ಟಳು. ಅವಳನ್ನು ನಾನು ಅಥೈಸಿಕೊಂಡಿದ್ದು ಇಂತದೇ ಕ್ಷಣಗಳಲ್ಲಿ.
ಅವತ್ತವತ್ತು ಗರಿಗರಿ ಒಣಗಿದ ಬಟ್ಟೆಗಳನ್ನು ರೂಮೊಳಗೆ ಗುಡ್ಡೆಹಾಕಿಕೊಂಡು ಆವತ್ತೇ ಇಸ್ತ್ರಿ ಮಾಡಿದಳು. ಇಸ್ತ್ರಿ ಕಂಡ ಬಟ್ಟೆಯನ್ನು ಕೈಯಲೊಮ್ಮೆ ಸವರಿದಳು. ನಿಟ್ಟುಸಿರುಬಿಟ್ಟಳು, ಇಸ್ತ್ರಿಯಾದ ಬಟ್ಟೆಗಳನ್ನೆಲ್ಲ ಮಡಿಸಿ ಹ್ಯಾಂಗರ್ ಅಲ್ಲಿ ಜೋಡಿಸಿ ಬೀರುವಿನಲ್ಲಿಟ್ಟಳು. ಮುಗುಳ್ನಕ್ಕು ಹೊರಬಂದಳು ಮನಸನ್ನೂ ಇಸ್ತ್ರಿಹಾಕಿ ಮಡಿಸಿಟ್ಟು ಬಂದವಳಂತೆ ಕಾಣಿಸಿದಳು. ಮಾತು, ಮೌನ, ಮನೆ ಎಲ್ಲಕ್ಕೂ ಇಸ್ತ್ರಿಹಾಕಿದ್ದಲ್ಲದೆ ನನಗೂ ಇಸ್ತ್ರಿಹಾಕಿ ಶಿಸ್ತಿನಿಂದ ಬೆಳೆಸಿದಳು.
ಬೇಸಿಗೆಯ ಅಂಗಳವನ್ನು ನುಣುಪು ಮಣ್ಣು ಹಾಕಿಸಿ ತಾನೇ ಒರೆದು ಇನ್ನಷ್ಟು ನುಣುಪು ಮಾಡಿದಳು. ಅಂಗಳದ ಅಂಚಿಗೆಲ್ಲ ಹೂಕುಂಡಗಳನ್ನಿಟ್ಟು ಚೌಕು ಮಾಡಿದಳು. ಹೂಬಿಟ್ಟ ಅವನ್ನೆಲ್ಲ ಹುಣ್ಣಿಮೆಯ ಬೆಳಕಿನಲಿ ಪ್ರೀತಿಸಿದಳು, ಮುದ್ದಿಸಿದಳು. ಬೆನ್ನಮೇಲೆ ಕುಣಿಯುವ ನಿಳುಜಡೆ, ಅವಳು ಪ್ರೀತಿಸಿ ತೊಡುತ್ತಿದ್ದ ಆ ಬಿಳಿಯ ಬಣ್ಣ ಹಾಗೂ ಅದರ ಮೇಲಿನ ತೆಳುಬಣ್ಣದ ಡಿಸೈನನ್ನು ನಾನು ಪ್ರೀತಿಸುತ್ತ ಹೋದೆ. ಅವಳ ಹಿಂದೆಯೇ ಹೆಜ್ಜೆಯಿಟ್ಟ ನನ್ನನ್ನು ನೋಡಿ ನಕ್ಕಳು.
ಮತ್ತೆ ಕನಸು ಕಂಡಳು. ‘ನೀನಿಷ್ಟಪಟ್ಟವನನ್ನು ಮದುವೆಯಾಗೋದು ಬೇಡ, ನಿನ್ನನ್ನಿಷ್ಟಪಟ್ಟವನನ್ನು ಮದುವೆಯಾಗು’ ಅಂತ ಹೇಳಿದಳು.
ಮನದೊಳಗೆ ನನ್ನ ಮದುವೆಯ ತಯಾರಿನಡೆಸಿಬಿಟ್ಟಿದ್ದಳು. ಯಾವ ಬಣ್ಣದ ಸೀರೆ ಉಡಬೇಕಂತ ನಿರ್ಧರಿಸಿದಳು. ಕಿವಿಗೆ ಬುಗುಡಿ ಚುಚ್ಚಿಸಿಕೊಂಡಳು. ‘ನಿನ್ನ ಮದುವೆ ದಿನ ದೊಡ್ದ ಮುತ್ತಿನಬುಗುಡಿ ತೊಟ್ಟುಕೊಳ್ಳುವೆ’ ಅಂತ ಬೀಗಿದಳು. ‘ಆವತ್ತು ಜಡೆಹಾಕಿಕೊಳ್ಳೋಲ್ಲ, ನೋಡ್ತಿರು ತುರುಬು ಹಾಕ್ಕೊಂಡು ಹೇಗೆ ಮೆರೀತೀನಿ ಅಂತ’ ಅಂದಳು. ನನ್ನ ಮದುವೆಗೆ ತಯಾರಿ ನಡೆಸಿಯೇಬಿಟ್ಟಳು ಅದೆಷ್ಟೋ ವರ್ಷಗಳ ಮೊದಲೇ.
ಹಾಡಿದಳು, ನರ್ತಿಸಿದಳು, ಪ್ರಬಂಧಗಳ ಬರೆದಳು,ಚಿತ್ರಬರೆದಳು, ರಂಗೋಲೆ ಹಾಕಿದಳು ಮನೆಮುಂದೆ, ಮನೆಯೊಳಗೆ ಮಾತ್ರವಲ್ಲ! ತಾಲ್ಲೂಕುಮಟ್ಟದತನಕ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಗಿಟ್ಟಿಸಿದಳು. ಶೀಲ್ಡ್ ತಂದು ಜೋಪಾನವಾಗಿಟ್ಟಳು. ಚುಕ್ಕಿರಂಗೋಲೆಸ್ಪರ್ಧೆಯಲ್ಲಿ ಇವಳು ಬಿಡಿಸಿದ ಚುಕ್ಕೆರಂಗೋಲೆಯಾಗಿ ಅದ್ಭುತ ರೀತಿಯಲ್ಲಿ ಮೂಡಿದ ಗಣಪತಿ ಫ್ರೀಹ್ಯಾಂಡ್ ಡಿಸೈನೊಳಗೆ ಕಂಗೊಳಿಸಿದಂತೆ ಕಂಗೊಳಿಸಿದ. ಜಡ್ಜ್ ಇದು ಫ್ರೀಹ್ಯಾಂಡ್ ಅಂತ ಸ್ಪರ್ಧೆಗೆ ಪರಿಗಣಿಸದೇ ಹೋದ್ದಕ್ಕೆ ಅವನ ಮುಂದೆಯೇ ಚುಕ್ಕೆಯಿಟ್ಟು ಇನ್ನೊಮ್ಮೆ ಅದೇ ರಂಗೋಲೆ ಬಿಡಿಸಿಟ್ಟು ಅವನನ್ನು ದಿಗ್ಭ್ರಮೆಗೊಳಿಸಿದಳು. ಮೊದಲಬಹುಮಾನ ಗೆದ್ದಳು.
ಮನೆಗೆ ಬಂದವಳೇ ಹೇಳಿದಳು ‘ಇನ್ನು ಮೇಲೆ ಸ್ಪರ್ಧೆಗಳಿಗೆ ಭಾಗವಹಿಸೋಲ್ಲ, ನೆನಪಿಟ್ಟುಕೋ... ನೀನೂ ಸಹ ಯಾವ ಸ್ಪರ್ಧೆಗೂ ಭಾಗವಹಿಸ್ಬೇಡ, ನಿನಗೆ ತಾಕತ್ತಿದ್ದರೆ ನೀನಾಗೇ ನಿನ್ನಷ್ಟಕ್ಕೆ ಮುಂದೆಹೋಗು, ಯಾರೂ ನಮಗೆ ಬಹುಮಾನ ಕೊಡೋದು ಬೇಕಾಗಿಲ್ಲ’ ಅಂತ ಬಿಕ್ಕಿ ಬಿಕ್ಕಿ ಅತ್ತಳು.
"ಎದೆ ತುಂಬಿ ಹಾಡಿದೆನು ಅಂದು ನಾನು" ಅಂತ ಎದೆತುಂಬಿ ಹಾಡಿದಳು.
ಸ್ಕೂಲಿಂದ ಮಧ್ಯಾಹ್ನ ಊಟಕ್ಕೆ ಓಡೋಡಿ ಬರುತ್ತಿದ್ದ ನನಗಾಗಿ ಕಾಯುತ್ತ ಕುಳಿತಳು. ಯಾವತ್ತಾದರೂ ಪಲ್ಯ, ಸಾಂಬಾರಗಳು ಖಾರವೆಂತನಿಸಿದ ದಿನ ‘ಗೊಂಬಕ್ಕನ ಗೊಜ್ಜು’ ಮಾಡಿಟ್ಟು ನನಗೆ ಕಾದಳು. ‘ಸರಿಯಾಗಿ ಊಟ ಮಾಡು, ನಿನಗಿಷ್ಟದ ಗೊಂಬಕ್ಕನ ಗೊಜ್ಜು ಮಾಡಿದೀನಿ ಇವತ್ತು’ ಅಂದಳು. ತುತ್ತು ತುತ್ತು ತಿನ್ನುವಾಗಳೂ ನನ್ನನ್ನೇ ನೋಡಿದಳು. ತುಂಬ ಪ್ರೀತಿ ಉಕ್ಕಿದ ದಿನ ನನ್ನ ಪ್ಲೇಟಿನಿಂದ ತುತ್ತನ್ನೊಂದ ಎತ್ತಿಕೊಂಡು ತಿಂದಳು, ನನ್ನ ಮುದ್ದಿಸಿ ಸ್ಕೂಲಿಗೆ ಕಳಿಸಿದಳು.
ಯಾಕೋ ಏನೋ..ಆಮೇಲಾಮೇಲೆ ಬಿಳಿಬಣ್ಣದ ಹೊರತಾಗಿ ಕೆಲವು ಬಣ್ಣಗಳನ್ನು ಪ್ರೀತಿಸಿದಳು. ತಿಳಿಗುಲಾಬಿ, ತಿಳಿನೀಲಿ, ಜೇನುತುಪ್ಪದ ಬಣ್ಣಗಳನ್ನು.
ಬರಬರುತ್ತ ಗಾಢಬಣ್ಣಗಳನ್ನೇ ಪ್ರೀತಿಸಿದಳು. ಕಪ್ಪು ಸೀರೆಯೊಂದನ್ನು ತಂದು ಅದಕ್ಕೆ ಕಸೂತಿ ಮಾಡಿದಳು. ಕೆಂಪುಬಣ್ಣದ ರೇಷ್ಮೆ ಸೀರೆ ಕೊಂಡಳು. ‘ಈ ಬಣ್ಣ ಚೆನ್ನಾಗಿದೆಯಲ್ಲ! ನಿನ್ನ ಮದುವೆ ದಿನ ಈ ಸೀರೆಯನ್ನು ಹತ್ತುನಿಮಿಷವಾದರೂ ಉಟ್ಟುಕೊಳ್ಳುತ್ತೇನೆ’ ಅಂತ ಮನೆಮಂದಿಯ ಮುಂದೆಯೇ ಹೇಳಿದಳು.
ಅವಳಪ್ರೀತಿಯನ್ನೆಲ್ಲ ಮೈದುಂಬಿಕೊಳ್ಳುತ್ತ ಅವಳನ್ನೇ ಆರಾಧಿಸುತ್ತ, ಅವಳನ್ನೇ ಮೈವೆತ್ತುಹೋಗುವಂತೆ ನನ್ನ ಬೆಳೆಸಿದಳು. ಹಿಂದೆಯೇ ಸುಳಿದಾಡುತ್ತಿದ್ದ ಅವನನ್ನೊಮ್ಮೆ ಭೇಟಿ ಮಾಡಿಸಿದೆ. ‘ಅವನನ್ನು ಒಮ್ಮೆ ನೋಡು’ ಎಂದೆ. ಭೇಟಿಯಾಗಿಸಿದೆ. ಕೋರ್ಟಿನಲ್ಲಿ ಪ್ರಶ್ನೆ ಕೇಳುವಂತೆ ಅವನೆದುರು ಪ್ರಶ್ನೆಗಳನ್ನು ಕೇಳಿದಳು. ಅವನು ಕೆಲವಕ್ಕೆ ಉತ್ತರಿಸಿದ, ಕೆಲವಕ್ಕೆ ಮೌನವಾದ. ಮನೆಗೆ ಬಂದು ‘ಆತ ನಿನ್ನ ತುಂಬ ಪ್ರೀತಿಸ್ತಾನೆ, ನೀನು ಅವನನ್ನು ಪ್ರೀತಿಸು, ಮದುವೆ ಆದರೆ ಅವನನ್ನೇ ಮದುವೆಯಾಗು, ಯಾರ ಮಾತಿಗೂ ಜಗ್ಗಬೇಡ’ ಅಂತ ಹಠಮಾಡುವುದ ಕಲಿಸಿದಳು. ಆವತ್ತಿಂದ ಅವನನ್ನ ಗಮನಿಸುತ್ತ ಬಂದೆ. ಅವಳು ಹೇಳಿದಂಗೆ ಅವನ ನೋಡಿದ ಮೇಲೆ ನನಗೆ ಪ್ರೀತಿಸೋಕೆ ಬರೋಲ್ಲ ಅನ್ನಿಸಿತು, ಅಷ್ಟು ಗಾಢವಾಗಿ ಅವನು ನನ್ನ ಪ್ರೀತಿಸಿದ.
ಒಂದು ದಿನ ಕಾಲೇಜಿಂದ ಮನೆಗೆ ಬರುವಂತೆ ಮನೆಯಿಂದ ಕರೆಬಂತು. ಮನೆಗೆ ಬಂದಾಗ ಮನೆತುಂಬ ಜನ ನೆರೆದಿದ್ದರು. ‘ಹಾರ್ಟ್ ಅಟ್ಯಾಕ್ ಅಂತೆ’ ಅಂತ ಗುಸುಗುಸುಮಾಡುತ್ತಿದ್ದರು. ನನಗೆ ಮನೆಯೊಳಗೆ ಬರಲು ದಾರಿ ಕೊಟ್ಟರು.ಅವಳು ಜಗುಲಿಯಲ್ಲಿ ಉದ್ದಕ್ಕೆ ಮಲಗಿದ್ದಳು. ಬಿಳಿಬಣ್ಣವನ್ನೇ ತೊಟ್ಟಿದ್ದಳು. ಬಿಳಿಯ ಬಟ್ಟೆಯೊಂದನ್ನು ಮೈಮೇಲೆ ಹೊದೆಸಿದ್ದರು. ಎಲ್ಲರೂ ಅಳುತ್ತಿದ್ದರು. ನಾನು ಅಳಲಿಲ್ಲ. ಅವಳ ಮುಂದಿನ ಮೂಲೆಯಲ್ಲಿ ಕುಳಿತೆ. ಯಾರೂ ಇಲ್ಲದ ಹೊತ್ತಲ್ಲಿ ಮುಷ್ಠಿಯಾಗಿ ಬಿಗಿದಿದ್ದ ಅವಳ ಬೆರಳುಗಳನ್ನು ಬಿಡಿಸಲು ಯತ್ನಿಸಿದೆ, ವಜ್ರಮುಷ್ಠಿಯಾಗಿತ್ತು. ಕಣ್ಣನ್ನು ಉದ್ದನೆಯ ರೆಪ್ಪೆಗಳು ಮುಚ್ಚಿಕೊಂಡಿದ್ದವು. ಬಿಡಿಸಲು ನೋಡಿದೆ, ಆಗಲಿಲ್ಲ.
ಪೋಸ್ಟ್ ಮಾರ್ಟಮ್ ಆಗಬೇಕಿತ್ತು. ಪೋಲೀಸ್ ಬಂದವರು ‘ಏನೂ ಬೇಡ, ನಾವೆಲ್ಲ ನೋಡಿಕೊಳ್ತೇವೆ’ಅಂತ ಯಾವಗಲಾದರೊಮ್ಮೆ ಅವಳ ಕೈ ಅಡುಗೆಯ ಊಟಮಾಡಿಹೋಗಿದ್ದನ್ನ ನೆನಪಿಸಿಕೊಂಡರು. ಅವಳನ್ನು ಇಡಿಯಾಗಿ ಸುಡಲು ಅವಕಾಶ ಕೊಟ್ಟರು.
ಅಲ್ಲೊಬ್ಬ ನತದೃಷ್ಟ ಕೂತಿದ್ದ ನನ್ನ ಹಾಗೆಯೇ ಮೂಲೆಯಲ್ಲಿ. ಅವನಿದ್ದ ಮೂಲೆಗೆ ಹೋಗಿ ಕೇಳಿದೆ ‘ಅವಳಿಗೆ ಏನಾಯ್ತು?’ ಅಂತ. ‘ಗೊತ್ತಿಲ್ಲ, ಸ್ಕೂಲಿಂದ ಮನೆಗೆ ಬಂದಾಗ ಹಸಿವಾಗಿತ್ತು, ಅದಕ್ಕೆ ಮನೆಯೆಲ್ಲ ಇವಳಿಗಾಗಿ ಹುಡುಕಾಡ್ದೆ, ಮೇಲೆ ಬಂದ್ರೆ ಹೊಲಿಗೆ ಯಂತ್ರದ ಮುಂದೆ ಅಮ್ಮ ಇದ್ರು, ಆದ್ರೆ ಖುರ್ಚಿಯಿಂದ ಬಿದ್ದಿದ್ರು’ ಬಾಯಿಪಾಠ ಮಾಡಿಕೊಂಡಂತೆ ಹೇಳಿಮುಗಿಸಿದ. ಮುಂದೆ ಕೇಳೋಕಾಗ್ಲಿಲ್ಲ. ಮೇಲಕ್ಕೊಮ್ಮೆ ಹೋಗಿ ನೋಡ್ಕೊಂಡು ಬಂದೆ. ಅಲ್ಲೊಂದು ತಂಬಿಗೆ ನೀರು, ಹಗ್ಗದಂತೆ ತಿರುಪಿಕೊಂಡಿದ್ದ ಟೆರಿಲಿನ್ ಸೀರೆ ಎಲ್ಲವನ್ನೂ ಹೇಳಿದವು. ಮಹಡಿಯ ಅಂಕಣಕ್ಕೆ ತಟಸ್ಥವಾಗಿದ್ದ ಲೋಹದ ಬಳೆ ತನಗೇನೇನೂ ಗೊತ್ತಿಲ್ಲವೆಂಬಂತಿತ್ತು.
‘ಡಿಪ್ರೆಶನ್ನು....ಹೀಗೆಲ್ಲ ಆಗತ್ತೆ ಒಮ್ಮೊಮ್ಮೆ, ಯಾರೂ ಏನೂ ಮಾಡೋಕಾಗಲ್ಲ’ ಅಂತಿದ್ರು ಕೆಲವರು. ನನಗೆ ಕೇಳಿಸ್ತಾ ಇತ್ತು.
‘ಬಿತ್ತರದ ಬಾನಿನಂತಹ ಬದುಕೊಂದು ಅವಳಿಗೆ ಬೇಕಾಗಿತ್ತು’ ಅಂತ ಚೀರೋಣ ಅನ್ನಿಸ್ತು. ಆದ್ರೆ ಹಾಗೆ ಮಾಡ್ಲಿಲ್ಲ. ಯಾಕೇಂದ್ರೆ ಇದೇ ಜನರ ಮಧ್ಯೆ ಬಿತ್ತರದ ಬಾನಿನಂತಹ ಬದುಕನ್ನು ನಾನು ಕಾಣಬೇಕಿತ್ತು. ಅವಳು ಮಾತ್ರ ಹೊರಟುಹೋಗಿದ್ಲು ಇದ್ಯಾವುದರ ಬಗ್ಗೆಯೂ ಯೋಚಿಸದೇ...ಅವಳಸುತ್ತಲಿರುವ ಅವಳನ್ನೆ ಅವಲಂಬಿಸಿದ ಅನೇಕ ಜನರ ಬಗ್ಗೆ ಯೋಚಿಸದೇ. ಸುತ್ತೆಲ್ಲ ಮೂಲೆಗಳನ್ನು ನೋಡಿದೆ, ನನ್ನ ಹಾಗೆಯೇ ಮೂಲೆಯಲ್ಲಿ ಕುಳಿತ ಅನೇಕರಿದ್ದರು ಅಲ್ಲಿ. ಒಬ್ಬರಿಗೊಬ್ಬರು ಸಮಾಧಾನ ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಯಾಕೆಂದರೆ ಎಲ್ಲರಿಗೂ ಅವಳು ಬೇಕಾಗಿದ್ದಳು. ಜೋರಾಗಿ ನಗಬೇಕೆನಿಸಿತು.
ಅವಳು... ಅವಳು ಯಾವತ್ತೂ ಹೀಗೆ ಹೋಗುತ್ತೇನೆಂದು ನನಗೆ ಹೇಳಿರಲೇ ಇಲ್ಲ.
September 15, 2008
ಆಗಸದ ಹಾದಿಯಲಿ...
ಬೆಳಗು ಹರಿಯುತಲಿ ಸುದ್ದಿ ಹರಿಸುತಲಿ
ಮೂಲೆಮೂಲೆಯಲು ಪ್ರೀತಿ ಸದ್ದು
ಚಕೋರನೂರಿನಲಿ ಪ್ರೀತಿ ಗುಲ್ಲೇಗುಲ್ಲು
ಚಂದಿರನ ನಾಡಿನಲಿ ಪ್ರೀತಿ ಸಾಲು
ಮೋಡಗಳ ಮುರಿಸಿ ಮಳೆ ತೊಡಿಸಿದವನು
ಮರೆಯಾದ ಗಳಿಗೆ ಮೂಡಿದನು ಇವನು
ಬಿದಿಗೆಯಲಿ ಅರೆಬಾಗಿ ದೋಣಿಯಾದವನು
ಆವ ತೀರಕೆ ನನ್ನ ತಲುಪಿಸುವನಿವನು?
ಮೂಗುತಿಯ ಸಾಲು ತಾರೆಲೋಕದೊಳೆಲ್ಲ
ಬಳಸುತ್ತ ಉಲಿದನು ನತ್ತು ಬೇಕೆ ಎಂದು
ನಗುತಾನೆ ನನ್ನಿನಿಯ ತುಂಟನೋಟವ ಬೀರಿ
ನಗುವವನ ನೆಲದಲ್ಲಿ ನಾ ಬೆಳದಿಂಗಳು
ಆಗಸದ ಕಿಟಕಿಗಿಹ ಮೋಡಪರದೆಯ ಸರಿಸೆ
ಹರಿವತೊರೆಯೊಂದು ಹೊಳೆದು ಹರಿದಿರಲು
ಹೊಸಸೀರೆ ಇದುವೆಂದ ಆ ತೊರೆಯ ತೋರಿ
ಮಡಿಸಿ ಕೈಯ್ಯೊಳಗಿತ್ತು ಹರಿವತೊರೆಯನ್ನು
ಆಗಸದ ಅಟ್ಟದಲಿ ಕೈಹಿಡಿದ ಇವನು
ನೀಲರಾತ್ರಿಯ ಹಣತೆ ಕೈಯಲಿತ್ತವನು
ಬೆಳಗುಮೂಡುವ ಮುನ್ನ ಅಡಗಬೇಕಿತ್ತವನು
ಮೋಡಪರದೆಯಸರಿಸಿ ಅಡಗಿದೆವು ನಾವು
ಕೈಹಿಡಿದು ನಡೆದೆವು ಆಗಸದ ಹಾದಿಯಲಿ
ಬೆಳಗ ತಿರುವಿನಲಿ ಮಂಕಾದನಿವನು
ಜೋಡಿಹಕ್ಕಿಗಳೆರಡು ಹಾರಿದ ದಿಕ್ಕಿನಲಿ
ಜೋಡಿಹೆಜ್ಜೆಯನಿಡುತ ನಾನು ಇವನು
ನಡೆನಡೆದು ಸಂಜೆತೀರವನು ತಲುಪೆ
ಮತ್ತೆ ಬೆಳಗಿದನು ಸುತ್ತ ಬೆಳಕನ್ನು
ಅರಳಿದೆನು ನಾ ಮೋಡಗಳ ಮರೆಯಲ್ಲಿ
ಚಂದಮಾಮನ ಸುತ್ತನಾ ಚೆಲುಬೆಳದಿಂಗಳು
ಮೂಲೆಮೂಲೆಯಲು ಪ್ರೀತಿ ಸದ್ದು
ಚಕೋರನೂರಿನಲಿ ಪ್ರೀತಿ ಗುಲ್ಲೇಗುಲ್ಲು
ಚಂದಿರನ ನಾಡಿನಲಿ ಪ್ರೀತಿ ಸಾಲು
ಮೋಡಗಳ ಮುರಿಸಿ ಮಳೆ ತೊಡಿಸಿದವನು
ಮರೆಯಾದ ಗಳಿಗೆ ಮೂಡಿದನು ಇವನು
ಬಿದಿಗೆಯಲಿ ಅರೆಬಾಗಿ ದೋಣಿಯಾದವನು
ಆವ ತೀರಕೆ ನನ್ನ ತಲುಪಿಸುವನಿವನು?
ಮೂಗುತಿಯ ಸಾಲು ತಾರೆಲೋಕದೊಳೆಲ್ಲ
ಬಳಸುತ್ತ ಉಲಿದನು ನತ್ತು ಬೇಕೆ ಎಂದು
ನಗುತಾನೆ ನನ್ನಿನಿಯ ತುಂಟನೋಟವ ಬೀರಿ
ನಗುವವನ ನೆಲದಲ್ಲಿ ನಾ ಬೆಳದಿಂಗಳು
ಆಗಸದ ಕಿಟಕಿಗಿಹ ಮೋಡಪರದೆಯ ಸರಿಸೆ
ಹರಿವತೊರೆಯೊಂದು ಹೊಳೆದು ಹರಿದಿರಲು
ಹೊಸಸೀರೆ ಇದುವೆಂದ ಆ ತೊರೆಯ ತೋರಿ
ಮಡಿಸಿ ಕೈಯ್ಯೊಳಗಿತ್ತು ಹರಿವತೊರೆಯನ್ನು
ಆಗಸದ ಅಟ್ಟದಲಿ ಕೈಹಿಡಿದ ಇವನು
ನೀಲರಾತ್ರಿಯ ಹಣತೆ ಕೈಯಲಿತ್ತವನು
ಬೆಳಗುಮೂಡುವ ಮುನ್ನ ಅಡಗಬೇಕಿತ್ತವನು
ಮೋಡಪರದೆಯಸರಿಸಿ ಅಡಗಿದೆವು ನಾವು
ಕೈಹಿಡಿದು ನಡೆದೆವು ಆಗಸದ ಹಾದಿಯಲಿ
ಬೆಳಗ ತಿರುವಿನಲಿ ಮಂಕಾದನಿವನು
ಜೋಡಿಹಕ್ಕಿಗಳೆರಡು ಹಾರಿದ ದಿಕ್ಕಿನಲಿ
ಜೋಡಿಹೆಜ್ಜೆಯನಿಡುತ ನಾನು ಇವನು
ನಡೆನಡೆದು ಸಂಜೆತೀರವನು ತಲುಪೆ
ಮತ್ತೆ ಬೆಳಗಿದನು ಸುತ್ತ ಬೆಳಕನ್ನು
ಅರಳಿದೆನು ನಾ ಮೋಡಗಳ ಮರೆಯಲ್ಲಿ
ಚಂದಮಾಮನ ಸುತ್ತನಾ ಚೆಲುಬೆಳದಿಂಗಳು
September 11, 2008
ಹೇಳಲೊಂಥರಾ ಥರಾ...ನೋಡಲೊಂಥರಾಥರಾ....
ಇಲ್ಲೊಂದೆರಡು ವಿಡಿಯೋತುಣುಕುಗಳನ್ನ ನಿಮ್ಮ ಮುಂದಿಟ್ಟಿದೀನಿ. ಬ್ಲಾಗ್ ಅಲ್ಲಿ ಹಾಕೋಕೆ ತುಂಬ ಮುಜುಗರವಾಗಿದ್ರಿಂದ ಇಷ್ಟು ದಿನ ಇದನ್ನ ಬ್ಲಾಗಲ್ಲಿ ಹಾಕಿರ್ಲಿಲ್ಲ. ಮೊನ್ನೆ ಒಬ್ಬರು ತುಂಬ ಒತ್ತಾಯ ಮಾಡಿದ್ರು ‘ಬ್ಲಾಗಲ್ಲಿ ಹಾಕು ಆ ವಿಡಿಯೋನ’ ಅಂತ. ಬ್ಲಾಗ್ ಬರೆಯೋಕೆ ಆರಂಭಿಸಿದಾಗ ಮೊದಲೆಲ್ಲ ಸಲಹೆಗಳನ್ನ ಕೊಟ್ಟು ಸಲಹಿದ ಹಿತೈಷಿ ಅವರು. ಅಂಥವರ ಮಾತನ್ನ ಮೀರೋಕಾಗ್ದೇ ತುಂಬ ಮುಜುಗರದಿಂದ ಈ ವಿಡಿಯೋನ ನಿಮ್ಮಗಳ ಮುಂದೆ ಇಡ್ತಿದೀನಿ. ಅಷ್ಟೊಂದು ಚೆನಾಗಿ ಅಡುಗೆ ಮಾಡೋಕೆ ಬರೋಲ್ಲ, ಆದ್ರೂ ಒಂದ್ಸಲ ಟ್ರೈ ಮಾಡಿದ್ದೆ, ಅದೇ ಇದು.

ETV Kannada - ಸವಿರುಚಿಯ 2006/ May- ಚಿತ್ರೀಕರಣ
June/ 9/ 2006 ಪ್ರಸಾರ
ನಿಶಿತಾ ಗೌಡರ ಕಾರ್ಯಕ್ರಮ ನಿರ್ವಹಣೆ
ಮಿಸ್ ಪಂಕಜ ನಿರ್ದೇಶನ
ಶ್ರೀ ರಾಮು ಅವರ ಸಲಹೆ ಸಹಕಾರಗಳು
ಮರೆಯಲಾಗದ ಒಂದು ಸಂತಸದ ಅನುಭವ.
ಶೂಟಿಂಗ್ ಮುಗ್ಸಿ ಅಮ್ಮಂಗೆ ಫೋನ್ ಮಾಡಿದ್ದೆ. ‘ಹೇಗಾಯ್ತು?’ ಅಂತ ಅಮ್ಮ ಕೇಳಿದ್ರು. ‘ಪರವಾಗಿಲ್ಲ’ ಅಂತ ಹೇಳ್ದೆ. ಮನೆಗೆ ಬರೋಷ್ಟ್ರಲ್ಲಿ ಸುಸ್ತಾಗಿತ್ತು,(ಇಷ್ಟೆಲ್ಲ ಅಡುಗೆ ಮಾಡಿದ್ರೆ ಸುಸ್ತಾಗದೇ ಇರತ್ತ,?) ಮಲ್ಕೊಂಬಿಟ್ಟೆ.
ಈ ಟಿವಿಲಿ ಪ್ರಸಾರ ಆದ ದಿನ ಅಮ್ಮ ನೋಡ್ಬಿಟ್ಟು ‘ಇದೆಂತೆ ಪುಟ್ಟಾ....!!!ಬೆಳ್ಳುಳ್ಳಿ ತಂಬುಳಿ ಮಾಡೋದನ್ನ ಅಷ್ಟು ನೀಟಾಗಿ ಕಲ್ಸಿ ಕಳ್ಸಿದ್ದಿ, ನೀನೆಂತೋ ಹೊಸರುಚಿ ಮಾಡಿಟ್ಟಿದ್ದೆ...ಈರುಳ್ಳಿ ಉದ್ದಿನ್ ಬೇಳೆ ತಂಬುಳಿ!!!’ ಅಂತ ಅಮ್ಮ ಹುಬ್ಬೇರಿಸಿದ್ರು. ಅಜ್ಜಿ ಹೇಳ್ತಾ ಇದ್ರು ‘ಎಂತ ಆಗದಿಲ್ಲೆ ತಗ...ಇದೂ ಒಂದ್ ನಮೂನಿ ಚೊಲೊನೆ ಆಗ್ತು’ ಅಂತ ನಾ ಮಾಡಿದ ತಂಬುಳಿ ಉಂಡಷ್ಟೇ ಖುಷಿಪಟ್ಟರಲ್ಲದೇ ನನ್ನ ಮುದ್ದು ಮಾಡಿದ್ರು. (ನಂಗೆ ನಿಜವಾಗ್ಲೂ ಅಮ್ಮ ಹಿಂದಿನ್ ದಿನ ಕಲಿಸಿದ್ದ ರೆಸಿಪಿ ಮರ್ತೋಗಿತ್ತು ಅನ್ಸತ್ತೆ, ಬೆಳ್ಳುಳ್ಳಿ ಬದಲು ಈರುಳ್ಳಿ ಹಾಕಿದೀನಿ ತಂಬುಳಿಗೆ. ಆದ್ರೂ ನೀವೂ ಟ್ರೈ ಮಾಡ್ಬಹುದು ಅನ್ಸತ್ತೆ )
ನಾನು ಮಾತ್ರ ಈ ವಿಡಿಯೋ ನೋಡೋಕೇ ಹೋಗೋಲ್ಲ, ಏನೋ ಒಂಥರಾ ಆಗತ್ತೆ ನಂಗೆ ಇದನ್ನ ನೋಡಿದ್ರೆ. ಈ ವಿಡಿಯೋ ತುಣುಕುಗಳನ್ನ ನಿಮ್ಮ ಮುಂದೆ ಇಟ್ಬಿಟ್ಟು ನಾನಂತೂ ಓಡಿಹೋಗ್ತಿದೀನಿ. ನೋಡಿಯಾದ್ಮೇಲೆ ನೀವು ಹೇಳಿ ‘ನೋಡಿಯಾಯ್ತು, ಬಾ ಶಾಂತಲಾ...’ ಅಂತ. ಅಲ್ಲಿತನಕ ಬಬಾ.....ಯ್.

ಮತ್ತೊಮ್ಮೆ ಈಟಿವಿ ಬಳಗದವರನ್ನ ನೆನೆಯುತ್ತ,
-ಶಾಂತಲಾ ಭಂಡಿ.
ETV Kannada - ಸವಿರುಚಿಯ 2006/ May- ಚಿತ್ರೀಕರಣ
June/ 9/ 2006 ಪ್ರಸಾರ
ನಿಶಿತಾ ಗೌಡರ ಕಾರ್ಯಕ್ರಮ ನಿರ್ವಹಣೆ
ಮಿಸ್ ಪಂಕಜ ನಿರ್ದೇಶನ
ಶ್ರೀ ರಾಮು ಅವರ ಸಲಹೆ ಸಹಕಾರಗಳು
ಮರೆಯಲಾಗದ ಒಂದು ಸಂತಸದ ಅನುಭವ.
ಶೂಟಿಂಗ್ ಮುಗ್ಸಿ ಅಮ್ಮಂಗೆ ಫೋನ್ ಮಾಡಿದ್ದೆ. ‘ಹೇಗಾಯ್ತು?’ ಅಂತ ಅಮ್ಮ ಕೇಳಿದ್ರು. ‘ಪರವಾಗಿಲ್ಲ’ ಅಂತ ಹೇಳ್ದೆ. ಮನೆಗೆ ಬರೋಷ್ಟ್ರಲ್ಲಿ ಸುಸ್ತಾಗಿತ್ತು,(ಇಷ್ಟೆಲ್ಲ ಅಡುಗೆ ಮಾಡಿದ್ರೆ ಸುಸ್ತಾಗದೇ ಇರತ್ತ,?) ಮಲ್ಕೊಂಬಿಟ್ಟೆ.
ಈ ಟಿವಿಲಿ ಪ್ರಸಾರ ಆದ ದಿನ ಅಮ್ಮ ನೋಡ್ಬಿಟ್ಟು ‘ಇದೆಂತೆ ಪುಟ್ಟಾ....!!!ಬೆಳ್ಳುಳ್ಳಿ ತಂಬುಳಿ ಮಾಡೋದನ್ನ ಅಷ್ಟು ನೀಟಾಗಿ ಕಲ್ಸಿ ಕಳ್ಸಿದ್ದಿ, ನೀನೆಂತೋ ಹೊಸರುಚಿ ಮಾಡಿಟ್ಟಿದ್ದೆ...ಈರುಳ್ಳಿ ಉದ್ದಿನ್ ಬೇಳೆ ತಂಬುಳಿ!!!’ ಅಂತ ಅಮ್ಮ ಹುಬ್ಬೇರಿಸಿದ್ರು. ಅಜ್ಜಿ ಹೇಳ್ತಾ ಇದ್ರು ‘ಎಂತ ಆಗದಿಲ್ಲೆ ತಗ...ಇದೂ ಒಂದ್ ನಮೂನಿ ಚೊಲೊನೆ ಆಗ್ತು’ ಅಂತ ನಾ ಮಾಡಿದ ತಂಬುಳಿ ಉಂಡಷ್ಟೇ ಖುಷಿಪಟ್ಟರಲ್ಲದೇ ನನ್ನ ಮುದ್ದು ಮಾಡಿದ್ರು. (ನಂಗೆ ನಿಜವಾಗ್ಲೂ ಅಮ್ಮ ಹಿಂದಿನ್ ದಿನ ಕಲಿಸಿದ್ದ ರೆಸಿಪಿ ಮರ್ತೋಗಿತ್ತು ಅನ್ಸತ್ತೆ, ಬೆಳ್ಳುಳ್ಳಿ ಬದಲು ಈರುಳ್ಳಿ ಹಾಕಿದೀನಿ ತಂಬುಳಿಗೆ. ಆದ್ರೂ ನೀವೂ ಟ್ರೈ ಮಾಡ್ಬಹುದು ಅನ್ಸತ್ತೆ )
ನಾನು ಮಾತ್ರ ಈ ವಿಡಿಯೋ ನೋಡೋಕೇ ಹೋಗೋಲ್ಲ, ಏನೋ ಒಂಥರಾ ಆಗತ್ತೆ ನಂಗೆ ಇದನ್ನ ನೋಡಿದ್ರೆ. ಈ ವಿಡಿಯೋ ತುಣುಕುಗಳನ್ನ ನಿಮ್ಮ ಮುಂದೆ ಇಟ್ಬಿಟ್ಟು ನಾನಂತೂ ಓಡಿಹೋಗ್ತಿದೀನಿ. ನೋಡಿಯಾದ್ಮೇಲೆ ನೀವು ಹೇಳಿ ‘ನೋಡಿಯಾಯ್ತು, ಬಾ ಶಾಂತಲಾ...’ ಅಂತ. ಅಲ್ಲಿತನಕ ಬಬಾ.....ಯ್.
ಮತ್ತೊಮ್ಮೆ ಈಟಿವಿ ಬಳಗದವರನ್ನ ನೆನೆಯುತ್ತ,
-ಶಾಂತಲಾ ಭಂಡಿ.
September 10, 2008
ತರಕಾರಿ ಪಲ್ಯದಷ್ಟೇ ಬದುಕು
ಧೂಳು ಧುಮುಗುಟ್ಟಿದರೆ
ಸಿಡಿದಿದ್ದು ಬರಿಯ ಬಾಂಬ್ ಮಾತ್ರವಲ್ಲ ಕಣೋ
ಸತ್ತ ಜೀವದೊಳವಿನ ಭಾವ
‘ಪಾಪ ಅಲ್ಲವಾ?’ಅಂದರೆ
ಸಿಗದ ವಸ್ತು
ಹೊರಟು ಹೋಗಿದ್ದು
ಎಲ್ಲರಿಗೂ ಗೊತ್ತು
ಸುಮ್ಮನೆ ‘ಹೂಂ’ ಅಂದುಬಿಡು
ಢವ ಗುಡುವ ಉಸಿರು
ಢಬ್ ಗುಡುವ ಬೂಟಿನ ಸದ್ದು
ಡಂ ಢಮಾರುಗಳ ಮರೆತಿಷ್ಟು
ನಿರಾಳನಾಗು
ಬರೆಬರೆದು ಸುಸ್ತು
ರಾಜಕಾರಣಕ್ಕೀಗ ವಯಸ್ಸಾಗಿದೆ ನಿಜ
ತಲೆಮೇಲಿನ ಮಣಭಾರ ಇಳಿಸಿಲ್ಲಿ ಪಕ್ಕಕ್ಕಿಡು
ಪ್ರಶ್ನೆಗಳೆಲ್ಲ ಸುಲುಭದ್ದೇ ಇರಬೇಕು
ಯೋಚಿಸದೇ ‘ಹೂಂ’ ಅನ್ನುವಂತದ್ದು
ಮತ್ತೇನಿಲ್ಲ ಸದಾ ಚಿಂತಿಸದೆ
ಮನಬಿಚ್ಚಿ ಹಗುರಾಗು
ತರಕಾರಿ ಪಲ್ಯದಷ್ಟೇ ಬದುಕು
ಸರಳವಾಗಿರಬೇಕು
ಊಟಕ್ಕಿಷ್ಟು ಉಪ್ಪಿನಕಾಯಿ
ಧಾರವಾಹಿಗಳ ನಡು ಜಾಹೀರಾತು ಇರಲಿ
ಸಿಡಿದಿದ್ದು ಬರಿಯ ಬಾಂಬ್ ಮಾತ್ರವಲ್ಲ ಕಣೋ
ಸತ್ತ ಜೀವದೊಳವಿನ ಭಾವ
‘ಪಾಪ ಅಲ್ಲವಾ?’ಅಂದರೆ
ಸಿಗದ ವಸ್ತು
ಹೊರಟು ಹೋಗಿದ್ದು
ಎಲ್ಲರಿಗೂ ಗೊತ್ತು
ಸುಮ್ಮನೆ ‘ಹೂಂ’ ಅಂದುಬಿಡು
ಢವ ಗುಡುವ ಉಸಿರು
ಢಬ್ ಗುಡುವ ಬೂಟಿನ ಸದ್ದು
ಡಂ ಢಮಾರುಗಳ ಮರೆತಿಷ್ಟು
ನಿರಾಳನಾಗು
ಬರೆಬರೆದು ಸುಸ್ತು
ರಾಜಕಾರಣಕ್ಕೀಗ ವಯಸ್ಸಾಗಿದೆ ನಿಜ
ತಲೆಮೇಲಿನ ಮಣಭಾರ ಇಳಿಸಿಲ್ಲಿ ಪಕ್ಕಕ್ಕಿಡು
ಪ್ರಶ್ನೆಗಳೆಲ್ಲ ಸುಲುಭದ್ದೇ ಇರಬೇಕು
ಯೋಚಿಸದೇ ‘ಹೂಂ’ ಅನ್ನುವಂತದ್ದು
ಮತ್ತೇನಿಲ್ಲ ಸದಾ ಚಿಂತಿಸದೆ
ಮನಬಿಚ್ಚಿ ಹಗುರಾಗು
ತರಕಾರಿ ಪಲ್ಯದಷ್ಟೇ ಬದುಕು
ಸರಳವಾಗಿರಬೇಕು
ಊಟಕ್ಕಿಷ್ಟು ಉಪ್ಪಿನಕಾಯಿ
ಧಾರವಾಹಿಗಳ ನಡು ಜಾಹೀರಾತು ಇರಲಿ
September 8, 2008
ಬಾಳೆಂಬ ಗುಡಿಗೆ ನೀ ದೇವನಾದೆ...
ಏಳು ಹೆಜ್ಜೆಗಳ ಬಂಧ
ಏಳು ವರ್ಷಗಳುರುಳಿ
ವರುಷಕೂ ಹೊಸತು ಜನುಮ
ಹೆಜ್ಜೆಯಿಟ್ಟಷ್ಟಕ್ಕೂ ಅಂತ್ಯಗಾಣದ ಪಯಣ
ಏಳುಬೀಳುಗಳ ಜತೆ
ಏಳು ಏಳೆನ್ನುತ್ತನೀ ಜತೆಗಿರಲು
ಸಪ್ತಪದಿಯಿಡುವುದೇನು!
ಸಪ್ತಸಾಗರ ದಾಟಿಯೇನು
ನಾವೀರ್ವರು ಇಟ್ಟಿದ್ದೆಲ್ಲ ಸಪ್ತಪದಿ
ಸಪ್ತಋಷಿ ಮಂಡಲದಲ್ಲೀಗ
ನಾವೀರ್ವರು ಮತ್ತು
ನಮ್ಮೈವರು ಮಕ್ಕಳು
ಇದು ಏಳಕ್ಕೆ ಮುಗಿಯದ ಲೆಕ್ಕ
ಕೂಡಿ ಕಳೆದು ಭಾಗಿಸಿ ಗುಣಿಸಿದರೆ
ಮುಗಿಯದ ಬಾಬ್ತು
ಇದೀಗ ಮೂವತ್ಮೂರಕ್ಕೆ ಏರಿದ್ದಕ್ಕೆ ಶುಭಾಶಯ
ಏಳು ವರ್ಷಗಳುರುಳಿ
ವರುಷಕೂ ಹೊಸತು ಜನುಮ
ಹೆಜ್ಜೆಯಿಟ್ಟಷ್ಟಕ್ಕೂ ಅಂತ್ಯಗಾಣದ ಪಯಣ
ಏಳುಬೀಳುಗಳ ಜತೆ
ಏಳು ಏಳೆನ್ನುತ್ತನೀ ಜತೆಗಿರಲು
ಸಪ್ತಪದಿಯಿಡುವುದೇನು!
ಸಪ್ತಸಾಗರ ದಾಟಿಯೇನು
ನಾವೀರ್ವರು ಇಟ್ಟಿದ್ದೆಲ್ಲ ಸಪ್ತಪದಿ
ಸಪ್ತಋಷಿ ಮಂಡಲದಲ್ಲೀಗ
ನಾವೀರ್ವರು ಮತ್ತು
ನಮ್ಮೈವರು ಮಕ್ಕಳು
ಇದು ಏಳಕ್ಕೆ ಮುಗಿಯದ ಲೆಕ್ಕ
ಕೂಡಿ ಕಳೆದು ಭಾಗಿಸಿ ಗುಣಿಸಿದರೆ
ಮುಗಿಯದ ಬಾಬ್ತು
ಇದೀಗ ಮೂವತ್ಮೂರಕ್ಕೆ ಏರಿದ್ದಕ್ಕೆ ಶುಭಾಶಯ
September 5, 2008
ಮುಸ್ಸಂಜೆ ಮನೆಯೊಳಗೆ...
ನಿತ್ಯ ಕಾಡುವ ಮುಸ್ಸಂಜೆ
ಮುಗಿದು ಮರಳುವ ಮಾಯೆ
ಅಂದದ ಅಂದಣದೊಳು
ಮಾಯುವ ಭಾಗ್ಯಕ್ಕೆ
ದಿನಾ ಬರುವುದೇಕೆ?
ಅಳಿಸುವುದಕ್ಕೆ!
ರಮಿಸುವುದಕ್ಕೆ?
ಗುಡ್ಡದಾಚೆಯ ಬಯಲ
ಅಂಬರದ ಅಂಬರ ಮಣಿ
ನಿತ್ಯ ಕಳೆದು
ಮೋಡದೋಕುಳಿಯಡಿ
ಹುಡುಕುತ್ತೇನೆ
ಆಗ ನೀನೂ ಬಾ
ತೆಗೆದುಕೋ ಅರ್ಧ ತುಮುಲಗಳ
ಮರಳಿಕೊಡು
ಆಯ್ದ ಅಶ್ರುಮಣಿಗಳ
ಮುಸ್ಸಂಜೆ ಜಾರದಂತೆ ಬದು ಹಾಕು
ಬೇಲಿಕಟ್ಟಿದರೂ ಸರಿಯೇ
ತರಗೆಲೆಯ ಸರಿಸಿ
ಬೆರಳಂಚು
ಮಣ್ಣ ಕೆದಕೆದಕಿದಂತೆ
ಮರಳಿ ಬಂದದ್ದೇಕೆ
ಹೋಗಿಬಿಡು
ಮಳೆಗಾಲದಿರಚಲು
ನಡುವಿನ ಗೋಡೆ ಬೀಳಿಸಿಹೋಗಿದ್ದಕ್ಕೆ
ಧನ್ಯವಾದ
ಮಣ್ಣ ಸುರಿದು ಮೈಮೇಲೆ
ಮಗೆ ಮಗೆದು ಒರೆಸೊರಸಿ
ರಮಿಸುವುದೇಕೆ
ಹೋದವನು ಮರಳಿಬರಬೇಡ
ಹನಿಯುವ ನೀರು ಹರಿಯುವುದಿಲ್ಲ
ಚೆಲ್ಲಿದ್ದು ಚೆಲ್ಲಾಪಿಲ್ಲಿ
ವಂದನೆಗಳು
ಖಾಸಗಿತನಕೊಂದಿಷ್ಟು ಖಾಸಗಿತನ
ಅದಲಿಬ್ಬರಿಗೂ
ಇದೆಯೊಂದು
ಇರದ ಸ್ಥಾನ
ಬದಲಿಗೆಬದಲಾಗಿದ್ದಕ್ಕೆ ಜಾಗ
ಇತ್ತ ತುತ್ತಿಗೆ ಮೀಸಲೊಂದಿಷ್ಟು ಸ್ಥಳ
ಆದಿಯಿರದ ಅಂತ್ಯಕ್ಕೆ ನಮಸ್ಕಾರ
ಬರುತ್ತಿರು
ಮುಗಿದು ಮರಳುವ ಮಾಯೆ
ಅಂದದ ಅಂದಣದೊಳು
ಮಾಯುವ ಭಾಗ್ಯಕ್ಕೆ
ದಿನಾ ಬರುವುದೇಕೆ?
ಅಳಿಸುವುದಕ್ಕೆ!
ರಮಿಸುವುದಕ್ಕೆ?
ಗುಡ್ಡದಾಚೆಯ ಬಯಲ
ಅಂಬರದ ಅಂಬರ ಮಣಿ
ನಿತ್ಯ ಕಳೆದು
ಮೋಡದೋಕುಳಿಯಡಿ
ಹುಡುಕುತ್ತೇನೆ
ಆಗ ನೀನೂ ಬಾ
ತೆಗೆದುಕೋ ಅರ್ಧ ತುಮುಲಗಳ
ಮರಳಿಕೊಡು
ಆಯ್ದ ಅಶ್ರುಮಣಿಗಳ
ಮುಸ್ಸಂಜೆ ಜಾರದಂತೆ ಬದು ಹಾಕು
ಬೇಲಿಕಟ್ಟಿದರೂ ಸರಿಯೇ
ತರಗೆಲೆಯ ಸರಿಸಿ
ಬೆರಳಂಚು
ಮಣ್ಣ ಕೆದಕೆದಕಿದಂತೆ
ಮರಳಿ ಬಂದದ್ದೇಕೆ
ಹೋಗಿಬಿಡು
ಮಳೆಗಾಲದಿರಚಲು
ನಡುವಿನ ಗೋಡೆ ಬೀಳಿಸಿಹೋಗಿದ್ದಕ್ಕೆ
ಧನ್ಯವಾದ
ಮಣ್ಣ ಸುರಿದು ಮೈಮೇಲೆ
ಮಗೆ ಮಗೆದು ಒರೆಸೊರಸಿ
ರಮಿಸುವುದೇಕೆ
ಹೋದವನು ಮರಳಿಬರಬೇಡ
ಹನಿಯುವ ನೀರು ಹರಿಯುವುದಿಲ್ಲ
ಚೆಲ್ಲಿದ್ದು ಚೆಲ್ಲಾಪಿಲ್ಲಿ
ವಂದನೆಗಳು
ಖಾಸಗಿತನಕೊಂದಿಷ್ಟು ಖಾಸಗಿತನ
ಅದಲಿಬ್ಬರಿಗೂ
ಇದೆಯೊಂದು
ಇರದ ಸ್ಥಾನ
ಬದಲಿಗೆಬದಲಾಗಿದ್ದಕ್ಕೆ ಜಾಗ
ಇತ್ತ ತುತ್ತಿಗೆ ಮೀಸಲೊಂದಿಷ್ಟು ಸ್ಥಳ
ಆದಿಯಿರದ ಅಂತ್ಯಕ್ಕೆ ನಮಸ್ಕಾರ
ಬರುತ್ತಿರು
September 2, 2008
ಯಾವ ಕವಿ ರಚಿಸಿದನೋ ಈ ಜಗದ ನಾಟಕವ...
ತುಂಬ ದಿನಗಳಿಂದ ಅವನಿಗೆ ಹೇಳ್ತಾನೇ ಇದ್ದೆ, ಯಾಕೋ ಬದುಕು ಬೇಜಾರಾಗಿದೆ, ದಿನಚರಿ ಬೇಸರ ಹುಟ್ಟಿಸಿದೆ, ನಂಗೆ ಸ್ವಲ್ಪ ಬದಲಾವಣೆ ಬೇಕು ಅಂತ. ದಿನಬೆಳಗಾದರೆ ಆಫೀಸು, ಅದೇ ಕೋಡಿಂಗ್ ಕೆಲಸ ನಾಲ್ಕುವರ್ಷದಿಂದ, ಕೆಲಸ ಬದಲಾಯಿಸೋಣವೆಂದರೆ ಅದೇನೇನೋ ಅನಾನುಕೂಲತೆ.( ಅವೆಲ್ಲ ಇಲ್ಲಿ ಬೇಡ ಬಿಡಿ.) ಬೆಳಿಗ್ಗೆ ಬೇಗ ಏಳು, ಏನಾದರೂ ತಿನ್ನು, ಸ್ನಾನ ಮಾಡು, ಯಾವ ಡ್ರೆಸ್ ಗೆ ಐರನ್ ಇದೆ ಅಂತ ಹುಡುಕು, ಲ್ಯಾಪ್ ಟಾಪ್ ಹೆಗಲಿಗೆ ಹೊತ್ತು ಓಡು ಇವಿಷ್ಟೇ ಆಗೋಗಿತ್ತು. ಅವನು ಏನೂ ಹೇಳ್ತಿರಲಿಲ್ಲ, ಅವನಿಗೂ ಇದೇ ದಿನಚರಿ ಬೇಸರವಾದವರ ಹಾಗೆ ಇರ್ತಿದ್ದ. ಬೇಜಾರಾಗಿ ಒಂದಿನ ಮ್ಯಾನೇಜರ್ ಹತ್ರನೂ ನನ್ನ ಗೋಳು ಹೇಳ್ಕೊಂಡುಬಿಟ್ಟೆ. ‘ಒಂದುವಾರ ರಜ ಕೊಡು, ಒಬ್ಬಳೇ ಎಲ್ಲಿಗಾದ್ರೂ ಹೋಗಿಬರ್ತೀನಿ’ ಅಂದೆ. ‘ಈ ತಿಂಗಳ ಕೊನೆಗೆ ಪ್ರಾಜೆಕ್ಟ್ ಡೆಡ್ ಲೈನ್ ಇದೆ, ಮುಗಿಸಿ ರಜ ತಗೋ’ ಅಂದುಬಿಟ್ಟಳಾಕೆ. ಸುಂಕದವರ ಮುಂದ್ಯಾಕೆ ಸುಖದುಃಖ ತೋಡಿಕೊಂಡ್ನೋ ಅನ್ನಿಸಿಬಿಟ್ಟಿತ್ತು. ಎರಡೇ ದಿನದಲ್ಲಿ ‘ಈ ಪ್ರಾಜೆಕ್ಟ್ ಗೆ ನನ್ನ ಟೀಮ್ ನಿಂದ ಯಾರಾದರೂ ಒಬ್ಬರು Lake Tahoe ಹೋಗ್ಬೇಕಾಗಿದೆ, ನೀನು ಹೋಗು’ ಅಂದಾಕೆ ಅಂದಾಗ ಖುಷಿಯಾಗಿತ್ತು. ‘ಬಗ್ಗಿದಂಗೂ ಆಯ್ತು, ಅಲ್ಲೇ ಅತ್ತೆಗೊಂದು ನಮಸ್ಕಾರವೂ ಆಯ್ತು’ ಅಂತ ಏಕಾಂತ ಅರಸಿ ಹೊರಟುಬಿಟ್ಟಿದ್ದೆ. ‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ’ ಆಗಿತ್ತು.
ಅಲ್ಲಿಹೋಗಿ ಆಫೀಸ್ ವತಿಯಿಂದ ಮೊದಲೆ ಬುಕ್ ಆಗಿದ್ದ Green Tree ಹೊಟೆಲ್ ಅಲ್ಲಿ ತಂಗಿದೆ. ಆಫೀಸು ಐದು ಮೈಲಿ ದೂರದಲ್ಲಿತ್ತು ಹೊಟೆಲ್ ನಿಂದ. ಒಂದುವಾರ ತುಂಬಾನೇ ಸೊಗಸಾಗಿತ್ತು ಸಂಜೆಯ ಏಕಾಂತದ ಸಾನ್ನಿಧ್ಯ. ಆಮೇಲೆ ಏಕಾಂತ ಬೇಜಾರು ಅನ್ನಿಸೋಕೆ ಹೆಚ್ಚುದಿನ ಬೇಕಾಗಲೇ ಇಲ್ಲ. ಆವತ್ತು ಸಂಜೆ ಆಫೀಸಿಂದ ಬರುವಾಗಲೇ ಸ್ನೋ ಫಾಲ್ ಶುರುವಾಯ್ತು. ಹೇಗೋ ಅಂತೂ ಇಂತೂ ಜೀವ ಕೈಯಲ್ಲಿ ಹಿಡಕೊಂಡು ಹೊಟೆಲ್ ರೂಮ್ ಸೇರಿದ್ದಾಯ್ತು. ಕಿಟಕಿಯ ಬಳಿ ನಿಂತು ಸ್ನೋ ಫಾಲ್ ನೋಡುತ್ತ ಬಿಸಿ ಬಿಸಿ ಕಾಫಿ ಹೀರ್ತಾ ಇದ್ದೆ. ಎಷ್ಟೆಲ್ಲ ದಿನದಿಂದ ಬಯಸಿದ ಏಕಾಂತ ಆವತ್ತು ಸಿಕ್ಕಂತೆ ಅನ್ನಿಸಿತ್ತು. ಹೊರಗೆ ಸ್ನೋ ಬೀಳ್ತಾನೇ ಇತ್ತು.

ಇವನೂ ಜೊತೇಲಿ ಇರಬೇಕಾಗಿತ್ತು, ಬಿಸಿ ಬಿಸಿ ಕಾಫಿ ಕುಡೀತಾ ಏನೂ ಮಾತಾಡ್ದೇ ಇಬ್ರೂ ಸುಮ್ನೆ ಕಿಟಕಿಯಿಂದ ಹೊರಗೆ ಸ್ನೋ ಬೀಳೋದನ್ನ ನೋಡ್ತಾ ಕೂತಿರಬಹುದಿತ್ತು ಅನ್ನಿಸ್ತು. ಕಾಲ್ ಮಾಡಿದ್ದೆ. ಇಬ್ಬರೂ ಏನೂ ಮಾತಾಡಿಕೊಳ್ಲಿಲ್ಲ. ‘ಲೇಖನ ಬರೆದಿದ್ದೆ,ಮೈಲ್ ಮಾಡಿದ್ದೇನೆ ನೋಡು’ ಅಂದ. ‘ನೀನ್ಯಾಕೆ ಒಂದು ಬ್ಲಾಗ್ ಮಾಡಿ ಅದರೊಳಗೆ ನಿನ್ನ ಬರಹಗಳನ್ನ ತುಂಬಿಡಬಾರದು?’ ಅಂತ ಕೇಳಿ ಕೇಳಿ ಸಾಕಾಗಿಹೋಗಿತ್ತು. ‘ನೋಡ್ತೀನಿರು’ ಅಂತ ಮೈಲ್ ಚೆಕ್ ಮಾಡಿದ್ದೆ. ಫೋನ್ ಕಾಲ್ ನಲ್ಲಿದ್ದುಕೊಂಡೇ ಲೇಖನ ಓದುತ್ತಿದ್ದೆ. ಅದ್ಯಾವಾಗ ಕಾಲ್ ಕಟ್ ಆಗಿತ್ತೋ ಗೊತ್ತಾಗ್ಲಿಲ್ಲ. ಅವನ ಮೈಲ್ ಗೆ ರಿಪ್ಲೈ ಮಾಡೋಣ ಅಂದ್ಕೊಂಡೆ . ‘ಲೇಖನ ಇಷ್ಟವಾಯ್ತು. ಒಂದು ಮಾತು ಹೇಳ್ತೀನಿ ನನಗನ್ನಿಸಿದ್ದು, ಪ್ಲೀಸ್ ಕೋಪ ಮಾಡ್ಕೋಬೇಡ. ಪ್ರತಿಭೆ ಬರಹವಾಗಿ ಮೂಡಬೇಕು, ಬುದ್ಧಿವಂತಿಕೆಯ ಪ್ರದರ್ಶನದಂತಿರಬಾರದು. ಯಾರ ಹಂಗಿಲ್ಲದೆಯೇ ಬರೆಯಬೇಕು ನಿಜ, ಬರವಣಿಗೆ ಇನ್ನೊಬ್ಬರನ್ನು ಹಂಗಿಸಬಾರದು ಅಷ್ಟೇ. ಬರಹಗಳು ತಣ್ಣಗೆ ಮನಸಿನೊಳಗೆ ಹರಿದಾಡಿ ಆಳವನ್ನ ತಲುಪುವಂತಿರಬೇಕು, ತಣ್ಣಗಿದ್ದರೂ ಕೊರೆಯಬಾರದು. ಬರಹದ ಬಿಸಿ ಮನಸನ್ನ ಬೆಚ್ಚಗಾಗಿಸಬೇಕು, ಇನ್ನೊಬ್ಬರನ್ನ ಸುಡುವಂತಿರಬಾರದು.’ ಎಂದಷ್ಟೇ ಬರೆದು ಇನ್ನೇನು ಕಳುಹಿಸಬೇಕು ಅನ್ನೋಷ್ಟರಲ್ಲಿ ಮನಸ್ಯಾಕೋ ‘ಹೀಗೆಲ್ಲ ಬರೆಯಬೇಡ, ಬೇಸರಿಸಿಕೊಂಡಾನು’ ಅಂತ ಹೇಳಿದ್ದರಿಂದ ಏನೂ ರಿಪ್ಲೈ ಮಾಡ್ದೆ ಸುಮ್ಮಗಾಗಿದ್ದೆ. ಹೊರಗೆ ಸ್ನೋ ಬೀಳುತ್ತಿರುವುದನ್ನ ಕ್ಲಿಕ್ಕಿಸಲಾಗಲೇ ಇಲ್ಲ. ಸ್ನೋಫಾಲ್ ನಿಂತ ಮೇಲಿನ ದೃಶ್ಯ ಹೀಗಿತ್ತು.



ಲ್ಯಾಪ್ ಟಾಪ್ ಮುಂದಿಂದ ಎದ್ದಾಗ ಕತ್ತಲಾಗಿತ್ತು. ಊಟ ಬೇಡವೆನ್ನಿಸಿತ್ತು. ಅರ್ಧ ಓದಿಟ್ಟಿದ್ದ ಪುಸ್ತಕದ ಐದಾರು ಪುಟಗಳನ್ನ ತಿರುವುತ್ತ ನಿದ್ರೆ ಹೋಗಿದ್ದೆ. ಇವೆಲ್ಲ ಆರು ತಿಂಗಳ ಹಿಂದಿನ ಕಥೆಯಾಗಿ ಇವತ್ತೀಗ ಆಫೀಸಿಂದ ಬರುವಾಗ ಮತ್ತೆ ಅವೆಲ್ಲ ನೆನಪಾಗ್ತಿದೆ. ಹದಿನೈದು ದಿನಗಳಿಂದ ಮತ್ತೆ ಬೇರೆ ಊರಿಗೆ ನನ್ನ ರವಾನಿಸಿದ್ದಾರೆ. ಇಲ್ಲಿಗೆ ಬಂದು ಹದಿನೈದು ದಿನಗಳಾಗ್ತಾ ಬಂತು. ಒಬ್ಬಳೇ ಇರುವುದ ಹಿತ, ಸುಖ, ಖುಷಿ ಅಂತೆಲ್ಲ ಅಂದುಕೊಂಡಿದ್ದು ಕರಗುವಷ್ಟು ಬೇಜಾರಾಗ್ತಿದೆ ಇಲ್ಲಿ. ಅವನಿಗೆ ಈ ವಾರಾಂತ್ಯ ಇಲ್ಲಿಗೆ ಬಾ ಅಂತ ಗೋಗರೆಯುತ್ತಿದ್ದೇನೆ. ದುರಾದೃಷ್ಟ ಅನ್ನುವಂತೆ ಅವನಿಗೆ ಈ ವಾರಾಂತ್ಯದ ಮೂರೂ ದಿನವೂ ರಜ ಇದ್ದರೂ ಆಫೀಸು ಕೆಲಸ ತಡೆದು ನಿಲ್ಲಿಸಿದೆ. ಒಬ್ಬಳೇ ಮೂರೂ ದಿನಗಳನ್ನೂ ಕಳೆಯುವುದು ನರಕವೆನ್ನಿಸ್ತಿದೆ. ಏಕಾಂತ ಸಾಕಪ್ಪ ಸಾಕು ಅನ್ನಿಸುವಂತಾಗಿದೆ. ಹೀಗೇ ಹೊಟೆಲ್ ರೂಮಿನ ಕಿಟಕಿಯಲ್ಲಿ ನಿಂತು ನೋಡುತ್ತಿದ್ದಂತೆ ಸಂಜೆ ಆವರಿಸಿಕೊಳ್ಳುತ್ತಲಿತ್ತು. ಒಬ್ಬಳೇ ಕುಳಿತು ಈ ಸೊಬಗನ್ನ ಸವಿಯೋದಕ್ಕಿಂತ ನೀವೂ ನನ್ನ ಜೊತೆಯಲ್ಲಿ ಪ್ರಕೃತಿಯ ಈ ಸೊಬಗನ್ನ ಸವಿಯಲಿ ಅನ್ನಿಸಿ ಈ ಕ್ಷಣ್ದಲ್ಲಿ ಕ್ಲಿಕ್ಕಿಸಿದ ಈ ಫೋಟೋಗಳು ನಿಮ್ಮ ಮುಂದೆ.


ಹೊಟೆಲ್ ರೂಮಿನ ಅರ್ಧ ತೆರೆದ ಕಿಟಕಿ ಹಾಗೂ ಅದರಾಚೆ ಮುಳುಗುತ್ತಿರುವ ಪೂರ್ತಿ ತೆರೆದ ಆಗಸ
ಕಣ್ಣು ಕಿಟಕಿಯ ಹೊರಗೆ, ಕೈ ಕೀಲಿಮಣೆ ಕುಟ್ಟುತ್ತಿದ್ದರೆ, ಕಿವಿ ಅಮ್ಮನ ಮಾತುಗಳನ್ನ ಆಲಿಸ್ತಿದೆ. ಮನಸು ಹಾಡ್ತಾನೇ ಇದೆ "ಯಾವ ಕವಿ ರಚಿಸಿದನೋ ಈ ಜಗದ ನಾಟಕವ"
ಅಮ್ಮನತ್ರ ಫೋನಲ್ಲಿ ಮಾತಾಡ್ತಾ ಇದ್ರೆ ಆ ಕಡೆಯಿಂದ ಅಮ್ಮ ಕೇಳ್ತಿದಾರೆ ‘ಹೊಟೆಲಿನಲ್ಲಿದ್ದೀಯ ಅಂತೀಯ,ಗೌರಿಪೂಜೆ ಯಾವಾಗ ಮಾಡ್ತೀಯಾ?’ ಅಂತ. ನಾನೂ ಯೋಚಿಸ್ತಿದ್ದೇನೆ ‘ಹೌದು .. ಈ ಸಲದ ಗೌರಿಪೂಜೆ ಯಾವಾಗ ಮಾಡೋದು!’ ಅಂತ.
ಅಲ್ಲಿಹೋಗಿ ಆಫೀಸ್ ವತಿಯಿಂದ ಮೊದಲೆ ಬುಕ್ ಆಗಿದ್ದ Green Tree ಹೊಟೆಲ್ ಅಲ್ಲಿ ತಂಗಿದೆ. ಆಫೀಸು ಐದು ಮೈಲಿ ದೂರದಲ್ಲಿತ್ತು ಹೊಟೆಲ್ ನಿಂದ. ಒಂದುವಾರ ತುಂಬಾನೇ ಸೊಗಸಾಗಿತ್ತು ಸಂಜೆಯ ಏಕಾಂತದ ಸಾನ್ನಿಧ್ಯ. ಆಮೇಲೆ ಏಕಾಂತ ಬೇಜಾರು ಅನ್ನಿಸೋಕೆ ಹೆಚ್ಚುದಿನ ಬೇಕಾಗಲೇ ಇಲ್ಲ. ಆವತ್ತು ಸಂಜೆ ಆಫೀಸಿಂದ ಬರುವಾಗಲೇ ಸ್ನೋ ಫಾಲ್ ಶುರುವಾಯ್ತು. ಹೇಗೋ ಅಂತೂ ಇಂತೂ ಜೀವ ಕೈಯಲ್ಲಿ ಹಿಡಕೊಂಡು ಹೊಟೆಲ್ ರೂಮ್ ಸೇರಿದ್ದಾಯ್ತು. ಕಿಟಕಿಯ ಬಳಿ ನಿಂತು ಸ್ನೋ ಫಾಲ್ ನೋಡುತ್ತ ಬಿಸಿ ಬಿಸಿ ಕಾಫಿ ಹೀರ್ತಾ ಇದ್ದೆ. ಎಷ್ಟೆಲ್ಲ ದಿನದಿಂದ ಬಯಸಿದ ಏಕಾಂತ ಆವತ್ತು ಸಿಕ್ಕಂತೆ ಅನ್ನಿಸಿತ್ತು. ಹೊರಗೆ ಸ್ನೋ ಬೀಳ್ತಾನೇ ಇತ್ತು.

ಇವನೂ ಜೊತೇಲಿ ಇರಬೇಕಾಗಿತ್ತು, ಬಿಸಿ ಬಿಸಿ ಕಾಫಿ ಕುಡೀತಾ ಏನೂ ಮಾತಾಡ್ದೇ ಇಬ್ರೂ ಸುಮ್ನೆ ಕಿಟಕಿಯಿಂದ ಹೊರಗೆ ಸ್ನೋ ಬೀಳೋದನ್ನ ನೋಡ್ತಾ ಕೂತಿರಬಹುದಿತ್ತು ಅನ್ನಿಸ್ತು. ಕಾಲ್ ಮಾಡಿದ್ದೆ. ಇಬ್ಬರೂ ಏನೂ ಮಾತಾಡಿಕೊಳ್ಲಿಲ್ಲ. ‘ಲೇಖನ ಬರೆದಿದ್ದೆ,ಮೈಲ್ ಮಾಡಿದ್ದೇನೆ ನೋಡು’ ಅಂದ. ‘ನೀನ್ಯಾಕೆ ಒಂದು ಬ್ಲಾಗ್ ಮಾಡಿ ಅದರೊಳಗೆ ನಿನ್ನ ಬರಹಗಳನ್ನ ತುಂಬಿಡಬಾರದು?’ ಅಂತ ಕೇಳಿ ಕೇಳಿ ಸಾಕಾಗಿಹೋಗಿತ್ತು. ‘ನೋಡ್ತೀನಿರು’ ಅಂತ ಮೈಲ್ ಚೆಕ್ ಮಾಡಿದ್ದೆ. ಫೋನ್ ಕಾಲ್ ನಲ್ಲಿದ್ದುಕೊಂಡೇ ಲೇಖನ ಓದುತ್ತಿದ್ದೆ. ಅದ್ಯಾವಾಗ ಕಾಲ್ ಕಟ್ ಆಗಿತ್ತೋ ಗೊತ್ತಾಗ್ಲಿಲ್ಲ. ಅವನ ಮೈಲ್ ಗೆ ರಿಪ್ಲೈ ಮಾಡೋಣ ಅಂದ್ಕೊಂಡೆ . ‘ಲೇಖನ ಇಷ್ಟವಾಯ್ತು. ಒಂದು ಮಾತು ಹೇಳ್ತೀನಿ ನನಗನ್ನಿಸಿದ್ದು, ಪ್ಲೀಸ್ ಕೋಪ ಮಾಡ್ಕೋಬೇಡ. ಪ್ರತಿಭೆ ಬರಹವಾಗಿ ಮೂಡಬೇಕು, ಬುದ್ಧಿವಂತಿಕೆಯ ಪ್ರದರ್ಶನದಂತಿರಬಾರದು. ಯಾರ ಹಂಗಿಲ್ಲದೆಯೇ ಬರೆಯಬೇಕು ನಿಜ, ಬರವಣಿಗೆ ಇನ್ನೊಬ್ಬರನ್ನು ಹಂಗಿಸಬಾರದು ಅಷ್ಟೇ. ಬರಹಗಳು ತಣ್ಣಗೆ ಮನಸಿನೊಳಗೆ ಹರಿದಾಡಿ ಆಳವನ್ನ ತಲುಪುವಂತಿರಬೇಕು, ತಣ್ಣಗಿದ್ದರೂ ಕೊರೆಯಬಾರದು. ಬರಹದ ಬಿಸಿ ಮನಸನ್ನ ಬೆಚ್ಚಗಾಗಿಸಬೇಕು, ಇನ್ನೊಬ್ಬರನ್ನ ಸುಡುವಂತಿರಬಾರದು.’ ಎಂದಷ್ಟೇ ಬರೆದು ಇನ್ನೇನು ಕಳುಹಿಸಬೇಕು ಅನ್ನೋಷ್ಟರಲ್ಲಿ ಮನಸ್ಯಾಕೋ ‘ಹೀಗೆಲ್ಲ ಬರೆಯಬೇಡ, ಬೇಸರಿಸಿಕೊಂಡಾನು’ ಅಂತ ಹೇಳಿದ್ದರಿಂದ ಏನೂ ರಿಪ್ಲೈ ಮಾಡ್ದೆ ಸುಮ್ಮಗಾಗಿದ್ದೆ. ಹೊರಗೆ ಸ್ನೋ ಬೀಳುತ್ತಿರುವುದನ್ನ ಕ್ಲಿಕ್ಕಿಸಲಾಗಲೇ ಇಲ್ಲ. ಸ್ನೋಫಾಲ್ ನಿಂತ ಮೇಲಿನ ದೃಶ್ಯ ಹೀಗಿತ್ತು.



ಲ್ಯಾಪ್ ಟಾಪ್ ಮುಂದಿಂದ ಎದ್ದಾಗ ಕತ್ತಲಾಗಿತ್ತು. ಊಟ ಬೇಡವೆನ್ನಿಸಿತ್ತು. ಅರ್ಧ ಓದಿಟ್ಟಿದ್ದ ಪುಸ್ತಕದ ಐದಾರು ಪುಟಗಳನ್ನ ತಿರುವುತ್ತ ನಿದ್ರೆ ಹೋಗಿದ್ದೆ. ಇವೆಲ್ಲ ಆರು ತಿಂಗಳ ಹಿಂದಿನ ಕಥೆಯಾಗಿ ಇವತ್ತೀಗ ಆಫೀಸಿಂದ ಬರುವಾಗ ಮತ್ತೆ ಅವೆಲ್ಲ ನೆನಪಾಗ್ತಿದೆ. ಹದಿನೈದು ದಿನಗಳಿಂದ ಮತ್ತೆ ಬೇರೆ ಊರಿಗೆ ನನ್ನ ರವಾನಿಸಿದ್ದಾರೆ. ಇಲ್ಲಿಗೆ ಬಂದು ಹದಿನೈದು ದಿನಗಳಾಗ್ತಾ ಬಂತು. ಒಬ್ಬಳೇ ಇರುವುದ ಹಿತ, ಸುಖ, ಖುಷಿ ಅಂತೆಲ್ಲ ಅಂದುಕೊಂಡಿದ್ದು ಕರಗುವಷ್ಟು ಬೇಜಾರಾಗ್ತಿದೆ ಇಲ್ಲಿ. ಅವನಿಗೆ ಈ ವಾರಾಂತ್ಯ ಇಲ್ಲಿಗೆ ಬಾ ಅಂತ ಗೋಗರೆಯುತ್ತಿದ್ದೇನೆ. ದುರಾದೃಷ್ಟ ಅನ್ನುವಂತೆ ಅವನಿಗೆ ಈ ವಾರಾಂತ್ಯದ ಮೂರೂ ದಿನವೂ ರಜ ಇದ್ದರೂ ಆಫೀಸು ಕೆಲಸ ತಡೆದು ನಿಲ್ಲಿಸಿದೆ. ಒಬ್ಬಳೇ ಮೂರೂ ದಿನಗಳನ್ನೂ ಕಳೆಯುವುದು ನರಕವೆನ್ನಿಸ್ತಿದೆ. ಏಕಾಂತ ಸಾಕಪ್ಪ ಸಾಕು ಅನ್ನಿಸುವಂತಾಗಿದೆ. ಹೀಗೇ ಹೊಟೆಲ್ ರೂಮಿನ ಕಿಟಕಿಯಲ್ಲಿ ನಿಂತು ನೋಡುತ್ತಿದ್ದಂತೆ ಸಂಜೆ ಆವರಿಸಿಕೊಳ್ಳುತ್ತಲಿತ್ತು. ಒಬ್ಬಳೇ ಕುಳಿತು ಈ ಸೊಬಗನ್ನ ಸವಿಯೋದಕ್ಕಿಂತ ನೀವೂ ನನ್ನ ಜೊತೆಯಲ್ಲಿ ಪ್ರಕೃತಿಯ ಈ ಸೊಬಗನ್ನ ಸವಿಯಲಿ ಅನ್ನಿಸಿ ಈ ಕ್ಷಣ್ದಲ್ಲಿ ಕ್ಲಿಕ್ಕಿಸಿದ ಈ ಫೋಟೋಗಳು ನಿಮ್ಮ ಮುಂದೆ.
ಹೊಟೆಲ್ ರೂಮಿನ ಅರ್ಧ ತೆರೆದ ಕಿಟಕಿ ಹಾಗೂ ಅದರಾಚೆ ಮುಳುಗುತ್ತಿರುವ ಪೂರ್ತಿ ತೆರೆದ ಆಗಸ
ಕಣ್ಣು ಕಿಟಕಿಯ ಹೊರಗೆ, ಕೈ ಕೀಲಿಮಣೆ ಕುಟ್ಟುತ್ತಿದ್ದರೆ, ಕಿವಿ ಅಮ್ಮನ ಮಾತುಗಳನ್ನ ಆಲಿಸ್ತಿದೆ. ಮನಸು ಹಾಡ್ತಾನೇ ಇದೆ "ಯಾವ ಕವಿ ರಚಿಸಿದನೋ ಈ ಜಗದ ನಾಟಕವ"
ಅಮ್ಮನತ್ರ ಫೋನಲ್ಲಿ ಮಾತಾಡ್ತಾ ಇದ್ರೆ ಆ ಕಡೆಯಿಂದ ಅಮ್ಮ ಕೇಳ್ತಿದಾರೆ ‘ಹೊಟೆಲಿನಲ್ಲಿದ್ದೀಯ ಅಂತೀಯ,ಗೌರಿಪೂಜೆ ಯಾವಾಗ ಮಾಡ್ತೀಯಾ?’ ಅಂತ. ನಾನೂ ಯೋಚಿಸ್ತಿದ್ದೇನೆ ‘ಹೌದು .. ಈ ಸಲದ ಗೌರಿಪೂಜೆ ಯಾವಾಗ ಮಾಡೋದು!’ ಅಂತ.
Subscribe to:
Posts (Atom)
